Categories
ಸಿನಿ ಸುದ್ದಿ

ಬಿಗ್ ಬಾಸ್ ಬೆಡಗಿಯ ಆನ್ ಲೈನ್ ಎಂಗೇಜ್ ಮೆಂಟ್ ; ಅಂದು ದೊಡ್ಮನೆಯಲ್ಲಿಈ ನಟಿ ಕಿಚ್ಚನಿಗೆ ಕೇಳಿದ್ದೇನು ಗೊತ್ತಾ ?

ಇದು ಕಲಿಯುಗ ಮಾತ್ರವಲ್ಲ ಸೋಷಿಯಲ್ ಯುಗ. ಕೊರೊನಾ ಬಂದ್ಮೇಲಂತೂ ಸಾಮಾಜಿಕ ಜಾಲತಾಣಕ್ಕೆ ಸಿಕ್ಕಾಪಟ್ಟೆ ಬೇಡಿಕೆ ಇದೆ. ಎಲ್ಲವೂ ಆನ್ ಲೈನ್ ಮಯವಾಗುತ್ತಿದೆ. ಇಂತಹ ಹೊತ್ತಲ್ಲಿ ಬಿಗ್ ಬಾಸ್ ಬೆಡಗಿ ಆನ್ ಲೈನ್ ನಲ್ಲೇ ಎಂಗೇಜ್ಮೆಂಟ್ ಮಾಡಿಕೊಂಡು ಸುದ್ದಿಯಾಗಿದ್ದಾರೆ.

ಬಿಗ್ ಬಾಸ್ ಅತೀ ದೊಡ್ಡ ರಿಯಾಲಿಟಿ ಶೋ. ಕಲರ್ಸ್ ಸಂಸ್ಥೆಯ ಹೆಮ್ಮೆಯ ಕಾರ್ಯಕ್ರಮ. ದೊಡ್ಮನೆಯ ಲ್ಲಿ ನಡೆಯುವ ಈ ಜಬರ್ದಸ್ತ್ ಪ್ರೋಗ್ರಾಂಗೆ ಹಾಗೂ ಕಿಚ್ಚನ ವೀಕೆಂಡ್ ಮಾತಿಗೆ ಮತ್ತು ಮಸ್ತಿಗೆ ವೀಕ್ಷಕರು ಕಣ್ಣರಳಿಸಿ ಕಾಯ್ತಾರೆ. ಇಂತಿಪ್ಪ ಈ ಬಿಗ್ ಹೌಸ್ ಶೋ ಎಂಟು ಸೀಸನ್ ಗಳನ್ನ ಯಶಸ್ವಿಯಾಗಿ ಮುಗಿಸಿದೆ. ಒಂಭತ್ತನೇ ಸೀಸನ್ ಗಾಗಿ ಕಿರುತೆರೆ ವೀಕ್ಷಕರು ಎದುರುನೋಡ್ತಿದ್ದಾರೆ.‌ ಈ ಮಧ್ಯೆ ಬಿಗ್ ಬಾಸ್ ಸೀಸನ್ 8ರ ಸ್ಪರ್ಧಿ ವೈಜಯಂತಿ ಅಡಿಗ ಆನ್ ಲೈನ್ ನಲ್ಲೇ ಎಂಗೇಜ್ ಆಗಿ ಸಪ್ರೈಸ್ ಕೊಟ್ಟಿದ್ದಾರೆ.

ವೈಜಯಂತಿ ಅಡಿಗ ಕೆಲವೇ ಕೆಲವು ದಿನಗಳ ಕಾಲ ಬಿಗ್ ಬಾಸ್ ನಲ್ಲಿದ್ದಂತವರು. ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ದೊಡ್ಮನೆ ಪ್ರವೇಶಿಸಿದ ವೈಜಯಂತಿ, ಅರಮನೆಯಂತಿರುವ ಸೆರೆಮನೆಯಲ್ಲಿ ನನ್ನ ಕೈಲಿ ಇರೋದಕ್ಕೆ ಆಗಲ್ಲ ಅಂತ ಕಣ್ಣೀರಿಟ್ಟಿದ್ದರು. ದಿನಪ್ರತಿಕಣ್ಮಣಿ ಕ್ಯಾಮರಾ ಮುಂದೆ ನಿಂತು ನನ್ನ ಕಳುಹಿಸಿಕೊಡಿ ನನಗೆ ಬಿಗ್ ಬಾಸ್ ಮನೆಯಲ್ಲಿ ಇರೋದಕ್ಕೆ ಆಗ್ತಿಲ್ಲ‌ ಅಂತ ಬೇಡಿಕೊಳ್ತಿದ್ದರು. ಹೀಗಾಗಿ, ಕಿಚ್ಚ ವೈಜಯಂತಿಯವರಿಗೆ ಬಿಗ್ ಬಾಸ್ ಮಹತ್ವ ತಿಳಿಸಿಕೊಟ್ಟು ಬಿಳ್ಕೊಟ್ಟರು. ಇದರಿಂದ ಬ್ರೋಗೌಡ ಶಮಂತ್ ಸೇಫ್ ಆದರು. ಫೈನಲ್ಸ್ ವರೆಗೂ ಟಕ್ಕರ್ ಕೊಟ್ಟರು ಇದೆಲ್ಲ‌ ನಿಮಗೆ ಗೊತ್ತಿದೆ.

ಅಂದು ಬಿಗ್ ಬಾಸ್ ಮನೆಯಿಂದ ಹೊರಬಂದು ಸುದ್ದಿಯಾಗಿದ್ದ ವೈಜಯಂತಿಯವರು ಇಂದು ಆನ್ ಲೈನ್‌ನಲ್ಲೇ ಪ್ರಿಯಕರನ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡು ಸದ್ದು ಮಾಡುತ್ತಿದ್ದಾರೆ. ವೈಜಯಂತಿ ಪ್ರೀತ್ಸಿರುವ ಹುಡುಗ ಸೂರಜ್ ಫಾರಿನ್ ನಲ್ಲಿ ಸೆಟಲ್ ಆಗಿದ್ದಾರೆ. ಕೊರೊನಾ ಆವಾಂತರದಿಂದ ಕರ್ನಾಟಕಕ್ಕೆ ಬರಲಾಗುತ್ತಿಲ್ಲ. ಹೀಗಾಗಿ, ಆನ್ ಲೈನ್ ನಲ್ಲಿ ಲೈವ್ ಬಂದು ನಟಿ ಹಾಗೂ ಬಿಗ್ ಬಾಸ್ ಸ್ಪರ್ಧಿ ಜೊತೆ ಸೂರಜ್ ಎಂಗೇಜ್ ಆಗಿದ್ದಾರೆ. ವೈಜಯಂತಿ ಕುಟುಂಬಸ್ಥರ ಸಮ್ಮುಖದಲ್ಲಿ ನಿಶ್ಚಿತಾರ್ಥ ನೆರವೇರಿದೆ. ಈ ಸುಂದರ ಕ್ಷಣಗಳನ್ನ ಫೋಟೋದಲ್ಲಿ ಸೆರೆಹಿಡಿದು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ನಟಿ ವೈಜಯಂತಿ ಅಡಿಗ ಹಂಚಿಕೊಂಡಿದ್ದಾರೆ.

ನಟಿ ವೈಜಯಂತಿ ಅಡಿಗ ಖ್ಯಾತ ಹೋಟೆಲ್ ಉದ್ಯಮಿ ವಾಸುದೇವ ಅಡಿಗ ಅವರ ಮಗಳು. ಅಮ್ಮಚ್ಚಿಯೆಂಬ ನೆನಪು ಸಿನಿಮಾದಲ್ಲಿ ವೈಜಯಂತಿ ಅಭಿನಯಿಸಿದ್ದಾರೆ. ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಅನುಭವ ಪಡೆದುಕೊಂಡರು. ಈಗ ಬ್ಯಾಚುಲರ್ ಲೈಫ್ ಗೆ ಗುಡ್ ಬೈ ಹೇಳುವ ತವಕದಲ್ಲಿದ್ದಾರೆ. ಪ್ರಿಯಕರ ಸೂರಜ್ ಜೊತೆ ವೈಜಯಂತಿ ದಾಂಪತ್ಯ ಜೀವನಕ್ಕೆ‌ ಕಾಲಿರಿಸಲಿದ್ದಾರೆ. ಸದ್ಯಕ್ಕೆ ಎಂಗೇಜ್ ಆಗಿದ್ದಾರೆ, ಶೀಘ್ರದಲ್ಲೇ ಮದುವೆಯ ಅಪ್ ಡೇಟ್ ನೀಡ್ತಾರೆ.

  • ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಉಪೇಂದ್ರ ಅಂದ್ರೆ ಬರೀ ಸೂಪರ್ ಸ್ಟಾರ್ ಅಲ್ಲ… ಆರ್. ಚಂದ್ರು ಬಿಚ್ಚಿಟ್ಟರು ಉಪೇಂದ್ರ ಅವರ ಇನ್ನೊಂದು ಮುಖ !

ನಟ, ನಿರ್ದೇಶಕ, ಸಂಭಾಷಣೆಕಾರ, ಗೀತ ರಚನೆಕಾರ ಹಾಗೂ ನಿರ್ಮಾಪಕರು ಆದ ಉಪೇಂದ್ರ ಅವರಿಗೆ ಇಂದು ಹುಟ್ಟು ಹಬ್ಬ. ಅವರಿಗೆ ನಾನಾ ನಾಮಶೇಷಣಗಳಿವೆ. ಅವೆಲ್ಲಕ್ಕಿಂದ ಮುಖ್ಯವಾಗಿ ಅವರೊಬ್ಬ ಪ್ರಾಮಾಣಿಕ, ಒಳ್ಳೆಯರು ಎನ್ನುವುದು ನಿರ್ದೇಶಕ ಚಂದ್ರು ಅವರ ಬಣ್ಣನೆ. ಅದು ಹೇಗೆ? ಯಾಕೆ? ಆ ಬಗ್ಗೆ ಆರ್. ಚಂದ್ರು ಹೇಳಿದ್ದೇನು ಎನ್ನುವ ಸ್ಟೋರಿ ಇಲ್ಲಿದೆ ನೋಡಿ….

ಎಲ್ಲರೂ ನಿಮ್ಮನ್ನು ಬುದ್ಧಿವಂತ ಅಂತಾರೆ, ಅದ್ಭುತ ನಿರ್ದೇಶಕ ಅಂತಾರೆ, ರಿಯಲ್ ಸ್ಟಾರ್, ಸೂಪರ್ ಸ್ಟಾರ್ ಅಂತ ಎಲ್ಲ ಹೇಳುತ್ತಾರೆ, ಅದೆಲ್ಲವೂ ಸತ್ಯ. ಆದರೆ ಅದೆಲ್ಲಕ್ಕೂ ಮಿಗಿಲಾಗಿ ನೀವು ಪ್ರಾಮಾಣಿಕರು ಮತ್ತು ಒಳ್ಳೆಯ ಮನುಷ್ಯ….
ನಟ, ನಿರ್ದೇಶಕ ಉಪೇಂದ್ರ ಅವರ ಹುಟ್ಟು ಹಬ್ಬದ ಸಂದರ್ಭದಲ್ಲಿ ಉಪ್ಪಿ ಅವರ ಅಂತರ್ಯದ ಇನ್ನೊಂದು ವ್ಯಕ್ತಿತ್ವವನ್ನು ಹೀಗೆ ಬಿಚ್ಚಿಟ್ಟವರು ‘ಕಬ್ಜ ‘ ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕ ಆರ್. ಚಂದ್ರು. ಅದು ಅವರಿಗೆ ಗೊತ್ತಾಗಿದ್ದು ಉಪೇಂದ್ರ ಅವರೊಂದಿಗಿದ್ದ ಆತ್ಮೀಯ ಒಡನಾಟ. ಅದಕ್ಕೆ ಸಾಕ್ಷಿ ʼಬ್ರಹ್ಮʼ, ʼಐ ಲವ್ ಯೂʼ ಜತೆಗೀಗ’ ಕಬ್ಜ’ ಚಿತ್ರ. ಕನ್ನಡದ ಚಿತ್ರರಂಗದ ಮಟ್ಟಿಗೆ ಆರ್. ಚಂದ್ರು ಒಬ್ಬ ಸಾಹಸಿ ನಿರ್ದೇಶಕ ಕಮ್ ನಿರ್ಮಾಪಕ. ಕಡು ಕಷ್ಟದಲ್ಲಿಯೇ ಸಿನಿಮಾ ಬದುಕನ್ನು ಅಪ್ಪಿ, ಒಪ್ಪಿ ತಲೆಗೆ ನಿರ್ದೇಶಕನ ಹ್ಯಾಟ್ ತೊಟ್ಟು ಗೆದ್ದು ಅಪರೂಪದ ವ್ಯಕ್ತಿ. ಅವರ ಸಾಹಸದ ಸ್ವಭಾವದಿಂದಲೇ ಅವರೀಗ ನಿರ್ಮಾಪಕರೂ‌ ಆಗಿದ್ದಾರೆನ್ನುವುದು ಎಲ್ಲರಿಗೂ ಗೊತ್ತು. ಅದರ ದೊಡ್ಡ ಸಾಹಸವೇ ಈಗ ‘ ಕಬ್ಜ’ ಚಿತ್ರ.

