ಹರಿಹರ ಪಿಚ್ಚರ್ಸ್ ನಿರ್ಮಾಣದ ‘ಡಿಆರ್ 56’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಹೀರೋ “ಪಿಆರ್” ಹಾಗು “ಪ್ರಿಯಾಮಣಿ” ಅಭಿನಯದ “ಡಿಆರ್ 56” ಚಿತ್ರದ ಟೀಸರ್ ಬಿಡುಗಡೆಗೆ ಕಾರಣ, ನಟ “ಪಿಆರ್” ಅವರ ಹುಟ್ಟು ಹಬ್ಬ. ಹಾಗಾಗಿ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ನವೆಂಬರ್ 11ರಂದು ಬಿಡುಗಡೆ ಮಾಡಲಾಗಿದೆ.
ಈ ಚಿತ್ರ ಕನ್ನಡ ಹಾಗೂ ತಮಿಳ್ ನಲ್ಲಿ ಏಕಕಾಲದಲ್ಲಿ ಚಿತ್ರೀಕರಣ ಮಾಡಲಾಗಿದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ಇದೊಂದು ಸೈನ್ಸ್ ಫಿಕ್ಷನ್ ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು ಸಮಾಜದಲ್ಲಿ ನಡೆಯುತ್ತಿದ್ದ, ನಡೆಯುತ್ತಿರುವ, ಮುಂದೆಯು ನಡೆಯುವ ವಂಚನೆಯನ್ನು ಜನರಿಗೆ ಮನದಟ್ಟು ಮಾಡಿಸಲು ಹೊರಟಿರುವ ಚಿತ್ರ.
ಕಥೆ ಹಾಗೂ ಚಿತ್ರಕಥೆ ನಾಯಕನಟ “ಪಿಆರ್” ಅವರೆ ರೂಪಿಸಿದ್ದು, ನಿರ್ದೇಶನದ ಜವಾಬ್ದಾರಿಯನ್ನು “ರಾಜೇಶ್ ಆನಂದ ಲೀಲಾ” ಅವರು ನಿರ್ವಹಿಸಿದ್ದಾರೆ ರಾಕೇಶ್ ಸಿ ತಿಲಕ್ ಅವರ ಛಾಯಾಗ್ರಹಣ ನೋಬಿನ್ ಪಾಲ್ ಅವರ ಸಂಗೀತ ಹಾಗೂ ಹಿನ್ನೆಲೆ ಸಂಗೀತ ವಿಶ್ವ ಎನ್ ಎಂ” ಅವರ ಸಂಕಲನ “ಶಂಕರ್ ರಾಮನ್” ಅವರ ಸಂಭಾಷಣೆ ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯವಿದೆ.
ರಾಷ್ಟ್ರಪ್ರಶಸ್ತಿ ವಿಜೇತ “ವಿಕ್ರಂ ಮೋರ್” ಅವರ ಸಾಹಸ ನಿರ್ದೇಶನವಿದೆ. ಕಾರ್ಯಕಾರಿ ನಿರ್ಮಾಪಕ “ಶ್ರೀಕಾಂತ್ ಕಶ್ಯಪ್” ಅವರ ನಿರ್ವಹಣೆ ಚಿತ್ರಕ್ಕಿದೆ.
ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅವ್ರನ್ನು ಅಭಿಮಾನಿಸುವವರು-ಪ್ರೀತಿಸುವವರು ನಾವು. ಅವರ ನಡೆ-ನುಡಿಯನ್ನು ಫಾಲೋ ಮಾಡುವವರು ನಾವು. ಅವ್ರಂತೇ ಬದುಕಿ-ಬಾಳಬೇಕು ಎಂದು ಆಸೆಪಡುತ್ತಿರುವವರು ನಾವು. ಅಪ್ಪು ಅವರ ಆದರ್ಶಗಳನ್ನು-ಗುಣಗಳನ್ನು ಮೈಗೂಡಿಸಿಕೊಂಡು ಮುಂದುವರಿಯಬೇಕು, ನಮ್ಮ ಕೈಯಲ್ಲಿ ಸಾಧ್ಯವಾದಷ್ಟು ಸಹಾಯ ಮಾಡ್ಬೇಕು, ಸ್ಪೂರ್ತಿಯುತ ಜೀವನ ನಡೆಸಬೇಕು, ಇದಷ್ಟು ದಿನ ಪ್ರೀತಿ ಹಂಚಬೇಕು, ಒಳ್ಳೆಯದ್ದನ್ನೇ ಮಾಡ್ಬೇಕು, ಒಳ್ಳೆಯದನ್ನೇ ಉಳಿಸಿ ಹೋಗ್ಬೇಕು ಅಂತ ಬಯಸ್ತಿರುವವರು ನಾವು ಹೀಗಿರುವಾಗ ನಾವ್ಯಾಕೆ ಅಪ್ಪುಗೆ ಅವಮಾನ ಮಾಡಲಿ -ರಕ್ಷಿತಾ ಪ್ರೇಮ್
ಹೀಗೆ ಹೇಳುತ್ತಾ ಹೋದರು ರಕ್ಷಿತಾ ಪ್ರೇಮ್. ಅಷ್ಟಕ್ಕೂ, ಅಪ್ಪು ಭಾವಚಿತ್ರದ ಮುಂದೆ ಶ್ಯಾಂಪೇನ್ ಬಾಟೆಲ್ ಓಪನ್ ಮಾಡೋದು ನಮ್ಮ ಉದ್ದೇಶ ಆಗಿರಲಿಲ್ಲ. ಶ್ಯಾಂಪೇನ್ ಓಪನ್ ಆದ ತಕ್ಷಣ ಏಕ್ ಲವ್ ಯಾ' ಎಣ್ಣೆ ಸಾಂಗ್ ಪ್ಲೇ ಆಗ್ಬೇಕಿತ್ತು. ಆದರೆ, ತಾಂತ್ರಿಕ ದೋಷದಿಂದಾಗಿ ಸಾಂಗ್ ಪ್ಲೇ ಆಗುವ ಜಾಗದಲ್ಲಿ ಅಪ್ಪುಗೆ ನಮನ ಸಲ್ಲಿಸಿದ್ದ ವಿಡಿಯೋ ಪ್ಲೇ ಆಗಿದೆ. ಇದರಿಂದ ದೊಡ್ಮನೆ ರಾಜರತ್ನನಿಗೆ ನಾವು ಅವಮಾನ ಮಾಡಿದ್ದೇವೆ ಎನ್ನುವ ಆಕ್ರೋಶ ವ್ಯಕ್ತವಾಗ್ತಿದೆ. ದಯವಿಟ್ಟುಏಕ್ ಲವ್ ಯಾ’ ತಂಡದಿಂದಾದ ಎಡವಟ್ಟಿಗೆ ಕ್ಷಮೆ ಇರಲಿ. ನಮ್ಮ ಅರಿವಿಗೆ ಬಾರದೆ ಆದಂತಹ ಅವಾಂತರಕ್ಕೆ ಕೈಮುಗಿದು ಕ್ಷಮೆಯಾಚಿಸುತ್ತೇವೆ ಎಂದು ಅಭಿಮಾನಿ ದೇವರುಗಳಲ್ಲಿ ಪ್ರೇಮ್ ಮತ್ತು ರಕ್ಷಿತಾ ಪ್ರೇಮ್ ಜೊತೆಗೆ `ಏಕ್ ಲವ್ ಯಾ’ ಟೀಮ್ ವಿನಂತಿ ಮಾಡಿಕೊಂಡಿದೆ.
ನಿನ್ನೆಯಷ್ಟೇ ಏಕ್ ಲವ್ ಯಾ' ತಂಡ ಸಾಂಗ್ ಲಾಂಚ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಅದ್ದೂರಿಯಾಗಿ ಆರ್ಗನೈಸ್ ಆಗಿದ್ದ ಕಾರ್ಯಕ್ರಮಕ್ಕೆ ಖ್ಯಾತ ಗಾಯಕಿ ಮಂಗ್ಲಿ ಸೇರಿದಂತೆ ಸ್ಯಾಂಡಲ್ವುಡ್ನ ಸ್ಟಾರ್ ನಟಿಯರು ಆಗಮಿಸಿದ್ದರು. ಅಕುಲ್ ಬಾಲಾಜಿ ನಿರೂಪಣೆಯಲ್ಲಿ ಪ್ರೋಗ್ರಾಂ ನಡೀತು. ಈ ವೇಳೆ ಎಣ್ಣೆ ಸಾಂಗ್ ಲಾಂಚ್ ಮಾಡಲಿಕ್ಕೆಏಕ್ ಲವ್ ಯಾ’ ಚಿತ್ರದ ನಿರ್ಮಾಪಕಿ ರಕ್ಷಿತಾ ಪ್ರೇಮ್- ರಚಿತರಾಮ್- ರೀಷ್ಮಾ ನಾಣಯ್ಯ- ಮೇಘನಾ ಗಾಂವ್ಕರ್-ಅದಿತಿ ಪ್ರಭುದೇವ್- ನಿಶ್ವಿಕಾ ನಾಯ್ಡು ಸೇರಿದಂತೆ ಇತರೆ ನಟಿಮಣಿಯರು ವೇದಿಕೆ ಮೇಲೆ ಎಂಟ್ರಿಕೊಟ್ಟರು. ಶ್ಯಾಂಪೇನ್ ಬಾಟೆಲ್ ಓಪನ್ ಮಾಡಿ ಚಿತ್ರದ `ಎಣ್ಣೆ’ ಸಾಂಗ್ ಲಾಂಚ್ ಮಾಡೋದಕ್ಕೆ ಪ್ಲಾನ್ ಆಗಿತ್ತು. ಅದರಂತೇ, ಬಾಟೆಲ್ ಓಪನ್ ಆಯ್ತು ಆದರೆ ಸ್ಕ್ರಿನ್ ಮೇಲೆ ಸಾಂಗ್ ಬದಲಿಗೆ ಅಪ್ಪುಗೆ ನಮನ ಸಲ್ಲಿಸಿದ್ದ ವಿಡಿಯೋ ಪ್ಲೇ ಆಯ್ತು. ಈ ವಿಡಿಯೋ ಮಾಧ್ಯಮದಲ್ಲಿ ಪ್ರಸಾರಗೊಂಡಿದ್ದೇ ತಡ ಅಪ್ಪು ಅಭಿಮಾನಿಗಳು ಮತ್ತು ದೊಡ್ಮನೆ ಭಕ್ತರು ಆಕ್ರೋಶಗೊಂಡರು. ಈ ಸುದ್ದಿ ಫಿಲ್ಮ್ ಚೇಂಬರ್ನ ಮಾಜಿ ಅಧ್ಯಕ್ಷರ ಕಿವಿಗೆ ಬಿತ್ತು. ಅಪ್ಪು ಅಗಲಿಕೆಯ ನೋವಲ್ಲಿರುವ ಅಭಿಮಾನಿಗಳನ್ನು ಕೆರಳಿಸಿದಂತಾಗಿದೆ. ದಯವಿಟ್ಟು ಒಮ್ಮೆ ಕ್ಷಮೆಯಾಚಿಸಿ ಬಿಡಿ ಎಂದು ಸಾ.ರಾ. ಗೋವಿಂದು ಅವರು ಒತ್ತಾಯಿಸಿದರು.
ದೊಡ್ಡವರ ಮಾತಿಗೆ ಬೆಲೆಕೊಟ್ಟ ಚಿತ್ರತಂಡ ಅಪ್ಪುಗೆ ಅವಮಾನ ಮಾಡುವ ಉದ್ದೇಶ ನಮ್ಮದಾಗಿರಲಿಲ್ಲ'. ನಮಗೆ ಗೊತ್ತಿಲ್ಲದೇ, ನಮ್ಮ ಅರಿವಿಗೆ ಬಾರದೇ, ಟೆಕ್ನಿಕಲಿ ಸಮಸ್ಯೆಯಿಂದಾಗಿ ಈ ರೀತಿಯಾಗಿದೆ. ದಯವಿಟ್ಟು ಅಭಿಮಾನಿ ದೇವರುಗಳು ಕ್ಷಮಿಸಬೇಕು ಎಂದು ನಿರ್ದೇಶಕ ಪ್ರೇಮ್ ಸುದ್ದಿಗೋಷ್ಟಿ ಮಾಡಿ ಕ್ಷಮೆ ಕೋರಿದ್ದಾರೆ. ಇದೇ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಪ್ರೇಮ್ ಅವರು, ಅಪ್ಪು ಉಸಿರು ಚೆಲ್ಲಿ ಆಸ್ಪತ್ರೆಯಲ್ಲಿ ಮಲಗಿದಾಗ ಅವರು ಹಣೆಸವರಿ, ಎರಡು ಕಾಲುಗಳನ್ನು ಹಿಡಿದುಕೊಂಡು ಕ್ಷಮೆ ಕೇಳಿದ್ದೇನೆ. ನನ್ನಿಂದ ಏನಾದರೂ ತಪ್ಪಾಗಿದ್ದರೆ ಕ್ಷಮಿಸಿಬಿಡಿ ಬಾಸ್ ಎಂದು ಬೇಡಿಕೊಂಡಿದ್ದೇನೆ ಗೊತ್ತಾ. ಅಷ್ಟಕ್ಕೂ,ಏಕ್ ಲವ್ ಯಾ’ ಸಾಂಗ್ ಲಾಂಚಿAಗ್ ಸಂದರ್ಭದಲ್ಲಿ ಅಚಾನಕ್ ಆಗಿ ಅಪ್ಪು ಬಾಸ್ ಫೋಟೋ ಪ್ಲೇ ಆಗಿದೆ. ಬೇಕು ಅಂತ ನಾವು ಏನು ಮಾಡಿಲ್ಲ. ಅಭಿಮಾನಿಗಳು ಅನ್ಯತಾ ಭಾವಿಸಬೇಡಿ, ದೊಡ್ಮನೆ ರಾಜಕುಮಾರನಿಗೆ ಅವಮಾನ ಮಾಡಿ ನಿಮ್ಮ ಮನಸ್ಸಿಗೆ ನೋವುಂಟು ಮಾಡುವ ಸಣ್ಣಮನಸ್ಸು ನಮ್ಮದಲ್ಲ ಎಂದು ಕೈಮುಗಿದರು.
