ನಿರ್ಮಾಪಕ ರವಿ ಗರಣಿ ಅವರಿಗೆ ಸಿನಿಮಾ ನಿರ್ಮಾಣ ಹೊಸದಲ್ಲ, ಸಾಕಷ್ಟು ಸಿರಿಯಲ್ ಹಾಗು ಸಿನಿಮಾನಿರ್ಮಾಣದ ಅನುಭವದ ಮೂಲಕ’ ಗೋವಿಂದ ಗೋವಿಂದ’ ಸಿನಿಮಾದ ನಿರ್ಮಾಪಕರಲ್ಲಿ ಒಬ್ಬರಾಗಿದ್ದಾರೆ. ಅವರು ಸಿನಿಮಾ ಬಗ್ಗೆ ದೊಡ್ಡ ನಿರೀಕ್ಷೆ ಇದೆ..
‘ನಮ್ಮದು ಒಳ್ಳೆಯ ಸಿನಿಮಾ, ಹೆಚ್ಚು ಜನರಿಗೆ ನಮ್ಮ ಸಿನಿಮಾ ವಿಚಾರ ತಲುಪಿಸಬೇಕು’ ಎನ್ನುವ ಅವರು, ಪ್ರೇಕ್ಷಕರು ಈ ಸಿನಿಮಾ ಯಾಕೆ ನೊಡ್ಬೇಕು ಅಂದ್ರೆ, ಕೋರೋನಾ ಕಾಲದಲ್ಲಿ ಅವರಿಗೂ ಮನೆಯಲ್ಲಿಯೇ ಇದ್ದು ಬೇಜಾರಾಗಿದೆ. ಅವರಿಗೆ ಈಗ ಒಂದು ಮನರಂಜನೆ ಬೇಕು. ಅಂತಹ ಜನರಿಗೆ ಮನೆಯವರೆಲ್ಲ ಕುಳಿತು ಎಂಜಾಯ್ ಮಾಡಬಹುದಾದ ಸಿನಿಮಾ. ವಿತೌಟ್ ಕಟ್ಸ್, ಬಿಪ್ಸ್ ಕೂಡ ಇಲ್ಲ. ಶುದ್ದವಾದ ಮನರಂಜನೆ ಕೊಡುವಂತಹ ಸಿನಿಮಾ. ಹಾಗಾಗಿ ಪ್ರೇಕ್ಷಕರು ಈ ಸಿನಿಮಾ ನೋಡ್ಬೇಕು ಅನ್ನೋದು ನನ್ನಮನವಿ ಅಂತಾರೆ ನಿರ್ಮಾಪಕ ರವಿ.ಆರ್.ಗರಣಿ.
ಚಿತ್ರಕ್ಕೆ ಬಂಡವಾಳ ಹಾಕಿರುವ ಮೂವರು ನಿರ್ಮಾಪಕರ ಪೈಕಿನಿರ್ಮಾಪಕ ಕಿಶೋರ್ ಮಧುಗಿರಿ, 30 ವರ್ಷದಿಂದ ವಿತರಣೆ ವಲಯದಲ್ಲಿದ್ದಾರೆ. ಇದೇ ಮೊದಲ ಬಾರಿಗೆ ಗೋವಿಂದ ಗೋವಿಂದ ಮೂಲಕ ಸಿನೆಮಾ ನಿರ್ಮಾಣಕ್ಕೆ ಬಂದಿದ್ದಾರೆ. ಅವರ ಪ್ರಕಾರ ಇದುಪಕ್ಕಾ ಪ್ಯಾಮಿಲಿ ನೋಡುವಂತಹ ಸಿನಿಮಾ.’
ಇಲ್ಲಿ ಫಸ್ಟ್ ನೈಟ್ ಇಲ್ಲ-ಕಾಂಟ್ರವರ್ಸಿಯೂ ಇಲ್ಲ! ಹಾಗೆಯೇ ಶೈಲೇಂದ್ರಬಾಬು, ‘ನಮ್ಮ ಸಿನಿಮಾದಲ್ಲಿ ಫಸ್ಟ್ನೈಟ್ ಇಲ್ಲ. ಕಾಂಟ್ರವರ್ಸಿ ಇಲ್ಲ. ಒಳ್ಳೆಯ ಕತೆ ಇರುವ ಸುಂದರ ಸಿನಿಮಾ’ ಎನ್ನುತ್ತಾರೆ.’ಗೋವಿಂದ ಗೋವಿಂದ’ ಒಂದೊಳ್ಳೆಯ ಚಿತ್ರ. ನಾನು ಚಿತ್ರರಂಗದಲ್ಲಿ ಮೂರು ದಶಕಗಳಿಂದ ಇದ್ದೇನೆ. ಒಂದು ಸಂಪೂರ್ಣ ಹಾಸ್ಯ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದೇನೆ. ತುಂಬಾ ಗ್ಯಾಪ್ ನಂತರ ನನ್ನ ನಟನೆಯ ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ಹಾಸ್ಯಕ್ಕೆ ಕೊರತೆ ಇಲ್ಲ. ಹೀಗಾಗಿ ಚಿತ್ರ ಎಲ್ಲರಿಗೂ ಇಷ್ಟವಾಗುತ್ತದೆಂಬ ನಂಬಿಕೆ ಇದೆ. ಹಾಗೂ ಮೊದಲ ಬಾರಿಗೆ ಒಂದು ಸಿನಿಮಾವನ್ನು ಬೇರೆ ಭಾಷೆಗಳಿಗೆ ಡಬ್ ಮಾಡಿ, ಒಟ್ಟಿಗೆ ಬಿಡುಗಡೆ ಮಾಡುತ್ತಿದ್ದೇನೆ. ಏಕಕಾಲದಲ್ಲಿ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ತೆರೆಗೆ ಬರುತ್ತಿದೆ ಎನ್ನುತ್ತಾರೆ ಶೈಲೇಂದ್ರ ಬಾಬು
ನಿರ್ಮಾಪಕ ಶೈಲೇಂದ್ರ ಬಾಬು ಪುತ್ರ ಸುಮನ್ ಶೈಲೇಂದ್ರ ಇದೇ ಮೊದಲು ಪಕ್ಕಾ ಹಾಸ್ಯ ಪ್ರಧಾನ ಕಥಾ ಹಂದರ ‘ ಗೋವಿಂದ ಗೋವಿಂದ ‘ ಚಿತ್ರದ ಮೂಲಕ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಇದೇ ವಾರ ಅಂದರೆ, ನವೆಂಬರ್ 26ಕ್ಕೆ ಈ ಚಿತ್ರ ರಾಜ್ಯಾ ದ್ಯಂತ ನೂರಾರು ಚಿತ್ರ ಮಂದಿರಗಳಿಗೆ ಬಲಗಾಲಿಟ್ಟು ಆಗಮಿಸುತ್ತಿರುವ ಸಿನಿಮಾ ಈಗಾಗಲೇ ಸಾಕಷ್ಟು ಕುತೂಹಲ ಕೆರಳಿಸಿದೆ….
ತಿಲಕ್ ಚೊಚ್ಚಲ ನಿರ್ದೇಶನದ ಈ ಚಿತ್ರದಲ್ಲಿ ಸುಮಂತ್ ಶೈಲೇಂದ್ರ, ಭಾವನಾ, ರೂಪೇಶ್ ಶೆಟ್ಟಿ, ಕವಿತಾ ಗೌಡ ಪ್ರಧಾನ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.ತಿಳಿ ಹಾಸ್ಯದ ಕಥೆಯೊಂದಿಗೆ ನೋಡುಗನ ಮನಸನ್ನೇ ಹಗುರಗೊಳಿಸುವ ಈ ಚಿತ್ರಕ್ಕೆ ನಿರ್ಮಾಪಕರು ಮಾತ್ರ ಭರ್ಜರಿ ತೂಕದವರೇ ಹೌದು. ಹಿರಿಯ ನಿರ್ಮಾಪಕ ಶೈಲೇಂದ್ರ ಬಾಬು, ಹಿರಿಯ ನಿರ್ದೇಶಕ ರವಿ ಗರಣಿ ಮತ್ತು ಮಧುಗಿರಿಯ ಶಾಂತಲಾ ಚಿತ್ರಮಂದಿರದ ಮಾಲೀಕರಾದ ಕಿಶೋರ್ ಮಧುಗಿರಿ ಅವರು ಈ ಚಿತ್ರದ ನಿರ್ಮಾಣಕ್ಕೆ ಬಂಡವಾಳ ಹಾಕಿದವರು.
ಎಂಟ್ರಿಯೇ ಬೆಸ್ಟ್ ಎನ್ನುವಂತೆ ಚಿತ್ರದ ಶೀರ್ಷಿಕೆಯೇ ಇಲ್ಲಿ ವಿಶೇಷ. ಗೋವಿಂದ ಗೋವಿಂದ ಎನ್ನುವ ಟೈಟಲ್ ಗೆ ‘ಹುಂಡಿ ನಮ್ದು, ಕಾಸು ನಿಮ್ದು’ ಎನ್ನುವ ಟ್ಯಾಗ್ ಲೈನ್ ನೀಡಿದೆ ಚಿತ್ರ ತಂಡ . ಒಂದು ಹಾಸ್ಯ ಪ್ರಧಾನ ಕಂಥಾ ಹಂದರದ ಕಥೆಯ ಜತೆಗೆ ನಿರ್ಮಾಣ , ನಿರ್ದೇಶನ ಹಾಗೂ ಕಲಾವಿದರ ಮೂಲಕ ಸಾಕಷ್ಟು ಸುದ್ದಿಯಲ್ಲಿರುವ ಈ ಚಿತ್ರವು ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಅದೇ ನಂಬಿಕೆ ಮೇಲೆ ಚಿತ್ರ ನೋಡಲು ಚಿತ್ರ ಮಂದಿರಕ್ಕೆ ಬರುವ ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡುವುದು ಅಷ್ಟೇ ಖಚಿತ ಎನ್ನುವ ವಿಶ್ವಾಸ ಚಿತ್ರ ತಂಡದ್ದು.
