ಗೋಲ್ಡ್‌ ಹಿಡಿದ ದಿಗಂತ್‌ !‌ ಹಿನ್ನೆಲೆ ಸಂಗೀತದಲ್ಲಿ ಮಾರಿಗೋಲ್ಡ್ ನಿರತ; ಇಷ್ಟರಲ್ಲೇ ತೆರೆಗೆ


 ಆರಂಭದಿಂದಲೂ  ತನ್ನ ಶೀರ್ಷಿಕೆಯ  ಮೂಲಕವೇ ನಿರೀಕ್ಷೆ ಹುಟ್ಟಿಸಿರುವ‍, ತೀರ್ಥಳ್ಳಿ ಹುಡುಗ  ದಿಗಂತ್‌ ಅಭಿನಯದ  ಚಿತ್ರ ಮಾರಿಗೋಲ್ಡ್. ಈಗಾಗಲೇ ಚಿತ್ರದ ಪೋಸ್ಟ್‌ ‌ಪ್ರೊಡಕ್ಷನ್ ಕೆಲಸಗಳು  ಪ್ರಗತಿಯಲ್ಲಿದ್ದು, ಚಿತ್ರದ ಡಬ್ಬಿಂಗ್ ಕಾರ್ಯ ಮುಗಿದು, ಹಿನ್ನೆಲೆ ಸಂಗೀತದ ಕೆಲಸ ಕೊನೇ ಹಂತದಲ್ಲಿದೆ.  ಇಷ್ಟರಲ್ಲೇ   ಸೆನ್ಸಾರ್ ಅಂಗಳಕ್ಕೆ  ಹೋಗಲು ಸಿದ್ದವಾಗಿರುವ ‘ಮಾರಿಗೋಲ್ಡ್’ ಚಿತ್ರ. ಸದ್ಯದಲ್ಲೇ  ಪ್ರೇಕ್ಷಕರ ಮುಂದೆ ಬರಲಿದೆ.  ಪಕ್ಕಾ ಕ್ರೈಮ್‌ ಥ್ರಿಲ್ಲರ್‌ ಕಥಾನಕ‌ ಹೊಂದಿರುವ  ಈ ಚಿತ್ರವನ್ನು ರಾಘವೇಂದ್ರ ಎಂ.ನಾಯಕ್‌  ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.  ಇದು ರಾಘವೇಂದ್ರ ನಾಯಕ್  ಅವರಿಗೆ  ಮೊದಲ ನಿರ್ದೇಶನದ ಚಿತ್ರ.  


ಈಗಾಗಲೇ ವಿಭಿನ್ನ ಗೆಟಪ್ನ  ದಿಗಂತ್ ಅವರ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದ್ದು,  ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಅಲ್ಲದೆ ಇದೇ ಮೊದಲ ಬಾರಿಗೆ ದಿಗಂತ್ ಹೊಸ ರೀತಿಯ  ಪಾತ್ರದ ಮೂಲಕ  ಪ್ರೇಕ್ಷಕರಿಗೆ  ಮೋಡಿ ಮಾಡಲಿದ್ದಾರೆ.
“ಮಾರಿಗೋಲ್ಡ್‌” ಅಂದಾಕ್ಷಣ, ಅದೊಂದು ಅಂಡರ್‌ವರ್ಲ್ಡ್‌ ಸಿನಿಮಾ ಇರಬಹುದಾ ಎಂಬ ಪ್ರಶ್ನೆ ಎದುರಾಗುತ್ತದೆ. ಆದರೆ, ಅದು ಅಂಡರ್‌ವರ್ಲ್ಡ್‌ ಸಿನಿಮಾನಾ ಅಥವಾ ರೌಡಿಸಂ ಕುರಿತಾದ ಕಥೆಯೇ ಎಂಬುದಕ್ಕೆ ಚಿತ್ರ  ರಿಲೀಸಾಗೋವರೆಗೆ  ಕಾಯಬೇಕು.


