ಟ್ರಾಫಿಕ್ ಅಂದ್ಮೇಲೆ ಅಕ್ಕ-ಪಕ್ಕ ಕಾರ್‌ಗಳು ಇರುತ್ತೆ ಸ್ಟಾರ್‌ವಾರ್‌ಗೆ ಸುದೀಪ್ ಬೆಂಕಿ ರಿಯಾಕ್ಷನ್ ! `ಸಲಗ-ಕೋಟಿಗೊಬ್ಬ’; ಜಿದ್ದಲ್ಲ ಜಸ್ಟ್ ಫೈಟ್

  • ವಿಶಾಲಾಕ್ಷಿ

ದುನಿಯಾ ವಿಜಯ್ ಮೊದಲ ಭಾರಿ ನಿರ್ದೇಶಿಸಿ ನಟಿಸಿರುವ ಸಲಗ' ಹಾಗೂ ಸ್ಯಾಂಡಲ್‌ವುಡ್ ಬಾದ್‌ಷಾ ಕಿಚ್ಚ ಅಭಿನಯಿಸಿರುವ ‘ಕೋಟಿಗೊಬ್ಬ-3’ ಚಿತ್ರಗಳು ಒಂದೇ ದಿನ ರಿಲೀಸ್ ಆಗ್ತಿರುವುದು. ಗಾಂಧಿನಗರದಲ್ಲಿ ಅಕ್ಕ-ಪಕ್ಕದ ಚಿತ್ರಮಂದಿರಗಳಲ್ಲಿ ಪ್ರದರ್ಶನಕ್ಕೆ ಸಜ್ಜಾಗಿರುವುದು ಇಡೀ ಆರು ಕೋಟಿ ಕನ್ನಡ ಜನತೆಗೆ ಮಾತ್ರವಲ್ಲ ಅಕ್ಕ-ಪಕ್ಕ ರಾಜ್ಯದ ಮಂದಿಗೂ ಗೊತ್ತಾಗಿದೆ. ಗಂಧದಗುಡಿಯ ಇಬ್ಬರು ನಟರುಗಳ ಬಹುನಿರೀಕ್ಷೆಯ ಸಿನಿಮಾ ಒಂದೇ ದಿನ ಬಿಡುಗಡೆಯಾಗ್ತಿರುವುದರಿಂದ ಸಿನಿಮಾ ಮಂದಿ ಮಾತ್ರವಲ್ಲ ಸಾಮಾನ್ಯ ಜನರು ಕೂಡ ಇದನ್ನು ಸ್ಟಾರ್‌ವಾರ್ ಅಂತಲೇ ಪರಿಗಣಿಸಿದ್ದಾರೆ. ಆಯುಧಪೂಜೆಯ ದಿನದಂದು ಆರಂಭಗೊಳ್ಳುವ ಸ್ಟಾರ್‌ನಟರಿಬ್ಬರ ಸಿನಿಮಾ ಜಾತ್ರೆಯನ್ನು ನೋಡಲಿಕ್ಕೆ ಕಾತುರರಾಗಿದ್ದಾರೆ. ಮೊನ್ ಮೊನ್ನೆಯಷ್ಟೇ ನಟ ವಿಜಯ್ ಅವ್ರು ಸ್ಟಾರ್‌ವಾರ್ ಸುಂಟರಗಾಳಿಗೆ ಉತ್ತರ ಕೊಟ್ಟಿದ್ದರು. ಇದೀಗ ನಟ ಸುದೀಪ್ ಸ್ಟಾರ್‌ವಾರ್ ಬಿರುಗಾಳಿಗೆ ರಿಯಾಕ್ಟ್ ಮಾಡಿದ್ದಾರೆ. ಏನ್ ಹೇಳಿದರು ಕಿಚ್ಚ ಅದರ ಕಂಪ್ಲೀಟ್ ಕಹಾನಿ ನಿಮ್ಮ ಮುಂದೆ…

