ನಟ ಸಾರ್ವಭೌಮನಿಲ್ಲದ ಹದಿನೈದು ವರ್ಷ! ಅಣ್ಣಾವ್ರನ್ನ ಪ್ರೀತಿಯಿಂದ ಸ್ಮರಿಸಿದ ಅಭಿಮಾನಿ ದೇವರು


ಕನ್ನಡ ಚಿತ್ರರಂಗದ ದಂತಕಥೆ ಡಾ.ರಾಜಕುಮಾರ್‌ ಎವರ್‌ಗ್ರೀನ್‌ ನಟ. ಏಪ್ರಿಲ್‌ ೧೨ ಅವರು ಅಗಲಿದ ದಿನ. ಅವರಿಲ್ಲದೆ ಹದಿನೈದು ವರ್ಷಗಳು ಉರುಳಿವೆ. ಆದರೆ, ಇಂದಿಗೂ ಡಾ.ರಾಜಕುಮಾರ್‌ ಕನ್ನಡಿಗರ ಆರಾಧ್ಯ ದೈವ. ಸದಾ ಕನ್ನಡ ಜನರ ಪ್ರೀತಿಯ ರಾಜರಾಗಿರುವ ಡಾ.ರಾಜಕುಮಾರ್‌ ಅವರನ್ನು ಕಳಕೊಂಡ ದಿನವಾದ್ದರಿಂದ ರಾಜ್ಯಾದ್ಯಂತ ಅವರ ಅಪಾರ ಅಭಿಮಾನಿಗಳು ಅವರನ್ನು ಸ್ಮರಿಸಿದ್ದಾರೆ, ಪೂಜಿಸಿದ್ದಾರೆ. ಇನ್ನೂ ಕೆಲವರು ದೂರದ ಊರುಗಳಿಂದಲೂ ಆಗಮಿಸಿ, ಕಂಠೀರವ ಸ್ಟುಡಿಯೋದಲ್ಲಿರುವ ರಾಜ್‌ ಸ್ಮಾರಕಕ್ಕೆ ನಮಿಸುತ್ತಿದ್ದಾರೆ.

ಅಣ್ಣಾವ್ರ ಕುಟುಂಬ ಕೂಡ ಪ್ರತಿವರ್ಷದಂತೆ ಅಣ್ಣಾವ್ರ ಸ್ಮಾರಕ ಬಳಿ ತೆರಳಿ ಪೂಜಿಸಿದೆ. ಅವರ ಅಭಿಮಾನಿಗಳು ರಾಜಕುಮಾರ್‌ ಅವರ ಭಾವಚಿತ್ರ ಹಿಡಿದು “ಮತ್ತೆ ಹುಟ್ಟಿ ಬಾ ಅಣ್ಣಾ” ಎಂದು ಪ್ರೀತಿಯಿಂದಲೂ ಕೂಗಿದರೆ, ಇನ್ನೂ ಕೆಲವು ಅಭಿಮಾನಿಗಳು ಅವರ ಹಾಡುಗಳ ಮೂಲಕ ಮತ್ತೆ ಮತ್ತೆ ಸ್ಮರಿಸುತ್ತಲೇ ಇದ್ದಾರೆ.
.ರಾಜಕುಮಾರ್‌ ಅವರು ಒಂದೇ ವರ್ಗದವರಿಗೆ ಸೀಮಿತರಾದವರಲ್ಲ. ಅವರನ್ನು, ಕ್ರೀಡೆ, ರಾಜಕೀಯ ಹೀಗೆ ಹಲವು ಕ್ಷೇತ್ರಗಳ ಗಣ್ಯರೂ ಸ್ಮರಿಸುತ್ತಾರೆ.

