Categories
ಸಿನಿ ಸುದ್ದಿ

ನಿರ್ದೇಶಕ ಮನು ಕಲ್ಯಾಡಿ ಈಗ ಹೀರೋ‌ !

ಅವರದೇ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿದೆ ಹೊಸ‌ ಸಿನಿಮಾ

ಪ್ರಾರಂಭ‌‌ ಚಿತ್ರದ ನಿರ್ದೇಶಕ ಮನು‌ಕಲ್ಯಾಡಿ‌ ಅವರಿಗೆ ಇಂದು ಹುಟ್ಟು ಸಂಭ್ರಮ.‌‌ಪ್ರಾರಂಭ ಚಿತ್ರ ತಂಡವು ರಾತ್ರಿಯೇ ಕೇಕ್ ಕತ್ತರಿಸಿ, ಸಿಹಿ‌ಹಂಚುವ ಮೂಲಕ ಮನು‌ ಕಲ್ಯಾಡಿ ಅವರ ಹುಟ್ಟು ‌ಹಬ್ಬವನ್ನು‌ಅಚರಿಸಿತು.‌ಇದೇ‌ವೇಳೆ ನಿರ್ದೇಶಕ ಮನು ಕಲ್ಯಾಡಿ‌ ಅವರಿಗೆ ಸಹೋದರ ಜಗದೀಶ್ ಕಲ್ಯಾಡಿ ವಿಶೇಷವಾದ ಗಿಫ್ಟ್ ಕೊಟ್ಟರು. ಮನು‌ಕಲ್ಯಾಡಿ‌ ಅವರನ್ನೆ ಹೀರೋ ಆಗಿಸಿಕೊಂಡು ಹೊಸ ದೊಂದು‌ಸಿನಿಮಾ‌ ಮಾಡುವುದಾಗಿ‌ ಘೋಷಿಸಿದರು.

ಮನು ಕಲ್ಯಾಡಿ‌ ನಿರ್ದೇಶನದ’  ಪ್ರಾರಂಭ‌ ‘ಚಿತ್ರವು ಹೊರಬರುತ್ತಿದ್ದಂತೆ‌ ಮನುಕಲ್ಯಾಡಿ‌ ಆ‌ವರನ್ನು‌ ಹೀರೋ ಆಗಿ‌ಬೆಳ್ಳಿತೆರೆಗೆ ಪರಿಚಯಿಸುವುದಾಗಿ‌ಜಗದೀಶ್ ಕಲ್ಯಾಡಿ‌  ಭರವಸೆ ನೀಡಿದರು.‌ ಅಂದ‌ಹಾಗೆ‌ ಈ‌ಚಿತ್ರಕ್ಕೆ‌ಈಗಾಗಲೇ‌‌ನಿರ್ದೇಶಕರು‌ಫಿಕ್ಸ್ ಆಗಿದ್ದಾರೆ. ಸಾಯಿ‌ಕಿಶೋರ್ ತಲ್ಲ ಆ್ಯಕ್ಚನ್ ಹೇಳಲು‌ ರೆಡಿ ಆಗಿದ್ದಾರೆ. ಸ್ಕ್ರಿಪ್ಟ್ ‌ವರ್ಕ್ ಕೂಡ‌ಮುಗಿದಿದೆ.‌ ನಾಯಕಿ‌ಸೇರಿದಂತೆ‌ಉಳಿದ‌ಕಲಾವಿದರ‌ಆಯ್ಕೆ ಬಾಕಿಯಿದೆ.ಅಕ್ಟೋಬರ್ ‌ತಿಂಗಳಲ್ಲಿ‌ಈ‌ಚಿತ್ರ‌ಸೆಟ್ಟೇರುವುದು‌‌ ಗ್ಯಾರಂಟಿ ಯಂತೆ.‌

ಇನ್ನು‌ಎಲ್ಲವೂ‌ಅಂದುಕೊಂಡಂತೆಯೇ ಆಗಿದ್ದರೆ‌ಜಗದೀಶ್ ಕಲ್ಯಾಡಿ‌ನಿರ್ಮಾಣ‌ಹಾಗೂ‌ ಮನು‌ಕಲ್ಯಾಡಿ‌‌ ನಿರ್ದೇಶನದ ಪ್ರಾರಂಭ‌ಚಿತ್ರ ರಿಲೀಸ್‌ಆಗಬೇಕಿತ್ತು.‌ ಆದರೆ‌ಕೊರೋನಾ‌ ಕಾರಣ‌ಎಲ್ಲವೂ‌‌ ಏರುಪೇರಾಯಿತು.‌ಈಗ‌ ಕೊರೋನಾ‌‌ ಭೀತಿ‌ ಒಂದಷ್ಟು ತಿಳಿಯಾಗುತ್ತಿದೆ.‌ ನಿರ್ಮಾಪಕ‌ ಜಗದೀಶ್  ಕಲ್ಯಾಡಿ  ಪ್ರಾರಂಭ ರಿಲೀಸ್ ಗೆ‌ಸಿದ್ದತೆ‌‌ನಡೆಸಿದ್ದಾರೆ.‌ಅದು ತೆರೆಗೆ‌ ಬರುತ್ತಿದ್ದಂತೆ ಮನು‌ಕಲ್ಯಾಡಿ‌ ಅಭಿನಯದ ಚೊಚ್ಚಲ ಚಿತ್ರ ಸೆಟ್ಟೇರಲಿದೆ‌‌  ಎನ್ನುವುದು  ತಂಡದ ಅಧಿಕೃತ ಮಾಹಿತಿ.

Categories
ಸಿನಿ ಸುದ್ದಿ

ನಿರ್ದೇಶಕ ಮನು ಕಲ್ಯಾಡಿ ಈಗ ಹೀರೋ!

