ಅಪ್ಪು ಅಣ್ಣನಿಲ್ಲದ ನಮಗೆ ಶಿವಣ್ಣ- ಗೀತಕ್ಕನೇ ತಂದೆ- ತಾಯಿ; ಶಕ್ತಿಧಾಮದ ಮಕ್ಕಳ ಹೃದಯ ಗೀತೆಗೆ ಕಣ್ಣೀರಾಗ್ತೀರಿ ನೀವೆಲ್ಲ !

ಅಪ್ಪು ಮರೆಯಾದ್ಮೇಲೆ ದೊಡ್ಮನೆಯಲ್ಲಿ ಎಷ್ಟು ಕತ್ತಲು ಕವಿದಿದೆಯೋ, ಅದೆಷ್ಟು ದುಃಖ- ನೋವು ತುಂಬಿಕೊಂಡಿದೆಯೋ, ಅದೆಷ್ಟು ಅನಾಥಭಾವ ದೊಡ್ಮನೆಗೆ ಕಾಡುತ್ತಿದೆಯೋ, ಅದೆಷ್ಟು ಕಣ್ಣೀರು ಹನಿಯಾಗಿ ಹರಿದಿದೆಯೋ ಅಷ್ಟೇ ದುಃಖ-ನೋವು- ಸಂಕಟವನ್ನು ಶಕ್ತಿಧಾಮವೂ ಅನುಭವಿಸಿದೆ. ಶಕ್ತಿಧಾಮ ವರನಟ ಡಾ. ರಾಜ್ ಕುಮಾರ್ ಹಾಗೂ ಪಾರ್ವತಮ್ಮ ರಾಜ್ ಕುಮಾರ್ ಅವರು ನಡೆಸುತ್ತಿದ್ದಂತಹ ಅನಾಥಾಶ್ರಮ. ಅಣ್ಣಾವ್ರು ಮತ್ತು ಅಮ್ಮಾವ್ರು ಹೋದ್ಮೇಲೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಶಕ್ತಿಧಾಮದ ಬೆನ್ನಿಗೆ ನಿಂತರು. ವೃದ್ದರು- ಅನಾಥರು- ನಿರ್ಗತಿಕರು- ಅಶಕ್ತರು ಸೇರಿದಂತೆ ಸಾವಿರಾರು ಜನರ ಜವಬ್ದಾರಿಯನ್ನು ವಹಿಸಿಕೊಂಡರು. ಊಟ-ವಸತಿ- ಶಿಕ್ಷಣ ಯಾವುದಕ್ಕೂ ಕೊರತೆಯಾಗದಂತೆ ನೋಡಿಕೊಂಡರು.ಹೀಗೆ ಅಪ್ಪು ಆಸರೆಯಲ್ಲಿ ನಿಶ್ಚಿಂತರಾಗಿ ಬದುಕುತ್ತಿದ್ದ
ಜೀವಗಳಿಗೆ ದೊಡ್ಮನೆ ರಾಜಕುಮಾರನ ಸಾವು ಬರಸಿಡಿಲು ಬಡಿದಂತಾಗಿದೆ. ಮುಂದೇನು ಎನ್ನುವ ಪ್ರಶ್ನೆ ಉದ್ಭವಿಸುವ ಮೊದಲೇ ಶಕ್ತಿಧಾಮಕ್ಕೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಆಸರೆಯಾಗಿ ನಿಂತಿದ್ದಾರೆ.

ಹೌದು, ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಶಕ್ತಿಧಾಮವನ್ನು ಮುನ್ನಡೆಸಲಿದ್ದಾರೆ. ತಮ್ಮನ ಸಮಾಜ ಸೇವೆಗೆ ಬೆನ್ನೆಲುಬಾಗಿ ಶಿವಣ್ಣ- ರಾಘಣ್ಣ ನಿಂತ್ಕೊಳ್ಳಲಿದ್ದಾರೆ. ಹೀಗಾಗಿ, ಶಕ್ತಿಧಾಮದ ಸಕಲರೂ ನಿರಾಳರಾಗಿದ್ದಾರೆ. ಆದರೆ, ನಟಸಾರ್ವಭೌಮನಿಲ್ಲದ ನೋವು ಮಾತ್ರ ಶಕ್ತಿಧಾಮದ ಸಕಲರನ್ನೂ ಹೈರಣಾಗಿಸಿದೆ. ಕನ್ನಡ ಚಿತ್ರರಂಗ ಹಮ್ಮಿಕೊಂಡಿದ್ದ ‘ ಪುನೀತ್ ನಮನ’ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಶಕ್ತಿಧಾಮದ ಮಕ್ಕಳು ಪರಮಾತ್ಮನ ಸ್ಮರಣೆ ಮಾಡಿ ಹೃದಯ ಗೀತೆಯ ಮೂಲಕ ತಮ್ಮ ಭಾವಾಂಜಲಿಯನ್ನು ಅರ್ಪಿಸಿದರು.

