Categories
ಸಿನಿ ಸುದ್ದಿ

ಪೆದ್ರೊ ಹಿಂದೆ ಶಿರಸಿ ಹುಡುಗ: ಹೊಸ ಪ್ರತಿಭೆಗೆ ರಿಷಭ್ ಶೆಟ್ಟಿ ಸಾಥ್

ಶಿರಸಿ ಮೂಲದ ನಟೇಶ್ ಹೆಗಡೆ ಮಾಡಿದ ಕೆಲವು ಕಿರುಚಿತ್ರಗಳು ಜನಪ್ರಿಯವಾಗಿದೆ. ಇವರ ಒಂದು ಕಿರುಚಿತ್ರ ವೀಕ್ಷಿಸಿದ ರಾಜ್ ಬಿ‌ ಶೆಟ್ಟಿ, ನಟೇಶ್ ಅವರನ್ನು ಸಂಪರ್ಕಿಸುತ್ತಾರೆ. ನಟೇಶ್ ಅವರ ಪ್ರತಿಭೆ ಬಗ್ಗೆ ರಿಷಭ್ ಶೆಟ್ಟಿ ಅವರ ಬಳಿ ಹೇಳಿದಾಗ, ರಿಷಭ್ ” ಪೆದ್ರೊ”ಚಿತ್ರ‌ ನಿರ್ಮಾಣಕ್ಕೆ ಮುಂದಾಗುತ್ತಾರೆ.

ಈ ಚಿತ್ರ ನಿರ್ಮಾಣವಾಗಿ ವಿವಿಧ ದೇಶಗಳ ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿದೆ. ಸದ್ಯದಲ್ಲೇ ಕರ್ನಾಟಕದ ಚಿತ್ರಮಂದಿರಗಳಲ್ಲೂ “ಪೆದ್ರೊ” ಬಿಡುಗಡೆಯಾಗಲಿದೆ.

ಇತ್ತೀಚೆಗೆ ಈ‌ ಚಿತ್ರದ ಟ್ರೇಲರ್ ಅನ್ನು ನಿರ್ದೇಶಕ ಗಿರೀಶ್ ಕಾಸರವಳ್ಳಿ ಬಿಡುಗಡೆ ಮಾಡಿದರು.

ನಾನು “ಪೆದ್ರೊ” ಚಿತ್ರ ನೋಡಿ ಬೆರಗಾದೆ. ಇತ್ತೀಚೆಗೆ ದೂರವಾಗಿರುವ ಸಿನಿಮಾ ಭಾಷೆಯನ್ನು ಈ ಚಿತ್ರದಲ್ಲಿ ಚೆನ್ನಾಗಿ ಬಳಸಿಕೊಂಡಿದ್ದಾರೆ.‌‌ ಮಾಮೂಲಿ ತರಹ‌ ಅಲ್ಲದೆ ಬೇರೆಯದೇ ರೀತಿಯ ಸಿನಿಮಾ ಮಾಡಬೇಕು. ಆ ರೀತಿ ಕನ್ನಡದಲ್ಲಿ “ತಿಥಿ” ಹಾಗೂ “ಹರಿಕಥಾ ಪ್ರಸಂಗ” ಚಿತ್ರಗಳು ನನಗೆ ಹಿಡಿಸಿದ್ದವು. ಈಗ ಆ ಸಾಲಿಗೆ “ಪೆದ್ರೊ” ಸೇರಿದೆ. ರಿಷಭ್ ಶೆಟ್ಟಿ ಸೇರಿದಂತೆ ಇಡೀ ತಂಡಕ್ಕೆ ಒಳ್ಳೆಯ ದಾಗಲಿ ಎಂದು ಗಿರೀಶ್ ಕಾಸರವಳ್ಳಿ ಹಾರೈಸಿದರು.

ನನ್ನ ಪ್ರಕಾರ ಕಮರ್ಷಿಯಲ್ ಸಿನಿಮಾ, ಅವಾರ್ಡ್ ಸಿನಿಮಾ ಎಂಬುದು ಇಲ್ಲ. ಸಿನಿಮಾ ಅಂದರೆ ಸಿನಿಮಾ ಅಷ್ಟೇ. ವಿಭಾಗಗಳನ್ನು ನಾವು ಮಾಡಿಕೊಂಡಿದ್ದೇವೆ. ನಾನು ಇಷ್ಟಪಡುವ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರು ಟ್ರೇಲರ್ ಬಿಡುಗಡೆ ಮಾಡಿದ್ದು ಬಹಳ ಸಂತೋಷವಾಗಿದೆ. ಅವರ ಮಾರ್ಗದರ್ಶನ ನಮಗೆ‌ ಮುಖ್ಯ. ನಟೇಶ್ ತುಂಬಾ ಚೆನ್ನಾಗಿ ನಿರ್ದೇಶನ‌ ಮಾಡಿದ್ದಾರೆ. ಸಾಮಾನ್ಯವಾಗಿ ತಂದೆ ಮಕ್ಕಳನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಾರೆ. ಆದರೆ ನಮ್ಮ ಚಿತ್ರದಲ್ಲಿ ಮಗ , ತಂದೆಯನ್ನು ಚಿತ್ರರಂಗಕ್ಕೆ ಪ್ರವೇಶ ಮಾಡಿಸಿದ್ದಾರೆ. ನಟೇಶ್ ಹೆಗಡೆ ಅವರ ತಂದೆ ಗೋಪಾಲ್ ಹೆಗಡೆ ಈ‌ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ರಾಜ್ ಬಿ ಶೆಟ್ಟಿ, ರಾಮಕೃಷ್ಣ ಭಟ್, ಮೇಧಿನಿ ಕೆಳಮನೆ ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಸದ್ಯದಲ್ಲೇ ಚಿತ್ರವನ್ನು ತೆರೆಗೆ ತರುತ್ತೇವೆ ಎಂದರು ರಿಷಭ್ ಶೆಟ್ಟಿ.

ನಮ್ಮ ಚಿತ್ರ ಈಗಾಗಲೇ ಅನೇಕ ಚಿತ್ರೋತ್ಸವಗಳಲ್ಲಿ ಪ್ರದರ್ಶನವಾಗಿದೆ. ಆದರೆ ಇಲ್ಲಿನವರಿಗೆ ಈ ಚಿತ್ರ ತಲುಪಬೇಕು. ಅದರ ಮೊದಲ ಹೆಜ್ಜೆಯಾಗಿ ಟ್ರೇಲರ್ ಬಿಡುಗಡೆ ಮಾಡಿದ್ದೀವಿ. ನನ್ನ ಕಥೆ ಇಷ್ಟಪಟ್ಟು ಹಣ ಹಾಕಿದ ರಿಷಭ್ ಶೆಟ್ಟಿ ಅವರಿಗೆ, ರಿಷಭ್ ರನ್ನು ಪರಿಚಯಿಸಿದ ರಾಜ್ ಶೆಟ್ಟಿ ಅವರಿಗೆ , ಚಿತ್ರದಲ್ಲಿ ನಟಿಸಿರುವ ನನ್ನ ತಂದೆ ಗೋಪಾಲ್ ಹೆಗಡೆ ಹಾಗೂ ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ಗಿರೀಶ್ ಕಾಸರವಳ್ಳಿ ಸರ್ ಅವರಿಗೆ ಅನಂತ ಧನ್ಯವಾದ ತಿಳಿಸಿದರು ನಿರ್ದೇಶಕ ನಟೇಶ್ ಹೆಗಡೆ.

