Categories
ಸಿನಿ ಸುದ್ದಿ

ವೇದ ಎಂಬ ಹಳ್ಳಿ ಕಥೆ; ಶಿವಣ್ಣ ಇಲ್ಲಿ ಡಬ್ಬಲ್‌ ಶೇಡ್ ಪಾತ್ರ!

ಒಂದು ಸಿನಿಮಾ ನಂತರ ಮತ್ತೆ ನಿರ್ದೇಶಕ ಹಾಗು ನಾಯಕ ಸೇರಿ ಮತ್ತೆ ಸಿನಿಮಾ ಮಾಡೋದು ತುಸು ಕಷ್ಟ! ಎಲ್ಲೋ ಒಂದೆರೆಡು ಸಿನಿಮಾಗಳು ಮತ್ತದೇ ನಿರ್ದೇಶಕ, ನಾಯಕರ ಕಾಂಬಿನೇಷನ್‌ನಲ್ಲಿ ನಡೆದಿರಬಹುದು. ಆದರೆ, ಒಂದಲ್ಲ, ಎರಡಲ್ಲ, ಮೂರೂ ಅಲ್ಲ ನಾಲ್ಕು ಸಿನಿಮಾಗಳು ಒಬ್ಬ ನಿರ್ದೇಶಕ ಮತ್ತು ನಾಯಕರ ಜೊತೆ ಆಗುತ್ತೆ ಅಂದರೆ ವಿಶೇಷ. ಹಾಗಂತ, ಇದು ಹೊಸ ವಿಷಯವೂ ಅಲ್ಲ, ಹಿಂದೆಲ್ಲಾ ನಿರ್ದೇಶಕ ನಾಯಕರ ಕಾಂಬಿನೇಷನ್‌ನಲ್ಲಿ ಸಾಲು ಸಾಲು ಚಿತ್ರಗಳು ಬಂದಿವೆ. ಆದರೆ, ಈ ಜನರೇಷನ್‌ ನಿರ್ದೇಶಕರು ಒಬ್ಬ ಸ್ಟಾರ್‌ ನಾಯಕನ ಜೊತೆ ಸತತವಾಗಿ ನಾಲ್ಕು ಸಿನಿಮಾಗಳನ್ನು ಮಾಡುವುದು ವಿಶೇಷ. ಅಂದಹಾಗೆ, ಅದು ಬೇರಾರೂ ಅಲ್ಲ, ಅದು ಎ.ಹರ್ಷ. ಹೌದು, ಹರ್ಷ ಅಂದಾಕ್ಷಣ, ಮತ್ತೆ ನೆನಪಾಗೋದು ಶಿವರಾಜಕುಮಾರ್.‌ ಇವರಿಬ್ಬರ ಕಾಂಬಿನೇಷನ್‌ನಲ್ಲಿ ಮತ್ತೊಂದು ಸಿನಿಮಾ ಸೆಟ್ಟೇರಿದೆ. ಅದು “ವೇದ”. ಈ ಹಿಂದೆ ಶಿವರಾಜಕುಮಾರ್‌ ಅವರೊಂದಿಗೆ ಹರ್ಷ “ವಜ್ರಕಾಯ” ಸಿನಿಮಾ ಮಾಡಿದರು. ಅದಾದ ಬಳಿಕ, “ಭಜರಂಗಿ” ಮಾಡಿದರು. ಆ ನಂತರ ಪುನಃ “ಭಜರಂಗಿ 2” ಚಿತ್ರ ಮಾಡಿದರು ಈ ಸಿನಿಮಾಗಳ ಯಶಸ್ಸಿನ ಬಳಿಕ ಈಗ “ವೇದ” ಸಿನಿಮಾ ಕೈಗೆತ್ತಿಕೊಂಡಿದ್ದಾರೆ.

ಹೌದು, ಶಿವರಾಜಕುಮಾರ್‌ ಅವರೊಂದಿಗೆ ನಿರ್ದೇಶಕ ಎ.ಹರ್ಷ ಪುನಃ, ಸಿನಿಮಾ ಮಾಡುತ್ತಿದ್ದಾರೆ. ಆ ಚಿತ್ರಕ್ಕೆ “ವೇದ” ಎಂದು ನಾಮಕರಣ ಮಾಡಿದ್ದು, ಈಗಾಗಲೇ ಚಿತ್ರಕ್ಕೆ ಚಾಲನೆಯೂ ಸಿಕ್ಕಿದೆ. ಇದು ಶಿವರಾಜಕುಮಾರ್‌ ಅವರ 125ನೇ ಚಿತ್ರ. 125ನೇ ಸಿನಿಮಾವನ್ನು ಗೀತ ಶಿವರಾಜಕುಮಾರ್‌ ಅವರು ನಿರ್ಮಾಣ ಮಾಡುತ್ತಿದ್ದಾರೆ ಅನ್ನೋದು ವಿಶೇಷ. ಯಾವುದೇ ಹೀರೋಗೆ ಮೊದಲ ಚಿತ್ರ, 25ನೇ ಸಿನಿಮಾ, 50 ನೇ ಚಿತ್ರ, 75ನೇ ಸಿನಿಮಾ ಮತ್ತು 100ನೇ ಚಿತ್ರಗಳು ಮೈಲಿಗಲ್ಲು. ಅಂತೆಯೇ ಶಿವರಾಜಕುಮಾರ್‌ ಅವರ 125ನೇ ಸಿನಿಮಾ “ವೇದ” ಕೂಡ ವಿಶೇಷತೆ ಹೊಂದಿದೆ. ಈ ಚಿತ್ರದ ಕಥೆ ಬಗ್ಗೆ ಹೇಳುವುದಾದರೆ, ಇದೊಂದು ಹಳ್ಳಿ ಹಿನ್ನೆಲೆಯಲ್ಲಿ ಸಾಗುವ ಚಂದದ ಕಥೆಯಂತೆ. ಈ ಚಿತ್ರದಲ್ಲಿ ಶಿವರಾಜಕುಮಾರ್‌ ಅವರ ಪಾತ್ರದ ಹೆಸರು ವೇದ. ಅಂದಹಾಗೆ, 1960 ರ ಕಾಲಘಟ್ಟದಲ್ಲಿ ನಡೆಯುವ ಕಥೆ ಈ ಚಿತ್ರದಲ್ಲಿದೆ. ಚಿತ್ರದ ಮುಹೂರ್ತ ನಡೆದು, ಈಗಾಗಲೇ ಚಿತ್ರೀಕರಣವೂ ಜೋರಾಗಿ ನಡೆಯುತ್ತಿದೆ. ಇನನು ಶಿವರಾಜಕುಮಾರ್‌ ಫಸ್ಟ್‌ಲುಕ್‌ ಟೀಸರ್‌ ಕೂಡ ರಿಲೀಸ್‌ ಆಗಿದೆ. ಶಿವರಾಜಕುಮಾರ್‌ ಇದೇ ಮೊದಲ ಬಾರಿಗೆ ವಯಸ್ಸಾದವರ ಪಾತ್ರ ನಿರ್ವಹಿಸುತ್ತಿದ್ದಾರೆ. ಈ ರೀತಿಯ ಪಾತ್ರ ನಿರ್ವಹಣೆ ಇದೇ ಮೊದಲೂ ಎಂಬುದು ನಿರ್ದೇಶಕರ ಮಾತು.

ಇದೊಂದು ಫ್ಯಾಂಟಸಿ ಕಥೆ ಹೊಂದಿರುವ ಚಿತ್ರ. ಹಳ್ಳಿಯೊಂದರ ಸುತ್ತಮುತ್ತ ನಡೆಯುವ, ಅಲ್ಲಿರುವ ಒಬ್ಬ ವ್ಯಕ್ತಿಯ ಹಿನ್ನೆಲೆಯಲ್ಲಿ ಸಾಗುವ ಕಥೆ ಹೇಳುವ ಪ್ರಯತ್ನವನ್ನು ಎ.ಹರ್ಷ ಮಾಡುತ್ತಿದ್ದಾರೆ. ದಶಕಗಳ ಹಿಂದಿನ ರಿಯಲಿಸ್ಟಿಕ್‌ ಕಥೆ ಇದಾಗಿದ್ದು, ಆ ಹಳ್ಳಿಯಲ್ಲಿರುವ ಒಬ್ಬ ವ್ಯಕ್ತಿಯ ಜೀವನದಲ್ಲಿ ಏನೇನೆಲ್ಲ ನಡೆಯುತ್ತೆ ಎನ್ನುವುದು ಸಿನಿಮಾದಲ್ಲಿದೆ. ಚಿತ್ರದಲ್ಲಿ ಎಮೋಷನಲ್‌, ಆಕ್ಷನ್‌, ಡ್ರಾಮಾ ಇದೆ. ಇದರೊಂದಿಗೆ ಹಾಸ್ಯವೂ ಇಲ್ಲಿ ಜೋರಾಗಿದೆ. ಶಿವರಾಜಕುಮಾರ್‌ ಅವರದು ಇಲ್ಲಿ ಖಡಕ್‌ ಲುಕ್‌ ಇರಲಿದೆ. ಹೇಗೆಂದರೆ, ಈವರೆಗೆ ಕಾಣಿಸಿಕೊಳ್ಳದೇ ಇರುವಂತಹ ಖಡಕ್‌ ಲುಕ್‌ ಇಲ್ಲಿರಲಿದೆ ಎಂಬುದು ನಿರ್ದೇಶಕರ ಮಾತು. ಶಿವಣ್ಣ ಅವರಿಲ್ಲಿ ಎರಡು ಶೇಡ್‌ ಇರುವಂತಹ ಪಾತ್ರ ನಿಭಾಯಿಸುತ್ತಿದ್ದಾರೆ. ಆ ಪಾತ್ರ ಹೇಗಿರಲಿದೆ ಅನ್ನುವುದಕ್ಕೆ ಸಿನಿಮಾ ಬರುವವರೆಗೆ ಕಾಯಬೇಕು. ಇನ್ನು, ಚಿತ್ರದುದ್ದಕ್ಕೂ ಥ್ರಿಲ್ಲಿಂಗ್‌ ಆಂಶಗಳು ತುಂಬಿವೆ ಎನ್ನುವ ನಿರ್ದೇಶಕರು, ಈ ಬಾರಿ ಬೇರೆ ರೀತಿಯ ಸಿನಿಮಾ ಕಟ್ಟಿಕೊಡುವ ಪ್ರಯತ್ನದಲ್ಲಿದ್ದೇನೆ ಎಂಬುದು ಎ.ಹರ್ಷ ಅವರ ಮಾತು.

ಶಿವರಾಜಕುಮಾರ್‌ ಅವರ ಚಿತ್ರ ಅಂದಮೇಲೆ, ಅದರಲ್ಲೂ ಅದು 125ನೇ ಸಿನಿಮಾ ಆಗಿರುವುದರಿಂದ, ಅದು ಎಲ್ಲಾ ವರ್ಗಕ್ಕೂ ರುಚಿಸಬೇಕು. ಎಲ್ಲರನ್ನೂ ಮೆಚ್ಚಿಸಬೇಕು. ಅಂತಹ ಕಂಟೆಂಟ್‌ ಇಟ್ಟುಕೊಂಡೇ ಸಿನಿಮಾ ಮಾಡಲು ಹೊರಟಿದ್ದೇನೆ. ಪಕ್ಕಾ ಕಮರ್ಷಿಯಲ್‌ ಸಿನಿಮಾ ಇದಾಗಿದ್ದು, ಈ ಹಿಂದಿನ ಕಮರ್ಷಿಯಲ್‌ ಸಿನಿಮಾಗಳಂತೆ ಈ ಸಿನಿಮಾ ಕೂಡ ದೊಡ್ಡ ಮಟ್ಟದಲ್ಲೇ ತಯಾರಾಗಲಿದೆ. ಶಿವಣ್ಣ ಕಥೆಯ ಎಳೆ ಕೇಳುತ್ತಿದ್ದಂತೆಯೇ ಇಷ್ಟಪಟ್ಟು, ಮಾಡಲು ಮುಂದಾದರು.