ಸ್ಯಾಂಡಲ್‌ವುಡ್ ಅಂಗಳದಲ್ಲಿ ಈಗ ಸಲಗ ಮತ್ತು ಕೋಟಿಗೊಬ್ಬ-3' ಚಿತ್ರಗಳದ್ದೇ ಚರ್ಚೆ. ಬಹುನಿರೀಕ್ಷೆಯ ಎರಡು ಚಿತ್ರಗಳು ಒಂದೇ ದಿನ ರಿಲೀಸ್ ಆಗ್ತಿರೋದ್ರಿಂದ, ಅದರಲ್ಲೂ ಅಕ್ಕ-ಪಕ್ಕದ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ತಿರುವುದರಿಂದ ಎಲ್ಲರ ಕಣ್ಣು ಈಗಸಲಗ ಮತ್ತು ‘ಕೋಟಿಗೊಬ್ಬ-3’ ಚಿತ್ರದ ಮೇಲೆ ಬಿದ್ದಿದೆ. ಸಲಗ ವರ್ಸಸ್ ಕೋಟಿಗೊಬ್ಬ ಎನ್ನುವಂತಾಗಿದೆ. ಏಕಕಾಲಕ್ಕೆ ಫೀಲ್ಡಿಗಿಳಿಯುತ್ತಿರುವ ಇಬ್ಬರು ಸ್ಟಾರ್‌ಗಳ ಚಿತ್ರಕ್ಕೆ ಪ್ರೇಕ್ಷಕಮಹಾಷಯರಿಂದ ಯಾವ್ ರೀತಿಯ ರೆಸ್ಪಾನ್ಸ್ ಸಿಗ್ಬೋದು? ಗಾಂಧಿನಗರದ ಮುಖ್ಯ ಚಿತ್ರಮಂದಿರಗಳಲ್ಲಿ ಎರಡು ಸಿನಿಮಾಗಳು ಯಾವ್ ರೀತಿಯಾಗಿ ಸದ್ದು ಮಾಡ್ಬೋದು? ಎಷ್ಟು ಕಮಾಯಿ ಮಾಡ್ಬೋದು? ಇದೆಲ್ಲದರ ಜೊತೆಗೆ ಸ್ಟಾರ್‌ವಾರ್ ಹಾಗೂ ಫ್ಯಾನ್ಸ್ವಾರ್ ಆಗ್ಬೋದಾ? ಆಗುತ್ತಂತೆ ಅಂತ ಒಂದು ತಂಡ? ಆಗಲ್ಲವಂತೆ ಅಂತ ಒಂದು ತಂಡ? ನೋಡ್ತಾಯಿರಿ ಅನ್ನೋ ಮತ್ತೊಂದು ತಡ ಇಡೀ ಗಾಂಧಿನಗರದ ತುಂಬೆಲ್ಲಾ ಇದೆ. ಆದರೆ, ಏನಾಗಲಿದೆ ಅನ್ನೋದು ಮೂರು ದಿನದಲ್ಲಿ ಗೊತ್ತಾಗಲಿದೆ.

ಮೂರು ರಾತ್ರಿ ಕಳೆದು, ಮೂರು ಸಲ ಬೆಳಗಾಗುವಷ್ಟರಲ್ಲಿ ಗಾಂಧಿನಗರ ರಂಗೇರಿರುತ್ತೆ. ಸಂತೋಷ್ ಸಲಗ'ನ ಕಟೌಟ್ ಅಂಡ್ ಬ್ಯಾನರ್ ಹಾಕ್ಕೊಂಡು ಸಂತಸಪಡುತ್ತಿರುತ್ತೆ,ನರ್ತಕಿ’ ಕೋಟಿಗೊಬ್ಬನನ್ನು ಹೊತ್ಕೊಂಡು ನಗುತ್ತಿರುತ್ತೆ. ಇಬ್ಬರು ಸ್ಟಾರ್‌ನಟರ ಫ್ಯಾನ್‌ಗಳು ಥಿಯೇಟರ್ ಅಖಾಡದಲ್ಲಿ ಜಮಾಯಿಸಿರುತ್ತಾರೆ. ಒಂದು ಕಡೆ ಕಿಚ್ಚನಿಗೆ ಜೈಕಾರ, ಇನ್ನೊಂದು ಕಡೆ ಬ್ಲಾಕ್‌ಕೋಬ್ರಾಗೆ ಜೈಕಾರ ನಡೆಯುತ್ತಿರುತ್ತೆ. ಈ ಜೈಕಾರದ ಮಧ್ಯೆ ಫ್ಯಾನ್ಸ್ವಾರ್ ನಡಿಯದೇ ಹೋದರೆ ಮೈಸೂರಿನಲ್ಲಿ ದಸರಾ ಹಬ್ಬ ಎಷ್ಟು ಅದ್ದೂರಿಯಾಗಿ ಆರಂಭಗೊಂಡು ಅಡ್ಡಿಆತಂಕವಿಲ್ಲದೇ ಯಶಸ್ವಿಯಾಗುತ್ತೋ, ಅದೇ ರೀತಿ ಗಾಂಧಿನಗರದಲ್ಲಿ ನಡೆಯುವ ಸಿನಿಮಾ ಜಾತ್ರೆಯೂ ಸಕ್ಸಸ್ ಆಗುತ್ತೆ. ಹಾಗೆಯೇ, ಆಗಬೇಕು ಎನ್ನುವುದು ಎಲ್ಲರ ಆಸೆ. ಆದರೆ, ಕೆಲವರು ಸ್ಟಾರ್‌ವಾರ್ ಜೊತೆ ಫ್ಯಾನ್ಸ್ವಾರ್‌ಗೂ ಬೆಂಕಿ ಹಚ್ಚೋದಕ್ಕೆ ನೋಡ್ತಾಯಿದ್ದಾರೆ. ಅವರೆಲ್ಲರೂ ಕೂಡ ಕಿಚ್ಚನ ಮಾತುಗಳನ್ನು ಒಮ್ಮೆ ಕೇಳಿಸಿಕೊಂಡರೆ ಬೆಸ್ಟ್.