ಕನ್ನಡದ ಮಟ್ಟಿಗೀಗ ಬಹು ನಿರೀಕ್ಷಿತ ಸಿನಿಮಾವೇ ಆಗಿರುವ ʼಕಬ್ಜʼ ಚಿತ್ರವು ಆರ್. ಚಂದ್ರು ಹಾಗೂ ನಟ ಉಪೇಂದ್ರ ಜೋಡಿಯ ಮೂರನೇ ಸಿನಿಮಾ. ಹಾಗೆ ನೋಡಿದರೆ ಅವರ ಹಿಂದಿನ ಅವೆರೆಡು ಸಿನಿಮಾಗಳಿಗೆ ಹೋಲಿಸಿದರೆ ಈ ಸಿನಿಮಾ ಹಲವು ಕಾರಣಕ್ಕೆ ವಿಶೇಷ ಹೊಂದಿರುವ ಸಿನಿಮಾ. ಬಿಗ್‌ ಬಜೆಟ್‌ ಸಿನಿಮಾ ಮಾತ್ರವಲ್ಲ ಚಂದ್ರು ಸಿನಿಮಾ ಕೆರಿಯರ್‌ ನಲ್ಲಿ ಮೊದಲ ಬಾರಿಗೆ ಪ್ಯಾನ್‌ ಇಂಡಿಯಾ ಎನ್ನುವ ಹೆಗ್ಗಳಿಕೆ ಕೂಡ ಅದಕ್ಕಿದೆ. ಹಾಗೆಯೇ ಅದರ ಕಥೆಯ ಜತೆಗೆ ಕಲರ್‌, ಸೆಟ್‌, ಟಿಂಟ್‌ ಜತೆಗೆ ಹಲವು ವೈಶಿಷ್ಟ್ಯಗಳು ಇಲ್ಲಿವೆ. ಅದೇ ಕಾರಣಕ್ಕೆ ಈ ಸಿನಿಮಾ ಶುರುವಾಗಿ ಫಸ್ಟ್‌ ಲುಕ್‌ ರಿವೀಲ್‌ ಆದಾಗಿನಿಂದಲೂ ಸಾಕಷ್ಟು ಕುತೂಹಲ ಮೂಡಿಸಿದೆ. ಅದೇ ಕಾರಣಕ್ಕೆ ಉಪೇಂದ್ರ ಅವರ ಹುಟ್ಟುಹಬ್ಬಕ್ಕೆ ಕಬ್ಜದ ವಿಶೇಷ ಏನು ಅಭಿಮಾನಿಗಳಿಗೆ ನಿರೀಕ್ಷೆಗೆ ಈಗ ಉತ್ತರ ಸಿಕ್ಕಿದೆ.

ಆರ್.‌ ಚಂದ್ರು ಅವರು ಶುಕ್ರವಾರ ಅನೌನ್ಸ್‌ ಮಾಡಿದ್ದ ಹಾಗೆ, ಶನಿವಾರ ಬೆಳಗ್ಗೆಯೇ ಉಪ್ಪಿ ಬರ್ತ್‌ ಡೇ ಗಿಫ್ಟ್‌ ಆಗಿ ಕಬ್ಜ ಚಿತ್ರದ ಸ್ಪೆಷಲ್‌ ಮೋಷನ್‌ ಪೋಸ್ಟರ್‌ ರಿವೀಲ್‌ ಮಾಡಿದ್ದಾರೆ. ಅವರೇ ಹೇಳಿದ್ದ ಹಾಗೆಯೇ ಈ ಪೋಸ್ಟರ್‌ ನಲ್ಲಿ ಕಬ್ಜ ಚಿತ್ರದ ಸೆಟ್‌, ಕಲರ್‌, ಟಿಂಟ್‌ ಎಲ್ಲವನ್ನು ತೋರಿಸುವ ಹಾಗೆ ಪೋಸ್ಟರ್‌ ಡಿಸೈನ್‌ ಮಾಡಿಸಿ, ಸೋಷಲ್‌ ಮೀಡಿಯಾ ಮೂಲಕ ಲಾಂಚ್‌ ಮಾಡಿದ್ದಾರೆ. ಎರಡು ಭಾಷೆಗಳಲ್ಲಿ ಈ ಪೋಸ್ಟರ್‌ ಔಟ್‌ ಆಗಿದೆ. ಆ ಮೂಲಕ ಉಪೇಂದ್ರ ಅವರಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದ್ದಾರೆ. ಅದರ ಜತೆಗೆ ಕಜ್ಬ ಚಿತ್ರದ ಬಹುನಿರೀಕ್ಷಿತ ಟೀಸರ್‌ ರಿಲೀಸ್‌ ಡೇಟ್‌ ಅನ್ನು ರಿವೀಲ್‌ ಮಾಡಿದ್ದಾರೆ. ದೀಪಾವಳಿಗೆ ಕಬ್ಜ ಚಿತ್ರದ ಮೋಸ್ಟ್‌ ಎಕ್ಸ್‌ಪೆಕ್ಟೆಡ್‌ ಟೀಸರ್‌ ಲಾಂಚ್‌ ಆಗುತ್ತಿದೆ. ಮೋಷನ್‌ ಪೋಸ್ಟರ್‌ ಲಾಂಚ್‌ ಜತೆಗೆ ಟೀಸರ್‌ ಲಾಂಚ್‌ ಡೇಟ್‌ ಅನ್ನು ಸೋಷಲ್‌ ಮೀಡಿಯಾದಲ್ಲಿ ಅನೌನ್ಸ್‌ ಮಾಡುವ ಸಂದರ್ಭದಲ್ಲಿ ನಿರ್ದೇಶಕ ಚಂದ್ರು ಅವರು ತಾವು ಹತ್ತಿರದಿಂದ ಕಂಡ ಉಪೇಂದ್ರ ಅವರ ವ್ಯಕ್ತಿತ್ವದ ಇನ್ನೊಂದು ಮುಖವನ್ನು ಇಲ್ಲಿ ಬಿಚ್ಚಿಟ್ಟಿರುವುದು ವಿಶೇಷ.

ಎಲ್ಲರೂ ನಿಮ್ಮನ್ನು ಬುದ್ಧಿವಂತ ಅಂತಾರೆ, ಅದ್ಭುತ ನಿರ್ದೇಶಕ ಅಂತಾರೆ, ರಿಯಲ್ ಸ್ಟಾರ್, ಸೂಪರ್ ಸ್ಟಾರ್ ಅಂತ ಎಲ್ಲ ಹೇಳುತ್ತಾರೆ, ಅದೆಲ್ಲವೂ ಸತ್ಯ. ಆದರೆ ಅದೆಲ್ಲಕ್ಕೂ ಮಿಗಿಲಾಗಿ ನೀವು ಪ್ರಾಮಾಣಿಕರು ಮತ್ತು ಒಳ್ಳೆಯ ಮನುಷ್ಯ… ಅಂತ ಚಂದ್ರು ಅವರು ಉಪೇಂದ್ರ ಅವರನ್ನು ಬಣ್ಣಿಸಿದ್ದಾರೆ. ಚಂದ್ರು ಕಂಡಂತೆ ಉಪೇಂದ್ರ ಅವರ ನಿಜವಾದ ವ್ಯಕ್ರಿತ್ವ ಇರೋದೇ ಹಾಗೆ. ಉಪೇಂದ್ರ ಅಂದ್ರೆ ಬುದ್ದಿವಂತ, ಸೂಪರ್‌ ಸ್ಟಾರ್‌, ರಿಯಲ್‌ ಸ್ಟಾರ್‌, ಫಿಲ್ಟರ್‌ ಲೆಸ್‌ ಆಕ್ಟರ್‌ ಎನ್ನುವವುದು ಎಷ್ಟು ನಿಜವೋ ಹಾಗೆಯೇ ಪ್ರಾಮಾಣಿಕರು ಹಾಗೂ ಒಳ್ಳೆಯರು ಹೌದು. ಅವರಿಗೆ ಸಿನಿಲಹರಿ ಕಡೆಯಿಂದಲೂ ಹುಟ್ಟು ಹಬ್ಬದ ಶುಭಾಶಯ.

  • ಎಂಟರ್‌ ಟೈನ್‌ ಮೆಂಟ್‌ ಬ್ಯುರೋ ಸಿನಿ ಲಹರಿ
Categories
ಸಿನಿ ಸುದ್ದಿ

ದೇವರ ಮೊರೆ ಹೋದ ನಟಿ ಸಮಂತಾ ; ಪ್ರಶ್ನೆ ಮಾಡಿದವರಿಗೆ ಬುದ್ದಿ ಇದೆಯಾ ಎಂದ ಸ್ಯಾಮ್ ?

ನಟಿ ಸಮಂತಾ ದೇವರ ಮೊರೆ ಹೋಗಿದ್ದಾರೆ. ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಭೇಟಿಕೊಟ್ಟಿದ್ದಾರೆ. ದಾಂಪತ್ಯದಲ್ಲಿ ಕಲಹ, ಅಕ್ಕಿನೇನಿ ಕುಟುಂಬ ತೊರೆದಿದ್ದಾರೆ ಎನ್ನುವ ಅಂತೆ- ಕಂತೆ ಸಮಾಚಾರದ ನಡುವೆ ತಿರುಪತಿ ತಿಮ್ಮಪ್ಪನ ದರ್ಶನ‌ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ

ಸೌತ್ ಸಿನಿಮಾ ಬ್ಯೂಟಿ, ಮಾಯಬಜಾರ್ ನ ಬಹುಬೇಡಿಕೆಯ ನಟಿ ಸಮಂತಾ ಈಗೀಗ ಹೆಚ್ಚು ಸುದ್ದಿಯಾಗುತ್ತಿದ್ದಾರೆ. ಸಮಂತಾ ಅಕ್ಕಿನೇನಿ ಅಂತ ಇದ್ದ ಹೆಸರನ್ನ ಬದಲಿಸಿಕೊಂಡು ಬರೀ ಎಸ್ ಅಂತ ಹಾಕಿಕೊಂಡಿದ್ದೇ ಬಂತು ದಿನಕ್ಕೊಂದು ರೀತಿ ಸುದ್ದಿಗಳು ಸಮಂತಾ ಸುತ್ತ ಹಬ್ಬುತ್ತವೆ. ಅಕ್ಕಿನೇನಿ ಕುಟುಂಬದಿಂದ ದೂರವಾಗಿರಬಹುದು, ನಾಗಚೈತನ್ಯ ಜೊತೆಗಿನ ಸಂಬಂಧಕ್ಕೆ ಎಳ್ಳುನೀರು ಬಿಟ್ಟಿರಬಹುದು ಅಂತೆಲ್ಲಾ ಮಾತನಾಡಿಕೊಳ್ತಿದ್ದಾರೆ. ಆದರೆ, ಗಾಸಿಪ್ ಟೋಪಿ ಹಾಕಿಕೊಂಡು ಕುಣಿಯುತ್ತಿರುವ ಯಾವ ಸುದ್ದಿಗೂ ಸಮಂತಾ ಆಗಲೀ, ಅಕ್ಕಿನೇನಿ ಕುಟುಂಬಸ್ಥರಾಗಲಿ ಕ್ಲ್ಯಾರಿಟಿ ಕೊಡ್ತಿಲ್ಲ.

ಸಮಂತಾ- ನಾಗಚೈತನ್ಯ ಮಾಧರಿ ಜೋಡಿಯಾಗಬೇಕಿದ್ದವರು. ಲವ್ ಲೈಫ್ ಲೀಡ್ ಮಾಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟವರು. ಇದ್ದರೆ ಇವ್ರಂತ ಜೋಡಿ ಇರಬೇಕು ಅಂತ ಸ್ಯಾಮ್ ಹಾಗೂ ಚೈ ಫ್ಯಾನ್ಸ್ ಗರ್ವದಿಂದ ಹೇಳಿಕೊಂಡಿದ್ದುಂಟು. ರೀಲ್ ನಲ್ಲಿ ಸೈ ಎನಿಸಿಕೊಂಡಿದ್ದ ತಾರಾಜೋಡಿ ರಿಯಲ್ ಲೈಫ್ ನಲ್ಲೂ ಜೈಕಾರ ಹಾಕಿಸಿಕೊಂಡಿದ್ದು ಸತ್ಯ. ಆದರೆ, ಏಕಾಏಕಿ ಮನಂ ಕಪಲ್ಸ್ ಮಧ್ಯೆ ಏನಾಯ್ತು? ಏಕಾಏಕಿ ಎಸ್ ಅಂತ ಸಮಂತಾ ಹೆಸರು ಬದಲಾಯಿಸಿಕೊಳ್ಳೋಕೆ ಕಾರಣ ಏನು? ಇದ್ಯಾವುದಕ್ಕೂ ಸದ್ಯಕ್ಕೆ ಉತ್ತರ ಇಲ್ಲ.