ಗೀತಕ್ಕ ಕೂಡ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಆ ಕಾಲಘಟ್ಟದ ಕಥೆ ಆಗಿರುವುದರಿಂದ ಬೆಂಗಳೂರಲ್ಲೇ ಸೆಟ್‌ ಹಾಕಿ ಸಿನಿಮಾದ ಚಿತ್ರೀಕರಣ ಮಾಡಲಾಗುವುದು ಎನ್ನುತ್ತಾರೆ ನಿರ್ದೇಶಕರು. ಸದ್ಯ 16 ದಿನಗಳ ಮೊದಲ ಹಂತದ ಚಿತ್ರೀಕರಣ ನಡೆಯುತ್ತಿದೆ. ಚಿತ್ರಕ್ಕೆ ರವಿ ಸಂತೆ ಹೈಕ್ಳು ಕಲಾ ನಿರ್ದೇಶನವಿದೆ. ಸ್ವಾಮಿ ಜೆ, ಕ್ಯಾಮೆರಾ ಹಿಡಿದರೆ, ಅರ್ಜುನ್‌ ಜನ್ಯ ಸಂಗೀತವಿದೆ. ಕೆ.ಕಲ್ಯಾಣ್‌, ನಾಗೇಂದ್ರ ಪ್ರಸಾದ್‌ ಗೀತೆಗಳಿವೆ.

Categories
ಸಿನಿ ಸುದ್ದಿ

ಸೆಟ್ಟೇರಿತು ಬಂಧನ-2 ! ದಾದಾ ‘ಬಂಧನ’ ಮಹೂರ್ತ ನಡೆದಿದ್ದ ಸ್ಥಳದಲ್ಲೇ ಬಂಧನ-2 ಆರಂಭ !

'ಬಂಧನ'ಅದ್ಬುತ ಅಮರ ಪ್ರೇಮ ಕಾವ್ಯ.ಕನ್ನಡ ಸಿನಿಮಾ ಪ್ರೇಕ್ಷಕರು ಯಾವತ್ತಿಗೂ ಮರೆಯದ ಮಾಣಿಕ್ಯದಂತಹ ಸಿನಿಮಾ.ಈ ಚಿತ್ರ ಬಂದು ಹೋಗಿ 37 ವರ್ಷಗಳು ಕಳೆದಿವೆ.ಆದರೆ,‘ಬಂಧನ’ ದ ಜೊತೆಗೆ ಬೆರೆತು ಹೋಗಿರುವ ಚಿತ್ರ ಪ್ರೇಮಿಗಳ ಅನುಬಂಧವಿದೆಯಲ್ಲ ಅದು ಯಾವತ್ತಿಗೂ ಅಜರಾಮರ. ಬೆಳ್ಳಿತೆರೆ ಮಾತ್ರವಲ್ಲ ಟಿವಿ ಪರದೆಯನ್ನೂ ಬೆಳಗುತ್ತಾ ಪ್ರೇಮಿಗಳನ್ನು ಸದಾ ಕಾಡುವಂತಹ ಸಿನಿಮಾ ದಾದಾ ಅಭಿನಯದ ಎವರ್‌ಗ್ರೀನ್ ಬಂಧನ.ಅಷ್ಟಕ್ಕೂ,ನಾವ್ ಇವತ್ತು ಬಂಧನದ ಬಗ್ಗೆ ಮಾತನಾಡಲಿಕ್ಕೆ ಕಾರಣ ಬಂಧನ-2′ ಚಿತ್ರ ಸೆಟ್ಟೇರಿದೆ. ಬಂಧನ ನಿರ್ದೇಶಿಸಿದ್ದ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಅವರೇ ಸೀಕ್ವೆಲ್ ನಿರ್ದೇಶನ ಮಾಡ್ತಿದ್ದಾರೆ. ಅಚ್ಚರಿ ಅಂದರೆ,37 ವರ್ಷಗಳ ಹಿಂದೆ ದಾದ ಬಂಧನ ಚಿತ್ರ ಸೆಟ್ಟೇರಿದ್ದ ಸ್ಥಳದಲ್ಲೇ `ಬಂಧನ-2′ ಚಿತ್ರಕ್ಕೆ ಚಾಲನೆ ಕೊಡಲಾಗಿದೆ

ಅಶೋಕ್ ಹೋಟೆಲ್ ವಿಷ್ಣುದಾದರ ನೆಚ್ಚಿನ ತಾಣ.ಬಿಡುವಿದ್ದಾಗ ಹೆಚ್ಚು ಕಾಲ ಈ ಹೋಟೆಲ್‌ನಲ್ಲಿ ಕಾಲ ಕಳೆಯುತ್ತಿದ್ದರು.ಸ್ನೇಹಿತರ ಜೊತೆ ಕ್ವಾಲಿಟಿ ಟೈಮ್‌ನ ಸ್ಪೆಂಡ್ ಮಾಡುತ್ತಿದ್ದ ದಾದ,ಸ್ವಿಮ್ಮಿಂಗ್ ಮಾಡಿ-ಟೆನ್ನಿಸ್ ಆಡಿ ಮೈಂಡ್ ಫ್ರೀ ಮಾಡಿಕೊಳ್ತಿದ್ದರು.ಇದೇ ಹೋಟೆಲ್‌ನಲ್ಲಿ 37 ವರ್ಷಗಳ ಹಿಂದೆ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ-ಸಾಹಸಸಿಂಹ ವಿಷ್ಣುವರ್ಧನ್ ಅಭಿನಯದ ‘ಬಂಧನ’ ಸಿನಿಮಾ ಮುಹೂರ್ತ ನೆರವೇರಿತ್ತು. ಇಂದು ಅದೇ ಜಾಗದಲ್ಲಿ ದಾದಾ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಬಂಧನ-2 ಮುಹೂರ್ತ ಮಾಡಿದ್ದಾರೆ. ‘ಬಂಧನ’ ದಲ್ಲಿ ಯಜಮಾನರಿಗೆ ಜೊತೆಯಾಗಿದ್ದ ಸುಹಾಸಿನಿ ಮೇಡಂ `ಬಂಧನ-2 ‘ ಟೀಮ್ ಸೇರಿಕೊಂಡಿದ್ದಾರೆ. ಹೀಗಾಗಿ, ಫ್ಲೈಟ್ ಏರಿ ಬೆಂಗಳೂರಿಗೆ ಬಂದಿದ್ದರು. ಮುಹೂರ್ತ ಕಾರ್ಯಕ್ರಮದಲ್ಲಿ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು-ಜೈ ಜಗದೀಶ್-ಭಾರತಿ ವಿಷ್ಣುವರ್ಧನ್-ವಿಜಯಲಕ್ಷ್ಮಿ ಸಿಂಗ್-ಆದಿತ್ಯ ಜೊತೆ ಪಾಲ್ಗೊಂಡಿದ್ದರು.

ಕನ್ನಡ ಸಿನಿಮಾ ಮಾಡಿ ತುಂಬಾ ವರ್ಷಗಳು ಕಳೀತು ಇದೀಗ ಮತ್ತೆ ಬಂದಿದ್ದೇನೆ. ಹೀಗೆ ಮಾತು ಶುರುಮಾಡಿದ ಹಿರಿಯ ನಟಿ ಸುಹಾಸಿನಿ ಮಣಿರತ್ನಂ, ಮೊದಲು ವಿಷ್ಣುದಾದರನ್ನು ನೆನಪು ಮಾಡಿಕೊಂಡರು. ‘ಬಂಧನ'ಮಾಡುವಾಗ ಅಷ್ಟು ದೊಡ್ಡ ಸೂಪರ್‌ಸ್ಟಾರ್ ಆಗಿದ್ದರೂ ಕೂಡ ಕನ್ನಡಕ್ಕೆ ಹೊಸಬಳಾಗಿದ್ದ ನನಗೆ ತುಂಬಾ ಕೋ ಆಪರೇಟ್ ಮಾಡುತ್ತಿದ್ದರು ಹಾಗೇ ತಾಳ್ಮೆಯಿಂದ ಹೇಳಿಕೊಡುತ್ತಿದ್ದರು.ವಿಷ್ಣು ಅವ್ರಂಥ ಹೃದಯವಂತ ವ್ಯಕ್ತಿ ಮತ್ತೊಬ್ಬರು ಸಿಕ್ಕಲ್ಲ.ದಾದ ಬಗ್ಗೆ ಹೇಳೋದಕ್ಕೆ ಪದಗಳು ಸಾಕಾಗಲ್ಲ.‘ಬಂಧನ’ ಮಾಡುವಾಗಲೂ ನಾನು ಸ್ಟುಡೆಂಟ್, ಈಗಲೂ ನಾನು ಸ್ಟುಡೆಂಟ್. ಯಾಕಂದ್ರೆ ಸಿನಿಮಾದಲ್ಲಿ ಕಲಿಯೋದು ಇನ್ನೂ ತುಂಬಾ ಇದೆ ಎಂದೇಳಿ ದೊಡ್ಡತನ ತೋರಿಸಿದರು. ಬಂಧನ-2 ಪಾರ್ಟ್ನಲ್ಲಿ ಭಾಗಿಯಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

ಅಂದ್ಹಾಗೇ, ‘ಬಂಧನ-2'ಮೊದಲ ಭಾಗದ ಮುಂದುವರೆದ ಭಾಗವಾ? ಅಸಲಿ ಕಥೆ ಏನು? ಎಲ್ಲಿಂದ ಆರಂಭವಾಗುತ್ತೆ? ಕಥೆ ಹೇಗೆ ಸಾಗುತ್ತೆ? ಇದ್ಯಾವ ಪ್ರಶ್ನೆಗೂ ನಿರ್ದೇಶಕರು ಉತ್ತರ ಕೊಟ್ಟಿಲ್ಲ.ಸದ್ಯಕ್ಕೆ,ಎಲ್ಲವನ್ನೂ ಸಸ್ಪೆನ್ಸ್ ಆಗಿಯೇ ಇಟ್ಟಿರುವ ನಿರ್ದೇಶಕ ಸಿಂಗ್ ಬಾಬು ಅವರು ಬಂಧನ-2 ಚಿತ್ರದಲ್ಲೂ ಯಜಮಾನರನ್ನು ಜ್ಞಾನಪಿಸುತ್ತೇವೆ ಎನ್ನುವ ಭರವಸೆಯನ್ನು ಕೊಟ್ಟಿದ್ದಾರೆ. ಸಾಹಸಸಿಂಹ ವಿಷ್ಣುವರ್ಧನ್ ಅವರ ಸಕಲ ಅಭಿಮಾನಿಗಳು ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ ಸಂತೃಪ್ತಿಗೊಂಡು ಎದ್ದು ಹೋಗುವಂತಹ ಸಿನಿಮಾ ಕೊಡಬೇಕು ಎನ್ನುವ ನಿಟ್ಟಿನಲ್ಲಿ ‘ಬಂಧನ-2'ಚಿತ್ರಕ್ಕೆ ಕೆಲಸ ಮಾಡುತ್ತಿರುವುದಾಗಿ ಹೇಳಿದ್ದಾರೆ.ಮೊದಲ ಭಾಗದಲ್ಲಿದ್ದಂತೆ ಇಲ್ಲೂ ಕೂಡ ಅಮರ-ಮಧುರ-ಪ್ರೇಮಕಾವ್ಯವಿರುತ್ತೆ.ಜೊತೆಗೆ ಇಲ್ಲಿವರೆಗೂ ಯಾರೂ ನೋಡಿರದ ಆಕ್ಷನ್‌ವೊಂದನ್ನು ಬಿಗ್‌ಸ್ಕ್ರೀನ್ ‌ನಲ್ಲಿ ತೋರಿಸುವುದಾಗಿ ತಿಳಿಸಿದ್ದಾರೆ. ‘ಬಂಧನ’ ದಲ್ಲಿದ್ದ ಸುಹಾಸಿನಿ ಮಣಿರತ್ನಂ ಹಾಗೂ ಜೈ ಜಗದೀಶ್ `ಬಂಧನ-2′ ಚಿತ್ರದಲ್ಲಿಯೂ ಇರಲಿದ್ದಾರೆ.