ಅವರದೇ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿದೆ ಹೊಸ‌ ಸಿನಿಮಾ

‘ಪ್ರಾರಂಭ‌‌’ ಚಿತ್ರದ ನಿರ್ದೇಶಕ ಮನು‌ಕಲ್ಯಾಡಿ‌ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ.‌‌ಪ್ರಾರಂಭ ಚಿತ್ರ ತಂಡವು ರಾತ್ರಿಯೇ ಕೇಕ್ ಕತ್ತರಿಸಿ, ಸಿಹಿ‌ಹಂಚುವ ಮೂಲಕ ಮನು‌ ಕಲ್ಯಾಡಿ ಅವರ ಹುಟ್ಟು ‌ಹಬ್ಬವನ್ನು‌ಅಚರಿಸಿತು.‌ಇದೇ‌ವೇಳೆ ನಿರ್ದೇಶಕ ಮನು ಕಲ್ಯಾಡಿ‌ ಅವರಿಗೆ ಸಹೋದರ ಜಗದೀಶ್ ಕಲ್ಯಾಡಿ ವಿಶೇಷವಾದ ಗಿಫ್ಟ್ ಕೊಟ್ಟರು. ಮನು‌ಕಲ್ಯಾಡಿ‌ ಅವರನ್ನೆ ಹೀರೋ ಆಗಿಸಿಕೊಂಡು ಹೊಸ ದೊಂದು‌ಸಿನಿಮಾ‌ ಮಾಡುವುದಾಗಿ‌ ಘೋಷಿಸಿದರು.
ಮನು ಕಲ್ಯಾಡಿ‌ ನಿರ್ದೇಶನದ’ ‘ಪ್ರಾರಂಭ‌ ‘ಚಿತ್ರವು ಹೊರಬರುತ್ತಿದ್ದಂತೆ‌ ಮನುಕಲ್ಯಾಡಿ‌ ಆ‌ವರನ್ನು‌ ಹೀರೋ ಆಗಿ‌ಬೆಳ್ಳಿತೆರೆಗೆ ಪರಿಚಯಿಸುವುದಾಗಿ‌
ಜಗದೀಶ್ ಕಲ್ಯಾಡಿ‌ ಭರವಸೆ ನೀಡಿದರು.‌ಅಂದ‌ಹಾಗೆ‌ಈ‌ಚಿತ್ರಕ್ಕೆ‌ಈಗಾಗಲೇ‌‌ನಿರ್ದೇಶಕರು‌ಫಿಕ್ಸ್ ಆಗಿದ್ದಾರೆ. ಸಾಯಿ‌ಕಿಶೋರ್ ತಲ್ಲ ಆ್ಯಕ್ಚನ್ ಹೇಳಲು‌ ರೆಡಿ ಆಗಿದ್ದಾರೆ. ಸ್ಕ್ರಿಪ್ಟ್ ‌ವರ್ಕ್

ಕೂಡ‌ಮುಗಿದಿದೆ.‌ನಾಯಕಿ‌ಸೇರಿದಂತೆ‌ಉಳಿದ‌ಕಲಾವಿದರ‌ಆಯ್ಕೆ‌ಬಾಕಿಯಿದೆ.‌‌ಅಕ್ಟೋಬರ್ ‌ತಿಂಗಳಲ್ಲಿ‌ಈ‌ಚಿತ್ರ‌ಸೆಟ್ಟೇರುವುದು‌‌ ಗ್ಯಾರಂಟಿ ಯಂತೆ.‌ಇನ್ನು‌ಎಲ್ಲವೂ‌ಅಂದುಕೊಂಡಂತೆಯೇ ಆಗಿದ್ದರೆ‌ಜಗದೀಶ್ ಕಲ್ಯಾಡಿ‌ನಿರ್ಮಾಣ‌ಹಾಗೂ‌ ಮನು‌ಕಲ್ಯಾಡಿ‌‌ ನಿರ್ದೇಶನದ ಪ್ರಾರಂಭ‌ಚಿತ್ರ ರಿಲೀಸ್‌ಆಗಬೇಕಿತ್ತು.‌ಆದರೆ‌ಕೊರೋನಾ‌ ಕಾರಣ‌ಎಲ್ಲವೂ‌‌ ಏರುಪೇರಾಯಿತು.‌ಈಗ‌ ಕೊರೋನಾ‌‌ ಭೀತಿ‌ ಒಂದಷ್ಟು ತಿಳಿಯಾಗುತ್ತಿದೆ.‌ ನಿರ್ಮಾಪಕ‌ ಜಗದೀಶ್ ಕಲ್ಯಾಡಿ ಪ್ರಾರಂಭ ರಿಲೀಸ್ ಗೆ‌ಸಿದ್ದತೆ‌‌ನಡೆಸಿದ್ದಾರೆ.‌ಅದು ತೆರೆಗೆ‌ ಬರುತ್ತಿದ್ದಂತೆ ಮನು‌ಕಲ್ಯಾಡಿ‌ ಅಭಿನಯದ ಚೊಚ್ಚಲ ಚಿತ್ರ ಸೆಟ್ಟೇರಲಿದೆ‌‌ ಎನ್ನುವುದು ತಂಡದ ಅಧಿಕೃತ ಮಾಹಿತಿ.

