
ಡಾಲಿ ಧನಂಜಯ ಹುಟ್ಟುಹಬ್ಬದ ಸಂಭ್ರಮ




ಕೊರೋನಾ ನಡುವೆಯೂ ನೆಗಳಲ್ಲಿ ಗಣೇಶೋತ್ಸವ ಜೋರಾಗಿದೆ. ಕೊರೋನಾ ಕಾರಣ ಹಬ್ಬದ ಅಬ್ಬರ ಕಾಣಿಸದಿದ್ದರೂ, ಗಣೇಶ ವಿಗ್ರಹ ತಂದು ಸಡಗರ, ಸಂಭ್ರಮದಿಂದಲೇ ಆಚರಣೆ ಮಾಡುತ್ತಿದ್ದಾರೆ. ಪ್ರತಿ ವರ್ಷ ದಂತೆ ಈ ವರ್ಷ ವೂ ನಟಿ ರಾಗಿಣಿ ಅವರ ಮನೆಯಲ್ಲಿ ಹಬ್ಬದ ಸಡಗರ ಕಳೆಗಟ್ಟಿದೆ. ಸುರಕ್ಷತೆ ದೃಷ್ಟಿಯಿಂದ ನೆರೆ ಹೊರೆಯವರಿಗೆ ಅವಕಾಶ ಇಲ್ಲದಿದ್ದರೂ, ತಮ್ಮ ಮನೆಯ ಕುಟುಂಬದ ಸದಸ್ಯರ ನಡುವೆ ಹಬ್ಬವನ್ನು ಪೂಜೆಗಳ ಮೂಲಕ ಸಂಭ್ರಮದಿಂದ ಆಚರಿಸುತ್ತಿದ್ದಾರೆ.

ಕಾಲಿವುಡ್ ನ ಸೂಪರ್ ಸ್ಟಾರ್ ಸೂರ್ಯ ಅಭಿನಯದ ಸೂರರೈ ಪಟ್ರು ನೇರವಾಗಿ ಡಿಜಿಟಲ್ ಫ್ಲಾಟ್ ಫಾರ್ಮ್ ಮೂಲಕ ರಿಲೀಸ್ ಆಗುತ್ತಿದೆ. ಅಕ್ಟೋಬರ್ ೩೦ ರಂದು ಈ ಚಿತ್ರವು ಅಮೆಜಾನ್ ಪ್ರೈಂ ಮೂಲಕ ಜಾಗತಿಕವಾಗಿ ಬಿಡುಗಡೆ ಆಗುತ್ತಿದೆ. ಇದೇ ಮೊದಲ ಸೂರ್ಯ ಅಭಿನಯದ ಸಿನಿಮಾ ಚಿತ್ರಮಂದಿರಗಳಾಚೆ ಡಿಜಿಟಲ್ ಪ್ಲಾಟ್ ಫಾರ್ಮ್ ನಲ್ಲಿ ತೆರೆ ಕಾಣುತ್ತಿದ್ದು, ಚಿತ್ರ ತಂಡ ರಲ್ಲಿ ಇದನ್ನು ಅಧಿಕೃತ ವಾಗಿ ಪ್ರಕಟಿಸಿದೆ. ಇದೇ ವೇಳೆ ಈ ಚಿತ್ರ ಗಳಿಸಲಿರುವ ಒಟ್ಟು ಕಲೆಕ್ಷನ್ ಪೈಕಿ ೫ ಕೋಟಿ ಹಣವನ್ನು ಕೊರೋನಾ ವಾರಿಯರ್ಸ್ ಗೆ ನೀಡುವುದಾಗಿ ಸೂರ್ಯ ಪ್ರಕಟಿಸಿದ್ದಾರೆ. ಸೂರ್ಯ ನಿರ್ಮಾಣದ ಈ ಚಿತ್ರದಲ್ಲಿ ದೊಡ್ಡ ತಾರಾಗಣವಿದೆ.
