Categories
ಸಿನಿ ಸುದ್ದಿ

ಲವ್ ಯೂ ರಚ್ಚು ‘ದುರಂತ ; ಮೃತ ಫೈಟರ್ ವಿವೇಕ್ ಕುಟುಂಬಕ್ಕೆ 10 ಲಕ್ಷ ಪರಿಹಾರ ಘೋಷಣೆ- ಸದ್ಯ 5 ಲಕ್ಷ ಚೆಕ್ ಹಸ್ತಾಂತರ !

‘ಲವ್ ಯೂ ರಚ್ಚು’ ಸಿನಿಮಾ ಸೆಟ್ ನಲ್ಲಿ ನಡೆದ ದುರಂತದ ಬಗ್ಗೆ ನಿಮ್ಮೆಲ್ಲರಿಗೂ ಗೊತ್ತೆಯಿದೆ. ಹೈ ಟೆನ್ಷನ್ ವಿದ್ಯುತ್ ತಂತಿ ತಗುಲಿ ಪ್ರಾಣಬಿಟ್ಟ ಫೈಟರ್ ವಿವೇಕ್ ಸಾವಿಗೆ ನೀವೆಲ್ಲರೂ ಕೂಡ ಕಂಬನಿ ಮಿಡಿದಿದ್ದೀರಾ, ಮರುಕ ಪಟ್ಟಿದ್ದೀರಾ ಅದೇ ರೀತಿ ಚಿತ್ರತಂಡ ಕೂಡ ಕೊರಗುತ್ತಿದೆ, ನಿರ್ಮಾಪಕ ಗುರು ದೇಶ್ ಪಾಂಡೆ ಕುಟುಂಬ ಕೂಡ ವಿಷಾದ ವ್ಯಕ್ತಪಡಿಸುತ್ತಿದೆ.‌

ನಮ್ಮ ಬ್ಯಾನರ್ ನ ಸಿನಿಮಾದಲ್ಲಿ ಇಂತಹದ್ದೊಂದು‌ ಅವಘಡ ಸಂಭವಿಸಿಬಾರದಿತ್ತು, ದುರದೃಷ್ಟವಶಾತ್ ದುರಂತ ಸಂಭವಿಸಿದೆ. ಈಗ ಮೃತ ವಿವೇಕ್ ನ ಜೀವಂತವಾಗಿ ತಂದು ಕೊಡುವುದಕ್ಕಂತೂ ಆಗೋದಿಲ್ಲ ಹಾಗಂತ ವಿವೇಕ್ ಕುಟುಂಬವನ್ನೂ ನಾವು ಕೈಬಿಡುವುದಿಲ್ಲ. ವಿವೇಕ್ ಅಂತಿಮ ಕಾರ್ಯಕ್ಕೂ ಹಣ ನೀಡಿದ್ದೇವೆ, ಗಾಯಗೊಂಡು ಆಸ್ಪತ್ರೆ ಸೇರಿರುವ ರಂಜಿತ್ ಚಿಕಿತ್ಸಾ ವೆಚ್ಚ ಕೂಡ ಭರಿಸಿದ್ದಾರೆ ಎಂದಿದ್ದಾರೆ.

ಸದ್ಯ ಗುರುದೇಶ್ ಪಾಂಡೆ ಎಲ್ಲಿದ್ದಾರೋ ಗೊತ್ತಿಲ್ಲ.
ಘಟನೆ ನಡೆದ ಕ್ಷಣದಿಂದ ಯಾರ ಕೈಗೂ ಕೂಡ ಸಿಗುತ್ತಿಲ್ಲ. ಅಜ್ಞಾತ ಸ್ಥಳದಿಂದಲೇ ಲಾಯರ್ ಗೆ ಮೇಲ್ ಮಾಡಿ ಮೃತ ವಿವೇಕ್ ಕುಟುಂಬಕ್ಕೆ 10 ಲಕ್ಷ ಪರಿಹಾರ ಘೋಷಿಸಿ ಎಂದು ಹೇಳಿದ್ದರಂತೆ. ಹೀಗಾಗಿ, ಗುರು ದೇಶ್ ಪಾಂಡೆಯವರ ಪತ್ನಿ ಪ್ರಿತಿಕಾ ದೇಶ್ ಪಾಂಡೆ
ಜಿ ಸಿನಿಮಾ ಅಕಾಡೆಮಿ ಪರ ವಕೀಲ ನಾಗಭೂಷಣ್, ಹಾಗೂ ಗುರು ದೇಶ್ ಪಾಂಡೆ ಪರ ವಕೀಲ ಕೆಂಪೇಗೌಡರ ಜೊತೆ ಸುದ್ದಿಗೋಷ್ಠಿ ನಡೆಸಿದರು.


10 ಲಕ್ಷ ಪರಿಹಾರ ಕೊಡುವುದಾಗಿ ಹೇಳಿದ್ದೇವೆ, ಸದ್ಯ 5 ಲಕ್ಷ ಚೆಕ್ ನ ಹಸ್ತಾಂತರಿಸುತ್ತೇವೆ. ವಿವೇಕ್ ಮನೆಗೆ ನಾವೇ ಖುದ್ದಾಗಿ ಹೋಗಿ ಅವರ ತಾಯಿ ಕೈಗೆ 5 ಲಕ್ಷ ಚೆಕ್ ಒಪ್ಪಿಸಲಿದ್ದೇವೆ ಅಂತ ಸುದ್ದಿ ಗೋಷ್ಟಿಯಲ್ಲಿ ತಿಳಿಸಿದರು.

ಪ್ರಕರಣ ತನಿಖೆಯ ಹಂತದಲ್ಲಿದೆ ಹೆಚ್ಚು ಮಾತನಾಡುವುದಿಲ್ಲ, ತಪ್ಪಿತಸ್ಥರು ನೀವೇ ಅಂತ ನಮ್ಮ ನಿರ್ಮಾಣ ಸಂಸ್ಥೆಯ ಮೇಲೆ ಬಂದರೆ ಅದರ ಹೊಣೆಯನ್ನ ನಾವೇ ಹೊರುತ್ತೇವೆ ಎಂದು
ಕ್ಯಾಮೆರಾ ಮುಂದೆ ಹೇಳಿದ್ದಾರೆ. ಪ್ರಕರಣ ಸಂಬಂಧ ಲವ್ ಯೂ ರಚ್ಚು ಚಿತ್ರದ ನಿರ್ದೇಶಕ ಶಶಾಂಕ್ ರಾಜ್, ನಿರ್ಮಾಪಕ ಗುರುದೇಶ್ ಪಾಂಡೆ, ಸಾಹಸ ನಿರ್ದೇಶಕ ವಿನೋದ್, ಸಿನಿಮಾ ಇನ್ ಚಾರ್ಜ್ ಫರ್ನಾಂಡೀಸ್, ಕ್ರೇನ್ ಆಪರೇಟರ್ ಮಹದೇವ್ ಸೇರಿದಂತೆ ಐವರ ಮೇಲೆ ಎಫ್ ಐ ಆರ್ ದಾಖಲಾಗಿದೆ.

ಈಗಾಗಲೇ ಮೂವರನ್ನು ಅರೆಸ್ಟ್ ಮಾಡಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ‌ ಒಪ್ಪಿಸಿದ್ದಾರೆ.
ಮುಂದಿನ ದಿನಗಳಲ್ಲಿ ಕಾನೂನು ಯಾವ ರೀತಿಯ ತೀರ್ಪು ಕೊಡುತ್ತೆ ಕಾದುನೋಡಬೇಕಿದೆ.

Categories
ಸಿನಿ ಸುದ್ದಿ

ಶಿವಣ್ಣ ನಿಮ್ಮ ಆಶೀರ್ವಾದದಿಂದಲೇ ಈ‌ ಟ್ರೋಪಿ ನಂಗೆ ಸಿಕ್ತು! ದೊಡ್ಮನೆಗೆ ಬಿಗ್ ಬಾಸ್ ವಿನ್ನರ್ ಮಂಜಣ್ಣ ಎಂಟ್ರಿ…

ಬಿಗ್‌ ಬಾಸ್‌ ವಿನ್ನರ್‌ ಮಂಜು ಪಾವಗಡ ಬುಧವಾರ ನಟ ಶಿವರಾಜ್‌ ಕುಮಾರ್‌ ಅವರನ್ನು ಭೇಟಿ ಮಾಡಿದರು. ಅವರೊಂದಿಗೆ ಕೆಲ ಹೊತ್ತು ಮಾತನಾಡಿ ಅವರ ಆಶೀರ್ವಾದ ಪಡೆದರು. ಶಿವಣ್ಣ ಅವರ ಕಾಲಿಗೆ ನಮಸ್ಕರಿಸೀದ ಮಂಜು ಪಾವಗಡ, ಸಿಹಿ ತಿನಿಸಿ ಸಂಭ್ರಮಪಟ್ಟರು.

ಶಿವರಾಜ್‌ ಕುಮಾರ್‌ ಅವರೊಂದಿಗೆ ಮಾತನಾಡಬೇಕೆನ್ನುವ ಬಹುದೊಡ್ಡ ಆಸೆಯನ್ನು ಬಿಗ್‌ ಬಾಸ್‌ ಮನೆಯಲ್ಲಿದ್ದಾಗಲೇ ಈಡೇರಿಸಿಕೊಂಡಿದ್ದ ಮಂಜು, ಬುಧವಾರ ನಾಗವಾರದಲ್ಲಿರುವ ಶಿವರಾಜ್‌ ಕುಮಾರ್‌ ನಿವಾಸಕ್ಕೆ ತೆರಳಿ ತಮ್ಮ ಮತ್ತೊಂದು ಆಸೆಯನ್ನು ಈಡೇರಿಸಿಕೊಂಡಿದ್ದುವಿಶೇಷ.

ಬಿಗ್‌ ಬಾಸ್‌ ಟ್ರೋಪಿ ಸಮೇತ ತೆರಳಿದ್ದ ಮಂಜು ಪಾವಗಡ, ಟ್ರೋಪಿ ಹಿಡಿದುಕೊಂಡೇ ಶಿವರಾಜ್‌ ಕುಮಾರ್‌ ಜತೆಗೆ ಕ್ಯಾಮಾರಾಕ್ಕೆ ಪೋಸು ಕೊಟ್ಟರು.

Categories
ಸಿನಿ ಸುದ್ದಿ

ಲವ್ಲಿ ನ್ಯೂಸ್:‌ ನೆನಪಿರಲಿ ಪ್ರೇಮ್‌ ಅವರ ಚಿತ್ರ ಪೂಜೆಗೆ ರೆಡಿಯಾಗಿ- ಅಕ್ಟೋಬರ್‌ 29ಕ್ಕೆ ಪ್ರೇಮಂ ಪೂಜ್ಯಂ ವರ್ಲ್ಡ್‌ ವೈಡ್‌ ರಿಲೀಸ್!