Categories
ಸಿನಿ ಸುದ್ದಿ

ಒಳ್ಳೇ ಹುಡುಗನ ಕುರಿ, ಹಸು ಮೇಯಿಸೋ ಕೆಲಸ

ಹಸು ಹಾಲು ಹಿಂಡುತ್ತಿರುವ ಪ್ರಥಮ್

ನಟ ಭಯಂಕರ ಅಲಿಯಾಸ್ ಒಳ್ಳೇ ಹುಡುಗ ಅಂದುಕೊಳ್ಳುವ ಪ್ರಥಮ್ ಬಗ್ಗೆ ಎಲ್ಲರಿಗೂ ಗೊತ್ತು. ಮಾತಲ್ಲೇ ಮೋಡಿ‌ ಮಾಡುವ ಪ್ರಥಮ್, ಸದ್ಯ ತನ್ನೂರಲ್ಲಿದ್ದಾರೆ. ಅಲ್ಲಿ ಕೃಷಿಯತ್ತ ಗಮನಹರಿಸಿದ್ದಾರೆ. ಅಷ್ಟೇ ಅಲ್ಲ, ಅವರು ತಮ್ಮ ಹಸು , ಕುರಿ ಮರಿಗಳನ್ನು ಮೇಯಿಸುವುದರ ಜೊತೆ ಸಮಯ ಕಳೆಯುತ್ತಿದ್ದಾರೆ. ಇತ್ತೀಚೆಗೆ ಅವರು ಹಸುವಿನ‌ ಹಾಲು ಕರೆದು ತಾನೊಬ್ಬ ಪಕ್ಕಾ ರೈತ ಎನ್ನುವುದನ್ನು ಹೇಳುವ ಪ್ರಯತ್ನ ಮಾಡಿದ್ದಾರೆ. ತಾವು ಮಾಡುತ್ತಿರುವ ಕೆಲಸಗಳ ಫೋಟೋ ತೆಗೆದು ತಮ್ಮ ಮುಖಪುಟದಲ್ಲಿ ಹಾಕಿಕೊಂಡಿದ್ದಾರೆ.
‘ಈಗಷ್ಟೇ ನಾನು ಕುರಿ ಮೇಯಿಸುವಾಗ ನಮ್ ಚಿಕ್ಕಪ್ಪನ ಕುರಿ,ಮರಿ ಹಾಕ್ತು!ಗಂಡುಮರಿ ಆದ್ರಿಂದ ಮುಂದಿನ ತಿಂಗಳು ಸ್ವಲ್ಪ ಬಲಿತ ಮೇಲೆ ಮಾರಿಬಿಡ್ತಾರೆ!
ಹೆಣ್ಣು ಮರಿ ಆಗಿದ್ರೆ ಸಾಕೋದು ವಾಡಿಕೆ. ಹಾಗಾಗಿ ನಾನೇ
ಅದನ್ನು ಖರೀದಿಸಿದ್ದೇನೆ.
ಖುಷಿ ಅಂದ್ರೆ ಶೀಘ್ರದಲ್ಲೇ ನನ್ನ ಕುರಿಗಳ ಸಂಖ್ಯೆ ಜಾಸ್ತಿಆಗ್ತಿದೆ! ಎಂದು ಬರೆದುಕೊಂಡು ಖುಷಿ ಹಂಚಿಕೊಂಡಿದ್ದಾರೆ.
ಇನ್ನೊಂದು ಸ್ಟೇಟಸ್ ನಲ್ಲಿ
ಪ್ರತಿದಿನ ಕುರಿ ಮೇಯಿಸೋದು, ಹಾಲು ಕರೆಯೋದನ್ನು ಕಲೀತಾ ಇದೀನಿ ಎಂಬ ಸಾಲು ಬರೆದುಕೊಂಡಿದ್ದಾರೆ.
ಸದ್ಯ ನಟಭಯಂಕರ ಸಿನಿಮಾದ ಕೆಲಸ‌ ಪೆಂಡಿಂಗ್ ಇರುವುದರಿಂದ ಊರಲ್ಲೇ ಕುರಿ, ಹಸು‌ ಮೇಯಿಸಿಕೊಂಡು ಹಾಲು ಕರೆಯುವುದನ್ನು ಕಲೀತಾ ಇದಾರೆ.
ಸಿನಿಮಾ ಚಟುವಟಿಕೆಗಳು ಶುರುವಾದರೆ ಪ್ರಥಮ್ ಮತ್ತೆ ಗಾಂಧಿನಗರದಲ್ಲಿ ಸದ್ದು ಮಾಡುವ ಉತ್ಸಾಹದಲ್ಲಿದ್ದಾರೆ.

Categories
ಸಿನಿ ಸುದ್ದಿ

ಮಳೆಯಲಿ, ಜೊತೆಯಲಿ ‘ ಕಿಯಾ’ ಳೊಂದಿಗೆ ‘ಸಂಚಾರಿ’!

ತಲೆದಂಡದ ಗುಂಗು, ಮಲೆನಾಡಿನ ಮೆರಗು

ಎಲ್ಲೆಡೆ‌ಹಸಿರು, ಬೆಟ್ಟ ಗುಡ್ಡ,ಅವುಗಳ‌ ನಡುವೆ ಬೋರ್ಗೆರೆಯುವ ಜಲಪಾತ, ತಣ್ಣನೆಯ ವಾತಾವರಣ, ಮನಸ್ಸಿಗೆ ಹಿತ ನೀಡುವ ಹಿತವಾದ ಗಾಳಿ, ಅಲಲ್ಲಿ ಕಾಫಿತೋಟ, ಮಧುರವಾಗಿ ಕೇಳಿಸುವ ಪ್ರಾಣಿ -ಪಕ್ಷಿ ಸಂಕುಲದ ಸಪ್ಪಳ…ಅಬ್ಬಾ, ಕಾಫಿನಾಡು‌ ಚಿಕ್ಕಮಗಳೂರು ಅಂದ್ರೇನೆ ಹಾಗೆ. ಅಲ್ಲಿದ್ದವರಿಗಿಂತ ಬಯಲು‌ ನಾಡಿನ ಜನರಿಗೆ ಅದೊಂದು‌ ಸ್ವರ್ಗದ ಸೀಮೆ.‌ ಅದರಲ್ಲೂ‌ ಮಳೆಗಾಲದ ಮಳೆಯೊಳಗಡೆ ಚಿಕ್ಕಮಗಳೂರಿಗೆ ಕಾಲಿಟ್ಟರೆ ಅದೊಂದು ರೋಮಾಂಚಕಾರಿ ಅನುಭವ.ಸದ್ಯಕ್ಕೀಗ ಚಿಕ್ಕಮಗಳೂರಿಗೆ ಹೋಗಿ ಅಂತಹ ಅನುಭವ ಕಂಡು‌ ಬಂದಿದ್ದಾರೆ ‌ನಟ ಸಂಚಾರಿ ವಿಜಯ್ !