ಬಿಡುಗಡೆಯ ಈ ಸಂದರ್ಭದಲ್ಲಿ ಚಿತ್ರದ ವಿಶೇಷತೆ ಕುರಿರು ಮಾತನಾಡುವ ನಿರ್ದೇಶಕ ತಿಲಕ್, ‘ಮೊದಲ ಬಾರಿಗೆ ನಿರ್ದೇಶನ ಮಾಡಿದ್ದೇನೆ, ಒಪ್ಪಿಸಿಕೊಳ್ಳಿ’ ಎಂದರು. ಮುಂದಿನ ಅವರ ಮಾತು, ಚಿತ್ರದ ಕಥೆಯ ವಿಶೇಷತೆ ಕುರಿತದ್ದು..’ ಗೋವಿಂದ ಗೋವಿಂದ ಅಂದಾಕ್ಷಣ ಇದೊಂದು ಭಕ್ತಿಯ ಕುರಿತ ಕಥೆಯೇ ಅಂತೆಂದುಕೊ ಳ್ಳುವುದು ಸಹಜ. ಆದರೆ ಇದು ಪಕ್ಕಾ ಹಾಸ್ಯ ಪ್ರಧಾನ ಚಿತ್ರ. ಎಲ್ಲೂ ಆಶ್ಲೀಲ ಎನಿಸುವ ದೃಶ್ಯಗಳಿಲ್ಲ, ಅಂತಹ ಸಂಭಾಷಣೆಯೂ ಇಲ್ಲ. ಫ್ಯಾಮಿಲಿ ಸಮೇತ ಕುಳಿತುಕೊಂಡು ನೋಡುವ ಪಕ್ಕಾ ಫ್ಯಾಮಿಲಿ ಕಥಾ ಹಂದರದ ಚಿತ್ರ. ಪ್ರತಿಯೊಂದು ದೃಶ್ಯ, ಪ್ರತಿಯೊಂದು ಪಾತ್ರವೂ ಇಲ್ಲಿ ಅಷ್ಟೇ ಮುಖ್ಯ. ಯಾವುದು ಅನವಶ್ಯಕ ಎಂದೆಸೊದಿಲ್ಲ. ಈಗಿನ ಯಂಗರ್ ಜನರೇಷನ್ ಗೆ ಏನೆಲ್ಲಮನರಂಜನೆ ಬೇಕೋ ಅದೆಲ್ಲ ಇಲ್ಲಿದೆ. ಪೈಸಾ ವಸೂಲ್ ಅಂತಾರಲ್ಲ ಅಂತಹ ಸಿನಿಮಾ ಇದು’ ಎನ್ನುತ್ತಾರೆ ತಿಲಕ್.
ಕವಿತಾ ಗೌಡ, ಸುಮಂತ್
ನಾಯಕ ನಟ ಸುಮಂತ್ ಶೈಲೇಂದ್ರ ಈಗ ಹೊಸ ಅವತಾರದಲ್ಲಿ ತೆರೆ ಮೇಲೆ ಕಾಣಿಸಿಕೊಳ್ಳುವ ತವಕದಲ್ಲಿದ್ದಾರೆ. ದಿಲ್ವಾಲಾ’ ಸಿನಿಮಾ ಸೇರಿದಂತೆ ಯಂಗ್ ಆಂಡ್ ಎನರ್ಜಿಟಿಕ್ ಆ್ಯಕ್ಷನ್ ಸಿನಿಮಾಗಳ ಮೂಲಕವೇ ಚಿತ್ರರಂಗಕ್ಕೆ ಬಂದ ಸುಮಂತ್ ಶೈಲೇಂದ್ರ ಈಗ ರೊಮ್ಯಾಂಟಿಕ್ ಥ್ರಿಲ್ಲರ್, ಕಾಮಿಡಿ ‘ಗೋವಿಂದ ಗೋವಿಂದ’ ಚಿತ್ರದ ಮೂಲಕ ಮತ್ತೆ ಬೆಳ್ಳಿತೆರೆ ಮೇಲೆ ಬರುತ್ತಿದ್ದಾರೆ. ‘ನನ್ನ ಸಿನಿ ಜರ್ನಿಯಲ್ಲಿ ಇದೊಂದು ವಿಶೇಷ ವಾದ ಸಿನಿಮಾ. ಅದಕ್ಕೆ ಕಾರಣ ಈ ಚಿತ್ರದ ಕಥಾ ಹಂದರ. ಇದುವರೆಗೂ ಆ್ಯಕ್ಷನ್, ಥ್ರಿಲ್ ಎಲಿಮೆಂಟ್ಸ್ ಒಳಗೊಂಡ ಸಿನಿಮಾಮಾಡಿದ್ದೆ . ಫಸ್ಟ್ ಟೈಮ್ ಪಕ್ಕಾ ಕಾಮಿಡಿ ಕಿಕ್ ಸಿನಿಮಾ ಮಾಡಿದ್ದೇನೆ. ಸಾಮಾನ್ಯವಾಗಿ ಕುಣಿಯೋದು, ಆ್ಯಕ್ಷನ್ ಮಡೋದು ಸುಲಭ. ಆದರೆ ನಗಿಸೋದು ತುಂಬಾ ಕಷ್ಟ. ಅಂತಹ ಕಷ್ಟದ ಕೆಲಸವನ್ನು ಫಸ್ಟ್ ಟೈಮ್ ನಾನಿಲ್ಲಿ ನಿಭಾಯಿಸಿದ್ದೇನೆ ಎಂದರು.
ರವಿ.ಆರ್.ಗರಣಿ, ನಿರ್ಮಾಪಕರು
ಹಾಗೆಯೇ ಪ್ರತೀ ಸಿನಿಮಾ ಬಿಡುಗಡೆಯಾ ಗುವಾಗಲೂ ಜೊತೆಗೊಂದು ದೊಡ್ಡ ಸಿನಿಮಾ ರಿಲೀಸ್ ಆಗುತ್ತದೆ. ಆದರೂ ಜನ ನನ್ನ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಈ ಸಲವೂ ಪ್ರೇಕ್ಷಕರು ಸಿನಿಮಾ ನೋಡಿ ಗೆಲ್ಲಿಸುತ್ತಾರೆ ಎಂಬ ನಂಬಿಕೆ ಇದೆ’ ಎನ್ನುತ್ತಾರೆ ಸುಮನ್ ಶೈಲೇಂದ್ರ.ಚಿತ್ರದಲ್ಲಿ ಸುಮಂತ್ ಕಾಲೇಜ್ ಹುಡುಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ನಟ ರೂಪೇಶ್ ಶೆಟ್ಟಿ ಇಲ್ಲೊಂದು ವಿಶೇಷ ಪಾತ್ರಕ್ಮೆ ಬಣ್ಣ ಹಚ್ವಿದ್ದಾರಂತೆ, ‘ಇದು ಒತ್ತಡ ಮರೆಸುವ ಸಿನೆಮಾ. ಕುಟುಂಬ ಸಮೇತರಾಗಿ ನೋಡಿ ಆನಂದಿಸಬಹುದು’ ಎಂದರು. ಹಾಗೆಯೇ ನಟಿ ಕವಿತಾ, ಕಲಾವಿದರಾದ ಪವನ್, ವಿಜಯ್ ಚೆಂಡೂರ್, ಕಾರ್ಯಕಾರಿ ನಿರ್ಮಾಪಕ ಜನಾರ್ದನ್ ಚಿತ್ರದ ಕುರಿತು ವಿಶ್ವಾಸ ವ್ಯಕ್ತಪಡಿಸಿದರು. ಸಂಗೀತ ನಿರ್ದೇಶಕ ಹಿತನ್ ಹಾಸನ್, ‘ಈ ಸಿನೆಮಾ ನೋಡುತ್ತಾ ನಿರಾಳರಾಗಬಹುದು’ ಎಂದು ಭರವಸೆ ನೀಡುತ್ತಾರೆ.
ಶರಣ್ ಈಗ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳೋಕೆ ರೆಡಿಯಾಗಿದ್ದಾರೆ. ಹೌದು, ಪುಷ್ಕರ್ ಫಿಲಂಸ್ ಬ್ಯಾನರ್ನಲ್ಲಿ ಪುಷ್ಕರ್ ಮಲ್ಲಿಕಾರ್ಜುನ್ ನಿರ್ಮಿಸಿರುವ “ಅವತಾರ ಪುರುಷ” ಡಿಸೆಂಬರ್ 10ರಂದು ಬಿಡುಗಡೆಯಾಗುತ್ತಿದೆ. ಈ ಚಿತ್ರಕ್ಕೆ ಸಿಂಪಲ್ ಸುನಿ ನಿರ್ದೇಶಕರು. ಈಗಾಗಲೇ ಜೋರು ಸದ್ದು ಮಾಡಿರುವ ಚಿತ್ರ, ನೋಡುವ ಕುತೂಹಲವನ್ನು ಮೂಡಿಸಿದೆ…
ನಾಯಕ ಶರಣ್ ಇದೇ ಮೊದಲ ಬಾರಿಗೆ ಈ ಚಿತ್ರದಲ್ಲಿ ವಿಶೇಷ ಪಾತ್ರ ಮಾಡಿದ್ದಾರಂತೆ. ಅವರು ಆ ಕುರಿತು ಹೇಳುವುದಿಷ್ಟು. “ನಾನು ಈವರೆಗೂ ಈ ರೀತಿಯ ಚಿತ್ರ ಮಾಡಿಲ್ಲ. ನನ್ನ ಈವರೆಗಿನ ಸಿನಿ ಪಯಣದಲ್ಲೇ ದೊಡ್ಡ ಬಜೆಟ್ ನ ಚಿತ್ರವಿದು. ಇಂತಹ ಅದ್ದೂರಿ ಚಿತ್ರ ನಿರ್ಮಾಣಕ್ಕೆ ಮುಂದಾದ ನಿರ್ಮಾಪಕ ಪುಷ್ಕರ್ ಅವರ ಧೈರ್ಯ ಮೆಚ್ಚಲೇಬೇಕು. ಇನ್ನೂ ನಿರ್ದೇಶಕ ಸಿಂಪಲ್ ಸುನಿ, ಅವರ ಹೆಸರಿನಲ್ಲ ಮಾತ್ರ ಸಿಂಪಲ್ ಇಲ್ಲ. ಸಿಂಪಲೆಸ್ಟ್ ಸುನಿ ಅವರು. ಅವರ ಕಾರ್ಯವೈಖರಿ ಬಗ್ಗೆ ಎಷ್ಟು ಹೇಳಿದರು ಕಡಿಮೆ. ನಾಯಕಿ ಆಶಿಕಾ ರಂಗನಾಥ್ ಸೇರಿದಂತೆ ಈ ಚಿತ್ರದಲ್ಲಿ ನಟಿಸಿರುವ ಎಲ್ಲಾ ಕಲಾವಿದರ ಅಭಿನಯ ಸೊಗಸಾಗಿ ಮೂಡಿಬಂದಿದೆ. ನಾನು ಸುಮಾರು ಹತ್ತು ಅವತಾರಗಳಲ್ಲಿ ಕಾಣಿಸಿಕೊಂಡಿದ್ದೇನೆ. ಡಿಸೆಂಬರ್ ಹತ್ತರಂದು “ಅವತಾರ ಪುರುಷ” ನ ಆಗಮನವಾಗಲಿದೆ ನೋಡಿ ಹಾರೈಸಿ ಎಂದರು ಶರಣ್.