ಶಕ್ತಿಧಾಮದ ಹೆಸರು ಎಷ್ಟು ಸುಂದರ…ಮುಕ್ತಿ ನೀಡುವ ನಮಗೆ ಭವ್ಯಮಂದಿರ…

ಅಂಬೆಗಾಲ ಇಡುತ ನಾವು ಬದುಕುತ್ತಿದೆವು…ಅಮ್ಮ ನಿಮ್ಮ ಶಕ್ತಿಯಿಂದ ಎದ್ದುನಿಂತೆವು…

ಕರವ ಮುಗಿದು ನಮಿಸಬೇಕು ಇಂಥ ಶಕ್ತಿಗೆ…ಜಯವಾಗಲಿ ಎಂದೆಂದೂ ಶಕ್ತಿಧಾಮಗೆ…

ಒಂದೇ ಬಳ್ಳಿ ಹೂಗಳಂತೆ ನಾವು
ಎಲ್ಲರು…ನಗುನಗುತ ಬಾಳಬೇಕು ಇಲ್ಲಿ ಎಲ್ಲರು…

ದಾರಿತೋರಿ ನಡೆಸಬೇಕು ಹಿರಿಯರೆಲ್ಲರು…ಸಹಕರಿಸಿ ನಡೆಯಬೇಕು ಕಿರಿಯರೆಲ್ಲರು…

ತಾಯಿಯಂತೆ ಗೀತಮ್ಮ ಸಲಹುತಿರುವರು…
ತಂದೆಯಂತೆ ಶಿವಣ್ಣ ಹರಸುತ್ತಿರುವರು…

ಅಪ್ಪು ಅಣ್ಣ ಎಂದೆಂದು ಮನದಲಿರುವರು…ಅವರು ಕೊಟ್ಟ ಪ್ರೀತಿಯನ್ನು ಮರೆಯಲಾರೆವು…

ಶಕ್ತಿಧಾಮದ ಏಳ್ಗೆ ನಮ್ಮದಂತೆ…ನಮ್ಮೆಲ್ಲರ ಬದುಕಿಗೆ ಆಸರೆಯಂತೆ…

ದುಡಿದವರೆಲ್ಲ ಎಂದೆಂದೂ ಶಕ್ತಿಧಾಮಕೆ…ನಡೆವರೆಲ್ಲರ ಎಂದೆಂದೂ ಶಕ್ತಿಧಾಮಕೆ…

ಇದು ಪುನೀತ್ ನುಡಿನಮನ ಕಾರ್ಯಕ್ರಮದಲ್ಲಿ ಶಕ್ತಿಧಾಮದಲ್ಲಿ ಆಸರೆ ಪಡೆಯುತ್ತಿರುವ ಮಕ್ಕಳು ಸಾಮೂಹಿಕವಾಗಿ ಒಟ್ಟಾಗಿ ಹಾಡಿದಂತಹ ಹಾಡು. ಇದು ಕೇವಲ ಹಾಡಲ್ಲ. ಅವರೆಲ್ಲರ ಹೃದಯದ ಮಾತು- ದೊಡ್ಮನೆ ಮೇಲೆ ಅವರಿಗಿರುವ ಪ್ರೀತಿ- ಗೌರವ- ಹೆಮ್ಮೆ- ವಿಶ್ವಾಸ- ನಂಬಿಕೆ- ಭರವಸೆಯನ್ನು ತುಂಬಿಕೊಂಡಿದ್ದ ಗೀತೆ ಇದು. ಈ ಹಾಡು ಅರಸು ಆರಾಧನೆಯಲ್ಲಿ ಮಕ್ಕಳು ಹಾಡುತ್ತಿದ್ದಾಗ ಕಣ್ಣಾಲಿಗೆಗಳು ಒದ್ದೆಯಾದ್ವು, ರಾಜರತ್ನ ಅಪ್ಪು ಮೇಲಿದ್ದ ಪ್ರೀತಿ ಮತ್ತು ಗೌರವ ಒಂದು ತೂಕ ಹೆಚ್ಚಾಯ್ತು. ನಮ್ಮ ಅಪ್ಪು ನಮಗೆ ಬೇಕು ಎಂದು ಹಠ ಹಿಡಿದುಕೊಳ್ಳುವಂತಾಯ್ತು. ಆದರೆ ಏನ್ಮಾಡೋದು ಕ್ರೂರ ವಿಧಿ ರಾಜಕುಮಾರನ ಹೃದಯ ವೈಶ್ಯಾಲ್ಯತೆಯನ್ನು ನೋಡಿ ಅಸೂಹೆ ಪಟ್ಟು ಕಿತ್ಕೊಂಡಿದ್ದಾನೆ. ಅವನೇ ಬೆಟ್ಟದ ಹೂ ನ ಭೂಮಿಗೆ ಮತ್ತೆ ವಾಪಾಸ್ ಕಳುಹಿಸಿಕೊಡಬೇಕು. ದೊಡ್ಮನೆಯಲ್ಲಿ ಅಪ್ಪು ಮತ್ತೆ ಹುಟ್ಟಿ ಬರಬೇಕು.
ಇದೇ ಕೋಟಿ ಮಂದಿಯ ಕೊನೆಯ ಆಸೆ

ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Related Posts

error: Content is protected !!