ನಿಜಕ್ಕೂ, ಮಜಿಲಿ ಸಂಸಾರದಲ್ಲಿ ಬಿರುಗಾಳಿ ಎದ್ದಿದೆಯಾ? ಮಹಾನಟಿಯ ಸುಂದರ ದಾಂಪತ್ಯದಲ್ಲಿ ಬಿರುಕು ಮೂಡಿದೆಯಾ? ಕೋಲಾಹಲ ಸೃಷ್ಟಿಯಾಗಿದೆಯಾ? ಒಂದ್ವೇಳೆ ಅಕ್ಕಿನೇನಿ ಕುಟುಂಬದಿಂದ ಬೇರಾಗುವ ಸಂದರ್ಭ- ಸನ್ನಿವೇಶ ಸೃಷ್ಟಿಯಾಗಿದ್ರೆ ಮಾವ ನಾಗಾರ್ಜುನ್‌ ಅವರ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸುತ್ತಿರಲಿಲ್ಲ ಅನ್ಸುತ್ತೆ, ನಾಗಚೈತನ್ಯ ಲವ್ ಸ್ಟೋರಿಗೆ ವಿಶ್ ಮಾಡ್ತಿರಲಿಲ್ಲ. ಆದರೆ, ಸಮಂತಾ ಈ ಎರಡು ಮಾಡಿದ್ದಾರೆ. ಹೀಗಾಗಿ, ಅಕ್ಕಿನೇನಿ ಕುಟುಂಬಕ್ಕೆ ಗುಡ್ ಬೈ ಹೇಳ್ತಾರೆ ಎನ್ನುವುದು ಡೌಟು. ಗುಡ್ ಬೈ ಹೇಳದಿರಲಿ, ಮನಂ ಫ್ಯಾಮಿಲಿಯ ಜೊತೆಗೆ ಮನಸಾರೆ ಜೀವಿಸಲಿ ಎನ್ನುವುದೇ ಎಲ್ಲರ ಆಶಯ.

ಅಂದ್ಹಾಗೇ, ಅಂತೆ- ಕಂತೆ ಸಮಾಚಾರ ಧಗಧಗಿಸುತ್ತಿರುವ ಹೊತ್ತಲ್ಲಿ
ನಟಿ ಸಮಂತಾ ದೇವರ ಮೊರೆ ಹೋಗಿದ್ದಾರೆ. ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಭೇಟಿಕೊಟ್ಟಿದ್ದಾರೆ. ಈ ಹೊತ್ತಲ್ಲಿ ಸಮಂತಾಗೆ ಮಾಧ್ಯಮದವರು ಪ್ರಶ್ನೆ ಮಾಡಿದ್ದಾರೆ.‌ ದೇವಸ್ಥಾನಕ್ಕೆ ಬಂದಾಗ ಪ್ರಶ್ನೆ ಮಾಡಿದ್ದಕ್ಕೆ ಸ್ಯಾಮ್ ಗರಂ ಆಗಿದ್ದಾರೆ. ಬುದ್ದಿ ಇದೆಯಾ ಇಲ್ಲವಾ ಹೇಳಿಬಿಡಿ ಎನ್ನುತ್ತಲೇ ದೇವಸ್ತಾನದ ಒಳಗೆ ಎಂಟ್ರಿಕೊಟ್ಟಿದ್ದಾರೆ. ಸಾಮಾಜಿಕ ಲೋಕದಲ್ಲಿರುವವರಿಗೆ ಹೋದಲ್ಲಿ ಬಂದಲ್ಲಿ ಪ್ರಶ್ನೆಗಳು ಎದುರಾಗುವುದು ಸಹಜ. ಆದರೆ, ನೆಮ್ಮದಿ ಅರಸಿ ದೇಗುಲಕ್ಕೆ ಹೋದಾಗ ವೈಯಕ್ತಿಕವಾಗಿ ಕೆದಕಿ ಕೊಶ್ಚನ್ ಮಾಡಿದಾಗ ಬೇಸರವಾಗೋದು ಸಹಜ.‌ ಆ ಬೇಸರವನ್ನ ಕ್ಯಾಮೆರಾ ಮುಂದೆಯೇ ವ್ಯಕ್ತಪಡಿಸಿದ್ದಾರೆ. ಆದಷ್ಟು ಬೇಗ ಮಹಾನಟಿಯ ಬೇಸರ ದೂರಾಗಲಿ, ವೈಯಕ್ತಿಕ ಬದುಕಲ್ಲಿ ಏನಾದರೂ ಏರುಪೇರಾಗಿದ್ದಲ್ಲಿ ತಿರುಪತಿ ತಿಮ್ಮಪ್ಪ‌ ಅದನ್ನೆಲ್ಲ ಸರಿಪಡಿಸಲಿ. ಮನಂ ಜೋಡಿ ನೂರು ಕಾಲ ಒಂದಾಗಿ ಬಾಳಲಿ ಅಲ್ಲವೇ.

  • ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ
Categories
ಸಿನಿ ಸುದ್ದಿ

ನಟಿ ಶ್ರುತಿ ಹುಟ್ಟು ಹಬ್ಬಕ್ಕೆ ಭಜರಂಗಿ-2 ಟೀಮ್ ಸ್ಪೆಷಲ್ ಗಿಫ್ಟ್ !

32 ವರ್ಷಗಳ ಸಿನಿಜರ್ನಿಯಲ್ಲಿ ಇದೇ ಮೊದಲ ಭಾರಿಗೆ ಹಿಂದೆಂದೂ‌ ಎತ್ತಿರದ ಅವತಾರ ಎತ್ತಿದ್ದಾರೆ. ಬಹುನಿರೀಕ್ಷೆಯ ಭಜರಂಗಿ 2 ಚಿತ್ರದಲ್ಲಿ ಖಡಕ್ಕಾಗಿ ಕಾಣಿಸಿಕೊಂಡಿದ್ದಾರೆ. ಕೈಯಲ್ಲಿ ಸಿಗಾರ್ ಹಿಡಿದು
ಲುಕ್ ಕೊಟ್ಟಿರುವ ಪೋಸ್ಟರ್ ಈಗಾಗಲೇ ರಿಲೀಸ್ ಆಗಿ ಹವಾ ಎಬ್ಬಿಸಿತ್ತು. ಈಗ ಬರ್ತ್ ಡೇ ಗೆ ಬಿಡುಗಡೆಯಾಗಿರುವ ಮಗದೊಂದು ಲುಕ್ ಧಮ್ ಗಿಂತ ಹೆಚ್ಚೇ ಹುಚ್ಚೆಬ್ಬಿಸಿದೆ.

ಚಂದನವನ ಕಂಡ‌ ಚೆಂದದ ಚೆಲುವೆ ನಟಿ ಶ್ರುತಿ ಬರ್ತ್ ಡೇ ಸಂಭ್ರಮದಲ್ಲಿದ್ದಾರೆ. 45 ನೇ ವಸಂತಕ್ಕೆ ಕಾಲಿಟ್ಟಿರುವ ಶ್ರುತಿ, ಕುಟುಂಬದ ಜೊತೆ ತಿರುಪತಿ ತಿಮ್ಮಪ್ಪನ‌ ದರ್ಶನ ಪಡೆದಿದ್ದಾರೆ. ಅಭಿಮಾನಿಗಳು, ಸ್ನೇಹಿತರು,ಹಿತೈಷಿಗಳು ಸೇರಿದಂತೆ ಎಲ್ಲರಿಂದ ನಟಿ ಶ್ರುತಿಗೆ ಶುಭಾಶಯಗಳ ಮಹಾಪೂರ ಹರಿದುಬರ್ತಿದೆ.

32 ವರ್ಷಗಳ ಸಿನಿಜರ್ನಿಯಲ್ಲಿ ಇದೇ ಮೊದಲ ಭಾರಿಗೆ ಹಿಂದೆಂದೂ‌ ಎತ್ತಿರದ ಅವತಾರ ಎತ್ತಿದ್ದಾರೆ. ಬಹುನಿರೀಕ್ಷೆಯ ಭಜರಂಗಿ 2 ಚಿತ್ರದಲ್ಲಿ ಖಡಕ್ಕಾಗಿ ಕಾಣಿಸಿಕೊಂಡಿದ್ದಾರೆ.
ಕೈಯಲ್ಲಿ ಸಿಗಾರ್ ಹಿಡಿದು ಲುಕ್ ಕೊಟ್ಟಿರುವ ಪೋಸ್ಟರ್ ಈಗಾಗಲೇ ರಿಲೀಸ್ ಆಗಿ ಹವಾ ಎಬ್ಬಿಸಿತ್ತು. ಈಗ ಬರ್ತ್ ಡೇ ಗೆ ಬಿಡುಗಡೆಯಾಗಿರುವ ಮಗದೊಂದು ಲುಕ್ ಧಮ್ ಗಿಂತ ಹೆಚ್ಚೇ ಹುಚ್ಚೆಬ್ಬಿಸಿದೆ.

ಶ್ರುತಿಯವರ ಲುಕ್-ಗೆಟಪ್ ಖಡಕ್ ಖಳನಾಯಕಿ ಅನ್ನೋದು ಮೇಲ್ನೋಟಕ್ಕೆ ಗೊತ್ತಾಗುತ್ತೆ. ಕಾಟನ್ ಸೀರೆ,ಹಣೆಗೆ ಚಂದಿರನಂತಹ ಬಿಂದಿ, ಕೈ ಬೆರಳಿಗೆ ಸಿಲ್ವರ್ ಉಂಗುರ, ಕೈ ಖಡಗ ತೊಟ್ಟು ಸುರಳಿ ಕೂದಲ ಬಿಟ್ಟುಕೊಂಡು ಖಡಕ್ಕಾಗಿಯೇ ಪೋಸ್ ಕೊಟ್ಟಿದ್ದಾರೆ.‌ ನಟಿ ಶ್ರುತಿ ಫ್ಯಾನ್ಸ್ ಮಾತ್ರವಲ್ಲ ಚಿತ್ರಪ್ರೇಮಿಗಳೆಲ್ಲ ಕಾತುರರಾಗಿದ್ದಾರೆ.
ಭಜರಂಗಿ ಅಖಾಡಲ್ಲಿ ಹೇಗಿರಲಿದೆ ನಟಿ ಶ್ರುತಿಯ ಅಬ್ಬರ ಆರ್ಭಟ ಜಸ್ಟ್ ವೇಯ್ಟ್ ಅಂಡ್ ವಾಚ್. ಅತೀ ಶೀಘ್ರದಲ್ಲೇ ಭಜರಂಗಿ 2 ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಆಗಲಿದೆ.

Categories
ಸಿನಿ ಸುದ್ದಿ

ಕಡ್ಡಿ ಅಲ್ಲಾಡಿಸಿ ಗೆದ್ದರಾ ಚಡ್ಡಿದೋಸ್ತ್ ; ವರ್ಕೌಟ್ ಆಯ್ತಾ ಸೆವೆನ್ ರಾಜ್ ‘7’ ಸೀಕ್ರೆಟ್‌!?

ಚಿತ್ರ: ಚಡ್ಡಿ ದೋಸ್ತ್‌ ಕಡ್ಡಿ ಅಲ್ಲಾಡಸ್ಬುಟ್ಟ

ನಿರ್ಮಾಪಕ: ಸೆವೆನ್‌ ರಾಜ್‌

ನಿರ್ದೇಶಕ : ಆಸ್ಕರ್‌ ಕೃಷ್ಣ

ತಾರಾಗಣ: ಲೋಕೇಂದ್ರ ಸೂರ್ಯ, ಗೌರಿ ನಾಯರ್‌ ಆಸ್ಕರ್ ಕೃಷ್ಣ, ಸೆವೆನ್‌ ರಾಜ್‌, ಹರ್ಷಿತಾ ಕಲ್ಲಿಂಗಲ್‌‌, ಮಾ.ರಾಕಿನ್ ಇತರರು

ಚಿತ್ರ ವಿಮರ್ಶೆ: ವಿಶಾಲಾಕ್ಷಿ

ಲಾಂಗು- ಮಚ್ಚು ಝಳಪಿಸಲ್ಲ, ಕತ್ತಿ-ಗುರಾಣಿ ಹಿಡಿದು ಬಡಿದಾಡಲ್ಲ ಗುರು ಬರೀ ಕಡ್ಡಿ ಅಲ್ಲಾಡಿಸಿ ಚಿತ್ರಪ್ರೇಮಿಗಳಿಂದ ಜೈಕಾರ ಹಾಕಿಸಿಕೊಳ್ತೀವಿ ಅಂತ ಚಡ್ಡಿದೋಸ್ತ್ ಗಳಿಬ್ಬರು ಡಿಸೈಡ್ ಮಾಡಿದ್ದರು. ಅದರಂತೇ, ಅಖಾಡಕ್ಕೆ ಇಳಿದಿದ್ದಾರೆ. ಕರ್ನಾಟಕದಾದ್ಯಂತ ಅಬ್ಬರ ಆರ್ಭಟ ಶುರುವಾಗಿದೆ. ಚಿತ್ರಮಂದಿರಕ್ಕೆ ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ ಸಿನಿಮಾ ಗ್ರ್ಯಾಂಡ್ ಆಗಿಯೇ ಎಂಟ್ರಿಕೊಟ್ಟಿದೆ. ಹೇಗಿದೆ ಸಿನಿಮಾ? ಚಡ್ಡಿದೋಸ್ತ್ ಚಮಕ್ ಮಾಡಿದ್ರಾ? ಬೆಳ್ಳಿತೆರೆ ಹಾಗೂ ಬಾಕ್ಸ್ ಆಫೀಸ್ ಡಬ್ಬದಲ್ಲಿ ಸೆವೆನ್ ರಾಜ್ ‘7’ ಸಸ್ಪೆನ್ಸ್ ಸೀಕ್ರೇಟ್
ವರ್ಕೌಟ್ ಆಯ್ತಾ? ಗಾಂಧಿನಗರದಲ್ಲಿ ಫಸ್ಟ್ ಡೇ ಫಸ್ಟ್ ಶೋ ರೆಸ್ಪಾನ್ಸ್ ಹೇಗಿತ್ತು? ಅದರ ರಿವ್ಯೂ ಪ್ಲಸ್ ರಿಪೋರ್ಟ್ ಇಲ್ಲಿದೆ ನೋಡಿ

