ಅಪ್ಪು ನೋಡಿ ಭಾವುಕರಾದ ತೆಲುಗು ಸ್ಟಾರ್ಸ್‌ ; ಪುನೀತ್‌ ಸರಳತೆ ಗುಣಗಾನ ಮಾಡಿದ ಟಾಲಿವುಡ್ ಕಲಾವಿದರು

ಪುನೀತ್ ರಾಜ್‌ಕುಮಾರ್‌ ಅವರ ದರ್ಶನಕ್ಕೆ ಭಾರತೀಯ ಚಿತ್ರರಂಗವೇ ಕಂಬನಿ ಮಿಡಿದಿದೆ. ಅದರಲ್ಲೂ ಸೌತ್‌ ಇಂಡಿಯ ಫಿಲ್ಮ್‌ ಇಂಡಸ್ಟ್ರಿಯಂತೂ ಅಪ್ಪು ನಿಧನವನ್ನು ಸಹಿಸಿಕೊಳ್ಳುತ್ತಿಲ್ಲ. ಜನಸಾಗರದ ನಡುವೆಯೇ ತೆಲುಗಿನ ಖ್ಯಾತ ನಟರಾದ ಚಿರಂಜೀವಿ, ಬಾಲಕೃಷ್ಣ, ಅರ್ಜುನ್‌ ಸರ್ಜಾ, ವೆಂಕಟೇಶ್‌, ಜೂನಿಯರ್‌ ಎನ್ ಟಿ ಆರ್, ಶ್ರೀಕಾಂತ್‌, ಅಲಿ, ರಾಣಾ ದಗ್ಗುಬಾಟಿ, ಪ್ರಭುದೇವ ಪುನೀತ್​ ಪಾರ್ಥಿವ ಶರೀರ ನೋಡಿ ಭಾವುಕರಾದರು. ಈ ವೇಳೆ ಎಲ್ಲರೂ ಕೂಡ ಪಕ್ಕದಲ್ಲೇ ನಿಂತಿದ್ದ ಶಿವರಾಜ್‌ಕುಮಾರ್‌ ಅವರನ್ನು ತಬ್ಬಿಕೊಂಡು ಸಂತೈಸಿದರು. ಜ್ಯೂ.ಎನ್​.ಟಿ.ಆರ್.​ ರಾಜ್​​ಕುಮಾರ್ ಅವರ ಕುಟುಂಬದೊಂದಿಗೆ ಅತ್ಯುತ್ತಮ ಬಾಂಧವ್ಯವನ್ನು ಹೊಂದಿದ್ದರು. ಅಲ್ಲದೇ ಪುನೀತ್​ ಅವರ ಚಕ್ರವ್ಯೂಹ ಸಿನಿಮಾದಲ್ಲಿ ನಟ ಎನ್​​ಟಿಆರ್​ ಅವರು ಗೆಳೆಯ ಗೆಳೆಯ ಹಾಡನ್ನು ಹಾಡಿದ್ದರು. ಈ ವೇಳೆ ಎಲ್ಲರೂ ಪುನೀತ್‌ ಅವರ ಸರಳತೆ ಕುರಿತು ಮಾತಾಡಿದರು.

“ಪುನೀತ್​ ಇಲ್ಲ ಅನ್ನೋದು ಕನ್ನಡ ಚಿತ್ರರಂಗಕ್ಕೆ ಮಾತ್ರ ನಷ್ಟವಲ್ಲ, ನನಗೆ ವೈಯಕ್ತಿಕ ನಷ್ಟ . ಹುಟ್ಟಿದ ಬಳಿಕ ಎಲ್ಲರೂ ಸಾಯಬೇಕು.. ಆದರೆ ಸಾಯೋ ವೇಳೆಗೆ ಜನರ ಮನಸ್ಸಿನಲ್ಲಿ ಉಳಿದು ಹೋಗುವಂತಹ ಕೆಲಸ ಮಾಡಬೇಕಾಗುತ್ತದೆ. ಯಾರು ತಾವು ಹುಟ್ಟಿದ ದೇಶ, ಊರು, ಕುಟುಂಬಕ್ಕೆ ಪ್ರತಿಷ್ಠೆಯನ್ನು ತಂದು ಕೊಡುತ್ತಾರೋ ಅವರ ಜನುಮ ಸಾರ್ಥಕವಾಗುತ್ತದೆ. ಕನ್ನಡ ಚಲನಚಿತ್ರ ರಂಗದಲ್ಲಿ ಪುನೀತ್ ಅವರ ಸ್ಥಾನವನ್ನು ಯಾರು ತುಂಬಲು ಆಗೋದಿಲ್ಲ. ಒಬ್ಬ ಕಲಾವಿದನಾಗಿ, ಅವರ ಸಾಮಾಜಿಕ ಕಾರ್ಯಗಳೊಂದಿಗೆ ಮೇರು ವ್ಯಕ್ತಿಯಾಗಿ ಅವರ ಮೂರ್ತಿಯನ್ನು ನನ್ನ ಹೃದಯದಲ್ಲಿ ಇರಿಸಿಕೊಳ್ಳುತ್ತೇನೆ.

