ದೊಡ್ಮನೆ ರಾಜರತ್ನನಿಗೆ ಅವಮಾನ ಮಾಡೋರಲ್ಲ ನಾವು; ಏಕ್ ಲವ್ ಯಾ’ ಅಚಾತುರ್ಯಕ್ಕೆ ಕ್ಷಮೆ ಇರಲಿ; ಅಪ್ಪು ಫ್ಯಾನ್ಸ್ ಬಳಿ ಪ್ರೇಮ್-ರಕ್ಷಿತಾ ಕ್ಷಮೆ !

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವ್ರನ್ನು ಅಭಿಮಾನಿಸುವವರು-ಪ್ರೀತಿಸುವವರು ನಾವು. ಅವರ ನಡೆ-ನುಡಿಯನ್ನು ಫಾಲೋ ಮಾಡುವವರು ನಾವು. ಅವ್ರಂತೇ ಬದುಕಿ-ಬಾಳಬೇಕು ಎಂದು ಆಸೆಪಡುತ್ತಿರುವವರು ನಾವು. ಅಪ್ಪು ಅವರ ಆದರ್ಶಗಳನ್ನು-ಗುಣಗಳನ್ನು ಮೈಗೂಡಿಸಿಕೊಂಡು ಮುಂದುವರಿಯಬೇಕು, ನಮ್ಮ ಕೈಯಲ್ಲಿ ಸಾಧ್ಯವಾದಷ್ಟು ಸಹಾಯ ಮಾಡ್ಬೇಕು, ಸ್ಪೂರ್ತಿಯುತ ಜೀವನ ನಡೆಸಬೇಕು, ಇದಷ್ಟು ದಿನ ಪ್ರೀತಿ ಹಂಚಬೇಕು, ಒಳ್ಳೆಯದ್ದನ್ನೇ ಮಾಡ್ಬೇಕು, ಒಳ್ಳೆಯದನ್ನೇ ಉಳಿಸಿ ಹೋಗ್ಬೇಕು ಅಂತ ಬಯಸ್ತಿರುವವರು ನಾವು ಹೀಗಿರುವಾಗ ನಾವ್ಯಾಕೆ ಅಪ್ಪುಗೆ ಅವಮಾನ ಮಾಡಲಿ -ರಕ್ಷಿತಾ ಪ್ರೇಮ್

ಹೀಗೆ ಹೇಳುತ್ತಾ ಹೋದರು ರಕ್ಷಿತಾ ಪ್ರೇಮ್. ಅಷ್ಟಕ್ಕೂ, ಅಪ್ಪು ಭಾವಚಿತ್ರದ ಮುಂದೆ ಶ್ಯಾಂಪೇನ್ ಬಾಟೆಲ್ ಓಪನ್ ಮಾಡೋದು ನಮ್ಮ ಉದ್ದೇಶ ಆಗಿರಲಿಲ್ಲ. ಶ್ಯಾಂಪೇನ್ ಓಪನ್ ಆದ ತಕ್ಷಣ ಏಕ್ ಲವ್ ಯಾ' ಎಣ್ಣೆ ಸಾಂಗ್ ಪ್ಲೇ ಆಗ್ಬೇಕಿತ್ತು. ಆದರೆ, ತಾಂತ್ರಿಕ ದೋಷದಿಂದಾಗಿ ಸಾಂಗ್ ಪ್ಲೇ ಆಗುವ ಜಾಗದಲ್ಲಿ ಅಪ್ಪುಗೆ ನಮನ ಸಲ್ಲಿಸಿದ್ದ ವಿಡಿಯೋ ಪ್ಲೇ ಆಗಿದೆ. ಇದರಿಂದ ದೊಡ್ಮನೆ ರಾಜರತ್ನನಿಗೆ ನಾವು ಅವಮಾನ ಮಾಡಿದ್ದೇವೆ ಎನ್ನುವ ಆಕ್ರೋಶ ವ್ಯಕ್ತವಾಗ್ತಿದೆ. ದಯವಿಟ್ಟುಏಕ್ ಲವ್ ಯಾ’ ತಂಡದಿಂದಾದ ಎಡವಟ್ಟಿಗೆ ಕ್ಷಮೆ ಇರಲಿ. ನಮ್ಮ ಅರಿವಿಗೆ ಬಾರದೆ ಆದಂತಹ ಅವಾಂತರಕ್ಕೆ ಕೈಮುಗಿದು ಕ್ಷಮೆಯಾಚಿಸುತ್ತೇವೆ ಎಂದು ಅಭಿಮಾನಿ ದೇವರುಗಳಲ್ಲಿ ಪ್ರೇಮ್ ಮತ್ತು ರಕ್ಷಿತಾ ಪ್ರೇಮ್ ಜೊತೆಗೆ `ಏಕ್ ಲವ್ ಯಾ’ ಟೀಮ್ ವಿನಂತಿ ಮಾಡಿಕೊಂಡಿದೆ.