ನಟಿ ಆಶಿಕಾ ರಂಗನಾಥ್ ಅವರಿಗೆ ಈ ಸಿನಿಮಾ ವಿಶೇಷವಂತೆ. ಇದು ಎಲ್ಲರ ಜೊತೆ ಉತ್ತಮ ಬಾಂಧವ್ಯ ಬೆಸೆದ ಸಿನಿಮಾ. ಈ ತಂಡದಲ್ಲಿ ಎಲ್ಲರೂ ಒಂದೇ ಕುಟುಂಬದವರ ಹಾಗೆ ಇದ್ದೆವು. ಶರಣ್ ಹಾಗೂ ಸುನಿ ಅವರ ಕಾಂಬಿನೇಶನಲ್ಲಿ ಈ ಚಿತ್ರ ಹೇಗೆ ಬರಬಹುದು? ಎಂಬ ಕುತೂಹಲ ಇದೆ. ನಾನು ಚಿತ್ರ ನೋಡುವ ಕಾತುರದಲ್ಲಿದ್ದೀನಿ. ನಿರ್ದೇಶಕ ಸುನಿ ಹಾಗೂ ನಿರ್ಮಾಪಕ ಪುಷ್ಕರ್ ಅವರ ಸರಳತೆ ಬಗ್ಗೆ ಎಷ್ಟು ಹೇಳಿದರು ಕಡಿಮೆ. ಒಟ್ಟಿನಲ್ಲಿ ಉತ್ತಮ ಸಿನಿಮಾದಲ್ಲಿ ಅಭಿನಯಿಸಿದ ತೃಪ್ತಿಯಿದೆ. ಜನರು ಕೂಡ ಮೆಚ್ಚಿ ಕೊಳ್ಳುತ್ತಾರೆ ಎಂಬ ಭರವಸೆಯಿದೆ ಎಂದರು ಆಶಿಕಾ ರಂಗನಾಥ್.
ನಿರ್ದೇಶಕ ಸುನಿ ಕೂಡ ಅವತಾರ ಕುರಿತು ಮಾತಿಗಿಳಿದರು. “ನಾನು ವೆಬ್ ಸಿರೀಸ್ ಗೆ ಅಂತಾ ಮಾಡಿದ ಕಥೆಯಿದು. ಪುಷ್ಕರ್ ಅವರು ಈ ಕಥೆ ಕೇಳಿ, ವೆಬ್ ಸಿರೀಸ್ ಬೇಡ . ಸಿನಿಮಾ ಮಾಡೋಣ ಅಂದರು. ಎರಡು ಭಾಗಗಳಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ಮೊದಲ ಭಾಗ ಡಿಸೆಂಬರ್ 10ರಂದು ಬಿಡುಗಡೆಯಾಗಲಿದೆ. ಎರಡನೇ ಭಾಗದ ಚಿತ್ರೀಕರಣ ಬಹುತೇಕ ಮುಗಿದಿದೆ. ನಿರ್ದೇಶಕನಿಗೆ ಸಿನಿಮಾ ಬಗ್ಗೆ ತನ್ನದೇ ಆದ ಒಂದು ಕಲ್ಪನೆ ಇರುತ್ತದೆ. ಆದರೆ ಆ ಕಲ್ಪನೆಗೂ ಮೀರಿ ” ಅವತಾರ ಪುರುಷ ” ಚಿತ್ರ ಬಂದಿದೆ. ಶರಣ್ – ಆಶಿಕಾ ರಂಗನಾಥ್ ಅವರ ಜೋಡಿ ನೋಡುಗರನ್ನು ಮೋಡಿ ಮಾಡಲಿದೆ. ಶ್ರೀನಗರ ಕಿಟ್ಟಿ, ಸಾಯಿಕುಮಾರ್, ಭವ್ಯ, ಸುಧಾರಣಿ ಸೇರಿದಂತೆ ಇತರರು ನಟಿಸಿದ್ದಾರೆ. ವಿಜಯ್ ಚೆಂಡೂರ್ ನಟನೆಯೊಂದಿಗೆ ಸ್ಕ್ರಿಪ್ಟ್ ವರ್ಕ್ ನಲ್ಲೂ ನೆರವಾಗಿದ್ದಾರೆ. ಅರ್ಜುನ್ ಜನ್ಯ ಅವರ ಸಂಗೀತ ನಿರ್ದೇಶನದಲ್ಲಿ ಹಾಡುಗಳು ಉತ್ತಮವಾಗಿ ಮೂಡಿಬಂದಿದೆ. ವಿಲಿಯಂ ಡೇವಿಡ್ ಅವರ ಛಾಯಾಗ್ರಹಣ “ಅವತಾರ ಪುರುಷ” ನ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ ಎಂದರು ನಿರ್ದೇಶಕ ಸಿಂಪಲ್ ಸುನಿ.
ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನ್ ಮಾತನಾಡಿ, “ನನ್ನ ಪ್ರಕಾರ “ಆಪ್ತಮಿತ್ರ” ನಂತರ ಕನ್ನಡದಲ್ಲಿ ಬರುತ್ತಿರುವ ಸಿನಿಮಾ “ಅವತಾರ ಪುರುಷ”. ಹತ್ತು, ಹದಿನೈದು ವರ್ಷಗಳಲ್ಲಿ ಈ ರೀತಿಯ ಸಿನಿಮಾ ಬಂದಿಲ್ಲ ಅನಿಸುತ್ತದೆ. ನಾಯಕ ಶರಣ್, ನಾಯಕಿ ಆಶಿಕಾ ರಂಗನಾಥ್ ಹಾಗೂ ನಿರ್ದೇಶಕ ಸಿಂಪಲ್ ಸುನಿ ಸೇರಿದಂತೆ ಎಲ್ಲಾ ಕಲಾವಿದರ ಸಹಕಾರದಿಂದ ಈ ಚಿತ್ರ ಉತ್ತಮವಾಗಿ ಮೂಡಿಬಂದಿದೆ. ಡಿಸೆಂಬರ್ ಹತ್ತರಂದು ಸುಮಾರು 350 ಕ್ಕೂ ಅಧಿಕ ಚಿತ್ರಮಂದಿರದಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ. ಭಾಗ 1 ಬಿಡುಗಡೆಯಾದ ನೂರನೇ ದಿನಕ್ಕೆ ಸರಿಯಾಗಿ ಈ ಚಿತ್ರದ ಎರಡನೇ ಭಾಗ ಕೂಡ ಬಿಡುಗಡೆಯಾಗಲಿದೆ ಎಂದರು ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನ.
ಗುರುರಾಜ ಕುಲಕರ್ಣಿ ನಿರ್ಮಾಪಕರು ಅನ್ನೋದು ಎಲ್ಲರಿಗೂ ಗೊತ್ತಿದೆ. ಈಗಾಗಲೇ, ಈಗಾಗಲೇ “ಆಕ್ಸಿಡೆಂಟ್” ಮತ್ತು “ಲಾಸ್ಟ್ ಬಸ್” ಎಂಬ ಸದಭಿರುಚಿಯ ಸಿನಿಮಾಗಳನ್ನು ಕೊಟ್ಟವರು. ಸಿನಿಮಾ ಮೇಲಿನ ಪ್ರೀತಿ ಇರುವುದರಿಂದಲೇ ಅವರೀಗ ಮತ್ತೊಂದು ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈ ಬಾರಿ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಹೌದು, ಇದೇ ಮೊದಲ ಸಲ ಗುರುರಾಜ ಕುಲಕರ್ಣಿ ಅವರು ನಿರ್ದೇಶಕರಾಗಿದ್ದಾರೆ. ಅವರೊಂದಿಗೆ ಜಿ 9 ಕಮ್ಯುನಿಕೇಷನ್ಸ್ ಮೀಡಿಯಾ ಅಂಡ್ ಎಂಟರ್ಟೈನ್ಮೆಂಟ್ಸ್ ಬ್ಯಾನರ್ನಡಿ ಒಂದಷ್ಟು ಸಮಾನ ಗೆಳೆಯರ ಜೊತೆಗೂಡಿ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಅಂದಹಾಗೆ, ಅವರ ಚೊಚ್ಚಲ ನಿರ್ದೇಶನದ ಸಿನಿಮಾ “ಅಮೃತ ಅಪಾರ್ಟ್ಮೆಂಟ್ಸ್” ನವೆಂಬರ್ ೨೬ರಂದು ರಾಜ್ಯಾದ್ಯಂತ ತೆರೆಗೆ ಬರುತ್ತಿದೆ.