ಸಂಚಾರಿಯವರ ಈ ಸಂಚಾರ ಯಾಕಾಗಿ? ಯಾವುದಾದ್ರೂ ಚಿತ್ರೀಕರಣವೇ, ಇಲ್ಲವೇ ಸುಮ್ನೆ ಕಣ್ಣೋಟದ ಪ್ರಯಾಣವೇ?‌ ನಟ ವಿಜಯ್ ಅವರ ಪ್ರಕಾರ ಇವೆರಡೂ ಅಲ್ಲ. ಕೊರೋನಾ‌ ಕಾಲದಲ್ಲಿ‌ಚಿತ್ರೀಕರಣ ಇಲ್ಲ, ಹೊರ ಊರುಗಳಿಗೂ ಹೋಗಿರಲಿಲ್ಲ ಎನ್ನುವುದು ನಿಜವಾಗಿದ್ದರೂ, ನಾನು ಚಿಕ್ಕಮಗಳೂರು ಹೋಗಿದ್ದು ಒಂದು ಖಾಸಗಿ ಕೆಲಸದ ಮೇಲೆ. ಹಾಗೆಯೇ ಸಮಯ ಇತ್ತು, ಅದನ್ನೇ ಬಳಸಿಕೊಂಡು‌ ಚಿಕ್ಕಮಗಳೂರಿನಿಂದ ಬಾಳೆ ಹೊನ್ನುರು ಮಾರ್ಗವಾಗಿ ಶೃಂಗೇರಿಗೆ ಹೋಗಿ ಬಂದೆ.

ಅವರು ಏನೇ ಹೇಳಿದ್ರೂ ಅವರ ಈ ಜಾಲಿ‌ಮೂಡ್ ನ ಪ್ರವಾಸಕ್ಕಿದ್ದ ಪ್ರೇರಣೆ ‘ಕಿಯಾ ‘! ಉಳಿದಂತೆ‌ ಅವರೀಗ ತಲೆ ದಂಡ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈಗಾಗಲೇ‌ ಚಿತ್ರೀಕರಣ ಮುಗಿಸಿರುವ ಮೇಲೊಬ್ಬ ಮಾಯಾವಿ, ಪುಕ್ಸಟೆ ಲೈಪು ರಿಲೀಸ್ ಗೆ ರೆಡಿ ಆಗಿವೆ. ಮತ್ತೆ ಮೂರು ಹೊಸ ಸಿನಿಮಾಕ್ಕೆ ಸಹಿ ಹಾಕಿದ್ದಾರೆ.

ಕೊರೋನಾ ಭೀತಿ ದೂರವಾದರೆ ಅವು ಇಷ್ಟರಲ್ಲಿಯೇ ಶುರುವಾಗಲಿವೆ. ಬಹುತೇಕ ಅಕ್ಟೋಬರ್ ಅಥವಾ ನವೆಂಬರ್ ನಲ್ಲಿ ಆ ಸಿನಿಮಾಗಳಿಗೆ‌‌ಚಾಲನೆ ಸಿಗಬಹುದು ಎನ್ನುವ ಮಾತು‌ಅವರದು. ಉಳಿದಂತೆ‌ ಇಲ್ಲಿ ‘ ಕಿಯಾ’ ಬೇರಾರು ಅಲ್ಲ.ಅವರು ತೆಗೆದುಕೊಂಡಿರುವ ಹೊಸ‌ಕಾರು!

Categories
ಸಿನಿ ಸುದ್ದಿ

ಹೊಸಬರ ಕನಸಿಗೆ ಜೋಗಿ ಪ್ರೇಮ್ ಸಾಥ್-

ಯುವ ನಿರ್ದೇಶಕ ಸ್ಮಿತೇಶ್ ಎಸ್ ಬಾರ್ಯ ನಿರ್ದೇಶನದ ‘ಕನಸು ಮಾರಾಟಕ್ಕಿದೆ’ ಚಿತ್ರ ಈಗಾಗಲೇ ಜೋರು ಸುದ್ದಿಯಾಗುತ್ತಿದ್ದು, ಸಿನೆಮಾದ ಮೊದಲ ಟೀಸರ್ ರಿಲೀಸ್ ಗೆ ನಿರ್ದೇಶಕ ಜೋಗಿ ಪ್ರೇಮ್ ಬುಧವಾರ ಸಂಜೆ 5 ಕ್ಕೆ ಚಾಲನೆ‌ ನೀಡುತ್ತಿದ್ದಾರೆ. ಶಿವಕುಮಾರ್ ನಿರ್ಮಾಣದ ಈ ಚಿತ್ರಕ್ಕೆ‌ ಶರತ್ ಕುಮಾರ್ , ಪ್ರಶಾಂತ್ ಕೋಟ್ಯಾನ್ ಪಾದೆಗುತ್ತು, ಸೆಲ್ವ ರಾಜ್ ಸಹ ನಿರ್ಮಾಣವಿದೆ. ಕೊಡಲಿದ್ದಾರೆ. ನವೀನ್ ಪೂಜಾರಿ ಕಥೆ ಬರೆದರೆ, ಅನೀಶ್ ಪೂಜಾರಿ ಚಿತ್ರಕಥೆ, ಸಂಭಾಷಣೆ ಇದೆ. ಮಾನಸ‌ ಹೊಳ್ಳ ಸಂಗೀತವಿದೆ. ಸಂತೋಷ ಆಚಾರ್ಯ ಛಾಯಾಗ್ರಹಣವಿದೆ. ಗಣೇಶ್ ನೀರ್ಜಾಲ್ ಸಂಕಲನವಿದೆ.

Categories
ಸಿನಿ ಸುದ್ದಿ

ಲಗ್ನ ಪತ್ರಿಕೆ ಹಂಚಲು ರೆಡಿಯಾದ ಅರವಿಂದ್ ಕೌಶಿಕ್- ಕಲರ್ಸ್ ನಲ್ಲಿ ಕಲರ್ ಫುಲ್ ಸ್ಟೋರಿ

 

 

 

 

ನಿರ್ದೇಶಕ ಅರವಿಂದ್ ಕೌಶಿಕ್ ಇದೀಗ ಲಗ್ನ ಪತ್ರಿಕೆ ಹಂಚೋಕೆ ರೆಡಿಯಾಗಿದ್ದಾರೆ!

