ದಸರಾ ಹಬ್ಬವನ್ನು ಕನ್ನಡ ಚಿತ್ರರಂಗ ಈ ಬಾರಿ ಎಂದಿಗಿಂತಲೂ ಜೋರಾಗಿಯೇ ಸಂಭ್ರಮಿಸಲು ಸಜ್ಜಾಗಿದೆ. ಹೌದು, ಈಗಾಗಲೇ ಅನೌನ್ಸ್ ಆಗಿರುವಂತೆ ಸುದೀಪ್ ಅಭಿನಯದ “ಕೋಟಿಗೊಬ್ಬ ೩” ಮತ್ತು “ದುನಿಯಾ” ವಿಜಯ್ ಅಭಿನಯದ “ಸಲಗ” ಚಿತ್ರಗಳು ರಿಲೀಸ್ ಆಗುತ್ತಿವೆ. ಅಂತೆಯೇ ಒಂದಷ್ಟು ಹೊಸಬರ ಸಿನಿಮಾಗಳ ಪೋಸ್ಟರ್, ಟೀಸರ್ ಹಾಗು ಟ್ರೇಲರ್ ರಿಲೀಸ್ ಆಗುತ್ತಿವೆ. ಇವುಗಳ ಜೊತೆಯಲ್ಲೇ ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ “ಮದಗಜ” ಚಿತ್ರದ ಟೀಸರ್ ಕೂಡ ಬಿಡುಗಡೆಯಾಗುತ್ತಿದೆ.
ಈ ಮೂಲಕ ಶ್ರೀಮುರಳಿ ಫ್ಯಾನ್ಸ್ಗೆ ದಸರಾ ಧಮಾಕ ಗ್ಯಾರಂಟಿ. ಹೌದು, ನಿರ್ದೇಶಕ ನಿರ್ದೇಶಕ ಮಹೇಶ್ ಅವರು “ಮದಗಜ” ಚಿತ್ರದ ಟೀಸರ್ ಬಿಡುಗಡೆ ಮಾಡಲು ತಯಾರಿ ನಡೆಸಿದ್ದಾರೆ. ಇದು ಎರಡನೇ ಟೀಸರ್ ಆಗಿದ್ದು, ಅಕ್ಟೋಬರ್ 14ರ ಸಂಜೆ 5.5ಕ್ಕೆ ಆನಂದ್ ಆಡಿಯೋ ಚಾನೆಲ್ನಲ್ಲಿ ಬಿಡುಗಡೆಯಾಗುತ್ತಿದೆ.
ಉಮಾಪತಿ, ನಿರ್ಮಾಪಕರು
ಆರಂಭದಿಂದಲೂ ಕುತೂಹಲ ಹುಟ್ಟಿಸಿರುವ “ಮದಗಜ” ಈಗಾಗಲೇ ತನ್ನ ಪೋಸ್ಟರ್ ಮತ್ತು ಟೀಸರ್ ಮೂಲಕ ಜನಮನ ಗೆದ್ದಿದೆ. ಎಲ್ಲೆಡೆಯಿಂದ ಮೆಚ್ಚುಗೆಯನ್ನೂ ಪಡೆದುಕೊಂಡಿದೆ. ಸದ್ಯ ಶೂಟಿಂಗ್ ಮುಗಿಸಿ, ಬಿಡುಗಡೆಗೆ ತಯಾರಾಗುತ್ತಿರುವ ಚಿತ್ರತಂಡ, ದಸರಾ ಹಬ್ಬಕ್ಕೆ ಟೀಸರ್ ಮೂಲಕ ಎಂಟ್ರಿ ಕೊಡುತ್ತಿದೆ. ಚಿತ್ರ ಡಿಸೆಂಬರ್ ತಿಂಗಳಲ್ಲಿ ಅಭಿಮಾನಿಗಳ ಮುಂದೆ ಬರಲಿದೆ ಎಂದು ಸುದ್ದಿಯಾಗಿದ್ದು, ಶ್ರೀಮುರಳಿ ಫ್ಯಾನ್ಸ್, “ಮದಗಜ”ನನ್ನು ಕಣ್ತುಂಬಿಕೊಳ್ಳಲು ಆತುರದಿಂದ ಕಾಯುತ್ತಿದ್ದಾರೆ.
ಮಹೇಶ್ ಕುಮಾರ್, ನಿರ್ದೇಶಕರು
ಉಮಾಪತಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಇದೊಂದು ಅದ್ಧೂರಿ ಬಜೆಟ್ ಚಿತ್ರ. ಶ್ರೀಮುರಳಿಗೆ ನಾಯಕಿಯಾಗಿ ಆಶಿಕಾ ರಂಗನಾಥ್ ಕಾಣಿಸಿಕೊಂಡಿದ್ದು, ಆಶಿಕಾಗೆ ಶ್ರೀಮುರಳಿ ಅವರೊಂದಿಗೆ ಇದು ಮೊದಲ ಸಿನಿಮಾ. ಆಶಿಕಾ ಇಲ್ಲಿ ಎರಡು ಶೇಡ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರತಿಯೊಂದು ಪಾತ್ರವೂ ಇಲ್ಲಿ ಕುತೂಹಲ ಮೂಡಿಸಿವೆ. ಉಳಿದಂತೆ ಚಿತ್ರದಲ್ಲಿ ತೆಲುಗಿನ ಖ್ಯಾತ ನಟ ಜಗಪತಿ ಬಾಬು ಪ್ರಮುಖ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರವಿ ಬಸ್ರೂರು ಸಂಗೀತವಿದೆ. ಇದು ಕನ್ನಡ, ತೆಲುಗು ಹಾಗೂ ತಮಿಳಿನಲ್ಲಿ ರಿಲೀಸ್ ಆಗುತ್ತಿರುವುದು ವಿಶೇಷ.
ನಟ ದರ್ಶನ್ “ರಾಬರ್ಟ್ ಬಳಿಕ “ಕ್ರಾಂತಿ” ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಎಲ್ಲರಿಗೂ ಗೊತ್ತಿದೆ. ಆದರೆ, ಆ ಚಿತ್ರಕ್ಕೆ ಮುಹೂರ್ತ ಯಾವಾಗ ಅಂತ ಗೊತ್ತಿರಲಿಲ್ಲ. ಮೂಲಗಳ ಪ್ರಕಾರ ದರ್ಶನ್ ಅಭಿನಯದ “ಕ್ರಾಂತಿ” ಚಿತ್ರದ ಮುಹೂರ್ತ ದಸರಾ ಹಬ್ಬದಂದು ನಡೆಯಲಿದೆ ಎನ್ನಲಾಗಿದೆ. ಅಕ್ಟೋಬರ್ ೧೫ರಂದು “ಕ್ರಾಂತಿ” ಚಿತ್ರಕ್ಕೆ ಮುಹೂರ್ತ ನೆರವೇರಿಸಲು ಚಿತ್ರತಂಡ ನಿರ್ಧರಿಸಿದೆ ಎನ್ನಲಾಗಿದೆ.
ಈ ಹಿಂದೆ ದರ್ಶನ್ ಅವರಿಗೆ “ಯಜಮಾನ” ಚಿತ್ರವನ್ನು ನಿರ್ಮಿಸಿದ್ದ ಶೈಲಜಾ ನಾಗ್ ಅವರೇ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಅಂತೆಯೇ, ಆ ಚಿತ್ರವನ್ನು ನಿರ್ದೇಶಿಸಿದ್ದ ವಿ.ಹರಿಕೃಷ್ಣ ಅವರೇ ಈ ಚಿತ್ರಕ್ಕೂ ನಿರ್ದೇಶನ ಮಾಡುತ್ತಿದ್ದಾರೆ. ವಿಶೇಷವೆಂದರೆ, ಶೈಲಜಾನಾಗ್ ಅವರ ನಿರ್ಮಾಣದ ಎರಡನೇ ಪ್ರಾಜೆಕ್ಟ್ ಇದಾಗಿದ್ದು, ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳಂ ಹಾಗು ಹಿಂದಿಯಲ್ಲೂ ಡಬ್ ಆಗಲಿದೆ.
ಶೈಲಜಾನಾಗ್, ನಿರ್ಮಾಪಕಿ
ಅಂದಹಾಗೆ, ಈ ಹಿಂದೆ “ಯಜಮಾನ” ಬಾಕ್ಸಾಫೀಸ್ನಲ್ಲಿ ದೊಡ್ಡ ಹವಾ ಸೃಷ್ಠಿಸಿತ್ತು. ಎಲ್ಲೆಡೆಯಿಂದಲೂ ಒಳ್ಳೆಯ ರೆಸ್ಪಾನ್ಸ್ ಬಂದಿತ್ತು. ಅದೇ ಜೋಡಿ ಈಗ “ಕ್ರಾಂತಿ”ಯ ಹಿಂದೆ ನಿಂತಿದೆ. ಚಿತ್ರದ ಶೀರ್ಷಿಕೆಯೇ ಇಲ್ಲಿ ಫೋರ್ಸ್ ಆಗಿದೆ.
ಚಿತ್ರದ ಕಥೆ ಕೂಡ ಅಷ್ಟೇ ಫೋರ್ಸ್ ಆಗಿರಲಿದೆ ಎನ್ನುವುದರಲ್ಲಿ ಅನುಮಾನವಿಲ್ಲ. ಸದ್ಯ ಈ ಚಿತ್ರದಲ್ಲಿ ದರ್ಶನ್ ಹೀರೋ. ಅವರಿಗೆ ನಾಯಕಿ ಯಾರು, ಇನ್ನುಳಿದಂತೆ ಚಿತ್ರದಲ್ಲಿ ಯಾರೆಲ್ಲಾ ಇರ್ತಾರೆ ಎಂಬಿತ್ಯಾದಿ ಪ್ರಶ್ನೆಗಳಿಗೆ ಸದ್ಯಕ್ಕೆ ಉತ್ತರವಿಲ್ಲ.
