ಜಲಪಾತದಿಂದ ಇಳಿದು ಬಂದ ಹಾಡಿದು! ಮಲೆನಾಡ ಉತ್ಸವದಲ್ಲಿ ಜಯಮಾಲ ರಿಲೀಸ್ ಮಾಡಿದ್ರು ಸಾಂಗ್

ರವೀಂದ್ರ ತುಂಬರಮನೆ ನಿರ್ಮಿಸಿ , ರಮೇಶ್ ಬೇಗಾರ್ ಶೃಂಗೇರಿ ರಚಿಸಿ ನಿರ್ದೇಶಿಸಿರುವ ಜಲಪಾತ ಚಿತ್ರದ 2 ನೇ ಹಾಡು ಇದೀಗ ಎ – 2 ಮ್ಯೂಸಿಕ್ ವಾಹಿನಿ ಮೂಲಕ ಬಿಡುಗಡೆಯಾಗಿದೆ. ಇತ್ತೀಚೆಗೆ ಚಿತ್ರ ತಂಡ ಆಯೋಜಿಸಿದ್ದ ‘ಜಲಪಾತ ಮಲೆನಾಡು ಉತ್ಸವ’ ಎಂಬ ಸಾಂಸ್ಕೃತಿಕ ಮೇಳದಲ್ಲಿ ನಟಿ ಜಯಮಾಲ ಅವರು ” ಎಲ್ಲಿ ಹೋದನೇ ಸಖಿ ” ಎಂಬ ಹಾಡನ್ನು ಬಿಡುಗಡೆ ಮಾಡಿದ್ದಾರೆ.

ಈ ಸಂದರ್ಭ ಮಾತಾಡಿದ ಜಯಮಾಲ, ತನ್ನ ಮಲೆನಾಡು ಮೂಲಕ ಚಿಕ್ಕಮಗಳೂರನ್ನು ನೆನಪಿಸಿಕೊಂಡು ಚಿತ್ರದ ನಾಯಕನಟಿ ನಾಗಶ್ರೀಗೆ ಯಶಸ್ಸು ಸಿಗಲಿ ಎಂದು ಶುಭ ಹಾರೈಸಿದರು.

ಇಡೀ ಸಿನಿಮಾದ ಆಶಯವೇ ವಿನಾಶದಂಚಿಗೆ ಸರಿದಿರುವ ಪರಿಸರದ ಕುರಿತು ಕಾಳಜಿ ಮೂಡಿಸುವಂಥದ್ದು. ವ್ಯಾವಹಾರಿಕ ಉದ್ದೇಶಗಳಿಲ್ಲದೇ ನಿಜವಾದ ಪ್ರಕೃತಿ ಪ್ರೀತಿಯಿಂದ ನಿರ್ಮಿಸಿದ ಈ ಚಿತ್ರ ಖಂಡಿತಾ ಜನರಮನಸ್ಸು ಗೆಲ್ಲಲಿದೆ ಎಂದರು ಜಯಮಾಲ.

ನಿರ್ಮಾಪಕ ಟಿ ಸಿ ರವೀಂದ್ರ ತುಂಬರಮನೆ ಮಾತನಾಡಿ, ನಾವು ಸಿನಿಮಾದಲ್ಲಿ ಹೆಚ್ಚು ಗ್ರಾಮೀಣ ಪ್ರತಿಭೆಗಳನ್ನೇ ಬಳಸಿಕೊಂಡು ಅವರಿಗೊಂದು ವೇದಿಕೆ ಒದಗಿಸಿದ್ದೇವೆ. ಬಹಳ ಅರ್ಥಪೂರ್ಣವಾದ ಈ ಲವ್ ಸಾಂಗ್ ಅನ್ನು ವನಿತಾ ವೆಂಕಟೇಶ್ ಎಂಬ ಗೃಹಿಣಿ ಬರೆದಿದ್ದಾರೆ ಎಂದರು ನಿರ್ದೇಶಕ ರಮೇಶ್ ಬೇಗಾರ್. ಸಂಗೀತ ನಿರ್ದೇಶಕಿ ಸಾದ್ವಿನಿ ಕೊಪ್ಪ ಕೂಡ ಹಾಡುಗಳ ಬಗ್ಗೆ ಮಾತನಾಡಿದರು.

ಎಲ್ಲಿ ಹೋದನೇ ಸಖೀ ಹಾಡನ್ನು ವನಿತಾ ವೆಂಕಟೇಶ್ ಬರೆದಿದ್ದಾರೆ. ಶ್ರೀನಿಧಿ ಶಾಸ್ತ್ರೀ ಇವರೊಂದಿಗೆ ಡ್ಯುಯೆಟ್ ಹಾಡಿದ್ದಾರೆ. ಚಿತ್ರ ಸೆಪ್ಟೆಂಬರ್ 29 ಕ್ಕೆ ತೆರೆ ಕಾಣಲಿದೆ.

Related Posts

error: Content is protected !!