…
ಕಾಮಿಡಿ ಟ್ರಂಪ್ ಕಾರ್ಡ್ ಗೆ ಮರಳಿದ ನಟ ಕೋಮಲ್ ಅವರ ನೋವಿನ ಕತೆ ಇದು
………………………………………..
ನಟ ಕೋಮಲ್ ಮತ್ತೆ ಹಳೆ ಟ್ರ್ಯಾಕ್ ಗೆ ಮರಳಿದ್ದಾರೆ. ಹೀರೋ ಎನ್ನುವ ಬದಲಿಗೆ ಕಾಮಿಡಿ ಇಟ್ಟುಕೊಂಡೆ ಸಿನಿಮಾಮಾಡಲು ಮುಂದಾಗಿದ್ದಾರೆ. ಕ್ರಿಸ್ಟಲ್ ಪಾರ್ಕ್ ಚಂದ್ರಶೇಖರ್ ನಿರ್ಮಾಣದ ಕಾಮಿಡಿ ಪ್ರಧಾನ ಚಿತ್ರಕ್ಕೆ ಕೋಮಲ್ ಹೀರೋ ಆಗಿದ್ದಾರೆ. ಅಲ್ಲಿಗೆ ಹೊಸ ಹುಡುಗನಿಗಿಂತ ಹಳೇ ಗಂಡನ ಪಾದವೇ ಗತಿ ಎನ್ನುವಂತಾಗಿದೆ ಅವರ ಪರಿಸ್ಥಿತಿ. ಆ ಹಳೇ ಗಂಡ ಯಾರು? ನಿಮ್ಗೇ ಗೊತ್ತು ಅದು ಕಾಮಿಡಿ. ಅದು ಕೋಮಲ ಅವರ ಟ್ರಂಪ್ ಕಾರ್ಡ್ . ಯಾಕಂದ್ರೆ ಕೋಮಲ್ ನಟನಾಗಿ ಬಂದಿದ್ದು, ಜನಪ್ರಿಯತೆ ಪಡೆದಿದ್ದು ಅದರಿಂದಲೇ. ಕಾಮಿಡಿ ಮಾಡುವುದೇ ಅವರಿಗೆ ಇದುವರೆಗೂ ನೇಮ್ ಆ್ಯಂಡ್ ಫೇಮ್ ತಂದುಕೊಟ್ಟಿದ್ದು. ಕೊನೆಗೊಮ್ಮೆ ಏನಾಯ್ತು?

ಅದರಾಚೆಗೂ ಜಿಗಿಯುವ ಆಸೆ ಬಂತು. ಅಷ್ಟೊತ್ತಿಗೆ ಕೆಲವು ಕಾಮಿಡಿನಟರೂ ಹೀರೋ ಆಗಿ ಮಿಂಚುತ್ತಿದ್ದರು. ಶರಣ್ ಅವರಂತೂ ಸಕ್ಸಸ್ ಫುಲ್ ಸ್ಟಾರ್ ಆಗಿದ್ದರು. ವಿಕ್ಟರಿ ಭರ್ಜರಿ ವಿಕ್ಟರಿ ಸಾಧಿಸಿತ್ತು.ಅವರಂತೆಯೇ ತಾವು ಯಾಕೆ ಒಂದ್ ಕೈ ನೋಡಬಾರದು ಅಂತ ಗೋವಿಂದಾಯ ನಮ: ಅಂತ ಹೀರೋ ಗೆದ್ದರು ಕೂಡ. ಆದರೆ ಮುಂದೆ ಹಾಗಾಗಲಿಲ್ಲವೇ? ಸೋಲು ಅವರನ್ನುಕಂಗೆಡಿಸಿತು. ಸಾಕಷ್ಟು ಸಿನಿಮಾಬಂದವು. ಬಂಡವಾಳ ಹಾಕಿದ ನಿರ್ಮಾಪಕರು ಕೈ ಖಾಲಿ ಮಾಡಿಕೊಂಡರು. ಕೊನೆಗೆ ಕೋಮಲ ಕೂಡ ಅವಕಾಶಗಳಿಲ್ಲದೆ ಕೂತರು.