ದುನಿಯಾ ವಿಜಯ್ ಮೊದಲ ಭಾರಿ ನಿರ್ದೇಶಿಸಿ ನಟಿಸಿರುವ ಸಲಗ' ಹಾಗೂ ಸ್ಯಾಂಡಲ್ವುಡ್ ಬಾದ್ಷಾ ಕಿಚ್ಚ ಅಭಿನಯಿಸಿರುವ ‘ಕೋಟಿಗೊಬ್ಬ-3’ ಚಿತ್ರಗಳು ಒಂದೇ ದಿನ ರಿಲೀಸ್ ಆಗ್ತಿರುವುದು. ಗಾಂಧಿನಗರದಲ್ಲಿ ಅಕ್ಕ-ಪಕ್ಕದ ಚಿತ್ರಮಂದಿರಗಳಲ್ಲಿ ಪ್ರದರ್ಶನಕ್ಕೆ ಸಜ್ಜಾಗಿರುವುದು ಇಡೀ ಆರು ಕೋಟಿ ಕನ್ನಡ ಜನತೆಗೆ ಮಾತ್ರವಲ್ಲ ಅಕ್ಕ-ಪಕ್ಕ ರಾಜ್ಯದ ಮಂದಿಗೂ ಗೊತ್ತಾಗಿದೆ. ಗಂಧದಗುಡಿಯ ಇಬ್ಬರು ನಟರುಗಳ ಬಹುನಿರೀಕ್ಷೆಯ ಸಿನಿಮಾ ಒಂದೇ ದಿನ ಬಿಡುಗಡೆಯಾಗ್ತಿರುವುದರಿಂದ ಸಿನಿಮಾ ಮಂದಿ ಮಾತ್ರವಲ್ಲ ಸಾಮಾನ್ಯ ಜನರು ಕೂಡ ಇದನ್ನು ಸ್ಟಾರ್ವಾರ್ ಅಂತಲೇ ಪರಿಗಣಿಸಿದ್ದಾರೆ. ಆಯುಧಪೂಜೆಯ ದಿನದಂದು ಆರಂಭಗೊಳ್ಳುವ ಸ್ಟಾರ್ನಟರಿಬ್ಬರ ಸಿನಿಮಾ ಜಾತ್ರೆಯನ್ನು ನೋಡಲಿಕ್ಕೆ ಕಾತುರರಾಗಿದ್ದಾರೆ. ಮೊನ್ ಮೊನ್ನೆಯಷ್ಟೇ ನಟ ವಿಜಯ್ ಅವ್ರು ಸ್ಟಾರ್ವಾರ್ ಸುಂಟರಗಾಳಿಗೆ ಉತ್ತರ ಕೊಟ್ಟಿದ್ದರು. ಇದೀಗ ನಟ ಸುದೀಪ್ ಸ್ಟಾರ್ವಾರ್ ಬಿರುಗಾಳಿಗೆ ರಿಯಾಕ್ಟ್ ಮಾಡಿದ್ದಾರೆ. ಏನ್ ಹೇಳಿದರು ಕಿಚ್ಚ ಅದರ ಕಂಪ್ಲೀಟ್ ಕಹಾನಿ ನಿಮ್ಮ ಮುಂದೆ…
ಸ್ಯಾಂಡಲ್ವುಡ್ ಅಂಗಳದಲ್ಲಿ ಈಗ ಸಲಗ ಮತ್ತು ಕೋಟಿಗೊಬ್ಬ-3' ಚಿತ್ರಗಳದ್ದೇ ಚರ್ಚೆ. ಬಹುನಿರೀಕ್ಷೆಯ ಎರಡು ಚಿತ್ರಗಳು ಒಂದೇ ದಿನ ರಿಲೀಸ್ ಆಗ್ತಿರೋದ್ರಿಂದ, ಅದರಲ್ಲೂ ಅಕ್ಕ-ಪಕ್ಕದ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ತಿರುವುದರಿಂದ ಎಲ್ಲರ ಕಣ್ಣು ಈಗಸಲಗ ಮತ್ತು ‘ಕೋಟಿಗೊಬ್ಬ-3’ ಚಿತ್ರದ ಮೇಲೆ ಬಿದ್ದಿದೆ. ಸಲಗ ವರ್ಸಸ್ ಕೋಟಿಗೊಬ್ಬ ಎನ್ನುವಂತಾಗಿದೆ. ಏಕಕಾಲಕ್ಕೆ ಫೀಲ್ಡಿಗಿಳಿಯುತ್ತಿರುವ ಇಬ್ಬರು ಸ್ಟಾರ್ಗಳ ಚಿತ್ರಕ್ಕೆ ಪ್ರೇಕ್ಷಕಮಹಾಷಯರಿಂದ ಯಾವ್ ರೀತಿಯ ರೆಸ್ಪಾನ್ಸ್ ಸಿಗ್ಬೋದು? ಗಾಂಧಿನಗರದ ಮುಖ್ಯ ಚಿತ್ರಮಂದಿರಗಳಲ್ಲಿ ಎರಡು ಸಿನಿಮಾಗಳು ಯಾವ್ ರೀತಿಯಾಗಿ ಸದ್ದು ಮಾಡ್ಬೋದು? ಎಷ್ಟು ಕಮಾಯಿ ಮಾಡ್ಬೋದು? ಇದೆಲ್ಲದರ ಜೊತೆಗೆ ಸ್ಟಾರ್ವಾರ್ ಹಾಗೂ ಫ್ಯಾನ್ಸ್ವಾರ್ ಆಗ್ಬೋದಾ? ಆಗುತ್ತಂತೆ ಅಂತ ಒಂದು ತಂಡ? ಆಗಲ್ಲವಂತೆ ಅಂತ ಒಂದು ತಂಡ? ನೋಡ್ತಾಯಿರಿ ಅನ್ನೋ ಮತ್ತೊಂದು ತಡ ಇಡೀ ಗಾಂಧಿನಗರದ ತುಂಬೆಲ್ಲಾ ಇದೆ. ಆದರೆ, ಏನಾಗಲಿದೆ ಅನ್ನೋದು ಮೂರು ದಿನದಲ್ಲಿ ಗೊತ್ತಾಗಲಿದೆ.
ಮೂರು ರಾತ್ರಿ ಕಳೆದು, ಮೂರು ಸಲ ಬೆಳಗಾಗುವಷ್ಟರಲ್ಲಿ ಗಾಂಧಿನಗರ ರಂಗೇರಿರುತ್ತೆ. ಸಂತೋಷ್ ಸಲಗ'ನ ಕಟೌಟ್ ಅಂಡ್ ಬ್ಯಾನರ್ ಹಾಕ್ಕೊಂಡು ಸಂತಸಪಡುತ್ತಿರುತ್ತೆ,ನರ್ತಕಿ’ ಕೋಟಿಗೊಬ್ಬನನ್ನು ಹೊತ್ಕೊಂಡು ನಗುತ್ತಿರುತ್ತೆ. ಇಬ್ಬರು ಸ್ಟಾರ್ನಟರ ಫ್ಯಾನ್ಗಳು ಥಿಯೇಟರ್ ಅಖಾಡದಲ್ಲಿ ಜಮಾಯಿಸಿರುತ್ತಾರೆ. ಒಂದು ಕಡೆ ಕಿಚ್ಚನಿಗೆ ಜೈಕಾರ, ಇನ್ನೊಂದು ಕಡೆ ಬ್ಲಾಕ್ಕೋಬ್ರಾಗೆ ಜೈಕಾರ ನಡೆಯುತ್ತಿರುತ್ತೆ. ಈ ಜೈಕಾರದ ಮಧ್ಯೆ ಫ್ಯಾನ್ಸ್ವಾರ್ ನಡಿಯದೇ ಹೋದರೆ ಮೈಸೂರಿನಲ್ಲಿ ದಸರಾ ಹಬ್ಬ ಎಷ್ಟು ಅದ್ದೂರಿಯಾಗಿ ಆರಂಭಗೊಂಡು ಅಡ್ಡಿಆತಂಕವಿಲ್ಲದೇ ಯಶಸ್ವಿಯಾಗುತ್ತೋ, ಅದೇ ರೀತಿ ಗಾಂಧಿನಗರದಲ್ಲಿ ನಡೆಯುವ ಸಿನಿಮಾ ಜಾತ್ರೆಯೂ ಸಕ್ಸಸ್ ಆಗುತ್ತೆ. ಹಾಗೆಯೇ, ಆಗಬೇಕು ಎನ್ನುವುದು ಎಲ್ಲರ ಆಸೆ. ಆದರೆ, ಕೆಲವರು ಸ್ಟಾರ್ವಾರ್ ಜೊತೆ ಫ್ಯಾನ್ಸ್ವಾರ್ಗೂ ಬೆಂಕಿ ಹಚ್ಚೋದಕ್ಕೆ ನೋಡ್ತಾಯಿದ್ದಾರೆ. ಅವರೆಲ್ಲರೂ ಕೂಡ ಕಿಚ್ಚನ ಮಾತುಗಳನ್ನು ಒಮ್ಮೆ ಕೇಳಿಸಿಕೊಂಡರೆ ಬೆಸ್ಟ್.
ಕೋಟಿಗೊಬ್ಬ-೩ ಬಿಡುಗಡೆಯ ಹಿನ್ನಲೆಯಲ್ಲಿ ಸುದ್ದಿಗೋಷ್ಟಿಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಬಜಾರ್ನಲ್ಲಿ ಕೇಳಿಬರುತ್ತಿರುವ ಮತ್ತು ಧಗಧಗಿಸುತ್ತಿರುವ ಸ್ಟಾರ್ವಾರ್' ಕಥೆಯ ಕುರಿತಾದ ಪ್ರಶ್ನೆಯೊಂದನ್ನು ಮಾಧ್ಯಮಮಿತ್ರರು ಕಿಚ್ಚ ಸುದೀಪ್ ಬಳಿ ಕೇಳಿದರು. ಇದಕ್ಕೆ ಉತ್ತರ ನೀಡಿದ ಕಿಚ್ಚ, ಟ್ರಾಫಿಕ್ ಅಂದ್ಮೇಲೆ ಅಕ್ಕಪಕ್ಕದಲ್ಲಿ ಕಾರ್ಗಳು ಇದ್ದೇ ಇರುತ್ವೆ ಅಲ್ವಾ ಸಾರ್. ಕೊರೊನಾ ಟೈಮ್ನಲ್ಲಿ ರೋಡ್ ಖಾಲಿಯಿದ್ದರು ಕಾರ್ ಓಡಿಸೋಕೆ ಅವಕಾಶ ಇದ್ರೂ ಕೂಡ ಹೆದರಿಕೊಂಡು ಮನೆಯಲ್ಲೇ ದೀಪ ಹಚ್ಚಿಕೊಂಡು ಚಪ್ಪಾಳೆ ತಟ್ಕೊಂಡು ಇದ್ವಿ. ಇವತ್ತು ರೋಡ್ನಲ್ಲಿ ನಾನೇ ಒಬ್ಬನೇ ಕಾರ್ ಓಡಿಸ್ಬೇಕು, ನಾನು ಒಬ್ಬನೇ ಓಡಾಡ್ಬೇಕು ಅಂದ್ರೆ ಹೆಂಗೆ ಸಾರ್. ಎಲ್ಲರೂ ಓಡಾಡೋದಕ್ಕೆ ಅವಕಾಶ ಇದೆ ಎಲ್ಲರೂ ಬರಲಿ. ಅಷ್ಟಕ್ಕೂ,ಯಾರು ನಮ್ಮ ಎದುರುಗಡೆ ಬಂದ್ರೂ, ಯಾರು ಪಕ್ಕದಲ್ಲಿ ಬಂದ್ರೂ ಅನ್ನೋದು ದೊಡ್ಡದಲ್ಲ. ಈ ಕೊರೊನಾ ಬಂದು ಹೋದ್ಮೇಲೆ ನಮ್ಮ ಸಿನಿಮಾಗೆ ಬೆಳಕು ಕಾಣ್ತಿದೆ, ಥಿಯೇಟರ್ಗಳು ಸಿಗುತ್ತಿವೆ, ವಿತರಕರು ಸಿನಿಮಾ ಕೊಂಡುಕೊಳ್ಳಲಿಕ್ಕೆ ಮುಂದೆ ಬರುತ್ತಿದ್ದಾರೆ ಇದನ್ನೆಲ್ಲಾ ನೋಡಿ ಖುಷಿಪಡಬೇಕು.