ಇನ್ನೂ ಮನೆಯಿಂದನೇ ಮಾಧ್ಯಮಗಳ ಜೊತೆ ಮಾತನಾಡಿದ ರಕ್ಷಿತಾ ಪ್ರೇಮ್, ಅವರು ಕಣ್ಣೀರಾದರು. ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಬ್ಯಾಡ್ ಕಮೆಂಟ್ಸ್ ಬರುತ್ತಿದೆ. ಉದ್ದೇಶಪೂರ್ವವಾಗಿ ನಾವು ಇದನ್ನು ಮಾಡಿಲ್ಲ. ಯಾರಿಗೂ ನೋಯಿಸುವ ಉದ್ದೇಶ ನಮ್ಮದಲ್ಲ. ಅಭಿಮಾನಿ ದೇವರುಗಳಿಗೆ ನಮ್ಮಿಂದ ನೋವಾಗಿದ್ರೆ ಕ್ಷಮಿಸಿಬಿಡಿ ಎಲ್ಲರು. ಅಷ್ಟಕ್ಕೂ, ಶ್ಯಾಂಪೇನ್ ಬಾಟೆಲ್ನಲ್ಲಿ ಆಲ್ಕೋ ಹಾಲೇ ಇರಲಿಲ್ಲ. ನಾನ್ ಆಲ್ಕೋಹಾಲಿಕ್ ಶ್ಯಾಂಪೇನ್ ಅದಾಗಿತ್ತು ಅಷ್ಟೇ. ಎಣ್ಣೆ ಸಾಂಗ್ ಅದಾಗಿದ್ರಿಂದ ಶ್ಯಾಂಪೇನ್ ಬಾಟೆಲ್ ಓಪನ್ ಮಾಡಿಸಿದ್ವಿ ಎಂದರು ರಕ್ಷಿತಾ.
ಇದೇ ವೇಳೆ ದೊಡ್ಮನೆಗೆ ಕೊಡುವ ಗೌರವದ ಬಗ್ಗೆ ಮಾತನಾಡಿದರು. ಅಪ್ಪು ಸಿನಿಮಾದ ಮೂಲಕ ನನ್ನನ್ನು ಮಾತ್ರವಲ್ಲ ನಮ್ಮ ಅಮ್ಮ ಹಾಗೂ ಅಪ್ಪಾಜಿಯನ್ನು ಕೂಡ ಚಿತ್ರರಂಗಕ್ಕೆ ಪರಿಚಯಿಸಿದವರು ದೊಡ್ಮನೆಯವರು. ಹೀಗಿರುವಾಗ ಆ ದೊಡ್ಡ ಕುಟುಂಬಕ್ಕೆ ನಾವು ಅವಮಾನ ಮಾಡುತ್ತೇವಾ? ಕಮೆಂಟ್ ಮಾಡುವ ಜನರು ಸೂಕ್ಷ್ಮವಾಗಿ ಒಮ್ಮೆ ಯೋಚಿಸಿದರೆ ಗೊತ್ತಾಗುತ್ತೆ. ಎನಿವೇ, ನಮ್ಮಿಂದ ನಿಮ್ಮ ಭಾವನೆಗಳಿಗೆ ಪೆಟ್ಟಾಗಿದ್ದರೆ, ನಿಮ್ಮ ಮನಸ್ಸಿಗೆ ನೋವಾಗಿದ್ದರೆ ಪ್ರತಿಯೊಬ್ಬರಿಗೂ ಕೈ ಮುಗಿದು ಕ್ಷಮೆ ಕೇಳುತ್ತೇನೆ. ಅಪ್ಪು ಎಲ್ಲರಿಂದನೂ ಒಂದೊಂದನ್ನು ಕಲಿಯುತ್ತಿದ್ದರು. ಅದೇ ರೀತಿ ಈ ಘಟನೆಯಿಂದ ಯಾವ್ ರೀತಿ ಹುಷಾರಾಗಿರಬೇಕು ಎಂಬುದನ್ನು ಕಲಿಯುತ್ತೇನೆ ಎಂದರು. ಏಕ್ ಲವ್ ಯಾ ನಿರ್ದೇಶಕ ಪ್ರೇಮ್- ನಿರ್ಮಾಪಕಿ ರಕ್ಷಿತಾರಂತೆ, ಚಿತ್ರದ ನಾಯಕಿ ರಚಿತಾ ಹಾಗೂ ಇಡೀ ಚಿತ್ರತಂಡ ಕ್ಷಮೆಯಾಚಿಸಿದೆ.
ನಟ ಶರಣ್ ಸದ್ಯ ಕಾಮಿಡಿ ಹೀರೋ ಆಗಿಯೇ ಫೇಮಸ್. ಅವರು ಹಾಸ್ಯ ನಟರಾಗಿಯೂ ಸೈ ಎನಿಸಿಕೊಂಡವರು. ತೆರೆ ಮೇಲೆ ಹೀರೋ ಆಗಿ ಯಾವಾಗ ಕಾಣಿಸಿಕೊಂಡರೋ, ಅಲ್ಲಿಂದ ಎಂದೂ ಹಿಂದಿರುಗಿ ನೋಡೇ ಇಲ್ಲ. ಅವರು ಹೀರೋ ಆಗಿ ನಟಿಸಿದ ಸಿನಿಮಾಗಳೆಲ್ಲವೂ ಯಶಸ್ವಿಯಾಗಿವೆ. ಆ ಸಾಲಿಗೆ ಈಗ “ಅವತಾರ ಪುರುಷ” ಸಿನಿಮಾ ಕೂಡ ಸೇರುವ ನಂಬಿಕೆ ಚಿತ್ರತಂಡಕ್ಕಿದೆ. ಅಂದಹಾಗೆ, ಈ ಚಿತ್ರ ಇದೀಗ ರಿಲೀಸ್ಗೆ ರೆಡಿಯಾಗಿದೆ. ಸೆನ್ಸಾರ್ ಮುಗಿಸಿದ ಅವತಾರ ಪುರುಷ ಡಿಸೆಂಬರ್ 10ಕ್ಕೆ ಪ್ರೇಕ್ಷಕರ ಎದುರು ಬರುತ್ತಿದೆ.
ಅಫಿಶಿಯಲ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಅವತಾರ ಪುರುಷ ರಿಲೀಸ್ ಡೇಟ್ ಅನ್ನು ಚಿತ್ರತಂಡ ಅಧಿಕೃತವಾಗಿ ಘೋಷಣೆ ಮಾಡಿದೆ. ಸದ್ಯ ಚಿತ್ರತಂಡ ಈ ದಿನಾಂಕ ಘೋಷಣೆ ಮಾಡುವುದರ ಜೊತೆಗೆ ಭರ್ಜರಿಯಾಗಿಯೇ ಚಿತ್ರದ ಪ್ರಚಾರ ಕಾರ್ಯ ಶುರುವಿಟ್ಟುಕೊಂಡಿದೆ. ಹೌದು, ಚಿತ್ರ ಆರಂಭದಿಂದಲೂ ಸಾಕಷ್ಟು ಸುದ್ದಿ ಮಾಡಿದೆ. ಅದರಲ್ಲೂ ಶೀರ್ಷಿಕೆಯಿಂದಲೇ ಸಿನಿಮಾ ಒಂದಷ್ಟು ಕುತೂಹಲ ಮೂಡಿಸಿರುವುದಂತೂ ನಿಜ. ಇನ್ನೊಂದು ನಿರೀಕ್ಷೆಗೆ ಕಾರಣ, ಸಿಂಪಲ್ ಸುನಿ ಈ ಚಿತ್ರವನ್ನು ನಿರ್ದೇಶನ ಮಾಡಿರುವುದು.
ಅಷ್ಟೇ ಅಲ್ಲ, ಪುಷ್ಕರ್ ಮಲ್ಲಿಕಾರ್ಜುನ್ ನಿರ್ಮಾಣದ ಸಿನಿಮಾ ಅಂದಮೇಲೆ, ಅಲ್ಲಿ ವಿಶೇಷ ಕಂಟೆಂಟ್ ಇದ್ದೇ ಇರುತ್ತೆ. ಅಂಥದ್ದೊಂದು ಕಥೆ ಮತ್ತು ಚಿತ್ರಕಥೆ ಇರುವ ಅವತಾರ ಪುರುಷ, ಡಿಸೆಂಬರ್ 10ರಂದು ರಾಜ್ಯಾದ್ಯಂತ ಅಬ್ಬರಿಸಲಿದ್ದಾನೆ. ಈ ಸಿನಿಮಾಗೆ ಶರಣ್ ಹೀರೋ. ಅವರಿಗೆ ಆಶಿಕಾ ರಂಗನಾಥ್ ನಾಯಕಿ. ಉಳಿದಂತೆ ಚಿತ್ರದಲ್ಲಿ ಶ್ರೀನಗರ ಕಿಟ್ಟಿ, ಸಾಯಿಕುಮಾರ್, ಸುಧಾರಣಿ, ಭವ್ಯ ಸೇರಿದಂತೆ ಹಲವರು ನಟಿಸುತ್ತಿದ್ದಾರೆ. ಶರಣ್ ಇಲ್ಲಿ ಯಾವ ಪಾತ್ರ ನಿರ್ವಹಿಸುತ್ತಿದ್ದಾರೆ ಅನ್ನುವುದೇ ವಿಶೇಷ. ಅದು ಯಾವುದು ಎಂಬುದನ್ನು ತೆರೆಮೇಲೆಯೇ ಕಾಣಬೇಕು.
ನನಗೆ ಒಂದು ಬಿಗ್ ಡ್ರೀಮ್ ಇದೆ. ಗಂಧದಗುಡಿಗೆ ಅತೀ ದೊಡ್ಡ ಸ್ಟುಡಿಯೋವನ್ನು ಕೊಡುಗೆಯಾಗಿ ನೀಡಬೇಕು. ಮುಂದಿನ ದಿನಗಳಲ್ಲಿ ಪರಭಾಷೆಯವರು ನಮ್ಮ ಚಂದನವನಕ್ಕೆ ಬರಬೇಕು. ಪ್ರಿಪ್ರೊಡಕ್ಷನ್ ಸೇರಿದಂತೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಮ್ಮಲ್ಲಿ ಆಗ್ಬೇಕು. ಟೆಕ್ನಾಲಜಿ ಎಕ್ಸ್ಚೇಂಜ್ ಆಗ್ಬೇಕು ಹೀಗಾದಾಗ ಒಳ್ಳೆ ಪ್ರಾಡೆಕ್ಟ್ ಔಟ್ಪುಟ್ ಬರುತ್ತೆ. ಆಗ ಇಂಡಿಯನ್ ಸಿನ್ಮಾ ಇಂಡಸ್ಟ್ರಿಗೆ ಒಳ್ಳೊಳ್ಳೆ ಸಿನಿಮಾಗಳನ್ನು ಉಡುಗೊರೆಯಾಗಿ ನೀಡಬಹುದು ಎಂದಿದ್ದರು ಅಪ್ಪು…
ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅಗಲಿ ಇಂದಿಗೆ ಹದಿನಾರು ದಿವಸ ಕಳೀತಾ ಇದೆ. ಆದರೆ, ದೊಡ್ಮನೆ ಮಗನಿಲ್ಲದ ನೋವು ಮಾತ್ರ ಮರೆಯಾಗುತ್ತಿಲ್ಲ ಬಹುಷಃ ಅಷ್ಟು ಬೇಗ ಮರೆಯಾಗೋದು ಇಲ್ಲ. ಯಾಕಂದ್ರೆ, ಅಗಲಿರುವುದು ಬರೀ ವ್ಯಕ್ತಿಯಲ್ಲ ಅದೊಂದು ಶಕ್ತಿ. ಬೆಲೆಯೇ ಕಟ್ಟಲಾಗದ ಬೆಟ್ಟದ ಹೂ. ಆದರೆ, ಈ ಹೂ ತನಗೆ ಪ್ರಿಯವಾಗಿದ್ದು ಅಂತ ಆ ಭಗವಂತ ಏಕಾಏಕಿ ಕಿತ್ಕೊಂಡಿದ್ದು ಮಾತ್ರ ಖಂಡನೀಯ. ಹೆಸರಿಗೆ ಕರುಣಾಮಯಿ ಎನಿಸಿಕೊಳ್ಳುವ ಭಗವಂತನಿಗೆ ಕೊಂಚವಾದರೂ ಕರುಣೆಯಿದ್ದರೆ ಕೋಟ್ಯಾಂತರ ಮನಸ್ಸುಗಳು ಆರಾಧಿಸುವ, ಪೂಜಿಸುವ, ಪ್ರೀತಿಸುವ, ತಲೆ ಮೇಲೆ ಹೊತ್ತು ಮೆರೆಸುವ ಜನರಿಂದ ಅಪ್ಪುನಾ ದೂರ ಮಾಡುತ್ತಿರಲಿಲ್ಲ. ದೊಡ್ಮನೆಯನ್ನು ಅನಾಥ ಮಾಡಿ, ಕರುನಾಡನ್ನು ಕಣ್ಣೀರ ಕಡಲಲ್ಲಿ ಮುಳುಗಿಸುತ್ತಿರಲಿಲ್ಲ ಬಿಡಿ.
ಎಂತೆಂತವರಿಗೋ ಭಗವಂತ ಚಾನ್ಸ್ ಕೊಡ್ತಾನೆ, ಇದು ಕಡೇ ಚಾನ್ಸ್ ಉಳಿಸಿಕೋ ಎಂದು ಕರುಣೆ ತೋರಿಸ್ತಾನೆ. ಸಾವಿನ ಮನೆಗೆ ಸಮೀಪಿಸಿದವರನ್ನೂ ವಾಪಾಸ್ ಕರೆದುಕೊಂಡು ಆಯಷ್ಯ ಪ್ರಾಪ್ತಿರಸ್ತು ಎನ್ನುತ್ತಾನೆ. ಆದರೆ, ಅನಾಥರಿಗೆ ಆಸರೆಯಾಗಿ, ಕತ್ತಲಲ್ಲಿರುವವರಿಗೆ ಬೆಳಕಾಗಿ, ಬಡವರಿಗೆ ದೇವರಾಗಿ, ನಿರ್ಗತಿಕರಿಗೆ ನೆರವಾಗಿ, ಪ್ರತಿಭಾವಂತರಿಗೆ ವರವಾಗಿದ್ದ ಕಲಿಯುಗದ ಕರ್ಣನಂತಿದ್ದ ಅಂಜನಿಪುತ್ರನಿಗೆ ಕಡೇ ಚಾನ್ಸ್ ಅಲ್ಲ ಫಸ್ಟ್ ಚಾನ್ಸ್ ಕೂಡ ಕೊಡಲಿಲ್ಲ. ರಾಜರತ್ನನನ್ನು ಎಳೆದೊಯ್ಯಲಿಕ್ಕೆ ಸ್ಕೆಚ್ ಹಾಕಿದ ಭಗವಂತ ಒಂದೇ ಒಂದು ಚಾನ್ಸ್ ಕೊಟ್ಟಿದ್ದರೆ, ಅರೆಕ್ಷಣ ಕರುಣಾಮಯಿಯಾಗಿದ್ರೆ ಯುವರತ್ನ ಉಸಿರು ಚೆಲ್ಲುತ್ತಿರಲಿಲ್ಲ. ದೊಡ್ಮನೆ ಅನಾಥವಾಗುತ್ತಿರಲಿಲ್ಲ, ಅಭಿಮಾನಿ ದೇವರುಗಳು ಎದೆಬಡಿದುಕೊಂಡು ಸಾಯುವ ಸಂಧರ್ಭ ಸೃಷ್ಟಿಯಾಗುತ್ತಿರಲಿಲ್ಲ, ಕರುನಾಡು ಕಣ್ಣೀರಿನ ಕೋಡಿ ಹರಿಸುವಂತಿರಲಿಲ್ಲ. ಎಲ್ಲದಕ್ಕಿಂತ ಹೆಚ್ಚಾಗಿ, ಅಪ್ಪು ಕಂಡ ಕನಸುಗಳು `ಪೃಥ್ವಿ’ ಜೊತೆ ಒಡಲು ಸೇರುತ್ತಿರಲಿಲ್ಲ. ಅದರಲ್ಲೂ ಅರಸು ಕಂಡ ಅತೀ ದೊಡ್ಡ ಕನಸು ಮಣ್ಣಲ್ಲಿ ಮಣ್ಣಾಗುತ್ತಿರಲಿಲ್ಲ.