ನಟ ಲವ್ಲಿ ಸ್ಟಾರ್ ಪ್ರೇಮ್ ಅಭಿನಯದ “ಪ್ರೇಮಂ ಪೂಜ್ಯಂ” ಚಿತ್ರ ಇನ್ನೇನು ಬಿಡುಗಡೆಗೆ ಸಜ್ಜಾಗಿದೆ. ಬಿಡುಗಡೆ ಮುನ್ನವೇ ಸಾಕಷ್ಟು ಸುದ್ದಿ ಮಾಡಿರುವ ಈ ಚಿತ್ರ ಅಷ್ಟೇ ನಿರೀಕ್ಷೆ ಹೆಚ್ಚಿಸಿದೆ. ಈಗಾಗಲೇ ಚಿತ್ರದ ಟೈಟಲ್ ಲಿರಿಕಲ್ ಸಾಂಗ್ ವಿಡಿಯೋ ಬಿಡುಗಡೆಯಾಗಿ, ಎಲ್ಲೆಡೆಯಿಂದ ಭರ್ಜರಿ ಮೆಚ್ಚುಗೆ ಪಡೆದಿದೆ. ಈಗ ಈ ಚಿತ್ರದ ಹೊಸ ಸುದ್ದಿ ಅಂದರೆ, ಚಿತ್ರತಂಡ ಬಿಡುಗಡೆ ದಿನವನ್ನು ಘೋಷಿಸಿದೆ. ಹೌದು, “ಪ್ರೇಮಂ ಪೂಜ್ಯಂ” ಪ್ರೇಮ್ ಅವರ 25ನೇ ಸಿನಿಮಾ ಅನ್ನೋದು ವಿಶೇಷ. ಈಗಾಗಲೇ ಸಾಕಷ್ಟು ಕುತೂಹಲ ಕೆರಳಿಸಿದೆ ಕೂಡ. ಚಿತ್ರದ‌ ಟೈಟಲ್ಲೇ ಹೇಳುತ್ತೆ ಇದೊಂದು ಪಕ್ಕಾ ಇಂಟ್ರೆಸ್ಟಿಂಗ್‌ ಲವ್‌ಸ್ಟೋರಿ ಅಂತ. ಸಿನಿಮಾ ಯಾವಾಗ ಅಂತ ಪ್ರೇಮ್‌ ಫ್ಯಾನ್ಸ್‌ ಕೇಳುತ್ತಲೇ ಇದ್ದರು. ಅವರಿಗೆ ಇಲ್ಲೊಂದು ಸಂತಸದ ಸುದ್ದಿ ಇದೆ. ಅದೇ ಚಿತ್ರ ಬಿಡುಗಡೆ ಆಗುತ್ತಿರುವ ಸುದ್ದಿ. ಅಕ್ಟೋಬರ್‌ 29 ರಂದು ಚಿತ್ರ ಬಿಡುಗಡೆಯಾಗುತ್ತಿದೆ.‌

ಈ ಬಿಡುಗಡೆ ಸುದ್ದಿಯನ್ನು ಚಿತ್ರತಂಡ ಅನೌನ್ಸ್‌ ಮಾಡಿದೆ. ಸಹಜವಾಗಿಯೇ ಇದು ಪ್ರೇಮ್‌ ಫ್ಯಾನ್ಸ್‌ಗೆ ಖುಷಿ ಹೆಚ್ಚಿಸಿದೆ.
ಅಂದಹಾಗೆ, ಈ ಚಿತ್ರವನ್ನು ಜಗತ್ತಿನಾದ್ಯಂತ ರಿಲೀಸ್‌ ಮಾಡಲು ಚಿತ್ರತಂಡ ತಯಾರು ಮಾಡಿಕೊಂಡಿದೆ. ಸದ್ಯದ ಸ್ಥಿತಿಯಲ್ಲಿ ಶೇ.50ರಷ್ಟು ಮಾತ್ರ ಚಿತ್ರಮಂದಿರಗಳಲ್ಲಿ ಅವಕಾಶ ಕಲ್ಪಿಸಲಾಗಿದೆ. ಅಕ್ಟೋಬರ್‌ ಹೊತ್ತಿಗೆ ಶೇ.100ರಷ್ಟು ಅನುಮತಿ ಸಿಗಬಹುದು. ಹಾಗಾಗಿ, ಚಿತ್ರತಂಡ ಎಲ್ಲವನ್ನೂ ಯೋಚಿಸಿಯೇ ಈ ನಿರ್ಧಾರ ಪ್ರಕಟಿಸಿದೆ.
ಆರಂಭದಿಂದಲೂ ಪೋಸ್ಟರ್ ಮೂಲಕವೇ ಸದ್ದು ಮಾಡಿದ್ದ “ಪ್ರೇಮಂ ಪೂಜ್ಯಂ”, ಈಗ ಬಿಡುಗಡೆಯ ದಿನಾಂಕ ಘೋಷಣೆ ಮಾಡಿ, ಎಲ್ಲರಲ್ಲೂ ಒಂದಷ್ಟು ನಿರಿಕ್ಷೆಯನ್ನು ಹೆಚ್ಚಿಸಿದೆ. ಕಳೆದ ಯುಗಾದಿಗೆ ಚಿತ್ರದ ಟೈಟಲ್‌ ಸಾಂಗ್‌ ಲಿರಿಕಲ್‌ ಸಾಂಗ್ ವಿಡಿಯೊ ಬಿಡುಗಡೆಯಾಗಿತ್ತು.

ಅದಕ್ಕೆ ಮಿಲಯನ್ಸ್‌ ವೀವ್ಸ್‌ ಬಂದಿತ್ತು. ಅದರ ಬೆನ್ನಲ್ಲೇ ಚಿತ್ರತಂಡ “ವೈದ್ಯೋ ನಾರಾಯಣ ಹರಿಹಿ.. ಎಂದು ಸಾಗುವ… ಸಾಗುವ ಲಿರಿಕಲ್‌ ಸಾಂಗ್ ವಿಡಿಯೋ ಕೂಡ ಬಿಡುಗಡೆ ಮಾಡಿತ್ತು. ಅದೊಂದು ಒಳ್ಳೆಯ ಪ್ರಯತ್ನವಾಗಿ ಹೊರಬಂದಿತ್ತು. ” ನನ್ನ ಜೀವನ ನಿನಗೆ ಸಮರ್ಪಣ ಕೈ ಮುಗಿವೆನು ಈ ನಾರಾಯಣ” ಎಂಬ ಹಾಡು ಅರ್ಥಪೂರ್ಣವಾಗಿದೆ. ಇನ್ನು, ಈ ಚಿತ್ರ ಕೆಡಂಬದಿ ಕ್ರಿಯೇಷನ್ಸ್‌ನಲ್ಲಿ ಮೂಡಿ ಬಂದಿದ್ದು, ಲವ್ಲಿ ಸ್ಟಾರ್‌ ಪ್ರೇಮ್‌ಗೆ ಜೋಡಿಯಾಗಿ ಬೃಂದಾ ಆಚಾರ್ಯ ಕಾಣಿಸಿಕೊಂಡಿದ್ದಾರೆ.

ಡಾ.ರಾಘವೇಂದ್ರ ಬಿ.ಎಸ್.‌ ಅವರು ಈ ಸಿನಿಮಾದ ನಿರ್ದೇಶನ ಮಾತ್ರವಲ್ಲ, ಸಂಗೀತ ಸಂಯೋಜನೆ ಜೊತೆ ಸಾಹಿತ್ಯವನ್ನೂ ಬರೆದಿರುವುದು ವಿಶೇಷ. ಈ ಚಿತ್ರದ ಪೋಸ್ಟರ್‌ಗಳು ಸಾಕಷ್ಟು ಸುದ್ದಿ ಮಾಡಿದ್ದಂತೂ ನಿಜ. ಅವೆಲ್ಲವನ್ನೂ ನೋಡಿದವರಿಗೆ ಪ್ರೇಮ್‌ ಮತ್ತಷ್ಟು ನ್ಯೂ ಲುಕ್‌ನಲ್ಲಿ ಆಕರ್ಷಿಸುತ್ತಾರೆ. ಫ್ರೆಶ್‌ ಲೊಕೇಷನ್‌ ಜೊತೆ ಅಷ್ಟೇ ಕ್ಯೂಟ್‌ ಜೋಡಿ ಕಾಣಿಸಿಕೊಂಡಿರುವುದನ್ನು ನೋಡಿದರೆ, ಸಿನಿಮಾ ನೋಡುವ ಕಾತುರ ಹೆಚ್ಚದೇ ಇರದು. ಚಿತ್ರಕ್ಕೆ ನವೀನ್‌ ಕುಮಾರ್‌ ಕ್ಯಾಮೆರಾ ಹಿಡಿದರೆ, ಹರೀಶ್‌ ಕೊಮ್ಮೆ ಸಂಕಲನವಿದೆ. ಇಂತಹ ನಿರೀಕ್ಷೆಯ ಸಿನಿಮಾಗೆ ಡಾ.ರಕ್ಷಿತ್‌ ಕೆಡಂಬದಿ, ಡಾ.ರಾಜಕುಮಾರ್‌ ಜಾನಕಿರಾಮನ್‌, ಡಾ.ರಾಘವೇಂದ್ರ ಎಸ್‌, ಮನೋಜ್‌ ಕೃಷ್ಣನ್‌ ನಿರ್ಮಾಪಕರು.


ಅದೇನೆ ಇರಲಿ, ಪ್ರತಿಯೊಬ್ಬ ನಟನಿಗೂ ತನ್ನ ಮೊದಲ ಚಿತ್ರ ಹೇಗೆ ವಿಶೇಷ ಆಗುತ್ತೋ, ಹಾಗೆಯೇ ಅವರ ಪ್ರತಿಯೊಂದು ಸಿನಿಮಾ ಕೂಡ ವಿಶೇಷವೇ. ಅದರಲ್ಲೂ 25 ನೇ ಸಿನಿಮಾ ಅಂದಾಕ್ಷಣ, ಅದೊಂದು ಮೈಲಿಗಲ್ಲು ಎನಿಸುವುದು ಸಹಜ. ಅಂತಹ 25ನೇ ಹೊಸ್ತಿಲಲ್ಲಿ ಇರುವ ಪ್ರೇಮ್‌, 25ನೇ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

Categories
ಸಿನಿ ಸುದ್ದಿ

ಮತ್ತೆ ರಂಗೇರಿತ್ತಲ್ಲ ದೊಡ್ಮನೆ ಅಖಾಡ; ಕಿರುತೆರೆ ಸೂಪರ್‌ ಸ್ಟಾರ್ಸ್ ಎಂಟ್ರಿಗೆ ಶಾಕ್ ಆಯ್ತು ಬಿಗ್ಬಾಸ್ !

ಶಾಕ್ ಆಯ್ತಾ…ಶಾಕ್ ಆಗ್ಲೆಬೇಕು ಅಂತ ತಾನೇ ಕಲರ್ಸ್ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಇಂತಹದ್ದೊಂದು ಪ್ಲ್ಯಾನ್ ಮಾಡಿದ್ದು. ಸೈಲೆಂಟಾಗಿ ಮಾಡಿದ ಆ ಮೆಗಾ ಪ್ಲ್ಯಾನ್ ಈ ಮಟ್ಟಿಗೆ ಸುದ್ದಿಸದ್ದು ಮಾಡ್ತಿರುವುದು. ಯಸ್, ಪರಂ ಮಾಡಿದ ಮಾಸ್ಟರ್‌ ಪ್ಲ್ಯಾನ್‌ಗೆ ಕಲರ್ಸ್ ಕನ್ನಡದ ಪ್ರೇಕ್ಷಕರು, ಬಿಗ್ಬಾಸ್ ರಿಯಾಲಿಟಿ ಶೋನ ವೀಕ್ಷಕರು ಮಾತ್ರವಲ್ಲ ಸ್ವತಃ ದೊಡ್ಮನೆ ಅಖಾಡವೇ ಶಾಕ್ ಆಗಿದೆ. ಸೀಸನ್ 8ರ ಗ್ರ್ಯಾಂಡ್ ಫಿನಾಲೆ ಮುಗೀತು ಇನ್ನೇನು ನನ್ನ ಅರಮನೆಗೆ ಬೀಗ ಹಾಕ್ತಾರೆ ಅಂತ ಬೇಸರದಲ್ಲಿದ್ದ ಬಿಗ್ಬಾಸ್ ಅರಮನೆ ಈಗ ಕೇಕೆ ಹಾಕಿಕೊಂಡು ಕುಣಿದಾಡ್ತಿದೆ. ಇಡೀ ಕರ್ನಾಟಕದ ಕಿರುತೆರೆಯ ಪ್ರೇಕ್ಷಕ ಮಹಾಷಯರು ಮತ್ತೆ ತನ್ನತ್ತ ತಿರುತಿರುಗಿ ನೋಡುತ್ತಾರಲ್ಲ ಅಷ್ಟು ಸಾಕು ಎನ್ನುತ್ತಿದೆ ಬಿಗ್ಬಾಸ್ ಮನೆ.