ಯಾವುದೋ ದೊಡ್ಡ ಸಿನಿಮಾ ರಿಲೀಸ್ ಆಗಿ ಜಾಸ್ತಿ ಕಲೆಕ್ಷನ್ ಮಾಡಿದ ತಕ್ಷಣ ಹಳೆಯ ಹಿಸ್ಟರಿ ಸುಳ್ಳಾಗಲ್ಲ. ಯಾವುದೋ ದೊಡ್ಡ ಸಿನಿಮಾ ರಿಲೀಸ್ ಆಗಿ ಕಡಿಮೆ ಕಲೆಕ್ಷನ್ ಮಾಡಿದ ತಕ್ಷಣ ಹಳೆಯ ಹಿಸ್ಟರಿ ಸುಳ್ಳಾಗಲ್ಲ. ವಾಸ್ತವ ಹೀಗಿರುವಾಗ, ಕೆತ್ತಿರುವ ಹಳೆಯ ಹಿಸ್ಟರಿಗಳು, ತಿಕ್ಕಿ ಅಳಿಸಿದರೂ ಅಳಿಯದ ಹಿಸ್ಟರಿಗಳು ಕಣ್ಮುಂದೆ ಇರುವಾಗ ಯಾಕ್ ಕಚ್ಚಾಡಬೇಕು, ಯಾಕೇ ಬಿಪಿ-ಟೆನ್ಷನ್-ಫೀವರ್ ಬರಿಸಿಕೊಳ್ಳಬೇಕು. ಏನಾಗ್ಬೇಕು ಅಂತ ಬರೆದಿರುತ್ತೋ, ಅದು ಆಗಿಯೇ ಆಗುತ್ತೆ ಮತ್ತು ಅದೇ ಆಗ್ಬೇಕು ಎನ್ನುವುದು ಕಿಚ್ಚನ ಮಾತು ಮತ್ತು ವಾದ. ಅಂದ್ಹಾಗೇ, ಕೊರೊನಾ ಟೈಮ್ನಲ್ಲಿ ಮನೆಯಲ್ಲಿದ್ದಾಗ ಹೆಂಗಿದ್ದೀರಾ? ಏನ್ ತಿಂದ್ರಿ ? ಮುಂದೇನ್ ಮಾಡೋಣ ಅಂತ ಮಾತನಾಡಿಕೊಂಡು ಈಗ `ನಾನಾ-ನೀನಾ’ ಅಂದರೆ ಚೆನ್ನಾಗಿರುತ್ತಾ? ಅಷ್ಟಕ್ಕೂ ಜಿದ್ದು ಬೇಕಾ ನೀವೇ ಹೇಳಿ. ಅಷ್ಟಕ್ಕೂ, ಎಲ್ಲರೂ ಅವರವರ ಚಿತ್ರಕ್ಕಾಗಿ ಫೈಟ್ ಮಾಡಬೇಕು ಮಾಡ್ತೀವಿ. ಹಾಗಂತ, ಇದು ಜಿದ್ದಲ್ಲ- ಪ್ರತಿಕಾರವೂ ಅಲ್ಲ ಅನ್ನೋದು ಕಿಚ್ಚನ ಒಂದೇ ಸಾಲಿನ ಉತ್ತರ.
ಅಷ್ಟಕ್ಕೂ, ಪಕ್ಕದಲ್ಲಿ ಬಿಡುಗಡೆಯಾಗುವ ಸಲಗ' ಚಿತ್ರಕ್ಕೆ ಸೋಲಾಗ್ಬೇಕು ಅಂತ ಬಯಸೋ ಸಣ್ಣ ಮನಸ್ಸು ಮತ್ತು ಸಣ್ಣತನ ಸುದೀಪ್ ಅವ್ರದ್ದಲ್ಲ.ಸಲಗ’ ಚಿತ್ರ ಸೆಟ್ಟೇರುವಾಗಲೇ ಗೆಸ್ಟ್ ಆಗಿ ಹೋಗಿ ಫಸ್ಟ್ ಕ್ಲಾಪ್ ಮಾಡಿ ೨೦೦೦' ಕೊಟ್ಟು ೨೦೦ ಕೋಟಿಯಾಗ್ಲಿ ಅಂತ ಹಾರೈಸಿ ಬಂದವರು. ಹೀಗಿರುವಾಗಸಲಗ’ ಸೋಲಬೇಕು ಅಂತ ಬಯಸ್ತಾರೆ ಯಾವುದೇ ಕಾರಣಕ್ಕೂ ಕೆಟ್ಟದ್ದು ಬಯಸಲ್ಲ. ಹೀಗಾಗಿ, ಮಾಧ್ಯಮ ಮುಂದೆ ಕೋಟಿಗೊಬ್ಬನ' ಬಗ್ಗೆ ಮಾತನಾಡುವಾಗ ಕ್ಲಾರಿಟಿ ಕೊಟ್ಟರು. ನನ್ನ ಗೆಳೆಯ ಹಾಗೂಸಲಗ’ ನಿರ್ಮಾಪಕ ಶ್ರೀಕಾಂತ್ ಜೊತೆಗಿನ ಗೆಳೆತನಕ್ಕೆ ಮುಹೂರ್ತಕ್ಕೆ ಹೋಗಿ ಮನಸಿಂದ ಹಾರೈಸಿದ್ದೆ. ಅವತ್ತು ಏನು ಶುಭ ಕೋರಿದ್ದೆನೊ ಇವತ್ತು ಕೂಡ ಅದೇ ಮನಸಿಂದ ಶುಭಹಾರೈಸ್ತೀನಿ ಎಂದರು. ಅವರು ಕಷ್ಟಪಟ್ಟು ಕೆಲಸ ಮಾಡಿದ್ದಾರೆ, ಕೋಟಿಗಟ್ಟಲೇ ಬಂಡವಾಳ ಹಾಕಿದ್ದಾರೆ ಅವರಿಗೂ ಒಳ್ಳೆಯದಾಗ್ಬೇಕು ಅಂತ ಅಭಿನಯ ಚಕ್ರವರ್ತಿ ಹೃದಯದಿಂದ ಹೇಳಿಕೊಂಡರು.
ಎಲ್ಲಾ ಸ್ಟಾರ್ಗಳು ಅಷ್ಟೇ, ಯಾರ್ ತಂಟೆಗೆ ಯಾರು ಸುಮ್ ಸುಮ್ನೇ ಹೋಗಲ್ಲ. ಸುಮ್ನೆ ಇದ್ದಾಗ ಕೆಣಕಿಕೊಂಡು ಬಂದರೆ ಸುಮ್ನೆ ಯಾರು ಬಿಡಲ್ಲ. ಸ್ಟಾರ್ಗಳ ಮಧ್ಯೆ ಕಾಂಪಿಟೇಷನ್ ಇರಬೇಕು. ಸ್ಪರ್ಧೆ ಇದ್ದಾಗಲೇ ಬೆಳೆಯೋದಕ್ಕೆ ಸಾಧ್ಯ, ಆ ಸ್ಪರ್ಧೆ ಆರೋಗ್ಯಕ ಸ್ಪರ್ಧೆಯಾಗಿರಲಿ ಎನ್ನುವುದೇ ಇಡೀ ಕರ್ನಾಟಕದ ಆರು ಕೋಟಿ ಜನತೆಯ ಆಶಯ. ಆ ಆಶಯವನ್ನು ಹುಸಿಮಾಡದೇ ಹೆಲ್ದಿ ಕಾಂಪಿಟೇಷನ್ ಕೊಡುತ್ತಾ, ಪರಭಾಷೆಯವರು ಹಾಗೂ ಇಂಡಿಯನ್ ಸಿನಿಮಾ ಇಂಡಸ್ಟ್ರಿ ಮಂದಿ ತಿರುಗಿ ನೋಡುವಂತಹ ಸಿನಿಮಾಗಳನ್ನು ಕೊಡಲಿ. ಬರೀ ಸ್ಟಾರ್ನಟರುಗಳು ಮಾತ್ರವಲ್ಲದೇ ಪ್ರತಿಯೊಬ್ಬ ಕಲಾವಿದರು ಗೆಲ್ಲಲಿ, ಕನ್ನಡದ ಕೀರ್ತಿ ಇನ್ನಷ್ಟು ಹಬ್ಬಲಿ.`ಸಲಗ-ಕೋಟಿಗೊಬ್ಬ-೩’ ಸಕ್ಸಸ್ಫುಲಿ ಯಶಸ್ವಿಯಾಗಲಿ.
ದೊಡ್ಮನೆ ಫ್ಯಾನ್ಸ್ ಇಂತಹದ್ದೊಂದು ಸುದ್ದಿನಾ ನಿರೀಕ್ಷೆ ಮಾಡಿದ್ರೋ ಇಲ್ಲವೋ ಗೊತ್ತಿಲ್ಲ. ಆದರೆ, ದೊಡ್ಮನೆ ರಾಜಕುಮಾರ ತಮ್ಮ ಮನೆಯ ಅಭಿಮಾನಿ ದೇವರುಗಳು ಮಾತ್ರವಲ್ಲ ಸಕಲ ಸಿನಿಮಾಕುಲ ಸಂತೋಷಪಡುವಂತಹ, ಹಬ್ಬ ಮಾಡಿ ಸಂಭ್ರಮಿಸುವಂತಹ ಸಪ್ರೈಸಿಂಗ್ ಸುದ್ದಿಯೊಂದನ್ನು ನೀಡಿದ್ದಾರೆ. ಸಲಗ ಸಿನಿಮಾದ ಪ್ರೀ ರಿಲೀಸ್ ಇವೆಂಟ್ಗೆ ಸ್ಪೆಷಲ್ ಗೆಸ್ಟ್ ಆಗಿದ್ದ ಪವರ್ಸ್ಟಾರ್ ಡೈರೆಕ್ಟರ್ ಹ್ಯಾಟ್ ತೊಡುವ ಕನಸೊಂದನ್ನು ಹೊರ ಹಾಕಿದರು. ಕರುನಾಡ ಚಕ್ರವರ್ತಿಗೆ ಆಕ್ಷನ್ ಕಟ್ ಹೇಳುವ ಬಹು ದಿನದ ಆಸೆಯೊಂದನ್ನು ಅಣ್ಣನ ಮುಂದೆಯೇ ವ್ಯಕ್ತಪಡಿಸಿದರು. ಮುಂದೇನಾಯ್ತ ಅದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ.