ಅಪ್ಪು ಒಬ್ಬರೇ ಸಾವನ್ನಪ್ಪಿಲ್ಲ ಬದಲಾಗಿ ದೊಡ್ಮನೆ ಮಗನನ್ನು ಮೈಂಡ್ನಲ್ಲಿಟ್ಟುಕೊಂಡು ರಚನೆ ಮಾಡಿದ ಎಷ್ಟೋ ಕಥೆಗಾರರ ಕನಸಿನ ಕೂಸುಗಳು ಉಸಿರುಗಟ್ಟಿವೆ. ಈ ಕಥೆನಾ? ಈ ಸಿನಿಮಾನ ಯಾರಿಗೆ ಮಾಡ್ಲಿ ದೇವಾ ಅಂತ ಕಥೆಗಾರರು-ನಿರ್ದೇಶಕರು-ನಿರ್ಮಾಪಕರು ಆಕಾಶ ನೋಡುವಂತಹ ಪರಿಸ್ಥಿತಿ. ಅದರಂತೇ, ಬೆಳ್ಳಿತೆರೆಯದ್ದು- ಬಾಕ್ಸ್ಆಫೀಸ್ನದ್ದು ಒಂದು ನೋವಿದೆ. ಇನ್ಮೇಲೆ ಅಪ್ಪು ಕಟೌಟ್ ನನ್ನ ಅಂಗಳದಲ್ಲಿ ಬೀಳಲ್ಲ, ಅಪ್ಪುನಾ ತಲೆ ಮೇಲೆ ಹೊತ್ಕೊಂಡು ಮೆರವಣಿಗೆ ಹೋಗೋದಕ್ಕೆ ಆಗಲ್ಲ ಅಂತ ಬೆಳ್ಳಿಪರದೆ ಮರುಕಪಡ್ತಿದೆ. ಕೋಟಿ ಕೋಟಿ ನನ್ನ ಖಜಾನೆಯಲ್ಲಿ ಕುಣಿಯಲ್ಲವಲ್ಲ ಅಂತ ಬಾಕ್ಸ್ಆಫೀಸ್ ಕಣ್ಣೀರಿಡ್ತಿದೆ. ಇನ್ನೂ, ಪವರ್ಸ್ಟಾರ್ ಅಭಿಮಾನಿಗಳಂತೂ ಜೇಮ್ಸ್ ಹೊರತುಪಡಿಸಿ ಮತ್ಯಾವ ಚಿತ್ರವನ್ನು ಫಸ್ಟ್ ಡೇ ಫಸ್ಟ್ ಶೋ ಚಿತ್ರಮಂದಿರಕ್ಕೆ ಹೋಗಿ ನೋಡಲಿಕ್ಕೆ ಆಗಲ್ಲ, ಥಿಯೇಟರ್ ಮುಂದೆ ಮತ್ಯಾವ ಚಿತ್ರದ ಕಟೌಟ್ ಹಾಕಿ ಅಭಿಷೇಕ ಮಾಡಲಿಕ್ಕೆ ಆಗಲ್ಲ ಅಂತ ಒಳಗೊಳಗೆ ನೋವುಣ್ಣುತ್ತಿದ್ದಾರೆ.
ಇದೆಲ್ಲದರ ಮಧ್ಯೆ ದಿಗ್ಗಜರು ಕಟ್ಟಿ ಬೆಳೆಸಿದ ಗಂಧದಗುಡಿ ಕೂಡ `ಅರಸು’ನಾ ನೆನೆದು ಮಮ್ಮಲ್ಲ ಮರುಗುತ್ತಿದೆ. ಕನ್ನಡ ಚಿತ್ರರಂಗದ ಕೊರತೆನಾ ನೀಗಿಸ್ತೀನಿ? ಗಂಧದಗುಡಿಗೆ ಅತೀ ದೊಡ್ಡ ಕೊಡುಗೆ ನೀಡ್ತೀನಿ? ಪರಭಾಷೆಯವರು ನಮ್ಮ ಅಖಾಡಕ್ಕೆ ಬರುವಂತೆ ಮಾಡ್ತೀನಿ? ಇಂಡಿಯನ್ ಸಿನ್ಮಾ ಇಂಡಸ್ಟ್ರಿಗೆ ಉಡುಗೊರೆ ಕೊಡ್ತೀನಿ ಅಂತ ಹೇಳಿಕೊಂಡಿದ್ದ ಅಪ್ಪು ಮಾತನ್ನು ನೆನೆ ನೆನೆದು ಗಂಧದಗುಡಿ ದುಃಖಿಸುತ್ತಿದೆ. ಹೌದು, ಸ್ಟಾರ್ಗಳಿಗೆ ಮರುಜೀವ ನೀಡಿ ಆಕಾಶದೆತ್ತರಕ್ಕೆ ಬೆಳೆದು ನಿಲ್ಲಿಸುವ ಗಂಧದಗುಡಿಯಲ್ಲಿ ಒಂದಿಷ್ಟು ಕೊರತೆಯಿದೆ. ಅದರಲ್ಲಿ, ಒಂದು ಅತೀ ದೊಡ್ಡ ಸ್ಟುಡಿಯೋ ವ್ಯವಸ್ಥೆ ಇಲ್ಲದಿರುವುದು. ಶೂಟಿಂಗ್- ಎಡಿಟಿಂಗ್-ಡಬ್ಬಿಂಗ್-ಮಿಕ್ಸಿಂಗ್ ಸೇರಿದಂತೆ ಸಿನಿಮಾ ಶುರು ಆದಾಗಿಂದ ಸಿನಿಮಾ ರಿಲೀಸ್ ಆಗೋರ್ಗೂ ಕೂಡ ಒಂದೇ ಸೂರಿನಡಿ ಅಂದರೆ ಒಂದೇ ಸ್ಟುಡಿಯೋದಲ್ಲಿ ಎಲ್ಲವೂ ಸಾಧ್ಯವಾಗಬೇಕು ಎನ್ನುವುದು ನಟಸಾರ್ವಭೌಮನ ಕನಸಾಗಿತ್ತು.
ಅಂದ್ಹಾಗೇ, ಈ ಕನಸಿನ ಬಗ್ಗೆ `ಫಿಲ್ಮ್ ಕಂಪ್ಯಾನಿಯನ್ ಸೌತ್’ ಯೂಟ್ಯೂಬ್ ಚಾನೆಲ್ವೊಂದರ ನಿರೂಪಕನ ಬಳಿ ಹಂಚಿಕೊಂಡಿದ್ದರು. ನಿಮ್ಮ ಡ್ರೀಮ್ ಏನು? ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಏನ್ ಕೊರತೆಯಿದೆ? ಇರುವಂತಹ ಕೊರೆತಯನ್ನು ಯಾವ್ ರೀತಿ ನೀಗಿಸುವುದಕ್ಕೆ ಪ್ರಯತ್ನ ಪಡುತ್ತೀರಿ? ನಿರೂಪಕ ಭಾರಧ್ವಾಜ್ ರಂಗನ್ ಅವರ ಈ ಪ್ರಶ್ನೆಗಳಿಗೆ ಉತ್ತರಿಸಿದ್ದ ಅಪ್ಪು, ನನಗೆ ಒಂದು ಬಿಗ್ ಡ್ರೀಮ್ ಇದೆ. ಗಂಧದಗುಡಿಗೆ ಅತೀ ದೊಡ್ಡ ಸ್ಟುಡಿಯೋವನ್ನು ಕೊಡುಗೆಯಾಗಿ ನೀಡಬೇಕು ಎನ್ನುವುದು. ಹಿಂದಿನಿಂದಲೂ ಹೊರ ರಾಜ್ಯಕ್ಕೆ ಮತ್ತು ಪರಭಾಷಾ ಸ್ಥಳಗಳಿಗೆ ಹೋಗಿ ಚಿತ್ರೀಕರಣ ಸೇರಿದಂತೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿಕೊಂಡು ಬಂದಿದ್ದೇವೆ. ಮುಂದಿನ ದಿನಗಳಲ್ಲಿ ಪರಭಾಷೆಯವರು ನಮ್ಮ ಚಂದನವನಕ್ಕೆ ಬರಬೇಕು. ಪ್ರಿಪ್ರೊಡಕ್ಷನ್ ಸೇರಿದಂತೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಮ್ಮಲ್ಲಿ ಆಗ್ಬೇಕು. ಟೆಕ್ನಾಲಜಿ ಎಕ್ಸ್ಚೇಂಜ್ ಆಗ್ಬೇಕು ಹೀಗಾದಾಗ ಒಳ್ಳೆ ಪ್ರಾಡೆಕ್ಟ್ ಔಟ್ಪುಟ್ ಬರುತ್ತೆ. ಆಗ ಇಂಡಿಯನ್ ಸಿನ್ಮಾ ಇಂಡಸ್ಟ್ರಿಗೆ ಒಳ್ಳೊಳ್ಳೆ ಸಿನಿಮಾಗಳನ್ನು ಉಡುಗೊರೆಯಾಗಿ ನೀಡಬಹುದು ಎಂದು ಹೇಳಿಕೊಂಡಿದ್ದರು. ಅತೀ ಶೀಘ್ರದಲ್ಲೇ ಸ್ಟುಡಿಯೋ ಬಗ್ಗೆ ಮಾಹಿತಿ ನೀಡುತ್ತೇನೆ ಎಂದು ಕೂಡ ತಿಳಿಸಿದ್ದರು. ಅಷ್ಟರಲ್ಲಿ ದುರ್ವಿಧಿಯ ಆಟಕ್ಕೆ ಬದುಕಿನ ಆಟ ಮುಗಿಸಿ ಎದ್ದೋಗಿದ್ದಾರೆ ಅಪ್ಪು.
ಕನ್ನಡ ಚಿತ್ರರಂಗದ ಖ್ಯಾತ ನಟ ಪುನೀತ್ರಾಜಕುಮಾರ್ ಅವರ ಅಗಲಿಕೆ ಹಿನ್ನೆಲೆಯಲ್ಲಿ ಕನ್ನಡ ಚಿತ್ರರಂಗ ನುಡಿ ನಮನ ಕಾರ್ಯಕ್ರಮ ಆಯೋಜಿಸಿದೆ. ನವೆಂಬರ್ 16 ರಂದು ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸೇರಿದಂತೆ ಸಚಿವರು, ವಿರೋಧ ಪಕ್ಷದ ನಾಯಕರು, ಗಣ್ಯರು, ಚಿತ್ರರಂಗದ ಕಲಾವಿದರು ತಾಂತ್ರಿಕ ವರ್ಗದವರು ಪಾಲ್ಗೊಳ್ಳಲಿದ್ದಾರೆ. ಕನ್ನಡ ಚಿತ್ರರಂಗದ ಎಲ್ಲಾ ವಿಭಾಗಗಳು ಈ ನುಡಿನಮನ ಕಾರ್ಯಕ್ರಮಕ್ಕೆ ಕೈ ಜೋಡಿಸಿವೆ. ಅಪ್ಪು ನುಡಿನಮನ ಕಾರ್ಯಕ್ರಮ ಕುರಿತಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್ ಹೇಳುವುದಿಷ್ಟು.
ಪುನೀತ್ರಾಜಕುಮಾರ್ ಅವರ ಅಗಲಿಕೆಯಿಂದ ಚಿತ್ರೋದ್ಯಮ ದುಃಖದಲ್ಲಿದೆ. ಸರಳ ಸಜ್ಜನಿಕೆ ನಟ ಕಳೆದುಕೊಂಡು ನಿಜಕ್ಕೂ ಬಡವಾಗಿದೆ. ಫಿಲ್ಮ್ ಚೇಂಬರ್ ನೇತೃತ್ವದಲ್ಲಿ ಚಿತ್ರೋದ್ಯಮ ಅಪ್ಪು ನುಡಿ ನಮನ ಕಾರ್ಯಕ್ರಮ ಆಯೋಜಿಸಿದೆ. ನಿರ್ಮಾಪಕರ ಸಂಘ, ಕಲಾವಿದರ ಸಂಘ, ಛಾಯಾಗ್ರಾಹಕರ ಸಂಘ, ಒಕ್ಕೂಟ, ವಿತರಕರು, ಪ್ರದರ್ಶಕರು ಸೇರಿದಂತೆ ಚೇಂಬರ್ನ ಅಂಗ ಸಂಸ್ಥೆಗಳ ಪದಾಧಿಕಾರಿಗಳು ಸೇರಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಸೌತ್ ಫಿಲ್ಮ್ಇಂಡಸ್ಟ್ರಿ ಮಂದಿ ಕೂಡ ಆಗಮಿಸಲಿದ್ದಾರೆ. ಒಂದು ಅರ್ಥಪೂರ್ಣ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದೆ. ಇದು ಎಲ್ಲರ ಕಾರ್ಯಕ್ರಮ. ಚಿತ್ರರಂಗದ ಪ್ರತಿಯೊಬ್ಬರ ಸಹಕಾರದಿಂದ ಈ ಕಾರ್ಯಕ್ರಮ ನಡೆಯಲಿದೆ ಎಂದರು.
ಸಾ.ರಾ.ಗೋವಿಂದು ಮಾತನಾಡಿ, ” ಪುನೀತ್ ಅವರ ನಿಧನದ ಹಿಂದಿನ ದಿನವೇ ನಾವು ನುಡಿ ನಮನ ಕಾರ್ಯಕ್ರಮ ನಡೆಸಲು ತೀರ್ಮಾನಿಸಿದ್ದೆವು. ಅದರಂತೆ, ನವೆಂಬರ್ ೧೬ರಂದು ಅಪ್ಪು ನುಡಿ ನಮನ ಕಾರ್ಯಕ್ರಮ ನಡೆಯಲಿದೆ. ರಾಜ್ಕುಮಾರ್ ಕುಟುಂಬ, ಇಡೀ ಚಿತ್ರೋದ್ಯಮ, ದಕ್ಷಿಣ ಭಾರತ ಚಿತ್ರೋದ್ಯಮ ನುಡಿ ನಮನಕ್ಕೆ ಸಾಕ್ಷಿಯಾಗಲಿದೆ. ಈಗಾಗಲೇ ಹೈದರಾಬಾದ್ಗೆ ಹೋಗಿ, ಅಲ್ಲಿನ ಫಿಲ್ಮ್ ಚೇಂಬರ್ ಪದಾಧಿಕಾರಿಗಳು ಮತ್ತು ಕಲಾವಿದರನ್ನು ಆಹ್ವಾನಿಸಲಾಗಿದೆ. ಚೆನ್ನೈ ಫಿಲ್ಮ್ ಚೇಂಬರ್ಗೂ ಮಾಹಿತಿ ನೀಡಿದ್ದೇವೆ. ಪುನೀತ್ ಅವರ ಅಭಿಮಾನಿಗಳು ಮತ್ತು ನಾಡಿನ ಜನರಲ್ಲಿ ಮನವಿ ಮಾಡಿಕೊಳ್ಳುವುದೇನೆಂದರೆ, ಈ ನುಡಿ ನಮನ ಕಾರ್ಯಕ್ರಮ ನಡೆಯುತ್ತಿರೋದು, ಸಿನಿಮಾ ರಂಗಕ್ಕೆ ಮಾತ್ರ ಸೀಮಿತವಾಗಿದೆ. ಹಾಗಾಗಿ ಯಾರೂ ಅನ್ಯತಾ ಭಾವಿಸಬಾರದು. ಈ ಕಾರ್ಯಕ್ರಮಕ್ಕೆ ಸುಮಾರು ಒಂದುವರೆ ಸಾವಿರ ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಹಾಗಾಗಿ ನಾಡಿನ ಜನರು ಸಹಕಾರ ನೀಡಬೇಕು. ನೀವಿದ್ದಲ್ಲೀಯೇ ಟಿವಿ ಮೂಲಕ ಕಾರ್ಯಕ್ರಮ ವೀಕ್ಷಿಸಬಹುದು ಎಂದಿದ್ದಾರೆ.