ಈಗಾಗಲೇ “ಅಮೃತ್ ಅಪಾರ್ಟ್ಮಮೆಂಟ್ಸ್” ಚಿತ್ರ ಶೀರ್ಷಿಕೆಯಿಂದ ಹಿಡಿದು, ಹಾಡು ಮತ್ತು ಟ್ರೇಲರ್ ಮೂಲಕ ಭರ್ಜರಿ ಕುತೂಹಲ ಮೂಡಿಸಿದೆ. “ಶುರುವಾಗಬೇಕು ಮತ್ತೊಮ್ಮೆ ನಮ್ಮ ಒಲವು” ಎಂಬ ಪ್ರೇಮಗೀತೆ ಕೂಡ ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿದೆ. ಅಂದಹಾಗೆ, ಚಿತ್ರದ ಶೀರ್ಷಿಕೆ ಕೇಳಿದವರಿಗೆ ಎಲ್ಲೋ ಒಂದು ಕಡೆ ಕುತೂಹಲ ಮೂಡಿಸುತ್ತದೆ. ಬಹುತೇಕರಿಗೆ ಅದೊಂದು ಅಪಾರ್ಟ್ಮೆಂಟ್ನಲ್ಲಿ ನಡೆಯೋ ಕಥೆ ಇರಬಹುದಾ ಎಂಬ ನೂರೆಂಟು ಪ್ರಶ್ನೆಗಳೂ ಹುಟ್ಟಿಕೊಳ್ಳುತ್ತವೆ. ಆದರೆ, ಅದು ನಿಜಾನಾ ಎಂಬ ಪ್ರಶ್ನೆಗೆ ಸಿನಿಮಾ ನೋಡಲೇಬೇಕು. ಇದೊಂದು ಬೆಂಗಳೂರಿಗರ ಕಥೆ. ಅದರಲ್ಲೂ ಐಟಿಬಿಟಿ ಕಂಪೆನಿಯಲ್ಲಿ ಕೆಲಸ ಮಾಡುವ ಮಂದಿಯ ತಳಮಳ, ತೊಳಲಾಟ ಮತ್ತು ಒಂದಷ್ಟು ಗೊಂದಲಗಳ ನಡುವೆ ಸಾಗುವ ಕಥೆ. ಸಿನಿಮಾ ಸಸ್ಪೆನ್ಸ್ ಜೊತೆ ಥ್ರಿಲ್ಲರ್ ಆಗಿಯೂ ಸಾಗುತ್ತದೆ. ಇಲ್ಲಿ ಹಲವು ಪಾತ್ರಗಳಿದ್ದರೂ, ಪ್ರತಿ ಪಾತ್ರಗಳಿಗೂ ತನ್ನದೇ ಆದಂತಹ ಪ್ರಾಮುಖ್ಯತೆ ಇದೆ ಎಂಬುದು ನಿರ್ದೇಶಕ ಗುರುರಾಜ ಕುಲಕರ್ಣಿ ಅವರ ಮಾತು.
ಇಲ್ಲಿ ಎಲ್ಲಾ ವರ್ಗಕ್ಕೂ ತಲುಪುವ ಒಂದು ಸಂದೇಶವಿದೆ ಎನ್ನುವ ನಿರ್ದೇಶಕರು, ಕಾಮಿಡಿ, ಸಸ್ಪೆನ್ಸ್, ಥ್ರಿಲ್ಲರ್ ಅಂಶಗಳು ಇಲ್ಲಿವೆ. ತಾರಕ್ ಪೊನ್ನಪ್ಪ ಅವರಿಲ್ಲಿ ಹೀರೋ ಆಗಿದ್ದಾರೆ. ಬಾಲಾಜಿ ಮನೋಹರ್ ಚಿತ್ರದಲ್ಲಿ ಪ್ರಮುಖ ಪಾತ್ರಧಾರಿಯಾಗಿದ್ದಾರೆ. ಊರ್ವಶಿ ಗೋರ್ವಧನ್ ನಾಯಕಿ. ಮಾನಸ ಜೋಷಿ ಇಲ್ಲೊಂದು ವಿಶೇಷ ಪೊಲೀಸ್ ಅಧಿಕಾರಿ [ಪಾತ್ರ ಮಾಡಿದ್ದಾರೆ. ಸೀತಾ ಕೋಟೆ ವಕೀಲೆಯಾಗಿ ಕಾಣಿಸಿಕೊಂಡಿದ್ದಾರೆ. ಸಂಪತ್ ಕುಮಾರ್, ಮಾಲತೇಶ್, ಸಿತಾರಾ, ಜಗದೀಶ್ ಜಾಲಾ, ಅರುಣ ಮೂರ್ತಿ, ರಾಜು ನೀನಾಸಂ, ಶಂಕರ್ ಶೆಟ್ಟಿ ರಂಗಸ್ವಾಮಿ ಇತರರು ಕೂಡ ಚಿತ್ರದ ಹೈಲೈಟ್ ಎಂದು ವಿವರ ಕೊಡುತ್ತಾರೆ ಗುರುರಾಜ ಕುಲಕರ್ಣಿ.
ಸಿನಿಮಾದಲ್ಲಿ ಗಟ್ಟಿ ಕಥೆ ಇದೆ. ಅದಕ್ಕೆ ತಕ್ಕಂತಹ ನಟರೂ ಇದ್ದಾರೆ. ಎಲ್ಲರೂ ಸಿಕ್ಕಾಪಟ್ಟೆ ಹೈಟ್ ಇರೋ ಕಲಾವಿದರೇ. ಕ್ಯಾಮೆರಾಮೆನ್ಗೆ ಚಿತ್ರೀಕರಣ ವೇಳೆ ಕೊಂಚ ಸಮಸ್ಯೆ ಕಾಡಿದ್ದಂತೂ ನಿಜ. ಯಾಕೆಂದರೆ, ಒಬ್ಬರಿಗಿಂತ ಒಬ್ಬರು ಹೈಟ್ ಆಗಿದ್ದರಿಂದ ಸ್ವಲ್ಪ ಸೆರೆ ಹಿಡಿಯೋಕೆ ಹರಸಾಹಸ ಮಾಡಬೇಕಾಯಿತು. ಅದೇನೆ ಇದ್ದರೂ, ಕೊಟ್ಟ ಪಾತ್ರವನ್ನು ನಿಜಕ್ಕೂ ಅಚ್ಚುಕಟ್ಟಾಗಿಯೇ ನಿರ್ವಹಿಸಿದ್ದಾರೆ. ಸಾಮಾನ್ಯವಾಗಿ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಮಾಡುವಾಗ ಒಂದಷ್ಟು ತಯಾರಿ ಬೇಕು. ಅದರಲ್ಲೂ, ಒಳ್ಳೆಯ ಕಥೆ ಆಯ್ಕೆ ಮಾಡಿಕೊಳ್ಳಬೇಕು. ಅವೆಲ್ಲವನ್ನೂ ಈ ಚಿತ್ರಕ್ಕೆ ಅಳವಡಿಸಿಕೊಂಡಿದ್ದರಿಂದಲೇ ಚಿತ್ರ ನಾನು ನಿರೀಕ್ಷೆ ಮೀರಿದ್ದಕ್ಕಿಂತಲೂ ಚೆನ್ನಾಗಿ ಮೂಡಿಬಂದಿದೆ. ಇದು ನಗರದ ಜೀವನ ಕಥೆ. “ಅಮೃತ್ ಅಪಾರ್ಟ್ ಮೆಂಟ್ಸ್” ಅಂದರೆ ಹಕ್ಕಿಗೆ ತಕ್ಕಂತ ಗೂಡು ಎನ್ನಬಹುದು. ಈಗಾಗಲೇ ಬಿಡುಗಡೆ ಪೂರ್ವವಾಗಿ ನಮ್ಮ ಚಿತ್ರ ನೋಡಿರುವ ಕೆಲವು ಸ್ನೇಹಿತರು ಭರವಸೆಯ ಮಾತುಗಳಾಡಿದ್ದಾರೆ. ವಿಶೇಷವಾಗಿ ಹೆಣ್ಣು ಮಕ್ಕಳು ಮನಮುಟ್ಟುವಂತ ಅಭಿಪ್ರಾಯ ನೀಡಿದ್ದಾರೆ. ನಮ್ಮ ಚಿತ್ರವನ್ನು ಎಲ್ಲರು ನೋಡಿ ಹರಸಿ ಎಂದರು ಗುರುರಾಜ್ ಕುಲಕರ್ಣಿ.
ಚಿತ್ರದ ನಾಯಕ ತಾರಕ್ ಪೊನ್ನಪ್ಪ ಅವರಿಗೆ ಇಲ್ಲೊಂದು ಒಳ್ಳೆಯ ಪಾತ್ರ ಸಿಕ್ಕಿದೆಯಂತೆ. ಇದು ಬೆಂಗಳೂರಿಗರ ಕಥೆ. ಪ್ರತಿಯೊಬ್ಬರೂ ಸಿನಿಮಾ ನೋಡಿದಾಗ, ಫೀಲ್ ಆಗುತ್ತೆ. ಅಂಥದ್ದೊಂದು ಕಂಟೆಂಟ್ ಇಲ್ಲುಂಟು. ನವೆಂಬರ್ ೨೬ರಂದು ಚಿತ್ರ ಬಿಡುಗಡೆಯಾಗಲಿದೆ. ಎಲ್ಲರೂ ನೋಡಿ ಹರಸಿ ಎಂದ ಅವರು, ಇ ಎಂ ಐ ಮೂಲಕ ಮನೆಕೊಳ್ಳುವ ಮಧ್ಯಮವರ್ಗದ ದಂಪತಿಗಳ ಜೀವನದ ಕಥೆಯನ್ನು ನಿರ್ದೇಶಕರು ಈ ಚಿತ್ರದಲ್ಲಿ ಮನಮುಟ್ಟುವಂತೆ ತೋರಿದ್ದಾರೆ. ನಮ್ಮ ಚಿತ್ರಕ್ಕೆ ನಿಮ್ಮ ಬೆಂಬಲವಿರಲಿ ಎಂದರು ನಾಯಕ ತಾರಕ್ ಪೊನ್ನಪ್ಪ. ನಾಯಕಿ ಮಾನಸ ಜೋಷಿ ಅವರಿಗೂ ಇಲ್ಲಿ ಪೊಲೀಸ್ ಅಧಿಕಾರಿ ಪಾತ್ರ ಸಿಕ್ಕಿದೆಯಂತೆ. ಬಹಳ ದಿನಗಳಿಂದ ನನಗೆ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಆಸೆಯಿತ್ತು. ಆ ಆಸೆಯನ್ನು ನಿರ್ದೇಶಕ ಗುರುರಾಜ್ ಕುಲಕರ್ಣಿ ಪೂರ್ಣಗೊಳಿಸಿದ್ದಾರೆ. ಈ ರೀತಿಯ ಪಾತ್ರ ಸಿಕ್ಕಿದ್ದು ಖುಷಿ ಕೊಟ್ಟಿದೆ. ನಿರ್ದೇಶಕರು ಒಳ್ಳೆಯ ಕಥೆ ಮಾಡಿಕೊಂಡಿದ್ದಾರೆ. ಎಲ್ಲರಿಗೂ ಈ ಚಿತ್ರ ಇಷ್ಟವಾಗುತ್ತೆ ಅಂದರು ಮಾನಸಿ.