ಅಣ್ಣಾವ್ರ ಮೂವರು ಮಕ್ಕಳು ಕೂಡಿ ಒಂದು ಸಿನಿಮಾ ಮಾಡ್ಬೇಕು, ದೊಡ್ಡ ಪರದೆಯ ಮೇಲೆ ದೊಡ್ಮನೆಯ ಮೂರು ವಜ್ರಗಳನ್ನು ಕಣ್ತುಂಬಿಕೊಳ್ಳಬೇಕು ಎನ್ನುವುದು ರಾಜ್ಕುಟುಂಬದ ಕೋಟ್ಯಾಂತರ ಅಭಿಮಾನಿಗಳ ಕೋರಿಕೆ. ಒಂದೊಳ್ಳೆ ಸ್ಕ್ರಿಪ್ಟ್ ಬಂದರೆ ಒಟ್ಟಿಗೆ ಕೂಡಿ ಚಿತ್ರ ಮಾಡ್ಬೇಕು ಅಂತ ರಾಜ್ತ್ರಯರು ಕೂಡ ನಿರ್ಧರಿಸಿದ್ದಾರೆ. ಯಾವಾಗ ಅಣ್ಣಾವ್ರ ಮೂರು ಮುತ್ತುಗಳು ಜೊತೆಗೂಡಿ ಬೆಳ್ಳಿತೆರೆಮೇಲೆ ದಿಬ್ಬಣ ಹೊರಡ್ತಾರೋ ಗೊತ್ತಿಲ್ಲ ಆದರೆ, ಪವರ್ಸ್ಟಾರ್ ಡೈರೆಕ್ಷನ್ನಲ್ಲಿ ಕರುನಾಡ ಚಕ್ರವರ್ತಿ ಶಿವರಾಜ್ಕುಮಾರ್ ಬಿಗ್ಸ್ಕ್ರೀನ್ ನಲ್ಲಿ ಧಗಧಗಿಸೋದು ಪಕ್ಕಾ. ಆ ದಿವ್ಯಕ್ಷಣ ಆದಷ್ಟು ಬೇಗ ಬರುತ್ತೆ ಎನ್ನುವ ಬಿಗ್ಬ್ರೇಕಿಂಗ್ ನ್ಯೂಸ್ವೊಂದನ್ನು ಪುನೀತ್ರಾಜ್ಕುಮಾರ್ ನೀಡಿದ್ದಾರೆ.
ದೊಡ್ಮನೆಯ ರಾಜಕುಮಾರ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ಗೆ ಡೈರೆಕ್ಟರ್ ಹ್ಯಾಟ್ ತೊಡುವ ಕನಸಿದೆ. ಅದು ಇವತ್ತು ನಿನ್ನೆಯದಲ್ಲ ಬಹಳಷ್ಟು ವರ್ಷಗಳ ಹಿಂದೆಯೇ ಹುಟ್ಟುಕೊಂಡಿದ್ದು. ಆದರೆ, ಲೈಟ್ಸ್-ಕ್ಯಾಮೆರಾ-ಆಕ್ಷನ್ ಅಂತ ಹೇಳೋದಕ್ಕೆ ಅಪ್ಪುಗೂ ಬಿಡುವಿಲ್ಲ. ಅಟ್ ದಿ ಸೇಮ್ ಟೈಮ್ ಸೆಂಚುರಿಸ್ಟಾರ್ ಕೂಡ ಫ್ರೀ ಇಲ್ಲ. ಶಿವಣ್ಣ ಡೈರೆಕ್ಟರ್ಸ್ ಆಕ್ಟರ್ ಆಗಿರೋದ್ರಿಂದ, ಸಂಡೇ ಹೊರತುಪಡಿಸಿ ಉಳಿದೆಲ್ಲಾ ದಿನ ಮುಖಕ್ಕೆ ಬಣ್ಣ ಹಚ್ಚುವುದರಿಂದ ವರ್ಷಪೂರ್ತಿ ಬ್ಯುಸಿಯಾಗಿರುತ್ತಾರೆ. ಅಂದ್ಹಾಗೇ, ಸೆಂಚುರಿಸ್ಟಾರ್ ಸಿನಿ ಅಕೌಂಟ್ನಲ್ಲಿ ಮಿನಿಮಮ್ ಅಂದರೆ ಹತ್ತು ಚಿತ್ರಗಳು ಕುಣಿಯುತ್ತಿರುತ್ತವೆ. ಹೀಗಾಗಿ, ಅಣ್ಣಂಗೆ ತಮ್ಮ ಆಕ್ಷನ್ಕಟ್ ಹೇಳೋದಕ್ಕೆ ಟೈಮ್ ಸಿಕ್ಕಿರಲಿಲ್ಲ. ಈಗ್ಲೂ ಅಪ್ಪು ಹಾಗೂ ಶಿವಣ್ಣ ಇಬ್ಬರು ಅವರವರ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಮುತ್ತಣ್ಣನಿಗೆ ಆಕ್ಷನ್ಕಟ್ ಹೇಳುವ ಸುವರ್ಣಗಳಿಗೆಗಾಗಿ ಅಣ್ಣಬಾಂಡ್ ಕಾತುರದಿಂದ ಕಾಯ್ತಿದ್ದಾರೆ.
ಹೌದು, ಡೈರೆಕ್ಷನ್ ಮಾಡಬೇಕು, ಮಾಡಿದರೆ ಮೊದಲ ಸಿನಿಮಾ ನಮ್ಮ ಅಣ್ಣ ಶಿವಣ್ಣಂಗೆ ಮಾಡಬೇಕು ಎನ್ನುವುದು ಅಪ್ಪು ಆಸೆ. ಆ ಮಹದಾಸೆಯನ್ನು ಸಲಗ' ಸಿನಿಮಾದ ಪ್ರಿರಿಲೀಸ್ ಇವೆಂಟ್ ಸಂದರ್ಭದಲ್ಲಿ ಎಲ್ಲರ ಮುಂದೆ ಹಂಚಿಕೊಂಡರು. ಅಭಿಮಾನಿ ದೇವರುಗಳನ್ನ ಥಿಯೇಟರ್ನಲ್ಲಿ ಎಡ್ಜ್ ಆಫ್ ದಿ ಸೀಟ್ನಲ್ಲಿ ಕೂರಿಸ್ಬೇಕು ಅಂತಹದ್ದೊಂದು ಸಿನಿಮಾ ಕೊಡ್ಬೇಕು ಎಂದು ನಟಸಾರ್ವಭೌಮ ಓಪನ್ನಾಗಿ ಹೇಳಿಕೊಂಡರು. ತಮ್ಮನ ಮಾತು ಕೇಳಿ ಥ್ರಿಲ್ಲಾದ ಸನ್ ಆಫ್ ಬಂಗಾರದ ಮನುಷ್ಯ ಸ್ಟೇಜ್ ಮೇಲೆ ಬಂದರು. ಯಾರೂ ಊಹಿಸದ ದಿವ್ಯಕ್ಷಣ ಕೂಡಿಬಂತು ಆಗಲೇ ಅಪ್ಪು ಆಕ್ಷನ್ ಹೇಳಿದರುಐ ಲವ್ ಯೂ, ಯೂ ಮಸ್ಟ್ ಲವ್ ಮೀ’ ಎನ್ನುತ್ತಾ ಎದುರಿಗಿದ್ದ ಉಪ್ಪಿ ಕಡೆ ಶಿವಣ್ಣ ಕೈ ತೋರಿಸಿದರು. ಕರುನಾಡ ಚಕ್ರವರ್ತಿಯ ಪ್ರೀತಿಗೆ ಮನಸೋತ ರಿಯಲ್ಸ್ಟಾರ್ ವೇದಿಕೆ ಮೇಲೆ ಬಂದು ಹ್ಯಾಟ್ರಿಕ್ ಹೀರೋನ ಅಪ್ಪಿಕೊಂಡರು. ಒಟ್ನಲ್ಲಿ ದುನಿಯಾ ವಿಜಯ್ ಅವರ `ಸಲಗ’ ಕಾರ್ಯಕ್ರಮ ಈ ಅದ್ಭುತ ಕ್ಷಣಕ್ಕೆ ಸಾಕ್ಷಿಯಾಯ್ತು.
`ಸಲಗ’ ಪ್ರಿರಿಲೀಸ್ ಇವೆಂಟ್ನಲ್ಲಿ ದೊಡ್ಮನೆಯ ದೊಡ್ಡಸಿನಿಮಾ ಸುದ್ದಿಯೊಂದು ಸ್ಪೋಟಕಗೊಳ್ಳುತ್ತೆ ಅಂತ ಯಾರು ನಿರೀಕ್ಷೆ ಮಾಡಿರಲಿಲ್ಲ. ಹೀಗೆ, ಯಾರೂ ನಿರೀಕ್ಷಿಸದ ಸುದ್ದಿಯೊಂದನ್ನು ಪವರ್ಸ್ಟಾರ್ ಎಕ್ಸ್ ಕ್ಲೂಸೀವ್ ಆಗಿ ಕೊಟ್ಟೇಬಿಟ್ಟರು. ಸಪ್ರೈಸಿಂಗ್ ಸುದ್ದಿ ಜೊತೆ ಅಣ್ತಮ್ಮಾಸ್ ಆಕ್ಷನ್ ಕಟ್ ಹೇಳುವ ದೃಶ್ಯವೂ ಸೋಷಿಯಲ್ ಮೀಡಿಯಾದಲ್ಲಿ ಮೆರವಣಿಗೆ ಹೊರಟಿದ್ದನ್ನು ನೋಡಿ ದೊಡ್ಮನೆ ಫ್ಯಾನ್ಸ್ ದೀಪಾವಳಿಗೂ ಮುನ್ನವೇ ಪಟಾಕಿ ಹೊಡೆದಿದ್ದಾರೆ.
ಒಟ್ನಲ್ಲಿ, ದೊಡ್ಮನೆ ಅಭಿಮಾನಿ ದೇವರುಗಳ ಪಾಲಿಗೆ ಇದು ದೊಡ್ಡ ಸುದ್ದಿ. ಅಂದ್ಹಾಗೇ, ಒಬ್ಬ ಕಲಾವಿದನೊಳಗೆ ಒಬ್ಬ ನಿರ್ದೇಶಕ ಇರುತ್ತಾನೆ, ಒಬ್ಬ ನಿರ್ದೇಶಕನೊಳಗೆ ಒಬ್ಬ ಕಲಾವಿದ ಇರುತ್ತಾನೆ ಎನ್ನುವ ಮಾತಿದೆ. ಇದಕ್ಕೆ ಉದಾಹರಣೆಯಾಗಿ ರಿಯಲ್ಸ್ಟಾರ್ ಉಪ್ಪಿ-ಕ್ರೇಜಿಸ್ಟಾರ್ ರವಿಚಂದ್ರನ್-ಕಿಚ್ಚ ಸುದೀಪ್- ದುನಿಯಾ ವಿಜಯ್-ರಿಷಬ್ ಶೆಟ್ಟಿ- ರಕ್ಷಿತ್ ಶೆಟ್ಟಿ ಹೀಗೆ ಹಲವು ಧ್ರುವತಾರೆಗಳು ಕಣ್ಮುಂದೆ ಇದ್ದಾರೆ. ಇದಕ್ಕೆ, ಆದಷ್ಟು ಬೇಗ ಪವರ್ಸ್ಟಾರ್ ಕೂಡ ಸೇರ್ಪಡೆಯಾಗಲಿದ್ದಾರೆ. ಆ ಸುವರ್ಣಕ್ಷಣ ಆದಷ್ಟು ಬೇಗ ಕೂಡಿಬರಲಿ, ಅಣ್ತಮ್ಮಾಸ್ ಹವಾ ಆಕಾಶ ಮುಟ್ಟಲಿ.