ಈ ಹುಡುಗನನ್ನು ಫೇಸ್ ಬುಕ್ ಮೂಲಕ ಹುಡುಕಿ, ನಿನ್ನ ಕಿರುಚಿತ್ರವೊಂದನ್ನು ಕಳುಹಿಸು ಎಂದೆ. ಆತನ ಕಿರುಚಿತ್ರ ನೋಡಿ ಸಂತೋಷ ಪಟ್ಟೆ. ರಿಷಭ್ ಗೆ ಈತನನ್ನು ಪರಿಚಯಿಸಿದೆ. ಈಗ ಈ ಚಿತ್ರ ನಿರ್ಮಾಣವಾಗಿದೆ. ಉತ್ತಮ ಪ್ರತಿಕ್ರಿಯೆ ಕೂಡ ಸಿಗುತ್ತಿದೆ. ಈ ಹುಡುಗನಿಗೆ ಹಾಗೂ ತಂಡಕ್ಕೆ ನಿಮ್ಮ ಬೆಂಬಲವಿರಲಿ ಎಂದರು ರಾಜ್ ಬಿ ಶೆಟ್ಟಿ.

ಚಿತ್ರದಲ್ಲಿ ನಟಿಸಿರುವ ರಾಮಕೃಷ್ಣ ಭಟ್ ಹಾಗೂ ಸೌಂಡ್‌ ಡಿಸೈನರ್ ಶ್ರೇಯಾಂಕ್ ಸಹ ತಮ್ಮ ಅನುಭವ ಹಂಚಿಕೊಂಡರು.

Categories
ಸಿನಿ ಸುದ್ದಿ

ಕ್ರೇಜಿ ಸ್ಟಾರ್ ರವಿಚಂದ್ರನ್ ತಾಯಿ ನಿಧನ

ಕನ್ನಡ ಚಿತ್ರರಂಗದ ಹಿರಿಯ ನಟ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ತಾಯಿ ಪಟ್ಟಮ್ಮಾಳ್ ವೀರಸ್ವಾಮಿ (83) ಅವರು ಸೋಮವಾರ ಮುಂಜಾನೆ ನಿಧನರಾಗಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಸುಗುಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.


ಮೃತರು ಇಬ್ಬರು ಪುತ್ರರು ಹಾಗು ಮೂವರು ಪುತ್ರಿಯರನ್ನು ಅಗಲಿದ್ದಾರೆ.
ಮೃತರ ದರ್ಶನಕ್ಕೆ ಅವರ ಮನೆಯ ಬಳಿ ವ್ಯವಸ್ಥೆ ಮಾಡಲಾಗಿದೆ. ಸೋಮವಾರ ಸಂಜೆ ಅಂತ್ಯಕ್ರಿಯೆ ನಡೆಯಲಿದೆ.

Categories
ಸಿನಿ ಸುದ್ದಿ

ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಅವಾರ್ಡ್ಸ್ ಟ್ರೋಫಿ ಅನಾವರಣ: ಇದು ಮೂರನೇ ಪ್ರಶಸ್ತಿ ಟ್ರೋಫಿ

ನಟಿ ರಾಗಿಣಿ, ನಟ ರಿಷಿ ಹಾಗು ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ ಅವರು ಆ ಟ್ರೋಫಿಯನ್ನು ಅನಾವರಣಗೊಳಿಸಿದರು.

ಇದೇ ಸಂಧರ್ಭದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷರು ಹಾಗೂ ಬೆಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷರಾದ ಸದಾಶಿವ ಶೆಣೈ ಅವರನ್ನು ಸಿನೆಮಾ ಪತ್ರಕರ್ತರ ಪರವಾಗಿ ಸನ್ಮಾನಿಸಲಾಯಿತು.

Categories
ಸಿನಿ ಸುದ್ದಿ

ಮಾರ್ಚ್ 4ಕ್ಕೆ ಅಘೋರನ ಅಬ್ಬರ! ಇದು ವಿಭಿನ್ನ ಹಾರರ್ ಕಥನ…

ಕನ್ನಡದಲ್ಲಿ ಇತ್ತೀಚೆಗೆ ಸಿನಿಮಾಗಳು ರಿಲೀಸ್ ಆಗುವ ಮೊದಲೇ ಸದ್ದು ಮಾಡುತ್ತವೆ. ಅಂತಹ ಸಿನಿಮಾಗಳ ಸಾಲಿಗೆ ಅಘೋರ ಚಿತ್ರವೂ ಸೇರಿದೆ. ಆರಂಭದಲ್ಲಿ ಶೀರ್ಷಿಕೆಯೊಂದಿಗೇ ಸದ್ದು ಮಾಡಿದ “ಅಘೋರ” ವಿಭಿನ್ನ ಕಥೆ ಹೊಂದಿರುವ ಚಿತ್ರ. ಹೊಸತನಗಳಿಂದ ಕೂಡಿರುವ ಹೊಸಬರ ತಂಡ ಹೊಸ ರಿಲೀಸ್ ಡೇಟ್‌ನೊಂದಿಗೆ ಈಗ ಮತ್ತೆ ಸುದ್ದಿಯಲ್ಲಿದೆ.

ಹೌದು, ಅಘೋರ ಫೆಬ್ರವರಿ 25ರಂದು ಬಿಡುಗಡೆ ಆಗಲಿದೆ ಎಂದು ಹೇಳಲಾಗಿತ್ತು. ಆದರೆ ಅದರ ಬದಲು ಮಾರ್ಚ್ 4ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಮೋಕ್ಷ ಸಿನಿಮಾಸ್ ಬ್ಯಾನರಲ್ಲಿ ನಿರ್ಮಾಣವಾಗಿರುವ “ಅಘೋರ” ಚಿತ್ರವನ್ನು ಪ್ರಮೋದ್ ರಾಜ್ ಎನ್. ಎಸ್ ನಿರ್ದೆಶಿಸಿದ್ದಾರೆ. ಚಿತ್ರ ನಿರ್ದೆಶಕರಾಗುವ ಮೊದಲು ಪ್ರಮೋದ್ ಹಲವು ಚಿತ್ರಗಳಲ್ಲಿ ನೃತ್ಯ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.
ಇತ್ತೀಚೆಗೆ ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾ ಪ್ರಚಾರವನ್ನು ಹೊಸ ಹೊಸ ರೀತಿಯಲ್ಲಿ ಮಾಡುತ್ತಿದ್ದಾರೆ.

ಈಗ ಮೆಟ್ರೋ ನಿಲ್ದಾಣಕ್ಕೂ ಸಿನಿಮಾದ ಪಬ್ಲಿಸಿಟಿ ಎಂಟ್ರಿ ಕೊಟ್ಟಿದೆ. ಈ ಹಿಂದೆ ಕೆಲ ಸಿನಿಮಾಗಳು ಮಾತ್ರ ಮೆಟ್ರೊ ನಿಲ್ದಾಣದಲ್ಲಿ ಪ್ರಚಾರ ಮಾಡಿದ್ದವು. ಈ ಸಿನಿಮಾಗಳ ಸಾಲಿಗೆ ಈಗ “ಅಘೋರ” ಸಿನಿಮಾ ತಂಡವೂ ಸಹ ಸೇರಿಕೊಂಡಿದೆ. ಬೆಂಗಳೂರಿನ ಹಲವು ಮೆಟ್ರೊ ನಿಲ್ದಾಣಗಳಲ್ಲಿ ಚಿತ್ರದ ಸ್ಟ್ಯಾಂಡೀಸ್ ನಿಲ್ಲಿಸುವ ಮೂಲಕ ಸಿನಿಪ್ರೇಮಿಗಳ ಗಮನ ಸೆಳೆಯುತ್ತಿದೆ.