ಕೊರೊನಾ ಕಾರಣದಿಂದ ಕಳೆಗುಂದಿದ್ದ ಚಿತ್ರಮಂದಿರಗಳಿಗೆ ಮದುವಣಗಿತ್ತಿಯ ಕಳೆಬಂದಿದೆ. ಥಿಯೇಟರ್ ಮುಂಭಾಗದಲ್ಲಿ ಕಟೌಟ್ ಗಳು ತಲೆ ಎತ್ತಿವೆ, 50 ಪರ್ಸೆಂಟ್ ಅಕ್ಯೂಪೆನ್ಸಿಯಲ್ಲೂ ಹೌಸ್ ಫುಲ್ ಆಗುವಷ್ಟು ಜನ ಚಿತ್ರಮಂದಿರದ ಕಡೆ ಮುಖಮಾಡ್ತಿದ್ದಾರೆ. ಇದರಿಂದ ಬಿಗ್ ಸ್ಕ್ರೀನ್ ವಿಸಿಲ್ ಹೊಡೆಯುತ್ತಿದೆ, ಬಾಕ್ಸ್ ಆಫೀಸ್ ಹಣ ಬಾಚಿಕೊಳ್ಳೋಕೆ ಎದುರುನೋಡ್ತಿದೆ. ಇಂತಹ ಹೊತ್ತಲ್ಲಿ ಚಡ್ಡಿದೋಸ್ತ್ ಗಳು ಕಣಕ್ಕಿಳಿದಿದ್ದಾರೆ.‌

‘ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ’ ಸಿನಿಮಾ ಕರ್ನಾಟಕದಾದ್ಯಂತ ಅದ್ದೂರಿಯಾಗಿ ತೆರೆಕಂಡಿದೆ. ಸುಮಾರು 50 ಕ್ಕೂ ಹೆಚ್ಚು ಚಿತ್ರಮಂದಿರಗಳಿಗೆ ಲಗ್ಗೆ ಇಟ್ಟಿದೆ. ಗಾಂಧಿನಗರದ ತ್ರಿವೇಣಿ ಮುಖ್ಯ ಚಿತ್ರಮಂದಿರವಾಗಿದ್ದು, ರೆಡ್ ಅಂಡ್ ವೈಟ್ ಕಾಂಬಿನೇಷನ್‌ ನಲ್ಲಿ ಅಲಂಕಾರಗೊಂಡಿತ್ತು. ಚಿತ್ರತಂಡದ ನಿರೀಕ್ಷೆಗೂ‌ ಮೀರಿದ ಜನ ಸೇರಿದ್ದರು. ಸಾಮಾಜಿಕ ಅಂತರ ಕಾಯ್ದುಕೊಂಡೇ ಫಸ್ಟ್ ಡೇ ಫಸ್ಟ್ ಶೋ ಮುಗೀತು. ಸಿನಿಮಾ ನೋಡಿ ಥಿಯೇಟರ್ ನಿಂದ ಹೊರಬಂದ ಫ್ಯಾನ್ಸ್ ಗಡಾರಿ ಗುಂಗಿನಲ್ಲಿದ್ದರು. ಕುಯ್ಯ ಎಲ್ಲಿ ಎನ್ನುತ್ತಾ? ಫ್ಯಾಷನ್ ರಾಜ್ ನ ಹುಡುಕಾಡುತ್ತಿದ್ದರು. ಅಷ್ಟಕ್ಕೂ , ಆ ಫ್ಯಾಷನ್ ರಾಜ್ ಬೇರಾರು ಅಲ್ಲ ನಿರ್ದೇಶಕ ಆಸ್ಕರ್ ಕೃಷ್ಣ. ಆಸ್ಕರ್ ಕೃಷ್ಣ ಅವರ ಸಿನಿಮಾ ಅಭಿರುಚಿ ಹೇಗೆ ಅಂತ ಗೊತ್ತಿದ್ದವರಿಗೆ ಚಡ್ಡಿದೋಸ್ತ್ ಗಳು ಕಡ್ಡಿ ಅಲ್ಲಾಡಿಸೋದು ಹೇಗೆ ಅಂತ ಗೊತ್ತಿತ್ತು.

ಆದರೆ, ನ್ಯೂ ಕಾಮರ್ಸ್ ಗೆ ಆಸ್ಕರ್ ಅಭಿರುಚಿ ಗೊತ್ತಿರಲಿಲ್ಲ. ಕ್ಯಾಚಿ ಟೈಟಲ್ ವೊತ್ತಿದ್ದ, ಕಿಕ್ಕೇರಿಸಿದ್ದ ಚಡ್ಡಿದೋಸ್ತ್ ಮೇಲೆ ಒಂದಿಷ್ಟು ನಿರೀಕ್ಷೆ ಇಟ್ಟುಕೊಂಡೇ ಚಿತ್ರಮಂದಿರ ಪ್ರವೇಶ ಮಾಡಿದರು. ಹಾಗೇ ಎಂಟ್ರಿಕೊಟ್ಟವರಿಗೆ ಫಸ್ಟ್ ಹಾಫ್‌ಕಿಕ್ ಕೊಡಲಿಲ್ಲ. ಚಡ್ಡಿದೋಸ್ತ್ ಅದ್ಯಾವ ಕಡ್ಡಿ ಅಲ್ಲಾಡಿಸುತ್ತಿದ್ದಾರೆನ್ನುವುದಕ್ಕೆ ಕ್ಲ್ಯಾರಿಟಿ ಸಿಗಲಿಲ್ಲ. ಆದರೆ, ಗಡಾರಿ ಪಾತ್ರಧಾರಿ ಲೋಕೇಂದ್ರ ಸೂರ್ಯ ಹುಡ್ಗೀರ್ ಜೊತೆ ಚೇಷ್ಟೆ ಮಾಡಿಕೊಂಡೇ ತುಂಡೈಕ್ಳಿಗೆ ಮಜಾ ಕೊಟ್ಟರು. ಫ್ಯಾಷನ್ ರಾಜ್ ಕ್ಯಾರೆಕ್ಟರ್ ಮಾಡಿದ್ದ ಆಸ್ಕರ್ ಕೃಷ್ಣ ಅವರು ನ್ಯಾಚುರಲ್ ಸ್ಟಾರ್ ಎನಿಸಿಕೊಳ್ಳುವಂತಹ ಆಕ್ಟಿಂಗ್ ಮಾಡ್ತಿದ್ದರು.
ಕೆಲವೇ ಕೆಲವು ಸೀನ್ ಗಳಲ್ಲಿ ಮಿಂಚಿದ ಕುಯ್ಯ ಪಾತ್ರಧಾರಿ ನೋಡುಗರ ಗಮನ ಸೆಳೆಯುತ್ತಾ ಹೋದ. ಪ್ರೇಕ್ಷಕರಿಗೆ ಪಾಪ್ ಕಾರ್ನ್ ಬೇಕಿತ್ತು‌ ಎನಿಸುವಷ್ಟರಲ್ಲಿ ಡಿ.ಸಿ‌ ಮರ್ಡರ್ ಮೂಲಕ ಇಂಟರ್ ವಲ್‌ಬಿಡ್ತು.

ಪಪ್ಸ್- ಜ್ಯೂಸ್ ತಗೊಂಡು ಬಂದು ಮತ್ತದೇ ಸೀಟ್ ಮೇಲೆ ಕುಳಿತವರಿಗೆ ಸೆಕೆಂಡ್ ಆಫ್‌ ಒಂದಿಷ್ಟು ಇಂಟ್ರೆಸ್ಟಿಂಗ್ ಎನಿಸಿಸ್ತು. ಡಿ.ಸಿ‌ ಕೊಲೆ, ಎಂ.ಎಲ್.ಎ ಸುಫಾರಿ, ದೋಸ್ತಿಗಳ ನಡುವೆ ಬರುವ ಹುಡ್ಗಿ, ಹುಡ್ಗೀರ್ ಶೋಕಿಯಿಂದ ಗೆಳೆಯ ಗಡಾರಿನಾ ಆಚೆ ತರಬೇಕು ಅಂತ ಟ್ರೈ ಮಾಡುವ ಫ್ಯಾಷನ್, ಗಡಾರಿಗೆ ದುಡ್ಡು ಕೊಟ್ಟು ಬೆನ್ನ ಹಿಂದೆ ಕತ್ತಿಮಸೆದ ಎಂಎಲ್‌ಎ, ಗಡಾರಿಗೆ ಲಾಠಿ ರುಚಿ, ಫ್ಯಾಷನ್ ಗೆ ದೀಪಾ ಜೊತೆ ಪ್ರೀತಿ, ಮಾತ್ ಎತ್ತಿದರೆ ರಿಯಲ್ ಎಸ್ಟೇಟ್ ಬ್ಯುಸಿನೆಸ್ ಎನ್ನುವ ಗಡಾರಿಗೆ ಹುಡ್ಗೀರ್ ಶೋಕಿಯಿಂದ ಚಡ್ಡಿದೋಸ್ತ್ ಗಳ ಬುಡಕ್ಕೆ ಬರುತ್ತೆ. ಆಗ ದೋಸ್ತಿಗಳಿಬ್ಬರು ಏನ್ಮಾಡ್ತಾರೆ? ಹೊಡೆದಾಡ್ತಾರಾ ಅಥವಾ ಹೋರಾಡ್ತಾರಾ? ನಿಮ್ಮ ಈ ಕೂತೂಹಲದ ಪ್ರಶ್ನೆಗೆ ಉತ್ತರ ಸಿಗಬೇಕು ಅಂದರೆ ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡಬೇಕು.

ಚಡ್ಡಿದೋಸ್ತ್ ಗಳು ಏನೇ ಆಗಲೀ, ಎಂತಹದ್ದೇ ಸಂದರ್ಭ- ಸನ್ನಿವೇಶ ಎದುರಾಗಲಿ ಎದುರಿಸಿ ನಿಲ್ತಾರೆ. ಹಾಗೆಯೇ, ಒಬ್ಬರನ್ನೊಬ್ಬರು ಬಿಟ್ಟುಕೊಡಲ್ಲ. ಅದೇ ರೀತಿ ಚಡ್ಡಿದೋಸ್ತ್ ಗಳು ಕೂಡ. ಅದ್ಹೇಗೆ‌ ಎನ್ನುವದನ್ನ ನೀವು ಥಿಯೇಟರ್ ನಲ್ಲೇ ನೋಡಬೇಕು.‌ ಆಸ್ಕರ್ ಕೃಷ್ಣ ನಿರ್ದೇಶನ ಮಾಡಿ ಫ್ಯಾಷನ್ ರಾಜ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಕಥೆ- ಚಿತ್ರಕಥೆ- ಸಂಭಾಷಣೆ ಬರೆದಿರುವ ಲೋಕೇಂದ್ರ ಸೂರ್ಯ ಗಡಾರಿ ಪಾತ್ರದ ಮೂಲಕ‌ ಕಿಕ್ಕೇರಿಸಿದ್ದಾರೆ. ಚಡ್ಡಿದೋಸ್ತ್ ಗಳಿಗೆ ಬಂಡವಾಳ‌ ಹೂಡಿರುವ ನಿರ್ಮಾಪಕ ಸೆವೆನ್ ರಾಜ್ ಖಳನಾಯಕನಾಗಿ ಮಿಂಚಿದ್ದಾರೆ. ಮನುಷ್ಯನಾಗಿ‌ ಹುಟ್ಟಿದ್ಮೇಲೆ ತಿಂದು ಸಾಯಬೇಕು, ಇಲ್ಲ ಕುಡಿದು ಸಾಯಬೇಕು‌ ಅಂತ ಐಟಂ ಹಾಡಿನಲ್ಲಿ ಹರ್ಷಿತಾ ಕಲ್ಲಿಂಗಲ್‌ ಜೊತೆ ಕುಣಿದು ಕುಪ್ಪಳಿಸಿದ್ದಾರೆ. ಅನಂತ್ ಆರ್ಯನ್ ಒಳ್ಳೆ ಮ್ಯೂಸಿಕ್ ಕೊಟ್ಟಿದ್ದಾರೆ. ಕ್ಯಾಮೆರಾ ಕೈಚಳಕ ತೋರ್ಸೋಕೆ ಒಳ್ಳೆ ಕ್ಯಾಮೆರಾ ಕೊಟ್ಟಿಲ್ಲ ಅನ್ಸುತ್ತೆ. ಕ್ವಾಲಿಟಿ ಕಣ್ಣಿಗೆ ಹೊಡೆಯಲ್ಲ. ಆದರೆ, ಸೆವೆನ್ ಸಂಖ್ಯಾಶಾಸ್ತ್ರದ ಮೇಲೆ ನಂಬಿಕೆ ಇಟ್ಟು 17 ರಂದು ಸೆವೆನ್ ರಾಜ್ ತೆರೆಗೆ ತಂದಿದ್ದಾರೆ. ಬೆಳ್ಳಿತೆರೆ ಹಾಗೂ ಬಾಕ್ಸ್ ಆಫೀಸ್ ನಲ್ಲಿ‌ ಸಂಖ್ಯಾ ಶಾಸ್ತ್ರ ವರ್ಕ್ ಆಗುತ್ತಾ ಕಾದುನೋಡಬೇಕು.