ಅರೇ, ಹೀಗಂದಾಕ್ಷಣ ಮತ್ತೊಂದು ಮದ್ವೆಗೆ ಏನಾದರೂ ಅವರು ತಯಾರಿ ನಡೆಸಿದ್ದಾರಾ ಅನ್ನೋ ಪ್ರಶ್ನೆ ಸಹಜ. ಆದರೆ, ಅವರು ಹೊಸ ಮದ್ವೆ ಆಗ್ತಾ ಇಲ್ಲ, ಬದಲಾಗಿ ಮದ್ವೆಗೆ ಸಂಬಂಧಿಸಿದ ಹೊಸ ಬಗೆಯ ಕಥೆ ಹೆಣೆದು ಪ್ರೇಕ್ಷಕರ ಮುಂದೆ ಬರೋಕೆ ಸಜ್ಜಾಗಿದ್ದಾರೆ.
ಹೌದು, ಕಿರುತೆರೆ ಹಾಗೂ ಹಿರಿತೆರೆಯಲ್ಲಿ ತಮ್ಮದೇ ಛಾಪು ಮೂಡಿಸಿರುವ ಅರವಿಂದ್ ಕೌಶಿಕ್ ಈಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ಕಲರ್ ಫುಲ್ ಸ್ಟೋರಿ ಮೂಲಕ ರಂಜಿಸಲು ತಮ್ಮ ತಂಡದೊಂದಿಗೆ ತಯಾರಾಗಿದ್ದಾರೆ.
ಬರೀ ರಿಮೇಕ್ ಹಾವಳಿ ಇರುವ ಈ ದಿನಮಾನದಲ್ಲೂ ಅವರು ದೇಸಿ ಸೊಗಡಿನ‌ ಪಕ್ಕಾ ನಮ್ಮತನ ಇರುವ ಸ್ವಂಥದ್ದೊಂದು ಕಥೆ ಹೆಣೆದು ಧಾರಾವಾಹಿ ಮೂಲಕ ಮನೆ ಮಂದಿಯ‌ ಮನ ತಣಿಸಲು ಹೊರಟಿದ್ದಾರೆ.
ಈ ಧಾರಾವಾಹಿ ಮೂಲಕ ಅಪ್ಪಟ ಕನ್ನಡದ ಪ್ರತಿಭಾವಂತರನ್ನ ಹಾಗೂ ಕ್ರಿಯಾಶೀಲ ಬರಹಗಾರರಿರುವ ತಂಡ ಕಟ್ಟಿಕೊಂಡು ಹೊಸ ಸವಿರುಚಿ ಉಣಬಡಿಸುವ ಉತ್ಸಾಹದಲ್ಲಿದ್ದಾರೆ.
ಅವರ ನಿರ್ದೇಶನದ ‘ಲಗ್ನಪತ್ರಿಕೆ’ ಧಾರಾವಾಹಿಯಲ್ಲಿ
ಸುಂದರ್ ಮತ್ತು ನವೀನ್ ಸಾಗರ್ ಕೈ ಜೋಡಿಸಿದ್ದಾರೆ. ಅವರ ಜೊತೆ ಅರವಿಂದ್ ಕೂಡ ಕಥೆ, ಚಿತ್ರಕಥೆಯಲ್ಲಿ ನಿರತರಾಗಿದ್ದಾರೆ.
ಕ್ರಿಯಾಶೀಲ ಬರಹಗಾರ ನವೀನ್ ಸಾಗರ್ ಲಗ್ನ ಪತ್ರಿಕೆಗೆ ಮಾತುಗಳನ್ನು ಪೋಣಿಸುತ್ತಿರುವುದು ವಿಶೇಷ.
ಅರವಿಂದ್ ಕೌಶಿಕ್ ಅವರ ಲಗ್ನ ಪತ್ರಿಕೆ ಸಂಭ್ರಮಕ್ಕೆ ಕಲಾವಿದರಾದ ಸುಂದರ್,ರವಿ ಭಟ್, ರೇಣುಕ,ಮರೀನಾ ತಾರಾ ,ಜ್ಯೋತಿ ,ಕುಲ್ದೀಪ್ ,ಸುಪ್ರಿಯಾ,ದರ್ಶನ್ ಸೂರ್ಯ , ಸಂಜನಾ ಬುರ್ಲಿ , ಸೂರಜ್ ಹೂಗಾರ್ ಸಾಕ್ಷಿಯಾಗಲಿದ್ದಾರೆ.
ಮನೋಹರ್ ಯಾಪ್ಲರ್, ಕ್ಯಾಮೆರಾ ಹಿಡಿದರೆ, ಗಣಪತಿ ಭಟ್ ಸಂಕಲನವಿದೆ. ಸಂಗೀತ ಅರ್ಜುನ್ ರಾಮು ಸಂಗೀತವಿದೆ. ಗಣೇಶ್ ಕಾರಂತ್ , ಸ್ಪರ್ಶಾ ಹಾಡಿದ್ದಾರೆ. ಸಹ ನಿರ್ದೇಶಕ ಸುರೇಶ್ ಕುಣಿಗಲ್ ಸಾಥ್ ನೀಡಿದ್ದಾರೆ. ಕುಲ್ದೀಪ್ ಹಾಗು ಚೇತನ್ ನಿರ್ಮಾಣ ಕೆಲಸದ ಉಸ್ತುವಾರಿ ಹೊತ್ತಿದ್ದಾರೆ.
ಅಂತೂ ಲಾಕ್ ಡೌನ್ ಆಗಿ ಬೇಸತ್ತಿದ್ದ ಮನೆ ಮಂದಿ ಒಂದೊಳ್ಳೆಯ ಮದುವೆ ಊಟದಷ್ಟು ರುಚಿ ಈ ಧಾರಾವಾಹಿಯಿಂದ ನಿರೀಕ್ಷಿಸಬಹುದು.

ಅರವಿಂದ್ ಕೌಶಿಕ್

Categories
ಗಾಳಿ ಮಾತು

ಬಾಳಿ ಬದುಕುವ ಕುರಿತು ಉಪದೇಶ ಕೊಟ್ರು‌‌‌‌ ಈ ನಟಿ ! ಈ ನಟಿ ಈ ಮಾತು ಯಾಕೆ ಹೇಳಿದ್ರು ಗೊತ್ತಾ?