ಮನರಂಜನೆ ಇರಲ್ಲ… ಅಂದು ನುಡಿನಮನ ಕಾರ್ಯಕ್ರಮ ಹೊರತಾಗಿ ಯಾವುದೇ ಮನರಂಜನೆ ಇರಲ್ಲ. ಪುನೀತ್ ಅವರ ಕುರಿತು ವಿಶೇಷವಾದ ಹಾಡೊಂದನ್ನು ನಾಗೇಂದ್ರ ಪ್ರಸಾದ್ ಬರೆದಿದ್ದಾರೆ. ಆ ಹಾಡಿಗೆ ಗುರುಕಿರಣ್ ಸಂಯೋಜನೆ ಇದೆ. ಹಾಡಿನೊಂದಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಲಿದೆ. ಇನ್ನು, ಅಂದು ಪುನೀತ್ ಅವರ ಚಿತ್ರಗಳ ಹಾಡಿನ ತುಣುಕು ಪ್ರದರ್ಶನ ಮತ್ತು ಗಣ್ಯರು ಮಾತಾಡಲಿದ್ದಾರೆ. ನವರಸನ್ ಅವರು ಕಾರ್ಯಕ್ರಮದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಒಂದು ಅರ್ಥಪೂರ್ಣ ಕಾರ್ಯಕ್ರಮ ಮಾಡುವ ಮೂಲಕ ಯಶಸ್ವಿಗೊಳಿಸಬೇಕು ಅನ್ನೋದು ನಮ್ಮ ಆಸೆ ಎಂದರು ಸಾ.ರಾ.ಗೋವಿಂದು.
ಶೂಟಿಂಗ್ ಬಂದ್ ನುಡಿ ನಮನ ಕಾರ್ಯಕ್ರಮದ ಹಿನ್ನೆಲೆಯಲ್ಲಿ, ಚಿತ್ರರಂಗದ ಎಲ್ಲರೂ ಭಾಗವಹಿಸಲಿದ್ದಾರೆ. ಅಂದು ಚಿತ್ರೀಕರಣ ಬಂದ್ ಮಾಡಲಾಗುತ್ತದೆ. ಆದರೆ, ಥಿಯೇಟರ್ ಪ್ರದರ್ಶನ ಎಂದಿನಂತೆ ಇರಲಿದೆ. ನಮಗೂ ಎಲ್ಲರನ್ನೂ ಕರೆಯಬೇಕು ಎಂಬ ಆಸೆ ಇತ್ತು. ಆದರೆ, ಈಗ ಪರಿಸ್ಥಿತಿ ಸರಿ ಇಲ್ಲ. ಹಾಗಾಗಿ ಪುನೀತ್ ಅವರ ಅಭಿಮಾನಿಗಳು ನಾಡಿನ ಜನರು ಕುಳಿತಲ್ಲೇ ಟಿವಿಯಲ್ಲಿ ಕಾರ್ಯಕ್ರಮ ವೀಕ್ಷಿಸಬೇಕು. ಅಂದು ವಿಶೇಷವಾಗಿ ಮೈಸೂರು ರಾಜಮನೆತನದ ರಾಜ ಯದುವೀರ್ ಅವರು ಭಾಗವಹಿಸಲಿದ್ದಾರೆ.
ಪಾಸ್ ಇದ್ದವರಿಗೆ ಪ್ರವೇಶ ಈ ನುಡಿ ನಮನ ಕಾರ್ಯಕ್ರಮಕ್ಕೆ ಪಾಸ್ ಇದ್ದವರಿಗೆ ಮಾತ್ರ ಪ್ರವೇಶವಿದೆ. ವಿಐಪಿ ವಿವಿಐಪಿ ಹೀಗೆ ವಿಂಗಡಣೆ ಮಾಡಿ ಪಾಸ್ ವ್ಯವಸ್ಥೆ ಮಾಡಲಾಗಿದೆ. ಅಂದು ಮಧ್ಯಾಹ್ನ ೩ಗಂಟೆಗೆ ಕಾರ್ಯಕ್ರಮ ಶುರುವಾಗಲಿದೆ. ೨.೩೦ಕ್ಕೆ ಎಲ್ಲರೂ ಆಗಮಿಸಬೇಕು. ನಾಲ್ಕು ದ್ವಾರದಲ್ಲೂ ಸೆಕ್ಯೂರಿಟಿ ಇರುವುದರಿಂದ ಪಾಸ್ ಇದ್ದವರಿಗೆ ಮಾತ್ರ ಅವಕಾಶವಿದೆ. ಒಟ್ಟು ಮೂರು ತಾಸಿನ ಕಾರ್ಯಕ್ರಮವದು.
ಈಗಾಗಲೇ ದೇಶಾದ್ಯಂತ ಸಂಚಲನ ಮೂಡಿಸಿರುವ, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಅಭಿನಯm ಚಕ್ರವರ್ತಿ ಕಿಚ್ಚ ಸುದೀಪ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ “ಕಬ್ಜ” ಚಿತ್ರದ ಟೀಸರ್ ದೀಪಾವಳಿ ಹಬ್ಬಕ್ಕೆ ಬಿಡುಗಡೆ ಮಾಡುತ್ತೇನೆ ಎಂದು ನಿರ್ದೇಶಕ ಆರ್ ಚಂದ್ರು ತಿಳಿಸಿದ್ದರು. ಅಷ್ಟರಲ್ಲಿ ಪುನೀತ್ ರಾಜಕುಮಾರ್ ಅವರ ಅಗಲಿಕೆಯ ಸುದ್ದಿಗೆ ಇಡೀ ಕರುನಾಡು ಮಂಕಾಯಿತು.
ಹೀಗಾಗಿ ನಿರ್ದೇಶಕ ಆರ್.ಚಂದ್ರು ಟೀಸರ್ ರಿಲೀಸ್ ಕುರಿತು ಮಾತಾಡಿದ್ದಾರೆ. ನಮ್ಮ ತಂಡಕ್ಕೂ ಅಪ್ಪು ಅವರ ಅಗಲಿಕೆ ಬಹಳ ನೋವು ತಂದಿದೆ. ಇಂತಹ ಸಂದರ್ಭದಲ್ಲಿ ಟೀಸರ್ ಬಿಡುಗಡೆ ಮಾಡಿ ಸಂಭ್ರಮಿಸುವುದು ಸರಿಯಲ್ಲ ಎಂಬ ಉದ್ದೇಶದಿಂದ “ಕಬ್ಜ” ಚಿತ್ರದ ಟೀಸರ್ ಬಿಡುಗಡೆ ಮಾಡಿಲ್ಲ
ಮುಂದಿನ ದಿನಗಳಲ್ಲಿ ಟೀಸರ್ ಲಾಂಚ್ ಮಾಡುವುದಾಗಿ ಟ್ವಿಟರ್ ಮೂಲಕ ಸಿನಿಪ್ರೇಕ್ಷಕರಿಗೆ ತಿಳಿಸಿದ್ದಾರೆ. .
ಟಾಮ್ ಅಂಡ್ ಜರ್ರಿ ಈ ವಾರ ಬೆಳ್ಳಿತೆರೆಗೆ ಲಗ್ಗೆ ಇಟ್ಟಿರುವ ಸಿನ್ಮಾ. ಫಸ್ಟ್ ಡೇ ಫಸ್ಟ್ ಶೋ ಸಿನ್ಮಾ ನೋಡಿ ಥಿಯೇಟರ್ನಿಂದ ಹೊರಗಡೆ ಬಂದವರು `ಟಾಮ್ ಅಂಡ್ ಜರ್ರಿ’ಗೆ ಜೈಕಾರ ಹಾಕಿದ್ದಾರೆ. ಮಿಡಲ್ಕ್ಲಾಸ್ ಹುಡುಗನ ಈ ಕಥೆ ಗಾಂಧಿಕ್ಲಾಸ್ಗೂ ಸೈ ಮಲ್ಟಿಪ್ಲೆಕ್ಸ್ಗೂ ಜೈ ಎಂದು ಒಪ್ಪಿಕೊಂಡಿದ್ದಾರೆ. ಮಾತ್ರವಲ್ಲ ಮೂರು ದಿನದ ಬದುಕೆಂಬ ಸಂತೆಯಲ್ಲಿ ಹೇಗ್ ಬದುಕಬೇಕು? ಯಾವ್ ರೀತಿ ಬದುಕಿದರೆ ಜೀವನ ಸುಂದರವಾಗಿರುತ್ತೆ? ಜೀವನದಲ್ಲಿ ಯಾವುದರ ಹಿಂದೆ ಓಡಬೇಕು? ಬದುಕನ್ನು ಯಾವ್ ರೀತಿಯಾಗಿ ಶ್ರೀಮಂತಗೊಳಿಸಿಕೊಳ್ಳಬಹುದು? ಲೈಫ್ನಲ್ಲಿ ಯಾವುದಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡ್ಬೇಕು? ಅದರಿಂದ ಪ್ರತಿಯಾಗಿ ನಮಗೆ ಏನ್ ಸಿಗುತ್ತೆ? ಪ್ರಾಮುಖ್ಯತೆ ಕೊಡದೇ ಇದ್ದರೆ ಏನಾಗುತ್ತೆ? ಮುಂದಿನ ದಿನಗಳಲ್ಲಿ ಯಾವ್ ರೀತಿಯಾಗಿ ಪಶ್ಚಾತಾಪ ಪಡಬೇಕಾಗುತ್ತೆ? ಎನ್ನುವುದನ್ನು ಯುವನಿರ್ದೇಶಕ ರಾಘವ್ ವಿನಯ್ ಶಿವಗಂಗೆ ದೊಡ್ಡ ಪರದೆ ಮೇಲೆ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ.
‘ಟಾಮ್ ಅಂಡ್ ಜರ್ರಿ'ಚಿತ್ರದಲ್ಲಿ ಧರ್ಮ(ನಿಶ್ಚಿಕ್ ಕೊರೋಡಿ)ಅನಾಥ ಯುವಕ. ಹೆತ್ತವರಿಲ್ಲದೇ ಅನಾಥಾಶ್ರಮದಲ್ಲಿ ಬೆಳೆಯೋ ಇವನಿಗೆ ಬಾಲ್ಯದಿಂದಲೇ ದೊಡ್ಡಮನುಷ್ಯ ಎನಿಸಿಕೊಳ್ಳುವ ಕನಸಿರುತ್ತೆ.ಕಾಲಲ್ಲಿ ಓಡಾಡಿ ಮನುಷ್ಯ ಎನಿಸಿಕೊಳ್ಳೋದಕ್ಕಿಂತ ಕಾರಲ್ಲಿ ಓಡಾಡಿ ದೊಡ್ಡ ಮನುಷ್ಯ ಎನಿಸಿಕೊಳ್ಳಬೇಕು ಅಂತ ಸ್ನೇಹಿತರ ಜೊತೆ ಹೇಳಿಕೊಳ್ಳುತ್ತಿರುತ್ತಾನೆ.ಆಶ್ರಮದಲ್ಲೇ ಬೆಳೆಯುವಾಗ ಧರ್ಮನನ್ನು ಶ್ರೀಮಂತ ಮನೆತನದವರು ದತ್ತು ಪಡೆಯುತ್ತಾರೆ.ಅದರಂತೇ,ಅದೇ ಆಶ್ರಮದಲ್ಲಿ ಅನಾಥೆಯಾಗಿ ಬೆಳೆಯುತ್ತಿದ್ದ ಸತ್ಯ(ಚೈತ್ರ ರಾವ್)ನ ಕೂಡ ಶ್ರೀಮಂತ ಕುಟುಂಬದ ದಂಪತಿಗಳು ದತ್ತು ಪಡೆಯುತ್ತಾರೆ.ಇವರಿಬ್ಬರು ಆಶ್ರಮದಲ್ಲಿದ್ದಾಗ ಬೆಸ್ಟ್ ಫ್ರೆಂಡ್ಸ್ ಆಗಿರುತ್ತಾರೆ.
ಆದರೆ,ಇಬ್ಬರನ್ನೂ ಬೇರೆ ಬೇರೆ ದಂಪತಿಗಳು ದತ್ತು ಪಡೆದ ಕಾರಣಕ್ಕೆ ದೂರ ದೂರ ಆಗ್ಬಿಡ್ತಾರೆ.ಹೀಗೆ,ಬಾಲ್ಯದಲ್ಲೇ ಬೇರೆ ಬೇರೆಯಾದ ಸತ್ಯ ಹಾಗೂ ಧರ್ಮ ಬೆಳೆದು ದೊಡ್ಡವರಾದ ಮೇಲೆ ಮತ್ತೆ ಸಿಗ್ತಾರೆ.ಸತ್ಯ ತುಂಬಾ ಶ್ರೀಮಂತರ ಮನೆಯಲ್ಲಿ ಬೆಳೆದಿರ್ತಾಳೆ ಅವಳಿಗೆ ಯಾವುದಕ್ಕೂ ಕೊರತೆಯಿರೋದಿಲ್ಲ.ಆದರೆ, ಧರ್ಮನನ್ನು ದತ್ತು ಪಡೆದವರು ನಡೆಸುತ್ತಿದ್ದ ಕಂಪನಿಗೆ ಬೆಂಕಿಬಿದ್ದು ಬೀದಿಗೆ ಬಂದಿರುತ್ತಾರೆ.ಹೀಗಾಗಿ,ಧರ್ಮ ತನಗೆ ಇಷ್ಟವಿಲ್ಲದಿದ್ದರೂ ಕೂಡ ಮೆಕಾನಿಕ್ ಆಗಿ ಕೆಲಸಕ್ಕೆ ಸೇರಿಕೊಂಡರ್ತಾನೆ.ಇದೇ ಹೊತ್ತಿಗೆ ಬಾಲ್ಯದ ಗೆಳತಿ ‘ಸತ್ಯ’ ಪುನಃ ಸಿಗ್ತಾಳೆ. ಆಕೆಯ ಮೇಲೆ ಧರ್ಮನಿಗೆ ಲವ್ವಾಗುತ್ತೆ.