ಪ್ರತಿದಿನ ಒಂಭತ್ತು ಗಂಟೆ ಆದರೆ ಸಾಕು ಬಿಗ್ಬಾಸ್ ಬಿಗ್ಬಾಸ್' ಎನ್ನುವ ಜಿಂಗಲ್ ಮನೆಯ ಪಡಸಾಲೆಯಲ್ಲಿ ರಿಂಗಣಿಸುತ್ತಿತ್ತು. ಮದುವಣಗಿತ್ತಿಯಂತೆ ಸಿಂಗಾರಗೊಂಡ ಅರಮನೆಯನ್ನು ಕಿರುತೆರೆ ಪ್ರೇಕ್ಷಕರು ಕಣ್ಣರಳಿಸಿ ನೋಡ್ತಿದ್ದರು. ಸ್ಪರ್ಧಿಗಳ ನೀಡುವ ಮನರಂಜನೆಗೆ ಮನಸ್ಸು ಒಡ್ಡುತ್ತಿದ್ದರು. ವೀಕೆಂಡ್‌ನಲ್ಲಂತೂ ಬಿಗ್ಬಾಸ್ ಹವಾ ಜೋರಾಗಿರುತ್ತಿತ್ತು. ಅದಕ್ಕೆ ಕಾರಣ ಆಲ್ ಇಂಡಿಯಾ ಕಟೌಟ್ ಕಿಚ್ಚ ಎನ್ನುವುದು ಇಡೀ ಕರ್ನಾಟಕಕ್ಕೆ ಗೊತ್ತು. ಹೀಗೆ, ವೀಕೆಂಡ್‌ನಲ್ಲಿ ಹುಚ್ಚೆಬ್ಬಿಸುತ್ತಿದ್ದ ಬಿಗ್‌ಬಾಸ್ ಶೋ ಮುಗೀತು, ಮನರಂಜನೆಗೆ ಕೊರತೆಯಾಯ್ತು ಎನ್ನುವಷ್ಟರಲ್ಲಿ ಕಲರ್ಸ್ ಕನ್ನಡದ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಅವರು ಪ್ಲ್ಯಾನ್ ಮಾಡಿದ್ದಾರೆ. 100 ದಿನದ ಬದಲಾಗಿ ಆರು ದಿನದಬಿಗ್ಬಾಸ್ ಫ್ಯಾಮಿಲಿ’ ಕಿರುಸೀಸನ್ ಆರಂಭಿಸಿದ್ದಾರೆ. ಕಲರ್ಸ್ ಕುಟುಂಬದ ಹದಿನೈದು ಮಂದಿ ಕಲಾವಿದರು ದೊಡ್ಮನೆ ಪ್ರವೇಶಿಸಿದ್ದಾರೆ. ಈಗಾಗಲೇ ಇದರ ಪ್ರೋಮೋ ಕೂಡ ರಿಲೀಸ್ ಆಗಿದ್ದು ಕೂತೂಹಲ ಗರಿಗೆದರುವಂತೆ ಮಾಡಿದೆ.

ಕಲರ್ಸ್ ಕುಟುಂಬದ ಸೂಪರ್‌ ಸ್ಟಾರ್ಸ್ ಗಳನ್ನು ನೋಡಿ ಬಿಗ್ಬಾಸ್ ಮನೆ ಖುಷಿಯಾಗಿದೆ, ದೊಡ್ಮನೆ ಅಂಗಳಕ್ಕೆ ಕಾಲಿಡುವ ಸೌಭಾಗ್ಯ ಸಿಕ್ಕವರು ಸಂತೋಷದಲ್ಲಿದ್ದಾರೆ. ಬಿಗ್ಬಾಸ್ ಸೀಸನ್ ೮ ಅದ್ದೂರಿಯಾಗಿ ಅಂತ್ಯಗೊಂಡ ಬೆನ್ನಲ್ಲೇ `ಬಿಗ್ಬಾಸ್ ಫ್ಯಾಮಿಲಿ’ ಶೋ ಆರಂಭಗೊಂಡಿರುವುದನ್ನು ಕಂಡು ಟಿವಿ ವೀಕ್ಷಕರು ಕೂಡ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ, ಆರು ದಿನದ ಬಿಗ್ಬಾಸ್ ಫ್ಯಾಮಿಲಿ ಕಾರ್ಯಕ್ರಮ ಹೇಗಿರಬಹುದು ಅಂತ ಲೆಕ್ಕಚ್ಚಾರ ಶುರುವಿಟ್ಟುಕೊಂಡಿದ್ದಾರೆ. ದೊಡ್ಮನೆ ಅಖಾಡಕ್ಕೆ ಗ್ರ್ಯಾಂಡ್ ಎಂಟ್ರಿಕೊಟ್ಟಿರುವ ಕಿರುತೆರೆ ಸೂಪರ್‌ಸ್ಟರ‍್ಸ್ಗಳಿಗೆ ಉಘೇ ಉಘೇ ಎನ್ನುತ್ತಿರುವ ವೀಕ್ಷಕ ಮಹಾಪ್ರಭುಗಳು ಹದಿನೈದು ಮಂದಿ ಕಂಟೆಸ್ಟೆಂಟ್‌ಗೆ ಗುಡ್ ಲಕ್ ಹೇಳ್ತಿದ್ದಾರೆ.

ಬಿಗ್ಬಾಸ್ ಸೀಸನ್ 2ರ ವಿನ್ನರ್ ಅಕುಲ್ ಬಾಲಾಜಿ ಮತ್ತೆ ದೊಡ್ಮನೆಗೆ ಗ್ರ್ಯಾಂಡ್ ಎಂಟ್ರಿಕೊಟ್ಟಿದ್ದಾರೆ. ಕನ್ನಡತಿ ಧಾರಾವಾಹಿ ಖ್ಯಾತಿಯ ಕಿರಣ್ ರಾಜ್, ಗಿಣಿರಾಮ ಸೀರಿಯಲ್ ಕೋಸ್ಟಾರ್ಸ್ ಗೀತಾ ಸೀರಿಯಲ್ ಜೋಡಿ, ನನ್ನರಸಿ ರಾಧೆ ಧಾರಾವಾಹಿಯ ಅಗಸ್ತ್ಯ ಹಾಗೂ ಇಂಚರ, ಪದ್ಮಾವತಿಯ ಸೀರಿಯಲ್ ಹೀರೋ, ಮಂಗಳಗೌರಿ ಸೀರಿಯಲ್‌ನ ಕಥಾನಾಯಕ ರಾಜೀವ್, ಮಜಾಭಾರತದ ಸುಂದರಿ ಸೇರಿದಂತೆ ಈಗಾಗಲೇ ಬಿಗ್ಬಾಸ್ ಅಂಗಳಕ್ಕೆ ಬಂದುಹೋಗಿದ್ದ ನಿರಂಜನ್ ದೇಶ್‌ಪಾಂಡೆ ಕೂಡ ಈಗ ಬಿಗ್ಬಾಸ್ ಫ್ಯಾಮಿಲಿ'ಗೆ ಜೊತೆಯಾಗಿದ್ದಾರೆ. ಒಟ್ಟು ಹದಿನೈದು ಜನ ಕಲರ್ಸ್ ಕನ್ನಡದ ಸ್ಪರ್ಧಿಗಳು ದೊಡ್ಮನೆ ಅಖಾಡಕ್ಕೆ ಜಿಗಿದಿದ್ದಾರೆ.

ಒಂದು ವಾರದ ಮಟ್ಟಿಗೆ ನಡೆಯುವ ಶೋಗೆ ರಂಗುತುಂಬಿ ಕರುನಾಡ ಜನರನ್ನು ಮನರಂಜಿಸೋಕೆ ಮನಸ್ಸು ಮಾಡಿದ್ದಾರೆ. ವಿವಿಧ ರೀತಿಯ ಟಾಸ್ಕ್ ಗಳಿರಲಿದ್ದು, ಹದಿನೈದು ಜನ ಸ್ಪರ್ಧಿಗಳ ನಡುವೆ ಪೈಪೋಟಿ ನಡೆಯಲಿದೆ. ಗೆದ್ದವರಿಗೆಬಿಗ್‌ಬಾಸ್ ಫ್ಯಾಮಿಲಿ ಅವಾರ್ಡ್’ ಸಿಗಲಿದೆ. ಶನಿವಾರ ಹಾಗೂ ಭಾನುವಾರ ಸಂಜೆ ೪ಗಂಟೆಗೆ ಕಾರ್ಯಕ್ರಮ ಪ್ರಸಾರ ಆಗಲಿದೆ.
ವೀಕೆಂಡ್‌ನಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿರುವುದರಿಂದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರೇ ಈ ಕಾರ್ಯಕ್ರಮ ನಡೆಸಿಕೊಡಲಿದ್ದಾರೆನ್ನುವ ಕೂತೂಹಲ ಮನೆಮಾಡಿದೆ. ಆ ಕೌತುಕಕ್ಕೆ ಹಾಗೂ
`ಬಿಗ್‌ಬಾಸ್ ಫ್ಯಾಮಿಲಿ ಅವಾರ್ಡ್’ ವಿನ್ನರ್ ಯಾರು ಎನ್ನುವ ಪ್ರಶ್ನೆಗೆ ವಾರಾಂತ್ಯದಲ್ಲಿ ಉತ್ತರ ಸಿಗಲಿದೆ.

ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಮೂಕನಾಯಕ ಚಿತ್ರಕ್ಕೆ ದಶಕದ ಅತ್ಯುತ್ತಮ ಚಿತ್ರ ಪ್ರಶಸ್ತಿ; ಇದು ಬರಗೂರು ರಾಮಚಂದ್ರಪ್ಪ ನಿರ್ದೇಶನದ ಸಿನಿಮಾ

ನಿರ್ದೇಶಕ ಬರಗೂರು ರಾಮಚಂದ್ರಪ್ಪ ನಿರ್ದೇಶನದ “ಮೂಕನಾಯಕ” ಸಿನಿಮಾಗೆ ಮತ್ತೊಂದು ಪ್ರಶಸ್ತಿ ಲಭಿಸಿದೆ. ನೋಯ್ಡಾದ ಅಂತರರಾಷ್ಟ್ರೀಯ ಸಿನಿಮಾ ಸ್ಪರ್ಧೆಯಲ್ಲಿ ದಶಕದ ಅತ್ಯುತ್ತಮ ಚಿತ್ರ ಪ್ರಶಸ್ತಿ ಲಭಿಸಿದೆ. ಹೌದು, ಕಳೆದ 2017 ರಲ್ಲಿ ಈ ಚಿತ್ರವನ್ನು ಮಾಡಲಾಗಿತ್ತು. ಬಾಲರಾಜ್‌ ಅವರ ನಿರ್ಮಾಣದ ಈ ಚಿತ್ರವನ್ನು ಬರಗೂರು ರಾಮಚಂದ್ರಪ್ಪ ಕಥೆ, ಚಿತ್ರಕಥೆ, ಸಂಭಾಷಣೆಯೊಂದಿಗೆ ನಿರ್ದೇಶಿಸಿದ್ದರು. ನೋಯ್ಡಾದ ಸಂಸ್ಥೆಯೊಂದು ಇನ್‌ಕ್ರೆಡಿಬಲ್‌ ಸಿನಿ ಅವಾರ್ಡ್ಸ್‌ಗಾಗಿ ಹತ್ತು ವರ್ಷಗಳ ಒಳಗೆ ನಿರ್ಮಾಣಗೊಂಡ ವಿಶ್ವದ ಎಲ್ಲಾ ಭಾಷೆಯ ಚಿತ್ರಗಳನ್ನೂ ಆಹ್ವಾನಿಸಿತ್ತು. “ಮೂಕ ನಾಯಕ” ಚಿತ್ರವನ್ನೂ ಸ್ಪರ್ಧೆಗೆ ಕಳಿಸಲಾಗಿತ್ತು. ಪ್ರವೇಶ ಪಡೆದ ಚಿತ್ರಗಳಲ್ಲಿ ಆಯ್ದ ಚಿತ್ರಗಳನ್ನು ವಿವಿಧ ವಿಭಾಗಗಳ ಸ್ಪರ್ಧೆಗೆ ನಾಮ ನಿರ್ದೇಶನ ಮಾಡಲಾಗಿತ್ತು. ಹೀಗೆ ನಾಮ ನಿರ್ದೇಶನಗೊಂಡ “ಮೂಕ ನಾಯಕ” ಚಿತ್ರವು ವಿಶ್ವದ ವಿವಿಧ ಭಾಷೆಗಳ ನಾಮ ನಿರ್ದೇಶಿತ ಚಿತ್ರಗಳೊಂದಿಗೆ ಸ್ಪರ್ಧಿಸಿ, ದಶಕದ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಭಾಜವಾಗಿದೆ.

ಮಾತು ಬಾರದ ಮೂಕ ಚಿತ್ರಕಲಾವಿದರ ಆಶಯ ಮತ್ತು ಅಭಿವ್ಯಕ್ತಿ ವಿನ್ಯಾಸವನ್ನು ಕೇಂದ್ರವಾಗಿಟ್ಟುಕೊಂಡಿರುವ ಈ ಚಿತ್ರವು ಚಿತ್ರಕಲೆಯ ವಿವಿಧ ಸಾಧ್ಯತೆಗಳನ್ನು ಸಾದರಪಡಿಸಿದೆ. ಸಮುದಾಯದತ್ತ ಸಿನಿಮಾ ಎಂಬ ಪರಿಕಲ್ಪನೆಯಡಿಯಲಿ ಚಿತ್ರಯಾತ್ರೆ ನಡೆಸಿ, ಈಗಾಗಲೇ ಅನೇಕ ಊರುಗಳಲ್ಲಿ ಈ ಚಿತ್ರ ಪ್ರದರ್ಶನ ಮಾಡಲಾಗಿದೆ. ಈ ಹಿಂದೆ ನಡೆದ ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲೂ ಈ ಚಿತ್ರ ಪ್ರದರ್ಶನಕ್ಕೆ ಆಯ್ಕೆಯಾಗಿತ್ತು.

ಮೂಕ ಚಿತ್ರ ಕಲಾವಿದನ ಪಾತ್ರದಲ್ಲಿ ಗೋವಿಂದ್‌ ನಟಿಸಿದ್ದು, ಸೋದರಿ ಪಾತ್ರದಲ್ಲಿ “ಸ್ಪರ್ಶ” ರೇಖಾ ನಟಿಸಿದ್ದರು. ಅವರ ಪಾತ್ರಕ್ಕೆ ರಾಜ್ಯ ಸರ್ಕಾರದ ಉತ್ತಮ ಪೋಷಕ ನಟಿ ಪ್ರಶಸ್ತಿಯೂ ಸಿಕ್ಕಿತ್ತು. ಚಿತ್ರದಲ್ಲಿ ಸುಂದರರಾಜ್‌, ಯತಿರಾಜ್‌, ಶೀತಲ್‌ ಶೆಟ್ಟಿ, ವೆಂಕಟರಾಜ್‌ ಇತರರು ಇದ್ದಾರೆ. ನಾಗರಾಜ ಆದವಾನಿ ಛಾಯಾಗ್ರಹಣವಿದೆ. ಸುರೇಶ್‌ ಅರಸು ಸಂಕಲನವಿದೆ. ಶಮಿತಾ ಮಲ್ನಾಡ್‌ ಸಂಗೀತವಿದೆ.

Categories
ಸಿನಿ ಸುದ್ದಿ

ಕನ್ನಡ ಕಲರ್ಸ್‌ನಲ್ಲಿ ಮತ್ತೆ ಎದೆ ತುಂಬಿ ಹಾಡುವೆನು… ಇದೇ 14ರಿಂದ ಶುರು

ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ನಡೆಸಿಕೊಡುತ್ತಿದ್ದ ಜನಪ್ರಿಯ ಕಾರ್ಯಕ್ರಮ “ಎದೆ ತುಂಬಿ ಹಾಡುವೆನು” ಈಗ ಮತ್ತೆ ಅವರ ನೆನಪಲ್ಲಿ ಶುರುವಾಗುತ್ತಿದೆ.
ಈ ಕುರಿತಂತೆ ಕಲರ್ಸ್ ಕನ್ನಡದ ಮುಖ್ಯಸ್ಥ ಪರಮೇಶ್ವರ ಗುಂಡ್ಕಲ್ ಒಂದಷ್ಟು ಮಾಹಿತಿ ನೀಡಿದ್ದಾರೆ.
“ನಾನು ಮೂರು ವರ್ಷಗಳ ಹಿಂದೆ ಚೆನ್ನೈ ನಲ್ಲಿ ಎಸ್. ಪಿ. ಬಿ. ಅವರನ್ನು ಭೇಟಿ ಮಾಡಿ, “ಎದೆ ತುಂಬಿ ಹಾಡುವೆನು” ಕಾರ್ಯಕ್ರಮವನ್ನು ಪುನಃ ಆರಂಭಿಸೋಣ ಎಂದು ಕೇಳಿದ್ದೆ. ಆಗ ಅವರು ನನ್ನ ಶೆಡ್ಯುಲ್ ನೋಡಿ ತಿಳಿಸುತ್ತೀನಿ ಅಂದರು. ಆನಂತರ ಅವರಿಂದ ನನಗೊಂದು ಕಾಗದ ಬಂತು. ನನ್ನ ಬೇರೆ ಕಾರ್ಯಕ್ರಮಗಳು ಈಗಾಗಲೇ ನಿಗದಿಯಾಗಿರುವುದರಿಂದ 2019 ರಲ್ಲಿ “ಎದೆ ತುಂಬಿ ಹಾಡುವೆನು” ಕಾರ್ಯಕ್ರಮ ಆರಂಭಿಸೋಣ ಅಂತ ಬರೆದಿದ್ದರು.


ನಂತರ ಕಾರ್ಯಕ್ರಮದ ರೂಪುರೇಷೆ ಸಿದ್ದಗೊಂಡು, ಆರಂಭ ಮಾಡೋಣ ಅಂದುಕೊಳ್ಳುತ್ತಿರುವಾಗ “ಕೊರೊನಾ” ಶುರುವಾಯಿತು. ನಂತರದ ದಿನಗಳಲ್ಲಿ ಎಸ್ ಪಿ ಬಿ ನಮ್ಮಿಂದ ದೂರವಾದರು.
ಈಗ ಅವರ ನೆನಪಲ್ಲಿ ಈ ಕಾರ್ಯಕ್ರಮ ಇದೇ ಆಗಸ್ಟ್ 14 ರಿಂದ ಆರಂಭವಾಗಲಿದೆ. ರಾಜೇಶ್ ಕೃಷ್ಣನ್, ವಿ.ಹರಿಕೃಷ್ಣ ಹಾಗೂ ರಘು ದೀಕ್ಷಿತ್ ಈ ಕಾರ್ಯಕ್ರಮದ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಶೇಷ ತೀರ್ಪುಗಾರರಾಗಿ ಎಸ್ ಪಿ ಬಿ ಅವರ ಪುತ್ರ ಎಸ್ ಪಿ ಚರಣ್ ಇರಲಿದ್ದಾರೆ.
ಈಗಾಗಲೇ ಆಡಿಷನ್ ಮೂಲಕ ಹದಿನಾರರಿಂದ, ಹದಿನೆಂಟು ಗಾಯಕರನ್ನು ಆಯ್ಕೆ ಮಾಡಲಾಗಿದೆ ಎಂದು ಮಾಹಿತಿ ಕೊಟ್ಟರು ಪರಮೇಶ್ವರ ಗುಂಡ್ಕಲ್.

ತೀರ್ಪುಗಾರರಾಗಿರುವ ರಘು ದೀಕ್ಷಿತ್‌, “ನಾನು ಚಿಕ್ಕವನಾಗಿದಾಗ ನಮ್ಮಮ್ಮ ರೆಡಿಯೋ ಹಾಕಿದ ತಕ್ಷಣ ಎಸ್ ಪಿ ಬಿ ಅವರ ಹಾಡು ಬರುತಿತ್ತು. ಆಗಿನಿಂದ ಅವರ ಕಂಠಕ್ಕೆ ಅಭಿಮಾನಿ ನಾನು. ಅಂತಹ ಮಹಾನ್ ಗಾಯಕ ನಡೆಸುಕೊಡುತ್ತಿದ್ದ ಕಾರ್ಯಕ್ರಮಕ್ಕೆ ನೀವು ತೀರ್ಪುಗಾರರಾಗಬೇಕು ಎಂದು ಪರಮೇಶ್ವರ್ ಅವರು ಹೇಳಿದಾಗ ನನ್ನ ಆನಂದಕ್ಕೆ ಪಾರವೇ ಇರಲಿಲ್ಲ ಎಂಬುದು ರಘು ದೀಕ್ಷಿತ್ ಮಾತು.