ಅಶೋಕ್ ಹೋಟೆಲ್‌ನಲ್ಲಿ ‘ಬಂಧನ'ಸಿನಿಮಾಗೆ ಮುಹೂರ್ತ ನಡೆಯುವಾಗ ನಂದಿನಿ ಪಾತ್ರಧಾರಿ ಸುಹಾಸಿನಿ ಡಾ.ಹರೀಶ್ ಪಾತ್ರಧಾರಿ ದಾದಾಗೆ ಕಪಾಳಮೋಕ್ಷ ಮಾಡುವ ದೃಶ್ಯ ಫಸ್ಟ್ ಶಾಟ್ ಆಗಿತ್ತು. ಈ ದೃಶ್ಯವನ್ನು ಹಾಗೂ ಆಕ್ಷನ್ ಕಟ್ ಹೇಳುತ್ತಿದ್ದ ತಂದೆ ರಾಜೇಂದ್ರ ಸಿಂಗ್ ಬಾಬು ಅವರನ್ನು ಮೂಲೆಯಲ್ಲಿ ನಿಂತು ನೋಡುತ್ತಿದ್ದ ಅಂದಿನ ಆರು ವರ್ಷದ ಆದಿತ್ಯ ಇವತ್ತು ಬಂಧನ-2 ಚಿತ್ರಕ್ಕೆ ಹೀರೋ.

ಹೌದು,ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರು ‘ಬಂಧನ-2’ ಸಿನಿಮಾಗೆ ಮಗನನ್ನೇ ನಾಯಕನನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಮಗನ ಇಮೇಜ್‌ನ ಬದಲಾಯಿಸುವ ನಿಟ್ಟಿನಲ್ಲಿ ಈ ಪ್ರಯತ್ನಕ್ಕೆ ಕೈ ಹಾಕಿದ್ದಾರೋ- ಇಲ್ಲವೋ ಗೊತ್ತಿಲ್ಲ. ಆದರೆ, ಆಕ್ಷನ್ ಹೀರೋ ಆಗಿ ಧಗಧಗಿಸುತ್ತಿದ್ದ ದಾದಾರನ್ನು ‘ಬಂಧನ'ಚಿತ್ರದಲ್ಲಿ ಅಮರ ಪ್ರೇಮಿಯಾಗಿಸಿ ಇಮೇಜ್‌ನ ಬದಲಾಯಿಸಿದರು.ಇದ್ರಿಂದ ವಿಷ್ಣುವರ್ಧನ್ ಲವ್ವರ್‌ಬಾಯ್ ಆಗಿಯೂ ಯಶಸ್ಸನ್ನು ಕಂಡರು.ಅದೇ ರೀತಿ ಡೆಡ್ಲಿಸೋಮ ಆದಿತ್ಯರ ಇಮೇಜ್ ಕೂಡ ‘ಬಂಧನ-2’ ಚಿತ್ರದಿಂದ ಬದಲಾಗುತ್ತಾ? ಮಾಸ್ ಆಡಿಯನ್ಸ್ ಗೆ ಕನೆಕ್ಟ್ ಆಗಿರುವ ಆದಿತ್ಯ, ಲವ್ವರ್‌ಬಾಯ್ ಆಗಿ ಕ್ಲಿಕ್ ಆಗ್ತಾರಾ ಕುತೂಹಲದಿಂದ ಕಾದು ನೋಡಬೇಕು.

ಸದ್ಯಕ್ಕೆ ‘ಬಂಧನ-2'ಚಿತ್ರದ ಮುಹೂರ್ತ ನೆರವೇರಿದೆ.ಮಾರ್ಚ್ ತಿಂಗಳಿಂದ ಚಿತ್ರೀಕರಣಕ್ಕೆ ಹೊರಡುವ‌ ಪ್ಲ್ಯಾನ್ ಚಿತ್ರತಂಡಕ್ಕಿದೆ.ಹಿಸ್ಟಿರಿ ರಿಪೀಟ್ ಮಾಡಬೇಕು ಎನ್ನುವ ಹುರುಪು ಇಡೀ ಸಿನಿಮಾ ತಂಡಕ್ಕಿದ್ದು,ಅಂಗಡಿ ಶಾಂತಪ್ಪನವರ ಕೈಯಲ್ಲಿ ಕಥೆ ಬರೆಸುತ್ತಿದ್ದಾರೆ.ಚಕ್ರವರ್ತಿ ಚಿಂತನ್ ‘ಬಂಧನ-2’ ಗೆ ಸಂಭಾಷಣೆ ಬರೆಯುತ್ತಿದ್ದಾರೆ.

ಧರ್ಮವಿಶ್ ಸಂಗೀತ ಸಂಯೋಜನೆ ಮಾಡುತ್ತಿದ್ದು ಒಟ್ಟು ಆರು ಹಾಡುಗಳು ಚಿತ್ರದಲ್ಲಿವೆ. ಅಣಜಿ ನಾಗರಾಜ್ ಅವರ ಕ್ಯಾಮೆರಾ ಕೈಚಳಕ ಚಿತ್ರಕ್ಕಿದೆ. ತುಂಬಾ ವರ್ಷಗಳ ನಂತರ ಸಿನಿಮಾಟೋಗ್ರಫಿಗೆ ಮರಳಿರುವ ಅಣಜಿ ನಾಗರಾಜ್ ಅವರು `ಬಂಧನ-2′ ಗೆ ಬಂಡವಾಳ ಹೂಡುತ್ತಿದ್ದಾರೆ. ಸಿನಿಮಾವನ್ನು ಅದ್ದೂರಿಯಾಗಿ ತೆರೆ ಮೇಲೆ ತರಬೇಕು ಎನ್ನುವ ಕನಸು ಕಂಡಿದ್ದಾರೆ. ಸದ್ಯಕ್ಕಿಷ್ಟು ಮಾಹಿತಿ ಚಿತ್ರತಂಡ ಹಂಚಿಕೊಂಡಿದೆ. ತಾರಾಬಳಗ ಸೇರಿದಂತೆ ಇನ್ನಿತರ ಮಾಹಿತಿ ಮಾರ್ಚ್ ನಂತರವಷ್ಟೇ ಹೊರಬೀಳಲಿದೆ.

ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ವಿಐಪಿ’ಸ್ ಗೆ ಡಬ್ಬಲ್ ಟ್ರೀಟ್ ಕೊಡ್ತಾರಂತೆ ‘ಮಾರ್ಟಿನ್ ! ದ್ವಿಪಾತ್ರದಲ್ಲಿ ಧಗಧಗಿಸಲಿದ್ದಾರಂತೆ ಆಕ್ಷನ್ ಪ್ರಿನ್ಸ್ !?

ಅಭಿಮಾನಿ ದೇವರುಗಳನ್ನು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ವಿಐಪಿ ಗಳು‌ ಎಂದು ಕರೆಯೋದು‌ ನಿಮ್ಮೆಲ್ಲರಿಗೂ ಗೊತ್ತಿದೆ. ಇಂತಿಪ್ಪ ‌ವಿಐಪಿಗಳಿಗೆ ಬಹದ್ದೂರ್ ಗಂಡು ‘ ಮಾರ್ಟಿನ್’ ಚಿತ್ರದ ಮೂಲಕ ಡಬ್ಬಲ್ ಟ್ರೀಟ್ ಕೊಡುವುದಕ್ಕೆ ಹೊರಟಿದ್ದಾರೆ ಎನ್ನುವ ಸುದ್ದಿ ಸೋಷಿಯಲ್ ಜಗತ್ತಿನಲ್ಲಿ ಸಖತ್ ಸೌಂಡ್ ಮಾಡ್ತಿದೆ. ಅಷ್ಟಕ್ಕೂ, ಈ ಸುದ್ದಿ ನಿಜಾನೋ ಅಥವಾ ಸುಳ್ಳೋ ಗೊತ್ತಿಲ್ಲ ? ಆದರೆ, ಮಾರ್ಟಿನ್ ಮೂವೀಯಲ್ಲಿ ಆಕ್ಷನ್ ಪ್ರಿನ್ಸ್ ದ್ವಿಪಾತ್ರದಲ್ಲಿ ಧಗಧಗಿಸ್ತಾರೆ ಎನ್ನುವ ಸುದ್ದಿ ಮಾತ್ರ ಜೋರಾಗಿದೆ. ಬಜಾರ್ ನಲ್ಲಿ ಈ ಬಡಾಬ್ರೇಕಿಂಗ್ ನ್ಯೂಸ್ ಸೆನ್ಸೇಷನ್ ಸೃಷ್ಟಿ ಮಾಡ್ತಿರುವಾಗಲೇ ಸ್ವತಃ ಧ್ರುವ ಸರ್ಜಾ ಜಿಮ್ ನಲ್ಲಿ ಮೈ ಬೆವರಿಳಿಸ್ತಿರೋ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.

ಆಕ್ಷನ್ ಪ್ರಿನ್ಸ್ ಹಂಚಿಕೊಂಡಿರುವ ವಿಡಿಯೋ ನೋಡುಗರನ್ನು ದಂಗಾಗಿಸುತ್ತಿದೆ. ದೇಹ ದಂಡಿಸುವ ವಿಚಾರದಲ್ಲಿ ಮೇಲುಗೈ ಸಾಧಿಸುವ ಧ್ರುವ ಒನ್ಸ್ ಅಗೇನ್ ‘ ಮಾರ್ಟಿನ್’ ಚಿತ್ರಕ್ಕಾಗಿ ಭಾರೀ ವರ್ಕೌಟ್
ಮಾಡಿ ವಿಐಪಿಗಳನ್ನು ಮಾತ್ರವಲ್ಲ ಸಕಲರನ್ನೂ ದಿಗ್ ದಿಗ್ಭ್ರಾಂತರನ್ನಾಗಿ ಮಾಡುತ್ತಿದ್ದಾರೆ. ಅದ್ದೂರಿ ಹುಡುಗನ ಈ ಭರ್ಜರಿ ವರ್ಕೌಟ್ ನ ನೋಡಿದರೆ
ಡಬ್ಬಲ್ ಟ್ರೀಟ್ ಕೊಡಲಿಕ್ಕೋಸ್ಕರವೇ ಈ ರೀತಿಯಾಗಿ ದೇಹ ದಂಡಿಸುತ್ತಿದ್ದಾರೆ ಎನಿಸುತ್ತೆ.


ನಿಜಕ್ಕೂ ಡ್ಯುಯೆಲ್ ರೋಲ್ ನಲ್ಲಿ ಧ್ರುವ ಕಿಚ್ಚು ಹಚ್ಚುತ್ತಾರಾ!? ಈ ಕೂತೂಹಲದ ಪ್ರಶ್ನೆಗೆ ಚಿತ್ರತಂಡ ಉತ್ತರ ಕೊಡಬೇಕು. ಸದ್ಯಕ್ಕೆ, ಗೌಪ್ಯತೆ ಕಾಯ್ದುಕೊಂಡಿರುವ ಈ ನ್ಯೂಸ್ ಗೆ ಮುಂದಿನ‌ ದಿನಗಳಲ್ಲಿ ಸ್ಪಷ್ಟತೆ ಸಿಗಲಿದೆ. ಚಿತ್ರಕ್ಕೆ ಎ.ಪಿ ಅರ್ಜುನ್ ನಿರ್ದೇಶನವಿದ್ದು, ಉದಯ್. ‌ಕೆ.ಮೆಹ್ತಾ ಬಂಡವಾಳ ಹೂಡಿದ್ದಾರೆ.
ಆಕ್ಷನ್ ಪ್ರಿನ್ಸ್ ಗೆ ವೈಭವಿ ಶಾಂಡಿಲ್ಯ ಜೋಡಿಯಾಗಿದ್ದಾರೆ.
ಅತೀ ದೊಡ್ಡ ತಾರಾಬಳಗವೇ ಚಿತ್ರದಲ್ಲಿದ್ದು, ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಮಾರ್ಟಿನ್ ಮೂಡಿಬರುತ್ತಿದೆ.

ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ವಿಐಪಿ’ಸ್ ಗೆ ಡಬ್ಬಲ್ ಟ್ರೀಟ್ ಕೊಡ್ತಾರಂತೆ ‘ಮಾರ್ಟಿನ್ ! ದ್ವಿಪಾತ್ರದಲ್ಲಿ ಧಗಧಗಿಸಲಿದ್ದಾರಂತೆ ಆಕ್ಷನ್ ಪ್ರಿನ್ಸ್ !?

ಅಭಿಮಾನಿ ದೇವರುಗಳನ್ನು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ
ವಿಐಪಿ ಗಳು‌ ಎಂದು ಕರೆಯೋದು‌ ನಿಮ್ಮೆಲ್ಲರಿಗೂ ಗೊತ್ತಿದೆ. ಇಂತಿಪ್ಪ ‌ವಿಐಪಿಗಳಿಗೆ ಬಹದ್ದೂರ್ ಗಂಡು ‘ ಮಾರ್ಟಿನ್’ ಚಿತ್ರದ ಮೂಲಕ ಡಬ್ಬಲ್ ಟ್ರೀಟ್ ಕೊಡುವುದಕ್ಕೆ ಹೊರಟಿದ್ದಾರೆ ಎನ್ನುವ ಸುದ್ದಿ ಸೋಷಿಯಲ್ ಜಗತ್ತಿನಲ್ಲಿ ಸಖತ್ ಸೌಂಡ್ ಮಾಡ್ತಿದೆ. ಅಷ್ಟಕ್ಕೂ, ಈ ಸುದ್ದಿ ನಿಜಾನೋ ಅಥವಾ ಸುಳ್ಳೋ ಗೊತ್ತಿಲ್ಲ ? ಆದರೆ, ಮಾರ್ಟಿನ್ ಮೂವೀಯಲ್ಲಿ ಆಕ್ಷನ್ ಪ್ರಿನ್ಸ್ ದ್ವಿಪಾತ್ರದಲ್ಲಿ ಧಗಧಗಿಸ್ತಾರೆ ಎನ್ನುವ ಸುದ್ದಿ ಮಾತ್ರ ಜೋರಾಗಿದೆ. ಬಜಾರ್ ನಲ್ಲಿ ಈ ಬಡಾಬ್ರೇಕಿಂಗ್ ನ್ಯೂಸ್ ಸೆನ್ಸೇಷನ್ ಸೃಷ್ಟಿ ಮಾಡ್ತಿರುವಾಗಲೇ ಸ್ವತಃ ಧ್ರುವ ಸರ್ಜಾ ಜಿಮ್ ನಲ್ಲಿ ಮೈ ಬೆವರಿಳಿಸ್ತಿರೋ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.

ಆಕ್ಷನ್ ಪ್ರಿನ್ಸ್ ಹಂಚಿಕೊಂಡಿರುವ ವಿಡಿಯೋ ನೋಡುಗರನ್ನು ದಂಗಾಗಿಸುತ್ತಿದೆ. ದೇಹ ದಂಡಿಸುವ ವಿಚಾರದಲ್ಲಿ ಮೇಲುಗೈ ಸಾಧಿಸುವ ಧ್ರುವ ಒನ್ಸ್ ಅಗೇನ್ ‘ ಮಾರ್ಟಿನ್’ ಚಿತ್ರಕ್ಕಾಗಿ ಭಾರೀ ವರ್ಕೌಟ್
ಮಾಡಿ ವಿಐಪಿಗಳನ್ನು ಮಾತ್ರವಲ್ಲ ಸಕಲರನ್ನೂ ದಿಗ್ ದಿಗ್ಭ್ರಾಂತರನ್ನಾಗಿ ಮಾಡುತ್ತಿದ್ದಾರೆ. ಅದ್ದೂರಿ ಹುಡುಗನ ಈ ಭರ್ಜರಿ ವರ್ಕೌಟ್ ನ ನೋಡಿದರೆ
ಡಬ್ಬಲ್ ಟ್ರೀಟ್ ಕೊಡಲಿಕ್ಕೋಸ್ಕರವೇ ಈ ರೀತಿಯಾಗಿ ದೇಹ ದಂಡಿಸುತ್ತಿದ್ದಾರೆ ಎನಿಸುತ್ತೆ.


ನಿಜಕ್ಕೂ ಡ್ಯುಯೆಲ್ ರೋಲ್ ನಲ್ಲಿ ಧ್ರುವ ಕಿಚ್ಚು ಹಚ್ಚುತ್ತಾರಾ!? ಈ ಕೂತೂಹಲದ ಪ್ರಶ್ನೆಗೆ ಚಿತ್ರತಂಡ ಉತ್ತರ ಕೊಡಬೇಕು. ಸದ್ಯಕ್ಕೆ, ಗೌಪ್ಯತೆ ಕಾಯ್ದುಕೊಂಡಿರುವ ಈ ನ್ಯೂಸ್ ಗೆ ಮುಂದಿನ‌ ದಿನಗಳಲ್ಲಿ ಸ್ಪಷ್ಟತೆ ಸಿಗಲಿದೆ. ಚಿತ್ರಕ್ಕೆ ಎ.ಪಿ ಅರ್ಜುನ್ ನಿರ್ದೇಶನವಿದ್ದು, ಉದಯ್. ‌ಕೆ.ಮೆಹ್ತಾ ಬಂಡವಾಳ ಹೂಡಿದ್ದಾರೆ.
ಆಕ್ಷನ್ ಪ್ರಿನ್ಸ್ ಗೆ ವೈಭವಿ ಶಾಂಡಿಲ್ಯ ಜೋಡಿಯಾಗಿದ್ದಾರೆ.
ಅತೀ ದೊಡ್ಡ ತಾರಾಬಳಗವೇ ಚಿತ್ರದಲ್ಲಿದ್ದು, ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಮಾರ್ಟಿನ್ ಮೂಡಿಬರುತ್ತಿದೆ.

ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಹ್ಯಾಟ್ರಿಕ್ ಹೀರೋ ಪಕ್ಕ ನಿಂತಳು ಮಗಳು ಜಾನಕಿ – ಶಿವಣ್ಣನ 125ನೇ ಚಿತ್ರಕ್ಕೆ ಗಾನವಿ ನಾಯಕಿ !

ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ ಪಕ್ಕದಲ್ಲಿ ನಿಲ್ಲುವ ಅವಕಾಶ ಮತ್ತು ಶಿವಣ್ಣನ ಜೊತೆಯಾಗಿ ಬೆಳ್ಳಿತೆರೆ ಮೇಲೆ ದಿಬ್ಬಣ ಹೊರಡುವ ಅದೃಷ್ಟ ಸರಿಸುಮಾರು 124 ಜನ ನಾಯಕಿಯರಿಗೆ ಸಿಕ್ಕಿದೆ. ಇದೀಗ 125ನೇ ನಟಿಮಣಿಯ ಸರದಿ. ಕರುನಾಡ ಕಿಂಗ್ ಶಿವರಾಜ್‌ಕುಮಾರ್ ಅಭಿನಯದ `125’ನೇ ಚಿತ್ರಕ್ಕೆ ನಾಯಕಿಯಾಗಿ ಸೆಂಚುರಿಸ್ಟಾರ್ ಜೊತೆ ಬಿಗ್‌ಸ್ಕ್ರೀನ್‌ನಲ್ಲಿ ಮೆರವಣಿಗೆ ಹೊರಡುವ ಲಕ್ಕಿ ಚಾನ್ಸ್ ಈ ಸಲ ಮಗಳು ಜಾನಕಿಗೆ ಸಿಕ್ಕಿದೆ….

ಮಗಳು ಜಾನಕಿ' ಯಾರು ಅಂತ ನಮ್ಮ ಕರುನಾಡ ಮಂದಿಗೆ ಹೊಸದಾಗಿ ಹೇಳಬೇಕಿಲ್ಲ. ಅದರಲ್ಲೂ ಸೀರಿಯಲ್ ಪ್ರಿಯರಿಗೆ ಮಗಳು ಜಾನಕಿ’ಯನ್ನು ಇಂಟ್ರುಡ್ಯೂಸ್ ಮಾಡಿಕೊಡಬೇಕಾಗಿಲ್ಲ. ಯಾಕಂದ್ರೆ, ದಿನಪ್ರತಿ ಅವರವರ ಮನೆಯ ಟಿವಿ ಪರದೆಯ ಮೇಲೆ ಮಗಳು ಜಾನಕಿ'ಯನ್ನು ಕಣ್ತುಂಬಿಕೊಂಡಿರ‍್ತಾರೆ. ವಕೀಲೆಯಾಗಿ ವಾದ ಮಾಡೋದನ್ನು ನೋಡಿ ಭೇಷ್‌ಗಿರಿ ಕೊಟ್ಟರ‍್ತಾರೆ. ಆದರೆ, ಸಿನಿಮಾ ಪ್ರಿಯರಿಗೆ ಮಗಳು ಜಾನಕಿ’ ಪರಿಚಯ ಅಷ್ಟಾಗಿರಲ್ಲ ಹೀಗಾಗಿ, ಶಿವಣ್ಣನ ಸಿನಿಮಾಗೆ ಆಯ್ಕೆಯಾಗಿರುವ ವಿಚಾರವನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.

ಕಿರುತೆರೆ'ಯಲ್ಲಿ ಕಾಣಿಸಿಕೊಂಡು ಕರುನಾಡಿನ ಮನೆಮಾತಾಗಿರುವ ಮಗಳು ಜಾನಕಿ’ ಸೀರಿಯಲ್ ಪಾತ್ರಧಾರಿ ಗಾನವಿ ಲಕ್ಷ್ಮಣ್ ಗೆ ಬೆಳ್ಳಿತೆರೆಯಲ್ಲಿ ಮಿಂಚುವ ಅವಕಾಶಗಳು ಸಿಗುತ್ತಿವೆ.
ನಿರ್ದೇಶಕ ಕಮ್ ನಟ ರಿಷಬ್ ಶೆಟ್ಟಿ ನಟನೆಯ ಹೀರೋ' ಚಿತ್ರಕ್ಕೆ ನಾಯಕಿಯಾಗಿರುವ ಗಾನವಿ, ಈಗ ಶಿವರಾಜ್‌ಕುಮಾರ್ ಅಭಿನಯದ ಬಹುನಿರೀಕ್ಷೆಯ ಸಿನಿಮಾಗೆ ಹೀರೋಯಿನ್ನಾಗಿದ್ದಾರೆ. ಶಿವಣ್ಣನ ವೃತ್ತಿ ಬದುಕಿನ ಮೈಲ್‌ಸ್ಟೋನ್ ಸಿನಿಮಾ ಆಗಲಿರುವ 125ನೇ `ವೇದ’ ಚಿತ್ರದಲ್ಲಿ ಅವಕಾಶ ಸಿಕ್ಕಿದ್ದು ಗಾನವಿ ಅದೃಷ್ಟ ಅಂದರೆ ಬಹುಶಃ ತಪ್ಪಾಗಲಿಕ್ಕಿಲ್ಲ.