ಅಂದ್ಹಾಗೇ, ಸತ್ಯ ಮತ್ತು ಧರ್ಮ ಇಬ್ಬರದ್ದು ಅಪೋಸಿಟ್ ಕ್ಯಾರೆಕ್ಟರ್. ಬದುಕನ್ನು ಇಬ್ಬರು ನೋಡುವ ರೀತಿಯೇ ಬೇರೆ ಬೇರೆ. ಇಬ್ಬರ ಯೋಚನೆ-ಆಲೋಚನೆಗಳೇ ಡಿಫರೆಂಟ್. ಕಾಲಲ್ಲಿ ಓಡಾಡಿ ಮನುಷ್ಯ ಎನಿಸಿಕೊಳ್ಳೋದಕ್ಕಿಂತ ಕಾರಲ್ಲಿ ಓಡಾಡಿ ದೊಡ್ಡ ಮನುಷ್ಯ ಎನಿಸಿಕೊಳ್ಳಬೇಕು ಎನ್ನುವುದು ಧರ್ಮನ ನೇಚರ್ ಮತ್ತು ಕನಸು ಆದರೆ, ಕಾರಿದ್ದರೂ ಕಾಲಲ್ಲಿಓಡಾಡುತ್ತಾ ಬಿಂದಾಸ್ ಆಗಿ ಬದುಕುವ ಸ್ವಭಾವ ಸತ್ಯಾಳದ್ದು. ಅನಾಥೆಯಾದರೂ ಶ್ರೀಮಂತ ಕುಟುಂಬದಲ್ಲಿ ಬೆಳೆದ ಈಕೆಗೆ ರಾಯಲ್ ಲೈಫ್ ಬೋರೆದ್ದು ಹೋಗಿರುತ್ತೆ. ಕಣ್ಣು ಆಸೆ ಪಟ್ಟಿದ್ದು, ಮನಸ್ಸು ಕೇಳಿದ್ದು ಕ್ಷಣಾರ್ಧದಲ್ಲಿ ಸಿಕ್ಕಿದ್ದರಿಂದ ಈಕೆಗೆ ಶ್ರೀಮಂತಿಕೆಯ ಮೇಲೆ ಒಂದು ರೀತಿ ಆಲಸ್ಯ ಹುಟ್ಟಿರುತ್ತೆ.
ಹೃದಯ ಏನ್ ಬಯಸುತ್ತೋ ಅದು ಕ್ಷಣಾರ್ಧದಲ್ಲಿ ಸಿಗ್ಬಾರ್ದು ಅದಕ್ಕಾಗಿ ಕಾತುರದಿಂದ ಕಾಯಬೇಕು ಎನ್ನುವ ವಾದ ಈಕೆಯದ್ದು. ಆದರೆ, ಇಷ್ಟಪಟ್ಟಿದ್ದು ಕ್ಷಣಾರ್ಧದಲ್ಲಿ ಸಿಗ್ಬೇಕು, ಜೀವನ ಒಂದೇ ಸಿಲ ಸಿಗೋದು ಸರಿಯಾಗಿ ಎಂಜಾಯ್ ಮಾಡ್ಬೇಕು ಎನ್ನುವುದು ಧರ್ಮನ ವಾದ. ಹೀಗೆ ವಿರುದ್ದ ದಿಕ್ಕಿನಲ್ಲಿ ಸಾಗಬಯಸುವ ಇವರಿಬ್ಬರು ಒಂದಾಗ್ತಾರಾ? ಪ್ರೀತಿಸಿದ ಇವರಿಬ್ಬರು ಜೊತೆಯಾಗ್ತಾರಾ? ಈ ಕೂತೂಹಲದ ಪ್ರಶ್ನೆಗೆ ಉತ್ತರ ಬೇಕು ಅಂದರೆ ಕೂಲ್ಡ್ರಿಂಕ್ಸ್ ಜೊತೆ ಪಾಪ್ಕಾರ್ನ್ ತಗೊಂಡು ನೀವು ಕೂಡ ಥಿಯೇಟರ್ಗೆ ಬನ್ನಿ
ಟಾಮ್ ಅಂಡ್ ಜರ್ರಿ ಇಬ್ಬರು ದೂರ ಆಗ್ತಾರಾ ಅಥವಾ ಇಬ್ಬರು ಜೊತೆಯಾಗ್ತಾರಾ ಅನ್ನೋದಲ್ಲ ಕಥೆ. ಈ ಸಿನಿಮಾದಿಂದ ಜೀವನಕ್ಕೆ- ಬದುಕಿಗೆ ಒಂದು ಸಂದೇಶ ಇದೆ. ಮಿಡಲ್ಕ್ಲಾಸ್-ಹೈಕ್ಲಾಸ್ ಅಂತ ನೋಡದೇ, ಶ್ರೀಮಂತ ಹಾಗೂ ಬಡವ ಎಂದು ಭೇದ-ಭಾವ ಮಾಡದೇ ಹೇಗ್ ಬದುಕಬೋದು? ದೊಡ್ಡ ಮನುಷ್ಯನಾಗ್ಬೇಕು ಎಂದು ಬಯಸುವವರು ಮೊದಲು ಯಾವುದರಲ್ಲಿ ದೊಡ್ಡಮನುಷ್ಯ ಎನಿಸಿಕೊಳ್ಳಬೇಕು? ಸುತ್ತ-ಮುತ್ತಲಿನವರಿಗೆ ಯಾವ್ ರೀತಿಯಾಗಿ ಪ್ರೀತಿ ಹಂಚಬೇಕು? ಭಾವನೆಗಳಿಗೆ ಹೇಗೆ ಬೆಲೆಕೊಟ್ಟು ಬದುಕಬೇಕು? ರಕ್ತ ಸಂಬಂಧಿಗಳಲ್ಲದೇ ಹೋದರೂ ಕೂಡ ಆ ಸಂಬಂಧಕ್ಕೆ ಎಂತಹ ವ್ಯಾಲ್ಯೂ ಕೊಡಬೇಕು? ಹೆಣ್ಣಿಗೆ ಎಷ್ಟು ಗೌರವ ಕೊಡಬೇಕು? ಇದೆಲ್ಲದರ ಜೊತೆಗೆ ತಮ್ಮೊಳಗೆ ತಮ್ಮನ್ನು ಕಂಡುಕೊಳ್ಳುವುದು ಹೇಗೆ? ಸಂತೋಷ ಕಾಣುವುದು ಹೇಗೆ? ನಿಸ್ವಾರ್ಥದಿಂದ-ಖುಷಿಯಿಂದ ಬದುಕುವುದು ಹೇಗೆ ಎನ್ನುವುದನ್ನು ಅಚ್ಚುಕಟ್ಟಾಗಿ ಪ್ರಸೆಂಟ್ ಮಾಡಿದ್ದಾರೆ. ತಾವು ಕಂಡಿದ್ದು-ಕೇಳಿದ್ದು-ನೋಡಿದ್ದು-ಅನುಭವಿಸಿದ್ದು ಎಲ್ಲವನ್ನೂ ಸಿನಿಮಾವಾಗಿಸಿ ಪ್ರೇಕ್ಷಕರಿಗೆ ಜೀವನದ ಪಾಠ ಮಾಡಿದ್ದಾರೆ. ತಂದೆ-ತಾಯಿ ಪ್ರೀತಿಯನ್ನು ಅಮೋಘವಾಗಿ ಕಟ್ಟಿಕೊಟ್ಟಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಸಹಾಯಕ ನಿರ್ದೇಶಕರಾಗಿ ಗುರ್ತಿಸಿಕೊಂಡು, ಕೆಜಿಎಫ್ ಸಿನಿಮಾಗೆ ಡೈಲಾಗ್ ರೈಟರ್ ಆಗಿದ್ದ ನಿರ್ದೇಶಕ ರಾಘವ್ ವಿನಯ್ ಶಿವಗಂಗೆಗೆ ‘ಟಾಮ್ ಅಂಡ್ ಜರ್ರಿ'ಚೊಚ್ಚಲ ಸಿನ್ಮಾ.ಮೊದಲ ಪ್ರಯತ್ನದಲ್ಲೇ ಒಂದು ಮಟ್ಟಿಗೆ ಸಕ್ಸಸ್ ಕಂಡಿದ್ದಾರೆ.ಮಿಡಲ್ ಕ್ಲಾಸ್ ಹುಡುಗನ ಪಾತ್ರಕ್ಕೆ ಬಣ್ಣ ಹಚ್ಚಿರುವ ನಟ ನಿಶ್ಚಿತ್ ಕೊರೋಡಿ ಭರವಸೆ ಮೂಡಿಸಿದ್ದಾರೆ.ಈ ನಟನ ಸ್ಕ್ರೀನ್ ಪ್ರಸೆನ್ಸ್ ನೋಡಿದರೆ ಗಂಧದಗುಡಿಯಲ್ಲಿ ಗಟ್ಟಿಯಾಗಿ ನೆಲೆಯೂರೋದು ಗ್ಯಾರಂಟಿ ಎನಿಸುತ್ತೆ.ಇನ್ನೂ ನಾಯಕಿ ಸತ್ಯ ಪಾತ್ರಧಾರಿ ಚೈತ್ರಾ ಮುದ್ದಾಗಿ ಅಭಿನಯಿಸಿದ್ದಾರೆ.ಸ್ಕ್ರೀನ್ ಮೇಲೆ ಚೆಂದ ಕಾಣಿಸ್ತಾರೆ, ಕುಡಿನೋಟದಲ್ಲೇ ದಿಲ್ ಕದಿಯುವ ಚಾಕಚಾಕ್ಯತೆ ಚೈತ್ರಾಗಿದೆ. ಅಮ್ಮನ ಪಾತ್ರದಲ್ಲಿ ತಾರಮ್ಮ ಅವ್ರದ್ದು ಅದ್ಭುತ ಅಭಿನಯ.ಕಡ್ಡಿಪುಡ್ಡಿ ಚಂದ್ರು ಅಳುಸ್ತಾರೆ,ಪ್ರಕಾಶ್ ತುಮ್ಮಿನಾಡು ನಗುಸ್ತಾರೆ.ಜೈ ಜಗದೀಶ್,ರಾಕ್ಲೈನ್ ಸುಧಾಕರ್,ಕೋಟೆ ಪ್ರಭಾಕರ್,ಸಂಪತ್ ಮೈತ್ರೇಯ,ಪದ್ಮಜಾ ರಾವ್,ಪ್ರಶಾಂತ್ ನಟನ, ಮೈತ್ರಿ ಜಗ್ಗಿ ಅವರವರ ಪಾತ್ರಕ್ಕೆ ಉಸಿರು ತುಂಬಿದ್ದಾರೆ.ಇವರೊಟ್ಟಿಗೆ ಸಂಪೂರ್ಣ ಹೊಸಬರ ತಂಡವಿದ್ದು `ಟಾಮ್ ಅಂಡ್ ಜರ್ರಿ’ ಗಾಗಿ ಶ್ರಮಿಸಿದ್ದಾರೆ. ನವ ಪ್ರತಿಭೆಗಳಿಗೆ ಚಾನ್ಸ್ ಕೊಡಬೇಕು ಅಂತ `ರಿದ್ಧಿ ಸಿದ್ಧಿ ಫಿಲಂಸ್ನ ರಾಜು ಶೇರಿಗಾರ್ ಉದಾರತೆ ತೋರಿದ್ದಾರೆ.
ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು, ಮ್ಯಾಥ್ಯೂಸ್ ಮನು ಸಂಗೀತ ಸಂಯೋಜಿಸಿದ್ದಾರೆ. `ಹಾಯಾಗಿದೆ ಎದೆಯೊಳಗೆ'ಹಾಡು ಮತ್ತು ತಾಯಿ ಸೆಂಟಿಮೆಂಟ್ ಇರುವ `ಜಗದ ಜೋಲಿಯ ತೂಗುವ ಕೈಗಳೇ’ ಸಾಂಗ್ ಪ್ರೇಕ್ಷಕರನ್ನು ಕಟ್ಟಿಹಾಕುತ್ತವೆ. ಸಂಕೇತ್ ಕ್ಯಾಮೆರಾ ವರ್ಕ್ ಚೆನ್ನಾಗಿದೆ, ಹೀರೋ-ಹೀರೊಯಿನ್ನಾ ಚೆನ್ನಾಗಿ ತೋರಿಸಿದ್ದಾರೆ. ಸೂರಜ್ ಅಂಕೊಲೇಕರ್ ಸಂಕಲನ ಇನ್ನೊಂದಿಷ್ಟು ಶಾರ್ಪ್ ಆಗ್ಬೇಕಿತ್ತು. ಅರ್ಜುನ್ ರಾಜ್ ಸಾಹಸ ಸೂಪರ್. `ಸಾವಿಗಿಂತ ರೆಸ್ಟ್ ಇಲ್ಲ.. ಸ್ಮಶಾನಕ್ಕಿಂತ ಒಳ್ಳೆ ರೆಸಾರ್ಟ್ ಇಲ್ಲ’ ಎನ್ನುವಂತಹ ಡೈಲಾಗ್ಗಳಿವೆ. ಆದರೆ, ನಿರ್ದೇಶಕರು ಹೀರೋ ಪಾತ್ರಕ್ಕೆ ಕ್ಲ್ಯಾರಿಟಿ ಕೊಡುವಲ್ಲಿ ಇನ್ನೊಂದಿಷ್ಟು ಇಂಟ್ರೆಸ್ಟ್ ತೋರಿಸಬೇಕಿತ್ತು. ಕಾಲಲ್ಲಿ ಓಡಾಡಿ ಮನುಷ್ಯ ಎನಿಸಿಕೊಳ್ಳೋದಕ್ಕಿಂತ ಕಾರಲ್ಲಿ ಓಡಾಡಿ ದೊಡ್ಡ ಮನುಷ್ಯ ಎನಿಸಿಕೊಳ್ಳಬೇಕು ಅಂದರೆ ನೀನು ಈ ಕೆಲಸ ಮಾಡ್ಬೇಕಪ್ಪ ಅಂತ ಪಾತ್ರವನ್ನು ಗಟ್ಟಿಗೊಳಿಸಬೇಕಿತ್ತು. ಹೀರೋ-ಹೀರೋಯಿನ್ ಮಧ್ಯೆ ಒಂದಿಷ್ಟು ರೊಮ್ಯಾನ್ಸ್ ಇಡಬೇಕಿತ್ತು. ಬಿಎಂಟಿಸಿ ಬಸ್ ಸೀನ್ಗಳಲ್ಲಿ ನಡೆಯುವ ಸಂಭಾಷಣೆ ಕಡಿಮೆಯಾಗಬೇಕಿತ್ತು. ಇದು ಹೊರೆತುಪಡಿಸಿದರೆ ಸಿನಿಮಾ ಆಲ್ ಓಕೆನೇ. ಇಲ್ಲಿವರೆಗೂ ಹೊಸಬರ ಪ್ರಯತ್ನಕ್ಕೆ ಪ್ರತಿಫಲ ಸಿಕ್ಕಿದೆ. ಟಾಮ್ ಅಂಡ್ ಜರ್ರಿಗೂ ಅದೇ ಸಕ್ಸಸ್ ಸಿಗುತ್ತಾ ಒಂದು ವಾರ ಕಾಯಬೇಕು.