ನಟ ಬಾಲಾಜಿ ಮನೋಹರ್ ಅವರಿಗೆ ಒಂದೊಳ್ಳೆಯ ಸಿನಿಮಾದಲ್ಲಿ ನಟಿಸಿದ ಖುಷಿ ಇದೆಯಂತೆ. ಇದು ನಗರದಲ್ಲಿ ವಾಸಿಸುವ ದಂಪತಿಗಳ ಕಥೆ. ನಿರ್ದೇಶಕರು ಕಥೆ ಹೆಣೆದಿರುವ ರೀತಿ ಬಹಳ ಚೆನ್ನಾಗಿದೆ. ಎಲ್ಲರ ಅಭಿನಯವು ಸೊಗಸಾಗಿದೆ ಎಂದರು ಬಾಲಾಜಿ ಮನೋಹರ್. ಸೀತಾಕೋಟೆ, ಮಹಂತೇಶ್, ರಾಜ್ ಹಾಗು ಸಂಕಲನಕಾರ ಬಿ.ಎಸ್.ಕೆಂಪರಾಜ್ ಸಿನಿಮಾ ಕುರಿತು ಮಾತಾನಾಡಿದರು. ಮುನ್ನೂರು ಸಿನಿಮಾಗಳಿಗೆ ಸಂಕಲನ ಕಾರ್ಯ ಪೂರೈಸಿದ ಹಿನ್ನೆಲೆಯಲ್ಲಿ ಸಂಕಲನಕಾರ ಕೆಂಪರಾಜ್ ಅವರಿಗೆ ಚಿತ್ರತಂಡ ಗೌರವಿಸಿತು. ಚಿತ್ರಕ್ಕೆ ಎಸ್.ಡಿ.ಅರವಿಂದ ಸಂಗೀತ ನೀಡಿದ್ದಾರೆ.
ಯೋಗರಾಜ್ ಭಟ್ ಅಂದಾಕ್ಷಣ, ನೆನಪಾಗೋದೇ ಮಧುರ ಕಥೆಗಳು, ಅದರಲ್ಲೂ ಲವ್ಸ್ಟೋರಿಗೆ ಹೆಚ್ಚು ಒತ್ತು. ಸಣ್ಣದ್ದೊಂದು ಹೊಡೆದಾಟ ಬಡಿದಾಟ ಹೊರತುಪಡಿಸಿದರೆ, ಬರೀ ಮಾತು ಮತ್ತು ಪ್ರೀತಿಗೆ ಹೆಚ್ಚು ಒತ್ತು ಕೊಡುತ್ತಾರೆ. ಈಗ ಭಟ್ಟರು ಹೊಸದೊಂದು ಸಿನಿಮಾಗೆ ನಿರ್ದೇಶಕರು. ಆ ಚಿತ್ರಕ್ಕೆ “ಗರಡಿ” ಎಂದು ನಾಮಕರಣ ಮಾಡಿದ್ದಾರೆ. ಶೀರ್ಷಿಕೆ ಕೇಳಿದೊಡನೆ, ಇದೊಂದು ಪಕ್ಕಾ ಕುಸ್ತಿಮಯ ಸಿನಿಮಾ ಅನಿಸಬಹುದು. ಆದರೆ, ಇಲ್ಲೂ ಸಹ ಪ್ರೀತಿ ಗೀತಿ ಇತ್ಯಾದಿಗೇನೂ ಕೊರತೆ ಇರೋದಿಲ್ಲ ಬಿಡಿ…
ಗಾಳಿಪಟ–2 ಚಿತ್ರದ ನಂತರ, ನಿರ್ದೇಶಕ ಯೋಗರಾಜ್ ಭಟ್ “ಗರಡಿ” ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಸೌಮ್ಯ ಫಿಲಂಸ್ ಬ್ಯಾನರಿನಡಿಯಲ್ಲಿ ತಯಾರಾಗುತ್ತಿರುವ ಸಿನಿಮಾ ಇದು. ಅಂದಹಾಗೆ, ಈ ಚಿತ್ರಕ್ಕೆ ಕೃಷಿ ಸಚಿವ ಬಿ. ಸಿ ಪಾಟೀಲ್ ಅವರ ಪತ್ನಿ ವನಜಾ ಬಿ. ಪಾಟೀಲ್ ಹಾಗು ಪುತ್ರಿ ಸೃಷ್ಟಿ ಪಾಟೀಲ್ ನಿರ್ಮಾಪಕರು.
ಚಿತ್ರಕ್ಕೆ ಯುವ ನಟ ಯಶಸ್ ಸೂರ್ಯ ಹೀರೋ. ಬಿ.ಸಿ ಪಾಟೀಲ್ ಬಹಳ ದಿನಗಳ ನಂತರ ಒಂದು ಪ್ರಮುಖ ಪಾತ್ರಕ್ಕಾಗಿ ಈ ಸಿನಿಮಾದ ಮೂಲಕ ಮತ್ತೆ ಬಣ್ಣ ಹಚ್ಚಲಿದ್ದಾರೆ. ಚಿತ್ರದಲ್ಲಿ ಕನ್ನಡದ ಸ್ಟಾರ್ ನಟರೊಬ್ಬರು ಅತಿಥಿ ಪಾತ್ರ ನಿರ್ವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ನಾಯಕಿಯ ಪಾತ್ರಕ್ಕೆ ಹೆಸರಾಂತ ನಟಿಯ ಜೊತೆ ಮಾತುಕತೆ ನಡೆಯುತ್ತಿದೆ ಎನ್ನಲಾಗಿದೆ. ಇನ್ನುಳಿದಂತೆ, ಚಿತ್ರದ ಇತರೆ ಪಾತ್ರಗಳಿಗೆ ಕಲಾವಿದರ ಹುಡುಕಾಟ ನಡೆಯುತ್ತಿದೆ.
ಚಿತ್ರಕ್ಕೆ ವಿ. ಹರಿಕೃಷ್ಣ ಸಂಗೀತ ನೀಡುತ್ತಿದ್ದು, ಜಯಂತ ಕಾಯ್ಕಿಣಿ ಹಾಗು ಯೋಗರಾಜ್ ಭಟ್ ಸಾಹಿತ್ಯವಿದೆ. ಛಾಯಾಗ್ರಾಹಕ ನಿರಂಜನ್ ಬಾಬು ಇದೇ ಮೊದಲ ಬಾರಿಗೆ ಭಟ್ಟರ ಸಿನಿಮಾದಲ್ಲಿ ಛಾಯಾಗ್ರಾಹಕರಾಗಿ ಕೆಲಸ ಮಾಡುತ್ತಿದ್ದಾರೆ.
ಭಟ್ಟರ ಜೊತೆಗೂಡಿ “ಡ್ರಾಮಾ” ಚಿತ್ರದ ಚಿತ್ರಕಥೆ ರಚಿಸಿದ್ದ ವಿಕಾಸ್ ಈ ಚಿತ್ರದ ಮೂಲಕ ಭಟ್ಟರೊಡನೆ ಮತ್ತೊಮ್ಮೆ ಕೈ ಜೋಡಿಸಿದ್ದಾರೆ. ಚಿತ್ರದ ‘ಮುಹೂರ್ತ’ ಹಾಗು ‘ಟೈಟಲ್ ಲಾಂಚ್’ ಕಾರ್ಯಕ್ರಮ ಇತ್ತೀಚೆಗೆ ಹಾವೇರಿ ಜಿಲ್ಲೆಯ ಹಿರೆಕೆರೂರಿನಲ್ಲಿ ನಡೆದಿದೆ.
ಶ್ರೀ ಮುರಳಿ ನಾಯಕರಾಗಿ ನಟಿಸಿರುವ “ಮದಗಜ” ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಮದಗಜ ಡಿಸೆಂಬರ್ 3 ರಂದು ತೆರೆಗೆ ಬರಲಿದೆ. ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಶ್ರೀಮುರಳಿ ಪುನೀತ್ ರಾಜ್ಕುಮಾರ್ ಅವರಿಗೆ “ಬೊಂಬೆ ಹೇಳುತೈತೆ… ಮತ್ತೆ ಹೇಳುತೈತೆ ನೀನೆ ರಾಜಕುಮಾರ” ಹಾಡು ಹೇಳಿ, ಗಾನನಮನ ಸಲ್ಲಿಸಿದರು….
ಚಿತ್ರದ ಟ್ರೇಲರ್ ರಿಲೀಸ್ ಮಾಡಿದ ಸಿಎಂ, ಹೇಳಿದ್ದಿಷ್ಟು. “ಟ್ರೇಲರ್ ಇಷ್ಟು ಚೆನ್ನಾಗಿದೆ ಎಂದರೆ, ಇನ್ನೂ ಸಿನಿಮಾ ಹೇಗೆ ಇರಬೇಡ? ಒಳ್ಳೆ ಹಾಲಿವುಡ್ ಸಿನಿಮಾ ಮಾಡಿದ ಹಾಗೆ ಮಾಡಿದ್ದೀರಿ ಎಂದು ಶ್ರೀ ಮುರಳಿ ಅವರನ್ನು ಶ್ಲಾಘಿಸಿದ ಸಿಎಂ, ಈಗ ಹೆಚ್ಚಿನ ಸಂಖ್ಯೆಯಲ್ಲಿ ಯುವ ಪೀಳಿಗೆ ನಿರ್ಮಾಣ, ನಿರ್ದೇಶನ ಹಾಗೂ ಕಲಾವಿದರಾಗಿ ಚಿತ್ರರಂಗ ಪ್ರವೇಶಿಸುತ್ತಿರುವುದು ಸಂತಸದ ವಿಷಯ ಎನ್ನುತ್ತಲೇ, ಮಾತಿನುದ್ದಕ್ಕೂ ಪುನೀತ್ ರಾಜಕುಮಾರ್ ಅವರನ್ನು ನೆನಪಿಸಿಕೊಂಡರು.