 

ಬಾಳು ಇರುವುದು ಬದುಕುವುದಕ್ಕಾಗಿ, ಬದುಕಿ ಬೆಳೆಯುವುದಕ್ಕಾಗಿ’

 

 

 

ಇವರು ‘ತರಲೆ ನನ್ಮಕ್ಳು ‘ಚಿತ್ರದೊಂದಿಗೆ ಬಣ್ಣದ ಲೋಕಕ್ಕೆ ಬಂದ ನಟಿ. ಹೆಸರು ಅಂಜನಾ.ಅದು‌ ಯಾಕೋ‌ ಸರಿ ಬರಲಿಲ್ಲ ಅಂತ ನ್ಯೂಮ್ಯಾರಾಲಜಿ ಪ್ರಕಾರ ಸುಕೃತಾ ದೇಶಪಾಂಡೆ ಅಂತ ಹೆಸರು ಬದಲಾಯಿ ಸಿಕೊಂಡರು.‌ಹಾಗಂತ ಕೈ ತುಂಬಾ ಅವಕಾಶ ಪಡೆದು, ರಾತ್ರೋರಾತ್ರಿ ಸ್ಟಾರ್ ಆದ್ರಾ? ಅದು ಇಲ್ಲ.‌ ಹೆಸರು ಬದಲಾದರೂ ಹಣೆ ಬರಹ ಬದಲಾಗಬೇಕಲ್ಲ?ಮೊದಲ‌ಸಿನಿಮಾಕ್ಕೆ‌ಅವರು ನಾಯಕಿ‌ಅಂತ ಆಗಿದ್ದಷ್ಟೇ ಲಾಭ.‌ಅದು ಅಂತಹ ಸಕ್ಸಸ್ ಕಾಣಲಿಲ್ಲ.ಇತ್ತ ಅಂಜನಾ‌ ಅಲಿಯಾಸ್ ಸುಕೃತಾ ಅವರಿಗೂ ಹೆಸರು ತಂದು ಕೊಡಲಿಲ್ಲ. ಅವಕಾಶಗಳೂ ಹುಡುಕಿ ಬರಲಿಲ್ಲ. ಹಾಗಂತ ಅವರಿಗೆ ಬೇರೆಯವರ ಹಾಗೆ ನಟಿಯಾಗಿ ಮಿಂಚುವ ಹುಚ್ಚು, ಕೆಚ್ಚು ಬಿಡಲಿಲ್ಲ. ಅತ್ತ ಮೆಲ್ಲನೆ ತಮಿಳು ಚಿತ್ರರಂಗಕ್ಕೂ ಕಾಲಿಟ್ಟರು. ಅಲ್ಲೂ‌ ಒಂದೆರೆಡು ಸಿನಿಮಾಗಳಲ್ಲಿ ಕಾಣಿಸಿಕೊಂಡರು. ಯಾವೊಂದು ಅಲ್ಲಿ ಸುದ್ದಿಯಾಗಲಿಲ್ಲ. ಪುನಃ ಗಾಂಧಿನಗರದತ್ತ ಮುಖ ಮಾಡಿದ ಈ ನಟಿಗೆ ಸಿಕ್ಕಿದ್ದು “ಪ್ರೀತಿಯ ರಾಯಭಾರಿ’ ಎಂಬ ಹೊಸಬರ ಸಿನಿಮಾ.

ಅದರಿಂದಲೇ ಈಗ ನಟಿಯಾಗಿ ಒಂದಷ್ಟು ಗುರುತಿಸಿಕೊಂಡಿರುವ ಸುಕೃತಾ ದೇಶಪಾಂಡೆ, ಕೊರೋನಾ ಕಾರಣಕ್ಕೆ ಸಿನಿಮಾ‌ ಗಿನಿಮಾ‌ಅಂತೆಲ್ಲ ತಲೆ‌ಕಡೆಸಿಕೊಳ್ಳದೇ ಮನೆಯಲ್ಲಿದ್ದು‌ಬದುಕಿನ‌ ಪಾಠ‌ಕಲಿಯುತ್ತಿದ್ದಾರೆ. ಪಾಠ ಅಲ್ಲ‌ಅದು‌ ಉಪದೇಶ. ‘ ಬಾಳು ಇರುವುದು ಬದುಕುವುದಕ್ಕಾಗಿ; ಬದುಕಿ ಬೆಳೆಯುವುದಕ್ಕಾಗಿ.’ ಈ‌ ಮಾತನ್ನು ಹೇಳಿದ್ದಾರೋ‌ ಗೊತ್ತಿಲ್ಲ.‌ಅದರೆ ಈ‌ಮಾತನ್ನು ಸುಕೃತಾ ತಮ್ಮ‌ ಫೇಸ್ ಬುಕ್ ಖಾತೆಯಲ್ಲಿ ‌ಹಾಕಿಕೊಂಡು, ಗಮನ ಸೆಳೆದಿದ್ದಾರೆ. ‌ಅವರ‌ಕಾರ್ಯಕ್ಕೆ‌ಗಮನ‌ ಅಥವಾ ಕುತೂಹಲ‌ ಯಾಕೆ‌ ಗೋತ್ತಾ?

 

ಯಾವುದೋ ಕಾಣಕ್ಕೆ‌ಇವತ್ತು ಸೆಲಿಬ್ರಿಟಿಗಳು ಸುಸೈಡ್ ಹಂತಕ್ಕೆ ಯೋಚಿಸುತ್ತಾರೆ. ಬಾಲಿವುಡ್ ನಟ ಸುಶಾಂತ್ ಸಿಂಗ್ ಪ್ರಕರಣ ಬೆಚ್ಚಿ ಬೀಳಿಸಿದೆ. ಅದಿರಲಿ, ಬಿಗ್ ಬಾಸ್ ಖ್ಯಾತಿಯ ಕನ್ನಡದ ನಟಿ ಜಯಶ್ರೀ ರಾಮಯ್ಯ ಕೂಡ ಅಂತಹ‌ ಕೆಟ್ಟ ವಿಚಾರಕ್ಮೆ ಅಲೋಚಿಸಿ‌ದೊಡ್ಡ ಸುದ್ದಿ ಆಗಿದ್ದರು.‌ನಾಗಮಂಡಲದ ನಟಿ‌ ವಿಜಯಲಕ್ಷ್ಮಿ‌ ಕೂಡ ಅದೇ ಕಾರಣಕ್ಕೆ ಸಾಕಷ್ಟು ಸುದ್ದಿಯಾದರು. ಇಂತಹ ಕ್ಷೀಣ ಮನಸ್ಸು ಗಳ‌ನಡುವೆ ನಟಿ‌ಸುಕೃತಾ ಬಾಳಿ ಬದುಕುವ ಮಹತ್ವ ಮಾತನ್ನು ತಮ್ಮ‌ಫೇಸ್ ಬುಕ್ ಖಾತೆಯಲ್ಲಿ ಹಾಕಿಕೊಂಡು‌‌ ಬಾಳು‌ಬದುಕುವುದಕ್ಕಾಗಿಯೇ ಹೇಳಿರುವುದು ವಿಶೇಷ.