ಮೊದಲ ನೋಟದಲ್ಲೇ ಆ ಎಂಬಿಬಿಎಸ್ ಸ್ಟುಡೆಂಟ್ಗೆ ಅದೇ ಕಾಲೇಜಿನ ಹುಡುಗಿಯೊಬ್ಬಳ ಮೇಲೆ ಮೆಲ್ಲನೆ ಪ್ರೀತಿ ಅಂಕುರವಾಗುತ್ತೆ. ಆಕೆಗೂ ಅವನ ಮೇಲೆ ಅದೇ ಕುಚ್ ಕುಚ್ ಶುರುವಾಗುತ್ತೆ. ಆಕೆಗೆ ಅವನ ಕೈ ಸ್ಪರ್ಶಿಸೋ ಆಸೆ, ಆದರೆ, ಅವನಿಗೋ ಅವಳನ್ನು ಅತಿಯಾಗಿ ಗೌರವಿಸಿ, ಆರಾಧಿಸೋ ಹಂಬಲ. ಭೇಟಿಯಾದಾಗೆಲ್ಲ ಆಕೆ ಶೇಕ್ಹ್ಯಾಂಡ್ಗಾಗಿ ತನ್ನ ಕೈ ಚಾಚಿದರೆ, ಅವನು ತನ್ನ ಎದೆಯ ಮೇಲೆ ಕೈ ಇಟ್ಟುಕೊಂಡು ಮುಗುಳ್ನಗುತ್ತಲೇ ಮೌನವಾಗುತ್ತಾನೆ… ಕಾರಣ ಮದ್ವೆ ಆಗೋ ತನಕ ಅವಳನ್ನು ಸ್ಪರ್ಶಿಸಲೇಬಾರದು ಅನ್ನೋ ದೃಢ ನಿರ್ಧಾರ ಅವನದು! ಅಬ್ಬಾ, ಈ ಕಾಲದಲ್ಲೂ ಇಂಥಾ ಹುಡುಗ ಸಿಕ್ತಾನಾ? ಈ ಪ್ರಶ್ನೆ ಸಹಜವಾಗಿಯೇ ಬರುತ್ತೆ. ಆದರೂ, ಇದು “ಪ್ರೇಮಂ ಪೂಜ್ಯಂ” ಚಿತ್ರದಲ್ಲಿ ಸಾಧ್ಯವಾಗಿಸಿದ್ದಾರೆ ನಿರ್ದೇಶಕ ರಾಘವೇಂದ್ರ.
ಒಂದು ನಿಷ್ಕಲ್ಮಶ ಪ್ರೀತಿಯ ಕಥೆ ಹೆಣೆಯುವ ಮೂಲಕ ಮನಸ್ಸು ಭಾರವಾಗಿಸುವ ಪ್ರಯತ್ನ ಮಾಡಿರುವ ನಿರ್ದೇಶಕರಿಗೆ ನಿರೂಪಣೆಯಲ್ಲಿ ಇನ್ನಷ್ಟು ಗಟ್ಟಿ ಹಿಡಿತ ಬೇಕಿತ್ತು. ಎಲ್ಲಾ ಪ್ರೀತಿಯ ಕಥೆಗಳಿಗಿಂತ ಈ ಪ್ರೀತಿಯ ಕಥೆ ಹೇಳಿಕೊಳ್ಳುವಂತಹ ವಿಭಿನ್ನವೇನಲ್ಲ. ಆದರೆ, ಪ್ರೀತಿಗೆ ಹೊಸ ವ್ಯಾಖ್ಯಾನ ಬರೆಯುವಲ್ಲಿ ಕೊಂಚ ಹೊಸತನದ ಸ್ಪರ್ಶ ಕೊಟ್ಟು ತಕ್ಕಮಟ್ಟಿಗೆ ಸೈ ಎನಿಸಿಕೊಂಡಿದ್ದಾರೆ. ಒಂದೊಳ್ಳೆಯ ಮನಸ್ಸಿರುವ ಹುಡುಗ ಅಷ್ಟೇ ಚಂದವಾಗಿರುವ ಹುಡುಗಿಯನ್ನು ಆನೆ ಮೇಲಿನ ಅಂಬಾರಿಯೊಳಗಿರುವ ದೇವತೆಯಷ್ಟೇ ಪ್ರೀತಿಸ್ತಾನೆ. ಆದರೆ, ಅವಳನ್ನು ಮದುವೆ ಆಗೋತನಕ ಸ್ಪರ್ಶಿಸದೆ, ತನ್ನ ಹೃದಯದಲ್ಲೇ ಆರಾಧಿಸುವ ದೊಡ್ಡ ಗುಣವುಳ್ಳ ಹುಡುಗನ ಪ್ರೀತಿ ನಿಜವಾಗಿಯೂ ಹಂಡ್ರೆಡ್ ಪರ್ಸೆಂಟ ಅನ್ನೋದನ್ನು ತೆರೆಮೇಲೆ ನೋಡಬೇಕು.
ಸಿನಿಮಾದ ಒಂದೊಂದು ಫ್ರೇಮ್ ಕೂಡ ಪೇಂಟಿಂಗ್ನಂತಿದೆ. ಅದರ ಬಗ್ಗೆ ಎಲ್ಲೂ ಚಕಾರ ಎತ್ತುವಂತಿಲ್ಲ. ಸಿನಿಮಾ ಕಥೆಯ ಅಗತ್ಯಕ್ಕಿಂತಲೂ ಅದ್ಧೂರಿತನ ಎದ್ದು ಕಾಣುತ್ತದೆ. ಮೊದಲರ್ಧ ಮೆಲ್ಲನೆ ಸಾಗುವ ಸಿನಿಮಾ ದ್ವಿತಿಯಾರ್ಧ ಗಂಭೀರತೆ ಪಡೆದುಕೊಳ್ಳುತ್ತೆ. ಮೊದಲರ್ಧಕ್ಕಿಂತ ದ್ವಿತಿಯಾರ್ಧದಲ್ಲೇ ಸಿನಿಮಾ ಗಟ್ಟಿಯಾಗಿದೆ. ಸರಾಗವಾಗಿ ಸಾಗುವ ಲವ್ಸ್ಟೋರಿ ನಡುವೆ ಎಗ್ಗಿಲ್ಲದಂತೆ ಹಾಡುಗಳು ಇಣುಕುವುದರಿಂದ ಸಿನಿಮಾದ ವೇಗಕ್ಕೆ ಅಡ್ಡಿಯಾದಂತಿದೆ. ನೋಡುಗ ಒಂದೊಳ್ಳೆಯ ಪ್ರೀತಿ ಕಥೆಯ ಹೂರಣ ಸವಿಸುತ್ತಿರುವ ಮಧ್ಯೆಯೇ, ಹಾಡುಗಳನ್ನು ನೂಕಿ ಸವಿರುಚಿಯನ್ನು ಹಾಳುಗೆಡವುದಂತಾಗುತ್ತದೆ. ಕಥೆಗೆ ಪೂರಕವಾಗಿ ಹಾಡುಗಳಿವೆಯಾದರೂ, ಅವುಗಳ ಸಂಖ್ಯೆಯನ್ನು ಕಡಿಮೆಗೊಳಿಸುವ ಸಾಧ್ಯತೆ ಇತ್ತು. ನಿರ್ದೇಶಕರು ಅದೇಕೋ, ಚಿತ್ರಕಥೆಗಿಂತ ಹಾಡುಗಳತ್ತವೇ ಹೆಚ್ಚು ಗಮನ ಹರಿಸಿದಂತಿದೆ. ಟೈಟಲ್ ಸಾಂಗ್ ಪ್ರೇಮಂ ಪೂಜ್ಯಂ ಹಾಡೊಂದರ ಜೊತೆ ಮತ್ತೆರೆಡು ಹಾಡನ್ನು ಹೊರತುಪಡಿಸಿದರೆ, ಉಳಿದ ಯಾವ ಹಾಡುಗಳೂ ರುಚಿಸುವುದಿಲ್ಲ. ಇನ್ನು, ಮೊದಲೇ ಹೇಳಿದಂತೆ ಸಿನಿಮಾದ ಮೊದಲರ್ಧ ಹಾಗು ದ್ವಿತಿಯಾರ್ಧ ಹಾಡುಗಳದ್ದೇ ಕಾರುಬಾರು. ಅಷ್ಟೊಂದು ಹಾಡುಗಳ ಅಗತ್ಯವಿರಲಿಲ್ಲ. ಯಾಕೆಂದರೆ, ಒಂದೊಳ್ಳೆಯ ಲವ್ಸ್ಟೋರಿಯನ್ನು ಮನಸಾರೆ ಒಪ್ಪಿಕೊಂಡು ನೋಡುವ ಪ್ರೇಕ್ಷಕನಿಗೆ ಎಲ್ಲೋ ಒಂದು ಕಡೆ ಹಾಡುಗಳೇ ಬೇರೆಡೆ ಗಮನ ಹರಿಸುವಂತೆ ಮಾಡಿವೆ. ಇಡೀ ಸಿನಿಮಾದ ಹೈಲೈಟ್ ಅಂದರೆ, ಕಥೆ, ಲೊಕೇಷನ್, ಸಂಗೀತ ಮತ್ತು ಹಿನ್ನೆಲೆ ಸಂಗೀತ. ಅಲ್ಲಲ್ಲಿ ತೂಕದ ಮಾತುಗಳಿಗೆ ಒತ್ತು ಕೊಡಲಾಗಿದೆ ಅನ್ನುವುದೇ ಸಮಾಧಾನ. ಹಾಸ್ಯ ನಟರಿದ್ದಾರೆ ಆದರೆ, ಕಚಗುಳಿ ಇಡುವಂತಹ ಹಾಸ್ಯದ ಆಕರ್ಷಣೆ ಇಲ್ಲ. ಸಾಧುಕೋಕಿಲ ಅವರನ್ನು ಸೀನಿಯರ್ ಎಂಬಿಬಿಎಸ್ ಸ್ಟುಡೆಂಟ್ ಅಂತಂದುಕೊಳ್ಳುವುದು ತುಸು ಕಷ್ಟವೇ ಸರಿ. ಸಿನಿಮಾ ಅವಧಿಯನ್ನು ಕೊಂಚ ಕಡಿಮೆಗೊಳಿಸುವ ಪ್ರಯತ್ನ ಮಾಡಿದ್ದರೆ, ನಿಜಕ್ಕೂ ಇನ್ನಷ್ಟು ಪೂಜ್ಯ ಮನೋಭಾವ ಬರುತ್ತಿತ್ತೇನೋ. ಆದರೂ, ಇದು ಡಾಕ್ಟರ್ಸ್ ಸೇರಿದಂತೆ ಪ್ರೇಮಿಗಳು, ಹುಡುಗ, ಹುಡುಗಿಯರು, ದೊಡ್ಡೋರು, ಸಣ್ಣೋರು ಕೂಡ ನೋಡಲ್ಲಡ್ಡಿಯಿಲ್ಲ.
ಕಥೆ ಬಗ್ಗೆ ಹೇಳುವುದಾದರೆ… ಇಲ್ಲಿ ಜಾತಿ-ಧರ್ಮ ನಡುವಿನ ನಿಷ್ಕಲ್ಮಷ ಪ್ರೇಮವಿದೆ. ಸಂಬಂಧಗಳ ಮಧ್ಯೆ ಪ್ರೀತಿ ಇದೆ. ಭಾವನೆಗಳನ್ನು ಅರ್ಥ ಮಾಡಿಕೊಳ್ಳುವ ಗೆಳೆತನವಿದೆ, ಅಪ್ಪ, ಅಮ್ಮನ ಪ್ರೀತಿ ವಾತ್ಸಲ್ಯ ತುಂಬಿದೆ. ಅಲ್ಲಲ್ಲಿ ಕರುಣೆಯ ನೋಟವಿದೆ. ಪರ ಮನಸ್ಸುಗಳನ್ನು ಖುಷಿಪಡಿಸಬೇಕು ಎಂಬ ಧ್ಯೇಯ ಕೂಡ ಇದೆ. ಇವಿಷ್ಟು ಪ್ರೀತಿಯೊಳಗಿನ ಬೆಸುಗೆ. ಒಬ್ಬ ಮಂಡ್ಯ ಸಮೀಪದ ಹಳ್ಳಿಯೊಂದರ ರೈತನ ಮಗ ಡಾಕ್ಟರ್ ಆಗುವ ಆಸೆಯಿಂದ ಮೆಡಿಕಲ್ ಓದಲು ಪಟ್ಟಣಕ್ಕೆ ಬರ್ತಾನೆ. ಮೆಡಿಕಲ್ ಕಾಲೇಜಿನಲ್ಲಿ ಮೊದಲ ಸಲ ನೋಡುವ ಹುಡುಗಿ ಜೊತೆ ಪ್ರೀತಿ ಶುರುವಾಗುತ್ತೆ. ಅವಳಿಗೂ ಪ್ರೀತಿ ಅಂಕುರವಾಗುತ್ತೆ. ಪ್ರೀತಿ ನಡುವೆ ಧರ್ಮ ಅಡ್ಡ ಬರುತ್ತೆ. ಇನ್ನೇನು, ಮದುವೆ ಅನ್ನೋದು ಕನಸು ಅಂದುಕೊಳ್ಳುವಷ್ಟರಲ್ಲಿ ಅಲ್ಲೊಂದು ಪವಾಡ ನಡೆಯುತ್ತೆ. ಆ ಪವಾಡ ಏನು ಅನ್ನುವ ಕುತೂಹಲವಿದ್ದರೆ ಸಿನಿಮಾ ನೋಡಬಹುದು.