ಅಷ್ಟರಮಟ್ಟಿಗೆ ಎಲ್ಲರ ಮನವನ್ನು ಸೂರೆಗೊಂಡವರು. ಅಂದಹಾಗೆ, ಡಾ.ರಾಜಕುಮಾರ್‌ ಅವರನ್ನು ಹಲವು ರಾಜಕೀಯ ಗಣ್ಯರು ಸ್ಮರಿಸಿದ್ದಾರೆ. ಹಾಗೆಯೇ ಕನ್ನಡ ಚಿತ್ರರಂಗದ ನಟ,ನಟಿಯರು, ನಿರ್ಮಾಪಕ, ನಿರ್ದೇಶಕಿಯರೂ ಅಣ್ಣಾವ್ರು ಸ್ಮರಿಸಿದ್ದಾರೆ.
ಡಾ.ರಾಜಕುಮಾರ್‌ ಅಂದಾಕ್ಷಣ, ಅವರ ಹಲವು ಸಾಮಾಜಿಕ ಸಂದೇಶವಿರುವ ಸಿನಿಮಾಗಳು ಕಣ್ಣೆದುರಿಗೆ ಬರುತ್ತವೆ. ಅವರ ಸಿನಿಮಾಗಳು ಅದೆಷ್ಟೋ ಮನಸ್ಸುಗಳನ್ನು ಒಂದು ಮಾಡಿವೆ. ಅದೆಷ್ಟೋ ಜನರಲ್ಲಿ ಹೊಸ ಬದಲಾವಣೆ ತಂದಿವೆ. ಇಂದಿಗೂ ಸಿನಿಮಾ ಮೂಲಕ ತಮ್ಮ ಬದುಕನ್ನು ಹಸನು ಮಾಡಿಕೊಂಡವರೂ ಇದ್ದಾರೆ. ಕನ್ನಡಕ್ಕೆ ಏನಾದರೂ ತೊಂದರೆ ಆಗುತ್ತೆ ಎಂಬ ವಿಷಯ ಗೊತ್ತಾಗುತ್ತಿದ್ದಂತೆಯೇ ಅಣ್ಣಾವ್ರು ಹಿಂದೆ ಮುಂದೆ ನೋಡದೆ ಕನ್ನಡದ ಪರ ಧ್ವನಿ ಎತ್ತುತ್ತಿದ್ದರು. ಸದಾ ಕನ್ನಡಿಗರನ್ನು ಅಭಿಮಾನಿ ದೇವರು ಎಂದು ಕರೆಯುತ್ತಿದ್ದ ಅವರ ಪುಣ್ಯತಿಥಿ ದಿನದಂದು ಅಭಿಮಾನಿ ಬಳಗ ನಮನ ಸಲ್ಲಿಸಿದೆ.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಟ್ವೀಟ್ ಮೂಲಕ ”ಕರ್ನಾಟಕ ರತ್ನ, ಪದ್ಮಭೂಷಣ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ಕರ್ನಾಟಕದ ಅತ್ಯಂತ ಜನಪ್ರಿಯ ಚಲನಚಿತ್ರ ನಟ, ಗಾಯಕ, ಅಭಿಮಾನಿಗಳಿಗೆ ದೇವರ ಸ್ಥಾನ ಕೊಟ್ಟ ನಟಸಾರ್ವಭೌಮ ಡಾ. ರಾಜಕುಮಾರ್ ಅವರ ಪುಣ್ಯತಿಥಿಗೆ ನನ್ನ ನಮನಗಳು” ಎಂದು ಹೇಳಿದ್ದಾರೆ. ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ಅವರು ಸಹ ಟ್ವೀಟ್‌ ಮೂಲಕ ಸ್ಮರಿಸಿದ್ದಾರೆ.
ಇನ್ನು, ಈ ಸಂದರ್ಭದಲ್ಲಿ ಅಭಿಮಾನಿಯೊಬ್ಬರು, ತಮ್ಮ ಟ್ವೀಟ್‌ ಮೂಲಕ ಸಿಎಂ ಯಡಿಯೂರಪ್ಪ ಅವರಿಗೆ ಹೆಚ್‌ಎಎಲ್‌ ಏರ್‌ಪೋರ್ಟ್‌ಗೆ ಅಣ್ಣಾವ್ರ ಹೆಸರನ್ನು ಶಿಫಾರಸ್ಸು ಮಾಡಿ. ಅಣ್ಣಾವ್ರ ಹೆಸರಿಟ್ಟ ಹೆಗ್ಗಳಿಕೆ ನಿಮ್ಮದಾಗುತ್ತದೆ” ಎಂದು ಮನವಿ ಮಾಡಿದ್ದಾರೆ.

Related Posts

error: Content is protected !!