ಸೆವೆನ್ ರಾಜ್ ಅಂತ ಹೆಸರಿಟ್ಟುಕೊಂಡಿದ್ದೇನೆ, ಹೆಸರಿಗೆ ತಕ್ಕಂತೆ
ಕನ್ನಡ ಚಿತ್ರರಂಗಕ್ಕೆ ಏಳು‌ ಸಿನಿಮಾ ಕೊಡಬೇಕು‌ ಅಂತ
ನಿರ್ಧರಿಸಿದ್ದಾರೆ. ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ ಚಿತ್ರಾನಾ ಪ್ರೇಕ್ಷಕರು ಕೈಹಿಡಿದರೆ ಮುಂದೆ ಆರು ಸಿನಿಮಾ ಮಾಡ್ತಾರಂತೆ. ಇವತ್ತಿಗೆ ಫಸ್ಟ್ ಡೇ ಫಸ್ಟ್ ಶೋ ನೋಡಿ ಪ್ರೊಡ್ಯೂಸರ್ ಸೆವೆನ್ ರಾಜ್ ಖುಷಿಯಲ್ಲಿದ್ದಾರೆ. ಒಂದು ವಾರ ಕಳೆದ ಮೇಲೂ ಜನರಿಂದ ಚಿತ್ರಕ್ಕೆ ಇದೇ ರೀತಿ ಪ್ರತಿಕ್ರಿಯೆ ಸಿಕ್ಕರೆ ಹಂಡ್ರೆಡ್ ಪರ್ಸೆಂಟ್ ಸೆವೆನ್ ರಾಜ್ ಸಿನಿಮಾ ಇಂಡಸ್ಟ್ರಿಯಲ್ಲಿ ಉಳಿದುಕೊಳ್ತಾರೆ. ಅವರನ್ನ ಕನ್ನಡ ಪ್ರೇಕ್ಷಕರು ಉಳಿಸಿಕೊಳ್ಳಲಿ ಅನ್ನೋದೇ ಸಿನಿಲಹರಿ‌ ಆಶಯ

ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಉಪ್ಪಿ ಬರ್ತ್‌ಡೇ ಗೆ ಅನೌನ್ಸ್‌ ಆಗುತ್ತೆ ʼಕಬ್ಜʼ ಚಿತ್ರದ ಟೀಸರ್‌ ರಿಲೀಸ್‌ ಡೇಟ್‌ : ಮೋಷನ್‌ ಪೋಸ್ಟರ್‌ ಮೂಲಕ ಚಿತ್ರ ಸ್ಪೆಷಲ್‌ ಏನು ಅಂತ ತೋರಿಸುತ್ತಾರಂತೆ ನಿರ್ದೇಶಕ ಆರ್.‌ ಚಂದ್ರು !

ನಟ, ನಿರ್ದೇಶಕ ಉಪೇಂದ್ರ ಅವರಿಗೆ ನಾಳೆ ಹುಟ್ಟು ಹಬ್ಬದ ಸಂಭ್ರಮ. ಕೊರೋನಾ ಕಾರಣ ಈ ಬಾರಿಯೂ ಅವರು ಗ್ರಾಂಡ್‌ ಆಗಿ ಬರ್ತ್‌ ಡೇ ಸೆಲೆಬ್ರೇಷನ್‌ ಮಾಡಿಕೊಳ್ತಿಲ್ಲ ಎನ್ನುವುದನ್ನು ಬಿಟ್ಟರೆ, ಈ ಬಾರಿಯ ಅವರು ಹುಟ್ಟು ಹಬ್ಬಕ್ಕೆ ಹಲವು ಕಾರಣಕ್ಕೆ ತುಂಬಾ ಸ್ಪೆಷಲ್.‌ ಅದು ಯಾಕೆ ಅನ್ನೋದಿಕ್ಕೆ ಈ ವರದಿ ನೋಡಿ…

ನಟ ರಿಯಲ್‌ ಸ್ಟಾರ್‌ ಉಪೇಂದ್ರ ಅವರ ಹುಟ್ಟು ಹಬ್ಬಕ್ಕೆ ಇನ್ನೇನು ಕೇಲವೇ ಗಂಟೆಗಳು ಬಾಕಿ ಇದೆ. ಕೊರೋನಾ ಹಿನ್ನೆಲೆಯಲ್ಲಿ ಈ ವರ್ಷವೂ ಕೂಡ ಅವರು ಅಭಿಮಾನಿಗಳ ಜತೆಗೆ ಅದ್ದೂರಿಯಾಗಿ ಬರ್ತ್‌ ಡೇ ಆಚರಿಸಿಕೊಳ್ಳುತ್ತಿಲ್ಲ ಎನ್ನುವುದನ್ನು ಬಿಟ್ಟರೆ, ಅವರು ಅಭಿನಯಿಸಿದ ಸಿನಿಮಾ ತಂಡಗಳು ತಮ್ಮ ನೆಚ್ಚಿನ ನಟನಿಗೆ ಸ್ಪೆಷಲ್‌ ಗಿಫ್ಟ್‌ ನೀಡೋದಿಕ್ಕೆ ರೆಡಿಯಾಗಿವೆ. ಅದಕ್ಕಿಂತ ಸ್ಪೆಷಲ್‌ ಏನಂದ್ರೆ ಈ ಸಲ ಉಪ್ಪಿ ಅವರು ತಮ್ಮ ಹುಟ್ಟು ಹಬ್ಬ ಕೊಡುಗೆಯಾಗಿ ಅಭಿಮಾನಿಗಳಿಗೆ ಡೈರೆಕ್ಷನ್‌ ಗಿಫ್ಟ್‌ ನೀಡುತ್ತಿದ್ದಾರೆ. ಅಂದ್ರೆ ಉಪ್ಪಿ ನಿರ್ದೇಶನದ ಸಿನಿಮಾ ಘೋಷಣೆಯಾಗುವುದು ಕಾತರಿ ಆಗಿದೆ.

ಈಗಾಗಲೇ ನಟ, ನಿರ್ದೇಶಕ ಉಪ್ಪಿ ಅವರು ಕಥೆ-ಚಿತ್ರಕಥೆ-ಸಂಭಾಷಣೆ ಬರೆದು ನಿರ್ದೇಶನ ಮಾಡಲಿದ್ದಾರೆನ್ನೆಲಾದ ಪೋಸ್ಟರ್ ಲೀಕ್ ಆಗಿದೆ. ಇನ್ನು ವಿಶೇಷ ಅಂದ್ರೆ, `ಪಂಗನಾಮದ’ ಸಿಂಬಲ್ ಇರುವ, ನೀನು ಮತ್ತು ನಾನು ಕಥೆಯನ್ನು ಹೇಳುತ್ತಿರುವ ಫಸ್ಟ್ ಲುಕ್ ಪೋಸ್ಟರ್‌ಗೂ ಈಗಾಗಲೇ ದೊಡ್ಡದಾಗಿ ಸದ್ದು ಮಾಡುತ್ತಿರುವುದರ ನಡುವೆಯೇ, ನಟಿ ರಚಿತಾ ರಾಮ್‌ ತಮ್ಮ ಹಣೆಗೆ ಹಣೆಗೆ ನಾಮಹಾಕಿಸಿಕೊಂಡಿರುವ ಪೋಟೋಗೂ ಸಿಂಕ್ ಆಗುತ್ತಿರುವುದು ಭಾರೀ ಕುತೂಹಲ ಹುಟ್ಟುಸಿದೆ. ಅಂದ್ರೆ, ಉಪ್ಪಿ ನಿರ್ದೇಶನದ ಸಿನಿಮಾದಲ್ಲಿ ರಚಿತಾ ರಾಮ್‌ ನಾಯಕಿ ಆಗಿರಬಹುದಾ ಎನುವ ಕ್ಯೂರಿಯಾಸಿಟಿ ಮನೆ ಮಾಡಿದೆ. ಇದೆಲ್ಲದ್ದಕ್ಕೂ ನಾಳಿನ ತಮ್ಮ ಹುಟ್ಟು ಹಬ್ಬದ ದಿನ ಉಪ್ಪಿ ಉತ್ತರ ನೀಡಬಹುದು ಎಂದೇ ನಿರೀಕ್ಷಿಸಲಾಗಿದೆ. ಅದು ಬಿಟ್ಟರೆ, ಉಪ್ಪಿ ಅವರ ಬರ್ತ್‌ ಡೇ ಗೆ ಆರ್.‌ ಚಂದ್ರು ನಿರ್ದೇಶನದ ʼಕಬ್ಜʼ ಚಿತ್ರದ ಗಿಫ್ಟ್‌ ಏನು ಅಂತ.

ಅದಕ್ಕೆ ದೊಡ್ಡ ಕಾರಣವೂ ಇದೆ. ಉಪ್ಪಿ ಸಿನಿಕೆರಿಯರ್‌ ನಲ್ಲಿಯೇ ʼಕಬ್ಜʼ ಒಂದು ಸ್ಪೆಷಲ್‌ ಮೂವೀ. ಬಿಗ್‌ ಬಜೆಟ್‌ ಸಿನಿಮಾ ಹಾಗೆಯೇ ಇದು ಪ್ಯಾನ್‌ ಇಂಡಿಯಾ ಸಿನಿಮಾ ಕೂಡ. ನಿರ್ದೇಶಕ ಆರ್.‌ ಚಂದ್ರು ನಿರ್ದೇಶನದ ಜತೆಗೆ ನಿರ್ಮಾಣದಲ್ಲೂ ಇಲ್ಲಿ ತೊಡಗಿಸಿಕೊಂಡಿದ್ದಾರೆ. ಈಗಾಗಲೇ ಅದು ಇಡಿಯಾ ಲೆವೆನ್‌ ನಲ್ಲಿಯೇ ಸದ್ದು ಮಾಡಿರುವುದನ್ನು ನೋಡಿದರೆ, ದೊಡ್ಡ ಹವಾ ಸೃಷಿಸುವುದು ಗ್ಯಾರಂಟಿ ಆಗಿದೆ. ಅದೇ ಕಾರಣಕ್ಕೆ ಉಪ್ಪಿ ಬರ್ತ್‌ ಡೇ ಅಂದಾಕ್ಷಣ ಕಬ್ಜ ಸಿನಿಮಾ ತಂಡದ ಸ್ಪೆಷಲ್‌ ಏನು ಅಂತ ಅಭಿಮಾನಿಗಳು ನಿರೀಕ್ಷೆ ಮಾಡುವುದು ಸಹಜ. ಅದೇ ಕಾರಣಕ್ಕೆ ನಿರ್ದೇಶಕ ಆರ್.‌ ಚಂದ್ರು ಅವರು ಚಿತ್ರದ ನಾಯಕ ನಟ ಉಪೇಂದ್ರ ಅವರ ಹುಟ್ಟು ಹಬ್ಬಕ್ಕೆ ಕಬ್ಜ ಚಿತ್ರದ ಸ್ಪೆಷಲ್‌ ಮೋಷಲ್‌ ಪೋಸ್ಟರ್‌ ಲಾಂಚ್‌ ಮಾಡಲು ರೆಡಿಯಾಗಿದ್ದಾರೆ. ಅದರ ಜತೆಗೆ ಕಬ್ಜ ಚಿತ್ರ ಟೀಸರ್‌ ಲಾಂಚ್‌ ದಿನವನ್ನು ನಿರ್ದೇಶಕ ಆರ್.‌ ಚಂದ್ರು ಅವರು ನಾಳೆಯೇ ಅನೌನ್ಸ್‌ ಮಾಡಲಿದ್ದಾರಂತೆ. ಅದು ಈ ಬಾರಿಯ ಉಪೇಂದ್ರ ಅವರ ಬರ್ತ್‌ ಡೇ ಗೆ ಸ್ಪೆಷಲ್.