ಅಂದ್ಹಾಗೇ, ‘ವೇದ ‘ ಹ್ಯಾಟ್ರಿಕ್ ಕಾಂಬಿನೇಷನ್‌ ನಲ್ಲಿ ಬರ್ತಿರೋ ನಾಲ್ಕನೇ ಸಿನಿಮಾ. ನಿರ್ದೇಶಕ. ಎ ಹರ್ಷ ಹಾಗೂ ಶಿವರಾಜ್ ಕುಮಾರ್ ನಾಲ್ಕನೇ ಸಲ ಒಂದಾಗಿದ್ದಾರೆ. ವಜ್ರಕಾಯ, ಭಜರಂಗಿ ಹಾಗೂ ಭಜರಂಗಿ 2 ಚಿತ್ರದ ನಂತರ ‘ ವೇದ’ ಸಿನಿಮಾದ ಮೂಲಕ ಹ್ಯಾಟ್ರಿಕ್ ಜೋಡಿ ಮತ್ತೆ ಜೊತೆಯಾಗಿದೆ. ಈ ಡೆಡ್ಲಿ ಕಾಂಬೋಗೆ ಶಿವರಾಜ್ ಕುಮಾರ್ ಪತ್ನಿ ಗೀತಕ್ಕ ಬಂಡವಾಳ ಹೂಡಿದ್ದಾರೆ.


ಅರ್ಜುನ್ ಜನ್ಯಾ ಮ್ಯೂಸಿಕ್ ಕಂಪೋಸಿಷನ್ ಚಿತ್ರಕ್ಕಿದ್ದು, ಶೋ ಮಸ್ಟ್ ಗೋ ಆನ್ ಎನ್ನುವಂತೆ ಅಪ್ಪು ಅಗಲಿಕೆಯ ನೋವುನ್ನು ನುಂಗಿಕೊಂಡು ಸಿನಿಮಾಗೆ ಮರಳಬೇಕಿದೆ ಶಿವಣ್ಣ. ಸಹೋದರನ ಸಿನಿಮಾ ಪ್ರೀತಿಯನ್ನು ಕಣ್ಮುಂದೆ ತಂದುಕೊಂಡು ಶಿವಣ್ಣ ಕ್ಯಾಮರಾ ಎದುರಿಸಬೇಕಿದೆ. ಗೀತಾ ಪಿಕ್ಚರ್ ಬ್ಯಾನರ್ ಅಡಿಯ ಚೊಚ್ಚಲ ಚಿತ್ರ ಇದಾಗಿದ್ದು, ಅದ್ದೂರಿಯಾಗಿ ನಿರ್ಮಾಣ ಮಾಡುವ ಕನಸು ಗೀತಕ್ಕ ಅವ್ರದ್ದು.

ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಸೌತ್-ನಾರ್ತ್ ಮಾತ್ರವಲ್ಲ, ಇಡೀ ಜಗತ್ತಿಗೆ ಹೀರೋ ಇವ್ರು ; ಮುಂದಿನ ವರ್ಷ ಫೆಬ್ರವರಿ 24ಕ್ಕೆ ವರ್ಲ್ಡ್ ವೈಡ್ ಗೆ ಗೊತ್ತಾಗುತ್ತೆ ಗುರು !

ಸಿನಿಮಾ ಜಗತ್ತಿನಲ್ಲಿ ಸಾವಿರಾರು ಹೀರೋಗಳಿದ್ದಾರೆ. ಮೂವೀ ಎನ್ನುವ ಮಾಯ ಲೋಕದಲ್ಲಿ ಸ್ಟಾರ್ ಪಟ್ಟಕ್ಕೇರಿ ರಾರಾಜಿಸುತ್ತಿದ್ದಾರೆ. ಬಣ್ಣದ ಲೋಕದಲ್ಲಿ ಸ್ವಂತ ಬ್ರ್ಯಾಂಡ್ ಕಟ್ಟಿ ಅಭಿಮಾನಿ ದೇವರುಗಳನ್ನು ಸಂಪಾದನೆ ಮಾಡಿ ಸಿನಿಮಾ ಸಾಮ್ರಾಜ್ಯದಲ್ಲಿ ಅಧಿಪತಿಗಳಾಗಿ ಮೆರೆಯುತ್ತಿದ್ದಾರೆ. ಇವರುಗಳ ಪೈಕಿ ಕೆಲವರು ಬಾರ್ಡರ್ ಹಾಕಿಕೊಂಡಿದ್ದಾರೆ. ಇನ್ನೂ ಕೆಲವರು ಬಾರ್ಡರ್ ಕ್ರಾಸ್ ಮಾಡಿದ್ದಾರೆ. ಆದರೆ, ಈ ಎರಡು ಕ್ಯಾಟಗರಿಯ ಸ್ಟಾರ್ಸ್ ಗಳಿಗೆ ಬಾರ್ಡರ್ ಆಚೆ ಫ್ಯಾನ್ಸ್ ಇದ್ದಾರೆ ಅನ್ನೋದು ಮಾತ್ರ ಸತ್ಯ. ಅಷ್ಟಕ್ಕೂ, ನಾವ್ ಈಗ ನಿಮಗೆ ಹೇಳೋದಕ್ಕೆ ಹೊರಟಿರುವುದು ಹೊಸ ಹೀರೋ ಬಗ್ಗೆ. ಅಲ್ಲಾರೀ, ವಾರಕ್ಕೊಬ್ಬರು ಹೊಸ ಹೀರೋ ಮಾಯಲೋಕಕ್ಕೆ ಪರಿಚಯವಾಗ್ತಾರೆ. ಅಷ್ಟಕ್ಕೆ ಇಷ್ಟು ಬಿಲ್ಡಪ್ಪಾ ಅಂತ ಗೊಣಗಬೇಡಿ. ಯಾಕಂದ್ರೆ ಇಡೀ ಜಗತ್ತಿಗೆ ಸಿಗಲಿರುವ ಹೊಸ ಹೀರೋ ಬಗ್ಗೆ ನಿಮಗೆ ಹೇಳ ಬಯಸಿದ್ದೇವೆ…

ಹೌದು,24-02-2022 ರಂದು ಇಡೀ ವಿಶ್ವಕ್ಕೆ ಹೊಸ ಹೀರೋ ಸಿಗುತ್ತಿದ್ದಾರೆ. ಹಾಗಾದ್ರೆ ಯಾರವರು ? ಯಾವ ಸಿನಿಮಾದ ಮೂಲಕ ಹೀರೋ ಆಗುತ್ತಿದ್ದಾರೆ? ಇಡೀ ಜಗತ್ತಿಗೆ ಹೀರೋ ಆಗೋದು ಅಂದ್ರೆ ಆ ನಾಯಕ ಹೆಂಗಿರಬಹುದು? ಆ ನಟನ ಹಿನ್ನಲೆ ಏನು ? ಹೀಗೆ ಒಂದಿಷ್ಟು ಪ್ರಶ್ನೆಗಳು ಉದ್ಭವಿಸೋದು ಸಹಜ. ಈ ಎಲ್ಲಾ ಪ್ರಶ್ನೆಗೆ ಉತ್ತರ ಕೊಡಬೇಕು ಅಂದರೆ ಸ್ಯಾಂಡಲ್ ವುಡ್ ಬಾದ್ ಷಾ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಹೆಸರನ್ನು ಹೇಳಲೆಬೇಕು. ಹಾಗೆಯೇ, ವಿಕ್ರಾಂತ್ ರೋಣ ಚಿತ್ರದ ಬಗ್ಗೆ ಮಾತನಾಡಲೇಬೇಕು‌.

‘ವಿಕ್ರಾಂತ್ ರೋಣ ‘ ಕಿಚ್ಚ ಸುದೀಪ್ ನಟನೆಯ ಬಹು ನಿರೀಕ್ಷಿತ ಚಿತ್ರ.
ಅನುಪ್ ಭಂಡಾರಿ ನಿರ್ದೇಶನದ- ಜಾಕ್ ಮಂಜು ನಿರ್ಮಾಣದ ಈ‌ ಚಿತ್ರಕ್ಕಾಗಿ ಪ್ಯಾನ್ ಇಂಡಿಯಾನೇ ಎದುರು ನೋಡ್ತಿದೆ. 3ಡಿ ಟೆಕ್ನಾಲಜಿಯಲ್ಲಿ ಅದ್ದೂರಿಯಾಗಿ ತಯ್ಯಾರಾಗಿರೋ ವಿಕ್ರಾಂತ್ ರೋಣನಿಗಾಗಿ ಬಾದ್ ಷಾ ಫ್ಯಾನ್ಸ್ ಮಾತ್ರವಲ್ಲ ಬೆಳ್ಳಿತೆರೆಯೂ ಕೂತೂಹಲ ವ್ಯಕ್ತಪಡಿಸುತ್ತಿದೆ. ಹೀಗಾಗಿ ಚಿತ್ರತಂಡ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ.
2022 ಫೆಬ್ರವರಿ 24 ರಂದು ವಿಕ್ರಾಂತ್ ರೋಣ ಚಿತ್ರ ಬಹುಭಾಷೆಯಲ್ಲಿ ಏಕಕಾಲಕ್ಕೆ ಬಿಡುಗಡೆಯಾಗ್ತಿದೆ. ಈ ಬಡಾ ಖಬರ್ ನ ರಿವೀಲ್ ಮಾಡಿದ ಫಿಲ್ಮ್ ಟೀಮ್
ಇಡೀ ಜಗತ್ತಿಗೆ ಹೊಸ ಹೀರೋ ಸಿಗ್ತಾನೆ ಫೆಬ್ರವರಿ 24ಕ್ಕೆ ಎಂದು ಸಪ್ರೈಸ್ ಕೊಟ್ಟಿದೆ. ಆ ಹೊಸ ಹೀರೋ ಯಾರು ? ಈ ಕ್ಯೂರಿಯಾಸಿಟಿಗೆ ಉತ್ತರ ‘ವಿಕ್ರಾಂತ್ ರೋಣ’ ಪಾತ್ರಧಾರಿ ಕಿಚ್ಚ ಸುದೀಪ್.

ವಾಟ್?, ಕಿಚ್ಚ ಹೊಸ ಹೀರೋ ಹೆಂಗ್ ಆಗ್ತಾರ್ರೀ. ಅವರು ಪ್ಯಾನ್ ಇಂಡಿಯಾ ಸ್ಟಾರ್. ಸುದೀಪ್ ಅಂದ್ರೆ ಇಡೀ‌ ಜಗತ್ತಿಗೆ ಗೊತ್ತು. ಹೀಗಂತ ಕಿಚ್ಚನ ಫ್ಯಾನ್ಸ್ ಎದ್ದು ನಿಲ್ತಾರೆ. ಅಪ್ ಕೋರ್ಸ್ ಎದ್ದು ನಿಲ್ಲಬೇಕು.
ನಮಗೂ ಗೊತ್ತು ಕಿಚ್ಚ ಸುದೀಪ್ ಅಂದ್ರೆ ಇಡೀ ಜಗತ್ತಿಗೆ ಗೊತ್ತಿದೆ ಅಂತ.ಇನ್ನೂ,
ಸ್ಯಾಂಡಲ್ ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್ ಅಂತ ಬೌಂಡರಿ ಹಾಕಿಕೊಳ್ಳದೇ ಎಲ್ಲಾ ಇಂಡಸ್ಟ್ರಿಗೂ ಲಗ್ಗೆ ಇಟ್ಟು ಬ್ಯಾಂಡ್ ಬಜಾಯಿಸಿರೋ ಕಿಚ್ಚ ಎಲ್ಲಾ ರಂಗದವರಿಗೂ ಮಾಣಿಕ್ಯನೇ ಆಗಿದ್ದಾರೆ.