ಹಾಗಂತೆ ಸ್ಟಾರ್ ಸಿನಿಮಾಗಳಲ್ಲಿ ಸಹನಟನಾಗಿ ಕಾಮಿಡಿಮಾಡಲು ಅದೀತೆ? ಅವಕಾಶ ಇಲ್ಲದೆ ಕುತಾಗಲೂ ಕೋಮಲ್ ಹಿಂದೆ ಮುಂದೆ ನೋಡಿದರು. ನಿರ್ದೇಶಕರು ಕೂಡ ಅವರನ್ನು ಸಹನಟನನ್ನಾಗಿ ಆಯ್ಕೆ ಮಾಡಿಕೊಳ್ಳಲು ನಿರಾಕರಿಸಿದರು. ಪರಿಣಾಮ ಅತ್ತ ದರಿ,ಇತ್ತ ಪುಲಿ ಎನ್ನುವಂತಾಗಿದ್ದ ಕೋಮಲ್ ಗೆ ನಾಯಕನಾಗುವುದು ಮುಂದೆ ಸವಾಲಾಯಿತು. ಪಿಜಿಕಲ್ ಚೇಂಜ್ ಬಯಸಿದರು. ಕೆಂಪೇಗೌಡ ೨ ಅವತಾರ ತಾಳಲು ಸಿಕ್ಸ್ ಪ್ಯಾಕ್ ಮಾಡಿಕೊಂಡರು.ಆ ಹೊತ್ತಿಗೆ ಹೀರೋ ಒಬ್ಬನಿಗೆ ಸಿಕ್ಸ್ ಪ್ಯಾಕ್ ಅಗತ್ಯ ಎನ್ನುತಿತ್ತು ಇಂಡಸ್ಟ್ರಿ. ಪರಿಸ್ಥಿತಿಯ ಬೆನ್ನುಬಿದ್ದರು. ಹೇಗಿದ್ದ ಕೋಮಲ್ ಹೇಗಾದ್ರೂ ಅಂತ ಜನ ಬೆಚ್ವಿ ಬಿದ್ದರು. ಅದೇ ಗುಂಗು, ಹುಮ್ಮಸ್ಸಿನಲ್ಲಿ ಕೆಂಪೇ ಗೌಡ ೨ ಶುರುವಾಯಿತು.ಅಲ್ಲಿಸುದೀಪ್, ಇಲ್ಲಿಕೋಮಲ್. ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಾಯಿತು. ಆದರೆ ದುರಾದೃಷ್ಟವಶಾತ್ ಕೋಮಲ್ ಗೆ ಗ್ರಹಚಾರ ಒಕ್ಕರಿಸಿಕೊಂಡಿತು.ಶೂಟಿಂಗ್ ವೇಳೆ ಗಾಯಗೊಂಡು ಮನೆಹಿಡಿದರು. ಅದು ಯಾವ ರೀತಿ ಅವರನ್ನು ಭಾದಿಸಿತು ಅಂದರೆ, ವರ್ಷವೀಡಿ ಕೋಮಲ್ ಕಾಣಿಸಿಕೊಳ್ಳಲಿಲ್ಲ.