ನಿನ್ನೆಯಷ್ಟೇ ಏಕ್ ಲವ್ ಯಾ' ತಂಡ ಸಾಂಗ್ ಲಾಂಚ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಅದ್ದೂರಿಯಾಗಿ ಆರ್ಗನೈಸ್ ಆಗಿದ್ದ ಕಾರ್ಯಕ್ರಮಕ್ಕೆ ಖ್ಯಾತ ಗಾಯಕಿ ಮಂಗ್ಲಿ ಸೇರಿದಂತೆ ಸ್ಯಾಂಡಲ್‌ವುಡ್‌ನ ಸ್ಟಾರ್ ನಟಿಯರು ಆಗಮಿಸಿದ್ದರು. ಅಕುಲ್ ಬಾಲಾಜಿ ನಿರೂಪಣೆಯಲ್ಲಿ ಪ್ರೋಗ್ರಾಂ ನಡೀತು. ಈ ವೇಳೆ ಎಣ್ಣೆ ಸಾಂಗ್ ಲಾಂಚ್ ಮಾಡಲಿಕ್ಕೆಏಕ್ ಲವ್ ಯಾ’ ಚಿತ್ರದ ನಿರ್ಮಾಪಕಿ ರಕ್ಷಿತಾ ಪ್ರೇಮ್- ರಚಿತರಾಮ್- ರೀಷ್ಮಾ ನಾಣಯ್ಯ- ಮೇಘನಾ ಗಾಂವ್ಕರ್-ಅದಿತಿ ಪ್ರಭುದೇವ್- ನಿಶ್ವಿಕಾ ನಾಯ್ಡು ಸೇರಿದಂತೆ ಇತರೆ ನಟಿಮಣಿಯರು ವೇದಿಕೆ ಮೇಲೆ ಎಂಟ್ರಿಕೊಟ್ಟರು. ಶ್ಯಾಂಪೇನ್ ಬಾಟೆಲ್ ಓಪನ್ ಮಾಡಿ ಚಿತ್ರದ `ಎಣ್ಣೆ’ ಸಾಂಗ್ ಲಾಂಚ್ ಮಾಡೋದಕ್ಕೆ ಪ್ಲಾನ್ ಆಗಿತ್ತು. ಅದರಂತೇ, ಬಾಟೆಲ್ ಓಪನ್ ಆಯ್ತು ಆದರೆ ಸ್ಕ್ರಿನ್ ಮೇಲೆ ಸಾಂಗ್ ಬದಲಿಗೆ ಅಪ್ಪುಗೆ ನಮನ ಸಲ್ಲಿಸಿದ್ದ ವಿಡಿಯೋ ಪ್ಲೇ ಆಯ್ತು. ಈ ವಿಡಿಯೋ ಮಾಧ್ಯಮದಲ್ಲಿ ಪ್ರಸಾರಗೊಂಡಿದ್ದೇ ತಡ ಅಪ್ಪು ಅಭಿಮಾನಿಗಳು ಮತ್ತು ದೊಡ್ಮನೆ ಭಕ್ತರು ಆಕ್ರೋಶಗೊಂಡರು. ಈ ಸುದ್ದಿ ಫಿಲ್ಮ್ ಚೇಂಬರ್‌ನ ಮಾಜಿ ಅಧ್ಯಕ್ಷರ ಕಿವಿಗೆ ಬಿತ್ತು. ಅಪ್ಪು ಅಗಲಿಕೆಯ ನೋವಲ್ಲಿರುವ ಅಭಿಮಾನಿಗಳನ್ನು ಕೆರಳಿಸಿದಂತಾಗಿದೆ. ದಯವಿಟ್ಟು ಒಮ್ಮೆ ಕ್ಷಮೆಯಾಚಿಸಿ‌ ಬಿಡಿ ಎಂದು ಸಾ.ರಾ. ಗೋವಿಂದು ಅವರು ಒತ್ತಾಯಿಸಿದರು.