ಈಗ ‘ವಿಕ್ರಾಂತ್ ರೋಣ’ ಸಿನಿಮಾದ ನಾಯಕನಾಗಿ ಫೆಬ್ರವರಿ 24 ರಂದು ಹೊಸ ಪಾತ್ರದ ಮೂಲಕ ಇಡೀ ಜಗತ್ತಿಗೆ ನಯಾ ರೂಪದಲ್ಲಿ ಪರಿಚಯವಾಗ್ತಿದ್ದಾರೆ.
ಫ್ಯಾಂಟಸಿ- ಆಕ್ಷನ್- ಅಡ್ವೆಂಚರ್‌- ಥ್ರಿಲ್ಲರ್ ಕಥಾಹಂದರವುಳ್ಳ ‘ ವಿಕ್ರಾಂತ್ ರೋಣ’ ಸಿನಿಮಾದ ಮೂಲಕ ಬೆಳ್ಳಿತೆರೆಗೆ ಕಿಚ್ಚು ಹಚ್ಚಲಿ
ದ್ದಾರೆ. ಬಚ್ಚನ್ ಗೆ ಜಾಕ್ ಲೀನ್ ಜೋಡಿಯಾಗಿದ್ದು ಬಿಟೌನ್ ಗಲ್ಲಿಯಲ್ಲೂ ವಿಕ್ರಾಂತ್ ರೋಣ ಮೇಲೆ ಕೂತೂಹಲ ಮೂಡಿದೆ.

ವಿಶಾಲಾಕ್ಷಿ, ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಡಾ.ವಿಷ್ಣುವರ್ಧನ ಕೋಚಿಂಗ್ ಅಕಾಡೆಮಿ ಸ್ಥಾಪನೆ; ಡಾ.ವಿಷ್ಣು ಸೇನಾ ಸಮಿತಿ ನಿರ್ಧಾರ

ವೀರಕಪುತ್ರ ಶ್ರೀನಿವಾಸ್ ಅಂದಾಕ್ಷಣ ಥಟ್ಟನೆ ನೆನಪಾಗೋದೆ ಡಾ.ವಿಷ್ಣುವರ್ಧನ್ ಅವರ ಅಪ್ಪಟ ಅಭಿಮಾನಿ. ಹೌದು, ವಿಷ್ಣುವರ್ಧನ್ ಅವರ ಕುರಿತ ಅನೇಕ ಉಪಯುಕ್ತ ಕೆಲಸ ಮಾಡಿದವರು. ದಾದಾ ಅಭಿಮಾನಿಗಳನ್ನು ತಮ್ಮೊಟ್ಟಿಗೆ ಕಟ್ಟಿಕೊಂಡು ಹಲವು ವರ್ಷಗಳಿಂದಲೂ ಜನಪರ ಕೆಲಸ ಮಾಡಿದವರು. ಈಗಲೂ ಅದೇ ಕಾಯಕದಲ್ಲಿದ್ದಾರೆ. ಇನ್ನೂ ಒಂದಷ್ಟು ಹೊಸ ಹೆಜ್ಜೆ ಮುಂದಿಟ್ಟಿದ್ದಾರೆ. ಇತ್ತೀಚೆಗೆ ನಡೆದ ಸಮಿತಿ ಸಭೆಯಲ್ಲಿ ಹಲವು ಕಾರ್ಯಕ್ರಮ ರೂಪಿಸಲು ತೀರ್ಮಾನಿಸಲಾಗಿದೆ. ವಿಷ್ಣುವರ್ಧನ್ ಹೆಸರಲ್ಲಿ ಏನೆಲ್ಲಾ ಮಾಡ್ತಾರೆ ಅನ್ನೋ ಡೀಟೆಲ್ಸ್ ಇಲ್ಲಿದೆ…

ವೀರಕಪುತ್ರ ಶ್ರೀನಿವಾಸ್ ಅವರ ನೇತೃತ್ವದ ಡಾ.ವಿಷ್ಣು ಸೇನಾ ಸಮಿತಿಯ ಸಭೆ ಇತ್ತೀಚೆಗೆ ನಡೆಯಿತು. ಕಳೆದ ಐದು ವರ್ಷದಿಂದ ಪ್ರತಿವರ್ಷವೂ ಸಭೆ ಸೇರಿ ಹಿಂದಿನ ಸಾಲಿನ ಚಟುವಟಿಕೆಗಳ ಪರಾಮರ್ಶೆ ಮತ್ತು ಮುಂದಿನ ಸಾಲಿನ ಯೋಜನೆಗಳ ಬಗ್ಗೆ ಚರ್ಚಿಸಿ ಕಾರ್ಯಪ್ರವೃತ್ತವಾಗುವ ಸಂಪ್ರದಾಯವನ್ನು ಪಾಲಿಸುತ್ತಾ ಬಂದಿದೆ. ಅದರಂತೆ ಈ ವರ್ಷವೂ ಹಲವು ಯೋಜನೆಗಳನ್ನು ಮುಂದಿನ ವರ್ಷದಲ್ಲಿ ಕೈಗೆತ್ತಿಕೊಳ್ಳುವ ನಿರ್ಧಾರಕ್ಕೆ ಸಮಿತಿ ಬಂದಿದೆ.

ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಐಎಎಸ್/ಕೆಎಎಸ್ ತರಬೇತಿ ಒದಗಿಸುವ ಸಲುವಾಗಿ ಡಾ.ವಿಷ್ಣುವರ್ಧನ ಕೋಚಿಂಗ್ ಅಕಾಡೆಮಿ ಸ್ಥಾಪಿಸುವುದು. ಡಾ.ವಿಷ್ಣುವರ್ಧನ ಅವರ ಬದುಕು ಸಾಧನೆಗಳನ್ನು ಮುಂದಿನ ತಲೆಮಾರಿಗೆ ತಲುಪಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳೆಡೆಗೆ ವಿಷ್ಣುವರ್ಧನ ಎಂಬ ಯೋಜನೆ ರೂಪಿಸುವುದು. ಆ ಯೋಜನೆಯಂತೆ ರಾಜ್ಯದ ಎಲ್ಲಾ ಪ್ರಾಥಮಿಕ , ಮಾಧ್ಯಮಿಕ ಶಾಲಾ ವಿದ್ಯಾರ್ಥಿಗಳಿಗೆ ಡಾ.ವಿಷ್ಣುವರ್ಧನ ಬದುಕು ಸಾಧನೆಗಳ ಕುರಿತಾದ ಕಿರುಹೊತ್ತಿಗೆಯನ್ನು ವಿತರಿಸುವ ಬಗ್ಗೆ ನಿರ್ಧಾರ ಮಾಡಲಾಗಿದೆ.

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಒಂದಾದರೂ ಪ್ರಮುಖ ರಸ್ತೆಗೆ ಅಥವಾ ಕಲಾಭವನಕ್ಕೆ ಡಾ.ವಿಷ್ಣುವರ್ಧನ ಅವರ ಹೆಸರನ್ನು ಇಡಬೇಕೆಂದು ಸರ್ಕಾರ ಮತ್ತು ಜಿಲ್ಲಾಡಳಿತವನ್ನು ಒತ್ತಾಯಿಸುವುದು.
ಡಾ.ವಿಷ್ಣು ಕುಟುಂಬದ ಜೊತೆಗಿನ ಬಿನ್ನಾಭಿಪ್ರಾಯ ಮರೆತು ಅವರ ಎಲ್ಲಾ ವಿಚಾರ ಮತ್ತು ಯೋಜನೆಗಳಿಗೆ ಜೊತೆಯಾಗಿ ನಿಲ್ಲುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ.


ಸಭೆಯಲ್ಲಿ ಆನಂದ್ ರಾಚ್, ಮಲ್ಲಿಕಾರ್ಜುನ್, ಯದುನಂದನ್, ರಘು ಎಸ್, ವಿಷ್ಣುಪ್ರಕಾಶ್, ರಾಧಾ ಗಂಗಾಧರ್, ಕೆ.ವಿನಯ್ ಸೇರಿದಂತೆ ವಿಷ್ಣು ಅಭಿಮಾನಿಗಳು ಇದ್ದರು.

Categories
ಸಿನಿ ಸುದ್ದಿ

ಆರು ಭಾಷೆಯಲ್ಲಿ ಮಡ್ಡಿ; ಡಿಸೆಂಬರ್ 10 ರಿಲೀಸ್

ಡಾ. ಪ್ರಗ್ಬಲ್ ನಿರ್ದೇಶನದ ಈ ಚಿತ್ರಕ್ಕೆ ಕೆ.ಜಿ.ಎಫ್ ಖ್ಯಾತಿಯ ರವಿ ಬಸ್ರೂರ್ ಸಂಗೀತ ನಿರ್ದೇಶನವಿದೆ…

ಭಾರತದಲ್ಲಿ ಇದೇ ಮೊದಲ ಬಾರಿಗೆ ಮಡ್ ರೇಸ್ ಕುರಿತಾದ ಚಿತ್ರವೊಂದು ನಿರ್ಮಾಣವಾಗಿದೆ.
ಮಲೆಯಾಳಂ, ತಮಿಳು, ಕನ್ನಡ, ತೆಲುಗು, ಹಿಂದಿ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ಮೂಡಿಬಂದಿರುವ ಈ ಚಿತ್ರ ಡಿಸೆಂಬರ್ 10ರಂದು ದೇಶಾದ್ಯಂತ ಬಿಡುಗಡೆಯಾಗುತ್ತಿದೆ.

ಮ್ಯಾನೇಜ್ಮೆಂಟ್ ನಲ್ಲಿ ಪಿ.ಹೆಚ್.ಡಿ ಪದವಿ ಪಡೆದಿರುವ ಡಾ. ಪ್ರಗ್ಬಲ್ ಈ ಚಿತ್ರ ನಿರ್ದೇಶನ ಮಾಡಿದ್ದಾರೆ. ಕೆ.ಜಿ.ಎಫ್ ಖ್ಯಾತಿಯ ರವಿ ಬಸ್ರೂರ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

ನನ್ನದು ಇದು ಮೊದಲ ನಿರ್ದೇಶನದ ಚಿತ್ರ. ಮಡ್ ರೇಸ್ ಕಥೆಯಿಟ್ಟುಕೊಂಡು ಭಾರತದಲ್ಲಿ ತಯಾರಾಗಿರುವ ಚೊಚ್ಚಲ ಚಿತ್ರವಿದು. ಈ ಚಿತ್ರ‌ ನಿರ್ಮಾಣಕ್ಕೆ ಐದು ವರ್ಷಗಳ ಸಮಯ ಹಿಡಿದಿದೆ. ಒಂದು ವರ್ಷ ಲೊಕೇಶನ್ ಹುಡುಕಾಟ ಮಾಡಿ, ಕೊನೆಗೆ ತಮಿಳುನಾಡು ಹಾಗೂ ‌ಕೇರಳ ಗಡಿ ಪ್ರದೇಶದಲ್ಲಿ ಚಿತ್ರೀಕರಣ ಮಾಡಲಾಗಿದೆ ಕನ್ನಡ ಸೇರಿದಂತೆ ಆರು ಭಾಷೆಗಳಲ್ಲಿ ನಿರ್ಮಾಣವಾಗಿರುವ ಸಿನಿಮಾ ಇದು. ಚಿತ್ರಕ್ಕೆ ರವಿ ಬಸ್ರೂರ್ ಸಂಗೀತ ನೀಡಿದ್ದಾರೆ. ರವಿ ಅವರು ಬರೀ ಸಂಗೀತಕಷ್ಚೇ ಸೀಮಿತವಾಗದೆ, ನನ್ನ ಬೆನ್ನ ಹಿಂದೆ ನಿಂತು, ನನಗೆ ಮಾರ್ಗದರ್ಶನ ಮಾಡಿದ್ದಾರೆ. ನೂತನ ಕಲಾವಿದರ ಹಾಗೂ ನುರಿತ ತಂತ್ರಜ್ಞರ ಸಮಾಗಮದಲ್ಲಿ ಈ ಪ್ಯಾನ್ ಇಂಡಿಯಾ ಸಿನಿಮಾ ಅದ್ದೂರಿಯಾಗಿ ಮೂಡಿಬಂದಿದೆ. ಇದೇ ಹತ್ತರಂದು ಬಿಡುಗಡೆಯಾಗುತ್ತಿದೆ. ನಿಮ್ಮ ಪ್ರೋತ್ಸಾಹವಿರಲಿ ಎಂದರು ಚಿತ್ರ ನಿರ್ದೇಶಕ ಡಾ.ಪ್ರಗ್ಬಲ್.