ಅಲ್ಲಿಂದ ಚೇತರಿಸಿಕೊಂಡುಬರುವ ಹೊತ್ತಿಗೆ ಕೆಂಪೇಗೌಡಮ ಆರ್ಥಿಕ ಭಾರ ಅವರ ಮೇಲಿತ್ತು. ಗೆಲ್ಲುವ ಧೈರ್ಯ ಅವರಲ್ಲಿತ್ತು.ಸ್ಟಾರ್ ಹೋಟೆಲ್ ಗಳಲ್ಲಿಯೇ ರಿಲೀಸ್ ಮುಂಚಿನ ಸಭೆ- ಸಮಾರಂಭ ಮಾಡಿದರು. ಸಿನಿಮಾ ಬಿಡುಗಡೆ ಆದಾಗ ಆ ಸಂಭ್ರಮ ಕಾಣದಂತಾಯಿತು.ಸಿನಿಮಾ ಸೋತು ಹಾಕಿದ ಬಂಡವಾಳವಾಪಾಸ್ ಪಡೆಯುವುದಕ್ಕೂ ಪರದಾಡಬೇಕಾಯಿತು. ಕೋಮಲ್ ಪರಿಸ್ಥಿತಿ ಹೀಗಿತ್ತೆಂದರೆ, ಇದೆಲ್ಲ ಬೇಕಾ ಎಂದು ತಮ್ಮನ್ನು ತಾವೇ ಪ್ರಶ್ನಿಸಿಕೊಳ್ಳುವಂತಾಯಿತು.

ಇದೊಂದು ಕೆಟ್ಟ ಸಮಯ ಕಳೆದಿದೆ. ಕೊರೋನಾ ಕಾಲ ತೆರೆಗೆ ಸರಿಯುತ್ತಿರುವ ಹಾಗೆ ನಟ ಕೋಮಲ್ಅವರಿಗೂ ಒಳೆಯ ದಿನಗಳು ಬರುತ್ತಿವೆ. ಬಹುತೇಕ ಮುಂದಿನ ವರ್ಷ ಕನ್ನಡ ಸಿನಿಮಾ ಲೋಕದಲ್ಲಿ ಕೋಮಲ್ ಕಮಾಲ್ ಮಾಡುವುದು ಗ್ಯಾರಂಟಿಆಗಿದೆ. ಅವರಿಗೆ ಯಶಸ್ಸು ಸಿಗಲಿ.




ಮಾರ್ಚ್ ತಿಂಗಳಿನಿಂದಲೇ ಕೊರೋನಾ ಬಂತು. ಇಡೀ ಜಗತ್ತೇ ಅಲ್ಲೋಲ ಕಲ್ಲೋಲ ಆಯ್ತು. ಸಿನಿಮಾ ಸೇರಿ ಎಲ್ಲಾ ಉದ್ಯಮಗಳು ಬಂದ್ ಆದವು. ಕೆಲಸ ಇಲ್ಲದೆ ಜನ ಪರದಾಡುವ ಪರಿಸ್ಥಿತಿ ಬಂತು. ನಿತ್ಯದ ದುಡಿಮೆಯೇ ನಂಬಿ ಬದುಕುತ್ತಿದ್ದ ಸಿನಿಮಾ ಕಾರ್ಮಿಕರು, ಪೌರ ಕಾರ್ಮಿಕರು, ಆಶಾ ಕಾರ್ಯಕರ್ತರು ಸೇರಿದಂತೆ ಅಸಹಾಯಕ ಜನರ ನೆರವಿಗೆ ಸೆಲೆಬ್ರಿಟಿ ಗಳು ಧಾವಿಸಿದ ಹೊತ್ತಲ್ಲಿ ರಾಗಿಣಿ ಕೂಡ ಆಖಾಡಕ್ಕೆ ಇಳಿದರು.