ದೊಡ್ಡವರ ಮಾತಿಗೆ ಬೆಲೆಕೊಟ್ಟ ಚಿತ್ರತಂಡ ಅಪ್ಪುಗೆ ಅವಮಾನ ಮಾಡುವ ಉದ್ದೇಶ ನಮ್ಮದಾಗಿರಲಿಲ್ಲ'. ನಮಗೆ ಗೊತ್ತಿಲ್ಲದೇ, ನಮ್ಮ ಅರಿವಿಗೆ ಬಾರದೇ, ಟೆಕ್ನಿಕಲಿ ಸಮಸ್ಯೆಯಿಂದಾಗಿ ಈ ರೀತಿಯಾಗಿದೆ. ದಯವಿಟ್ಟು ಅಭಿಮಾನಿ ದೇವರುಗಳು ಕ್ಷಮಿಸಬೇಕು ಎಂದು ನಿರ್ದೇಶಕ ಪ್ರೇಮ್ ಸುದ್ದಿಗೋಷ್ಟಿ ಮಾಡಿ ಕ್ಷಮೆ ಕೋರಿದ್ದಾರೆ. ಇದೇ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಪ್ರೇಮ್ ಅವರು, ಅಪ್ಪು ಉಸಿರು ಚೆಲ್ಲಿ ಆಸ್ಪತ್ರೆಯಲ್ಲಿ ಮಲಗಿದಾಗ ಅವರು ಹಣೆಸವರಿ, ಎರಡು ಕಾಲುಗಳನ್ನು ಹಿಡಿದುಕೊಂಡು ಕ್ಷಮೆ ಕೇಳಿದ್ದೇನೆ. ನನ್ನಿಂದ ಏನಾದರೂ ತಪ್ಪಾಗಿದ್ದರೆ ಕ್ಷಮಿಸಿಬಿಡಿ ಬಾಸ್ ಎಂದು ಬೇಡಿಕೊಂಡಿದ್ದೇನೆ ಗೊತ್ತಾ. ಅಷ್ಟಕ್ಕೂ,ಏಕ್ ಲವ್ ಯಾ’ ಸಾಂಗ್ ಲಾಂಚಿAಗ್ ಸಂದರ್ಭದಲ್ಲಿ ಅಚಾನಕ್ ಆಗಿ ಅಪ್ಪು ಬಾಸ್ ಫೋಟೋ ಪ್ಲೇ ಆಗಿದೆ. ಬೇಕು ಅಂತ ನಾವು ಏನು ಮಾಡಿಲ್ಲ. ಅಭಿಮಾನಿಗಳು ಅನ್ಯತಾ ಭಾವಿಸಬೇಡಿ, ದೊಡ್ಮನೆ ರಾಜಕುಮಾರನಿಗೆ ಅವಮಾನ ಮಾಡಿ ನಿಮ್ಮ ಮನಸ್ಸಿಗೆ ನೋವುಂಟು ಮಾಡುವ ಸಣ್ಣಮನಸ್ಸು ನಮ್ಮದಲ್ಲ ಎಂದು ಕೈಮುಗಿದರು.