ನನಗೆ ಛಾಯಾಗ್ರಹಕ ರತೀಶ್ ಅವರು ಫೋನ್ ಮಾಡಿ ಈ‌ ರೀತಿಯ ಚಿತ್ರವೊಂದು ತಯಾರಾಗುತ್ತಿದೆ. ನೀವೇ ಸಂಗೀತ ಮಾಡಬೇಕೆಂದು ಕೇಳಿದರು. ಸ್ವಲ್ಪ ಬ್ಯುಸಿ ಇದ್ದುದರಿಂದ ನಾನು ಏನು ಹೇಳಿರಲಿಲ್ಲ. ಕೆಲವು ದಿನಗಳ ನಂತರ ನಾನು ಚಿತ್ರೀಕರಣ ನಡೆಯುವ ಸ್ಥಳಕ್ಕೆ ತೆರಳಿದೆ. ಅಲ್ಲಿ ನಿರ್ದೇಶಕರು ಸೇರಿದಂತೆ ಎಲ್ಲಾ ತಂತ್ರಜ್ಞರು ಹಾಗೂ ಕಲಾವಿದರು ಕಾರ್ಯನಿರ್ವಹಿಸುತ್ತಿದ್ದ ಶೈಲಿ ನೋಡಿ ಬೆರಗಾದೆ. ಅಬ್ಬಾ ಲಕ್ಷಾಂತರ ಮೌಲ್ಯದ ವಾಹನಗಳು ನನ್ನ ಕಣ್ಣ ಮುಂದೆ ಪ್ರಪಾತಕ್ಕೆ ಬೀಳುತಿತ್ತು. ಚಿಕ್ಕ ಬಜೆಟ್ ನ ಸಿನಿಮಾ ಎಂದು ಆರಂಭವಾಗಿ, ಚಿತ್ರೀಕರಣ ಸಾಗುತಾ ಅಪಾರವೆಚ್ಚದ ಅದ್ದೂರಿ ಸಿನಿಮಾವಾಗಿ “ಮಡ್ಡಿ” ನಿರ್ಮಾಣವಾಗಿದೆ. ನಾನು ಈ ಚಿತ್ರಕ್ಕೆ ಸಂಗೀತ ನೀಡಲು ಸುಮಾರು ಎರಡುವರ್ಷಗಳ ಅವಧಿ ಹಿಡಿಸಿದೆ.


ಸಂಗೀತ ನಿರ್ದೇಶಕ ಹಾಗೂ ಸಂಕಲನಕಾರ ಗಂಡ – ಹೆಂಡತಿ ಇದ್ದ ಹಾಗೆ. ಅವರಿಬ್ಬರ ನಡುವಿನ ಹೊಂದಾಣಿಕೆ ಮುಖ್ಯ. ಇದು ಮೂರು ರಾಜ್ಯಗಳ ಸಿನಿಮಾ ಎನ್ನಬಹುದು ಏಕೆಂದರೆ ನಾನು ಕರ್ನಾಟಕದವನು, ನಿರ್ದೇಶಕರು ಕೇರಳದವರು ಹಾಗೂ ಸಂಕಲನಕಾರರು ತಮಿಳುನಾಡಿನವರು. ಒಟ್ಟಿನಲ್ಲಿ “ಮಡ್ಡಿ” ಉತ್ತಮ ಚಿತ್ರವಾಗಿ ಹೊರಹೊಮ್ಮಿದೆ. ಚಿತ್ರದ ಟ್ರೇಲರ್ ಇರುವ ಹಾಗೆ ಇಡೀ ಚಿತ್ರ ಕೂಡ ಹಾಗೆ ಇರುತ್ತದೆ. ಈ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ‌ಎಂದರು ಸಂಗೀತ ನಿರ್ದೇಶಕ ರವಿ ಬಸ್ರೂರ್.

ಕೇರಳ ಹಾಗೂ ತಮಿಳುನಾಡು ಹೊರತುಪಡಿಸಿ ದೇಶಾದ್ಯಂತ. ಸುಮಾರು 400 ಚಿತ್ರಮಂದಿರಗಳಲ್ಲಿ ಈ ಚಿತ್ರ ಬಿಡುಗಡೆ ಮಾಡುತ್ತಿದ್ದೇನೆ. ನಿರ್ದೇಶಕರು ತುಂಬಾ ಚೆನ್ನಾಗಿ ಚಿತ್ರ ಮಾಡಿದ್ದಾರೆ ಒಳ್ಳೆಯದಾಗಲಿ ಎಂದರು ವಿತರಕ ಭಾಷಾ.

ಪ್ರೇಮಕೃಷ್ಣ ದಾಸ್ ಅವರು ನಿರ್ಮಿಸಿರುವ ಈ ಚಿತ್ರಕ್ಕೆ ನಿರ್ದೇಶಕ ಪ್ರಗ್ಬಲ್ ಅವರೆ ಕಥೆ, ಚಿತ್ರಕಥೆ ಬರೆದಿದ್ದಾರೆ. ರವಿ‌ ಬಸ್ರೂರ್ ಸಂಗೀತ ನಿರ್ದೇಶನ, ರತೀಶ್ ಛಾಯಾಗ್ರಹಣ, ಸ್ಯಾನ್ ಲೋಕೇಶ್ ಸಂಕಲನ ಹಾಗೂ ರನ್ ರವಿ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

ಯವನ್ ಕೃಷ್ಣ, ರಿಧಾನ್ ಕೃಷ್ಣ, ಅಮಿತ್ ಶಿವದಾಸ್, ಅನುಶಾ ಸುರೇಶ್, ರೆಂಜಿ ಪಣಿಕರ್, ಹರೀಶ್ ಪೆರಾಡಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Categories
ಸಿನಿ ಸುದ್ದಿ

ಅಪ್ಪು ಕನಸಿನ ಗಂಧದ ಗುಡಿ ನೋಡೋಕೆ ನಾನೂ ಕಾತುರ; ಶಿವಣ್ಣ

ಪುನೀತ್‌ ರಾಜಕುಮಾರ್‌ ಅವರು ಪ್ರೀತಿಯಿಂದಲೇ ನಿರ್ಮಾಣ ಮಾಡಿದ “ಗಂಧದ ಗುಡಿ” ಎಂಬ ವಿಶೇಷ ಡಾಕ್ಯುಮೆಂಟರಿ ಪಾರ್ವತಮ್ಮ ರಾಜಕುಮಾರ್‌ ಅವರ ಹುಟ್ಟುಹಬ್ಬದಂದು ರಿಲೀಸ್‌ ಆಗಿದ್ದು, ಎಲ್ಲೆಡೆಯಿಂದಲೂ ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿದೆ. ಟೈಟಲ್‌ ಟೀಸರ್ ವೀಕ್ಷಿಸಿರುವ ಕನ್ನಡ ಚಿತ್ರರಂಗದ ಹಲವು ನಟ,ನಟಿಯರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಹ್ಯಾಟ್ರಿಕ್‌ ಹೀರೋ ಶಿವರಾಜಕುಮಾರ್‌ ಕೂಡ ಟೀಸರ್‌ ನೋಡಿ ಪ್ರತಿಕ್ರಿಯಿಸಿದ್ದು ಹೀಗೆ.

“ಅಪ್ಪು ಮಾಡಿರುವ ಗಂಧದ ಗುಡಿ ಟೀಸರ್‌ ತುಂಬಾನೇ ಚೆನ್ನಾಗಿದೆ. ಒಂದು ಡಿಫರೆಂಟ್‌ ಫಾರ್ಮೆಟ್‌ನಲ್ಲಿದೆ. ಕಾಡಿನ ಅಮೂಲ್ಯತೆ ಬಗ್ಗೆ ಡಾಕ್ಯುಮೆಂಟರಿ ಇದೆ. ಈಗಿನ ಕಾಲಕ್ಕೆ ತುಂಬ ಸೂಕ್ತ ಎನಿಸುತ್ತೆ. ಕಾಡು ಸೇವ್‌ ಮಾಡಬೇಕೆಂಬ ವಿಷಯ ಅದರದ್ದು. ಅಪ್ಪು ಸಿಂಪಲ್‌ ಆಗಿ ಕಾಣಿಸಿಕೊಂಡಿದ್ದಾರೆ ಅಲ್ಲಿ. ಸ್ಟಾರ್‌ಡಮ್‌ ಬಿಟ್ಟು ಬೇರೆ ರೀತಿ ತೊಡಗಿಸಿಕೊಳ್ಳುವುದಿದೆಯಲ್ಲ ಅದೊಂದು ವಿಶೇಷ. ಈ ಕುರಿತಂತೆ ಹಿಂದೆಯೇ, ಗಂಧದ ಗುಡಿ ಕುರಿತು ನನ್ನ ಬಳಿ ಅಪ್ಪು ಹೇಳಿದ್ದರು. ನಾನೂ ಕೂಡ ಅದನ್ನ ನೋಡಲು ಕುತೂಹಲದಿಂದ ಕಾಯುತ್ತಿದ್ದೇನೆ.

ಅಲ್ಲಿ ಕಾಡಿನ ರಕ್ಷಣೆ ಬಗ್ಗೆ ಹೇಳಲಾಗಿದೆ. ಒಂದೊಳ್ಳೆಯ ಜಾಗೃತಿ ಮೂಡಿಸುವ ಸಿನಿಮಾ ಅದು. ಕರ್ನಾಟಕ ಅರಣ್ಯ ಕುರಿತಂತೆ ಅಪ್ಪು ಮಾಡಿರುವುದು ಹೆಮ್ಮೆ ಎನಿಸುತ್ತದೆ. ಈ ಹಿಂದೆ ಕೂಡ ಎಂ.ಪಿ.ಶಂಕರ್‌, ಕೂಡ ಕಾಡಿನ ಕುರಿತಂತೆ ಸಿನಿಮಾ ಮಾಡಿದ್ದರು. ಪ್ರಭಾಕರ್‌ ಅವರು ಸಹ ಕಾಡಿನರಾಜ ಸಿನಿಮಾ ಮಾಡಿದ್ದರು. ನಾನು ಸಿನಿಮಾ ನೋಡೋಕೆ ಕಾಯುತ್ತಿದ್ದೇನೆʼ ಎಂದಿದ್ದಾರೆ. ಪಿಆರ್‌ಕೆ ಮೂಲಕ ೨೦೨೨ರಲ್ಲಿ ಥಿಯೇಟರ್‌ನಲ್ಲಿ ಈ ಚಿತ್ರ ರಿಲೀಸ್‌ ಆಗಲಿದೆ. ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.

Categories
ಸಿನಿ ಸುದ್ದಿ

ಮತ್ತೆ ಸುದ್ದಿಯಲ್ಲಿ ಲಹರಿ ಸಂಸ್ಥೆ! ರಿಕಿ ಕೇಜ್‌ ಆಲ್ಬಂ ಪ್ರತಿಷ್ಠಿತ ಗ್ರ್ಯಾಮಿ ಅವಾರ್ಡ್‌ಗೆ ನಾಮನಿರ್ದೇಶನ…

ಲಹರಿ ಮ್ಯೂಸಿಕ್‌ ಸಂಸ್ಥೆ ಕನ್ನಡ ಮಾತ್ರವಲ್ಲ, ಇಡೀ ಭಾರತೀಯ ಚಿತ್ರರಂಗಕ್ಕೆ ಹೆಮ್ಮೆ ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಹೌದು, ಈಗಾಗಲೇ ದಕ್ಷಿಣ ಭಾರತದಲ್ಲಿ ಮೊದಲ ಸ್ಥಾನದಲ್ಲಿರುವ ಈ ಸಂಸ್ಥೆ, ಇದೀಗ ಮತ್ತೊಂದು ಸಂತೋಷದ ವಿಷಯಕ್ಕೆ ಕಾರಣವಾಗಿದೆ.