ಆಗಿನ ಪರಿಸ್ಥಿತಿ ಭಯಾನಕವಾಗಿತ್ತು. ಜೀವ ಉಳಿದರೆ ಸಾಕು ಅಂತ ಕೆಲವರು ಮನೆ ಹಿಡಿದು ಕುಳಿತಾಗ ಪ್ರಾಣದ ಹಂಗು ತೊರೆದು ಜನ ನೆರವಿಗೆ ಬಂದರು ರಾಗಿಣಿ.ಕಾಲಿಗೆ ಚಕ್ರ ಕಟ್ಟಿಕೊಂಡ ಹಾಗೆ ಗಿರ ಗಿರ ತಿರುಗಿದ್ದಾರು. ಅಲ್ಲಿ, ಇಲ್ಲಿ ಎಲ್ಲೆಲ್ಲೂ ಎನ್ನುವ ಹಾಗೆ ಬೆಂಗಳೂರಿನ ಗಲ್ಲಿ ಗಲ್ಲಿಗ ಹೋಗಿ
ಪೊಲೀಸ್ ಇಲಾಖೆ ಮತ್ತು ವಿವಿಧ ಸಂಘ ಸಂಸ್ಥೆಗಳ ಮೂಲಕ ಜನರಿಗೆ ಆಹಾರ ಪದಾರ್ಥ ಸೇರಿದಂತೆ ಅಗತ್ಯ ಸಾಮಾಗ್ರಿ ಕೊಟ್ಟರು. ಆ ಮೂಲಕ ಸದಾ ಒಂದಲ್ಲೊಂದು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು.
ಹಾಗಾದ್ರೆ ರಾಗಿಣಿಗೆ ಎಲ್ಲಿಂದ ಬಂತು ಈ ಮಟ್ಟದ ಸೋಷಲ್ ಕಮಿಟ್ ಮೆಂಟ್? ತೆರೆ ಮೇಲೆ ಅವರನ್ನು ಗ್ಲಾಮರಸ್ ಪಾತ್ರಗಳಮೂಲಕ ನೋಡಿದ ಸಿನಿಮಾ ಪ್ರೇಕ್ಷಕರಿಗೆ ಆ ಬಗ್ಗೆ ಹಲವು ಪ್ರಶ್ನೆಗಳಿರಬಹುದು, ಆದರೆ ರಾಗಿಣಿ ಅವರಿಗೆ ಅದು ರಕ್ತದಿಂದಲೇ ಬಂದ ಬಳುವಳಿ. ಅದರ ಪ್ರತಿಫಲ ಎಂಬಂತೆ ಅವರಿಗೆ ಯುನೈಟೆಡ್ ನೊಬೆಲ್ ರೆಸ್ಕ್ಯೂ ಸರ್ವೀಸ್ ಸಂಸ್ಥೆ ‘ಅಂತಾರಾಷ್ಟ್ರೀಯ ನೊಬೆಲ್ ಅಂಬಾಸಿಡರ್ ‘ ಗೌರವ ನೀಡಿದೆ. ಇದೇ ಸಂಭ್ರಮ ಹಾಗೂ ಪ್ರೇರಣೆ ಯಿಂದ ತಮ್ಮ ಸಮಾಜ ಸೇವೆಯ ಕೆಲಸವನ್ನು ಮತ್ತೊಂದು ಘಟ್ಟಕ್ಕೆ ವಿಸ್ತರಿಸಿದ್ದಾರೆ.

