ಅಪ್ಪು- ಚಿರು- ವಿಜಯ್ ಹುಟ್ಟು- ಸಾವು- ’17’ ನೋವು; ವಿಧಿ ಲಿಖಿತವೋ- ಕಾಕತಾಳೀಯವೋ ?

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ – ಯುವಸಾಮ್ರಾಟ್ ಚಿರಂಜೀವಿ ಸರ್ಜಾ- ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ನಮ್ಮ ಸ್ಯಾಂಡಲ್ ವುಡ್ ಗೆ ದಕ್ಕಿದ ಅಪ್ರತಿಮ ಪ್ರತಿಭೆಗಳು. ಸಿನಿಮಾನೇ ಉಸಿರಾಗಿಸಿಕೊಂಡು ಬದುಕಿದ ಈ‌ ಮೂವರು ಧ್ರುವತಾರೆಗಳು ವಿಧಿಯ ಆಟಕ್ಕೆ ‌ಬಲಿಯಾಗಿಬಿಟ್ಟರು.
ಬಹುಬೇಗ ಎಲ್ಲರನ್ನೂ ತೊರೆದು ಬಾರದ ಲೋಕಕ್ಕೆ ‌ಮರಳಿದರು.ಅಲ್ಪಾವಧಿಯಲ್ಲಿ ಮೂವರು ಅಪ್ರತಿಮ ಕಲಾವಿದರನ್ನು ಕಳೆದುಕೊಂಡು ಗಂಧದಗುಡಿ ಬಡವಾಗಿದೆ. ಕರುನಾಡು ಮಮ್ಮಲ ಮರುಗುತ್ತಿದೆ. ಇದೇ ಹೊತ್ತಲ್ಲಿ‌ ಹದಿನೇಳನೇ ನಂಬರ್ ಬಹಳಷ್ಟು ಚರ್ಚೆಗೆ ಗ್ರಾಸವಾಗ್ತಿದೆ.

ಹೌದು, 17 ಅಪ್ಪು- ಚಿರು- ವಿಜಯ್ ಹುಟ್ಟಿದ ದಿನ. ಭೂಮಿಗೆ ಬಂದ ವರ್ಷ- ತಿಂಗಳು ಬೇರೆಯಾಗಿರಬಹುದು, ಆದರೆ ಹುಟ್ಟಿದ ದಿನಾಂಕ ಒಂದೇ. ಮಾತ್ರವಲ್ಲ ಉಸಿರು ಚೆಲ್ಲಿದ ವರ್ಷ- ತಿಂಗಳು- ದಿನಾಂಕವನ್ನು ಕೂಡಿದರೆ ಮತ್ತದೇ ಹದಿನೇಳನೇ ನಂಬರ್ ಬರುತ್ತೆ. ಈ ನಂಬರ್,
ಈ ಮೂವರು ಸ್ಟಾರ್ ನಟರಿಗೆ ಕಂಟಕವಾ ಗೊತ್ತಿಲ್ಲ ? ಇವರುಗಳ ಅಕಾಲಿಕ ಸಾವು ವಿಧಿಲಿಖಿತವಾ ? ಅಥವಾ ಕಾಕತಾಳಿಯವಾ? ಇದೂ ಕೂಡ ಗೊತ್ತಿಲ್ಲ. ಆದರೆ, ಕಳೆದ ಒಂದೂವರೆ ವರ್ಷಗಳಲ್ಲಿ ಈ ಮೂವರು ನಟರನ್ನು ಕಳೆದುಕೊಂಡಿದ್ದೇವೆ.

ಒಬ್ಬರ ಅಗಲಿಕೆಯನ್ನು ಅರಗಿಸಿಕೊಳ್ಳುವ ಹೊತ್ತಿಗೆ ಮತ್ತೊಬ್ಬರ ಅಕಾಲಿಕವಾಗಿ ಮರಣ ಹೊಂದುತ್ತಿದ್ದಾರೆ. ಯುವಸಾಮ್ರಾಟ್ ಹಠಾತ್ತನೇ ಅಗಲಿದರು. ಇವರ ನಂತರ ಅಪಘಾತದಲ್ಲಿ ಸಂಚಾರಿ ವಿಜಯ್ ಹೋದರು. ಇದೀಗ, ಅಪ್ಪು ಹೃದಯಾಘಾತಗೊಂಡು ಉಸಿರು ಚೆಲ್ಲಿದ್ದಾರೆ. ಈ ಮೂವರು ಒಂದೇ ದಿನಾಂಕದಂದು ಹುಟ್ಟಿದವರು. ಇಷ್ಟವಿಲ್ಲದಿದ್ದರೂ ವಿಧಿಯಾಟಕ್ಕೆ‌ ಬಲಿಯಾದವರು.

ಹೌದು, ಅಕ್ಟೋಬರ್ 17, 1984ರಲ್ಲಿ ಚಿರಂಜೀವಿ ಸರ್ಜಾ ಜನಿಸಿದ್ದರು. ಸಿನಿಮಾ ಹಿನ್ನಲೆ ಕುಟುಂಬದಿಂದ ಬಂದ ಚಿರು ಯುವಸಾಮ್ರಾಟ್ ಎನಿಸಿಕೊಂಡರು. ಗಂಧದಗುಡಿಗೆ ಕೊಡುಗೆ ನೀಡಲು ಹೊತೊರೆಯತ್ತಿದ್ದರು. ಆದರೆ, 2020 ಜೂನ್ 7 ರಂದು ಹಠಾತ್ ಹೃದಯಘಾತ ಸಂಭವಿಸಿ ಪ್ರಾಣಬಿಟ್ಟರು. ಇನ್ನೂ ಸಂಚಾರಿ ವಿಜಯ್ ಕೂಡ ಕಲೆಗಾಗಿ ಜೀವಕೊಡುತ್ತಿದ್ದವರು.


ಜುಲೈ 17, 1983 ರಲ್ಲಿ ಜನಿಸಿದ್ದ ಇವರು, 2021, ಜೂನ್ 15 ರಂದು ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡರು. ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದರೂ ಕೂಡ ಉಳಿಯಲಿಲ್ಲ. ಈಗ ಅಪ್ಪು ಕೂಡ ಆಸ್ಪತ್ರೆಗೆ ಹೋಗಿ ವಾಪಾಸ್ ಬರಲಿಲ್ಲ. ಸುಸ್ತು ಎನ್ನುತ್ತಲೇ ಆಸ್ಪತ್ರೆಗೆ ಹೋದ ಅಪ್ಪು ಕಾರ್ಡಿಯಕ್ ಅರೆಸ್ಟ್ ಆಗಿ ಹೋಗೆಬಿಟ್ಟರು. ಮಾರ್ಚ್​​ 17, 1975ರಲ್ಲಿ ಜನಿಸಿದ ಪುನೀತ್ ಅವರು ಅಕ್ಟೋಬರ್ 29 ರಂದು ಇಹಲೋಕ ತ್ಯಜಿಸಿದರು. ಅರ್ಧವಯಸ್ಸಿಗೆ ಬದುಕು ಮುಗಿಸಿ ಮರಳಿ ಬಾರದೂರಿಗೆ ಹೋಗಿರುವ ಈ ಮೂವರು ತಾರೆಯರಿಗೆ ಹದಿನೇಳನೇ ನಂಬರ್ ಕಂಟಕವಾಯ್ತಾ ? ಭಗವಂತನೇ ಬಲ್ಲ ಗುರು

ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Related Posts

error: Content is protected !!