-ಬಾಲಕೃಷ್ಣ, ತೆಲುಗು ನಟ

“ಪುನೀತ್ ಅಗಲಿಕೆ ನಮಗೂ ನೋವು ತಂದಿದೆ. ನಮ್ಮ ಅಪ್ಪು ಹೋದ ದೇವರು ಅನ್ಯಾಯ ಮಾಡಿಬಿಟ್ಟ. ಮಿಸ್ ಯೂ ಅಪ್ಪು. ರಾಜ್​​ಕುಮಾರ್ ಕುಟುಂಬದ ಜೊತೆಗೆ ಸುಮಧುರ ಬಾಂಧವ್ಯವಿದೆ. ಎರಡು ಕುಟುಂಬಗಳಲ್ಲಿ ಯಾವುದೇ ಸಮಾರಂಭ ನಡೆದರು ಪರಸ್ಪರ ಭಾಗಿಯಾಗುತ್ತಿದ್ದೆವು. ನಾನು ಬೆಂಗಳೂರಿಗೆ ಯಾವಾಗ ಬಂದ್ರೂ ರಾಜ್​ಕುಮಾರ್ ಅವರ ಮನೆಗೆ ಹೋಗ್ತಿದ್ದೆ. ಇತ್ತೀಚೆಗೂ ನಾನು ಪುನೀತ್ ಅವರನ್ನ ಭೇಟಿಯಾಗಿದ್ದೆ. ಅವರು ತುಂಬಾ ಒಳ್ಳೆಯ ವ್ಯಕ್ತಿ. ನಮ್ಮ ಪುನೀತ್​ ರಾಜ್​ಕುಮಾರ್ ಅವರಿಗೆ ಸ್ವರ್ಗ ಲೋಕದಲ್ಲಿ ಅವರ ಆತ್ಮಕ್ಕೆ ಶಾಂತಿ ಸಿಗಬೇಕು ಎಂದು ಪ್ರಾರ್ಥಿಸುತ್ತೇನೆ


ಚಿರಂಜೀವಿ, ತೆಲುಗು ನಟ

ಪುನೀತ್​ರ ಅಗಲಿಕೆ ಕರ್ನಾಟಕಕ್ಕೆ ಮಾತ್ರವಲ್ಲ ನಮಗೆಲ್ಲ ಅತಿ ದೊಡ್ಡ ನಷ್ಟ. ರಾಜರತ್ನ ಅಪ್ಪುನಾ ಕಳೆದುಕೊಂಡ ಅವರ ಕುಟುಂಬಕ್ಕೆ ಭಗವಂತ ಶಕ್ತಿ ನೀಡಲಿ.

ವಿಕ್ಟರಿ ವೆಂಕಟೇಶ್, ತೆಲುಗು ನಟ

“ಅಪ್ಪು ಸಾವಿನಿಂದ ನಮಗೆಲ್ಲ ತುಂಬಾ ನೋವಾಗ್ತಿದೆ. ಜೇಮ್ಸ್ ಚಿತ್ರದಲ್ಲಿ ನಾನು ಸ್ಕ್ರೀನ್ ಶೇರ್ ಮಾಡಿದ್ದೀನಿ. 45 ಒಟ್ಟಿಗೆ ಕೆಲಸ ಮಾಡಿದ್ದೇವೆ. ಯಾರು ಬಂದ್ರೂ ರೆಸ್ಪೆಕ್ಟ್ ಕೊಡ್ತಿದ್ರು. ಎಲ್ಲರಿಗೂ ರೆಸ್ಪೆಕ್ಟ್ ಕೊಟ್ಟು ಮಾತನಾಡಿಸ್ತಾರೆ. ತೆಲುಗಿನಲ್ಲಿ ಎಲ್ಲಾ ಹೀರೋಗಳೂ ಪುನೀತ್ ಅವರನ್ನ ರೆಸ್ಪೆಕ್ಟ್ ಮಾಡ್ತಿದ್ರು.

ಕಳೆದ ವಾರ ಅವರನ್ನು ಫೋನ್ ಮೂಲಕ ಮಾತಾಡಿಸಿದ್ದೆ. ಶಿವಣ್ಣ ನಾವೆಲ್ಲ 25 ವರ್ಷಗಳಿಂದ ಪರಿಚಿತರು. ಅಪ್ಪು ಕಳೆದುಕೊಂಡು ನೋವಲ್ಲಿರೋ ದೊಡ್ಮನೆ ಕುಟುಂಬಕ್ಕೆ ದುಃಖ ಬರಿಸೋ ಶಕ್ತಿ ಕೊಡಲಿ ದೇವರು.
ಶ್ರೀಕಾಂತ್‌, ತೆಲುಗು ನಟ.

Related Posts

error: Content is protected !!