ಆರ್ ಡಿ ವೆಲ್ ಫೇರ್ ಹೆಸರಿನ ಸಂಸ್ಥೆ ಶುರು ಮಾಡಿದ್ದಾರೆ.ಈ ಸಂಸ್ಥೆಯ ಮೂಲಕ ಕೌಟುಂಬಿಕ ದೌರ್ಜನ್ಯಗಳಲ್ಲಿ ನೊಂದ ಹೆಣ್ಣುಮಕ್ಕಳಿಗೆ ನ್ಯಾಯ ಒದಗಿಸಲು ಮುಂದಾಗಿದ್ದಾರೆ.’ ಇದನ್ನುತುಂಬಾ ಹಂಬಲ್ ಮತ್ತು ಕಾಳಜಿಯಿಂದ ಆರಂಭಿಸಿದ್ದೇನೆ. ಸಮಾಜ ಸೇವೆ ಅಂತ ನಾನೇನೆ ಮಾಡಿದರೂ, ನೊಂದ ಮಹಿಳೆಯರ ಅಸಹಾಯಕ ಪರಿಸ್ಥಿತಿ ನೋಡಿದಾಗ ಕರುಳು ಹಿಂಡುತ್ತದೆ. ಅವರ ಪರವಾಗಿ ಕೆಲಸ ಮಾಡುವುದೇ ಆದ್ಯತೆ ಎನಿಸುತ್ತದೆ. ಹಾಗಾಗಿ ಆರ್ ಡಿ ವೆಲ್ ಪೇರ್ ಸಂಸ್ಥೆ ಶುರುವಾಗಿದೆ. ಈಗ ಅದರ ಒಂದು ಹಂತದ ಕೆಲಸಕ್ಕೂ ಚಾಲನೆ ಸಿಕ್ಕಿದೆ. ನಂದಿತಾ ಪಾಠಕ್ ಹೆಸರಿನ ಒಬ್ಬ ನೊಂದ ಮಹಿಳೆಯ ಪರವಾಗಿ ಆರ್ ಡಿ ವೆಲ್ಫೇರ್ ಧ್ವನಿ ಎತ್ತಿದೆ.ಈ ಕೆಲಸ ಹೀಗೆ ಮುಂದುವರೆಯುತ್ತದೆ ‘ ಎನ್ನುವಾಗ
ರಾಗಿಣಿ ಉಗ್ರರೂಪಿ ಆಗುತ್ತಾರೆ.ರಾಗಿಣಿ ಐಪಿಎಸ್ ಪಾತ್ರ ಖಡಕ್ ಲುಕ್ ಪ್ರದರ್ಶಿಸುತ್ತಾರೆ.

ನಟಿಯಾಗಿ ಬ್ಯುಸಿ ಆಗಿದ್ದವರು ಹೀಗೆಲ್ಲ ಸಮಾಜ ಸೇವೆ ಅಂತ ನಿತ್ಯ ಓಡಾಡಿಕೊಂಡಿದ್ದರೆ, ಸಿನಿಮಾ ಮಾಡುವುದ್ಯಾವಾಗ? ‘ ನಟನೆ ನನ್ನ ಮೂಲ ವೃತ್ತಿ. ಕನ್ನಡಿಗರು ನನ್ನನ್ನು ಗುರುತಿಸಿದ್ದೇ ನಟಿಯನ್ನಾಗಿ.ಅದರಿಂದ ಹೊರಗುಳಿಯುವ ಪ್ರಶ್ನೆಯೇ ಇಲ್ಲ. ಇಷ್ಟರಲ್ಲಿಯೇ ಇನ್ನಷ್ಟು ಹೊಸ ಸಿನಿಮಾಗಳ ವಿವರ ನೀಡುತ್ತೇನೆ.ಕೆಲವು ಮಾತುಕತೆ ನಡೆದಿವೆ. ಒಳ್ಳೆಯ ಕತೆ, ಪಾತ್ರ ನಿರೀಕ್ಷೆ ಮಾಡುತ್ತಿದ್ದೇನೆ. ಮತ್ತೆ ಸೋಲೋ ಪಾತ್ರದಲ್ಲಿ ಬರಬೇಕಾ, ಸ್ಟಾರ್ ಜತೆಗೆ ಅಭಿನಯಿಸಬೇಕಾ ಅಂತಲೂ ಯೋಚಿಸುತ್ತಿದ್ದೇನೆ’ ಎನ್ನುತ್ತಾಮುಖದಲ್ಲಿ ಹರುಷದ ನಗು ಅರಳಿಸುತ್ತಾರೆ ತುಪ್ಪದ ಬೆಡಗಿ.