ಎಸ್ ಪಿ ಬಿ ಅವರ ಮಾನಸ ಪುತ್ರರೆಂದೇ ಖ್ಯಾತರಾಗಿರುವ ರಾಜೇಶ್ ಕೃಷ್ಣನ್, “ಈ ಕಾರ್ಯಕ್ರಮವನ್ನು ಎಸ್ ಪಿ ಬಿ ಅವರೆ ನಮ್ಮಲ್ಲಿ ನಿಂತು ನಡೆಸಿಕೊಡುತ್ತಾರೆ. ಅವರಿಂದ ನಾವು ತಿಳಿದುಕೊಂಡದ್ದನ್ನು, ಈಗಿನ ಗಾಯಕರಿಗೆ ತಿಳಿಸುವ ಪ್ರಯತ್ನ ಮಾಡುತ್ತಿದ್ದೇವೆ.
ನಾನು ಹಂಸಲೇಖ ಅವರ ಬಳಿ ಟ್ರ್ಯಾಕ್ ಹಾಡುವ ಕಾಲದಲ್ಲಿ ನಾನು ಎಸ್ ಪಿ ಬಿ ಅವರು ಇಲ್ಲಿಗೆ ಬಂದಾಗ ತುಂಬಾ ಹತ್ತಿರದಿಂದ ನೋಡಿದವನು ನಾನು ಅವರು ನೀನು ಏಕೆ ನನ್ನ ಹಾಗೆ ಹಾಡುತ್ತೀಯಾ? ಎಂದು ಕೇಳಿದ್ದು ಉಂಟು..‌ ಅವರು ನನ್ನ ಮೇಲಿಟ್ಟಿದ ಪ್ರೀತಿ ಅಪಾರ. ಹೀಗೆ ಎಸ್ ಪಿ ಬಿ ಅವರೊಂದಿಗಿನ ಒಡನಾಟವನ್ನು ರಾಜೇಶ್ ಕೃಷ್ಣನ್ ನೆನಪಿಸಿಕೊಂಡರು.

ಕೆಲವು ವರ್ಷಗಳ ಹಿಂದೆ ಭಾನುವಾರ ರಾಮಾಯಣ ಹಾಗೂ ಮಹಾಭಾರತ ಎಂಬ ಎರಡು ಮಹಾನ್ ಧಾರಾವಾಹಿಗಳು ದೂರದರ್ಶನದಲ್ಲಿ ಬರುತ್ತಿದ್ದವು.‌ ಕೋಟ್ಯಾಂತರ ಜನ ಅದನ್ನು ವೀಕ್ಷಿಸುತ್ತಿದ್ದರು. ಆನಂತರ ಅಷ್ಟೇ ಜನಪ್ರಿಯವಾಗಿದ್ದು “ಎದೆ ತುಂಬಿ ಹಾಡುವೆನು”.‌ ನಾನು ಈಗ ಅವರು ನಡೆಸಿಕೊಡುತ್ತಿದ್ದ ಕಾರ್ಯಕ್ರಮದ ವಿಟಿ ನೋಡಿದಾಗ ಭಯವಾಗುತ್ತಿದೆ.
ಅಲ್ಲಿ ಬರುವ ಹೊಸ ಗಾಯಕರಿಗಿಂತ ನಾವು ತಿಳಿದುಕೊಳ್ಳುವುದು ಸಾಕಷ್ಟಿದೆ. ತೀರ್ಪುಗಾರರಾಗಿ ಎಸ್ ಪಿ ಬಿ ಅವರು ಕಾರ್ಯಕ್ರಮ ನಡೆಸಿಕೊಡುತ್ತಿದ್ದ ರೀತಿ ಅನುಕರಣೀಯ. ಅವರ ಹೆಸರಿಗೆ ತೊಂದರೆಯಾಗದಂತೆ ಕಾರ್ಯಕ್ರಮ ನಡೆಸಿಕೊಡುವುದು ನಮ್ಮ ಕರ್ತವ್ಯ ಎಂದರು ವಿ.ಹರಿಕೃಷ್ಣ.

ಅಪ್ಪನ ನೇತೃತ್ವದಲ್ಲಿ ಮೂಡಿಬರುತ್ತಿದ್ದ, ” ಎದೆ ತುಂಬಿ ಹಾಡುವೆನು” ಕಾರ್ಯಕ್ರಮವನ್ನು ಮತ್ತೆ ಆರಂಭಿಸುತ್ತಿರುವುದಕ್ಕೆ. ಕಲರ್ಸ್ ವಾಹಿನಿಗೆ ಧನ್ಯವಾದ ಎಂದರು ಎಸ್ ಪಿ ಬಿ ಪುತ್ರ ಎಸ್ ಪಿ ಚರಣ್.
ರಾಮೋಜಿರಾವ್ ಅವರು ತೆಲುಗಿನಲ್ಲಿ “ಪಾಡುತ ತಿಯಗ” ಎಂಬ ಕಾರ್ಯಕ್ರಮ ನಡೆಸುತ್ತಿದ್ದರು. ಆ‌ನಂತರ ಅಪ್ಪ ಈ ಕಾರ್ಯಕ್ರಮವನ್ನು ಕನ್ನಡದಲ್ಲಿ “ಎದೆ ತುಂಬಿ ಹಾಡುವೆನು” ಎಂಬ ಶೀರ್ಷಿಕೆಯಿಂದ ಆರಂಭಿಸಿದರು. ಕಾರ್ಯಕ್ರಮ ಅತ್ಯಂತ ಜನಪ್ರಿಯವೂ ಆಯಿತು.
ಈ ಟಿವಿ ಅವರು ಈ ಕಾರ್ಯಕ್ರಮ ನಿಲಿಸಿದಾಗ ಅಪ್ಪನಿಗೆ ಬೇಸರವಾಗಿದ್ದು ಉಂಟು. ತೆಲುಗು, ಕನ್ನಡದಲ್ಲಿ ಜನಪ್ರಿಯವಾಗಿದ್ದ ಈ ಕಾರ್ಯಕ್ರಮವನ್ನು ತಮಿಳಿನಲ್ಲಿ ಮಾಡಲಿಲ್ಲ ಎಂಬ ಕೊರಗು ಅಪ್ಪನಲ್ಲಿತ್ತು ಎಂದರು ಚರಣ್.


ನಮ್ಮ ಬಾಲ್ಯದಲ್ಲಿ ಅಪ್ಪನೊಂದಿಗೆ ಹೆಚ್ಚು ಸಮಯ ಕಳೆಯಲಿಲ್ಲ.. ಅಪ್ಪ ಯಾವಗಲೂ ಬ್ಯುಸಿ ಇರುತ್ತಿದ್ದರು.
ನನ್ನ ಕಿರಿಯ ಸಹೋದರನಂತಿರುವ ರಾಜೇಶ್ ಕೃಷ್ಣನ್ ಅಪ್ಪನೊಂದಿಗೆ ಸಾಕಷ್ಟು ಸಮಯ ಕಳೆದಿದ್ದಾರೆ ಎಂದು ಚರಣ್ ಹಿಂದಿನ ದಿನಗಳನ್ನು ಮೆಲಕು ಹಾಕಿದರು.

Categories
ಸಿನಿ ಸುದ್ದಿ

ಕೆಜಿಎಫ್ ಸುಂದರಿ ಅರೆಸ್ಟ್ ; ಸ್ವಿಮ್ ಸೂಟ್ ನಲ್ಲೇ ಸೀಜ್- ಬಂಧಿಸಿದ್ದು ಪೋಲಿಸರಲ್ಲ !

ಕೆಜಿಎಫ್ ಸುಂದರಿ ಅರೆಸ್ಟ್ ಅಂದಾಕ್ಷಣ ಅರೆಕ್ಷಣ ಶಾಕ್ ಆಗೋದು ಸತ್ಯ. ಚಿನ್ನದ ಸಾಮ್ರಾಜ್ಯದ ಯುವರಾಣಿ ಕಣ್ಮುಂದೆ ಬರೋದು ಖಚಿತ. ಆದರೆ ಇದು ಕಥಾನಾಯಕಿಯ ಕಥೆಯಲ್ಲ ಸೆಲ್ಫ್ ಮೇಡ್ ಷೆಹಜಾದ್ ಜೊತೆ ಕುಣಿದು ಕುಪ್ಪಳಿಸಿದ ಸೆಕ್ಸಿ ಗರ್ಲ್ ಸ್ಟೋರಿ.

ಯಾರಪ್ಪ ಆ ಮಾದಕ ಮದನಾರಿ ಅಂತೀರಾ? ಮತ್ಯಾರು ಅಲ್ಲಾರ್ರೀ ಕೆಜಿಎಫ್ ಚಾಪ್ಟರ್ 1 ಹಿಂದಿ ಅವತರಣಿಕೆಯ ‘ಗಲಿ‌ ಗಲಿ ಮೇ’ ಸ್ಪೆಷಲ್ ಸಾಂಗ್ ನಲ್ಲಿ ರಾಕಿಭಾಯ್ ಜೊತೆ ಲೆಗ್ ಶೇಕ್ ಮಾಡುತ್ತಾ, ಕಣ್ಣಲ್ಲೇ ಕಥಕ್ಕಳಿ ಆಡಿದ ಮನಮೋಹಕ ಬೆಡಗಿ ಮೌನಿರಾಯ್.

ಸರ್ರೀ ಎಲ್ಲಾ ಓಕೆ, ಕೆಜಿಎಫ್ ಸುಂದರಿ ಅರೆಸ್ಟ್ ಅಂದರಲ್ಲ ಅದರ ಬಗ್ಗೆ ಕ್ಲ್ಯಾರಿಟಿ‌ ಕೊಡಿ ಎನ್ನುವವರಿಗೆ ಉತ್ತರ ಕೊಡ್ಲೆಬೇಕು ಕೊಡ್ತೀವಿ. ಹೆಡ್ಡಿಂಗ್ ನಲ್ಲೇ ಕೆಜಿಎಫ್ ಸುಂದರಿನಾ ಅರೆಸ್ಟ್ ಮಾಡಿದ್ದು ಪೊಲೀಸರಲ್ಲ ಅಂತ ಹೇಳಿಬಿಟ್ಟಿದ್ದೇವೆ.ಹಾಗಾದ್ರೆ ಮತ್ತಿನ್ಯಾರು ಎನ್ನುವ ಕೌತುಕದ ಪ್ರಶ್ನೆಗೆ ಉತ್ತರ ಪಡ್ಡೆಹೈಕ್ಳು ಹಾಗೂ ಫ್ಯಾನ್ ಫಾಲೋಯರ್ಸ್.

ಬಿಟೌನ್ ಹಾಟ್ ಬ್ಯೂಟಿ, ಸ್ಟ್ರಾಬೆರಿಯಷ್ಟೇ ಸೊಗಸಾದ ಸ್ವೀಟಿ ಮೌನಿರಾಯ್ ಗೆ ಕೋಟಿಗಟ್ಟಲೇ ಫ್ಯಾನ್ಸ್ ಇದ್ದಾರೆ. ಮಾದಕ ಮೈಮಾಟದಿಂದ ಮಾತ್ರವಲ್ಲ ಮಜ್ಬೂತ್ ಅಭಿನಯದ ಮೂಲಕವೂ ಮೌನಿ ಚಿತ್ರ ಪ್ರೇಮಿಗಳ ಹೃದಯ ಗೆದ್ದಿದ್ದಾರೆ. ಇತ್ತೀಚೆಗೆ ಟೂ ಪೀಸ್ ಹಾಕಿಕೊಂಡು, ಫೋಟೋಶೂಟ್ ಮಾಡಿಸೋಣವೆಂದು ಸ್ವಿಮ್ಮಿಂಗ್ ಫುಲ್ ಗಿಳಿದ ಮೌನಿ ಫ್ಯಾನ್ಸ್ ಫಾಲೋಯರ್ಸ್ ಹಾರ್ಟ್ನ ಬ್ರೇಕ್ ಮಾಡಿದರು. ಇದರ ಬೆನ್ನಲ್ಲೇ ಪಡ್ಡೆಹೈಕ್ಳು ಮೌನಿಯನ್ನ ಕೆಂಪಾದ ಹೃದಯದ ಲಾಕಪ್ ನಲ್ಲಿ ಬಂಧಿಸಿಬಿಟ್ಟರು. ಅರೆಸ್ಟ್ ಆದ ಮೌನಿ ಕೇಕೆಹಾಕಿದರು.