ಹಾರರ್ ಕಥೆವುಳ್ಳ ಈ ಸಿನೆಮಾದಲ್ಲಿ ಸಾವಿನ ಮುನ್ಸೂಚನೆ ಹಾಗೂ ಸತ್ತ ನಂತರದ ಆಗು ಹೋಗುಗಳನ್ನು ರಿಸರ್ಚ್ ಮಾಡಿ ಕಥೆ ಮಾಡಿದ್ದಾರೆ ನಿರ್ದೇಶಕ ಪ್ರಮೋದ್. ಪಂಚ ಭೂತಗಳಾದ ಆಕಾಶ, ನೀರು, ಗಾಳಿ, ಅಗ್ನಿ, ಪ್ರಕೃತಿ ಕೂಡ ‘ಅಘೋರ”ದಲ್ಲಿ ಪಾತ್ರಧಾರಿಗಳಾಗಿದ್ದು, ಅದು ಚಿತ್ರದ ಹೈಲೈಟ್ಸ್ . ಪ್ರಕೃತಿಯೊಂದಿಗಿನ ಬದುಕು ಯಾಕೆ? ಸಾವು ಏಕೆ ಅನಿವಾರ್ಯ? ಇದನ್ನೆಲ್ಲ ಮಾಡುವವರಾರು ಎಂಬುದು ಯಾರಿಗೂ ತಿಳಿಯದ ನಿಗೂಢ. ಆದರೆ ಕರ್ಮವೆಂಬುದು ಯಾರನ್ನು ಬಿಡುವುದಿಲ್ಲ ಎನ್ನುವುದೇ ಸಿನಿಮಾದ ಸಾರಾಂಶ.

ಅಘೋರಿಯ ಪಾತ್ರದಲ್ಲಿ ಹಿರಿಯ ನಟ ಅವಿನಾಶ್ ಕಾಣಿಸಿಕೊಂಡಿದ್ದಾರೆ. ಉಳಿದಂತೆ, ಅಶೋಕ್ ಶರ್ಮಾ, ಪುನೀತ್ ಗೌಡ, ರಚನಾ ದಶರಥ್, ದ್ರವ್ಯ ಶೆಟ್ಟಿ ಪ್ರಮುಖ ನಟಿಸಿದ್ದಾರೆ. ಶರತ್ ಜಿ ಕ್ಯಾಮೆರಾ ಕೆಲಸ ಕುತೂಹಲ ಮೂಡಿಸಿದೆ. ಈಗಾಗಲೇ ಟ್ರೇಲರ್ ಮೂಲಕವೇ ಅಘೋರ ನಿರೀಕ್ಷೆ ಹೆಚ್ಚಿಸಿದೆ.

ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯ ಹಾಗು ಸಂಗೀತ ಚಿತ್ರಕ್ಕಿದೆ. ಎಲ್ .ಆರ್. ಜೀವನ್ ಸಂಭಾಷಣೆ ಬರೆದಿದ್ದಾರೆ. ಎ ಆರ್ ರೆಹಮಾನ್ ಬಳಿ ಕೆಲಸ ಮಾಡಿರುವ ಎ ಬಿ ಮುರುಳೀಧರನ್ ಹಾಗೂ ರಾಮ್ ಗೋಪಾಲ್ ವರ್ಮಾ ಬಳಿ ಕೆಲಸ ಮಾಡಿರುವ ಪ್ರವೀಣ್ ಬಿಜಿಎಂ ವರ್ಕ್ ಮಾಡಿದ್ದಾರೆ.

ತ್ಯಾಗರಾಜ್ ಚಿತ್ರಕ್ಕೆ ಶೀರ್ಷಿಕೆ ಸಂಗೀತ ನೀಡಿದ್ದಾರೆ. ಸಂಚಿತ್ ಹೆಗ್ಡೆ, ಸರಿಗಮಪ ಖ್ಯಾತಿಯ ಹನುಮಂತ, ಸಚಿನ್ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಚಿತ್ರಕ್ಕೆ ಯುಡಿವಿ ವೆಂಕಟೇಶ್ ಸಂಕಲನವಿದೆ. ಮಾಸ್ ಮಾದ ಅವರ ಸಾಹಸವಿದೆ. ಚಿತ್ರದ ಟ್ರೇಲರ್ ಎಲ್ಲೆಡೆ ಸದ್ದು ಮಾಡಿದ್ದು ಇದೇ ಮಾರ್ಚ್ 4ರಂದು ಕೆಆರ್‌ಜಿ ಸ್ಟುಡಿಯೋಸ್ ಮೂಲಕ ರಿಲೀಸ್ ಆಗಲಿದೆ.

Categories
ಸಿನಿ ಸುದ್ದಿ

ಮಾರ್ಚ್ 4ಕ್ಕೆ ಅಘೋರನ ಅಬ್ಬರ!

ಕನ್ನಡದಲ್ಲಿ ಇತ್ತೀಚೆಗೆ ಸಿನಿಮಾಗಳು ರಿಲೀಸ್ ಆಗುವ ಮೊದಲೇ ಸದ್ದು ಮಾಡುತ್ತವೆ. ಅಂತಹ ಸಿನಿಮಾಗಳ ಸಾಲಿಗೆ ಅಘೋರ ಚಿತ್ರವೂ ಸೇರಿದೆ. ಆರಂಭದಲ್ಲಿ ಶೀರ್ಷಿಕೆಯೊಂದಿಗೇ ಸದ್ದು ಮಾಡಿದ “ಅಘೋರ” ವಿಭಿನ್ನ ಕಥೆ ಹೊಂದಿರುವ ಚಿತ್ರ. ಹೊಸತನಗಳಿಂದ ಕೂಡಿರುವ ಹೊಸಬರ ತಂಡ ಹೊಸ ರಿಲೀಸ್ ಡೇಟ್‌ನೊಂದಿಗೆ ಈಗ ಮತ್ತೆ ಸುದ್ದಿಯಲ್ಲಿದೆ.

ಹೌದು, ಅಘೋರ ಫೆಬ್ರವರಿ 25ರಂದು ಬಿಡುಗಡೆ ಆಗಲಿದೆ ಎಂದು ಹೇಳಲಾಗಿತ್ತು. ಆದರೆ ಅದರ ಬದಲು ಮಾರ್ಚ್ 4ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಮೋಕ್ಷ ಸಿನಿಮಾಸ್ ಬ್ಯಾನರಲ್ಲಿ ನಿರ್ಮಾಣವಾಗಿರುವ “ಅಘೋರ” ಚಿತ್ರವನ್ನು ಪ್ರಮೋದ್ ರಾಜ್ ಎನ್. ಎಸ್ ನಿರ್ದೆಶಿಸಿದ್ದಾರೆ. ಚಿತ್ರ ನಿರ್ದೆಶಕರಾಗುವ ಮೊದಲು ಪ್ರಮೋದ್ ಹಲವು ಚಿತ್ರಗಳಲ್ಲಿ ನೃತ್ಯ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.
ಇತ್ತೀಚೆಗೆ ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾ ಪ್ರಚಾರವನ್ನು ಹೊಸ ಹೊಸ ರೀತಿಯಲ್ಲಿ ಮಾಡುತ್ತಿದ್ದಾರೆ. ಈಗ ಮೆಟ್ರೋ ನಿಲ್ದಾಣಕ್ಕೂ ಸಿನಿಮಾದ ಪಬ್ಲಿಸಿಟಿ ಎಂಟ್ರಿ ಕೊಟ್ಟಿದೆ. ಈ ಹಿಂದೆ ಕೆಲ ಸಿನಿಮಾಗಳು ಮಾತ್ರ ಮೆಟ್ರೊ ನಿಲ್ದಾಣದಲ್ಲಿ ಪ್ರಚಾರ ಮಾಡಿದ್ದವು. ಈ ಸಿನಿಮಾಗಳ ಸಾಲಿಗೆ ಈಗ “ಅಘೋರ” ಸಿನಿಮಾ ತಂಡವೂ ಸಹ ಸೇರಿಕೊಂಡಿದೆ. ಬೆಂಗಳೂರಿನ ಹಲವು ಮೆಟ್ರೊ ನಿಲ್ದಾಣಗಳಲ್ಲಿ ಚಿತ್ರದ ಸ್ಟ್ಯಾಂಡೀಸ್ ನಿಲ್ಲಿಸುವ ಮೂಲಕ ಸಿನಿಪ್ರೇಮಿಗಳ ಗಮನ ಸೆಳೆಯುತ್ತಿದೆ.