ಆ ದಿನಗಳು ಖ್ಯಾತಿಯ ನಟ ಚೇತನ್ ಕೊನೆಗೂ ಸಿನಿಮಾ ಮಾರ್ಗ ಕಂಡು ಕೊಂಡಿದ್ದಾರೆ.ಮದುವೆ ನಂತರ ಹೊಸದಾಗಿ ತಮ್ಮದೇವ ಮಾರ್ಗದಲ್ಲಿಸಿನಿಮಾ ಮಾಡಲು ಹೊರಟಿದ್ದಾರೆ. ಆ ಮಾರ್ಗ ಯಾವುದು ಅಂತ ವಿಷಯ ಗುಟ್ಟಾಗಿದ್ದರೂ, ಮಾರ್ಗ ಹೆಸರಲ್ಲಿ ಒಂದು ಸಿನಿಮಾಶುರುವಾಗಿದ್ದು, ಅದಕ್ಕೆ ಅವರೇ ಹೀರೋ ಎನ್ನುವುದು ವಿಶೇಷ. ಆಗಸ್ಟ್ ೨೧ ರಂದು ಅಂದರೆ ಶುಕ್ರವಾರ ಆ ಚಿತ್ರಕ್ಕೆ ಮುಹೂರ್ತ ಕೂಡ ನಡೆಯಿತು.ನಟರಾದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಉಪೇಂದ್ರ ಬಂದು ಚಿತ್ರಕ್ಕೆ ಶುಭ ಹಾರೈಸಿದರು. ಸದ್ಯಕ್ಕೆಮೋಹನ್ ಆ್ಯಕ್ಷನ್ ಹೇಳುತ್ತಿದ್ದಾರೆ.



ಅಚ್ಚರಿ ಹುಟ್ಟಿಸುವ ನಟಿ ಮಣಿಯರ ಈ ಬಗೆಯ ಗ್ಲಾಮರ್ ಲುಕ್ ಬಾಲಿವುಡ್, ಟಾಲಿವುಡ್ ನಲ್ಲಿ ಮಾತ್ರವೇ ಸಾಧ್ಯವೇ? ನೋ, ಹಾಗೊಂದು ಲೆಕ್ಕಚಾರ ತಲೆಕೆಳಗು ಆಗುವಂತೆ ಈ ಹಾಟ್ ಕೊಟ್ಟವಳು ಕನ್ನಡದ ನಟಿ. ಹೆಸರು ಅಕ್ಷರ ಗೌಡ. ಯೋಗರಾಜ್ ಭಟ್ಟರ ಪಂಚತಂತ್ರ ಸಿನಿಮಾ ನೋಡಿದವರಿಗೆ ಈಕೆ ಚಿರಪರಿಚಿತ.ಯಾಕಂದ್ರೆ ಅಲ್ಲಿ ಭರ್ಜರಿ ಕುಣಿದು ಕುಪ್ಪಳಿಸಿದ ಸುರ ಸುಂದರಾಂಗಿ. ಒಂದ್ ಕ್ಷಣ ಈ ಬೆಡಗಿಯ ಮಾದಕ ಮೈ ಮಾಟ ಒಂದ್ಸಲ ಕಣ್ತುಂಬಿಕೊಳ್ಳಿ.

ನಮ್ ಗಣಿ ಬಿಕಾಂ ಪಾಸ್… ಈ ಸಿನಿಮಾ ಬಗ್ಗೆ ಹೆಚ್ಚೇನೂ ಹೇಳಬೇಕಿಲ್ಲ. ಒಂದೊಳ್ಳೆಯ ಸಂದೇಶ ಇರುವ ಚಿತ್ರ ಕೊಟ್ಟಿದ್ದು ಯುವ ನಿರ್ದೇಶಕ ಅಭಿಷೇಕ್ ಶೆಟ್ಟಿ.