Categories
ಸೌತ್‌ ಸೆನ್ಸೇಷನ್

ತುಂಟರಿ ತುಂಟಿಯ ಬೆನ್ನತ್ತಿದವರ ಸಂಖ್ಯೆ 2 ಲಕ್ಷ!

ಅಭಿಮಾನಿಗಳ‌ ಅಭಿಮಾನಕ್ಕೆ ಧನ್ಯವಾದ ಹೇಳಿದ ನುಸ್ರುತ್ ಚೆಲುವೆ ಲತಾ ಹೆಗಡೆ

ಕಾಲ ಬದಲಾಗಿದೆ. ಒಬ್ಬ ನಟ ಅಥವಾ ನಟಿಗೆ ಎಷ್ಟು ಜನ ಅಭಿಮಾನಿಗಳಿದ್ದಾರೆ, ಅವರ ಸ್ಟ್ರೆಂತ್ ಏನು ಅಂತ ಈಗ ಸೋಷಲ್ ಮೀಡಿಯಾ ತೋರಿಸಿ‌ಬಿಡುತ್ತದೆ. ಸೋಷಲ್ ಮೀಡಿಯಾ ದಲ್ಲಿ ಅವರು ತಮ್ಮ‌ಖಾತೆ ತೆರೆದರೆ ಅವರನ್ನು ಹಿಂಬಾಲಿಸುವ ಅಭಿಮಾನಿಗಳು ಎಷ್ಟು ಅಂತ ಗೊತ್ತಾಗಿ ಬಿಡುತ್ತದೆ. ಸದ್ಯಕ್ಕೆ ಅಂತಹದೇ ಒಂದು ಅಭಿಮಾನಿ ಬಳಗವನ್ನು ಹೆಚ್ಚಿಸಿಕೊಂಡು ಖುಷಿಯಲ್ಲಿದ್ದಾರೆ ನುಸ್ರುತ್ ಖ್ಯಾತಿಯ ನಟಿ ಲತಾ ಹೆಗಡೆ.

ಅತಿರಥ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ವಿದೇಶ ಮೂಲದ ಕನ್ನಡತಿ ಲತಾ ಹೆಗಡೆ. ಮೂಲತಃ ಕನ್ನಡದವೇ ಆದರೂ, ನ್ಯೂಜಿಲೆಂಡ್ ನಿವಾಸಿ ಈ ಚೆಲುವೆ. ಇಂಜಿನಿಯರಿಂಗ್ ಮುಗಿಸಿ, ಸಾಫ್ಟ್‌ವೇರ್ ಉದ್ಯೋ ಗಿ ಆಗಿದ್ದರೂ, ನಟಿಯಾಗುವ ಆಸೆಯಿಂದ ತೆಲುಗಿನ ‘ತುಂಟರಿ’ ಚಿತ್ರದೊಂದಿಗೆ ನಟಿಯಾಗಿ ಬೆಳ್ಳಿತೆರೆಗೆ ಕಾಲಿಟ್ಟ ಹೆಗ್ಗಳಿಕೆ ಅವರದು.‌ಅಲ್ಲಿಂದ ಆ‌ದಿನಗಳು ಚೇತನ್ ಜೋಡಿಯಾಗಿ ‘ಅತಿರಥ’ ತವರೂರು ಕನ್ನಡಕ್ಕೂ ಬಂದರು ಎನ್ನುವುದೀಗ ಎಲ್ಲರಿಗೂ ಗೊತ್ತಿರುವ ವಿಚಾರ.ಈಗ ಸೋಷಲ್ ಮೀಡಿಯಾದಲ್ಲಿ‌ಅವರ ಫಾಲೋವರ್ ಸಂಖ್ಯೆ ಎರಡು ಲಕ್ಷ ದಾಟಿದೆ.‌‌


  • ಒಬ್ಬ ನಟಿಯಾಗಿ ಲತಾ‌ಹೆಗಡೆಗೆ ಒದು ಭಾರೀ‌ ಸಂತಸ ಮೂಡಿಸಿದೆ. ಆ‌‌ಸಂತೋಷ‌
    ಮತ್ತು ಸಂಭ್ರಮವನ್ನು ಅವರು ತಮ್ಮ ಅಧಿಕೃತ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ‘ ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕೆ ಅಭಾರಿಯಾಗಿದ್ದೇನೆ.‌ನಿಮ್ಮ‌ಈ ಬೆಂಬಲ‌ ಹೀಗೆಯೇ ನಿರಂತರವಾಗಿರಲಿ’ ಎಂದು ಸ್ಟೇಟಸ್ ಪೋಸ್ಟ್ ಮಾಡಿದ್ದಾರೆ.
  • ಅಂದ ಹಾಗೆ ವಿನಯ್ ರಾಜ್ ಕುಮಾರ್ ಅಭಿನಯದ ‘ಅನಂತು ವರ್ಸಸ್ ನುಸ್ರುತ್ ‘ಚಿತ್ರದಲ್ಲಿನ‌ಮುಸ್ಲಿಂ ಹುಡುಗಿ ಪಾತ್ರದಲ್ಲಿಲತಾ ಅದ್ಬುತವಾಗಿ ಅಭಿನಯಿಸಿದ್ದರು. ಸದ್ಯಕ್ಕೆ ತಮ್ಮದೇ ಕೆಲಸಗಳಲ್ಲಿ ಬ್ಯುಸಿ ಆಗಿರುವ ಅವರು, ಕನ್ನಡದ ಜತೆಗೆ ತೆಲುಗಿನಲ್ಲೂ‌ ಮತ್ತಷ್ಟು ಅವಕಾಶಗಳೊಂದಿಗೆ ಸಕ್ರಿಯವಾಗುವ ನಿರೀಕ್ಷೆಯಲ್ಲಿದ್ದಾರೆ.
Categories
ಸಿನಿ ಸುದ್ದಿ

ಅಕ್ಕ – ತಂಗಿಯರೆಂದರೆ ಹೀಗಿರಬೇಕು!