ಹಾರರ್ ಕಥೆವುಳ್ಳ ಈ ಸಿನೆಮಾದಲ್ಲಿ ಸಾವಿನ ಮುನ್ಸೂಚನೆ ಹಾಗೂ ಸತ್ತ ನಂತರದ ಆಗು ಹೋಗುಗಳನ್ನು ರಿಸರ್ಚ್ ಮಾಡಿ ಕಥೆ ಮಾಡಿದ್ದಾರೆ ನಿರ್ದೇಶಕ ಪ್ರಮೋದ್. ಪಂಚ ಭೂತಗಳಾದ ಆಕಾಶ, ನೀರು, ಗಾಳಿ, ಅಗ್ನಿ, ಪ್ರಕೃತಿ ಕೂಡ ‘ಅಘೋರ”ದಲ್ಲಿ ಪಾತ್ರಧಾರಿಗಳಾಗಿದ್ದು, ಅದು ಚಿತ್ರದ ಹೈಲೈಟ್ಸ್ . ಪ್ರಕೃತಿಯೊಂದಿಗಿನ ಬದುಕು ಯಾಕೆ? ಸಾವು ಏಕೆ ಅನಿವಾರ್ಯ? ಇದನ್ನೆಲ್ಲ ಮಾಡುವವರಾರು ಎಂಬುದು ಯಾರಿಗೂ ತಿಳಿಯದ ನಿಗೂಢ. ಆದರೆ ಕರ್ಮವೆಂಬುದು ಯಾರನ್ನು ಬಿಡುವುದಿಲ್ಲ ಎನ್ನುವುದೇ ಸಿನಿಮಾದ ಸಾರಾಂಶ.

ಅಘೋರಿಯ ಪಾತ್ರದಲ್ಲಿ ಹಿರಿಯ ನಟ ಅವಿನಾಶ್ ಕಾಣಿಸಿಕೊಂಡಿದ್ದಾರೆ. ಉಳಿದಂತೆ, ಅಶೋಕ್ ಶರ್ಮಾ, ಪುನೀತ್ ಗೌಡ, ರಚನಾ ದಶರಥ್, ದ್ರವ್ಯ ಶೆಟ್ಟಿ ಪ್ರಮುಖ ನಟಿಸಿದ್ದಾರೆ. ಶರತ್ ಜಿ ಕ್ಯಾಮೆರಾ ಕೆಲಸ ಕುತೂಹಲ ಮೂಡಿಸಿದೆ. ಈಗಾಗಲೇ ಟ್ರೇಲರ್ ಮೂಲಕವೇ ಅಘೋರ ನಿರೀಕ್ಷೆ ಹೆಚ್ಚಿಸಿದೆ.

ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯ ಹಾಗು ಸಂಗೀತ ಚಿತ್ರಕ್ಕಿದೆ. ಎಲ್ .ಆರ್. ಜೀವನ್ ಸಂಭಾಷಣೆ ಬರೆದಿದ್ದಾರೆ. ಎ ಆರ್ ರೆಹಮಾನ್ ಬಳಿ ಕೆಲಸ ಮಾಡಿರುವ ಎ ಬಿ ಮುರುಳೀಧರನ್ ಹಾಗೂ ರಾಮ್ ಗೋಪಾಲ್ ವರ್ಮಾ ಬಳಿ ಕೆಲಸ ಮಾಡಿರುವ ಪ್ರವೀಣ್ ಬಿಜಿಎಂ ವರ್ಕ್ ಮಾಡಿದ್ದಾರೆ. ತ್ಯಾಗರಾಜ್ ಚಿತ್ರಕ್ಕೆ ಶೀರ್ಷಿಕೆ ಸಂಗೀತ ನೀಡಿದ್ದಾರೆ. ಸಂಚಿತ್ ಹೆಗ್ಡೆ, ಸರಿಗಮಪ ಖ್ಯಾತಿಯ ಹನುಮಂತ, ಸಚಿನ್ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಚಿತ್ರಕ್ಕೆ ಯುಡಿವಿ ವೆಂಕಟೇಶ್ ಸಂಕಲನವಿದೆ. ಮಾಸ್ ಮಾದ ಅವರ ಸಾಹಸವಿದೆ. ಚಿತ್ರದ ಟ್ರೇಲರ್ ಎಲ್ಲೆಡೆ ಸದ್ದು ಮಾಡಿದ್ದು ಇದೇ ಮಾರ್ಚ್ 4ರಂದು ಕೆಆರ್‌ಜಿ ಸ್ಟುಡಿಯೋಸ್ ಮೂಲಕ ರಿಲೀಸ್ ಆಗಲಿದೆ.

Categories
ಸಿನಿ ಸುದ್ದಿ

ಲೀಸ ರಿಲೀಸ್ ಮೊದಲೇ ಜೋರು ಸದ್ದು! ಇದು ಮಹಿಳಾ ಪ್ರಧಾನ ಸಿನಿಮಾ…

ಹುಡುಗರ ಬ್ರಹ್ಮಚಾರಿ ಜೀವನ ಹೇಗಿರುತ್ತದೆಂದು ಎಲ್ಲರಿಗೂ ತಿಳಿದಿದೆ. ಅದೇ ಹುಡುಗಿಯರ ಬ್ಯಾಚುಲರ್ ಲೈಫು ಯಾವ ರೀತಿ ಇರುತ್ತದೆಂದು ’ಲೀಸ’ ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಇತ್ತೀಚೆಗೆ ಚಿತ್ರದ ಟ್ರೇಲರ್ ಮತ್ತು ಮೂರು ಹಾಡುಗಳನ್ನು ತೋರಿಸಲಾಗಿದೆ. ಅದರಲ್ಲೂ ತಪಸ್ವಿ ಬರೆದಿರುವ ’ಅಮ್ಮ’ ಕುರಿತಾದ ಗೀತೆ ಎಲ್ಲರ ಮನ ಕಾಡುತ್ತದೆ. ಹಾಡು ಭಾವುಕತೆಯನ್ನೂ ಹೆಚ್ಚಿಸುತ್ತದೆ. ಕಥೆ,ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಮತ್ತು ನಿರ್ದೇಶನ ಮಾಡಿರುವುದು ಮುತ್ತು. ಪಾರ್ವತಿ ತಾಯಿ ಕೋರಳ್ಳಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಆಳಂದ ಮೂಲದ ರಾಜಕೀಯ ಮುಖಂಡ ಸೂರ್ಯಕಾಂತ್.ಕೆ.ಕೋರಳ್ಳಿ ನಿರ್ಮಾಣ ಮಾಡಿರುವುದು ಹೊಸ ಅನುಭವ. ದೇವಿಶ್ರೀ, ಮುತ್ತು, ದಯಾನಂದ ಹಾಗೂ ಅವಿನಾಶ್ ಸಹ ನಿರ್ಮಾಪಕರಾಗಿ ಸಾಥ್ ನೀಡಿದ್ದಾರೆ.