ಹೌದು ನಟನೆ ಹಾಗೂ ನಿರ್ದೇಶನಈ ಎರಡರಲ್ಲೂ ಅದ್ಭುತ ಕೆಲಸಗಾರ ಎಂಬ ನಂಬಿಕೆಯ ಜೊತೆ ಭವ್ಯ ನಿರೀಕ್ಷೆ ಹುಟ್ಟಿಸಿದ ಕನಸುಗಾರ. ಅಭಿಷೇಕ್ ಶೆಟ್ಟಿ ಗಿರುವ ಸಿನಿಮಾ ಅಭಿಮಾನ, ಪ್ರೀತಿ ಎಂಥದ್ದು ಎಂಬುದಕ್ಕೆ ಸದ್ಯ ಅಮೆಜಾನ್ ಪ್ರೈಮ್ ವಿಡಿಯೊ ದಲ್ಲಿ ಸಿಕ್ಕಾಪಟ್ಟೆ ವೀಕ್ಷಣೆ ಪಡೆಯುತ್ತಿರುವ ಸಿನಿಮಾ ಸಾಕ್ಷಿ.
ಈಗ ಡಿಸ್ಟಿಂಕ್ಷನ್ ಪಡೆದ ನಮ್ ಗಣಿ ಹೊಸ ಸಿನಿಮಾ ಮಾಡುತ್ತಿರೋದು ಗೊತ್ತೇ ಇದೆ. ಗಜಾನನ ಗ್ಯಾಂಗ್ ಕಟ್ಟಿಕೊಂಡು
ತಮ್ಮ ಮುಂದಿನ ಸಾಹಸಕ್ಕೆ ಹೆಜ್ಜೆ ಇಟ್ಟಿದ್ದಾರೆ. ಇವರ ಭರವಸೆಯ ಪ್ರಯತ್ನಕ್ಕೆ ನಿರ್ಮಾಪಕ ನಾಗೇಶ್ ಕುಮಾರ್ ಮತ್ತದೇ ನಂಬಿಕೆಯಲ್ಲಿ ಹಣ ಹಾಕುತ್ತಿದ್ದಾರೆ. ಈ ಗಜಾನನ ಗ್ಯಾಂಗ್ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಹೊರ ಬಂದಿದೆ. ಮೊದಲ ಲುಕ್ ನಲ್ಲೇ ಮಜಾ ಎನಿಸುವ ಸಿನಿಮಾ ಇದು ಎಂಬ ನಿರೀಕ್ಷೆ ಹೆಚ್ಚಿಸಿದ್ದಾರೆ. ಈಗಷ್ಟೇ ಗ್ಯಾಂಗ್ ಕಟ್ಟಿಕೊಂಡು ಹೋರಾಡೋಕೆ ಸಜ್ಜಾಗಿದ್ದಾರೆ. ಅವರ ಗ್ಯಾಂಗ್ ಪ್ರಯತ್ನ ಯಶಸ್ವಿಯಾಗಲಿ. ಇಲ್ಲೂ ಡಿಸ್ಟಿಂಕ್ಷನ್ ಪಡೆಯಲಿ.

ಸುದೀಪ್ ಅಭಿನಯದ ಫ್ಯಾಂಟಮ್ ಚಿತ್ರಕ್ಕೆ ಹೊಸ ನಾಯಕಿ ಎಂಟ್ರಿ ಕೊಟ್ಟಿದ್ದಾಳೆ. ಅಪರ್ಣ ಬಲ್ಲಾಳ್ ಎಂಬ ಪಾತ್ರದಲ್ಲಿ ಇದೇ ಮೊದಲ ಸಲ ನೀತು ಅಶೋಕ್ ಕಾಣಿಸಿಕೊಳ್ಳುತ್ತಿದ್ದಾರೆ. ಅದೊಂದು ಹಿಂದಿ ಮಿಶ್ರಿತ ಕನ್ನಡ ಮಾತನಾಡುವ ಪಾತ್ರ. ಸದ್ಯಕ್ಕೆ ನಿರ್ದೇಶಕ ಅನೂಪ್ ಭಂಡಾರಿ ಇದನ್ನು ಸ್ಪಷ್ಟಪಡಿಸಿದ್ದಾರೆ.
ಈಗಾಗಲೇ ಚಿತ್ರದ ಚಿತ್ರೀಕರಣ ಹೈದರಾಬಾದ್ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಜೋರಾಗಿ ನಡೆಯುತ್ತಿದೆ.