ಸಚಿವರಾದ ಅಶ್ವತ್ ನಾರಾಯಣ್ ಹಾಗೂ ಮುನಿರತ್ನ ಅವರು ಟ್ರೇಲರ್ ಬಿಡುಗಡೆ ಸಮಾರಂಭಕ್ಕೆ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು.
ಯಾವುದೇ ವ್ಯಕ್ತಿ ಮೊದಲು ತನ್ನ ಕುಟುಂಬವನ್ನು ಚೆನ್ನಾಗಿಟ್ಟುಕೊಳ್ಳಬೇಕು. ನಾನು ಆ ವಿಚಾರದಲ್ಲಿ ಅದೃಷ್ಟವಂತ. ನನ್ನ ಕುಟುಂಬ ತುಂಬಾ ಚೆನ್ನಾಗಿದೆ. ಮುಖ್ಯಮಂತ್ರಿಗಳು ಈ ಸಮಾರಂಭಕ್ಕೆ ಬರಲು ನನ್ನ ಕುಟುಂಬ ಕಾರಣ ಎಂದು ಮಾತು ಆರಂಭಿಸಿದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಅವರು, ಸಿನಿಮಾ ಎಂದರೆ ಮಾಯಾ ಬಜಾರ್ ಅಲ್ಲ. ಇಲ್ಲಿ ಸಾಕಷ್ಟು ಜನರ ಶ್ರಮವಿರುತ್ತದೆ. ಒಂದು ಒಳ್ಳೆಯ ಚಿತ್ರ ಮೂಡಿಬರಲು ಎಲ್ಲರು ಒಟ್ಟಾಗಿ ಶ್ರಮಿಸಬೇಕು.. ನಮ್ಮ ಚಿತ್ರ ಚೆನ್ನಾಗಿ ಮೂಡಿ ಬಂದಿದೆ. ಇದೇ ಡಿಸೆಂಬರ್ 3 ರಂದು ಬಿಡುಗಡೆಯಾಗಿತ್ತಿದೆ. ಎಲ್ಲರ ಪ್ರೋತ್ಸಾಹವಿರಲಿ ಎಂದರು ಉಮಾಪತಿ.
ನಮ್ಮ ಚಿತ್ರದ ಮೊದಲ ಹೀರೋ ನಿರ್ಮಾಪಕ ಉಮಾಪತಿ ಅವರು. ಅವರ ಸಹಕಾರದಿಂದ ಚಿತ್ರ ಇಷ್ಟು ಚೆನ್ನಾಗಿ ಬಂದಿದೆ. ನಿರ್ದೇಶಕ ಮಹೇಶ್ ಕುಮಾರ್ ಅವರ ಕಾರ್ಯ ವೈಖರಿ ಬಗ್ಗೆ ಎಷ್ಟು ಹೇಳಿದರು ಸಾಲದು. “ಮದಗಜ” ದ ಇಡೀ ತಂಡಕ್ಕೆ ನನ್ನ ಅಭಿನಂದನೆ. ನಿರ್ದೇಶಕರು ಹೇಳಿದಂತೆ ನಾನು ನಟಿಸಿದ್ದೇನೆ. ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ . ನೋಡಿ. ಹಾರೈಸಿ ಅಂದರು ನಾಯಕ ಶ್ರೀಮುರಳಿ.
ಈ ಚಿತ್ರದಲ್ಲಿ ನನ್ನ ಫಸ್ಟ್ ಲುಕ್ ನೋಡಿದ ಎಷ್ಟೋ ಜನ ನೀವು ಚೆನ್ನಾಗಿ ಕಾಣುತ್ತಿದ್ದೀರಾ ಎಂದಿದ್ದಾರೆ. ನಾನಿಲ್ಲಿ ಪಲ್ಲವಿ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಈ ಪಾತ್ರ ಕೊಟ್ಟ ನಿರ್ದೇಶಕರಿಗೆ ಹಾಗೂ ನಿರ್ಮಾಪಕರಿಗೆ ವಂದನೆಗಳು ಎಂದರು ನಟಿ ಆಶಿಕಾ ರಂಗನಾಥ್.
ನಮ್ಮ ತಂದೆ, ತಾಯಿ ಅಥವಾ ಬಳಗದವರು ನಾವು ಯಾವುದಾದರೂ ಒಂದು ವ್ಯಾಪಾರ ಆರಂಭಿಸುತ್ತೇನೆ ಎಂದರೆ, ಐದು, ಹತ್ತು ಲಕ್ಷ ಸಹಾಯ ಮಾಡುತ್ತಾರೆ ಎಂದರೆ ಅದೇ ದೊಡ್ಡ ವಿಷಯ. ಅಂತದರಲ್ಲಿ ನಾವು ಹೇಳಿದ ಕಥೆ ಕೇಳಿ ಇಪ್ಪತ್ತು, ಮೂವತ್ತು ಕೋಟಿ ಖರ್ಚು ಮಾಡಿ ಸಿನಿಮಾ ಮಾಡುವ ನಿರ್ಮಾಪಕರು ತಂದೆ, ತಾಯಿ ಇದ್ದ ಹಾಗೆ. ನಮಗೆ ಆ ರೀತಿ ಸಹಾಯ ಮಾಡಿದವರು ನಿರ್ಮಾಪಕ ಉಮಾಪತಿ ಅವರು. ನಂತರ ಕಥೆ ಕೇಳಿದ ತಕ್ಷಣ ಚೆನ್ನಾಗಿದೆ ಸಿನಿಮಾ ಮಾಡೋಣ ಎಂದ ನಾಯಕ ಶ್ರೀಮುರಳಿ ಅವರಿಗೆ. ಚಿತ್ರ ಉತ್ತಮವಾಗಿ ಮೂಡಿಬರಲು ಸಹಕರಿಸಿದ ನನ್ನ ಇಡೀ ತಂಡಕ್ಕೆ ಧನ್ಯವಾದ. ಡಿಸೆಂಬರ್ ಮೂರರಂದು ತೆರೆಗೆ ಬರಲಿದೆ .. ನಿಮ್ಮೆಲ್ಲರ ಬೆಂಬಲವಿರಲಿ ಎಂಬುದು ನಿರ್ದೇಶಕ ಮಹೇಶ್ ಕುಮಾರ್ ಮಾತು.
ಚಿತ್ರದಲ್ಲಿ ಅಭಿನಯಿಸಿರುವ ಚಿಕ್ಕಣ್ಣ, ಧರ್ಮಣ್ಣ, ಶಿವರಾಜ್ ಕೆ ಆರ್ ಪೇಟೆ, ಗರುಡ ರಾಮ್ ಅನಿಲ್ ಹಾಗೂ ಚಿತ್ರದ ತಂತ್ರಜ್ಞರು ಚಿತ್ರದ ಬಗ್ಗೆ ಮಾತನಾಡಿದರು.
ಸ್ಟಾರ್ ಹೀರೋ ಸಿನಿಮಾಗಳು ಸೆಟ್ಟೇರುವ ಮೊದ್ಲೇ ಬೇಜಾನ್ ಡಿಮ್ಯಾಂಡ್ ಕ್ರಿಯೇಟ್ ಮಾಡೋದು ಕಾಮನ್. ಆದ್ರೆ ಹೊಸಬರ ಸಿನಿಮಾಗಳು ಸಾಧ್ಯನಾ? ಖಂಡಿತ ಸಾಧ್ಯ ಅಂತಾ ಸಾಬೀತುಪಡಿಸಿದೆ ಅದೇ ಹೊಸಬರ ಜುಗಲ್ ಬಂದಿ ಚಿತ್ರ
ಹೌದು.. ದಿವಾಕರ್ ಡಿಂಡಿಮ ಆಕ್ಷನ್ ಕಟ್ ಹೇಳಿ ನಿರ್ಮಾಣ ಮಾಡಲು ಸಜ್ಜಾಗಿರುವ ಜುಗಲ್ ಬಂದಿ ಸಿನಿಮಾಗೆ ಸಿಕ್ಕಾಪಟ್ಟೆ ಬೇಡಿಕೆ ಸೃಷ್ಟಿಯಾಗಿದೆ. ಜುಗಲ್ ಬಂದಿ ಶುರುವಾಗುವ ಮೊದಲೇ ಚಿತ್ರದ ಆಡಿಯೋ ರೈಟ್ಸ್ ಉತ್ತಮ ಮೊತ್ತಕ್ಕೆ ಸೇಲ್ ಆಗಿದೆ.
ಒಂದ್ಕಡೆ ಆಡಿಯೋ ರೈಟ್ಸ್ ಸೇಲ್ ಆದ ಖುಷಿಯಲ್ಲಿರುವ ಚಿತ್ರತಂಡ ಇವತ್ತು ಶುಭಘಳಿಗೆಯಲ್ಲಿ ಅದ್ಧೂರಿಯಾಗಿ ಮುಹೂರ್ತ ನೆರವೇರಿಸಿದೆ. ಬೆಂಗಳೂರಿನ ವರಸಿದ್ದಿ ವಿನಾಯಕ ದೇಗುಲದಲ್ಲಿ ನಡೆದ ಸಿನಿಮಾ ಮುಹೂರ್ತ ಕಾರ್ಯಕ್ರಮದಲ್ಲಿ ನಾಯಕ ಯಶ್ ಶೆಟ್ಟಿ, ಸಂತೋಷ್ ಅಶ್ರಯ್, ಅಶ್ವಿನ್ ರಾವ್ ಪಲ್ಲಕ್ಕಿ, ಅರ್ಚನಾ ಕೊಟ್ಟಿಗೆ ಮಾನಸಿ ಸುಧೀರ್, ನಿರ್ದೇಶಕ ದಿವಾಕರ್ ಡಿಂಡಿಮ ಮುಂತಾದವರು ಭಾಗಿಯಾಗಿದ್ದರು.
ಥ್ರಿಲ್ಲರ್ ಸಬ್ಜೆಕ್ಟ್ ಹೊಂದಿರುವ ಜುಗಲ್ ಬಂದಿ ಸಿನಿಮಾಗೆ ಪ್ರದ್ಯೋತನ್ ಸಂಗೀತ, ಎಸ್ ಕೆ ರಾವ್ ಕ್ಯಾಮೆರಾ ಸಿನಿಮಾದಲ್ಲಿರಲಿದೆ.