ಕೋಟಿಗೊಬ್ಬ-೩ ಬಿಡುಗಡೆಯ ಹಿನ್ನಲೆಯಲ್ಲಿ ಸುದ್ದಿಗೋಷ್ಟಿಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಬಜಾರ್‌ನಲ್ಲಿ ಕೇಳಿಬರುತ್ತಿರುವ ಮತ್ತು ಧಗಧಗಿಸುತ್ತಿರುವ ಸ್ಟಾರ್‌ವಾರ್' ಕಥೆಯ ಕುರಿತಾದ ಪ್ರಶ್ನೆಯೊಂದನ್ನು ಮಾಧ್ಯಮಮಿತ್ರರು ಕಿಚ್ಚ ಸುದೀಪ್ ಬಳಿ ಕೇಳಿದರು. ಇದಕ್ಕೆ ಉತ್ತರ ನೀಡಿದ ಕಿಚ್ಚ, ಟ್ರಾಫಿಕ್ ಅಂದ್ಮೇಲೆ ಅಕ್ಕಪಕ್ಕದಲ್ಲಿ ಕಾರ್‌ಗಳು ಇದ್ದೇ ಇರುತ್ವೆ ಅಲ್ವಾ ಸಾರ್. ಕೊರೊನಾ ಟೈಮ್‌ನಲ್ಲಿ ರೋಡ್ ಖಾಲಿಯಿದ್ದರು ಕಾರ್ ಓಡಿಸೋಕೆ ಅವಕಾಶ ಇದ್ರೂ ಕೂಡ ಹೆದರಿಕೊಂಡು ಮನೆಯಲ್ಲೇ ದೀಪ ಹಚ್ಚಿಕೊಂಡು ಚಪ್ಪಾಳೆ ತಟ್ಕೊಂಡು ಇದ್ವಿ. ಇವತ್ತು ರೋಡ್‌ನಲ್ಲಿ ನಾನೇ ಒಬ್ಬನೇ ಕಾರ್ ಓಡಿಸ್ಬೇಕು, ನಾನು ಒಬ್ಬನೇ ಓಡಾಡ್ಬೇಕು ಅಂದ್ರೆ ಹೆಂಗೆ ಸಾರ್. ಎಲ್ಲರೂ ಓಡಾಡೋದಕ್ಕೆ ಅವಕಾಶ ಇದೆ ಎಲ್ಲರೂ ಬರಲಿ. ಅಷ್ಟಕ್ಕೂ,ಯಾರು ನಮ್ಮ ಎದುರುಗಡೆ ಬಂದ್ರೂ, ಯಾರು ಪಕ್ಕದಲ್ಲಿ ಬಂದ್ರೂ ಅನ್ನೋದು ದೊಡ್ಡದಲ್ಲ. ಈ ಕೊರೊನಾ ಬಂದು ಹೋದ್ಮೇಲೆ ನಮ್ಮ ಸಿನಿಮಾಗೆ ಬೆಳಕು ಕಾಣ್ತಿದೆ, ಥಿಯೇಟರ್‌ಗಳು ಸಿಗುತ್ತಿವೆ, ವಿತರಕರು ಸಿನಿಮಾ ಕೊಂಡುಕೊಳ್ಳಲಿಕ್ಕೆ ಮುಂದೆ ಬರುತ್ತಿದ್ದಾರೆ ಇದನ್ನೆಲ್ಲಾ ನೋಡಿ ಖುಷಿಪಡಬೇಕು.

