ಪ್ರಜ್ವಲ್ ಅಬ್ಬರಿಸಲು ರೆಡಿ! ನವೆಂಬರ್ 18ಕ್ಕೆ ಅಬ್ಬರ ರಿಲೀಸ್…

ಪ್ರಜ್ವಲ್ ಮತ್ತು ನಿರ್ದೇಶಕ ರಾಮ್ ನಾರಾಯಣ್ ಕಾಂಬಿನೇಷನ್ ಮೂಲಕ ರೆಡಿಯಾಗಿರುವ ಅಬ್ರಾಬರ ರಾಜ್ಯಾದ್ಯಂತ ನವೆಂಬರ್ 18ರಂದು ಬಿಡುಗಡೆಯಾಗುತ್ತಿದೆ. ಚಿತ್ರ ರಿಲೀಸ್‌ಗೂ ಮುನ್ನ ಟ್ರೇಲರ್ ಸಾಕಷ್ಟು ಕುತೂಹಲ ಮೂಡಿಸಿದೆ. ಹಿರಿಯ ನಟ ದೇವರಾಜ್ ಅವರು ಚಿತ್ರದ
ಟ್ರೇಲರ ಅನಾವರಣಗೊಳಿಸಿ ತಂಡಕ್ಕೆ ಶುಭ ಹಾರೈಸಿದ್ದಾರೆ. ಟೈಸನ್, ಕ್ರ‍್ಯಾಕ್ ನಂತರ ರಾಮ್‌ನಾರಾಯಣ್ ನಿರ್ದೇಶಿಸಿರುವ ಈ ಚಿತ್ರವನ್ನು ಸಿ. ಅಂಡ್ ಎಂ.ಮೂವೀಸ್ ಬ್ಯಾನರ್ ನಲ್ಲಿ ಬಸವರಾಜ್ ಮಂಚಯ್ಯ ಅವರು ನಿರ್ಮಿಸಿದ್ದಾರೆ. ಆ್ಯಕ್ಷನ್,
ಫ್ಯಾಮಿಲಿ, ಕಾಮಿಡಿ ಎಂಟರ್‌ಟೈನರ್ ಕಥಾಹಂದರ ಹೊಂದಿರೋ ಈ ಚಿತ್ರದಲ್ಲಿ ಪ್ರಜ್ವಲ್ ಜೊತೆ ರಾಶಿಪೊನ್ನಪ್ಪ, ನಿಮಿಕಾ ರತ್ನಾಕರ್ ಹಾಗೂ ಲೇಖಾಚಂದ್ರ ನಾಯಕಿಯರಾಗಿ ಅಭಿನಯಿಸಿದ್ದಾರೆ.