ತಮ್ಮ ಪಾರ್ಟ್ನರ್ ಜೊತೆ ಸುಕೃಶಿ ಕ್ರಿಯೇಷನ್ಸ್ ಎಂಬ ಹೊಸ ನಿರ್ಮಾಣ ಸಂಸ್ಥೆ ಹುಟ್ಟುಹಾಕಿರುವ ಕೃತಿಕಾ, ಆ ಮೂಲಕ ಅವರು “ಉತ್ತರಾಂಗ” ಎಂಬ ಹೆಸರಿನ ಶೀರ್ಷಿಕೆಯನ್ನು ಅನಾವರಣ ಮಾಡಿದ್ದಾರೆ. ಈ ಮೂಲಕ ಕೃತಿಕಾ ನಿರ್ಮಾಪಕಿಯಾಗಿಯೂ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಇನ್ನು, ಈ ಚಿತ್ರದಲ್ಲಿ ಕೃತಿಕಾ ಪ್ರಮುಖ ಆಕರ್ಷಣೆಯಾಗಿದ್ದು, ಅವರಿಗೆ ಹೀರೋ ಯಾರು ಮತ್ತು ಸಿನಿಮಾದಲ್ಲಿ ಯಾರೆಲ್ಲಾ ಇರುತ್ತಾರೆ ಅನ್ನುವುದು ಇಷ್ಟರಲ್ಲೇ ಗೊತ್ತಾಗಲಿದೆ.
ಈ ಬಣ್ಣದ ಲೋಕವೇ ಹಾಗೆ. ಇಲ್ಲಿ ಬಂದವರಿಗೆ ಎಲ್ಲದರಲ್ಲೂ ತೊಡಗಿಸಿಕೊಳ್ಳಬೇಕೆಂಬ ಹಂಬಲ ಇದ್ದೇ ಇರುತ್ತೆ. ಈಗಾಗಲೇ ಹೀರೋ ನಿರ್ದೇಶಕರಾಗಿದ್ದಾರೆ. ನಿರ್ದೇಶಕ ಹೀರೋ ಆಗಿದ್ದಾರೆ. ನಿರ್ಮಾಪಕ ಕೂಡ ನಿರ್ದೇಶಕ, ಹೀರೋ ಆಗಿದ್ದೂ ಉಂಟು! ಹಾಗೆಯೇ ಅದೆಷ್ಟೋ ನಟಿಯರು ಕೂಡ ನಿರ್ಮಾಣದತ್ತ ವಾಲಿರುವುದು ಹೊಸದೇನಲ್ಲ. ಆ ಸಾಲಿಗೆ ಈಗ ನಟಿ ಕೃತಿಕಾ ಕೂಡ ಈಗ ನಿರ್ಮಾಪಕಿಯಾಗಿದ್ದಾರೆ. ಹೀಗೆಂದರೆ ಅಚ್ಚರಿಯಾಗಬಹುದು. ಆದರೂ ಇದು ಸತ್ಯ. ಸ್ವತಃ ಕೃತಿಕಾ ಅವರೇ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ. “ಸಿನಿಲಹರಿ” ಜೊತೆ ಈ ವಿಷಯ ಹಂಚಿಕೊಂಡಿರುವ ಕೃತಿಕಾ ತಮ್ಮ ಸಿನಿಮಾದ ಕುರಿತು ಒಂದಷ್ಟು ಹೇಳಿಕೊಂಡಿದ್ದಾರೆ.
ತಮ್ಮ ಪಾರ್ಟ್ನರ್ ಜೊತೆ ಸುಕೃಶಿ ಕ್ರಿಯೇಷನ್ಸ್ ಎಂಬ ಹೊಸ ನಿರ್ಮಾಣ ಸಂಸ್ಥೆಯನ್ನು ಹುಟ್ಟುಹಾಕಿರುವ ಕೃತಿಕಾ, ಆ ಮೂಲಕ ಅವರು “ಉತ್ತರಾಂಗ” ಎಂಬ ಹೆಸರಿನ ಶೀರ್ಷಿಕೆಯನ್ನು ಅನಾವರಣ ಮಾಡಿದ್ದಾರೆ. ಈ ಮೂಲಕ ಕೃತಿಕಾ ನಿರ್ಮಾಪಕಿಯಾಗಿಯೂ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಇನ್ನು, ಈ ಚಿತ್ರದಲ್ಲಿ ಕೃತಿಕಾ ಪ್ರಮುಖ ಆಕರ್ಷಣೆಯಾಗಿದ್ದು, ಅವರಿಗೆ ಹೀರೋ ಯಾರು ಮತ್ತು ಸಿನಿಮಾದಲ್ಲಿ ಯಾರೆಲ್ಲಾ ಇರುತ್ತಾರೆ ಅನ್ನುವುದು ಇಷ್ಟರಲ್ಲೇ ಗೊತ್ತಾಗಲಿದೆ.
ಈ “ಉತ್ತರಾಂಗ” ಸಿನಿಮಾಗೆ ಶಿವಾನಿ ಎನ್ನುವವರು ನಿರ್ದೇಶನ ಮಾಡುತ್ತಿದ್ದಾರೆ. ಇವರೊಂದಿಗೆ ಕೃತಿಕಾ ನಿರ್ಮಾಣ ಮಾಡುತ್ತಿದ್ದಾರೆ. ನಿರ್ದೇಶಕ ಶಿವಾನಿ ಅವರಿಗೆ ಇದು ಚೊಚ್ಚಲ ನಿರ್ದೇಶನದ ಸಿನಿಮಾ. ಈ ಹಿಂದೆ ಅವರು ಹಲವಾರು ಆಲ್ಬಂ ಸಾಂಗ್ ಮತ್ತು ಕಿರುಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ಆ ಅನುಭವದ ಮೇಲೆ ಅವರೇ ಕಥೆ ಮತ್ತು ಚಿತ್ರಕಥೆ ಬರೆದು “ಉತ್ತರಾಂಗ” ಸಿನಿಮಾ ನಿರ್ದೇಶಿಸುತ್ತಿದ್ದಾರೆ.
ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಅಂಶಗಳನ್ನು ಒಳಗೊಂಡಿರುವ ಸಿನಿಮಾ. ಉಳಿದಂತೆ ಕಥೆಯ ಒನ್ ಲೈನ್ ಏನು, ಯಾವಾಗ ಶುರುವಾಗಲಿದೆ, ಎಲ್ಲೆಲ್ಲಿ ಚಿತ್ರೀಕರಣಗೊಳ್ಳಲಿದೆ ಎಂಬಿತ್ಯಾದಿ ಪ್ರಶ್ನೆಗಳಿಗೆ ಇಷ್ಟರಲ್ಲೇ ಉತ್ತರ ಕೊಡುವುದಾಗಿ ಹೇಳುತ್ತಾರೆ ಕೃತಿಕಾ.
ಅಂದಹಾಗೆ, ಸಿನಿಮಾಗೆ “ಗೋಧಿಬಣ್ಣ ಸಾಧಾರಣ ಮೈಕಟ್ಟು” ಸಿನಿಮಾಗೆ ಕ್ಯಾಮೆರಾ ಹಿಡಿದಿದ್ದ ನಂದಕಿಶೋರ್ ಅವರು ಈ ಸಿನಿಮಾಗೂ ಕ್ಯಾಮೆರಾ ಹಿಡಿಯುತ್ತಿದ್ದಾರೆ.
ಉಳಿದಂತೆ ಸಂಗೀತ ನಿರ್ದೇಶಕರು ಯಾರು ಅನ್ನುವುದನ್ನೂ ಇಷ್ಟರಲ್ಲೇ ಚಿತ್ರತಂಡ ಹೇಳಲಿದೆ. ಅದೇನೆ ಇರಲಿ, ಕೃತಿಕಾ ಮೊದಲ ಬಾರಿಗೆ ನಿರ್ಮಾಣ ಸಂಸ್ಥೆ ಹುಟ್ಟುಹಾಕಿ, ಆ ಮೂಲಕ ಒಂದು ಹೊಸ ಬಗೆಯ ಕಥೆ ಇಟ್ಟುಕೊಂಡು ಸಿನಿಮಾ ಮಾಡಲು ಮುಂದಾಗಿರುವುದು ನಿಜಕ್ಕೂ ಖುಷಿಯ ವಿಷಯ. ಅವರ ಈ ಪ್ರಯತ್ನಕ್ಕೆ ಗೆಲುವು ಸಿಗಲಿ ಅನ್ನುವುದು “ಸಿನಿಲಹರಿ” ಆಶಯ.
ಯುವ ಪ್ರತಿಭೆ ಶ್ರೀಧರ್ ಶಾಸ್ತ್ರಿ ನಿರ್ದೇಶನದಲ್ಲಿ ಮೂಡಿ ಬರಲಿರುವ ಹೊಸ ಸಿನಿಮಾ ‘ಟೆನೆಂಟ್’. ಟೈಟಲ್ ಹಾಗೂ ಚಿತ್ರದ ಥೀಮ್ ಪೋಸ್ಟರ್ ಬಿಡುಗಡೆ ಮಾಡಿ ಗಮನ ಸೆಳೆಯುತ್ತಿರುವ ಚಿತ್ರತಂಡ, ಮುಂದಿನ ವಾರದಿಂದ ಚಿತ್ರೀಕರಣ ಆರಂಭಿಸಲಿದೆ.
‘ಅನ್ ಲಾಕ್’ ಕಿರುಚಿತ್ರದ ಮೂಲಕ ಗುರುತಿಸಿಕೊಂಡಿದ್ದ ಶ್ರೀಧರ್ ಶಾಸ್ತ್ರಿ, ಇದೇ ಮೊದಲ ಬಾರಿಗೆ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಚಿತ್ರಕ್ಕೆ ಕಥೆ, ಚಿತ್ರಕಥೆ ಜವಾಬ್ದಾರಿಯನ್ನು ಶ್ರೀಧರ್ ಶಾಸ್ತ್ರಿಯವರೇ ಹೊತ್ತುಕೊಂಡಿದ್ದಾರೆ.
