ಅಪ್ಪು ಕಲೆ- ಕಾರ್ಯವೈಖರಿ – ಸೇವೆ ಮುನ್ನಡೆಸೋಣ ಅಂದ್ರು ದರ್ಶನ್!

ಕನ್ನಡ ಚಿತ್ರರಂಗದ ಧ್ರುವ ತಾರೆ, ದೊಡ್ಮನೆ ನಂದಾದೀಪ, ಅಭಿಮಾನಿಗಳ ಆರಾಧ್ಯ ದೈವ ಅಪ್ಪು ಅಗಲಿ ಇವತ್ತಿಗೆ ಹತ್ತೊಂಭತ್ತು ದಿನಗಳು ಕಳೆದಿವೆ. ಆದರೆ, ಅಪ್ಪು ಇನ್ನಿಲ್ಲದ ನೋವು ಮಾತ್ರ ಎಲ್ಲರಿಗೂ ದೊಡ್ಡ ಆಘಾತ ನೀಡಿದೆ. ಅಗಲಿದ ಅಪ್ಪುಗೆ ಕನ್ನಡ ಚಿತ್ರರಂಗದ ವತಿಯಿಂದ ನುಡಿ ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸ್ಯಾಂಡಲ್ ವುಡ್ ಕಲಾವಿದರು ಸೇರಿದಂತೆ ಪರಭಾಷೆಯವರು ಆಗಮಿಸಿದ್ದರು. ಈ ವೇಳೆ ಮಾತನಾಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಾಹಿತ್ಯದ ಮೂಲಕ ಗಂಧದಗುಡಿಯ ಅರಸುನಾ ನೆನೆದರು.

ಕಾಣದ ಕೈಯಲಿ ಗೊಂಬೆಯು ನೀನು ಕಾಲದ ಎದುರಲಿ, ಕುರುಡನು ನೀನು, ಅರ್ಥವೇ ಆಗದ ಜಗದಲ್ಲಿ, ಅರ್ಥವ ಹುಡುಕಿದೆ ನೀನಿಲ್ಲಿ ಗೀಚಿದ ಬ್ರಹ್ಮ ಗೀಚುವ ಮುಂಚೆ, ಯೋಚಿಸಲೇ ಇಲ್ಲ ಹಣೆಯ ಮೇಲೆ ಕೆತ್ತಿದ ಮೇಲೆ ತಿದ್ದುವರು ಯಾರಿಲ್ಲ…

ಗೀತ ಸಾಹಿತಿ ವಿ.‌ನಾಗೇಂದ್ರ ಪ್ರಸಾದ್ ಅವರ ಬರೆದಂತಹ ಸಾಲುಗಳಿವು. ಅಪ್ಪು ಇಲ್ಲದ ಈ ಕ್ಷಣಕ್ಕೆ ಈ ಸಾಹಿತ್ಯದ ಸಾಲುಗಳು ಹೊಂದಿಕೆಯಾಗುತ್ತವೆ. ಅಂದ್ಹಾಗೇ, ಗೇಟ್ ಇಂದ ಆಚೆ ಹೋದವರು ಮತ್ತೆ ಬರ್ತೀವಿ ಎನ್ನುವ ನಂಬಿಕೆ ಇಲ್ಲ. ಎಷ್ಟು ನಿಮಿತ್ತ ಆಗೋದ್ವಿ‌ ನಾವು. ನಾವು ಈ‌ಕ್ಷಣ ಇದೀವೋ ಇಲ್ಲವೋ ಎನ್ನುವುದನ್ನು ಯೋಚನೆ ಮಾಡೋದಕ್ಕೆ ಆಗುತ್ತಿಲ್ಲ.‌ಆ ಬ್ರಹ್ಮ 47 ಅಂತ ಬರೆದ . ಆದರೆ ಅವನ ಕೈಯ್ಯಲ್ಲಿ ತಿದ್ದೋಕೆ‌ ಆಗಲಿಲ್ಲವೇನೋ ಅಪ್ಪು ಆಯಸ್ಸನ್ನು. ಯಾಕಂದ್ರೆ ಇನ್ನೂ ಜೀವನ ಇತ್ತು.

ಚಿತ್ರರಂಗದಲ್ಲಾಗಲಿ, ಪ್ರತಿಯೊಂದರಲ್ಲಿ ಸಾಧನೆ ಮಾಡುವುದು ಬಹಳಷ್ಟಿತ್ತು. ಅವರ ಮಕ್ಕಳನ್ನು ನೋಡಿದಾಗ ಅನ್ಸುತ್ತೆ ಅಪ್ಪು ಇನ್ನೂ ಮಾಡಬೇಕಾಗಿದ್ದು ಬಹಳ ಇತ್ತು ಅಂತ. ಆದರೆ ಏನ್ ಮಾಡೋದು ವಿಧಿ ಕ್ರೂರಿಯಾಗಿ ಪವರ್ ಸ್ಟಾರ್ ನ ಕಿತ್ಕೊಂಡು ಬಿಟ್ಟ. ಇನ್ಮೇಲೆ ನಾವು ಅವರ ನೆನಪಲ್ಲಿ, ಅವರು ನಡೆದ ಹಾದಿಯಲ್ಲಿ ಸಾಗುತ್ತಾ,
ಅಪ್ಪು ,ಕಾರ್ಯವೈಖರಿ ಕಲೆ ಸೇವೆ ಮುಂದುವರೆಸಿಕೊಂಡು ಹೋಗೋಣ…

Related Posts

error: Content is protected !!