ಸಿನಿಮಾ ಕುರಿತು ನಿರ್ದೇಶಕ ರಾಮ್‌ನಾರಾಯಣ್ ಹೇಳಿದ್ದಿಷ್ಟು, ನವೆಂಬರ್ 18ಕ್ಕೆ ಅಬ್ಬರ ಬಿಡುಗಡೆಯಾಗುತ್ತಿದೆ. ಎಂಟರ್ಟೈನ್ಮೆಂಟ್ ಜೊತೆಗೆ ಆತಂಕವೂ ಇದೆ. ಈ ಸೀನ್‌ಗೆ, ಈ ಫೈಟ್‌ಗೆ, ಈ ಹಾಡಿಗೆ ಜನ ಏನೆನ್ನಬಹುದು ಎಂಬ ಕುತೂಹಲವಿದೆ. ಆದರೆ ಸಿನಿಮಾ ಗೆದ್ದೇ ಗೆಲ್ಲುತ್ತೆ ಎಂಬ ಭರವಸೆಯಿದೆ. ಅಬ್ಬರ ಡೇ ಒನ್‌ನಿಂದ ಅಬ್ಬರವಾಗೇ ಬರುತ್ತಿದೆ. ಆರಂಭದಲ್ಲಿ ಟೈಟಲ್‌ನ್ನು ಎಸ್.ಗೋವಿಂದ್ ಅವರು ನಮಗೆ ಬಿಟ್ಟುಕೊಟ್ಟರು. ಅಂದುಕೊಂಡದ್ದಕ್ಕಿಂತ ಚೆನ್ನಾಗಿಯೇ ಚಿತ್ರ ಬಂದಿದೆ. ಹಾಡಿನ ಸಮಯದಲ್ಲಿ ನಿಮಿಕಾಗೆ ಕಾಲು ಪೆಟ್ಟಾದರೂ ತೋರಿಸಿಕೊಳ್ಳದೆ ಅಭಿನಯಿಸಿದರು. ಚಿತ್ರದ ಟೈಟಲನ್ನು ಶಿವರಾಜ್‌ಕುಮಾರ್ ರಿಲೀಸ್ ಮಾಡಿದ್ದರು.
ಈಗ ದೇವರಾಜ್ ಟ್ರೇಲರ್ ರಿಲೀಸ್ ಮಾಡಿದ್ದಾರೆ. ನಿರ್ಮಾಪಕರ ಹೆಸರೂ ಬಸವರಾಜ್, ಹೀಗೆ ನಮ್ಮ ಸಿನಿಮಾಗೆ ರಾಜ್ ಎನ್ನುವ ಹೆಸರು ಶಕ್ತಿಯಾಗಿ ನಿಂತಿದೆ. ರವಿಶಂಕರ್ ಅತ್ಯದ್ಭುತವಾಗಿ ಅಭಿನಯಿಸಿದ್ದಾರೆ, ಅವರಿಗೆ ಎರು ಶೇಡ್ಸ್ ಇದೆ. ಶೋಭರಾಜ್, ಶಂಕರ್ ಅಶ್ವಥ್, ವಿಕ್ಟರಿವಾಸು, ಕೋಟೆ ಪ್ರಭಾಕರ್ ತುಂಬಾ ಚೆನ್ನಾಗಿ ಆಕ್ಟ್
ಮಾಡಿದ್ದಾರೆ. ಅಲ್ಲದೆ ರವಿ ಬಸ್ರೂರು ಒಳ್ಳೆಯ ಹಾಡುಗಳನ್ನು ಮಾಡಿಕೊಟ್ಟಿದ್ದಾರೆ. ಜೆ.ಕೆ.ಗಣೇಶ್ ಕ್ಯಾಮೆರಾವರ್ಕ್ ನಿಭಾಯಿಸಿದ್ದು, ಮೂವರು ನಾಯಕಿಯರೂ ಪೈಪೋಟಿಗೆ ಬಿದ್ದವರಂತೆ ಅಭಿನಯಿಸಿದ್ದಾರೆ
ಎಂದರು.


ನಿರ್ಮಾಪಕ ಬಸವರಾಜ್ ಮಂಚಯ್ಯ ಮಾತನಾಡಿ, ಕೋವಿಡ್ ಆಗಷ್ಟೇ ಮುಗಿದಿತ್ತು. ಹಾಡುಗಳನ್ನು ಫಾರಿನ್‌ನಲ್ಲಿ ಶೂಟ್ ಮಾಡಲು ಪ್ರಜ್ವಲ್ ಒಪ್ಪಿದರು. ಎರಡು ಹಾಡುಗಳನ್ನು ಥೈಲ್ಯಾಂಡ್‌ನಲ್ಲೇ
ಶೂಟ್ ಮಾಡಿದ್ದೇವೆ. ತೆರೆಯ ಹಿಂದೆ ನಾವಿದ್ದರೂ, ತೆರೆಯ ಮುಂದೆ ಅವರೆಲ್ಲ ಪಟ್ಟಿರುವ ಶ್ರಮವನ್ನು ಜನರೆಲ್ಲ ನೋಡುತ್ತಾರೆ. ತಂದೆ ಒಂದು ಒಂದು ತಪ್ಪು ಮಾಡುತ್ತಾನೆ, ಅದನ್ನು ಸರಿಪಡಿಸುವುಕ್ಕೆ ಹೋಗಿ ಮತ್ತೊಂದು ತಪ್ಪು ಮಾಡುತ್ತಾನೆ. ನಂತರ ಮಗ ಅದನ್ನು ಹೇಗೆ ಸರಿಪಡಿಸ್ತಾನೆ ಅನ್ನೋದೇ ಈ ಚಿತ್ರದ ಕಥೆ. ಹಾಗಾಗಿ ನಾಯಕನ ತಂದೆ ದೇವರಾಜ್ ಅವರೇ ಟ್ರೇಲರ್ ರಿಲೀಸ್ ಮಾಡಿದ್ದಾರೆ ಎಂದರು.