ಬದುಕಿನಲ್ಲಿ ಪ್ರತಿಯೊಬ್ಬರಿಗೂ ಒಂದೊಂದು ಸಮಸ್ಯೆ ಇರುತ್ತದೆ. ಅದೇ ರೀತಿ ಮಹಿಳಾ ಪ್ರಧಾನ ಕಥಾ ನಾಯಕಿ ಲೀಸ ಇಂತಹುದಕ್ಕೆ ಒಳಗಾಗಿರುತ್ತಾಳೆ. ಹಾಗಂತ ಇದನ್ನು ಖಾಯಿಲೆ ಎನ್ನಲು ಆಗುವುದಿಲ್ಲ. ಈ ತರಹದ ಗುಣವುಳ್ಳವರು ದುಶ್ಚಟಗಳಿಗೆ ಯಾವ ರೀತಿ ವ್ಯಸನಿಗಳಾಗುತ್ತಾರೆ. ಅದರಿಂದ ಅವರು ಏನೇನು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಕೊನಗೆ ವೈದ್ಯರ ಸಲಹೆ ಪಡೆದುಕೊಂಡು ಯಾವ ರೀತಿ ಹೊರಗಡೆ ಬರುತ್ತಾರೆ ಎಂಬುದು ಸಾರಾಂಶ. ಐವರು ಹುಡುಗಿಯರ ಸುತ್ತ ಸಿನಿಮಾ ಸಾಗುತ್ತದೆ. ನಿರ್ದೇಶಕರು ಇದಕ್ಕಂದೆ ಸಂಶೋಧನೆ ನಡೆಸಿ, ಅದರಲ್ಲಿ ಸಿಕ್ಕಂತ ವಿಷಯಗಳನ್ನು ಬಳಸಿಕೊಂಡು, ಕಾಲ್ಪನಿಕ ಕಥೆಯನ್ನು ಸೃಷ್ಟಿಸಿದ್ದಾರಂತೆ.

ಚಿತ್ರದಲ್ಲಿ ರೂಪನಟರಾಜ್ , ಶ್ರಾವ್ಯಗಣಪತಿ, ಮೇಘನಾರಾಮ್, ತೇಜಸ್ವಿನಿ, ಪಾರ್ವತಿ ಇದ್ದಾರೆ. ಚಿತ್ರದಲ್ಲಿ ತಾಯಿಯಗಿ ಕಲಾವಿದೆ ಮಂಜುಳಾರೆಡ್ಡಿ ಅವರು ಕಾಣಿಸಿಕೊಂಡಿದ್ದಾರೆ. ಉಳಿದಂತೆ ಸಂಗೀತ, ನಿಸರ್ಗ ನಟಿಸಿದ್ದಾರೆ.

ಮೂರು ಹಾಡುಗಳಿಗೆ ಎಸ್.ಆರ್.ಪ್ರಭು-ಸುರೇಂದ್ರನಾಥ್ ಸಂಗೀತ ನೀಡಿದರೆ, ಸಿನಿಟೆಕ್‌ಸೂರಿ ಛಾಯಾಗ್ರಹಣವಿದೆ. ಜ್ಞಾನೇಶ್ ಸಂಕಲನವಿದೆ.
ಬೆಂಗಳೂರು ಮತ್ತು ಬೀದರ್ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸೆನ್ಸಾರ್‌ನಿಂದ ಮೆಚ್ಚುಗೆ ಪಡೆದುಕೊಂಡಿರುವ ಚಿತ್ರವು ಸದ್ಯದಲ್ಲೆ ಬಿಡುಗಡೆಯಾಗಲಿದೆ.

Categories
ಸಿನಿ ಸುದ್ದಿ

ಗಾಯಕನಿಗೆ ಹ್ಯಾಪಿ ಬರ್ತ್ ಡೇ! ವಿಜಯ ಪ್ರಕಾಶ್ ಗೆ ಸ್ಪೆಷಲ್ ಸೆಲೆಬ್ರೇಷನ್

ಸೆಲೆಬ್ರೇಷನ್ ಟೀ ವತಿಯಿಂದ ಗಾಯಕ ವಿಜಯ್ ಪ್ರಕಾಶ್ ಅವರ ಹುಟ್ಟುಹಬ್ಬವನ್ನು ಇತ್ತೀಚೆಗೆ ಆಚರಿಸಲಾಯಿತು. ವಿಜಯ್ ಪ್ರಕಾಶ್ ಸೆಲಿಬ್ರೇಷನ್ ಟೀ ಸಂಸ್ಥೆಯ ರಾಯಭಾರಿಯೂ ಹೌದು. ಕರ್ನಾಟಕದ ಯುವ ಪ್ರತಿಭೆಗಳು ಹುಟ್ಟು ಹಾಕಿರುವ ಸಂಸ್ಥೆ “ಸೆಲಿಬ್ರೇಷನ್ ಟೀ”ಇದು. ಈ ವೇಳೆ ವಿಜಯ್ ಪ್ರಕಾಶ್ ಜನಪ್ರಿಯ ಗೀತೆಗಳನ್ನು ಹಾಡಿದರು.

ನಾವಿಬ್ಬರು ಸಾಫ್ಟ್‌ವೇರ್ ಉದ್ಯೋಗಿಗಳು. ಅತೀ ಹೆಚ್ಚು ಓದಿದ್ದರಿಂದ ನಮಗೆ ಎಲ್ಲೂ ಕೆಲಸ ಸಿಗಲಿಲ್ಲ.‌ ಕೊನೆಗೆ ನಾವು ಕೆಲವು ಸಾಫ್ಟ್‌ವೇರ್ ಕಂಪನಿಗಳಿಗೆ ಆಹಾರ ಒದಗಿಸುವ ಕಾರ್ಯ ಆರಂಭಿಸಿದ್ದೆವು. ಕೊರೊನಾ ಬಂದು ಆದು ನಿಂತು ಹೋಯಿತು. ಆನಂತರ ಯೋಚಿಸಿ ಒಂದು ವರ್ಷದ ಹಿಂದೆ ಈ ಟೀ ಸಂಸ್ಥೆ ಆರಂಭಿಸಿದೆವು. ಕೇವಲ ಒಂದೇ ವರ್ಷದಲ್ಲಿ ನಾವು ಅಂದುಕೊಂಡಿರುವುದಕ್ಕಿಂತ ಹೆಚ್ಚಿನ ಫಲಿತಾಂಶ ಕಂಡಿದ್ದೇವೆ. ನಮ್ಮ ಈ ವಿಷಯವನ್ನು ವಿಜಯ್ ಪ್ರಕಾಶ್ ಅವರ ಬಳಿ ಹೇಳಿಕೊಂಡಾಗ ಅವರು ರಾಯಭಾರಿಯಾಗಲು ಒಪ್ಪಿಕೊಂಡರು. ಕಮರ್ಷಿಯಲ್ ಸಂಸ್ಥೆಯೊಂದಕ್ಕೆ ವಿಜಯ್ ಪ್ರಕಾಶ್ ರಾಯಭಾರಿ ಆಗಿರುವುದು ಇದೇ ಮೊದಲು. ವಿವಿಧ ಫ್ಲೇವರ್ ಗಳಲ್ಲಿ ಲಭ್ಯವಿರುವ ನಮ್ಮ ಟೀ ಈಗ ಎಲ್ಲೆಡೆ ಜನಪ್ರಿಯವಾಗುತ್ತಿದೆ.‌ ಕರ್ನಾಟಕದ ಹದಿನೆಂಟು ಜಿಲ್ಲೆಗಳಲ್ಲದೆ, ಪಕ್ಕದ ಆಂದ್ರ ಹಾಗೂ ತೆಲಂಗಾಣದಲ್ಲೂ ನಮ್ಮ ಟೀ ಗೆ ಬೇಡಿಕೆ ಹೆಚ್ಚಿದೆ.‌ ಮುಂದೆ ಟೀ ಅಷ್ಟೇ ಅಲ್ಲದೇ ಕಾಫಿಪುಡಿ, ರವೆ, ಬೇಳೆ ಮುಂತಾದ ಉತ್ಪನ್ನಗಳನ್ನು‌ ಮಾರುಕಟ್ಟಗೆ ತರಲಿದ್ದೇವೆ. ಈ ಯಶಸ್ಸಿಗೆ ನಮ್ಮ ಹಿಂದೆ ನಿಂತವರು ಅನೇಕರು. ಅವರಿಗೆಲ್ಲಾ ನಾನು ಆಭಾರಿ. ನಮ್ಮ ಸಂಸ್ಥೆಯೊಂದಿಗೆ ಕೈಜೋಡಿಸಿರುವ ವಿಜಯ್ ಪ್ರಕಾಶ್ ಆವರಿಗೆ ವಿಶೇಯ ಧನ್ಯವಾದ ಎಂದರು ಸೆಲಿಬ್ರೇಷನ್ ಟೀ ಸಂಸ್ಥೆ ಸ್ಥಾಪಕರಾದ ಚಂದನ್ ಹಾಗೂ ಪವನ್.