ಯಾವುದೋ ದೊಡ್ಡ ಸಿನಿಮಾ ರಿಲೀಸ್ ಆಗಿ ಜಾಸ್ತಿ ಕಲೆಕ್ಷನ್ ಮಾಡಿದ ತಕ್ಷಣ ಹಳೆಯ ಹಿಸ್ಟರಿ ಸುಳ್ಳಾಗಲ್ಲ. ಯಾವುದೋ ದೊಡ್ಡ ಸಿನಿಮಾ ರಿಲೀಸ್ ಆಗಿ ಕಡಿಮೆ ಕಲೆಕ್ಷನ್ ಮಾಡಿದ ತಕ್ಷಣ ಹಳೆಯ ಹಿಸ್ಟರಿ ಸುಳ್ಳಾಗಲ್ಲ. ವಾಸ್ತವ ಹೀಗಿರುವಾಗ, ಕೆತ್ತಿರುವ ಹಳೆಯ ಹಿಸ್ಟರಿಗಳು, ತಿಕ್ಕಿ ಅಳಿಸಿದರೂ ಅಳಿಯದ ಹಿಸ್ಟರಿಗಳು ಕಣ್ಮುಂದೆ ಇರುವಾಗ ಯಾಕ್ ಕಚ್ಚಾಡಬೇಕು, ಯಾಕೇ ಬಿಪಿ-ಟೆನ್ಷನ್-ಫೀವರ್ ಬರಿಸಿಕೊಳ್ಳಬೇಕು. ಏನಾಗ್ಬೇಕು ಅಂತ ಬರೆದಿರುತ್ತೋ, ಅದು ಆಗಿಯೇ ಆಗುತ್ತೆ ಮತ್ತು ಅದೇ ಆಗ್ಬೇಕು ಎನ್ನುವುದು ಕಿಚ್ಚನ ಮಾತು ಮತ್ತು ವಾದ. ಅಂದ್ಹಾಗೇ, ಕೊರೊನಾ ಟೈಮ್‌ನಲ್ಲಿ ಮನೆಯಲ್ಲಿದ್ದಾಗ ಹೆಂಗಿದ್ದೀರಾ? ಏನ್ ತಿಂದ್ರಿ ? ಮುಂದೇನ್ ಮಾಡೋಣ ಅಂತ ಮಾತನಾಡಿಕೊಂಡು ಈಗ `ನಾನಾ-ನೀನಾ’ ಅಂದರೆ ಚೆನ್ನಾಗಿರುತ್ತಾ? ಅಷ್ಟಕ್ಕೂ ಜಿದ್ದು ಬೇಕಾ ನೀವೇ ಹೇಳಿ. ಅಷ್ಟಕ್ಕೂ, ಎಲ್ಲರೂ ಅವರವರ ಚಿತ್ರಕ್ಕಾಗಿ ಫೈಟ್ ಮಾಡಬೇಕು ಮಾಡ್ತೀವಿ. ಹಾಗಂತ, ಇದು ಜಿದ್ದಲ್ಲ- ಪ್ರತಿಕಾರವೂ ಅಲ್ಲ ಅನ್ನೋದು ಕಿಚ್ಚನ ಒಂದೇ ಸಾಲಿನ ಉತ್ತರ.