ದೇವರಾಜ್ ಮಾತನಾಡಿ ಟ್ರೇಲರ್ ಹಾಡುಗಳು ತುಂಬಾ ಚೆನ್ನಾಗಿ ಬಂದಿವೆ. ಚಿತ್ರದ ಮೂವರು ನಾಯಕಿಯರು ಮಗನ ಬಗ್ಗೆ ಒಳ್ಳೆಯ ಮಾತುಗಳನ್ನು ಹೇಳಿದಾಗ ಒಬ್ಬ ತಂದೆಯಾಗಿ ನನಗೆ ತುಂಬಾ ಖುಷಿಯಾಯ್ತು. ಕನ್ನಡ ಚಿತ್ರರಂಗಕ್ಕೀಗ ಶುಕ್ರದೆಸೆ ಬಂದಿದೆ. ಇಡೀ ದೇಶ ಹೊಗಳುತ್ತಿದೆ. ರಾಮ ನಾರಾಯಣ್ ಜೊತೆ ನಾನೂ ಕೆಲಸ ಮಾಡಿದ್ದೇನೆ. ಒಬ್ಬ ಸಾಹಿತಿಯ ಕೈಲಿ ಬಂದಿರುವ ಡೈಲಾಗ್‌ಗಳು ತುಂಬಾ ಚೆನ್ನಾಗಿರುತ್ತೆ. ಅವರು ಆಡೋ ಮಾತಲ್ಲಿ ನಾಟಕೀಯತೆ ಕಾಣಲಿಲ್ಲ ಎಂದು ಹೇಳಿದರು.

ನಾಯಕ ಪ್ರಜ್ವಲ್ ಮಾತಾಡಿ, ಚಿತ್ರದ ರಿಲೀಸ್ ಹತ್ತಿರವಾಗ್ತಿದ್ದಂತೆ ಎಕ್ಸೈಟ್‌ಮೆಂಟ್ ಇರುತ್ತೆ, ಆದರೆ ಈ ಸಿನಿಮಾ ಮಾಡಿದಮೇಲೆ
ನೆಮ್ಮದಿ ಕಾಣಿಸ್ತಿದೆ. ಚಿತ್ರ ಇಷ್ಟು ಚೆನ್ನಾಗಿ ಬರಲು ಇಡೀತಂಡ ಹಾಕಿದ ಎಫರ್ಟ್ ಕಾರಣ. ಚಿತ್ರದಲ್ಲಿ ನನಗೆ ಮೂರು ವಿಭಿನ್ನವಾದ ಪಾತ್ರಗಳಿದ್ದು, ೫ ರೀತಿಯಲ್ಲಿ ಕಾಣಿಸಿಕೊಳ್ಳುತ್ತೇನೆ. ಒಂದೇದಿನ ಮೂರೂ
ಪಾತ್ರಗಳನ್ನು ಮಾಡಬೇಕಾಗಿತ್ತು. ಕಾಮಿಡಿ, ಎಂಟರ್‌ಟೈನಿಂಗ್ ಜೊತೆಗೆ ಒಂದು ರಿವೆಂಜ್ ಥಾಟ್ ಚಿತ್ರದಲ್ಲಿದೆ.
ಅದು ಚಿತ್ರದ ಕೊನೇವರೆಗೂ ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸುತ್ತಲೇ ಇರುತ್ತದೆ. ನಾನು
ನಡೆಯುವ ದಾರಿ ಹೀಗೇ ಇರಬೇಕು ಅಂದುಕೊಂಡಿರುತ್ತೇವೆ. ಆದರೆ, ಅದು ಹೋಗ್ತಾ ಹೋಗ್ತಾ ಕಳೆದುಹೋಗುತ್ತದೆ. ಮನುಷ್ಯ ಯಾವಾಗಲೂ ಜಾಗೃತನಾಗಿರಬೇಕು ಎನ್ನುವುದೇ ಚಿತ್ರದ ಸಂದೇಶ ಎಂದು ಹೇಳಿದರು.

ನಾಯಕಿಯರಾದ ನಿಮಿಕಾ ರತ್ನಾಕರ್, ಲೇಖಾಚಂದ್ರ ಹಾಗೂ ರಾಜಶ್ರೀ ಪೊನ್ನಪ್ಪ ಇವರೆಲ್ಲರೂ ಚಿತ್ರೀಕರಣದ ಅನುಭವಗಳು ಹಾಗೂ ತಮ್ಮ ಪಾತ್ರಗಳ ಬಗ್ಗೆ
ಹೇಳಿಕೊಂಡರು.

Related Posts

error: Content is protected !!