ಶ್ರೀಧರ್ ಶಾಸ್ತ್ರಿ, ನಿರ್ದೇಶಕ
ಧರ್ಮ ಕೀರ್ತಿರಾಜ್, ತಿಲಕ್ ಶೇಖರ್, ಸೋನು ಗೌಡ, ರಾಕೇಶ್ ಮಯ್ಯ, ಉಗ್ರಂ ಮಂಜು. ಚಿತ್ರದ ತಾರಾಬಳಗಲ್ಲಿದ್ದಾರೆ.
ಲಾಕ್ ಡೌನ್ ಸಂದರ್ಭದಲ್ಲಿ ನಡೆಯುವ ಕ್ರೈಂ ಥ್ರಿಲ್ಲರ್ ಸಿನಿಮಾ ಟೆನೆಂಟ್. ಬಾಡಿಗೆದಾರ ಹಾಗೂ ಮಾಲೀಕನ ನಡೆಯುವ ಕಥೆ ಚಿತ್ರದಲ್ಲಿದೆ.
ಮನೋಹರ್ ಜೋಶಿ ಛಾಯಾಗ್ರಹಣ, ಗಿರೀಶ್ ಒತ್ತೂರು ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಮಾಸ್ಟರ್ ಚಾಯ್ಸ್ ಕ್ರಿಯೇಷನ್ ಬ್ಯಾನರ್ ನಡಿ ಟಿ.ನಾಗರಾಜ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ನೀನಾಸಂ ಮಂಜು ನಿರ್ದೇಶನದ ‘ಕನ್ನೇರಿ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ನೈಜ ಘಟನೆ ಆಧಾರಿತ ಮಹಿಳಾ ಪ್ರಧಾನ ಚಿತ್ರವಿದು. ಬಿಡುಗಡೆಗೆ ಸಜ್ಜಾಗಿರುವ ಈ ಚಿತ್ರದ ಫಸ್ಟ್ ಲುಕ್ ಅನ್ನು ನಾಗತಿಹಳ್ಳಿ ಚಂದ್ರಶೇಖರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.
ಚಿತ್ರದಲ್ಲಿ ಅರ್ಚನಾ ಮಧುಸೂಧನ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಅನಿತಾ ಭಟ್, ಎಂ.ಕೆ.ಮಠ್, ಅರುಣ್ ಸಾಗರ್, ಕರಿಸುಬ್ಬು, ಸರ್ದಾರ್ ಸತ್ಯ ಒಳಗೊಂಡ ಪ್ರತಿಭಾನ್ವಿತ ಕಲಾವಿದರ ತಂಡ ಚಿತ್ರದಲ್ಲಿದೆ.
ಚಿತ್ರೀಕರಣ ಕಂಪ್ಲೀಟ್ ಮಾಡಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿ ಇರುವ ಚಿತ್ರತಂಡ, ಫಸ್ಟ್ ಲುಕ್ ಬಿಡುಗಡೆ ಮಾಡುವ ಮೂಲಕ ಚಿತ್ರದ ಪ್ರಚಾರ ಕಾರ್ಯ ಆರಂಭಿಸಿದೆ.
ಬುಡ್ಡಿ ದೀಪ ಸಿನಿಮಾ ಹೌಸ್ ಬ್ಯಾನರ್ ನಡಿ ಪಿ.ಪಿ ಹೆಬ್ಬಾರ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಗಣೇಶ್ ಹೆಗ್ಡೆ ಛಾಯಾಗ್ರಹಣ , ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನ, ಸುಜಿತ್ ನಾಯಕ್ ಸಂಕಲನ ಕನ್ನೇರಿ ಚಿತ್ರಕ್ಕಿದೆ.
“ಇಂದಿರಾ” ಅಂದಾಕ್ಷಣ, ತಕ್ಷಣವೇ ನೆನಪಾಗೋದೇ ಮೇಡಮ್ ಇಂದಿರಾಗಾಂಧಿ! ಹಾಗಂತ, ಅವರ ಜೀವನ ಚರಿತ್ರೆಯ ಸಿನಿಮಾವಂತೂ ಅಲ್ಲ. ಅದರಲ್ಲೂ ಅವರ ಬದುಕಿನ ಅಂಶಗಳೂ ಇಲ್ಲಿ ಸುಳಿದಾಡುವುದಿಲ್ಲ. “ಇಂದಿರಾ” ಅನ್ನೋದು ಕಥಾ ನಾಯಕಿಯ ಪಾತ್ರವಷ್ಟೇ. ಉಳಿದಂತೆ ಇದೊಂದು ಎಮೋಷನಲ್ ಜರ್ನಿ ಸಿನಿಮಾವಂತೆ.
ಕನ್ನಡದ ಗ್ಲಾಮರಸ್ ನಟಿ ಎನಿಸಿಕೊಂಡಿರುವ ಅನಿತಾಭಟ್, ಇತ್ತೀಚೆಗಷ್ಟೇ ಹೊಸಬಗೆಯ ಸಿನಿಮಾ ನಿರ್ಮಾಣ ಮಾಡುವ ಮೂಲಕ ಸುದ್ದಿಯಲ್ಲಿದ್ದರು. ಈಗ ಮತ್ತೊಂದು ಸುದ್ದಿಯಲ್ಲಿದ್ದಾರೆ. ಹೌದು, ಅನಿತಾಭಟ್ “ಅನಿತಾಭಟ್ ಕ್ರಿಯೇಷನ್ಸ್ ಮೂಲಕ ಸಿನಿಮಾ ನಿರ್ಮಾಣ ಮಾಡಿದ ಬಗ್ಗೆ ಈ ಹಿಂದೆ ಹೇಳಲಾಗಿತ್ತು. ಅವರ ನಿರ್ಮಾಣದ ಸಿನಿಮಾದಲ್ಲಿ ಸ್ವತಃ ಅನಿತಾಭಟ್ ವಿಶೇಷ ಪಾತ್ರದಲ್ಲೂ ಕಾಣಿಸಿಕೊಂಡಾಗಿದೆ. ಅ ಚಿತ್ರ ಇನ್ನೇನು ಪ್ರೇಕ್ಷಕರ ಮುಂದೆ ಬರಲು ರೆಡಿಯಾಗಿದೆ. ಅದರ ಬೆನ್ನಲ್ಲೇ, ಅನಿತಾಭಟ್ ಮತ್ತೊಂದು ಸಿನಿಮಾ ಮಾಡಿದ್ದಾರೆ ಅನ್ನೋದೇ ಈ ಹೊತ್ತಿನ ವಿಶೇಷ. ಹೌದು, ನಟಿ ಅನಿತಾಭಟ್ ತಮ್ಮ “ಅನಿತಾ ಭಟ್ ಕ್ರಿಯೇಷನ್ಸ್” ಮೂಲಕ ಡಾಟ್ ಟಾಕೀಸ್ನಡಿ ಹೊಸ ಬಗೆಯ ಸಿನಿಮಾ ಮಾಡಿದ್ದಾರೆ. ಆ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಅನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಬಿಡುಗಡೆ ಮಾಡುವ ಮೂಲಕ ಶುಭ ಹಾರೈಸಿದ್ದಾರೆ. ಅಂದಹಾಗೆ, ಆ ಚಿತ್ರಕ್ಕೆ “ಇಂದಿರಾ” ಅಂತ ನಾಮಕರಣ ಮಾಡಲಾಗಿದೆ.
“ಇಂದಿರಾ” ಅಂದಾಕ್ಷಣ, ತಕ್ಷಣವೇ ನೆನಪಾಗೋದೇ ಮೇಡಮ್ ಇಂದಿರಾಗಾಂಧಿ! ಹಾಗಂತ, ಅವರ ಜೀವನ ಚರಿತ್ರೆಯ ಸಿನಿಮಾವಂತೂ ಅಲ್ಲ. ಅದರಲ್ಲೂ ಅವರ ಬದುಕಿನ ಅಂಶಗಳೂ ಇಲ್ಲಿ ಸುಳಿದಾಡುವುದಿಲ್ಲ. “ಇಂದಿರಾ” ಅನ್ನೋದು ಕಥಾ ನಾಯಕಿಯ ಪಾತ್ರವಷ್ಟೇ. ಉಳಿದಂತೆ ಇದೊಂದು ಎಮೋಷನಲ್ ಜರ್ನಿ ಸಿನಿಮಾವಂತೆ. ಈ ಸಿನಿಮಾ ಕುರಿತಂತೆ ಸ್ವತಃ ಅನಿತಾಭಟ್ ಹೇಳುವುದಿಷ್ಟು. “ನಾನು “ಇಂದಿರಾ” ಎಂಬ ಸಿನಿಮಾದಲ್ಲಿ ಇಂದಿರಾ ಎಂಬ ಪಾತ್ರ ನಿರ್ವಹಿಸುತ್ತಿದ್ದೇನೆ. ಅದೊಂದು ವಿಭಿನ್ನ ಮತ್ತು ವಿಶೇಷವಾಗಿರುವಂತಹ ಪಾತ್ರವದು. ಚಿತ್ರದಲ್ಲಿ ನನಗೊಂದು ಅಪಘಾತ ಆಗುತ್ತದೆ. ಅದರಿಂದಾಗಿ ನಾನು ಅಂಧೆ ಆಗ್ತೀನಿ. ಅಷ್ಟೇ ಅಲ್ಲ, ನನ್ನ ಮೆಮೋರಿ ಕೂಡ ಲಾಸ್ ಆಗುತ್ತೆ. ಅಪಘಾತ ಆಗಿದ್ದು ಯಾಕೆ, ಮಾಡಿದ್ದು ಯಾರು? ಉದ್ದೇಶ ಪೂರ್ವಕವಾಗಿಯೇ ಅಪಥಾಗ ಮಾಡಲಾಯಿತಾ ಎಂಬಿತ್ಯಾದಿ ಪ್ರಶ್ನೆಗಳ ಸುತ್ತವೇ ಕಥೆ ಸಾಗುತ್ತದೆ. ಅದಕ್ಕೆ ಉತ್ತರ ಸಿನಿಮಾ ನೋಡಬೇಕು” ಎನ್ನುತ್ತಾರೆ ಅನಿತಾಭಟ್.