ಸ್ಟಾರ್ ಸಿಸ್ಟರ್

ನೇಹಾ- ಸೋನು‌‌ ಆತ್ಮೀಯತೆಯ‌ ಆಟ

‌ಚೆಂದನವನಲ್ಲಿ ಮಿಂಚುತ್ತಿರುವ ಸ್ಟಾರ್ ಸಿಸ್ಟರ್ ಪೈಕಿ ನೇಹಾ ಮತ್ತು ಸೋನು ಕೂಡ ಇದ್ದಾರೆ. ಇವ್ರು ಚಿತ್ರ ರಂಗದ ಹೆಸರಾಂತ ಮೆಕಪ್ ಕಲಾವಿದ ರಾಮಕೃಷ್ಣ ಅವರ ಪುತ್ರಿಯರು ಎನ್ನುವುದು ಬಣ್ಣದ ಲೋಕಕ್ಕೆ ಗೊತ್ತಿರುವ ಸಂಗತಿ. ಅದೃಷವೇ ಎನ್ನುವಂತೆ ಇಬ್ಬರು ಈಗ ಕಲರ್ಫುಲ್ ದುನಿಯಾ ಸ್ಟಾರ್ ಸಹೋದರಿಯರು.

 

ನೇಹಾ ಸೀರಿಯಲ್ ಜಗತ್ತಿನಲ್ಲಿ ಬಹುಬೇಡಿಕೆಯ ನಟಿಯಾಗಿ ಮಿಂಚುತ್ತಿದ್ದರೆ, ಸೋನು ತಾನೇನುಕಮ್ಮಿಇಲ್ಲ ಅಂತ ಸಿನಿಮಾರಂಗದ ಬಹುಬೇಡಿಕೆ ನಟಿಆಗಿದ್ದಾರೆ. ಇಬ್ಬರು ಈಗಬಿಡುವಿಲ್ಲದ. ಬ್ಯುಸಿನಟಿಯರು.ಈಗ ಕೊರೋನಾಕಾರಣ ಚಿತ್ರೀಕರಣ ಇಲ್ಲದೆ ಮನೆಯಲ್ಲಿ ಕುಳಿತಿರುವ ನೇಹಾ ಮತ್ತು ಸೋನು, ಪುಟಾಣಿಗಳ ಹಾಗೆ ತಮ್ಮ ಅನನ್ಯ ಪ್ರೀತಿಗೆ, ಒಡನಾಟಕ್ಕೆ, ಆತ್ಮೀಯತೆಗೆ ಸಾಕ್ಷಿಯಾಗುವಂತೆ ಕ್ಯಾಮರಾಕ್ಕೆ ಪೋಸು ನೀಡಿದ್ದಾರೆ.

ಗುಂಡು ಮಕ್ಕಳಿಲ್ಲದ ಮೆಕಪ್ ಕಲಾವಿದ ರಾಮಕೃಷ್ಣ ಅವರಿಗೆ ಇವರೇ ಮುದ್ದಿನ ಗಂಡುಮಕ್ಕಳು.ಅಪ್ಪ-ಅಮ್ಮನ ಮುದ್ದಿನಸಹೋದರಿಯರು. ಬೇಡಿಕೆಯ ನಟಿಯರಾದರೂ, ಕಿಂಚಿತ್ತು ಜಂಬ ಅವರಲಿಲ್ಲ.ಸರಳ- ಸಜ್ಜನಿಕೆಯೇ ಅವರ ಆಸ್ತಿ. ಹಾಗೆ ಸುಮ್ಮನೆ ಸ್ಟಾರ್ ಸಿಸ್ಟರ್ ಕ್ಯಾಮರಾ ಕ್ಕೆ ಪೋಸು ನೀಡಿರುವ ರೀತಿ ನೋಡಿದರೆ, ಇತರೆಯವರಿಗೂ ಮಾದರಿ…

Categories
ಸಿನಿ ಸುದ್ದಿ

ಅಪ್ಪು ʼಮಾರ್ಗʼದರ್ಶನ

ಆ ದಿನಗಳು ಖ್ಯಾತಿಯ ಚೇತನ್‌ ಅಭಿನಯದ ಹೊಸ ಚಿತ್ರ ಮಾರ್ಗ ಇತ್ತೀಚೆಗೆ ಮುಹೂರ್ತ ಕಂಡಿದೆ. ಚಿತ್ರತಂಡಕ್ಕೆ ಪುನೀತ್‌ ರಾಜಕುಮಾರ್‌ ಶುಭ ಹಾರೈಸಿದ್ದಾರೆ. ಈ ಸಂದರ್ಭದಲ್ಲಿ ಚೇತನ್‌ ಜೊತೆ ಅಪ್ಪು ಮಾತುಕತೆ ಜೋರಾಗಿಯೇ ನಡೆದಿದೆ. ಒಂದಷ್ಟು ಹೊಸ ಮಾರ್ಗದರ್ಶನ ಕೊಟ್ಟ ಪುನೀತ್,‌ ಚೇತನ್‌ ಹಾಗೂ ಇತರೆ ಕನ್ನಡ ನಟರ ಜೊತೆ ಅಪ್ತ ಮಾತುಕತೆ ನಡೆಸಿದರು. ಅಂದಿನ ಫೋಟೋ ಮಾತುಕತೆ…

error: Content is protected !!