ʼ ನಂಗೊತ್ತು ಉಪೇಂದ್ರ ಅವರ ಹುಟ್ಟು ಹಬ್ಬಕ್ಕೆ ಅವರ ಅಭಿಮಾನಿಗಳು ಕಬ್ಜ ಚಿತ್ರದ ಏನ್‌ ಬರುತ್ತೆ ಅಂತ ಕಾಯುತ್ತಾರೆ ಅನ್ನೋದು ನಂಗೊತ್ತು. ಅದೇ ಕಾರಣಕ್ಕೆ ನಾವೀಗ ಚಿತ್ರದ ನಾಯಕ ನಟ ಉಪೇಂದ್ರ ಅವರ ಹುಟ್ಟು ಹಬ್ಬಕ್ಕೆ ನಮ್ಮ ಚಿತ್ರದ ಸ್ಪೆಷಲ್‌ ಮೋಷನ್‌ ಪೋಸ್ಟರ್‌ ಲಾಂಚ್‌ ಮಾಡುತ್ತಿದ್ದೇವೆ. ಈಗಾಗಲೇ ಒಂದೆರೆಡು ಪೋಸ್ಟರ್‌ ಲಾಂಚ್‌ ಮಾಡಿದ್ದೇವೆ. ಆದ್ರೆ ಇದು ತುಂಬಾ ಸ್ಪೆಷಲ್‌ . ಯಾಕಂದ್ರೆ ಚಿತ್ರದ ಸೆಟು. ಟಿಂಟು, ಕಲರು ಒಳಗೊಂಡಂತೆ ಚಿತ್ರದ ಒಟ್ಟಾರೆಯ ಒಂದು ಲುಕು ರಿವೀಲ್‌ ಆಗುವ ಹಾಗೆ ಈ ಪೋಸ್ಟರ್‌ ಇರಲಿದೆ. ಅದರ ಜತೆಗೆ ಚಿತ್ರದ ಟೀಸರ್‌ ಲಾಂಚ್‌ ದಿನಾಂಕವನ್ನು ನಾಳೆಯೇ ನಾವು ಅನೌನ್ಸ್‌ ಮಾಡುತ್ತೇವೆ. ಇದು ಉಪೇಂದ್ರ ಅವರ ಬರ್ತ್‌ ಡೇ ಗೆ ಕಬ್ಜ ಚಿತ್ರದ ತಂಡದಿಂದ ನೀಡುವ ಗಿಫ್ಟ್‌ʼ ಎನ್ನುತ್ತಾರೆ ನಿರ್ದೇಶಕ ಆರ್.‌ ಚಂದ್ರು.

  • ಎಂಟರ್‌ ಟೈನ್‌ ಮೆಂಟ್‌ ಬ್ಯೂರೋ ಸಿನಿ ಲಹರಿ

Categories
ಸಿನಿ ಸುದ್ದಿ

ಒರಿಸ್ಸಾದ ಸಮುದ್ರ ತೀರದಲ್ಲಿ ಅರಳಿದ ಡಾ.ವಿಷ್ಣುವರ್ಧನ್ ಅವರ ಮರಳು ಶಿಲ್ಪ!

ಸೆಪ್ಟೆಂಬರ್ 18ರಂದು ಡಾ.ವಿಷ್ಣು ಅವರ 71ನೇ ಜನ್ಮದಿನ. ಆ ಪ್ರಯುಕ್ತ ಮರಳು ಶಿಲ್ಪ ಕಲೆಯ ತವರೂರಾದ ಒರಿಸ್ಸಾದಲ್ಲಿ ಡಾ.ವಿಷ್ಣುವರ್ಧನ್ ಅವರ 6 ಅಡಿ ಎತ್ತರ ಮತ್ತು 15 ಅಡಿ ಅಗಲದ ಮರಳು ಶಿಲ್ಪ ಅರಳಿದೆ

ಒರಿಸ್ಸಾದ ಪುರಿಯ ಮೆರೀನ್ ಡ್ರೈವ್ ಬೀಚ್ ನಲ್ಲಿ ಇದೇ ಮೊದಲ ಬಾರಿಗೆ ಕನ್ನಡ ಕಲಾವಿದರೊಬ್ಬರ ಮರಳು ಶಿಲ್ಪ ಅರಳಿದೆ.

ಆ ಶಿಲ್ಪ ಕನ್ನಡದ ಮೇರು ನಟರಾದ ಡಾ.ವಿಷ್ಣುವರ್ಧನ್ ಅವರದ್ದು. ಇದೇ ಸೆಪ್ಟೆಂಬರ್ 18ರಂದು ಡಾ.ವಿಷ್ಣು ಅವರ 71ನೇ ಜನ್ಮದಿನ. ಆ ಪ್ರಯುಕ್ತ ಮರಳು ಶಿಲ್ಪ ಕಲೆಯ ತವರೂರಾದ ಒರಿಸ್ಸಾದಲ್ಲಿ ಡಾ.ವಿಷ್ಣುವರ್ಧನ್ ಅವರ 6 ಅಡಿ ಎತ್ತರ ಮತ್ತು 15 ಅಡಿ ಅಗಲದ ಮರಳು ಶಿಲ್ಪ ಅರಳಿದೆ.

ಹೆಸರಾಂತ ಶಿಲ್ಪಿ ಮನೀಶ್ ಕುಮಾರ್ ಅವರು ಈ ಶಿಲ್ಪವನ್ನು ರಚಿಸಿದ್ದಾರೆ. ಅದಕ್ಕೆ ಅಗತ್ಯವಾದ ಹಣಕಾಸು ವ್ಯವಸ್ಥೆಯನ್ನು ವೀರಕಪುತ್ರ ಶ್ರೀನಿವಾಸ ಅವರು ಒದಗಿಸಿದ್ದಾರೆ.

Categories
ಸಿನಿ ಸುದ್ದಿ

ರಿಯಲ್‌ಸ್ಟಾರ್‌ಗೆ ರಚ್ಚು ಮತ್ತೆ ಜೊತೆಯಾಗುತ್ತಾರಾ? ಇಬ್ಬರು ಕೂಡಿ`ನಾನು-ನೀನು’ ಕಥೆ ಹೇಳ್ತಾರಾ ?

ಸ್ಟಾರ್ ಸಿನಿಮಾಗಳು ಅನೌನ್ಸ್ ಆದಾಗ ಸಹಜವಾಗಿ ಹೀರೋಯಿನ್ ಯಾರಿರಬಹುದು ಅಂತ ಚರ್ಚೆಯಾಗುತ್ತೆ.ಅವರು ಬರ್ತಾರೆ, ಇವರು ಇರ್ತಾರೆ ಅಂತ ಗಾಸಿಪ್ ಟೋಪಿ ಹಾಕಿಕೊಂಡಿರುವ ಸುದ್ದಿ, ಇಡೀ ಗಾಂಧಿನಗರದ ತುಂಬೆಲ್ಲಾ ಡಂಕಣಕ ಡಂಕಣಕ ಅಂತ ನಾಲ್ಕು ಸ್ಟೆಪ್ ಹಾಕಿಕೊಂಡು ಓಡಾಡಿಕೊಂಡು ಬರುತ್ತೆ. ಆದರೆ, ಉಪ್ಪಿಯ ಹೊಸ ಚಿತ್ರ ಎನ್ನಲಾದ, ನಾಮದ ಸಿಂಬಲ್‌ನಿಂದಲೇ ಕರ್ನಾಟಕ ರೌಂಡ್ ಹೊಡೆಯುತ್ತಿರುವ ಸೂಪರ್‌ಸ್ಟಾರ್ ಚಿತ್ರಕ್ಕೆ, ಗುಳಿಕೆನ್ನೆ ಸುಂದರಿ ರಚಿತರಾಮ್ ಹೀರೋಯಿನ್ ಆಗ್ಬೋದು ಎನ್ನುವ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮೂಲಕ ಧೂಳೆಬ್ಬಿಸುತ್ತಿದೆ.

ರಿಯಲ್‌ಸ್ಟಾರ್ ಹೊಸ ಚಿತ್ರಕ್ಕೆ ರಚ್ಚುನೇ ಹೀರೋಯಿನ್ನ್ ಎನ್ನುವುದಕ್ಕೆ ಏಕೈಕ ಕಾರಣ ನಾಮದ ಸಿಂಬಲ್. ಬುದ್ದಿವಂತ ಉಪ್ಪಿಯವರು ಕಥೆ-ಚಿತ್ರಕಥೆ-ಸಂಭಾಷಣೆ ಬರೆದು ನಿರ್ದೇಶನ ಮಾಡ್ತಾರೆ ಎನ್ನಲಾದ ಪೋಸ್ಟರ್ ಲೀಕ್ ಆಗಿದೆ. `ಪಂಗನಾಮದ’ ಸಿಂಬಲ್ ಇರುವ, ನೀನು ಮತ್ತು ನಾನು ಕಥೆಯನ್ನ ಹೇಳುತ್ತಿರುವ ಫಸ್ಟ್ ಲುಕ್ ಪೋಸ್ಟರ್‌ಗೂ, ರಚ್ಚು ಮೇಡಂ ಹಣೆಗೆ ನಾಮಹಾಕಿಸಿಕೊಂಡಿರುವ ಪೋಟೋಗೂ ಸಿಂಕ್ ಆಗ್ತಿರೋದ್ರಿಂದ ಟ್ರೋಲ್‌ಹೈಕ್ಳು ಉಪ್ಪಿದಾದನ ಮಹಾಮೂವೀಗೆ ಬುಲ್‌ಬುಲ್‌ಬೆಡಗಿ ಜೊತೆಯಾಗಬಹುದು ಅಂತ ಟ್ರೋಲ್ ಮಾಡ್ತಿದ್ದಾರೆ.

ಇತ್ತೀಚೆಗೆ ಡಿಂಪಲ್ ಬೆಡಗಿ ರಚಿತ ಮನೆದೇವರ ದರ್ಶನ ಪಡೆದಿದ್ದರು. ಮೇಲುಕೋಟೆ ಚೆಲುವ ನಾರಾಯಣಸ್ವಾಮಿ ಸನ್ನಿಧಿಗೆ ಭೇಟಿಕೊಟ್ಟು ವಿಶೇಷ ಪೂಜೆ ಸಲ್ಲಿಸಿದ್ದ ರಚಿತಾ, ಹಣೆಗೆ ನಾಮ ಹಾಕಿಸಿಕೊಂಡು ಬಂದಿದ್ದರು. ಫೋಟೋ ಸಮೇತ ಸೋಷಿಯಲ್ ಪೇಜ್‌ಗೆ ಅಪ್‌ಲೋಡ್ ಮಾಡಿದ್ರು. ಅದೇ ಫೋಟೋನಾ ಇಟ್ಕೊಂಡು ಟ್ರೋಲ್ ಎಕ್ಸ್ ಪರ್ಟ್ ಗಳು ಈಗ ರಿಯಲ್‌ಸ್ಟಾರ್ ಅಪ್‌ಕಮ್ಮಿಂಗ್ ಡೈರೆಕ್ಷನ್ ಸಿನಿಮಾಗೆ ರಚ್ಚು ನಾಯಕಿಯಾಗ್ತಾರೆ ಅಂತ ಸುದ್ದಿ ಹಬ್ಬಿಸುತ್ತಿದ್ದಾರೆ. ಇತ್ತ, ಸೂಪರ್‌ರಂಗನ ಫ್ಯಾನ್ಸ್ ಟ್ರೋಲ್ ನಿಜ ಆಗಲಿ ಬಿಡಿ, ಮತ್ತೆ ನಮ್ಮ ಬಾಸ್ ಜೊತೆ ರಚ್ಚು ಕುಣಿಯಲಿ ಎನ್ನುತ್ತಿದ್ದಾರೆ.

ಈಗಾಗಲೇ ಉಪ್ಪಿ ಹಾಗೂ ರಚ್ಚು ಜೋಡಿ ಕಿಕ್ಕೇರಿಸಿದೆ. ಇವರಿಬ್ಬರ ಕೆಮಿಸ್ಟ್ರಿ ಎಕ್ಕಾಮಕ್ಕಾ ವರ್ಕೌಟ್ ಆಗಿದೆ. ಐ ಲವ್ ಯೂ' ಸಿನಿಮಾದ ಮೂಲಕ ಬೆಳ್ಳಿತೆರೆ ಮೇಲೆ ದಿಬ್ಬಣ ಹೊರಟ ಈ ಜೋಡಿಗೆ ಫ್ಯಾನ್ಸ್ ಮುತ್ತಿನಹಾರ ಹಾಕಿದ್ದರು.ಬಂಗಾರದಲ್ಲಿ ಬೊಂಬೆ ಮಾಡಿದ, ಆ ರಂಭೆಗಿಂತ ರಂಗು ನೀಡಿದ, ಭೂಮಿಗೆ ತಂದು ನಿನ್ನ ನಂಗೆ ನೀಡಿದ’. ಸೌಂದರ್ಯವೆಲ್ಲಾ ಒಟ್ಟುಗೂಡಿಸಿ, ಶೃಂಗಾರದಲ್ಲಿ ನಿನ್ನ ರೂಪಿಸಿ, ಆ ಬ್ರಹ್ಮ ಭಾರೀ ರಸಿಕ ನಿನ್ನ ಮಾಡಿದ.. ಹೀಗೆ ಬುಲ್‌ಬುಲ್ ಬ್ಯೂಟಿನಾ ಉಪ್ಪಿ ವರ್ಣಿಸುತ್ತಾ ಪಡ್ಡೆಹೈಕ್ಳಿಗೆ ನಶೆಯೇರಿಸಿದ್ದಲ್ಲದೇ, ಬಾಕ್ಸ್ಆಫೀಸ್ ಹೆಡ್‌ಆಫೀಸ್ನೇ ಶೇಕ್ ಶೇಕ್ ಮಾಡಿದ್ದರು. ಈಗ ಮತ್ತೆ ಇವರಿಬ್ಬರು ಒಂದಾಗಿ `ನಾನು-ನೀನು’ ಕಥೆ ಹೇಳಿದರೆ ಸುನಾಮಿ-ಸುಂಟರಗಾಳಿ ಎಲ್ಲಾ ಒಟ್ಟೊಟ್ಟಿಗೆ ಏಳುತ್ತೆ