ನಟ- ನಟಿಯರನ್ನ ಅಭಿಮಾನಿ ದೇವರುಗಳು‌ ತಮ್ಮ ಹೃದಯ ಸಿಂಹಾಸನದಲ್ಲಿ ಬಂಧಿಸಿಕೊಂಡು ಪೂಜೆ ಮಾಡ್ತಾರೆ. ಅದರಂತೇ, ಮೌನಿರಾಯ್ ನ ಕೂಡ ಅವರ ಫ್ಯಾನ್ಸ್ ಫಾಲೋಯರ್ಸ್ ಅಭಿಮಾನಿಸುತ್ತಾರೆ. ಈ ಮಧ್ಯೆ ಪಡ್ಡೆಹೈಕ್ಳು ಆಗಾಗ ಮಾದಕ ನಟಿಯರನ್ನ ಅರೆಸ್ಟ್ ಮಾಡುತ್ತಲೇ ಇರುತ್ತಾರೆ. ವೆದರ್ ಕೈಕೊಟ್ಟಾಗ ಹಾಗೂ ಚಳಿಗಾಲ ಬಂದಾಗ ಸೆಕ್ಸಿಬೊಂಬೆಗಳನ್ನು ಕಣ್ತುಂಬಿಕೊಂಡು ಮೈಮನಸ್ಸನ್ನು ತಂಪುಮಾಡಿಕೊಳ್ತಾರೆ. ಹೀಗ್ ಮಾಡೋದು ಪಡ್ಡೆಹೈಕ್ಳ ತಪ್ಪಲ್ಲ ಸೃಷ್ಠಿಕರ್ತ ಬ್ರಹ್ಮನದ್ದೇ ತಪ್ಪು ತಪ್ಪು ತಪ್ಪು

ವಿಶಾಲಾಕ್ಷಿ, ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಗೋಲ್ಡ್‌ ಹಿಡಿದ ದಿಗಂತ್‌ !‌ ಹಿನ್ನೆಲೆ ಸಂಗೀತದಲ್ಲಿ ಮಾರಿಗೋಲ್ಡ್ ನಿರತ; ಇಷ್ಟರಲ್ಲೇ ತೆರೆಗೆ


 ಆರಂಭದಿಂದಲೂ  ತನ್ನ ಶೀರ್ಷಿಕೆಯ  ಮೂಲಕವೇ ನಿರೀಕ್ಷೆ ಹುಟ್ಟಿಸಿರುವ‍, ತೀರ್ಥಳ್ಳಿ ಹುಡುಗ  ದಿಗಂತ್‌ ಅಭಿನಯದ  ಚಿತ್ರ ಮಾರಿಗೋಲ್ಡ್. ಈಗಾಗಲೇ ಚಿತ್ರದ ಪೋಸ್ಟ್‌ ‌ಪ್ರೊಡಕ್ಷನ್ ಕೆಲಸಗಳು  ಪ್ರಗತಿಯಲ್ಲಿದ್ದು, ಚಿತ್ರದ ಡಬ್ಬಿಂಗ್ ಕಾರ್ಯ ಮುಗಿದು, ಹಿನ್ನೆಲೆ ಸಂಗೀತದ ಕೆಲಸ ಕೊನೇ ಹಂತದಲ್ಲಿದೆ.  ಇಷ್ಟರಲ್ಲೇ   ಸೆನ್ಸಾರ್ ಅಂಗಳಕ್ಕೆ  ಹೋಗಲು ಸಿದ್ದವಾಗಿರುವ ‘ಮಾರಿಗೋಲ್ಡ್’ ಚಿತ್ರ. ಸದ್ಯದಲ್ಲೇ  ಪ್ರೇಕ್ಷಕರ ಮುಂದೆ ಬರಲಿದೆ.  ಪಕ್ಕಾ ಕ್ರೈಮ್‌ ಥ್ರಿಲ್ಲರ್‌ ಕಥಾನಕ‌ ಹೊಂದಿರುವ  ಈ ಚಿತ್ರವನ್ನು ರಾಘವೇಂದ್ರ ಎಂ.ನಾಯಕ್‌  ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.  ಇದು ರಾಘವೇಂದ್ರ ನಾಯಕ್  ಅವರಿಗೆ  ಮೊದಲ ನಿರ್ದೇಶನದ ಚಿತ್ರ.  


ಈಗಾಗಲೇ ವಿಭಿನ್ನ ಗೆಟಪ್ನ  ದಿಗಂತ್ ಅವರ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದ್ದು,  ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಅಲ್ಲದೆ ಇದೇ ಮೊದಲ ಬಾರಿಗೆ ದಿಗಂತ್ ಹೊಸ ರೀತಿಯ  ಪಾತ್ರದ ಮೂಲಕ  ಪ್ರೇಕ್ಷಕರಿಗೆ  ಮೋಡಿ ಮಾಡಲಿದ್ದಾರೆ.
“ಮಾರಿಗೋಲ್ಡ್‌” ಅಂದಾಕ್ಷಣ, ಅದೊಂದು ಅಂಡರ್‌ವರ್ಲ್ಡ್‌ ಸಿನಿಮಾ ಇರಬಹುದಾ ಎಂಬ ಪ್ರಶ್ನೆ ಎದುರಾಗುತ್ತದೆ. ಆದರೆ, ಅದು ಅಂಡರ್‌ವರ್ಲ್ಡ್‌ ಸಿನಿಮಾನಾ ಅಥವಾ ರೌಡಿಸಂ ಕುರಿತಾದ ಕಥೆಯೇ ಎಂಬುದಕ್ಕೆ ಚಿತ್ರ  ರಿಲೀಸಾಗೋವರೆಗೆ  ಕಾಯಬೇಕು.


  ಆರ್.ವಿ.ಕ್ರಿಯೇಷನ್ಸ್ ಮೂಲಕ ರಘುವರ್ಧನ್ ಫಿಲ್ಮ್ಸ್ ಬ್ಯಾನರ್ ನಲ್ಲಿ  ರಘುವರ್ಧನ್‌ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ರಘುವರ್ಧನ್‌ ಅವರು ಮೂಲತಃ ನಿರ್ದೇಶಕರಾಗಿದ್ದರೂ,  ಯುವ ನಿರ್ದೇಶಕ ರಾಘವೇಂದ್ರ ಅವರಿಗೆ  ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಅದಕ್ಕೆ ಕಾರಣ, ರಾಘವೇಂದ್ರ ಎಂ.ನಾಯಕ್‌ ಅವರು ಮಾಡಿಕೊಂಡಿದ್ದ ಕಥೆ. ಚೆನ್ನಾಗಿದ್ದರಿಂದ,  ಚಿತ್ರವನ್ನು ಸಹ ಅವರೇ ನಿರ್ದೇಶಿಸಲಿ ಎಂದು ರಘುವರ್ಧನ್‌ ಅವಕಾಶ ನೀಡಿದ್ದಾರೆ. ಅಲ್ಲದೆ  ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸಿದ್ದಾರೆ.  ಈ ಹಿಂದೆ ತಿಮ್ಮರಾಯ, ಬದ್ರಿ, ಗುಣವಂತ, ಮಿಸ್ಟರ್ ಎಲ್.ಎಲ್.ಬಿ.  ಮೊದಲಾದ ಚಿತ್ರಗಳನ್ನು  ರಘುವರ್ಧನ್ ನಿರ್ದೇಶಿಸಿದ್ದರು


ಈ ಚಿತ್ರಕ್ಕೆ ವೀರ್ ಸಮರ್ಥ್ ಅವರ  ಸಂಗೀತವಿದ್ದು, ಯೋಗರಾಜ್ ಭಟ್, ಕವಿರಾಜ್ ಮತ್ತು ವಿಜಯ್ ಭರಮಸಾಗರ ಅವರು ಸಾಹಿತ್ಯ ಬರೆದಿದ್ದಾರೆ. ಕೆ.ಎಸ್.ಚಂದ್ರಶೇಖರ್ ಕ್ಯಾಮೆರಾ ಹಿಡಿದರೆ, ಕೆ.ಎಂ.ಪ್ರಕಾಶ್ ಸಂಕಲನವಿದೆ. ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ. ಅರ್ಜುನ್ ರಾಜ್ ಸಾಹಸ, ಕಲೈ ಅವರ ನೃತ್ಯ. ನಿರ್ದೇಶನವಿದೆ.

ದಿಗಂತ್‌ ಅವರಿಗೆ ಇದೊಂದು ಹೊಸಬಗೆಯ ಚಿತ್ರವಂತೆ. ಅದರಲ್ಲೂ ದಿಗಂತ್‌ ಮೊದಲ ಬಾರಿಗೆ ಈ ರೀತಿಯ ಪಾತ್ರ ನಿರ್ವಹಿಸಿದ್ದಾರೆ, ಬೆಂಗಳೂರು, ಸಕಲೇಶಪುರದ  ಸುತ್ತಮುತ್ತಲ ತಾಣಗಳಲ್ಲಿ ಚಿತ್ರೀಕರಣಗೊಂಡಿರುವ  ಈ ಚಿತ್ರದಲ್ಲಿ ಸಂಗೀತಾ ಶೃಂಗೇರಿ  ನಾಯಕಿಯಾಗಿದ್ದಾರೆ.  ಉಳಿದಂತೆ ಸಂಪತ್‌ಕುಮಾರ್‌, ಕಾಕ್ರೋಚ್‌ ಸುಧಿ, ಯಶ್‌ಶೆಟ್ಟಿ, ವಜ್ರಾಂಗ್ ಶೆಟ್ಟಿ,  ಬಾಲ ರಾಜ್ವಾಡಿ, ಗಣೇಶ್‌ರಾವ್, ಭಾಸ್ಕರ್ ಪಾಂಡವಪುರ,  ಮನಮೋಹನ್  ರೈ, ಮಹಾಂತೇಶ್ ಹೀರೆಮಠ, ಮಿಮಿಕ್ರಿ ಗೋಪಿ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ.

Categories
ಸಿನಿ ಸುದ್ದಿ

ಹೊಸ ಸಿನಿಮಾಗೆ ಚಿತ್ರಕಥೆ ಮುಗಿಸಿದ ಖುಷಿಯಲ್ಲಿ ಜೋಗಿ ಪ್ರೇಮ್‌ ; ಈ ಬಾರಿ ಪಕ್ಕಾ ಆಕ್ಷನ್‌ ಸಿನಿಮಾಗೆ ಕೈ ಹಾಕ್ತಾರಾ ಬಾಸು!