ಇನ್ನೂ ಮನೆಯಿಂದನೇ ಮಾಧ್ಯಮಗಳ ಜೊತೆ ಮಾತನಾಡಿದ ರಕ್ಷಿತಾ ಪ್ರೇಮ್, ಅವರು ಕಣ್ಣೀರಾದರು. ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಬ್ಯಾಡ್ ಕಮೆಂಟ್ಸ್ ಬರುತ್ತಿದೆ.
ಉದ್ದೇಶಪೂರ್ವವಾಗಿ ನಾವು ಇದನ್ನು ಮಾಡಿಲ್ಲ. ಯಾರಿಗೂ ನೋಯಿಸುವ ಉದ್ದೇಶ ನಮ್ಮದಲ್ಲ. ಅಭಿಮಾನಿ ದೇವರುಗಳಿಗೆ ನಮ್ಮಿಂದ ನೋವಾಗಿದ್ರೆ ಕ್ಷಮಿಸಿಬಿಡಿ ಎಲ್ಲರು. ಅಷ್ಟಕ್ಕೂ, ಶ್ಯಾಂಪೇನ್ ಬಾಟೆಲ್‌ನಲ್ಲಿ ಆಲ್ಕೋ ಹಾಲೇ ಇರಲಿಲ್ಲ. ನಾನ್ ಆಲ್ಕೋಹಾಲಿಕ್ ಶ್ಯಾಂಪೇನ್ ಅದಾಗಿತ್ತು ಅಷ್ಟೇ. ಎಣ್ಣೆ ಸಾಂಗ್ ಅದಾಗಿದ್ರಿಂದ ಶ್ಯಾಂಪೇನ್ ಬಾಟೆಲ್ ಓಪನ್ ಮಾಡಿಸಿದ್ವಿ ಎಂದರು ರಕ್ಷಿತಾ.

ಇದೇ ವೇಳೆ ದೊಡ್ಮನೆಗೆ ಕೊಡುವ ಗೌರವದ ಬಗ್ಗೆ ಮಾತನಾಡಿದರು. ಅಪ್ಪು ಸಿನಿಮಾದ ಮೂಲಕ ನನ್ನನ್ನು ಮಾತ್ರವಲ್ಲ ನಮ್ಮ ಅಮ್ಮ ಹಾಗೂ ಅಪ್ಪಾಜಿಯನ್ನು ಕೂಡ ಚಿತ್ರರಂಗಕ್ಕೆ ಪರಿಚಯಿಸಿದವರು ದೊಡ್ಮನೆಯವರು. ಹೀಗಿರುವಾಗ ಆ ದೊಡ್ಡ ಕುಟುಂಬಕ್ಕೆ ನಾವು ಅವಮಾನ ಮಾಡುತ್ತೇವಾ? ಕಮೆಂಟ್ ಮಾಡುವ ಜನರು ಸೂಕ್ಷ್ಮವಾಗಿ ಒಮ್ಮೆ ಯೋಚಿಸಿದರೆ ಗೊತ್ತಾಗುತ್ತೆ. ಎನಿವೇ, ನಮ್ಮಿಂದ ನಿಮ್ಮ ಭಾವನೆಗಳಿಗೆ ಪೆಟ್ಟಾಗಿದ್ದರೆ, ನಿಮ್ಮ ಮನಸ್ಸಿಗೆ ನೋವಾಗಿದ್ದರೆ ಪ್ರತಿಯೊಬ್ಬರಿಗೂ ಕೈ ಮುಗಿದು ಕ್ಷಮೆ ಕೇಳುತ್ತೇನೆ. ಅಪ್ಪು ಎಲ್ಲರಿಂದನೂ ಒಂದೊಂದನ್ನು ಕಲಿಯುತ್ತಿದ್ದರು. ಅದೇ ರೀತಿ ಈ ಘಟನೆಯಿಂದ ಯಾವ್ ರೀತಿ ಹುಷಾರಾಗಿರಬೇಕು ಎಂಬುದನ್ನು ಕಲಿಯುತ್ತೇನೆ ಎಂದರು. ಏಕ್ ಲವ್ ಯಾ ನಿರ್ದೇಶಕ ಪ್ರೇಮ್- ನಿರ್ಮಾಪಕಿ ರಕ್ಷಿತಾರಂತೆ, ಚಿತ್ರದ ನಾಯಕಿ ರಚಿತಾ ಹಾಗೂ ಇಡೀ ಚಿತ್ರತಂಡ ಕ್ಷಮೆಯಾಚಿಸಿದೆ.

ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Related Posts

error: Content is protected !!