ದಿವಾಕರ್ ಡಿಂಡಿಮ ನಿರ್ದೇಶಕ
ಈಗಾಗಲೇ ರಿಲೀಸ್ ಆಗಿರುವ ಫಸ್ಟ್ ಲುಕ್ ಸಿನಿಮಾ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. 22ನೇ ತಾರೀಖಿನಿಂದ ಜುಗಲ್ ಬಂದಿ ಸಿನಿಮಾದ ಶೂಟಿಂಗ್ ಶುರುವಾಗಲಿದೆ.
ಸಖತ್… ಚಿನ್ನದ ಹುಡ್ಗ ಗಣೇಶ್ ಹಾಗೂ ಸಿಂಪಲ್ ಸುನಿ ಸಾರಥ್ಯದ ಬಹುನಿರೀಕ್ಷಿತ ಸಿನಿಮಾ ಸಖತ್. ದೊಡ್ಡ ದೊಡ್ಡ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಕೆವಿಎನ್ ಸಂಸ್ಥೆ ಸಖತ್ ಚಿತ್ರಕ್ಕೆ ಬಂಡವಾಳ ಹೂಡಿದೆ. ಈಗಾಗಲೇ ಪ್ರಮೋಷನ್ ಕಹಳೆ ಬಾರಿಸಿರುವ ಸಖತ್ ಸಿನಿಮಾ ಇದೇ ತಿಂಗಳ 26ಕ್ಕೆ ಅದ್ಧೂರಿಯಾಗಿ ತೆರೆಗೆ ಬರೋದಿಕ್ಕೆ ಸಜ್ಜಾಗಿದೆ.
ಕೆಲ ದಿನಗಳ ಹಿಂದಷ್ಟೇ ರ್ಯಾಂಪ್ ಸಾಂಗ್ ವೊಂದನ್ನು ರಿಲೀಸ್ ಮಾಡಿ ನಿರೀಕ್ಷೆ ಹುಟ್ಟಿಸಿದ್ದ ಸಖತ್ ಸಿನಿಮಾ ಅಂಗಳದಿಂದ ಇದೇ 22ಕ್ಕೆ ಮತ್ತೊಂದು ಹಾಡು ರಿಲೀಸ್ ಆಗಲಿದೆ. ಅರ್ಜುನ್ ಲೂಯಿಸ್ ಸಾಹಿತ್ಯ ಬರೆದು, ಸಿದ್ದಿ ಶ್ರೀರಾಮ್ ಕಂಠದಲ್ಲಿ “ಶುರುವಾಗಿದೆ” ಅನ್ನೋ ಬೊಂಬಾಟ್ ಸಾಂಗ್ ರಿವೀಲ್ ಆಗ್ತಿದೆ.
ಚಮಕ್ ಸಿನಿಮಾ ಮೂಲಕ ಪ್ರೇಕ್ಷಕರಿಗೆ ಚಮಕ್ ಕೊಟ್ಟಿದ್ದ ಗಣಿ-ಸುನಿ ಈ ಬಾರಿ ಸಖತ್ ಸಿನಿಮಾ ಮೂಲಕ ಕಾಮಿಡಿ ಹೂರಣ ಬಡಿಸಲು ಸಕಲ ರೀತಿಯಿಂದ ತಯಾರಿಯಾಗಿದ್ದು, ಗಣಿ ಅಂಧನ ಪಾತ್ರಕ್ಕೆ ಬಣ್ಣ ಹಚ್ಚಿದ್ರೆ, ನಿಶ್ವಿಕಾ ನಾಯ್ಡು ಹಾಗೂ ಸುರಭಿ ಚಿತ್ರದಲ್ಲಿ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ರಂಗಾಯಣ ರಘು, ಸಾಧುಕೋಕಿಲ, ಧರ್ಮಣ್ಣ ಕಡೂರು ಸೇರಿದಂತೆ ಮುಂತಾದವರು ತಾರಾಗಣದಲ್ಲಿದ್ದಾರೆ.
ಟಿ.ವಿ. ರಿಯಾಲಿಟಿ ಶೋ ಹಾಗೂ ಕೋರ್ಟ್ ಕೇಸ್ ಸುತ್ತ ಸಿನಿಮಾ ಕಥೆ ಹೆಣೆಯಲಾಗಿದೆ. ಕೆವಿಎನ್ ಪ್ರೊಡಕ್ಷನ್ನಡಿ ತಯಾರಾಗಿರುವ ಸಖತ್ ಚಿತ್ರಕ್ಕೆ ನಿಶಾ ವೆಂಕಟ್ ಕೋನಾಂಕಿ ಹಾಗೂ ಸುಪ್ರಿತ್ ಬಂಡವಾಳ ಹೂಡಿದ್ದಾರೆ.
ಈಗಾಗ್ಲೇ ಸೆನ್ಸಾರ್ ನಿಂದ U/A ಸರ್ಟಿಫಿಕೆಟ್ ಪಡೆದು, ಪಾಸ್ ಆಗಿರುವ ಸಖತ್ ಸಿನಿಮಾ ಇದೇ 26 ಕ್ಕೆ ಬೆಳ್ಳಿತೆರೆಯಲ್ಲಿ ರಾರಾಜಿಸಲಿದೆ.
ಕಿರಿಕ್ ಪಾರ್ಟಿ ಖ್ಯಾತಿಯ ಸಂಯುಕ್ತಾ ಹೆಗ್ಡೆ, ಆಗಾಗ ಸುದ್ದಿ ಆಗುತ್ತಲೇ ಇರುತ್ತಾರೆ. ಅದು ಸಿನಿಮಾ ಮತ್ತು ಅದರಾಚೆಗಿನ ಸುದ್ದಿಯೂ ಹೌದು. ಈಗ ವಿಷಯ ಏನೆಂದರೆ, ಸಂಯುಕ್ತಾ ಹೆಗ್ಡೆ ಹೊಸ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದು ಈ ಹೊತ್ತಿನ ಸುದ್ದಿ.
ಹೌದು, ಒಂದಷ್ಟು ಸಿನಿಮಾಗಳಲ್ಲಿ ನಾಯಕಿಯಾಗಿ ಸೈ ಎನಿಸಿಕೊಂಡ ಈ ನಟಿ, ಈಗ ಸಿನಿಮಾವೊಂದರಲ್ಲಿ ಹಾಡೊಂದಕ್ಕೆ ಹೆಜ್ಜೆ ಹಾಕಲು ಸೈ ಎಂದಿದ್ದಾರೆ. ನಂದಕಿಶೋರ್ ನಿರ್ದೇಶನದ ಈ ಚಿತ್ರಕ್ಕೆ ಚಂದನ್ ಶೆಟ್ಟಿ ಸಂಗೀತ ನೀಡಿದ್ದಾರೆ. ಶಿವು ಭೇರ್ಗಿ ಈ ಚಿತ್ರಕ್ಕೆ ಗೀತೆ ಬರೆದಿದ್ದಾರೆ.
ಕೆ.ಮಂಜು ಅವರ ಪುತ್ರ ಶ್ರೇಯಸ್ ಈ ಚಿತ್ರದ ಹೀರೋ. ರೀಷ್ಮಾ ನಾಣಯ್ಯ ಹಾಗೂ ರಜನಿ ಭಾರದ್ವಾಜ್ ನಾಯಕಿಯರಾಗಿ ನಟಿಸುತ್ತಿದ್ದಾರೆ.
ಕೆ ಮಂಜು ಅರ್ಪಿಸುವ ಈ ಚಿತ್ರವನ್ನು ಗುಜ್ಜಲ್ ಪುರುಷೋತ್ತಮ್ ನಿರ್ಮಿಸುತ್ತಿದ್ದಾರೆ. ಶೇಖರ್ ಚಂದ್ರು ಛಾಯಾಗ್ರಹಣವಿದೆ. ಕೆ.ಎಂ.ಪ್ರಕಾಶ್ ಸಂಕಲನ ಮಾಡಿದರೆ, ವಿಶ್ವ , ಶಿವು ಕಲಾ ನಿರ್ದೇಶನ ಮತ್ತು ರವಿವರ್ಮ ಅವರ ಸಾಹಸ ನಿರ್ದೇಶನವಿದೆ. ಪ್ರಶಾಂತ್ ರಾಜಪ್ಪ ಸಂಭಾಷಣೆ ಬರೆದಿದ್ದಾರೆ.