  ಆರ್.ವಿ.ಕ್ರಿಯೇಷನ್ಸ್ ಮೂಲಕ ರಘುವರ್ಧನ್ ಫಿಲ್ಮ್ಸ್ ಬ್ಯಾನರ್ ನಲ್ಲಿ  ರಘುವರ್ಧನ್‌ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ರಘುವರ್ಧನ್‌ ಅವರು ಮೂಲತಃ ನಿರ್ದೇಶಕರಾಗಿದ್ದರೂ,  ಯುವ ನಿರ್ದೇಶಕ ರಾಘವೇಂದ್ರ ಅವರಿಗೆ  ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಅದಕ್ಕೆ ಕಾರಣ, ರಾಘವೇಂದ್ರ ಎಂ.ನಾಯಕ್‌ ಅವರು ಮಾಡಿಕೊಂಡಿದ್ದ ಕಥೆ. ಚೆನ್ನಾಗಿದ್ದರಿಂದ,  ಚಿತ್ರವನ್ನು ಸಹ ಅವರೇ ನಿರ್ದೇಶಿಸಲಿ ಎಂದು ರಘುವರ್ಧನ್‌ ಅವಕಾಶ ನೀಡಿದ್ದಾರೆ. ಅಲ್ಲದೆ  ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸಿದ್ದಾರೆ.  ಈ ಹಿಂದೆ ತಿಮ್ಮರಾಯ, ಬದ್ರಿ, ಗುಣವಂತ, ಮಿಸ್ಟರ್ ಎಲ್.ಎಲ್.ಬಿ.  ಮೊದಲಾದ ಚಿತ್ರಗಳನ್ನು  ರಘುವರ್ಧನ್ ನಿರ್ದೇಶಿಸಿದ್ದರು


ಈ ಚಿತ್ರಕ್ಕೆ ವೀರ್ ಸಮರ್ಥ್ ಅವರ  ಸಂಗೀತವಿದ್ದು, ಯೋಗರಾಜ್ ಭಟ್, ಕವಿರಾಜ್ ಮತ್ತು ವಿಜಯ್ ಭರಮಸಾಗರ ಅವರು ಸಾಹಿತ್ಯ ಬರೆದಿದ್ದಾರೆ. ಕೆ.ಎಸ್.ಚಂದ್ರಶೇಖರ್ ಕ್ಯಾಮೆರಾ ಹಿಡಿದರೆ, ಕೆ.ಎಂ.ಪ್ರಕಾಶ್ ಸಂಕಲನವಿದೆ. ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ. ಅರ್ಜುನ್ ರಾಜ್ ಸಾಹಸ, ಕಲೈ ಅವರ ನೃತ್ಯ. ನಿರ್ದೇಶನವಿದೆ.

ದಿಗಂತ್‌ ಅವರಿಗೆ ಇದೊಂದು ಹೊಸಬಗೆಯ ಚಿತ್ರವಂತೆ. ಅದರಲ್ಲೂ ದಿಗಂತ್‌ ಮೊದಲ ಬಾರಿಗೆ ಈ ರೀತಿಯ ಪಾತ್ರ ನಿರ್ವಹಿಸಿದ್ದಾರೆ, ಬೆಂಗಳೂರು, ಸಕಲೇಶಪುರದ  ಸುತ್ತಮುತ್ತಲ ತಾಣಗಳಲ್ಲಿ ಚಿತ್ರೀಕರಣಗೊಂಡಿರುವ  ಈ ಚಿತ್ರದಲ್ಲಿ ಸಂಗೀತಾ ಶೃಂಗೇರಿ  ನಾಯಕಿಯಾಗಿದ್ದಾರೆ.  ಉಳಿದಂತೆ ಸಂಪತ್‌ಕುಮಾರ್‌, ಕಾಕ್ರೋಚ್‌ ಸುಧಿ, ಯಶ್‌ಶೆಟ್ಟಿ, ವಜ್ರಾಂಗ್ ಶೆಟ್ಟಿ,  ಬಾಲ ರಾಜ್ವಾಡಿ, ಗಣೇಶ್‌ರಾವ್, ಭಾಸ್ಕರ್ ಪಾಂಡವಪುರ,  ಮನಮೋಹನ್  ರೈ, ಮಹಾಂತೇಶ್ ಹೀರೆಮಠ, ಮಿಮಿಕ್ರಿ ಗೋಪಿ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ.

Related Posts

error: Content is protected !!