ಇನ್ನು, ಚಿತ್ರದಲ್ಲಿ ವಿಶೇಷ ಪಾತ್ರಳೂ ಇವೆ. ನೀತುಶೆಟ್ಟಿ, ಷಫಿ, ಚಕ್ರವರ್ತಿ ಚಂದ್ರಚೂಡ್ ಇವರು ಪ್ರಮುಖ ಪಾತ್ರಗಳಲ್ಲಿ ಗಮನಸೆಳೆಯುತ್ತಾರೆ. ನಾನು ಅಂಧೆಯಾಗಿ ಮೆಮೋರಿ ಲಾಸ್ ಮಾಡಿಕೊಂಡ ಬಳಿಕ ನೋಡಿಕೊಳ್ಳುವ ಮೂರು ಪಾತ್ರಗಳಿವು. ನಾನು ಚೆನ್ನಾಗಿದ್ದಾಗ ಅವರೆಲ್ಲಾ ಹೇಗೆ ಕನೆಕ್ಟ್ ಆದರು ಅನ್ನೋದು ನಂತರ ರಿವೀಲ್ ಆಗುತ್ತಾ ಹೋಗುತ್ತೆ. ಇನ್ನು, ಅಪಘಾತವಾಗಿದ್ದರೂ, ನನ್ನ ಗಂಡ ಪತ್ತೆ ಆಗಲ್ಲ. ಅವನು ಎಲ್ಲಿ ಹೋದ ಅನ್ನೋದು ಪ್ರಶ್ನೆ ಗಾಢವಾಗಿ ಕಾಡುತ್ತದೆ. ಇಲ್ಲಿ ರೆಹಮಾನ್ ಹಾಸನ್ ಗಂಡನ ಪಾತ್ರ ಮಾಡಿದ್ದಾರೆ. ಅವರ ಪಾತ್ರವೂ ಇಲ್ಲಿ ಪ್ರಮುಖವಾಗಿದೆ.
ಅಂದಹಾಗೆ, ಇದೊಂದು ಸೈಕಲಾಜಿಕಲ್ ಥ್ರಿಲ್ಲರ್ ಚಿತ್ರ. ಭ್ರೈನ್ ಮನುಷ್ಯನ ಜೀವನವನ್ನು ಹೇಗೆ ಕಂಟ್ರೋಲ್ ಮಾಡುತ್ತೆ ಅನ್ನುವುದರ ಸುತ್ತ ನಡೆಯೋ ಕಥೆ ಅದು. ಭ್ರಮೆಯಿಂದ ಆಚೆ ಬರೋದು ಹೇಗೆ ಎಂಬಿತ್ಯಾದಿ ಕುರಿತಂತೆ ಮತ್ತು ಮೆಂಟಲಿ ಹೆಲ್ತ್ ಎಷ್ಟು ಮುಖ್ಯ ಎಂಬುದರ ಬಗ್ಗೆ ಹೇಳಲಾಗಿದೆ” ಎನ್ನುತ್ತಾರೆ ಅನಿತಾಭಟ್. ಇನ್ನು, ಈ ಚಿತ್ರವನ್ನು ರಿಷಿಕೇಶ್ ನಿರ್ದೇಶನ ಮಾಡಿದ್ದಾರೆ. ಅವರೇ ಕ್ಯಾಮೆರಾ ಹಿಡಿದಿದ್ದು, ಸಂಕಲನದ ಜೊತೆಗೆ ಪೋಸ್ಟರ್ ಡಿಜೈನ್ ಮತ್ತು ಡಿಐ ಕೂಡ ಅವರೇ ಮಾಡಿದ್ದಾರೆ. ಇದು ಕನ್ನಡ ಮತ್ತು ತೆಲುಗಿನಲ್ಲಿ ತಯಾರಾಗಿದೆ.
ಪರಭಾಷಾ ನಟರುಗಳು ಗಂಧದಗುಡಿಗೆ ಲಗ್ಗೆ ಇಡೋದು ಹೊಸದೇನಲ್ಲ. ದಿಗ್ಗಜರ ಕಾಲದಿಂದಲೂ ಹೊರ ರಾಜ್ಯದ ಕಲಾವಿದರು ಕನ್ನಡ ಚಿತ್ರರಂಗಕ್ಕೆ ಬಲಗಾಲಿಟ್ಟು ಬಂದು ಹೋಗಿದ್ದಾರೆ. ಸಾಹಸಸಿಂಹ ವಿಷ್ಣುವರ್ಧನ್ ಅವರೊಟ್ಟಿಗೆ ಹದಿನೇಳು ವರ್ಷಗಳ ಹಿಂದೆ ಸ್ಕ್ರೀನ್ ಶೇರ್ ಮಾಡಿದ್ದ ಬಿಟೌನ್ ನವಾಬ್. ಇದೀಗ ಮತ್ತೊಮ್ಮೆ ಸ್ಯಾಂಡಲ್ವುಡ್ಗೆ ಎಂಟ್ರಿಕೊಟ್ಟಿದ್ದಾರೆ. ರಿಯಲ್ಸ್ಟಾರ್ ಉಪೇಂದ್ರ ಅಭಿನಯದ ಹೈವೋಲ್ಟೇಜ್ `ಕಬ್ಜ’ ಅಖಾಡಕ್ಕೆ ಧುಮ್ಕಿದ್ದಾರೆ
ಬಿಟೌನ್ ನವಾಬ್ ಲುಕ್- ಗೆಟಪ್ ಸಖತ್ ಟೆರಿಫಿಕ್ ಆಗಿದೆ. 6.5 ಹೈಟ್ ನಲ್ಲಿ ಘಟೋದ್ಗಜನಂತೆ ಕಾಣುವ ನವಾಬ್, ಕಬ್ಜದಲ್ಲಿ ಬಘೀರನಾಗಿ ಘರ್ಜಿಸಲಿದ್ದಾರೆ. ಪವರ್ ಫುಲ್ ಡಾನ್ ಆಗಿ ಇಡೀ ಸೌತ್ ಇಂಡಿಯಾನ ಕಂಟ್ರೋಲ್ ಮಾಡ್ತಾರಂತೆ. ನವಾಬ್ ಔಟ್ ಫಿಟ್ ಅಂಡ್ ಕ್ರೂಷಿಯಲ್ ಟ್ಯಾಟೂ ನೋಡಿದರೆ ಗೊತ್ತಾಗುತ್ತೆ ಬಘೀರ ಎಷ್ಟು ಭಯಂಕರ ಅಂತ. ಇಡೀ ಸೌತ್ ಸಿನಿಮಾ ಇಂಡಸ್ಟ್ರಿಯನ್ನಾಳಿರುವ ಇವರು ಹಿಂದಿ ಚಿತ್ರರಂಗಕ್ಕಿಂತ ಕನ್ನಡ ಚಿತ್ರರಂಗವೇ ಬೆಸ್ಟ್ ಎಂದು ಕೊಂಡಾಡಿದ್ದಾರೆ
ಕತ್ರಿಗುಪ್ಪೆಯಿಂದ ಕಿಕ್ಸ್ಟಾರ್ಟ್ ಪಡೆದುಕೊಂಡು ಸೆಟ್ಟೇರಿದ ಕನ್ನಡದ ಕಬ್ಜ' ಚಿತ್ರ, ಕೋಟಿ ಮೇಕಿಂಗ್- ಕಾಸ್ಟ್ಲೀ ಸ್ಟಾರ್ ಕಾಸ್ಟ್ ನಿಂದಲೇ ಕತ್ರಿಗುಪ್ಪೆ ಗಡಿದಾಟಿಕೊಂಡು ಇಡೀ ವರ್ಲ್ಡ್ ವೈಡ್ ಖ್ಯಾತಿ ಹೊಂದುತ್ತಿದೆ.ಕಬ್ಜ’ ಹವಾ ಅಟ್ ಪ್ರಸೆಂಟ್ ಹೆಂಗಿದೆ ಅಂದರೆ ಆಲ್ ಓವರ್ ಇಂಡ್ಯಾ ಮತ್ತೊಮ್ಮೆ ಕನ್ನಡ ಚಿತ್ರರಂಗದತ್ತ ತಿರುಗಿ ನೋಡ್ತಿದೆ. ಹೀಗೆ, ಪ್ಯಾನ್ ಇಂಡಿಯಾ ತುಂಬೆಲ್ಲಾ ಸದ್ದು ಮಾಡುತ್ತಿರುವ ಕಬ್ಜ ಚಿತ್ರತಂಡಕ್ಕೆ ಬಿಟೌನ್ ನವಾಬ್ ಸೇರ್ಪಡೆಗೊಂಡಿದ್ದಾರೆ.
ನವಾಬ್ … ಬಿಟೌನ್ ನವಾಬ್… ಪಂಚಭಾಷಾ ನಟ, ಅಭಿನಯದಲ್ಲಿ ನಟಭಯಂಕರ. ಹಿಂದಿ- ತೆಲುಗು- ತಮಿಳು- ಮಲೆಯಾಂ ಹೀಗೆ ಸೌತ್ ಸಿನಿಮಾ ಇಂಡಸ್ಟ್ರಿ ಸುತ್ತಿ ಬಂದಿರುವ ನವಾಬ್ ಷಾ, ಸಾಹಸಸಿಂಹ ವಿಷ್ಣುವರ್ಧನ್ ಅಭಿನಯದ ಜೇಷ್ಠ ಚಿತ್ರದ ಮೂಲಕ ಕನ್ನಡಕ್ಕೆ ಎಂಟ್ರಿಕೊಟ್ಟಿದ್ದರು. ಇದೀಗ ಹದಿನೇಳು ವರ್ಷಗಳು ಕಳೆದ ಮೇಲೆ ನವಾಬ್ ಮತ್ತೆ ಸ್ಯಾಂಡಲ್ ವುಡ್ ಗೆ ಬಂದಿದ್ದಾರೆ. ಕೋಟಿಗೊಬ್ಬ 3 ಚಿತ್ರದಲ್ಲಿ ಕಿಚ್ಚನ ಜೊತೆ ಕಾದಾಡಿದ ಬೆನ್ನಲ್ಲೇ ರಿಯಲ್ ಸ್ಟಾರ್ ಉಪ್ಪಿಯ ಕಬ್ಜದಲ್ಲಿ ಕಮಾಲ್ ಮಾಡೋದಕ್ಕೆ ಬೆಂಗಳೂರಿಗೆ ಬಂದಿಳಿದಿದ್ದಾರೆ.
ಸಿಲಿಕಾನ್ ಸಿಟಿಯಲ್ಲಿರುವ ಮಿನರ್ವ ಮಿಲ್ ನಲ್ಲಿ ಕಬ್ಜ ಚಿತ್ರದ ಶೂಟಿಂಗ್ ನಡೀತಿದೆ. ಕೋಟಿ ಕೋಟಿ ಖರ್ಚು ಮಾಡಿ ವೆರೈಟಿ ವೆರೈಟಿ ಸೆಟ್ ಹಾಕಿಸಿದ್ದಾರೆ. ಕೆಜಿಎಫ್ ಕಲಾ ನಿರ್ದೇಶಕ ಶಿವಕುಮಾರ್ ‘ ಕಬ್ಜ’ ಚಿತ್ರಕ್ಕೆ ಸೆಟ್ ನಿರ್ಮಿಸಿ ಕೊಟ್ಟಿದ್ದಾರೆ. ಅದ್ದೂರಿ ಸೆಟ್ ನಲ್ಲಿ ಈಗಾಗಲೇ ನಾಲ್ಕು ಹಂತದ ಚಿತ್ರೀಕರಣ ಮುಗಿಸಿರುವ ಟೀಮ್, ಈಗ ಐದನೇ ಹಂತದ ಟಾಕಿಪೋರ್ಶನ್ ಚಿತ್ರೀಕರಣದಲ್ಲಿ ನಿರತವಾಗಿದೆ. ಸದ್ಯ, ಉಪ್ಪಿ ಹಾಗೂ ನವಾಬ್ ಕಾಂಬಿನೇಷನ್ ಸೀಕ್ವೆನ್ಸ್ ಶೂಟ್ ಮಾಡುವುದರಲ್ಲಿ ಚಿತ್ರತಂಡ ಬ್ಯುಸಿಯಾಗಿದೆ.
