ನಿರ್ದೇಶಕ ಮನು ಕಲ್ಯಾಡಿ ಈಗ ಹೀರೋ‌ !

ಅವರದೇ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿದೆ ಹೊಸ‌ ಸಿನಿಮಾ

ಪ್ರಾರಂಭ‌‌ ಚಿತ್ರದ ನಿರ್ದೇಶಕ ಮನು‌ಕಲ್ಯಾಡಿ‌ ಅವರಿಗೆ ಇಂದು ಹುಟ್ಟು ಸಂಭ್ರಮ.‌‌ಪ್ರಾರಂಭ ಚಿತ್ರ ತಂಡವು ರಾತ್ರಿಯೇ ಕೇಕ್ ಕತ್ತರಿಸಿ, ಸಿಹಿ‌ಹಂಚುವ ಮೂಲಕ ಮನು‌ ಕಲ್ಯಾಡಿ ಅವರ ಹುಟ್ಟು ‌ಹಬ್ಬವನ್ನು‌ಅಚರಿಸಿತು.‌ಇದೇ‌ವೇಳೆ ನಿರ್ದೇಶಕ ಮನು ಕಲ್ಯಾಡಿ‌ ಅವರಿಗೆ ಸಹೋದರ ಜಗದೀಶ್ ಕಲ್ಯಾಡಿ ವಿಶೇಷವಾದ ಗಿಫ್ಟ್ ಕೊಟ್ಟರು. ಮನು‌ಕಲ್ಯಾಡಿ‌ ಅವರನ್ನೆ ಹೀರೋ ಆಗಿಸಿಕೊಂಡು ಹೊಸ ದೊಂದು‌ಸಿನಿಮಾ‌ ಮಾಡುವುದಾಗಿ‌ ಘೋಷಿಸಿದರು.

ಮನು ಕಲ್ಯಾಡಿ‌ ನಿರ್ದೇಶನದ’  ಪ್ರಾರಂಭ‌ ‘ಚಿತ್ರವು ಹೊರಬರುತ್ತಿದ್ದಂತೆ‌ ಮನುಕಲ್ಯಾಡಿ‌ ಆ‌ವರನ್ನು‌ ಹೀರೋ ಆಗಿ‌ಬೆಳ್ಳಿತೆರೆಗೆ ಪರಿಚಯಿಸುವುದಾಗಿ‌ಜಗದೀಶ್ ಕಲ್ಯಾಡಿ‌  ಭರವಸೆ ನೀಡಿದರು.‌ ಅಂದ‌ಹಾಗೆ‌ ಈ‌ಚಿತ್ರಕ್ಕೆ‌ಈಗಾಗಲೇ‌‌ನಿರ್ದೇಶಕರು‌ಫಿಕ್ಸ್ ಆಗಿದ್ದಾರೆ. ಸಾಯಿ‌ಕಿಶೋರ್ ತಲ್ಲ ಆ್ಯಕ್ಚನ್ ಹೇಳಲು‌ ರೆಡಿ ಆಗಿದ್ದಾರೆ. ಸ್ಕ್ರಿಪ್ಟ್ ‌ವರ್ಕ್ ಕೂಡ‌ಮುಗಿದಿದೆ.‌ ನಾಯಕಿ‌ಸೇರಿದಂತೆ‌ಉಳಿದ‌ಕಲಾವಿದರ‌ಆಯ್ಕೆ ಬಾಕಿಯಿದೆ.ಅಕ್ಟೋಬರ್ ‌ತಿಂಗಳಲ್ಲಿ‌ಈ‌ಚಿತ್ರ‌ಸೆಟ್ಟೇರುವುದು‌‌ ಗ್ಯಾರಂಟಿ ಯಂತೆ.‌

ಇನ್ನು‌ಎಲ್ಲವೂ‌ಅಂದುಕೊಂಡಂತೆಯೇ ಆಗಿದ್ದರೆ‌ಜಗದೀಶ್ ಕಲ್ಯಾಡಿ‌ನಿರ್ಮಾಣ‌ಹಾಗೂ‌ ಮನು‌ಕಲ್ಯಾಡಿ‌‌ ನಿರ್ದೇಶನದ ಪ್ರಾರಂಭ‌ಚಿತ್ರ ರಿಲೀಸ್‌ಆಗಬೇಕಿತ್ತು.‌ ಆದರೆ‌ಕೊರೋನಾ‌ ಕಾರಣ‌ಎಲ್ಲವೂ‌‌ ಏರುಪೇರಾಯಿತು.‌ಈಗ‌ ಕೊರೋನಾ‌‌ ಭೀತಿ‌ ಒಂದಷ್ಟು ತಿಳಿಯಾಗುತ್ತಿದೆ.‌ ನಿರ್ಮಾಪಕ‌ ಜಗದೀಶ್  ಕಲ್ಯಾಡಿ  ಪ್ರಾರಂಭ ರಿಲೀಸ್ ಗೆ‌ಸಿದ್ದತೆ‌‌ನಡೆಸಿದ್ದಾರೆ.‌ಅದು ತೆರೆಗೆ‌ ಬರುತ್ತಿದ್ದಂತೆ ಮನು‌ಕಲ್ಯಾಡಿ‌ ಅಭಿನಯದ ಚೊಚ್ಚಲ ಚಿತ್ರ ಸೆಟ್ಟೇರಲಿದೆ‌‌  ಎನ್ನುವುದು  ತಂಡದ ಅಧಿಕೃತ ಮಾಹಿತಿ.

Related Posts

error: Content is protected !!