ಈ ಚಿತ್ರದ ಕಥೆ ಸಾಗುವ ರೀತಿ ನೋಡಿದವರಿಗೆ ಹಾಗೊಮ್ಮೆ ವಿಷ್ಣುವರ್ಧನ್ ಅಭಿನಯದ ಬಂಧನ ಸಿನಿಮಾ ನೆನಪಾಗುತ್ತೆ. ಅದಕ್ಕೂ ಇದಕ್ಕೂ ಸಾಮ್ಯತೆ ಇಲ್ಲದಿದ್ದರೂ, ಅಲ್ಲೂ ವಿಷ್ಣುವರ್ಧನ್ ಡಾಕ್ಟರ್. ಸುಹಾಸಿನಿಯೂ ಡಾಕ್ಟರ್. ಇಲ್ಲೂ ನಾಯಕ ಡಾಕ್ಟರ್, ನಾಯಕಿಯೂ ಮೆಡಿಕಲ್ ಸ್ಟುಡೆಂಟ್. ಅಲ್ಲಿ ವಿಷ್ಣುವರ್ಧನ್ ಡಾ.ಹರೀಶ್ ಆಗಿದ್ದರೆ, ಇಲ್ಲಿ ಪ್ರೇಮ್ ಡಾ.ಶ್ರೀಹರಿ. ಅಲ್ಲೂ ರೋಗಿಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದರೆ, ಇಲ್ಲೂ ರೋಗಿಗಳ ಮೇಲೆ ಕಾಳಜಿ ಇದೆ. ಬಂಧನದಲ್ಲೂ ವಿಷ್ಣುವರ್ಧನ್ ಅವರಿಗೆ ನಾಯಕಿ ಸಿಗಲ್ಲ. ಕೊನೆಗೆ ವಿಷ್ಣುವರ್ಧನ್ ಸಹ ಪ್ರಾಣ ಬಿಡ್ತಾರೆ. ಪ್ರೇಮಂ ಪೂಜ್ಯಂ ಚಿತ್ರದಲ್ಲೂ ಕೂಡ…? ಹೇಳುವುದಕ್ಕಿಂತ ಒಂದೊಮ್ಮೆ ನೋಡಿ ಬಿಡಿ. ಇನ್ನು, ವೃತ್ತಿಯಲ್ಲಿ ವೈದ್ಯರಾಗಿರುವ ನಿರ್ದೇಶಕ ರಾಘವೇಂದ್ರ ಅವರ ಚೊಚ್ಚಲ ಪ್ರಯತ್ನ ಸರಿಯಾಗಿಯೇ ಇದೆ. ಸ್ವಲ್ಪ ಅವಧಿ ಬಗ್ಗೆ ಯೋಚಿಸಿ, ಹಾಡುಗಳನ್ನು ಕಡಿಮೆಗೊಳಿಸುವ ಮನಸ್ಸು ಮಾಡಿದ್ದರೆ, ನಿಜಕ್ಕೂ ಮತ್ತಷ್ಟು ಪ್ರೀತಿ ಹೆಚ್ಚುತ್ತಿತ್ತು.
ಪ್ರೇಮ್ ಅವರ ಇಪ್ಪತ್ತೈದನೆ ಸಿನಿಮಾ ಇದು. ಮನಸ್ಸು ಭಾರವಾಗಿಸುವ, ಅಲ್ಲಲ್ಲಿ ಭಾವುಕತೆಗೆ ದೂಡುವಂತಹ ನಟನೆಯಲ್ಲಿ ಅವರು ಗಮನಸೆಳೆಯುತ್ತಾರೆ. ಅವರಿಲ್ಲಿ ಎಂದಿಗಿಂತಲೂ ಹ್ಯಾಂಡ್ಸಮ್. ಸಿನಿಮಾದುದ್ದಕ್ಕೂ ಅವರ ನಟನೆ ಕಾಡುತ್ತೆ. ಎಲ್ಲಾ ಶೇಡ್ ಪಾತ್ರಗಳಲ್ಲೂ ಅವರ ಹಾವಭಾವ ನೆನಪಿರದೇ ಇರದು. ಬಹುತೇಕ ಹುಡುಗಿಯರಿಗೇ ಮನಸಾರೆ ಇಷ್ಟವಾಗುತ್ತಿದ್ದ ಪ್ರೇಮ್, ಈ ಸಿನಿಮಾ ಮೂಲಕ ಇನ್ನಷ್ಟು ಹುಡುಗರಿಗೂ ಇಷ್ಟವಾಗುವಲ್ಲಿ ಸಂದೇಹವಿಲ್ಲ. ಬೃಂದಾ ನಟನೆ ಬಗ್ಗೆ ಹೇಳುವಂಥದ್ದೇನೂ ಇಲ್ಲ. ಐಂದ್ರಿತಾ ಇರುವಷ್ಟು ಕಾಲ ಇಷ್ಟವಾಗುತ್ತಾರೆ. ಆನಂದ್, ಸಾಧುಕೋಕಿಲ ಗೆಳೆಯರಾಗಿ ಸೈ ಎನಿಸಿಕೊಂಡಿದ್ದಾರೆ. ನವೀನ್ ಕುಮಾರ್ ಅವರ ಕ್ಯಾಮೆರಾ ಕೈಚಳಕ ಮತ್ತು ಹರೀಶ್ ಕೊಮ್ಮೆ ಅವರ ಕತ್ತರಿ ಪ್ರಯೋಗ ಸಿನಿಮಾದ ಮತ್ತೊಂದು ಪ್ಲಸ್.
“ಮದಗಜ" ರೋರಿಂಗ್ಸ್ಟಾರ್ ಶ್ರೀಮುರುಳಿ ನಟನೆಯ ಹೈವೋಲ್ಟೇಜ್ ಸಿನಿಮಾ. ಟೈಟಲ್ನಿಂದಲೇ ಹೈಪ್ ಕ್ರಿಯೇಟ್ ಮಾಡ್ಕೊಂಡು, ಕಂಟೆಂಟ್ನಿಂದ ಮತ್ತು ಕ್ವಾಲಿಟಿಯಿಂದ ಬಜಾರ್ನಲ್ಲಿ ಹವಾ ಎಬ್ಬಿಸಿರುವ ಮದಗಜ’ ಫಿಲ್ಮ್ ಟೀಮ್, ಈಗ ಇಂಟ್ರುಡಕ್ಷನ್ ಸ್ಯಾಂಪಲ್ ತೋರ್ಸಿ ಸಿನಿಮಾ ಪ್ರೇಮಿಗಳಿಂದ ಜೈಕಾರ ಹಾಕಿಸಿಕೊಳ್ತಿದ್ದಾರೆ. ಟೈಟಲ್ ಟ್ರ್ಯಾಕೇ ಇಷ್ಟು ರಿಚ್ ಆಗಿರುವಾಗ ಇಡೀ ಸಿನಿಮಾ ಇನ್ನೆಷ್ಟು ರಿಚ್ ಆಗಿರಬೇಡ ಅಂತ ಮಾತನಾಡಿಕೊಳ್ಳುವಂತೆ ಮಾಡಿದ್ದಾರೆ. ಗಾಂಧಿನಗರದ ಮಂದಿ ಮಾತ್ರವಲ್ಲ ಒಂದು ಕ್ಷಣ ಪರಭಾಷೆಯವರು ತಿರುಗಿ ನೋಡುವಂತಹ ಸಿನಿಮಾ ಇದಾಗುತ್ತೆ ಎನ್ನುವ ಸೂಚನೆ ಹೀರೋ ಇಂಟ್ರುಡಕ್ಷನ್ ಸಾಂಗ್ನಿಂದನೇ ಸಿಗುತ್ತಿದೆ.
ಯುದ್ದ ಸಾರಿದ.. ಚಂಡಮಾರುತ.. ಧೈರ್ಯ ಗೆಲ್ಲುತ.. ನಿಂತ ಪರ್ವತ.. ಮದಗಜ ಟೈಟಲ್ ಟ್ರ್ಯಾಕ್ ಹಾಡಿನ ಕೆಂಡದಂತಹ ಸಾಲುಗಳಿವು. ಕೆಜಿಎಫ್ ಸಿನಿಮಾದ ಗರ್ಭದಿ ನನ್ನಿರಿಸಿ ಊರಲಿ ನಡೆಯುತಿರೆ' ಅಂತ ಹೆತ್ತವ್ವನ ಮೇಲೆ ಗೀತೆ ರಚಿಸಿದ್ದ ಕಿನ್ನಾಲ್ ರಾಜ್ ಅವರು ಮದಗಜನಿಗೋಸ್ಕರಅನ್ಯಾಯಕ್ಕೆ ಟಕ್ಕರ್..ಎದುರಾಳಿಗೆ ಆಫ್ ಮೀಟರ್..ನಮ್ಮೂರ ಬ್ರದರ್ ..ಕ್ಯಾರೆಕ್ಟರ್ ಬ್ಲಾಕ್ಬಸ್ಟರ್’ ಅಂತ ರೋರಿಂಗ್ ಪದಗಳನ್ನು ಪೋಣಿಸಿಕೊಟ್ಟಿದ್ದಾರೆ. ಸಂತೋಷ್ ವೆಂಕಿ ಹಾಡಿದ್ದಾರೆ. ಕೆಜಿಎಫ್ ಮ್ಯೂಸಿಕ್ ಕೊಟ್ಟು ಇಡೀ ಜಗತ್ತನ್ನೇ ದಂಗುಬಡಿಸಿರುವ ರವಿ ಬಸ್ರೂರ್ ಅವರು ಈಗ ರೋರಿಂಗ್ ಬ್ರದರ್ಗೆ ಜಬರ್ದಸ್ತ್ ಟ್ಯೂನ್ ಹಾಕಿಕೊಟ್ಟಿದ್ದಾರೆ. ಇಂಟ್ರುಡಕ್ಷನ್ ಹಾಡಿನಲ್ಲೇ `ಮದಗಜ’ನ ಮೈಲೇಜ್ ಹೆಚ್ಚಿಸಿದ್ದಾರೆ.
ಹೌದು, ಟೈಟಲ್ ಟ್ರಾಕ್ನಿಂದ ಮದಗಜ'ನಿಗೆ ಮಗದೊಂದು ತೂಕ ಬಂದಿದೆ. ಅದಕ್ಕೆ ಕಾರಣ ನಿರ್ದೇಶಕರ ಕಲ್ಪನೆ-ಅದಕ್ಕೆ ತಕ್ಕಂತೆ ಮೇಕಿಂಗ್-ಕ್ಯಾಚಿ ಲಿರಿಕ್ಸ್-ಮ್ಯೂಸಿಕ್ ಕಂಪೋಸಿಷನ್-ಸಿಂಗಿಂಗ್ ಜೊತೆಗೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡರ ಖಜಾನೆಯ ಕೋಟಿ ಕೋಟಿ ಹಣ. ಉಮಾಪತಿಯವರು ಒಬ್ಬ ಫ್ಯಾಷನೇಟ್ ಪ್ರೊಡ್ಯೂಸರ್. ಸಿನಿಮಾ ಮಾಡೋದೇ ಬ್ಯುಸಿನೆಸ್ಗೋಸ್ಕರ ಎನ್ನುವ ಇವರು ಸಿನಿಮಾ ಕ್ವಾಲಿಟಿ ಮತ್ತು ಕ್ವಾಂಟಿಟಿ ವಿಚಾರದಲ್ಲಿ ಯಾವತ್ತೂ ಕಾಂಪ್ರಮೈಸ್ ಆಗೋದಿಲ್ಲ.
ಎಷ್ಟು ಕೋಟಿ ಬೇಕಾದರೂ ಸುರಿಯೋದಕ್ಕೆ ಸಿದ್ದ. ಆದರೆ, ತಾನು ನಿರ್ಮಾಣ ಮಾಡಿರುವ ಸಿನಿಮಾವನ್ನು ಬರೀ ಗಾಂಧಿನಗರದವರು ಮಾತ್ರವಲ್ಲ ಪರಭಾಷೆಯವರು ತಿರುಗಿ ನೋಡ್ಬೇಕು ಅಂತಾರೇ. ಈ ಹಿಂದೆ ಹೆಬ್ಬುಲಿ ಹಾಗೂ ರಾಬರ್ಟ್ ಸಿನಿಮಾವನ್ನು ಹೊರರಾಜ್ಯದವರು ಕಣ್ಣರಳಿಸಿ ನೋಡಿದ್ದುಂಟು, ಪರಭಾಷಾ ಅಂಗಳದಲ್ಲಿ ಆ ಚಿತ್ರಗಳು ಕಮಾಯಿ ಮಾಡಿದ್ದುಂಟು. ಇದೀಗ ಮದಗಜ’ನ ಸರದಿ.
ಮದಗಜ' ಬಿಗ್ಬಜೆಟ್ ಸಿನಿಮಾ. ಕೋಟಿ ಸೆಟ್-ಕಾಸ್ಟ್ಲೀ ಮೇಕಿಂಗ್ನಿಂದನೇ ನೋಡುಗರ ಕಣ್ಣು ಕುಕ್ಕುತ್ತಿದೆ. ಬರೋಬ್ಬರಿ 25 ಕೋಟಿ ವೆಚ್ಚದಲ್ಲಿ ತಯ್ಯಾರಾಗುತ್ತಿದ್ದು ಇಂಟ್ರುಡಕ್ಷನ್ ಹಾಡಿಗೆ ಒಂದು ಕೋಟಿ 72 ಲಕ್ಷ ಸುರಿದಿದ್ದಾರೆ. ಮೋಹನ್ ಬಿ.ಕೆರೆ ಸ್ಟುಡಿಯೋದಲ್ಲಿ ಭರ್ತಿ ಒಂದು ತಿಂಗಳು ಸೆಟ್ ವರ್ಕ್ ಕೆಲಸ ನಡೆದಿತ್ತು. ಎಲಿಫೆಂಟ್ ಥೀಮ್ನಲ್ಲಿ ಮೂರು ವೆರೈಟಿ ಸೆಟ್ ಹಾಕಲಾಗಿತ್ತು. ರಾಬರ್ಟ್ ಸಿನಿಮಾಗಾಗಿ ದರ್ಶನ್ಗೆ ಬೈಕ್ ಡಿಸೈನ್ ಮಾಡಿದ್ದ ಪ್ರಶಾಂತ್,ಮದಗಜನಿಗೆ’ ಸ್ಪೆಷಲ್ ಬೈಕ್ ತಯ್ಯಾರಿ ಮಾಡಿಕೊಟ್ಟರು.
ಚೇತನ್ ಕಾಸ್ಟ್ಯೂಮ್ ಡಿಸೈನ್ ಮಾಡಿದರು. ಸುಮಾರು 15 ದಿನ ಮುರುಳಿಯವರು ಡ್ಯಾನ್ಸ್ ಪ್ರಾಕ್ಟೀಸ್ ಮಾಡಿಕೊಂಡು ರೆಡಿಯಾದರು. ಹೀಗೆ ಸಕಲ ತಯ್ಯಾರಿ ಮಾಡಿಕೊಂಡು ಅಖಾಡದಲ್ಲಿ ಧುಮ್ಕಿದ ರೋರಿಂಗ್ ಸ್ಟಾರ್ 150 ಜನ ಡ್ಯಾನ್ಸರ್ ಮಧ್ಯೆ ಧಗಧಗಿಸಿದ್ದರು. ಮುರುಳಿ ಮಾಸ್ಟರ್ ಕೊರಿಯಾಗ್ರಫಿ ಮಾಡಿದರೆ, ಡಿಓಪಿ ನವೀನ್ ಕುಮಾರ್ ಕ್ಯಾಮೆರಾ ಕಣ್ಣಲ್ಲಿ ಅತ್ಯದ್ಬುತವಾಗಿ ಸೆರೆ ಹಿಡಿದರು. ನಿರ್ದೇಶಕ ಮಹೇಶ್ ಅವರ ಕಲ್ಪನೆಯಂತೆ ಹೀರೋ ಇಂಡ್ರುಡಕ್ಷನ್ ಸಾಂಗ್ ಮಾಸ್ ಥೀಮ್ನಲ್ಲಿ ಭರ್ಜರಿಯಾಗಿ ಮೂಡಿಬಂತು. ಇದೀಗ ಯೂಟ್ಯೂಬ್ ಅಂಗಳದಲ್ಲಿ ರೋರ್ ಮಾಡ್ತಿದೆ.