ಸ್ಟಾರ್ ನಟರುಗಳನ್ನು ಆರಾಧಿಸುವ-ಪ್ರೀತಿಸುವ-ಗೌರವಿಸುವ ಹಾಗೂ ತಲೆ ಮೇಲೆ ಹೊತ್ತು ಮೆರೆಸುವ ಅಭಿಮಾನಿ ದೇವರುಗಳು, ತಾವಿಷ್ಟ ಪಡುವ ನಟರುಗಳ ಹಾದಿಯಲ್ಲಿ ಸಾಗುತ್ತಾರೆ. ಅವರ ಒಳ್ಳೆಗುಣಗಳನ್ನು ಮೈಗೂಡಿಸಿಕೊಂಡು ಆದರ್ಶವಾಗಿ ಬದುಕೋದಕ್ಕೆ ಇಷ್ಟಪಡುತ್ತಾರೆ. ಮಾತ್ರವಲ್ಲ, ಸಿನಿಮಾದಿಂದ ಸಿನಿಮಾಗೆ ಬದಲಾಗುವ ನಟರುಗಳ ಲುಕ್-ಗೆಟಪ್ನ ಫಾಲೋ ಮಾಡುತ್ತಾರೆ. ಅವರಂತೆ ಹೇರ್ ಸ್ಟೈಲ್ ಮಾಡಿಸಿಕೊಂಡು, ಅವರಂತೆ ಕಾಸ್ಟ್ಯೂಮ್ಧ ರಿಸಿಕೊಂಡು ತಮ್ಮಿಷ್ಟದ ಸ್ಟಾರ್ಗಳನ್ನು ಬೆಂಬಲಿಸುತ್ತಾರೆ. ಇದಕ್ಕೆ ಆಕ್ಷನ್ಪ್ರಿನ್ಸ್ ಧ್ರುವ ಸರ್ಜಾ ಅಭಿಮಾನಿಗಳು ಕೂಡ ಹೊರತಾಗಿಲ್ಲ…
ಇಂಟ್ರೆಸ್ಟಿಂಗ್ ಅಂದರೆ ಮಾರ್ಟಿನ್' ಲುಕ್-ಗೆಟಪ್ ನೋಡಿ ಸ್ವತಃ ಆಕ್ಷನ್ಪ್ರಿನ್ಸ್ ಕಳೆದು ಹೋಗಿರುವುದು. ಹೌದು, ಮಾಸ್ ಅಪೀಲ್ ಕೊಡುವ ಮಾರ್ಟಿನ್ ಹೇರ್ಸ್ಟೈಲ್ ಅಭಿಮಾನಿಗಳ ಹೃದಯವನ್ನು ಮಾತ್ರವಲ್ಲ ಅದ್ದೂರಿ ಹುಡುಗನ ಮನಸ್ಸನ್ನು ಗೆದ್ದು ಬಿಟ್ಟಿದೆ. ಹೀಗಾಗಿಯೇ ಬಹದ್ದೂರ್ ಬೆಂಕಿ ಚೆಂಡು ತಮ್ಮ ಸೋಷಿಯಲ್ ಸ್ಟೇಟಸ್ಗೆ ಅಪ್ಲೋಡ್ ಬಿಟ್ಟಿದ್ದಾರೆ. ಈಗಾಗಲೇ ಫ್ಯಾನ್ಸ್ ಟೀಸರ್ನಲ್ಲಿಮಾರ್ಟಿನ್’ ಲುಕ್ ನೋಡಿದ್ರೂ ಕೂಡ, ಧ್ರುವಾ ಸರ್ಜಾರ ಸ್ಟೇಟಸ್ನಿಂದ ಫೋಟೋನ ಎತ್ತಿಕೊಂಡು ಸೋಷಿಯಲ್ ಸಮುದ್ರದಲ್ಲಿ ಸುನಾಮಿ ಎಬ್ಬಿಸುತ್ತಿದ್ದಾರೆ.
ಎ.ಪಿ ಅರ್ಜುನ್ ಡೈರೆಕ್ಟ್ ಮಾಡಿರುವ ಮಾರ್ಟಿನ್' ಕನ್ನಡದ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನ್ಮಾ. ಸಿಂಪಲ್ಲಾಗಿ ನಾಲ್ಕು ಹೊಡೆದಿರುವ ಧ್ರುವಮಾರ್ಟಿನ್’ ಸಿನಿಮಾದ ಮೂಲಕ ಸ್ಯಾಂಡಲ್ವುಡ್ ಅಂಗಳದಲ್ಲಿ ಮಾತ್ರವಲ್ಲ ಪ್ಯಾನ್ ಇಂಡ್ಯಾ ತುಂಬೆಲ್ಲಾ ಚಂಡಮಾರುತದ ಅಲೆ ಎಬ್ಬಿಸೋಕೆ ಸಿಡಿದು ನಿಂತಿದ್ದಾರೆ. ಗನ್ನ ನಾನ್ ಚೂಸ್ ಮಾಡಿಕೊಂಡಿಲ್ಲ ಬದಲಾಗಿ ಗನ್ನೇ ನನ್ನ ಚೂಸ್ ಮಾಡಿಕೊಂಡಿದೆ'. ಇದು ಜೋಕ್ ಅಲ್ಲ, ಇದೇ ಸತ್ಯ ಅಂತೇಳಿ ಕಣ್ಣುಬ್ಬಿನ ಮೇಲಿನ ರಕ್ತದ ಕಲೆ ಒರೆಸಿಕೊಂಡು ನೋಡುಗರ ಗಟ್ಟಿಗುಂಡಿಗೆ ಶೇಕ್ ಆಗುವಂತೆ ಮಾಡಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಟೀಸರ್ನ 15 ಕೋಟಿಗೂ ಅಧಿಕ ಮಂದಿ ಕಣ್ತುಂಬಿಕೊಂಡಿರುವುದುಮಾರ್ಟಿನ್’ ಹವಾ ಹೆಂಗೈತಿ ಅನ್ನೋದನ್ನು ತೋರಿಸುತ್ತಿದೆ. ಆಕ್ಷನ್ಪ್ರಿನ್ಸ್ ತೋಳ್ಬಲದ ಮೇಲಿರುವ ಸೋಲ್ಡ್ಜರ್ಸ್ ಟ್ಯಾಟೂ `ಮಾರ್ಟಿನ್’ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟಾಗಿಸಿದೆ.
ಅಂದ್ಹಾಗೇ, ಮಾರ್ಟಿನ್' ಚಿತ್ರಕ್ಕಾಗಿ ಧ್ರುವ ಸಂಪೂರ್ಣವಾಗಿ ಬದಲಾಗಿದ್ದಾರೆ. ಬರೀ ಲುಕ್-ಗೆಟಪ್ ಮಾತ್ರವಲ್ಲ ಸ್ಕ್ರೀನ್ಪ್ರ ಸೆನ್ಸ್ ಇಂದ ಹಿಡಿದು ಡೈಲಾಗ್ ಡೆಲಿವರಿ ತನಕ ಎಲ್ಲವನ್ನೂ ಚೇಂಜ್ ಮಾಡಿಕೊಂಡಿದ್ದಾರೆ. ಅದ್ದೂರಿ-ಬಹದ್ದೂರ್-ಭರ್ಜರಿ-ಪೊಗರು ಚಿತ್ರದಲ್ಲಿ ಉದ್ದುದ್ದ ಡೈಲಾಗ್ಗಳಿದ್ವು ಆದರೆ ಮಾರ್ಟಿನ್’ ಸಿನಿಮಾದಲ್ಲಿ ಲೆಂಗ್ತಿ ಡೈಲಾಗ್ ಇರೋದಿಲ್ಲ ಅಂತ ಟೀಸರ್ ರಿಲೀಸ್ ಸಂದರ್ಭದಲ್ಲೇ ಧ್ರುವ ಹೇಳಿದ್ದಾರೆ. ಆದರೆ ಮಾರ್ಟಿನ್' ಮೂವೀಯಲ್ಲಿ ಬರುವ ಒಂದೊಂದು ಡೈಲಾಗ್ಗೆ ಅದರದ್ದೇ ಆದ ತೂಕ ಮತ್ತು ಮಹತ್ವವಿರುತ್ತಂತೆ. ಅಷ್ಟಕ್ಕೂ,ಮಾರ್ಟಿನ್’ ಚಿತ್ರದಲ್ಲಿ ಧ್ರುವ ಮಾರ್ಟಿನ್ ಅಲ್ವಂತೆ ಹಾಗಾದ್ರೆ ಮತ್ಯಾರು? ಈ ಪ್ರಶ್ನೆಗೆ ಉತ್ತರವನ್ನು ಚಿತ್ರತಂಡ ನಿಗೂಢವಾಗಿಟ್ಟಿದೆ. ಸ್ಟೈಲಿಷ್ ಆಕ್ಷನ್ ಥ್ರಿಲ್ಲರ್ ಸಿನಿಮಾ ಇದಾಗಿದ್ದು, ಭರ್ಜರಿ ಆಕ್ಷನ್ ದೃಶ್ಯಗಳಿವೆ. ಸೌತ್ನ ಫೇಮಸ್ಸ್ ಆಕ್ಷನ್ ಮಾಸ್ಟರ್ಗಳಾದ ರಾಮ್-ಲಕ್ಷ್ಮಣ್ ಕಂಪೋಸ್ ಮಾಡಿದ್ದಾರೆ.
ಅದ್ದೂರಿ ಜೋಡಿಯ ಎರಡನೇ ಚಿತ್ರವಾದ ಮಾರ್ಟಿನ್' ಕೂಡ ಅದ್ಧೂರಿಯಾಗಿಯೇ ನಿರ್ಮಾಣವಾಗ್ತಿದೆ. ಐದು ಭಾಷೆಯಲ್ಲಿ ಸಿನಿಮಾ ನಿರ್ಮಾಣಕ್ಕೆ ಉದಯ್ ಕೆ. ಮೆಹ್ತಾ ಬಂಡವಾಳ ಹೂಡಿದ್ದಾರೆ. 2022ರ ಆರಂಭದಲ್ಲೇಮಾರ್ಟಿನ್’ ತೆರೆಗೆ ತರಬೇಕು ಎಂದು ಭರದಿಂದ ಶೂಟಿಂಗ್ ಮುಗಿಸ್ತಿದ್ದಾರೆ. ತಮಿಳಿನ ಅರವಿಂದ್ ಸಾಮಿ- ದೇವಯಾನಿ ಸೇರಿದಂತೆ ಪರಭಾಷಾ ಕಲಾವಿದರು ಕೂಡ ಮಾರ್ಟಿನ್' ಮೈಲೇಜ್ನ ಹೆಚ್ಚಿಸುತ್ತಿದ್ದಾರೆ. ಲವ್ ಅಂಡ್ ಎಮೋಷನ್ಸ್ ಫೀಲ್ ಇಟ್ಟು ಸಿನಿರಸಿಕರ ಹಾರ್ಟ್ನ ಬೀಟ್ ಮಾಡಿದ್ದಅದ್ದೂರಿ’ ಜೋಡಿ ಮಾರ್ಟಿನ್' ಮೂಲಕ ಬೆಳ್ಳಿತೆರೆ ರೂಲ್ ಮಾಡ್ಬೇಕು ಎಂದು ಹೊರಟಿದ್ದಾರೆ. ಪೊಗರು ಚಿತ್ರದ ಮೂಲಕ ಗಡಿದಾಟಿ ಘರ್ಜಿಸಿದ್ದ ಬಹದ್ದೂರ್ ಗಂಡುಮಾರ್ಟಿನ್’ ಮೂಲಕ ವಲ್ಡ್ವೈಡ್ ಜಗಮಗಿಸ್ತಾರೆ ಎನ್ನುವ ಕೂತೂಹಲ ಮತ್ತು ನಿರೀಕ್ಷೆ ಅಭಿಮಾನಿ ವಲಯದಲ್ಲಿದೆ.