ನಾನು ಕೂಡ ಮೈಸೂರು ಬಿಟ್ಟು ಮುಂಬೈಗೆ ಹೋದಾಗ ಕಷ್ಟದ ದಿನಗಳನ್ನು ಕಂಡಿದ್ದೀನಿ.‌ ಅಲ್ಲಿ ನನಗೆ ನನ್ನ ಗುರುಗಳು ಆಸರೆ ನೀಡಿದರು. ನಾವು ಮೈಸೂರಿನವರು ಹೆಚ್ಚು ಕಾಫಿ ಪ್ರಿಯರು. ಆದರೆ ನನಗೆ ಮುಂಬೈಗೆ ಹೋದ ಮೇಲೆ ಟೀ ಅಭ್ಯಾಸವಾಯಿತು. ಈ ಹುಡಗರು ಬಂದು ನನ್ನ ಕೇಳಿದಾಗ,‌‌ ಅವರ ಉದ್ದೇಶ ಒಳ್ಳೆಯದಾಗಿರುವುದರಿಂದ ಒಪ್ಪಿಕೊಂಡೆ.‌ ಕೊನೆಯವರೆಗೂ ನಿಮ್ಮ ಒಳ್ಳೆಯತನ ಹೀಗೆ ಇರಲಿ. ನನ್ನ ತಾಯಿ ಹಾಗೂ ಪತ್ನಿ ಇಬ್ಬರು ಇಲ್ಲೇ ಇದ್ದಾರೆ. ಅವರ ಹಾಗೂ ನಿಮ್ಮೆಲ್ಲರ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವುದು ಸಂತೋಷ ತಂದಿದೆ. ಈ ಹೊಸ ತಂಡದ ಹೊಸ ಕನಸಿಗೆ ನಿಮ್ಮ ಬೆಂಬಲವಿರಲಿ ಎನ್ನುತ್ತಾರೆ ಗಾಯಕ ವಿಜಯ್ ಪ್ರಕಾಶ್.

ಅರೇಕ ಟೀ ಸಂಸ್ಥೆಯ ನಿವೇದನ್ ಹಾಗೂ ಮುಂತಾದ ಗಣ್ಯರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು. ವಿಕ್ರಂ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಸೆಲಿಬ್ರೇಷನ್ ಟೀ ಜಾಹೀರಾತನ್ನು ಇದೇ ಸಮಯದಲ್ಲಿ ಅನಾವರಣಗೊಳಿಸಲಾಯಿತು.

Categories
ಸಿನಿ ಸುದ್ದಿ

ಮಾರ್ಚ್ ನಲ್ಲಿ ಮಾರಕಾಸ್ತ್ರ ಚಿತ್ರದ ಶೂಟಿಂಗ್ ಶುರು ಗುರು!

ಕನ್ನಡದಲ್ಲಿ ದಿನ ಕಳೆದಂತೆ ಹೊಸಬರ ತಂಡ ಹೊಸ ಬಗೆಯ ಸಿನಿಮಾಗಳು ಬರುತ್ತಲೇ ಇವೆ. ಆ ಸಾಲಿಗೆ ಮಾರಕಾಸ್ತ್ರ ಸಿನಿಮಾ ಕೂಡ ಸೇರಿದೆ. ಶ್ರಾವ್ಯ ಕಂಬೈನ್ಸ್ ಬ್ಯಾನರ್ ನಲ್ಲಿ ಕೋಮಲ ನಟರಾಜ್ ಅವರು ನಿರ್ಮಿಸುತ್ತಿರುವ “ಮಾರಕಾಸ್ತ್ರ” ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ನಡೆದಿದೆ.

ದೇಶದ ದುಷ್ಟಶಕ್ತಿಗಳನ್ನು ಮಟ್ಟ ಹಾಕುವ ಶಕ್ತಿ ಪತ್ರಕರ್ತರ ಲೇಖನಿಗಿದೆ. ಕೆಟ್ಟದ್ದನ್ನು ಕಂಡರೆ ಸಿಡಿದೇಳುವ ಅಸ್ತ್ರವೇ ಈ “ಮಾರಕಾಸ್ತ್ರ” ಅಂತಲೂ ಹೇಳಬಹುದು. ಈ ವಿಷಯದ ಕುರಿತು ನಮ್ಮ ಚಿತ್ರದ ಕಥೆ ಸಾಗುತ್ತದೆ. ಇದಕ್ಕೆ “ದೇಶದ ರಕ್ಷಣೆಗಾಗಿ” ಎಂಬ ಅಡಿಬರಹವಿದೆ. ನಾನು ಕೆಲವು ಕಿರುಚಿತ್ರಗಳನ್ನು ನಿರ್ದೇಶಿಸಿದ್ದೇನೆ. ಹಿರಿತೆರೆಯಲ್ಲಿ ಮೊದಲ ಚಿತ್ರ. ಕಥೆ ಕೇಳಿ ಇಷ್ಟಪಟ್ಟು ಅವಕಾಶ ನೀಡಿರುವ ನಿರ್ಮಾಪಕರಿಗೆ ಧನ್ಯವಾದ ತಿಳಿಸಿದ ನಿರ್ದೇಶಕ ಗುರುಮೂರ್ತಿ ಸುನಾಮಿ ಮಾರ್ಚ್ ನಲ್ಲಿ ಚಿತ್ರೀಕರಣ ನಡೆಯಲಿದೆ ಎಂದರು.

ಚಿತ್ರದಲ್ಲಿ ಆರು ಹಾಡುಗಳಿವೆ. ಎಲ್ಲಾ ಹಾಡುಗಳನ್ನು ನಾನೇ ಬರೆದಿದ್ದೇನೆ. ಮೂರು ಹಾಡುಗಳನ್ನು ನಮ್ಮ ಚಿತ್ರದ ನಿರ್ಮಾಪಕರಾದ ನಟರಾಜ್ (ಕೋಮಲ ಅವರ ಪತಿ) ಹಾಡಿದ್ದಾರೆ. ದೇಶಭಕ್ತಿ ಕುರಿತಾದ‌ ಈ ಚಿತ್ರದ ಶೀರ್ಷಿಕೆ ಗೀತೆಯನ್ನು ಇಂದು ನೀವು ನೋಡಿದ್ದೀರಿ.‌ ನಿಮಗೆ ಮೆಚ್ಚುಗೆಯಾಗಿದೆ ಅಂದುಕೊಳ್ಳುತ್ತೇನೆ ಎಂದರು ಸಂಗೀತ ನಿರ್ದೇಶಕ ಮಿರಾಕಲ್ ಮಂಜು.

ನಿರ್ದೇಶಕರು ನನಗೆ ಕಥೆ ಹೇಳಿದಾಗ ಈ ಚಿತ್ರದಲ್ಲಿ ನಟಿಸಲೇಬೇಕೆಂದು ಆಸೆಯಾಯಿತು. ನಾನು ಹಿಂದೆ ಛಾಯಾ ಎಂಬ ಚಿತ್ರದಲ್ಲಿ ನಟಿಸಿದ್ದೆ. ಇದು ಎರಡನೇ ಚಿತ್ರ. ಈ ಸಂದರ್ಭದಲ್ಲಿ ನಾನು ಅಪ್ಪು ಅವರನ್ನು ನೆನಪಿಸಿಕೊಳ್ಳುತ್ತೇನೆ. ಎಲ್ಲರು ನನಗೆ ಅವರ ರೀತಿ ಕಾಣುವೆ. ಅವರನ್ನೇ ಅನುಕರಣೆ ಮಾಡುತ್ತೀಯಾ ಎನ್ನುತ್ತಾರೆ. ಆದರೆ ನನಗೆ ಹಾಗೆ ಅನಿಸುವುದಿಲ್ಲ. ಇದೆಲ್ಲ ಸಹಜ ಎನ್ನುತ್ತಾರೆ ನಾಯಕ ಆನಂದ್ ಆರ್ಯ.