ಸೂಪರ್‌ಸ್ಟಾರ್ ಉಪ್ಪಿ ಸಿನಿಮಾಗೆ ರಚಿತಾ ಜೊತೆಯಾಗುವ ಚಾನ್ಸನ್ ಕೊಂಚ ಕಮ್ಮಿನೇ. ಯಾಕಂದ್ರೆ, `ಐ ಲವ್ ಯೂ’ ಚಿತ್ರದಲ್ಲಿ ಉಪೇಂದ್ರರ ಜೊತೆ ರಚಿತಾ ಮೇಡಂ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಹಿಂದೆಂದೂ ಕಾಣದ ಹಸಿಬಿಸಿ ದೃಶ್ಯಗಳಲ್ಲಿ ಮಿಂದೆದ್ದ ಮೇಲೆ ನಾನು ಅಷ್ಟೊಂದು ಹಾಟ್ ಆಗಿ ಕಾಣಿಸಿಕೊಳ್ಳಬಾರದಿತ್ತು ಎಂದು ರಚಿತಾ ಬೇಸರಪಟ್ಟುಕೊಂಡಿದ್ದರು ಮಾತ್ರವಲ್ಲ ಕಣ್ಣೀರಾಕಿದ್ದರು. ಮಾಧ್ಯಮಗಳ ಜೊತೆ ಮಾತನಾಡಿದ ಪ್ರಿಯಾಂಕ ಮೇಡಂ ಆಕ್ಟ್ ಮಾಡಬೇಕಾದರೆ ಗೊತ್ತಿರಲಿಲ್ಲವಾ? ಉಪ್ಪಿ ಮೇಲೆ ಬ್ಲೇಮ್ ಮಾಡ್ತಾರಲ್ಲ ಇದು ಸರೀನಾ ಅಂತ ಕೊಂಚ ಗರಂ ಆಗಿದ್ದರು. ಹೀಗಾಗಿ, ದುಬೈ ಬಾಬುಗೆ ಜಗ್ಗುದಾದನ ಸುಂದರ ಜೊತೆಯಾಗೋದು ಡೌಟೇಯಾ.

ಹಾಗಾದ್ರೆ, ಉಪ್ಪಿಯ ಮೋಸ್ಟ್ ಎಕ್ಸ್ ಪೆಕ್ಟೆಡ್ ಅಪ್‌ಕಮ್ಮಿಂಗ್ ಚಿತ್ರಕ್ಕೆ ನಾಯಕಿ ಯಾರಾಗಬಹುದಾ? ಪ್ಯಾನ್ ಇಂಡಿಯಾ ಲೆವೆಲ್ ಪ್ರಾಜೆಕ್ಟ್ ಗೆ ಕೈಹಾಕಿರುವ ಸಿನಿಮಾಗೆ ಪರಭಾಷೆಯ ನಾಯಕಿ ಬರಬಹುದಾ ಅಥವಾ ಹೋಮ್‌ಮಿನಿಸ್ಟರ್ ಪ್ರಿಯಾಂಕ ಅವರೇ ಬಣ್ಣ ಹಚ್ಚಬಹುದಾ? ಈ ಕೂತೂಹಲದ ಪ್ರಶ್ನೆಗೆ ಸದ್ಯಕ್ಕೆ ಉತ್ತರವಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ‘ಪಂಗನಾಮದ'ಪೋಸ್ಟರ್‌ಗೆ ಬುದ್ದಿವಂತ ಇನ್ನೂ ಅಧಿಕೃತ ಮುದ್ರೆ ಹೊತ್ತಿಲ್ಲ.ಇನ್ನೆರಡು ದಿನದಲ್ಲಿ ಉಪ್ಪಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ತಾರೆ.ಬಹುಷಃ ಅದೇ ದಿನ ಅದ್ಧೂರಿಯಾಗಿ ತಮ್ಮ ಮುಂದಿನ ಚಿತ್ರದ ಬಗ್ಗೆ ಕಂಪ್ಲೀಟ್ ಅಪ್‌ಡೇಟ್ ಕೊಡಬಹುದು.ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ದೇಶನ-ನಿರ್ಮಾಣದ ಜೊತೆಗೆ ಅವರೇ ನಾಯಕನಾಗುತ್ತಾರಾ ಅಥವಾ ಅಣ್ಣನ ಮಗ ನಿರಂಜನ್‌ಗೆ ಆಕ್ಷನ್ ಕಟ್ ಹೇಳ್ತಾರೆ ಎನ್ನುವ ಕೂತೂಹಲವೂ ಮೂಡಿದೆ.ಜಸ್ಟ್ ಒಂದೇ ಒಂದು ಸಿಂಬಲ್ ಇಷ್ಟೆಲ್ಲಾ ಕೌತುಕಕ್ಕೆ ಕಾರಣವಾಗಿದೆ.ದೇವನೊಬ್ಬ ನಾಮಹಲವು ಎನ್ನುವಂತೆ ಎರಡು ವೈಟ್ ಒಂದು ರೆಡ್ಡು ಇರುವ ಸಿಂಬಲ್’ ಹಲವು ಸುದ್ದಿಮಾಡುವಂತೆ ಮಾಡಿದೆ. ಎಲ್ಲದಕ್ಕೂ ೧೮ರಂದು ಬ್ರೇಕ್ ಬೀಳಲಿದೆ.

ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಕುತೂಹಲ ಕೆರಳಿಸಿತು ಕ್ರೇಜಿಸ್ಟಾರ್-ಕಿಚ್ಚ ಭೇಟಿ; ಸ್ಪೆಷಲ್ ಸಮಾಚಾರ ಕೊಡ್ತಾರಾ ಅಪ್ಪ-ಮಗ !

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸದ್ದಿಲ್ಲದೇ ಕ್ರೇಜಿ ಸ್ಟಾರ್ ರವಿಚಂದ್ರನ್ ರನ್ನ ಭೇಟಿ‌ ಮಾಡಿದ್ದಾರೆ. ಈ ವೇಳೆ ವಿಕ್ರಾಂತ್‌ ರೋಣ ನಿರ್ಮಾಪಕ ಜಾಕ್‌ ಮಂಜು ಕೂಡ ಇದ್ದರು. ಇವರಿಬ್ಬರ ಭೇಟಿ ನಿಜಕ್ಕೂ ಕುತೂಹಲ ಕೆರಳಿಸಿದೆ. ಅವರವರ ಫ್ಯಾನ್ಸ್‌ಗೆ ಸಣ್ಣದ್ದೊಂದು ಖುಷಿಯೂ ಮೂಡಿದೆ. ಮತ್ತೆ ಬೆಳ್ಳಿತೆರೆ ಮೇಲೆ ಒಂದಾಗ್ತಾರಾ? ಅಥವಾ ಈಗಾಗಲೇ ತೆರೆಗೆ ಬರಲು ರೆಡಿಯಾಗಿರುವ “ವಿಕ್ರಾಂತ್ ರೋಣ” ಹಾಗೂ “ಕೋಟಿಗೊಬ್ಬ 3” ಚಿತ್ರದಲ್ಲೇನಾದರೂ ಕ್ರೇಜಿಯ ಕ್ರೇಜ್‌ ಇದೆಯಾ? ಈ‌ ಸಸ್ಪೆನ್ಸ್‌ ಅನ್ನು ಚಿತ್ರತಂಡ ಗುಟ್ಟಾಗಿಟ್ಟಿದೆಯಾ ? ಹೀಗೆ ಹಲವು ರೀತಿಯಾಗಿ ಫ್ಯಾನ್ಸ್ ಲೆಕ್ಕಚ್ಚಾರ ಹಾಕುತ್ತಿದ್ದಾರೆ.


ಈಗಾಗಲೇ, ಕ್ರೇಜಿ ಹಾಗೂ ಕಿಚ್ಚ ಕಾಂಬೋ ಒಂದಾಗಿರುವುದನ್ನ ನೀವೆಲ್ಲರೂ‌ ನೋಡಿದ್ದೀರಾ. ಸುದೀಪ್ ಮೇಲಿನ ಅಭಿಮಾನಕ್ಕೆ, ಪ್ರೀತಿಗೆ ರವಿಚಂದ್ರನ್‌ ಅವರು “ಮಾಣಿಕ್ಯ” ಹಾಗೂ “ಹೆಬ್ಬುಲಿ” ಚಿತ್ರದಲ್ಲಿ ನಟಿಸಿದ್ದರು. ತಂದೆಯಾಗಿ, ಅಣ್ಣನಾಗಿ ಕೋಟಿಗೊಬ್ಬನ ಜೊತೆ ನಿಂತಿದ್ದರು. ಅದರಂತೇ, ಸುದೀಪ್ ಕೂಡ ಲವ್ ಯೂ ಆಲಿಯಾ ಮತ್ತು ಅಪೂರ್ವ ಸಿನಿಮಾದಲ್ಲಿ ಪ್ರೇಮಲೋಕದ ರಣಧೀರನಿಗೆ ಸಾಥ್ ಕೊಟ್ಟರು. ಸಿಂಗಲ್ ಫ್ರೇಮ್ ನಲ್ಲಿ ಕನಸುಗಾರ ಹಾಗೂ ಕಿಚ್ಚನನ್ನು ನೋಡಿ ಫ್ಯಾನ್ಸ್ ಕೂಡ ಅಷ್ಟೇ ಖುಷಿಪಟ್ಟಿದ್ದರು.


ಅಂದ್ಹಾಗೇ, “ರಾಮಾಚಾರಿ” ಹಾಗೂ “ರನ್ನ” ಸ್ಯಾಂಡಲ್‌ವುಡ್‌ನ ಸೀನಿಯರ್ ಹಾಗೂ ಜೂನಿಯರ್ ಸ್ಟಾರ್ಸ್ ಗಳಾಗಿ ಉಳಿದಿಲ್ಲ. ಬದಲಾಗಿ ಈ ಇಬ್ಬರು ಧ್ರುವ ತಾರೆಗಳ ಮಧ್ಯೆ ತಂದೆ-ಮಗನ ಬಾಂಧವ್ಯವಿದೆ, ಮಮತೆ-ಮಮಕಾರದ ಕಕ್ಕುಲಾತಿಯ ಪ್ರೀತಿಯಿದೆ.‌ ಆ ಪ್ರೀತಿಯನ್ನ ಅಷ್ಟೇ ಜತನದಿಂದ ಕಾಯ್ದುಕೊಂಡಿದ್ದಾರೆ.

ರವಿಮಾಮ ಅಂತೂ ಸುದೀಪ್ ನನ್ನ ದೊಡ್ಡಮಗ ಅಂತಾರೇ. ಕ್ರೇಜಿ ಪ್ರೀತಿಗೆ, ಆತಿಥ್ಯಕ್ಕೆ, ಅಭಿಮಾನಕ್ಕೆ, ಪ್ರೋತ್ಸಾಹಕ್ಕೆ ಕಿಚ್ಚ ಶರಣಾಗ್ತಾರೆ. ಇದೀಗ ಸೈಲೆಂಟಾಗಿ ಇಬ್ಬರು ಭೇಟಿಯಾಗುವುದರ ಮೂಲಕ ಸುದ್ದಿಯಾಗಿದ್ದಾರೆ. ಇಬ್ಬರ ಭೇಟಿ ಕುಶಲೋಪರಿ ವಿಚಾರಣೆಯೋ ಅಥವಾ ಸಿನಿಮಾ ಚರ್ಚೆಯೋ ಕಾದುನೋಡಬೇಕು.

Categories
ಸಿನಿ ಸುದ್ದಿ

ಟಾಮ್‌ ಬಾಯ್‌ ಲುಕ್‌ನಲ್ಲಿ ಗಿರಿಜಾ ಲೋಕೇಶ್‌ ; ಬೆಟ್‌ ಕಟ್ಟಿದ್ರು ಪೈಲ್ವಾನ್‌ ನಿರ್ಮಾಪಕಿ !

ಏಜ್ ಈಸ್ ಜಸ್ಟ್ ಎ ನಂಬರ್' ಅನ್ನೋದನ್ನ ಸಾಕಷ್ಟು ಹಿರಿಯ ಕಲಾವಿದರು ಪ್ರೂ ಮಾಡಿ ತೋರಿಸಿದ್ದಾರೆ. ಈಗಾಗಲೇ ಸಾಕಷ್ಟು ಭಾರಿಏಜ್ ಈಸ್ ಜಸ್ಟ್ ಎ ನಂಬರ್’ ಎಂದು ಸಾಬೀತುಪಡಿಸಿರುವ ಧ್ರುವತಾರೆ ಗಿರಿಜಾ ಲೋಕೇಶ್. ಅವರು ಮತ್ತೊಮ್ಮೆ `ಕಲೆಗೆ ವಯಸ್ಸಿನ ಹಂಗಿಲ್ಲ’ ಎನ್ನುವುದನ್ನ ತೋರಿಸಿಕೊಟ್ಟಿದ್ದಾರೆ. ೭೦ರ ಇಳಿವಯಸ್ಸಲ್ಲಿ ಟಾಮ್‌ಬಾಯ್ ಲುಕ್‌ನಲ್ಲಿ ಮಿಂಚಿದ್ದಾರೆ. ಇತ್ತ ಪೈಲ್ವಾನ್ ನಿರ್ಮಾಪಕಿ ಸ್ವಪ್ನಾ ಕೃಷ್ಣ ಬೆಟ್ ಕಟ್ಟಿದ್ದಾರೆ. ಗಿರಿಜಾ ಅಮ್ಮನವರ ನ್ಯೂ ಲುಕ್‌ಗೂ-ಸ್ವಪ್ನಾ ಕೃಷ್ಣರ ಬೆಟ್ಟಿಂಗ್‌ಗೂ ಲಿಂಕ್ ಇದೆ. ಅದೇನು ಗೊತ್ತಾ? ಹಾಗೊಮ್ಮೆ ಓದಿಬಿಡಿ.