ನಿರ್ದೇಶಕ ಪ್ರೇಮ್‌ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಅರೇ, ಮತ್ಯಾವ ಸ್ಟಾರ್‌ ನಟ ಅವರ ವಿರುದ್ಧ ಮಾತಾಡಿದ್ರು ಅನ್ನೋ ಪ್ರಶ್ನೆ ಈಗ ಸಹಜ. ಅದಕ್ಕೆ ಕಾರಣ, ಇತ್ತೀಚೆಗಷ್ಟೇ ಪ್ರೇಮ್‌ ಅವರನ್ನು ಕುರಿತಂತೆ ನಟ ದರ್ಶನ್‌ ಅವರು ಅವರೇನು ದೊಡ್ಡ ಪುಡಂಗಾನ ಅಂದಿದ್ದರು. ಆ ಮಾತು ಜೋರು ಸುದ್ದಿ ಮಾಡಿತ್ತು. ಅಷ್ಟೇ ಅಲ್ಲ, ಅತ್ತ ಪ್ರೇಮ್‌ ಅವರನ್ನೂ ಕೆರಳಿಸುವಂತೆ ಮಾಡಿದ್ದು ಸುಳ್ಳಲ್ಲ. ಪ್ರೇಮ್‌ ಕೂಡ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ದರ್ಶನ್‌ ವಿರುದ್ಧ ಮಾತಾಡಿದ್ದರು. ಆ ಮಧ್ಯೆ ರಕ್ಷಿತಾ ಪ್ರೇಮ್‌ ಎಂಟ್ರಿಯಾಗಿ, ದರ್ಶನ್‌ ಜೊತೆಗಿದ್ದ ಒಂದು ಫೋಟೋ ಹಾಕಿಕೊಂಡು ಒಂದು ಸ್ಟೇಟಸ್‌ ಹಾಕಿಕೊಂಡಿದ್ದರು. ಅಲ್ಲಿಗೆ ಎಲ್ಲವೂ ಸುಖಾಂತ್ಯಗೊಂಡಿತ್ತು. ಈಗ ಪ್ರೇಮ್‌ ಅವರ ಹೊಸ ಸುದ್ದಿ ಅಂದರೆ, ಅವರೊಂದು ಹೊಸ ಸಿನಿಮಾ ಕಥೆಯನ್ನು ಮುಗಿಸಿದ್ದಾರೆ.

ಹೌದು, ಹೀಗಂತ ಸ್ವತಃ ಪ್ರೇಮ್‌ ಅವರೇ ಸೋಶಿಯಲ್‌ ಮೀಡಿಯಾದಲ್ಲೊಂದು ವಿಡಿಯೋ ಹಂಚಿಕೊಂಡು ಹೇಳಿಕೊಂಡಿದ್ದಾರೆ. ಸದ್ಯ ಪ್ರೇಮ್‌ ರಕ್ಷಿತಾ ಅವರ ಸಹೋದರ ರಾಣ ಅವರಿಗೆ “ಏಕ್‌ ಲವ್‌ ಯಾ” ಸಿನಿಮಾ ಮಾಡಿದ್ದಾರೆ. ಅದು ಇಷ್ಟರಲ್ಲೇ ಪ್ರೇಕ್ಷಕರ ಮುಂದೆ ಬರಲು ತಯಾರಾಗುತ್ತಿದೆ. ಇದರ ಮಧ್ಯೆ ಪ್ರೇಮ್‌ ಕೂಡ ಸದ್ದಿಲ್ಲದೆಯೇ ಒಂದು ಸಿನಿಮಾದ ಚಿತ್ರಕಥೆ ಮುಗಿಸಿದ ಬಗ್ಗೆ ಹೇಳಿಕೊಂಡಿದ್ದು, ಆ ಚಿತ್ರಕಥೆಗೆ ವಿಶೇಷ ಪೂಜೆ ಮಾಡಿ, ಕುಂಬಳಕಾಯಿ ಒಡೆದು ಖುಷಿಗೊಂಡಿದ್ದಾರೆ. ಹಾಗಾದರೆ, ಪ್ರೇಮ್‌ ಈ ಬಾರಿ ಯಾವ ಜಾನರ್‌ ಸಿನಿಮಾ ಮಾಡ್ತಾರೆ? ಸಹಜವಾಗಿಯೇ ಎಲ್ಲರಲ್ಲೂ ಕಾಡುವ ಪ್ರಶ್ನೆ ಇದು. ಪ್ರೇಮ್‌ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿರುವ ವಿಷಯವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅವರ ಮುಂದಿನ ಸಿನಿಮಾ ಪಕ್ಕಾ ಆಕ್ಷನ್‌ ಸಿನಿಮಾ ಆಗಿರುತ್ತೆ ಅನ್ನುವುದು ದಟ್ಟವಾಗಿದೆ.

ಅಷ್ಟಕ್ಕೂ ಪ್ರೇಮ್‌ ಹಂಚಿಕೊಂಡಿರುವ ಆ ವಿಡಿಯೋದಲ್ಲೇನಿದೆ ಗೊತ್ತಾ? “ಯಾರಾದರೂ ಯುದ್ಧದಲ್ಲಿ ಹುತಾತ್ಮರಾದರೆ ಅವರ ಸ್ವಾಗತಕ್ಕಾಗಿ ಸ್ವರ್ಗ ಕಾಯುತ್ತಿರುತ್ತದೆ. ಒಂದೊಮ್ಮೆ ಯುದ್ಧದಲ್ಲಿ ಗೆದ್ದರೆ, ಅವರಿಗಾಗಿ ಅಧಿಕಾರದ ಕಿರೀಟ ಕಾಯುತ್ತಿರುತ್ತದೆ. ಒಟ್ಟಾರೆ ಯುದ್ಧ ಒಳ್ಳೆಯದೇ. ಯುದ್ಧ ಈಗ ಶುರುವಾಗುತ್ತಿದೆ…ʼ ಎಂದಿದ್ದಾರೆ ಪ್ರೇಮ್.‌ ಚಿತ್ರಕತೆ ಕೆಲಸವನ್ನು ಮುಗಿಸಿದ್ದೇನೆ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಆಗಸ್ಟ್ 2021ರಲ್ಲಿಯೇ ಹಂಚಿಕೊಳ್ಳಲಿದ್ದೇನೆ’ ಎಂದಿರುವ ಪ್ರೇಮ್ ಅವರಿಗೆ ಇದು 9ನೇ ಚಿತ್ರ. 2003ರಲ್ಲಿ ‘ಕರಿಯಾ’ ಚಿತ್ರದ ಮೂಲಕ ನಿರ್ದೇಶಕರಾಗಿ ಚಿತ್ರರಂಗ ಪ್ರವೇಶಿಸಿದ ಪ್ರೇಮ್, ಆ ಬಳಿಕ ಒಂದೊಂದೇ ಹಿಟ್‌ ಸಿನಿಮಾ ಕೊಟ್ಟರು. ಆ ಮೂಲಕ ಅವರು ಗಾಂಧಿನಗರದಲ್ಲಿ ಗಟ್ಟಿ ಬೇರೂರಿದರು.

ತಮ್ಮದೇ ಶೈಲಿಯಲ್ಲಿ ಸಿನಿಮಾ ಮಾಡುವ ಪ್ರೇಮ್‌ಗೆ ಪ್ರೇಕ್ಷಕರ ನಾಡಿಮಿಡಿತ ಗೊತ್ತಿದೆ. ಅವರಿಗೆ ತಕ್ಕಂತೆಯೇ ಸಿನಿಮಾ ಕೊಡುವ ಜಾಣತನ ಪ್ರೇಮ್‌ಗಿದೆ. ಸ್ಟಾರ್‌ ಮಾತ್ರವಲ್ಲ, ಹೊಸಬರನ್ನೂ ಇಟ್ಟುಕೊಂಡು ಸಾಬೀತು ಮಾಡಿರುವ ಪ್ರೇಮ್‌, ಒಂದು ಸಿನಿಮಾ ಮಾಡ್ತಾರೆ ಅಂದರೆ, ಅದೊಂದು ರೀತಿ ಕುತೂಹಲವಂತೂ ಹೌದು. ಪ್ರೇಮ್‌ ಸೋಲು ಕಂಡಿದ್ದೂ ಇದೆ, ಗೆಲುವಿನ ಮೆಟ್ಟಿಲನ್ನೂ ಏರಿದ್ದೂ ಇದೆ. ನಿರೀಕ್ಷೆ ಇಟ್ಟುಕೊಂಡ ಸಿನಿಮಾಗಳು ಸಹ ಕೈ ಕೊಟ್ಟಿದ್ದ ಉದಾಹರಣೆ ಇದ್ದರೂ, ಪ್ರೇಮ್‌ ಮಾತ್ರ, ತಮ್ಮ ಪಾಡಿಗೆ ತಾವು ಸಿನಿಮಾ ಮಾಡುತ್ತಿದ್ದಾರೆ. “ವಿಲನ್‌” ಮೂಲಕ ಶಿವರಾಜಕುಮಾರ್‌ ಮತ್ತು ಸುದೀಪ್‌ ಅವರನ್ನು ಇಟ್ಟುಕೊಂಡು ದೊಡ್ಡ ಮಟ್ಟದ ಚಿತ್ರ ಕೊಟ್ಟರು. ಭಾರೀ ಕುತೂಹಲ ಕೆರಳಿಸಿದ್ದ ಆ ಚಿತ್ರ, ತಕ್ಕಮಟ್ಟಿಗೆ ಮೆಚ್ಚುಗೆ ಪಡೆದುಕೊಂಡಿತು. ಆ ಬಳಿಕ ಅವರು, “ಏಕ್‌ ಲವ್‌ ಯಾ” ಸಿನಿಮಾಗೆ ಅಣಿಯಾದರು.

ಈಗ ಆ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಇಷ್ಟರಲ್ಲೇ ಪ್ರೇಕ್ಷಕರ ಮುಂದೆ ಬರಲಿದೆ. ಅಂದಹಾಗೆ, ರಕ್ಷಿತಾ ಅವರ ಸಹೋದರನಿಗಾಗಿಯೇ, ಒಂದೊಳ್ಳೆಯ ಲವ್‌ ಸ್ಟೋರಿ ಹೆಣೆದಿರುವ ಪ್ರೇಮ್‌, ಈಗಾಗಲೇ ಚಿತ್ರದ ಒಂದು ಸಾಂಗ್‌ ಬಿಟ್‌ ಬಿಡುಗಡೆ ಮಾಡಿ, ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದ್ದಾರೆ. ಅದೇನೆ ಇರಲಿ, ಪ್ರೇಮ್‌ ಈಗ ಹೊಸ ಸಿನಿಮಾದ ಚಿತ್ರಕಥೆ ಸಿದ್ಧಪಡಿಸಿದ್ದಾರೆ. ಈ ಬಾರಿ ಸ್ಟಾರ್‌ ಹಿಂದೆ ಹೋಗ್ತಾರೋ ಅಥವಾ ಹೊಸಬರನ್ನು ಕರೆತರುತ್ತಾರೋ ಅನ್ನುವುದನ್ನು ಕಾದು ನೋಡಬೇಕಿದೆ.

Categories
ಸಿನಿ ಸುದ್ದಿ

ಪಾವಗಡ ಮಂಜುನಾ ಕೈ ಬಿಡಲಿಲ್ಲ ಧರ್ಮಸ್ಥಳ ಮಂಜುನಾಥಸ್ವಾಮಿ; ಬಿಗ್ಬಾಸ್ ಪಟ್ಟಕ್ಕೇರಿಸಿ ಕೇಕೆ ಹೊಡೆದಿದ್ದು 6 ಕೋಟಿ ಜನ ಸ್ವಾಮಿ !