ನನ್ನದು ಇದು ಮೊದಲ ಚಿತ್ರ. ಅವಕಾಶ ಕೊಟ್ಟ ನಿರ್ಮಾಪಕರಿಗೆ ಥ್ಯಾಂಕ್ಸ್ ಎಂದರು ಮಾಧುರ್ಯ

ನಾನು ತುಮಕೂರು ಜಿಲ್ಲೆಯ ಕೊರಟಗೆರೆಯವನು. ಇದು ನನಗೆ ಮೊದಲ ಸಿನಿಮಾ ಕಾರ್ಯಕ್ರಮ. ನಿರ್ದೇಶಕರು ಹೇಳಿದ ಈ ಕಥೆಯಲ್ಲಿ ನಮ್ಮ ದೇಶ ರಕ್ಷಣೆಯ ಹಲವು ಅಂಶಗಳಿದೆ. ಹಾಗಾಗಿ ನಿರ್ಮಾಣಕ್ಕೆ ಮುಂದಾದೆವು. ಸಿಕ್ಕಿಂ, ದಾರ್ಜಲಿಂಗ್ ಮುಂತಾದ ಕಡೆ ಹೆಚ್ಚಿನ ಚಿತ್ರೀಕರಣ ನಡೆಸುತ್ತೇವೆ. ಚಿತ್ರದ ಆರು ಹಾಡುಗಳ ಪೈಕಿ ಮೂರು ಹಾಡುಗಳನ್ನು ನಾನೇ ಹಾಡಿದ್ದೀನಿ. ಅವಕಾಶ ಕೊಟ್ಟ ಸಂಗೀತ ನಿರ್ದೇಶಕರಿಗೆ ಧನ್ಯವಾದ ಎಂದರು ನಿರ್ಮಾಪಕ ನಟರಾಜ್. ಚಿತ್ರದಲ್ಲಿ ನಟಿಸುತ್ತಿರುವ ಶಿವಪ್ರಸಾದ್ ಹಾಗೂ ಪುರುಷೋತ್ತಮ ತಮ್ಮ ಅನುಭವ ಹಂಚಿಕೊಂಡರು.

Categories
ಸಿನಿ ಸುದ್ದಿ

ಮರ್ದಿನಿ ಮೆಚ್ಚಿದ ಕಿಚ್ಚ ಸುದೀಪ್! ಇದು ಮಹಿಳಾ ಪ್ರಧಾನ ಸಿನಿಮಾ…

ಕಳೆದ ಎರಡು ವರ್ಷಗಳಿಂದ ಮಂಕಾಗಿದ್ದ ಕನ್ನಡ ಚಿತ್ರರಂಗದಲ್ಲಿ ಈಗ ಮತ್ತೆ ಹಬ್ಬದ ಕಳೆ. ಸಾಲು ಸಾಲು ಚಿತ್ರಗಳು ತೆರೆಗೆ ಬರುತ್ತಿವೆ. ಅಷ್ಟೇ ಸಂಖ್ಯೆಯ ಚಿತ್ರಗಳು ತೆರೆಗೆ ಬರಲು ಸಿದ್ದವಾಗಿದೆ. ಆ ಚಿತ್ರಗಳ ಪೈಕಿ “ಮರ್ದಿನಿ” ಚಿತ್ರವೂ ಸೇರಿದೆ.

ಮಹಿಳಾ ಪ್ರಧಾನವಾಗಿರುವ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ವಿಡಿಯೋ ಮೂಲಕ ಚಿತ್ರತಂಡಕ್ಕೆ ಶುಭಕೋರಿ ಟ್ರೇಲರ್ ಬಿಡುಗಡೆ ಮಾಡಿದರು. ಸುದೀಪ್ ಅಭಿಮಾನಿಗಳ ಸಂಘದ ರಾಜ್ಯಾದ್ಯಕ್ಷ ನವೀನ್ ಗೌಡ, ಯೋಗೇಶ್ ಹಾಗೂ “ರೌಡಿ ಬೇಬಿ” ಚಿತ್ರದ ನಾಯಕ ರವಿಗೌಡ ಇತರರು ಹಾಜರಿದ್ದರು.

ಕನ್ನಡ ಚಿತ್ರರಂಗದೊಂದಿಗೆ ಹದಿನೆಂಟು ವರ್ಷಗಳ ನಂಟು ಹೊಂದಿರುವ ಜಗ್ಗಿ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಜಗ್ಗಿ ಅವರ ಪತ್ನಿ ಭಾರತಿ ಜಗ್ಗಿ ಈ ಚಿತ್ರದ ನಿರ್ಮಾಪಕರು.

ನಾನು ಚಿತ್ರ ನಿರ್ಮಾಣ ಮಾಡಲು ಮೂರು ಜನ ಮುಖ್ಯ ಕಾರಣ ಕಿಚ್ಚ ಸುದೀಪ್ ಸರ್, ನನ್ನ ಸ್ನೇಹಿತರಾದ ಯೋಗೀಶ್ ಹಾಗೂ ಸಾಜಿದ್ ಖುರೇಶಿ ಅವರು. ಹದಿನೆಂಟು ವರ್ಷಗಳ ಹಿಂದೆ ಪೈಂಟರ್ ಆಗಿ ಬಂದ ನಾನು, ಈಗ ನಿರ್ಮಾಪಕನಾಗಿದ್ದೇನೆ. ಚಿತ್ರ ನಿರ್ಮಾಣ ಅಂದುಕೊಂಡಷ್ಟು ಸುಲಭವಲ್ಲ. ಸಾಕಷ್ಟು ಶ್ರಮಪಟ್ಟು ಚಿತ್ರ ನಿರ್ಮಾಣ ಮಾಡಿದ್ದೀನಿ. ಆದಷ್ಟು ಹೊಸಬರಿಗೆ ಅವಕಾಶ ನೀಡಿದ್ದೀವಿ. ಸದ್ಯದಲ್ಲೇ ತೆರೆಗೆ ತರುತ್ತೇವೆ ಎಂದರು ನಿರ್ಮಾಪಕ ಜಗ್ಗಿ.

ಹಿಂದೆ ಪ್ರಥಮ್ ಅಭಿನಯದ “ದೇವ್ರಂಥ ಮನುಷ್ಯ” ಚಿತ್ರ ನಿರ್ದೇಶನ ಮಾಡಿದ್ದೆ. ಇದು ಎರಡನೇ ಚಿತ್ರ ಎಂದ ಕಿರಣ್ ಕುಮಾರ್ , ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ. ಎಲ್ಲರ ಸಹಕಾರದಿಂದ ಉತ್ತಮವಾಗಿ ಮೂಡಿಬಂದಿದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎನ್ನುತ್ತಾರೆ.

ನಾನು ಈ ಸಿನಿಮಾದಲ್ಲಿ ಅಭಿನಯಿಸುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಜಿಮ್ ನಲ್ಲಿ ನಿರ್ಮಾಪಕ ಜಗ್ಗಿ ಅವರನ್ನು ಭೇಟಿ ಯಾದೆ. ಕೆಲವು ದಿನಗಳ ನಂತರ ಜಗ್ಗಿ ಅವರು, ನಾನು ಒಂದು ಚಿತ್ರ ನಿರ್ಮಾಣ ಮಾಡುತ್ತಿದ್ದೇನೆ. ನೀವೇ ಅದರ ನಾಯಕ ಎಂದರು. ಇದೇನಪ್ಪ ನಾಯಕಿಗೆ ಇವರು ನಾಯಕ ಅನ್ನುತ್ತಿದ್ದಾರೆ ಅಂದುಕೊಂಡೆ. ಆಗ ಅವರು ಹೇಳಿದರು. ನಿಮ್ಮದೇ ಈ ಚಿತ್ರದಲ್ಲಿ ಮುಖ್ಯ ಪಾತ್ರ. ನೀವು ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಿರಿ ಅಂದಾಗ ಸಂತೋಷವಾಯಿತು ಎಂದು ಮುಖ್ಯ ಪಾತ್ರಧಾರಿ ರಿತನ್ಯ ಪೂವಯ್ಯ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು.