ಬಿಟೌನ್ ನವಾಬ್ ಲುಕ್- ಗೆಟಪ್ ಸಖತ್ ಟೆರಿಫಿಕ್ ಆಗಿದೆ. 6.5 ಹೈಟ್ ನಲ್ಲಿ ಘಟೋದ್ಗಜನಂತೆ ಕಾಣುವ ನವಾಬ್, ಕಬ್ಜಾದಲ್ಲಿ ಬಘೀರನಾಗಿ ಘರ್ಜಿಸಲಿದ್ದಾರೆ. ಪವರ್ ಫುಲ್ ಡಾನ್ ಆಗಿ ಇಡೀ ಸೌತ್ ಇಂಡಿಯಾನ ಕಂಟ್ರೋಲ್ ಮಾಡ್ತಾರಂತೆ. ನವಾಬ್ ಔಟ್ ಫಿಟ್ ಅಂಡ್ ಕ್ರೂಷಿಯಲ್ ಟ್ಯಾಟೂ ನೋಡಿದರೆ ಗೊತ್ತಾಗುತ್ತೆ ಬಘೀರ ಎಷ್ಟು ಭಯಂಕರ ಅಂತ. ಆಗಲೇ ಹೇಳಿದ ಹಾಗೇ ನವಾಬ್ ಕನ್ನಡಕ್ಕೆ ಹೊಸಬರಲ್ಲ. ಇಡೀ ಸೌತ್ ಸಿನಿಮಾ ಇಂಡಸ್ಟ್ರಿಯನ್ನಾಳಿರುವ ಇವರು ಹಿಂದಿ ಚಿತ್ರರಂಗಕ್ಕಿಂತ ಕನ್ನಡ ಚಿತ್ರರಂಗವೇ ಬೆಸ್ಟ್ ಎಂದು ಕೊಂಡಾಡಿದರು. ಸ್ಯಾಂಡಲ್ ವುಡ್ ಅಂಗಳದಲ್ಲಿ ಕೆಲಸ ಮಾಡಲಿಕ್ಕೆ ಕಂಫರ್ಟಬಲ್ ಫೀಲ್ ಇರುತ್ತೆ, ಇಲ್ಲಿನ ಸಿನಿಮಾ ಮಂದಿಯೂ ಕಂಫರ್ಟ್ ಝೋನ್ ಕ್ರಿಯೇಟ್ ಮಾಡಿಕೊಡ್ತಾರೆ. ಜೊತೆಗೆ ಒಳ್ಳೊಳ್ಳೆ ಕ್ಯಾರೆಕ್ಟರ್ ಗಳು ಸಿಗುತ್ತಿವೆ ನನಗೆ ಎಂದು ನವಾಬ್ ಖುಷಿಯಿಂದ ಹೇಳಿಕೊಂಡರು.
ಲೆಜೆಂಡರಿ ಡೈರೆಕ್ಟರ್ ಅಂಡ್ ಆಕ್ಟರ್ ಉಪೇಂದ್ರರೊಟ್ಟಿಗೆ ಆಕ್ಟ್ ಮಾಡೋದಕ್ಕೆ ಇದೇ ಮೊದಲ ಬಾರಿಗೆ ಅವಕಾಶ ಸಿಕ್ಕಿದೆ. ಚಂದ್ರು ಸಾರ್ ಒಬ್ಬ ಗ್ರೇಟ್ ಡೈರೆಕ್ಟರ್, ಇಲ್ಲಿವರೆಗೂ ಬೆಸ್ಟ್ ಫಿಲ್ಮ್ಸ್ ಗಳನ್ನು ಕೊಟ್ಟಿದ್ದಾರೆ. ನನಗೆ ಕಬ್ಜದಲ್ಲಿ ಡಾನ್ ಪಾತ್ರಕ್ಕೆ ರೆಡ್ ಕಾರ್ಪೆಟ್ ಹಾಕಿದ್ದು ನನಗೆ ಸಂತೋಷವಾಗಿದೆ ಅಂತಾರೇ ನವಾಬ್. ನವಾಬ್ ರಂತೇ ಭಯಾನಕ ಖಳನಾಯಕರು ಕಬ್ಜ ಕೋಟೆಯಲ್ಲಿದ್ದಾರೆ. ಜಗಪತಿ ಬಾಬು, ರಾಹುಲ್ ದೇವ್, ಕಾಮರಾಜನ್, ಜಾನ್ ಕೊಕ್ಕಿನ್, ಅನುಪ್ ರೇವಣ್ಣ ಸೇರಿದಂತೆ ಅದ್ದೂರಿ ತಾರಾಬಳಗ ಚಿತ್ರದಲ್ಲಿದೆ.
ಸದ್ಯ, ಬೆಂಗಳೂರಿನಲ್ಲಿ ಕಬ್ಜ ಚಿತ್ರೀಕರಣ ಭರದಿಂದ ಸಾಗ್ತಿದ್ದು, ಹೈದ್ರಾಬಾದ್-ಮಂಗಳೂರು ಸೇರಿದಂತೆ ಫಾರಿನ್ ನಲ್ಲೂ ಶೂಟಿಂಗ್ ನಡೆಯಲಿದೆಯಂತೆ. 45 ದಿನಗಳ ಕಾಲ ಮಿನರ್ವ ಮಿಲ್ ನಲ್ಲಿ ಧಗಧಗಿಸಲಿರುವ ಕಬ್ಜ ಟೀಮ್ ಆ ಮೇಲೆ ಹೈದ್ರಾಬಾದ್ ಗೆ ಶಿಫ್ಟ್ ಆಗಲಿದ್ದಾರೆ.
ನಿರ್ದೇಶಕ ವಿಜಯ ಪ್ರಸಾದ್ ಮತ್ತು ಲೂಸ್ ಮಾದ ಯೋಗಿ ಇಬ್ಬರ ಕಾಂಬಿನೇಷನ್ನಲ್ಲಿ “ಸಿದ್ಲಿಂಗು” ಚಿತ್ರ ಸೂಪರ್ ಹಿಟ್ ಆಗಿತ್ತು. ಇದು ಎಲ್ಲರಿಗೂ ಗೊತ್ತಿರೋ ವಿಷಯ. ಈಗ “ಸಿದ್ಲಿಂಗು ೨” ಬರಲಿದೆ ಎಂಬ ಸುದ್ದಿ ಹೊಸದೇನಲ್ಲ. ಅದಕ್ಕೂ ಮೊದಲು ಮತ್ತೊಂದು ಹೊಸ ಸುದ್ದಿ ಇದೆ. ಅದೇ ಈ ಹೊತ್ತಿನ ವಿಶೇಷ.
ಹೌದು, ನಿರ್ದೇಶಕ ವಿಜಯ ಪ್ರಸಾದ್ ಈಗ ಎರಡು ಸಿನಿಮಾಗಳನ್ನು ನಿರ್ದೇಶಿಸಿ, ಅವುಗಳನ್ನು ಪ್ರೇಕ್ಷಕರ ಮುಂದೆ ತರಲು ರೆಡಿಯಾಗಿದ್ದಾರೆ. ಜಗ್ಗೇಶ್ ಅಭಿನಯದ “ತೋತಾಪುರಿ ೧” ಮತ್ತು ಸತೀಶ್ ನೀನಾಸಂ ಅವರ “ಪೆಟ್ರೋಮ್ಯಾಕ್ಸ್” ಚಿತ್ರಗಳನ್ನು ತೆರೆಗೆ ತರುವ ಯೋಜನೆಯಲ್ಲಿದ್ದಾರೆ. ಈ ಎರಡು ಸಿನಿಮಾಗಳ ನಂತರ ನಿರ್ದೇಶಕ ವಿಜಯಪ್ರಸಾದ್ ಮತ್ತೊಂದು ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ. ಅದೇ “ಪರಿಮಳ ಲಾಡ್ಜ್”.
ಹೌದು, ಕಳೆದ ಎರಡು ವರ್ಷಗಳ ಹಿಂದೆ ನಿರ್ದೇಶಕ ವಿಜಯಪ್ರಸಾದ್ ಅವರು “ಪರಿಮಳ ಲಾಡ್ಜ್” ಸಿನಿಮಾ ಅನೌನ್ಸ್ ಮಾಡಿದ್ದರು. ಈ ಚಿತ್ರಕ್ಕೆ ಪ್ರಸನ್ನ ನಿರ್ಮಾಪಕರಾಗಿದ್ದರು. ಈ ಚಿತ್ರದ ಆರಂಭಕ್ಕೂ ಮನ್ನ ಟೀಸರ್ ಕೂಡ ಬಂದಿತ್ತು. ಸತೀಶ್ ನೀನಾಸಂ, ಲೂಸ್ ಮಾದ ಯೋಗೇಶ್, ಸುಮನ್ ರಂಗನಾಥ್, ದತ್ತಣ್ಣ, ಬುಲೆಟ್ ಪ್ರಕಾಶ್ ಆ ಟೀಸರ್ನಲ್ಲಿ ಕಾಣಿಸಿಕೊಂಡಿದ್ದರು. ಈಗ ಹೊಸ ಸುದ್ದಿ ಅಂದರೆ, ಈ ಚಿತ್ರದ ಪರಿಮಳ ಮತ್ತೆ ಸೂಸುತ್ತಿದೆ.
ಹೌದು, ಸತೀಶ್ ನೀನಾಸಂ ಈಗ “ಪರಿಮಳ ಲಾಡ್ಜ್” ಸಿನಿಮಾದಿಂದ ದೂರ ಉಳಿದಿದ್ದಾರೆ ಎನ್ನಲಾಗಿದೆ. ಈ ಕುರಿತು ಸ್ವತಃ ವಿಜಯಪ್ರಸಾದ್ ಅವರೇ ಹೇಳಿಕೊಂಡ ಸುದ್ದಿ ಎಲ್ಲೆಡೆ ಹರಡಿದೆ. ಅವರ “ಪರಿಮಳ ಲಾಡ್ಜ್”ಗೆ ಲೂಸ್ ಮಾದ ಯೋಗೇಶ್ ನಾಯಕರಾಗಿ ಮುಂದುವರೆಯಲಿದ್ದಾರೆ. ಉಳಿದಂತೆ ನಟಿ ಸುಮನ್ ರಂಗನಾಥ್ ಇರಲಿದ್ದಾರೆ. ಆದರೆ, ನಾಯಕಿ ಯಾರೆಂಬುದು ಅಂತಿಮವಾಗಬೇಕಿದೆ.