ಗಿರಿಜಾಲೋಕೇಶ್ ಕನ್ನಡ ಕಿರುತೆರೆ, ಬೆಳ್ಳಿತೆರೆ, ರಂಗಭೂಮಿ ಕಂಡ ಅಪರೂಪದ ನಟಿ. ಅಬಚೂರಿನ ಪೋಸ್ಟ್ ಆಫೀಸ್' ಸಿನಿಮಾದಿಂದ ಶುರುವಾದ ಬೆಳ್ಳಿತೆರೆ ಪಯಣ,ಸೆಲ್ಫೀ ಮಮ್ಮಿ ಗೂಗಲ್ ಡ್ಯಾಡಿ’ ಚಿತ್ರದವರೆಗೂ ಸಾಗಿ ಬಂದಿದೆ. “ಕಾಕನ ಕೋಟೆ”, “ಭುಜಂಗಯ್ಯನ ದಶಾವತಾರ”, “ಯಾರಿಗೂ ಹೇಳ್ಬೇಡಿ”, ಯಂತಹ ಸೂಪರ್‌ ಹಿಟ್ ಚಿತ್ರಗಳಲ್ಲಿ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ. ಸುಮಾರು ೨೦೦ಕ್ಕೂ ಹೆಚ್ಚು ಸಿನಿಮಾಗಳು, ೩೦೦ಕ್ಕೂ ಹೆಚ್ಚು ನಾಟಕಗಳಿಗೆ ಜೀವ ತುಂಬಿದ್ದಾರೆ. `ಮುತ್ತಿನ ತೋರಣ’ ಮೂಲಕ ಕಿರುತೆರೆಯಲ್ಲಿ ಹಂಗಾಮ ಸೃಷ್ಟಿಸಿದ ಗಿರಿಜಮ್ಮನವರು ಈಗಲೂ ತಮ್ಮ ಚಾರ್ಮ್ ಕಳೆದುಕೊಂಡಿಲ್ಲ.

ಕಲೆಗೆ ಬೆಲೆ ಕಟ್ಟಲು ಹೇಗೆ ಸಾಧ್ಯವಿಲ್ಲವೋ ಹಾಗೆಯೇ ಕಲೆಗೆ ವಯಸ್ಸಿನ ಹಂಗಿಲ್ಲ ಎನ್ನುವುದು ಸತ್ಯ. ಈ ಮಾತು ಇಲ್ಲಿ ಹೇಳೋದಕ್ಕೆ ಕಾರಣ, ಖ್ಯಾತ ಕಲಾವಿದೆ ಗಿರಿಜಮ್ಮನವರಿಗೆ ಇಳಿವಯಸ್ಸಲ್ಲೂ ಬತ್ತದ ಉತ್ಸಾಹ. 70ರ ವಸಂತದಲ್ಲೂ ಅವರಿಗಿರುವ ಜೀವಾನೋತ್ಸಾಹ ಮತ್ತು ಕಲೆಯ ಮೇಲಿರುವ ಪ್ರೀತಿ-ಭಕ್ತಿ ಹಾಗೂ ಶ್ರದ್ಧೆಯನ್ನ ನೋಡಿದರೆ ಬರೀ ಚಪ್ಪಾಳೆ ತಟ್ಟುವುದಲ್ಲ, ಎದ್ದುನಿಂತು ಸೆಲ್ಯೂಟ್ ಹೊಡಿಬೇಕು ಅನ್ಸುತ್ತೆ.

ಬರೋಬ್ಬರಿ 50 ವರ್ಷಗಳಿಂದ ರಂಗಭೂಮಿ, ಕಿರುತೆರೆ ಹಾಗೂ ಬೆಳ್ಳಿತೆರೆ ಪಾತ್ರಗಳಿಗೆ ಜೀವತುಂಬಿ ಪ್ರೇಕ್ಷಕ ಮಹಾಷಯರನ್ನ ರಂಜಿಸುತ್ತಾ ಬರುತ್ತಿರುವ ಗಿರಿಜಾ ಲೋಕೇಶ್ ಅವರು 70ರ ಹರೆಯದಲ್ಲೂ ತರಹೇವಾರಿ ಪಾತ್ರಗಳಿಗೆ ಉಸಿರು ತುಂಬಿ ನಟಿಸುತ್ತಿದ್ದಾರೆ. ಪೋಷಕ ನಟಿಯಾಗಿ ಬಣ್ಣದ ಲೋಕದಲ್ಲಿ ಸಿನಿಜರ್ನಿ ಮುಂದುವರೆಸಿರುವ ಗಿರಿಜಮ್ಮನವರು ಈಗ ಏಕ್ದಮ್ ತಮ್ಮ ಲುಕ್-ಗೆಟಪ್‌ನ ಚೇಂಜ್ ಮಾಡಿಕೊಂಡಿದ್ದಾರೆ. ಟಾಮ್‌ ಬಾಯ್ ಅವತಾರದಲ್ಲಿ ಮಿಂಚಿ ಇವತ್ತಿನ ನಟಿಮಣಿಯರು ಬೆಕ್ಕಸ‌ ಬೆರಗಾಗುವಂತೆ, ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದ್ದಾರೆ.

ಕಲಾವಿದರಂದ್ರೆ ಹಾಗೇನೇ. ಸಿನಿಮಾದಿಂದ ಸಿನಿಮಾಗೆ, ಪಾತ್ರದಿಂದ ಪಾತ್ರಕ್ಕೆ ಬದಲಾವಣೆ ಬಯಸ್ತಾರೆ. ಭಿನ್ನ-ವಿಭಿನ್ನ ಪಾತ್ರಗಳಿಗೆ ಜೀವ ತುಂಬುವುದಕ್ಕೆ ಹಪಹಪಿಸುತ್ತಾರೆ. ಅದರಂತೇ, ಹಿರಿಯ ನಟಿ ಗಿರಿಜಮ್ಮನವರು ಕೂಡ ಪಾತ್ರವೇ ತಾವಾಗಲು ಬಯಸ್ತಾರೆ, ಜೀವತುಂಬಿ ಅಭಿನಯಿಸ್ತಾರೆ. ಇದೀಗ ರೌಡಿಬೇಬಿ ಸತ್ಯಾಳ ಜೊತೆ ಟಾಮ್‌ಬಾಯ್ ಆಗಿ ಕಿರುತೆರೆ ಲೋಕದಲ್ಲಿ ದಿಬ್ಬಣ ಹೊರಟಿದ್ದಾರೆ. ಸತ್ಯ' ಕಿರುತೆರೆ ಲೋಕದಲ್ಲಿ ಸಂಚಲನ ಸೃಷ್ಟಿಸಿರುವ ಧಾರಾವಾಹಿ. ಪೈಲ್ವಾನ್ ಚಿತ್ರ ನಿರ್ಮಾಪಕಿ ಸ್ವಪ್ನಕೃಷ್ಣ ನಿರ್ದೇಶನವಿರುವಸತ್ಯ’ ಕಿರುತೆರೆ ಪ್ರೇಕ್ಷಕರ ಮನಸೂರೆಗೊಂಡಿದೆ. ಸ್ಮಾಲ್‌ ಸ್ಕ್ರೀನ್‌ನ್‌ನಲ್ಲಿ ಸೂಪರ್‌ಹಿಟ್ ಸೀರಿಯಲ್ ಆಗಿ ಹೊರ ಹೊಮ್ಮಿದೆ. ಮಾತ್ರವಲ್ಲ, ಈ ಧಾರಾವಾಹಿ ಹಲವು ಪ್ರತಿಭೆಗಳಿಗೆ ಬಂಗಾರದಂತಹ ಅವಕಾಶ ಕೊಟ್ಟಿದೆ ಮತ್ತು ಅವರ ಬದುಕನ್ನ ಬದಲಾಯಿಸಿಬಿಟ್ಟಿದೆ. ಲೀಡ್‌ರೋಲ್‌ನಲ್ಲಿರುವ ಗೌತಮಿ ಜಾದವ್ ಕರುನಾಡಿನ ಮನೆಮನದಲ್ಲಿ ಮೆರೆಯೋದಕ್ಕೆ `ಸತ್ಯ’ ಸೀರಿಯಲ್ ಕಾರಣ. ರೌಡಿ ಬೇಬಿಯಾಗಿ ಕಮಾಲ್ ಮಾಡ್ತಿರುವ ಸತ್ಯಾಗೆ ಟಾಮ್‌ಬಾಯ್ ಪಾತ್ರಧಾರಿಯಾಗಿರುವ ಗಿರಿಜಾ ಲೋಕೇಶ್ ಅವರು ಸಾಥ್ ನೀಡಿದ್ದಾರೆ.

ಪ್ಯಾಂಟು-ಶರ್ಟ್ ಹಾಕಿಕೊಂಡು, ಕೈಗೆ ಬ್ಯಾಂಡ್ ಧರಿಸಿಕೊಂಡು, ಬಾಬ್‌ಕಟ್ ಹೇರ್‌ಸ್ಟೈಲ್‌ನಲ್ಲಿ ಗಿರಿಜಾ ಲೋಕೇಶ್ ಅವರು ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಹಿಂದೆಂದೂ ನೋಡದ ಅವತಾರದಲ್ಲಿ ಗಿರಿಜಮ್ಮನವರನ್ನ ನೋಡಿದ ವೀಕ್ಷಕರು ವಾರೆವ್ಹಾ ಎನ್ನುತ್ತಿದ್ದಾರೆ. ಅಂದ್ಹಾಗೇ, ಈ ಬದಲಾದ ಲುಕ್‌ಗೆ ಏಕೈಕ ಕಾರಣ ಪೈಲ್ವಾನ್ ನಿರ್ಮಾಪಕಿ ಸ್ವಪ್ನ ಕೃಷ್ಣ ಅವರು. ಈ ರೀತಿಯಾದ ಪಾತ್ರವನ್ನ ಗಿರಿಜಮ್ಮನವರಿಂದ ಮಾಡಿಸಬೇಕು ಎಂದುಕೊಂಡ ಸ್ವಪ್ನಕೃಷ್ಣ, ಗಿರಿಜಮ್ಮನವರನ್ನ ಒಪ್ಪಿಸಿ ಸತ್ಯ ಸೀರಿಯಲ್‌ಗೆ ಕರೆತಂದಿದ್ದಾರೆ. ಶೂಟಿಂಗ್ ಸಮಯದಲ್ಲಿ ಸತ್ಯ ಪಾತ್ರಧಾರಿ ಗೌತಮಿ ಜಾದವ್ ಹಾಗೂ ಗಿರಿಜಾ ಲೋಕೇಶ್ ಅವರೊಟ್ಟಿಗೆ ಫೋಟೋ ಕ್ಲಿಕ್ಕಿಸಿಕೊಂಡಿರುವ ನಿರ್ಮಾಪಕಿ ಸ್ವಪ್ನ ಮೇಡಂ, `ಇವತ್ತಿನ ಯಂಗ್ ಜನರೇಷನ್ ಆರ್ಟಿಸ್ಟ್‌ಗಳಿಗೆ ನೀವು ಪ್ರೇರಣೆ. ನಾನು ಬೆಟ್ ಕಟ್ಟುತ್ತೀನಿ ಗಿರಿಜಮ್ಮನವರೇ, ನಿಮ್ಮ ಥರ ಯಾರು ಕೂಡ ಎನರ್ಜಿನಾ ಕ್ಯಾರಿ ಮಾಡೋದಕ್ಕೆ ಆಗಲ್ಲ’. ನಿಮ್ಮ ಜೊತೆ ವರ್ಕ್ ಮಾಡ್ತಿರುವುದು ಖುಷಿ ಕೊಡುತ್ತಿದೆ ಎಂದಿದ್ದಾರೆ. ಹಂಡ್ರೆಡ್ ಪರ್ಸೆಂಟ್ ನಿಜ. ಹಿಂದಿನ ಕಲಾವಿದರ ಯಂಗ್ ಅಂಡ್ ಎನರ್ಜಿಗೆ ಇವತ್ತಿನ ಆರ್ಟಿಸ್ಟ್‌ಗಳು ಸೆಡ್ಡು ಹೊಡೆಯೋದಕ್ಕೆ ಆಗಲ್ಲ. ಎನಿವೇ ಟಾಮ್‌ಬಾಯ್ ಗಿರಿಜಮ್ಮನವರಿಗೆ ಶುಭವಾಗಲಿ, ಇದೇ ರೀತಿ ಎಕ್ಸ್ಪಿರಿಮೆಂಟ್ ಪಾತ್ರಗಳ ಮೂಲಕ ಕನ್ನಡ ಪ್ರೇಕ್ಷಕರ ಮುಂದೆ ಹಾಜರಾಗಲಿ.

ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

error: Content is protected !!