ಸಂಗೀತದ ಬಗ್ಗೆ ಹಿತನ್ ಹಾಸನ್, ಸಂಕಲನ ಕಾರ್ಯದ ಕುರಿತು ವಿಶ್ವ‌ ಹಾಗೂ ಅಭಿನಯದ ಬಗ್ಗೆ ಅಕ್ಷಯ್, ಮನೋಹರ್ ಮಾತನಾಡಿದರು. ಅಕ್ಷಯ್ ಈ ಚಿತ್ರಕ್ಕೆ ಕಥೆ ಕೂಡ ಬರೆದಿದ್ದಾರೆ. ಅರುಣ್ ಸುರೇಶ್ ಈ ಚಿತ್ರದ ಛಾಯಾಗ್ರಹಕರು.

Categories
ಸಿನಿ ಸುದ್ದಿ

ಬಡ್ಡೀಸ್ ಸಿನಿಮಾ ಮೂಲಕ ಭಾರತಿ ಶೆಟ್ಟಿ ಫಿಲಂಸ್ ಸಂಸ್ಥೆ ಕನ್ನಡಕ್ಕೆ ಎಂಟ್ರಿ…

ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೆಸರಾಂತ ಸಂಸ್ಥೆಗಳು ಉತ್ತಮ ಚಿತ್ರಗಳನ್ನು ನೀಡುತ್ತಾ ಬಂದಿವೆ. ಈಗ ಆ ಸಾಲಿಗೆ ಭಾರತಿ ಶೆಟ್ಟಿ ಫಿಲಂಸ್ ಸಂಸ್ಥೆ ಸಹ ಸೇರಿದೆ. ಈ ಸಂಸ್ಥೆಯ ಮೊದಲ ಚಿತ್ರವಾಗಿ ಕಿರಣ್ ರಾಜ್ ನಟನೆಯ “ಬಡ್ಡೀಸ್” ಚಿತ್ರ ನಿರ್ಮಾಣವಾಗುತ್ತಿದೆ.

ಮಂಗಳೂರು ಮೂಲದ ಭಾರತಿ ಶೆಟ್ಟಿ ಈ ಚಿತ್ರದ ನಿರ್ಮಾಪಕರಲ್ಲಿ ಒಬ್ಬರು. ದುಬೈ ನಿವಾಸಿಯಾಗಿರುವ ಇವರು ಅಲ್ಲಿ ಜಾಹಿರಾತು ಸಂಸ್ಥೆ ನಡೆಸುತ್ತಿದ್ದಾರೆ‌. ಉತ್ತಮ ಗುಣಮಟ್ಟವಿರುವ ಚಿತ್ರಗಳನ್ನು ನಿರ್ಮಿಸುವ ಉತ್ಸಾಹ ಭಾರತಿ ಶೆಟ್ಟಿ ಅವರದು.

ಕಿರುತೆರೆ ಹಾಗೂ ತಮ್ಮ ಸಾಮಾಜಿಕ ಕಾರ್ಯಗಳ ಮೂಲಕ ಗುರುತಿಸಿಕೊಂಡಿರುವ ಕಿರಣ್ ರಾಜ್, ಈಗ ಹಿರಿತೆರೆಯಲ್ಲೂ ಬ್ಯುಸಿ.
ಅವರು ಅಭಿನಯಿಸುತ್ತಿರುವ “ಬಡ್ಡೀಸ್” ಚಿತ್ರಕ್ಕೆ ಈಗಾಗಲೆ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ.
ಬೆಂಗಳೂರು, ಮಂಗಳೂರು, ಗೋವಾ, ತುಮಕೂರು ಮುಂತಾದ ಕಡೆ ಚಿತ್ರೀಕರಣ ನಡೆದಿದೆ. ಬಹುತೇಕ ಚಿತ್ರೀಕರಣ ಪೂರ್ಣವಾಗಿದೆ.‌ ಸ್ನೇಹದ ಮಹತ್ವ ಸಾರುವ ಈ ಚಿತ್ರದ ಫಸ್ಟ್ ಲುಕ್ ಮುಂದಿನವಾರ ಬಿಡುಗಡೆಯಾಗಲಿದೆ.‌

ಈ ಹಿಂದೆ ಗುರುವೇಂದ್ರ ಶೆಟ್ಟಿ ಎಂಬ ಹೆಸರಿನಿಂದ ಚಿತ್ರವೊಂದನ್ನು ನಿರ್ದೇಶಿಸಿದ್ದ ನಿರ್ದೇಶಕರು ಈ ಚಿತ್ರದಿಂದ ಗುರುತೇಜ್ ಶೆಟ್ಟಿ ಎಂದು ಹೆಸರು ಬದಲಿಸಿಕೊಂಡಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಹಾಡುಗಳನ್ನು ನಿರ್ದೇಶಕರೆ ಬರೆದಿದ್ದಾರೆ.

ಲಾಕ್ ಡೌನ್ ಸಮಯದಲ್ಲಿ ಇವರು ನಿರ್ದೇಶಿಸಿದ್ದ 5ಜಿ ಸಿನಿಮಾ ಝೇಂಕಾರ್ ಯೂಟ್ಯೂಬ್ ಚಾನಲ್ ಮೂಲಕ ಬಿಡುಗಡೆಯಾಗಿ ಮೆಚ್ಚುಗೆ ಪಡೆದಿತ್ತು.

ಮೂರು ಹಾಡುಗಳಿರುವ ಈ ಚಿತ್ರಕ್ಕೆ ಜ್ಯೂಡಾ ಸ್ಯಾಂಡಿ ಸಂಗೀತ ನೀಡುತ್ತಿದ್ದಾರೆ.

ಯು.ಎಸ್.ಎ ವಾಸಿ‌ ನಿಭಾ ಶೆಟ್ಟಿ‌ ಚಿತ್ರದ ಛಾಯಾಗ್ರಹಕರು. ಅಲ್ಲಿನ ಸಿನಿಮಾಗಳಿಗೆ ಹಾಗೂ ಜಾಹಿರಾತು ಗಳಿಗೆ ನಿಭಾ ಶೆಟ್ಟಿ ಕೆಲಸ ಮಾಡಿದ್ದಾರೆ. ಇವರು ಪ್ರತಿಷ್ಠಿತ ಎಮ್ಮಿ ಅವಾರ್ಡ್ ಗೆ ನಾಮಿನೇಟರ್ ಸಹ ಆಗಿದ್ದಾರೆ. ಕೆ.ಎಂ.ಪ್ರಕಾಶ್ ಸಂಕಲನ, ಧನಂಜಯ್ ನೃತ್ಯ ನಿರ್ದೇಶನ ಹಾಗೂ ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

ಕಿರಣ್ ರಾಜ್ ಗೆ ನಾಯಕಿಯಾಗಿ ಸಿರಿ ಪ್ರಹ್ಲಾದ್ ಅಭಿನಯಿಸುತ್ತಿದ್ದಾರೆ. ಗೋಪಾಲ್ ದೇಶಪಾಂಡೆ, ಅರವಿಂದ್ ಬೋಳಾರ್, ವಿನಯ್ ರೋಹನ್ ಸಾಯಿ, ಗಿರೀಶ್ ಮುಂತಾದವರು “ಬಡ್ಡೀಸ್” ನಲ್ಲಿ ಅಭಿನಯಿಸುತ್ತಿದ್ದಾರೆ.

error: Content is protected !!