ಚೆಸ್ ಚಾಂಪಿಯನ್ ವಿಶ್ವನಾಥನ್ ಆನಂದ್ ಜೊತೆ ನಟ‌ ಸುದೀಪ್ ಚೆಸ್ ಗೇಮ್! ಕೊರೊನಾ ಪರಿಹಾರ ನಿಧಿಗೆ ಈ ಪಂದ್ಯಾವಳಿ

ನಟ ಕಿಚ್ಚ ಸುದೀಪ್ ಅವರಿಗೆ ಕ್ರಿಕೆಟ್ ಅಂದರೆ ಎಲ್ಲಿಲ್ಲದ ಪ್ರೀತಿ. ಇದು ಎಲ್ಲರಿಗೂ ಗೊತ್ತಿರುವ ವಿಷಯ. ಈಗಾಗಲೇ ಸಿಸಿಎಲ್ ಪಂದ್ಯಾವಳಿಯಲ್ಲಿ ಗೆದ್ದು ಬೀಗಿದ್ದಾರೆ ಕೂಡ. ಈಗ ಸುದೀಪ್ ಇನ್ನೊಂದು ಆಟಕ್ಕೂ ಸಜ್ಜಾಗಿದ್ದಾರೆ.

ಹೌದು, ಚೆಸ್ ಜಗತ್ತಿನ ಚಾಂಪಿಯನ್ ಎನಿಸಿಕೊಂಡಿರುವ ವಿಶ್ವನಾಥನ್ ಆನಂದ್ ಅವರು ಜೂ.13 ರಂದು ಏಕಕಾಲದಲ್ಲಿ ಹಲವರ ಜೊತೆ ಪ್ರದರ್ಶನ ಚೆಸ್ ಪಂದ್ಯಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಅಂದು ಸಂಜೆ ಈ ಪಂದ್ಯಗಳು ನಡೆಯಲಿವೆ. ಈ ಚೆಸ್ ಪಂದ್ಯದಲ್ಲಿ ತಾರೆಯರು ಮತ್ತು ಉದ್ಯಮಿಗಳು ಪಾಲ್ಗೊಳ್ಳಲಿದ್ದಾರೆ.

ಈ ಪಂದ್ಯದಲ್ಲಿ ಬಾಲಿವುಡ್ ನಟ ಅಮೀರ್ ಖಾನ್, ಕನ್ನಡ ನಟ‌ಕಿಚ್ಚ ಸುದೀಪ್ ಕೂಡ ಆಡಲಿದ್ದಾರೆ. ಇನ್ನು ಇವರೊಂದಿಗೆ ನಟ ರಿತೇಶ್ ದೇಶಮುಖ್, ಸಿಂಗರ್ ಅರ್ಜಿತ್ ಸಿಂಗ್ ಗಾಯಕಿ ಅನನ್ಯಾ ಬಿರ್ಲಾ, ಕ್ರಿಕೆಟಿಗ ಚಹಲ್, ಶಿಯೋಮಿ ಇಂಡಿಯಾದ ಸಿಇಓ ಮನುಕುಮಾರ್ಬಜೈನ್, ಝೆರೊಧ ಸಹಸಂಸ್ಥಾಪಕ ನಿಖಿಲ್ ಕಾಮತ್, ನಿರ್ಮಾಪಕ ಸಾಜಿದ್ ನಾಡಿಯವಾಲ, ಪ್ರಚುರ ಪದಕಣ್ಣಯ್ಯ ಕೂಡ ಆಡಲಿದ್ದಾರೆ.


ಅಂದಹಾಗೆ, ಈ ಪಂದ್ಯದ ಉದ್ದೇಶ ಕೊರೊನಾ ಪರಿಹಾರ ನಿಧಿಗೆ ಹಣ ಸಂಗ್ರಹಕ್ಕೆ. ಅಕ್ಷಯಾ ಪಾತ್ರಾ ಫೌಂಡೇಷನ್, ಚೆಸ್.ಕಾಮ್, ಎಕ್ಸ್ ಸೆಟರಾ ಟ್ಯಾಲೆಂಟ್‌ ಮ್ಯಾನೇಜ್ಮೆಂಟ್ ಸಹಯೋಗದಲ್ಲಿ ಈ ಪಂದ್ಯ ನಡೆಯಲಿದೆ. ಚೆಸ್.ಕಾಮ್ ನ ಅಧಿಕೃತ ಯುಟ್ಯೂಬ್ ವಾಹಿನಿಯಲ್ಲಿ ಇದು ನೇರ ಪ್ರಸಾರಗೊಳ್ಳಲಿದೆ.

Related Posts

error: Content is protected !!