ಉಸಿರುಗಟ್ಟಿ‌ ಕೋಮಾಗೆ ಹೋದಾಗ, ಸಾವು ಬದುಕಿನ ನಡುವೆ ಹೋರಾಟ ಮಾಡುವಾಗ, ಜೀವಕ್ಕೆ ಉಸಿರು ತುಂಬಿ ಬದುಕಿಸಿಕೊಂಡ ಧರ್ಮಸ್ಥಳ‌ ಮಂಜುನಾಥ ಸ್ವಾಮಿ, ಅರಮನೆಯಂತಹ ಸೆರೆಮನೆಯಲ್ಲಿರುವ ನನ್ನನ್ನ ಕೈಬಿಡುವುದುಂಟೇ ? ಹೀಗೊಂದು ಪ್ರಶ್ನೆ ಮಂಜು ಪಾವಗಡ ಮನಸ್ಸಲ್ಲೂ ಕೂಡ ಕಥಕ್ಕಳಿ ಆಡಿತ್ತು.
ಕಲಾವಿದ ಆಗಬೇಕು ಎಂದು ಬೇಡಿಕೊಂಡಾಗ, ನಾಲ್ಕು ಮಂದಿ ನನ್ನನ್ನು ಗುರುತಿಸುವಂತೆ ಮಾಡು ಸ್ವಾಮಿ ಎಂದು ಅಡ್ಡಬಿದ್ದು ಬೇಡಿದಾಗ ಎಲ್ಲವನ್ನೂ ಈಡೇರಿಸಿರುವ ಧರ್ಮಸ್ಥಳ ಮಂಜುನಾಥ ಸ್ವಾಮಿ, ಬಿಗ್ ಬಾಸ್ ಗೆಲ್ಲುವ ಕನಸನ್ನು ಈಡೇರಿಸದೇ ಬಿಡುವನೇ ? ಯಾವುದೇ ಕಾರಣಕ್ಕೂ ಮಂಜುನಾಥ ಸ್ವಾಮಿ ನನ್ನ ಕೈ ಬಿಡಲ್ಲ.. ಗೆದ್ದೇ ಗೆಲ್ತೀನಿ.. ಬಿಗ್ಬಾಸ್ ಗದ್ದುಗೆ ಏರೇ ಏರ್ತೀನಿ, ಹೀಗೊಂದು ಆತ್ಮ ವಿಶ್ವಾಸ ಮಂಜು ಪಾವಗಡ ಮನಸ್ಸಲ್ಲಿತ್ತು. ಆ ಅಚಲವಾದ ಆತ್ಮವಿಶ್ವಾಸಕ್ಕೆ ಬಿಗ್ಬಾಸ್ ವಿಜಯದ ಹಾರ ಹಾಕಿದೆ. ಮಂಜುನಾಥ ಸ್ವಾಮಿಯ ಅಭಯ ಹಸ್ತ ಮಂಜಣ್ಣನ ಮೇಲಿರುವುದು ನಿಜವಾಗಿದೆ.

ಬಿಗ್ಬಾಸ್ ಸೀಸನ್ 8 ರ ವಿನ್ನರ್ ಯಾರಾಗ್ತಾರೆ ಎನ್ನುವ ಆರು ತಿಂಗಳ‌ ಕೂತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ದೊಡ್ಮನೆ ಗ್ರ್ಯಾಂಡ್ ಫಿನಾಲೆ ಅದ್ದೂರಿಯಾಗಿ ಅಂತ್ಯಗೊಂಡಿದೆ.
ಮಜಾಭಾರತ ಖ್ಯಾತಿಯ ಮಂಜು ಪಾವಗಡ ಬಿಗ್ ಬಾಸ್ ವಿನ್ನರ್ ಪಟ್ಟಕ್ಕೇರಿ ಗೆಲುವಿನ ಮುತ್ತಿನ ಹಾರ ಹಾಕಿಸಿಕೊಂಡು ಕರುನಾಡ ಅಂಗಳದಲ್ಲಿ‌ ಮೆರವಣಿಗೆ ಹೊರಟಿದ್ದಾರೆ. ಮಂಜು ಗೆಲುವನ್ನು ಕರ್ನಾಟಕದ ಲಕ್ಷಾಂತರ ಮಂದಿ ಸಂಭ್ರಮಿಸುತ್ತಿದ್ದಾರೆ.

ಮಂಜು ಪಾವಗಡ ಗೆಲ್ಲಬೇಕು‌ ಎನ್ನುವುದು ಕೇವಲ ಅವರ ಕುಟುಂಬಸ್ಥರು ಹಾಗೂ ಆಪ್ತರ ಕನಸಾಗಿರಲಿಲ್ಲ. ಕರುನಾಡಿನ ಬಹುತೇಕ ಮಂದಿ ಮಂಜು‌ ಗೆಲುವಿನ‌ ಗದ್ದುಗೆ ಏರಬೇಕೆಂದು ಬಯಸಿದ್ದರು. ಪಾವಗಡ ಮಂಜು‌ ಬಿಗ್ಬಾಸ್ ನಲ್ಲಿ ದಿಗ್ವಿಜಯ ಸಾಧಿಸಿದರೆ ಹಳ್ಳಿ ಜಯಭೇರಿ ಬಾರಿಸಿದಂತೆ ಎಂದು ಮಾತನಾಡಿಕೊಂಡಿದ್ದರು.‌ ಅದರಂತೆ ಕರುನಾಡಿನ 45,03,495 ಲಕ್ಷ ಮಂದಿ
ವೋಟ್ ಹಾಕಿದ್ದಾರೆ. ಫಿನಾಲೆಗೆ ಲಗ್ಗೆ ಇಟ್ಟ ಟಾಪ್ ಫೈವ್ ಸ್ಪರ್ಧಿಗಳ‌ ಪೈಕಿ ಅತೀ ಹೆಚ್ಚು ವೋಟ್ ಪಡೆಯುವ ಮೂಲಕ ಬಿಗ್ಬಾಸ್ ಟ್ರೋಪಿಗೆ ಮಂಜಣ್ಣ ಮುತ್ತಿಕ್ಕಿದ್ದಾರೆ. 53 ಲಕ್ಷ ಕಂತೆ ನೋಟಿಗೆ ಮಂಜಣ್ಣ ಒಡೆಯರಾಗಿದ್ದಾರೆ.‌

ಹಳ್ಳಿಹಕ್ಕಿ.. ಗ್ರಾಮೀಣ ಪ್ರತಿಭೆ ಮಂಜಣ್ಣನ ಯಶಸ್ಸಿಗೆ ಸ್ವಂತ ಪರಿಶ್ರಮ ಹಾಗೂ ಕರ್ನಾಟಕದ ಮಂದಿಯ ಪ್ರೋತ್ಸಾಹ ಹಾಗೂ ಸಹಕಾರದ ಜೊತೆಗೆ ಧರ್ಮಸ್ಥಳದ‌ ಶ್ರೀಮಂಜುನಾಥ ಸ್ವಾಮಿಯ ಅಭಯಹಸ್ತವೂ ಇದೆ ಎನ್ನುವುದು ಪ್ರೂ ಆಗಿದೆ. ಮಂಜಣ್ಣ ಇಲ್ಲಿವರೆಗೂ ಏನೇ ಕೇಳಿಕೊಂಡರೂ ಅದೆಲ್ಲವೂ ಈಡೇರಿದೆಯಂತೆ. ಈಗ ದೊಡ್ಮನೆಯಲ್ಲಿ ಜಯಭೇರಿ ಬಾರಿಸುವ ಕನಸು ಕೂಡ ಸಾಕಾರಗೊಂಡಿದೆ. ಉಸಿರುಗಟ್ಟಿ ಕೋಮದಲ್ಲಿದ್ದ ಮಂಜುನಾ ತೀರ್ಥ ಹಾಗೂ ಪ್ರಸಾದ ಸೇವನೆಯಿಂದ ಬದುಕಿಸಿಕೊಂಡ ಶ್ರೀ ಮಂಜುನಾಥ ಸ್ವಾಮಿ,
ತನ್ನ ನಾಮಧೇಯ ಇಟ್ಟುಕೊಂಡು ಶ್ರದ್ಧಾ ಭಕ್ತಿಯಿಂದ ಸ್ಮರಿಸುವ ಹಾಗೂ ಕಲೆಯನ್ನು ಆರಾಧಿಸುವ ಕಲಾವಿದನ ದೊಡ್ಮನೆ‌ ಕನಸು ನನಸಾಗಿರುವುದರಲ್ಲಿ ಯಾವುದೇ ಡೌಟಿಲ್ಲ‌‌ ಬಿಡಿ.

ಬಿಗ್ಬಾಸ್ ಸೀಸನ್ 8ರ ಗೆಲುವು ಮಂಜಣ್ಣನಿಗೆ ಅಷ್ಟು ಸುಲಭವಾಗಿ ದಕ್ಕಿರುವುದಲ್ಲ. ಹಳ್ಳಿ ಹೈದ ಮಂಜಣ್ಣನಿಗೆ ತುಂಬಾ ಜನ ಕಾಂಪಿಟೇಟರ್ ಗಳು ಇದ್ದರು. ಫೈನಲ್ಸ್ ವರೆಗೆ ನೆಕ್ ಟು ನೆಕ್ ಪೈಪೋಟಿ ಕೊಡುತ್ತಲೇ ಬಂದರು.‌ ಇದ್ಯಾವುದಕ್ಕೂ ಜಗ್ಗದ ಹಳ್ಳಿ ಹಕ್ಕಿ ಮಂಜಣ್ಣ ಪ್ರತಿಸ್ಪರ್ಧಿಗಳ ಜೊತೆ ಫೈಟ್ ಮಾಡುತ್ತಾ, ಟಾಸ್ಕ್ ಕಂಪ್ಲೀಟ್ ಮಾಡುತ್ತಾ, ಬಿಗ್ಬಾಸ್ ವೀಕ್ಷಕರಿಗೆ ಭರ್ ಪೂರ್ ಹಾಸ್ಯದ ಮೂಲಕ ಮನರಂಜನೆ ಕೊಡುತ್ತಾ, ದೊಡ್ಮನೆ ನಾಯಕನಾಗಿಯೂ ಸೈ‌ ಎನಿಸಿಕೊಳ್ಳುತ್ತಾ ಅರಮನೆಯಲ್ಲಿ ಭರ್ತಿ
120 ದಿನ ಪೂರೈಸಿದರು. ಕಿಚ್ಚನ ಪಕ್ಕದಲ್ಲಿ ಬಂದು ನಿಂತರು.‌ ಮಾಣಿಕ್ಯನಿಂದ ಕೈ‌ ಮೇಲೆತ್ತಿಸಿಕೊಂಡು ವಿಜಯದ ಕೀರ್ತಿ ಪತಾಕೆಯನ್ನು ಹಾರಿಸಿದರು. ಅರೆಕ್ಷಣ ಭಾವುಕರಾದರು.

ಸಪೋರ್ಟ್ ಮಾಡಿದವರೆಲ್ಲರಿಗೂ ವೇದಿಕೆಯಿಂದಲೇ ಧನ್ಯವಾದ ಹೇಳಿದರು.
ಕರುನಾಡಿನ‌ ಈ ಋಣವನ್ನು ಕಲಾವಿದನಾಗಿ ತೀರಿಸಬೇಕು ಎನ್ನುವ ಹಠ ತೊಟ್ಟು ಮುಂದೆ ಸಾಗಿದ್ದಾರೆ. ಮಂಜಣ್ಣನ ವಿಜಯದ ಸವಾರಿ ಹೀಗೆ ಸಾಗಲಿ, ಕರುನಾಡನ್ನು ಸದಾ ರಂಜಿಸುತ್ತಿರಲಿ.

ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

error: Content is protected !!