ಉಮಾಪತಿ, ನಿರ್ಮಾಪಕರು
ಮದಗಜನ ಧಮಾಕೇದಾರ್ ಇಂಟ್ರುಡಕ್ಷನ್ ಸಾಂಗ್ನ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ರಿಲೀಸ್ ಮಾಡ್ಬೇಕಿತ್ತು. ನವೆಂಬರ್ ೦೧ರಂದು ಅದ್ದೂರಿಯಾಗಿ ಇವೆಂಟ್ ಮಾಡಿ ಅಪ್ಪು ಕೈನಲ್ಲಿ ಬಿಡುಗಡೆ ಮಾಡ್ಸೋಕೆ ಚಿತ್ರತಂಡ ತಯ್ಯಾರಿ ನಡೆಸಿತ್ತು. ಅಪ್ಪು ಕೂಡ ಮದಗಜ'ನ ಸಾಂಗ್ ನೋಡಿ ಮೆಚ್ಚಿಕೊಂಡಿದ್ದರು. ಅಷ್ಟರಲ್ಲಿ ವಿಧಿಯ ಕೈವಾಡ ದೊಡ್ಮನೆ ಹುಡುಗ ಕಣ್ಮರೆಯಾದರು.
ಮಹೇಶ್ ಕುಮಾರ್, ನಿರ್ದೇಶಕರು
ಶೋ ಮಸ್ಟ್ ಗೋ ಆನ್ ಎನ್ನುವ ಹಾಗೇಮದಗಜ’ ಚಿತ್ರ ಬಿಡುಗಡೆಗೆ ತಯ್ಯಾರಾಗಿದೆ. ಅದ್ದೂರಿಗೆ ಮತ್ತೊಂದು ಹೆಸರೇ ಮದಗಜ' ಎನ್ನುವಂತೆ ನಿರ್ಮಾಣಗೊಂಡಿದೆ. ವಿಷ್ಯೂಯಲಿ ರಿಚ್ ಆಗಿರುವಮದಗಜ’ ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ಬಡಿಸಲು ತಯ್ಯಾರಾಗಿದೆ. ನಮ್ಮದು ಬಫೆ ಸಿಸ್ಟಮ್ ವೆಜ್ ಬೇಕೋ ವೆಜ್ ತಿನ್ನಿ.. ನಾನ್ ವೆಜ್ ಬೇಕೋ ನಾನ್ ವೆಜ್ ತಿನ್ನಿ.. ಕಾಸು ಕೊಟ್ಟು ಬಂದವರಿಗೆ ಸಂತೃಪ್ತಿಯಾಗೋದ ಮಾತ್ರ ಸತ್ಯ ಎಂದಿದ್ದಾರೆ ನಿರ್ಮಾಪಕರು.
ಇನ್ನೂ,ಹಳ್ಳಿ ಸೊಗಡಿನ ಸಿನಿಮಾ ಮಾಡಿ ಚೊಚ್ಚಲ ಚಿತ್ರದಲ್ಲೇ ಜೈಕಾರ ಹಾಕಿಸಿಕೊಂಡಿದ್ದ ನಿರ್ದೇಶಕ ಅಯೋಗ್ಯ ಖ್ಯಾತಿಯ ಮಹೇಶ್, ಎರಡನೇ ಚಿತ್ರದಲ್ಲೇ ರೋರಿಂಗ್ ಸ್ಟಾರ್ ಕಾಲ್ಶೀಟ್ ಗಿಟ್ಟಿಸಿಕೊಂಡು, ಸ್ಟಾರ್ ಪ್ರೊಡ್ಯೂಸರ್ ಉಮಾಪತಿಯವರಿಂದ ದುಡ್ಡುಹಾಕ್ಸಿ ಪ್ಯಾನ್ ಇಂಡಿಯಾ ತಲುಪೋದಕ್ಕೆ ಹೊರಟಿದ್ದಾರೆ. ಕನ್ನಡದ ಜೊತೆಗೆ ತೆಲುಗು-ತಮಿಳು ಭಾಷೆಯಲ್ಲಿ ರಿಲೀಸ್ಗೆ ಸಜ್ಜಾಗಿದೆ. ಚಿತ್ರದಲ್ಲಿ ಅತೀ ದೊಡ್ಡ ತಾರಾಬಳಗವೇ ಇದೆ.
ರೋರಿಂಗ್ಸ್ಟಾರ್- ಆಶಿಕಾ ರಂಗನಾಥ್ ಜೋಡಿಯಾಗಿದ್ದು, ಜಗಪತಿ ಬಾಬು, ರಂಗಾಯಣ ರಘು, ಗರುಡರಾಮ್, ದೇವಯಾನಿ, ಚಿಕ್ಕಣ್ಣ, ಶಿವರಾಜ್ ಕೆ ಆರ್ ಪೇಟೆ, ಧರ್ಮಣ್ಣ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೇ ಡಿಸೆಂಬರ್ ೦೩ರಂದು ತೆರೆಗೆ ತರೋದಕ್ಕೆ ಫಿಲ್ಮ್ ಟೀಮ್ ರೆಡಿಯಾಗ್ತಿದೆ. ಅಭಿಮಾನಿ ದೇವರುಗಳ ಆಶೀರ್ವಾದ ಮದಗಜನ ಮೇಲಿದ್ದರೆ ಶ್ರೀಮುರುಳಿಯ ಹೊಸ ಮೇನಿಯಾ ಸೃಷ್ಟಿಯಾಗೋದು ಗ್ಯಾರಂಟಿ.
ನಟ ಲವ್ಲಿ ಸ್ಟಾರ್ ಪ್ರೇಮ್ ಅಭಿನಯದ “ಪ್ರೇಮಂ ಪೂಜ್ಯಂ” ಚಿತ್ರ ಯಾವಾಗ ರಿಲೀಸ್ ಆಗುತ್ತೋ ಅಂತ ಬಹುತೇಕರು ಕಾದಿದ್ದರು. ಅದರಲ್ಲೂ ಲವ್ಲಿ ಸ್ಟಾರ್ ಪ್ರೇಮ್ ಅವರ ಅಭಿಮಾನಿಗಳಂತೂ ಸಿನಿಮಾ ನೋಡಲು ತುದಿಗಾಲ ಮೇಲೆ ನಿಂತಿದ್ದಾರೆ. ಅಂದಹಾಗೆ, ಅವರ ಪ್ರೇಮವನ್ನು ಪೂಜಿಸುವ ದಿನ ಬಂದೇ ಬಿಟ್ಟಿದೆ.
ಹೌದು, ನವೆಂಬರ್ 12ರಂದು “ಪ್ರೇಮಂ ಪೂಜ್ಯಂ” ದೇಶಾದ್ಯಂತ ತೆರೆಕಾಣುತ್ತಿದೆ. ಭಾರತದ ಹಲವು ರಾಜ್ಯಗಳಲ್ಲಿ ಮಾತ್ರವಲ್ಲ, ವಿದೇಶಗಳಲ್ಲೂ ಪ್ರೇಮ್ ನಟಿಸಿರುವ ಲವ್ಲಿ ಚಿತ್ರ ರಿಲೀಸ್ ಆಗುತ್ತಿದೆ. ಬಿಡುಗಡೆ ಮುನ್ನವೇ ಸಾಕಷ್ಟು ಸುದ್ದಿ ಮಾಡಿರುವ ಈ ಚಿತ್ರ ಅಷ್ಟೇ ನಿರೀಕ್ಷೆ ಹೆಚ್ಚಿಸಿದೆ. ಈಗಾಗಲೇ ಚಿತ್ರದ ಟೈಟಲ್ ಲಿರಿಕಲ್ ಸಾಂಗ್ ವಿಡಿಯೋ ಬಿಡುಗಡೆಯಾಗಿ, ಎಲ್ಲೆಡೆಯಿಂದ ಭರ್ಜರಿ ಮೆಚ್ಚುಗೆ ಪಡೆದು ಸಿನಿಮಾ ನೋಡುವ ಕುತೂಹಲ ಹೆಚ್ಚಿಸಿದೆ. ಈ ಚಿತ್ರ ಪ್ರೇಮ್ ಅವರಿಗೆ ತುಂಬಾನೇ ವಿಶೇಷ. ಅದಕ್ಕೆ ಕಾರಣ, “ಪ್ರೇಮಂ ಪೂಜ್ಯಂ” ಪ್ರೇಮ್ ಅವರ 25ನೇ ಸಿನಿಮಾ ಅನ್ನೋದು. ಈಗಾಗಲೇ ಸಾಕಷ್ಟು ಕುತೂಹಲ ಕೆರಳಿಸಿದೆ ಕೂಡ. ಚಿತ್ರದ ಟೈಟಲ್ಲೇ ಹೇಳುತ್ತೆ ಇದೊಂದು ಪಕ್ಕಾ ಇಂಟ್ರೆಸ್ಟಿಂಗ್ ಲವ್ ಸ್ಟೋರಿ ಅಂತ.
ಸಿನಿಮಾ ಯಾವಾಗ ರಿಲೀಸ್ ಅಂತ ಕೇಳುತ್ತಿದ್ದ ಪ್ರೇಮ್ ಫ್ಯಾನ್ಸ್ಗೆ ಶುಭ ಶುಕ್ರವಾರ ದರ್ಶನ ನೀಡುತ್ತಿದೆ. ಚಿತ್ರದ ಟೀಸರ್, ಸಾಂಗ್ ಎಲ್ಲವೂ ಸಿನಿ ಪ್ರೇಮಿಗಳಿಗೆ ಇಷ್ಟವಾಗಿದೆ. “ವೈದ್ಯೋ ನಾರಾಯಣ ಹರಿ.. ಎಂದು ಸಾಗುವ ಗೀತೆಯಲ್ಲೂ ವಿಶೇಷತೆ ಇದೆ. ಅದನ್ನು ಸಿನಿಮಾದಲ್ಲೇ ನೋಡಬೇಕು ಅನ್ನೋದು ಚಿತ್ರತಂಡದ ಮಾತು. ಚಿತ್ರದಲ್ಲಿರುವ ” ನನ್ನ ಜೀವನ ನಿನಗೆ ಸಮರ್ಪಣ ಕೈ ಮುಗಿವೆನು ಈ ನಾರಾಯಣ” ಎಂಬ ಹಾಡು ಅರ್ಥಪೂರ್ಣವಾಗಿದೆ.
ಇನ್ನು, ಈ ಚಿತ್ರ ಕೆಡಂಬದಿ ಕ್ರಿಯೇಷನ್ಸ್ನಲ್ಲಿ ಮೂಡಿ ಬಂದಿದ್ದು, ಲವ್ಲಿ ಸ್ಟಾರ್ ಪ್ರೇಮ್ಗೆ ಜೋಡಿಯಾಗಿ ಬೃಂದಾ ಆಚಾರ್ಯ ಕಾಣಿಸಿಕೊಂಡಿದ್ದಾರೆ. ಡಾ.ರಾಘವೇಂದ್ರ ಬಿ.ಎಸ್. ಅವರು ಈ ಸಿನಿಮಾದ ನಿರ್ದೇಶನ ಮಾತ್ರವಲ್ಲ, ಸಂಗೀತ ಸಂಯೋಜನೆ ಜೊತೆ ಸಾಹಿತ್ಯವನ್ನೂ ಬರೆದಿರುವುದು ವಿಶೇಷ.
ಈ ಚಿತ್ರದ ಪೋಸ್ಟರ್ಗಳು ಸಾಕಷ್ಟು ಸುದ್ದಿ ಮಾಡಿದ್ದಂತೂ ನಿಜ. ಅವೆಲ್ಲವನ್ನೂ ನೋಡಿದವರಿಗೆ ಪ್ರೇಮ್ ಮತ್ತಷ್ಟು ನ್ಯೂ ಲುಕ್ನಲ್ಲಿ ಆಕರ್ಷಿಸುತ್ತಾರೆ. ಫ್ರೆಶ್ ಲೊಕೇಷನ್ ಜೊತೆ ಅಷ್ಟೇ ಕ್ಯೂಟ್ ಜೋಡಿ ಕಾಣಿಸಿಕೊಂಡಿರುವುದನ್ನು ನೋಡಿದರೆ, ಸಿನಿಮಾ ನೋಡುವ ಕಾತುರ ಹೆಚ್ಚದೇ ಇರದು. ಚಿತ್ರಕ್ಕೆ ನವೀನ್ ಕುಮಾರ್ ಕ್ಯಾಮೆರಾ ಹಿಡಿದರೆ, ಹರೀಶ್ ಕೊಮ್ಮೆ ಸಂಕಲನವಿದೆ.
ಇಂತಹ ನಿರೀಕ್ಷೆಯ ಸಿನಿಮಾಗೆ ಡಾ.ರಕ್ಷಿತ್ ಕೆಡಂಬದಿ, ಡಾ.ರಾಜಕುಮಾರ್ ಜಾನಕಿರಾಮನ್, ಡಾ.ರಾಘವೇಂದ್ರ ಎಸ್, ಮನೋಜ್ ಕೃಷ್ಣನ್ ನಿರ್ಮಾಪಕರು. ಇನ್ನೊಂದು ವಿಶೇಷವೆಂದರೆ, ಬಹುತೇಕ ಡಾಕ್ಟರ್ಗಳೇ ಸೇರಿ ನಿರ್ಮಿಸಿರುವ ಸಿನಿಮಾ ಇದು. ತಂದೆ-ತಾಯಿ, ಸ್ನೇಹಿತರು ಈ ಎಲ್ಲ ಸಂಬಂಧಗಳಲ್ಲೂ ಪೂಜ್ಯನೀಯ ಭಾವನೆ ಇರಬೇಕೆಂಬ ಉತ್ತಮ ಸಂದೇಶ ಈ ಸಿನಿಮಾದಲ್ಲಿದೆ.
ಡಾ.ರಾಘವೇಂದ್ರ, ನಿರ್ದೇಶಕರು,
ಅದೇನೆ ಇರಲಿ, ಪ್ರತಿಯೊಬ್ಬ ನಟನಿಗೂ ತನ್ನ ಮೊದಲ ಚಿತ್ರ ಹೇಗೆ ವಿಶೇಷ ಆಗುತ್ತೋ, ಹಾಗೆಯೇ ಅವರ ಪ್ರತಿಯೊಂದು ಸಿನಿಮಾ ಕೂಡ ವಿಶೇಷವೇ. ಅದರಲ್ಲೂ 25 ನೇ ಸಿನಿಮಾ ಅಂದಾಕ್ಷಣ, ಅದೊಂದು ಮೈಲಿಗಲ್ಲು ಎನಿಸುವುದು ಸಹಜ.
ಅಂತಹ 25ನೇ ಹೊಸ್ತಿಲಲ್ಲಿ ಇರುವ ಪ್ರೇಮ್, 25ನೇ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. “ಪ್ರೇಮಂ ಪೂಜ್ಯಂ” ಸಿನಿಮಾ ಕನ್ನಡದ ಮಟ್ಟಿಗೆ ಫ್ರೆಶ್ ಫೀಲ್ ಕೊಡುವ ಸಿನಿಮಾ ಆಗಲಿ ಅನ್ನೋದು ಸಿನಿಲಹರಿ ಆಶಯ.