ಇದೇ ಮೊದಲ ಬಾರಿಗೆ ಲಹರಿ ಮ್ಯೂಸಿಕ್‌ ಸಂಸ್ಥೆಯಿಂದ ಬಿಡುಗಡೆಯಾದ ಆಲ್ಬಂವೊಂದು ಗ್ರ್ಯಾಮಿ ಅವಾರ್ಡ್‌ಗೆ ನಾಮನಿರ್ದೇಶನಗೊಂಡಿದೆ. ಸಹಜವಾಗಿಯೇ ಲಹರಿ ಮ್ಯೂಸಿಕ್‌ ಸಂಸ್ಥೆಯ ಲಹರಿ ವೇಲು ಅವರಿಗೆ ಇದು ಖುಷಿಯಾಗಿದೆ. ಅಂದಹಾಗೆ, ಭಾರತೀಯ ಚಿತ್ರತಂಗದಲ್ಲೇ ಲಹರಿ ಮ್ಯೂಸಿಕ್‌ ಸಂಸ್ಥೆಯಿಂದ ಹೊರಬಂದಿರುವ ಈ ಆಲ್ಬಂ ಗ್ರ್ಯಾಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿರುವುದಕ್ಕೆ ಮುಖ್ಯ ಕಾರಣ, ಅದು ಸಂಗೀತ ನಿರ್ದೇಶಕ, ಗಾಯಕ ರಿಕಿ ಕೇಜ್.‌


ರಿಕಿ ಕೇಜ್‌ ಅವರ “ಡಿವೈನ್‌ ಟೈಡ್ಸ್‌” ಹೆಸರಿನ ಆಲ್ಬಂ ಇದೀಗ ಗ್ರ್ಯಾಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ. ಹಾಗೆ ನೋಡಿದರೆ, ರಿಕ್ಕಿ ಕೇಜ್‌ ಅವರಿಗೆ ಇದೇನು ಹೊಸದಲ್ಲ. ಕಳೆದ ಐದು ವರ್ಷಗಳ ಹಿಂದೆಯೇ ರಿಕಿ ಕೇಜ್‌ ಅವರು ಗ್ರ್ಯಾಮಿ ಅವಾರ್ಡ್‌ ಪಡೆದುಕೊಂಡಿದ್ದರು. ಈಗ ಎರಡನೇ ಬಾರಿಗೆ ಅವರು ಗ್ರ್ಯಾಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ವಿಶೇಷವೆಂದರೆ, ರಿಕಿ ಕೇಜ್‌ ಅವರ “ಡಿವೈನ್‌ ಟೈಡ್ಸ್”‌ ಆಲ್ಬಂ ಪ್ರಪಂಚದ ಅದ್ಭುತ ಆಲ್ಬಂಗಳ ಸಾಲಿಗೆ ಸೇರಿದ್ದು, ಪ್ರಪಂಚಾದ್ಯಂತ ಬಂದ ಆಲ್ಬಂಗಳನ್ನು ಹಿಂದಕ್ಕೆ ತಳ್ಳಿ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ.

ಸಹಜವಾಗಿಯೇ ಇದು ಕನ್ನಡಕ್ಕೆ ಹೆಮ್ಮೆಯ ವಿಷಯವೇ ಸರಿ. ಯಾಕೆಂದರೆ, ರಿಕಿ ಕೇಜ್‌ ಕೂಡ ಮೂಲತಃ ಕರ್ನಾಟಕದವರು. ಅದರಲ್ಲೂ ದಕ್ಷಿಣ ಭಾರತದಲ್ಲೇ ಪ್ರಖ್ಯಾತಿ ಪಡೆದಿರುವ ಲಹರಿ ಮ್ಯೂಸಿಕ್‌ ಸಂಸ್ಥೆಯಡಿ ಈಗಾಗಲೆ 1.26 ಲಕ್ಷ ಆಲ್ಬಂ ಹಾಡುಗಳಿವೆ. ಸೂಪರ್‌ ಹಿಟ್‌ ಹಾಡುಗಳನ್ನು ಕೊಟ್ಟಿರುವ ಲಹರಿ ಮ್ಯೂಸಿಕ್‌ ಸಂಸ್ಥೆ ಕನ್ನಡಿಗರ ಪ್ರೀತಿಗೆ ಪಾತ್ರವಾಗಿದೆ. ಈಗ ಇದೇ ಮೊದಲ ಸಲ “ಡಿವೈನ್‌ ಟೈಡ್ಸ್‌” ಆಲ್ಬಂ ಲಹರಿ ಸಂಸ್ಥೆಯಡಿ ಬಂದಿದ್ದು, ಆ ಆಲ್ಬಂ ಗ್ರ್ಯಾಮಿ ಅವಾರ್ಡ್‌ಗೆ ಹೋಗಿರೋದು ಸಂತಸದ ವಿಷಯ. ಭಾರತದಲ್ಲೇ ಮೊದಲ ಬಾರಿಗೆ ಲಹರಿ ಸಂಸ್ಥೆ ಗ್ರ್ಯಾಮಿ ಅವಾರ್ಡ್‌ಗೆ ನಾಮನಿರ್ದೇಶನಗೊಂಡಿರುವ ಬಗ್ಗೆ ಸ್ವತಃ ಲಹರಿ ಸಂಸ್ಥೆಯ ಮುಖ್ಯಸ್ಥ ವೇಲು ಅವರೇ ಸಂತೋಷಗೊಂಡಿದ್ದಾರೆ.

ಅಂದಹಾಗೆ, 64 ನೇ ವಾರ್ಷಿಕ ಗ್ರ್ಯಾಮಿ ಅವಾರ್ಡ್‌ಗೆ “ಡಿವೈನ್ ಟೈಡ್ಸ್” ಎಂಬ ಅದ್ಭುತ ಆಲ್ಬಂ ನಾಮನಿರ್ದೇಶನಗೊಂಡಿದೆ. ಸ್ಟೀವರ್ಟ್ ಕೋಪ್ಲ್ಯಾಂಡ್ (ಪೊಲೀಸ್) ಮತ್ತು ರಿಕಿ ಕೇಜ್ ‘ಡಿವೈನ್ ಟೈಡ್ಸ್’ ಗಾಗಿ ಗ್ರ್ಯಾಮಿ ನಾಮನಿರ್ದೇಶನವನ್ನು ಪಡೆದುಕೊಂಡಿದ್ದಾರೆ. ಈ ನಾಮನಿರ್ದೇಶನದ ಕುರಿತಂತೆ ರೆಕಾರ್ಡಿಂಗ್ ಅಕಾಡೆಮಿಯ ಸಿಇಒ ಹಾರ್ವೆ ಮೇಸನ್ ಜೂನಿಯರ್ ಅವರು ಘೋಷಣೆ ಮಾಡಿದ್ದಾರೆ. ಕಳೆದ 2015ರಲ್ಲಿ ರಿಕಿ ಕೇಜ್ ಅವರ “ವಿಂಡ್ಸ್ ಆಫ್ ಸಂಸಾರ” ಎಂಬ ಆಲ್ಬಂಗೆ ಗ್ರ್ಯಾಮಿ ಪ್ರಶಸ್ತಿ ಲಭಿಸಿತ್ತು. ಮಹಾತ್ಮ ಗಾಂಧಿ ಮತ್ತು ನೆಲ್ಸನ್ ಮಂಡೇಲಾ ಅವರ ಆದರ್ಶಗಳನ್ನು ಆಧರಿಸಿ, ‘ವಿಂಡ್ಸ್ ಆಫ್ ಸಂಸಾರ’ ಆಲ್ಬಂ ಬಂದು ಅದು ಯಶಸ್ವಿಯಾಗಿತ್ತು. ಇದರೊಂದಿಗೆ ಯುಎಸ್‌ನ ಬಿಲ್‌ಬೋರ್ಡ್ ನ್ಯೂ ಏಜ್ ಆಲ್ಬಮ್‌ಗಳ ಚಾರ್ಟ್‌ನಲ್ಲಿ ಮೊದಲ ಸ್ಥಾನದಲ್ಲಿತ್ತು. ಇದು ಭಾರತೀಯ ಮೂಲದ ವ್ಯಕ್ತಿಗೆ ಮೊದಲನೆ ಪ್ರಶಸ್ತಿ ಎಂಬುದು ವಿಶೇಷವಾಗಿತ್ತು. ರಿಕಿ ಗ್ರ್ಯಾಮಿ ಪ್ರಶಸ್ತಿ ಗೆದ್ದ ಭಾರತದ ಅತ್ಯಂತ ಕಿರಿಯ ವ್ಯಕ್ತಿ ಮತ್ತು 4 ನೇ ಭಾರತೀಯ. 5-ಬಾರಿ ಗ್ರ್ಯಾಮಿ ಪ್ರಶಸ್ತಿ ವಿಜೇತರಾಗಿರುವ ಸ್ಟೀವರ್ಟ್ ಕೋಪ್ಲ್ಯಾಂಡ್ ಅವರು ಪೌರಾಣಿಕ ಬ್ರಿಟಿಷ್ ರಾಕ್ ಗ್ರೂಪ್‌ನ ‘ದಿ ಪೋಲಿಸ್’ ಸ್ಥಾಪಕ ಮತ್ತು ಡ್ರಮ್ಮರ್ ಆಗಿದ್ದಾರೆ.

ಪ್ರಪಂಚದಾದ್ಯಂತದ ಕಲಾವಿದರನ್ನು ಒಳಗೊಂಡಿರುವ ಪ್ರಸ್ತುತ ಗ್ರ್ಯಾಮಿ ನಾಮನಿರ್ದೇಶಿತ ಸಂಗೀತ ಆಲ್ಬಂ ‘ಡಿವೈನ್ ಟೈಡ್ಸ್’ ನಮ್ಮ ನೈಸರ್ಗಿಕ ಪ್ರಪಂಚದ ವೈಭವ ಮತ್ತು ಜಾತಿಗಳ ಸ್ಥಿತಿ ಸ್ಥಾಪಕತ್ವಕ್ಕೆ ಗೌರವವಾಗಿದೆ. ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಈ ಆಲ್ಬಂ 9 ಹಾಡುಗಳು ಮತ್ತು 8 ಸಂಗೀತ ವೀಡಿಯೊಗಳನ್ನು ಒಳಗೊಂಡಿದೆ, ಇದನ್ನು ಭಾರತೀಯ ಹಿಮಾಲಯದ ಸೊಗಸಾದ ಸೌಂದರ್ಯದಿಂದ ಸ್ಪೇನ್‌ನ ಹಿಮಾವೃತ ಕಾಡುಗಳವರೆಗೆ ವಿಶ್ವದಾದ್ಯಂತ ಚಿತ್ರೀಕರಿಸಲಾಗಿದೆ. ‘ಡಿವೈನ್ ಟೈಡ್ಸ್’ ಈಗಾಗಲೇ ಪ್ರಪಂಚದಾದ್ಯಂತದ ವಿವಿಧ ಉತ್ಸವಗಳಲ್ಲಿ ಹಲವಾರು ಪ್ರಶಸ್ತಿಗಳನ್ನು ಗೆದ್ದಿದೆ. ದಕ್ಷಿಣ ಭಾರತದ ಪ್ರಮುಖ ರೆಕಾರ್ಡ್ ಲೇಬಲ್ ಆದ ಲಹರಿ ಮ್ಯೂಸಿಕ್‌ನಿಂದ ಸಂಗೀತ ವೀಡಿಯೊಗಳನ್ನು ಪ್ರತ್ಯೇಕವಾಗಿ ಬಿಡುಗಡೆ ಮಾಡಲಾಗಿದೆ. 64 ನೇ ವಾರ್ಷಿಕ ಗ್ರ್ಯಾಮಿ ಪ್ರಶಸ್ತಿ ಸಮಾರಂಭ ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್‌ನಲ್ಲಿ ಜನವರಿ 31, 2022 ರಂದು ನಡೆಯಲಿದೆ. ಈ ಸಮಾರಂಭದಲ್ಲಿ ವಿಜೇತರನ್ನು ಘೋಷಿಸಲಾಗುವುದು.

error: Content is protected !!