ಅಷ್ಟಕ್ಕೂ, ಪಕ್ಕದಲ್ಲಿ ಬಿಡುಗಡೆಯಾಗುವ ಸಲಗ' ಚಿತ್ರಕ್ಕೆ ಸೋಲಾಗ್ಬೇಕು ಅಂತ ಬಯಸೋ ಸಣ್ಣ ಮನಸ್ಸು ಮತ್ತು ಸಣ್ಣತನ ಸುದೀಪ್ ಅವ್ರದ್ದಲ್ಲ.ಸಲಗ’ ಚಿತ್ರ ಸೆಟ್ಟೇರುವಾಗಲೇ ಗೆಸ್ಟ್ ಆಗಿ ಹೋಗಿ ಫಸ್ಟ್ ಕ್ಲಾಪ್ ಮಾಡಿ ೨೦೦೦' ಕೊಟ್ಟು ೨೦೦ ಕೋಟಿಯಾಗ್ಲಿ ಅಂತ ಹಾರೈಸಿ ಬಂದವರು. ಹೀಗಿರುವಾಗಸಲಗ’ ಸೋಲಬೇಕು ಅಂತ ಬಯಸ್ತಾರೆ ಯಾವುದೇ ಕಾರಣಕ್ಕೂ ಕೆಟ್ಟದ್ದು ಬಯಸಲ್ಲ. ಹೀಗಾಗಿ, ಮಾಧ್ಯಮ ಮುಂದೆ ಕೋಟಿಗೊಬ್ಬನ' ಬಗ್ಗೆ ಮಾತನಾಡುವಾಗ ಕ್ಲಾರಿಟಿ ಕೊಟ್ಟರು. ನನ್ನ ಗೆಳೆಯ ಹಾಗೂಸಲಗ’ ನಿರ್ಮಾಪಕ ಶ್ರೀಕಾಂತ್ ಜೊತೆಗಿನ ಗೆಳೆತನಕ್ಕೆ ಮುಹೂರ್ತಕ್ಕೆ ಹೋಗಿ ಮನಸಿಂದ ಹಾರೈಸಿದ್ದೆ. ಅವತ್ತು ಏನು ಶುಭ ಕೋರಿದ್ದೆನೊ ಇವತ್ತು ಕೂಡ ಅದೇ ಮನಸಿಂದ ಶುಭಹಾರೈಸ್ತೀನಿ ಎಂದರು. ಅವರು ಕಷ್ಟಪಟ್ಟು ಕೆಲಸ ಮಾಡಿದ್ದಾರೆ, ಕೋಟಿಗಟ್ಟಲೇ ಬಂಡವಾಳ ಹಾಕಿದ್ದಾರೆ ಅವರಿಗೂ ಒಳ್ಳೆಯದಾಗ್ಬೇಕು ಅಂತ ಅಭಿನಯ ಚಕ್ರವರ್ತಿ ಹೃದಯದಿಂದ ಹೇಳಿಕೊಂಡರು.

ಎಲ್ಲಾ ಸ್ಟಾರ್‌ಗಳು ಅಷ್ಟೇ, ಯಾರ್ ತಂಟೆಗೆ ಯಾರು ಸುಮ್ ಸುಮ್ನೇ ಹೋಗಲ್ಲ. ಸುಮ್ನೆ ಇದ್ದಾಗ ಕೆಣಕಿಕೊಂಡು ಬಂದರೆ ಸುಮ್ನೆ ಯಾರು ಬಿಡಲ್ಲ. ಸ್ಟಾರ್‌ಗಳ ಮಧ್ಯೆ ಕಾಂಪಿಟೇಷನ್ ಇರಬೇಕು. ಸ್ಪರ್ಧೆ ಇದ್ದಾಗಲೇ ಬೆಳೆಯೋದಕ್ಕೆ ಸಾಧ್ಯ, ಆ ಸ್ಪರ್ಧೆ ಆರೋಗ್ಯಕ ಸ್ಪರ್ಧೆಯಾಗಿರಲಿ ಎನ್ನುವುದೇ ಇಡೀ ಕರ್ನಾಟಕದ ಆರು ಕೋಟಿ ಜನತೆಯ ಆಶಯ. ಆ ಆಶಯವನ್ನು ಹುಸಿಮಾಡದೇ ಹೆಲ್ದಿ ಕಾಂಪಿಟೇಷನ್ ಕೊಡುತ್ತಾ, ಪರಭಾಷೆಯವರು ಹಾಗೂ ಇಂಡಿಯನ್ ಸಿನಿಮಾ ಇಂಡಸ್ಟ್ರಿ ಮಂದಿ ತಿರುಗಿ ನೋಡುವಂತಹ ಸಿನಿಮಾಗಳನ್ನು ಕೊಡಲಿ. ಬರೀ ಸ್ಟಾರ್‌ನಟರುಗಳು ಮಾತ್ರವಲ್ಲದೇ ಪ್ರತಿಯೊಬ್ಬ ಕಲಾವಿದರು ಗೆಲ್ಲಲಿ, ಕನ್ನಡದ ಕೀರ್ತಿ ಇನ್ನಷ್ಟು ಹಬ್ಬಲಿ.`ಸಲಗ-ಕೋಟಿಗೊಬ್ಬ-೩’ ಸಕ್ಸಸ್‌ಫುಲಿ ಯಶಸ್ವಿಯಾಗಲಿ.

ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Related Posts

error: Content is protected !!