ಸಂಬಂಜ ದೊಡ್ಡದು ಕನಾ ಎನ್ನುವ ಡಿಎನ್‌ಎ- ಸಂಬಂಧಗಳ ಎಳೆ ಹುಡುಕುತ್ತಾ ನಿರ್ದೇಶಕನಾದ ಪ್ರಕಾಶ್‌ರಾಜ್ ಮೇಹು !

ಪ್ರಕಾಶ್‌ರಾಜ್‌ ಮೇಹು ನಿರ್ದೇಶನದ ʼಡಿ ಎನ್‌ ಎʼ ಚಿತ್ರದ ರಿಲೀಸ್‌ ಗೆ ರೆಡಿ ಆಗಿದೆ. ಸದ್ಯಕ್ಕೆ ಅದರ ರಿಲೀಸ್‌ ಡೇಟ್‌ ಇನ್ನು ಯಾವಾಗ ಎನ್ನುವುದು ಫಿಕ್ಸ್‌ ಆಗಿಲ್ಲ. ಆದರೆ ಎಲ್ಲಾ ಹಂತದಲ್ಲೂ ರಿಲೀಸ್‌ಗೆ ರೆಡಿಯಾಗಿರುವ ಚಿತ್ರ ತಂಡ, ಈಗ ಚಿತ್ರದ ಪ್ರಚಾರಕ್ಕೆ ನಾಂದಿ ಹಾಡಿದೆ. ಅದರ ಮೊದಲ ಹಂತದಲ್ಲೀಗ ಚಿತ್ರ ತಂಡ ಸೋಮವಾರ, ಪ್ರಮೋಷನಲ್‌ ಸಾಂಗ್‌ ಲಾಂಚ್‌ ಮಾಡಿತು.

ಮಾತೃಶ್ರೀ ಎಂಟರ್​ ಪ್ರೈಸಸ್​ ಬ್ಯಾನರ್​ನಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ನಿರ್ಮಾಪಕ ಎಂ. ಮೈಲಾರಿ ಬಂಡವಾಳ ಹಾಕಿದ್ದು, ಅಚ್ಯುತ್ ಕುಮಾರ್, ರೋಜರ್ ನಾರಾಯಣ್, ಎಸ್ಟರ್ ನರೋನ್ಹಾ, ಯುಮನಾ, ಮಾಸ್ಟರ್ ಆನಂದ್ ಪುತ್ರ ಮಾಸ್ಟರ್​ ಕೃಷ್ಣ ಚೈತನ್ಯ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಒಂದ್ರೀತಿ ಇದು ಮಲ್ಟಿಸ್ಟಾರ್‌ ಸಿನಿಮಾ. ಅನೇಕ ಅನುಭವಿ ಕಲಾವಿದರ ಸಮಾಗಮ ಇಲ್ಲಿದೆ. ಹಾಗೆಯೇ ಇದು ಬಿಗ್‌ ಬಜೆಟ್‌ ಸಿನಿಮಾವೂ ಹೌದು. ಕಥೆಗೆ ತಕ್ಕಂತೆ ನಿರ್ಮಾಪಕರು ಅದ್ದೂರಿ ವೆಚ್ಚದಲ್ಲಿಯೇ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಸದ್ಯಕ್ಕೆ ಅದರ ಛಾಯೆ ಚಿತ್ರದ ಪ್ರಮೋಷನಲ್‌ ಹಾಡಿನಲ್ಲಿ ಅನಾವರಣ ಗೊಂಡಿದೆ.ತಾರಾಗಣ, ನಿರ್ಮಾಣದ ವೈಶಿಷ್ಟ್ಯತೆಗಳ ಜತೆಗೆ ಈ ಸಿನಿಮಾದ ಹೈಲೈಟ್ಸ್‌ ಅಂದ್ರೆ ಕಥೆ. ಇದೊಂದು ವಿಶೇಷವಾದ ಕಥಾ ಹಂದರದ ಚಿತ್ರ. ಅದರ ಮೇಲೆಯೇ ನಿರ್ದೇಶಕ ಪ್ರಕಾಶ್‌ ಮೇಹು ಅವರಿಗೆ ಅತೀವ ವಿಶ್ವಾಸವಿದೆ. “ಇದು ನನ್ನ ಮೊದಲ ಸಿನಿಮಾ. ಸಾಕಷ್ಟು ಸಿನಿಮಾಗಳನ್ನು ನೋಡಿಕೊಂಡು ಬಂದಿದ್ದರಿಂದ ನನ್ನ ಸಿನಿಮಾ ಒಂದೇ ವರ್ಗಕ್ಕಷ್ಟೇ ಸೀಮಿತ ಆಗಬಾರದು ಎಂಬ ನಿಟ್ಟಿನಲ್ಲಿ ಆರ್ಟ್‌ ಅಥವಾ ಕಮರ್ಷಿಯಲ್‌ ಎನ್ನುವ ಯಾವುದೇ ಫಾರ್ಮೆಟ್‌ ಗೆ ಸಿಲುಕಿಸದೆ ಅವುಗಳ ಬ್ರಿಡ್ಜ್‌ ಮೂವೀ ಆಗಿ ತೆರೆಗೆ ತಂದಿದ್ದೇನೆ ಎನ್ನುವುದು ಅವರ ಮೊದಲ ಮಾತು.

ಇನ್ನು ಚಿತ್ರದ ಕಥಾ ಹಂದರದ ಕುರಿತು ಮಾತಿಗಿಳಿದ ಅವರು, ಶೀರ್ಷಿಕೆಯೇ ಹೇಳುವಂತೆ ಇದೊಂದು ಗುರುತಿನ ಕಣದ ಸಿನಿಮಾ. ಸಂಪೂರ್ಣ ಸಂದೇಶದೊಂದಿಗೆ ತಯಾರಾಗಿದೆ ಎಂದರು. ಬಹುಭಾಷೆ ನಟಿ ಎಸ್ಟರ್‌ ನರೋನ್ಹಾ ಚಿತ್ರದಲ್ಲಿನ ತಮ್ಮ ಪಾತ್ರದ ಕುರಿತು ಮಾತನಾಡಿದರು. “ನಾನೂ ಕನ್ನಡದಲ್ಲಿ ಸಿನಿಮಾ ಬೇಕು ಅಂತ ತುಂಬಾ ದಿನಗಳಿಂದ ಕಾಯುತ್ತಿದ್ದೆ. ಅದೀಗ ಈ ಚಿತ್ರದ ಮೂಲಕ ಈಡೇರಿದೆ. ಒಂದು ಗಟ್ಟಿ ಕಥೆ ಇಲ್ಲಿದೆ. ಸಂಬಂಧಗಳ ಬಗ್ಗೆ ಸಿನಿಮಾ ಮಾತನಾಡಲಿದೆ. ನಮ್ಮ ನಡುವೆಯೇ ನಡೆಯುವ ಕಥೆ ಆಗಿದೆ ಅಂದರು.

” ನಾನು ಮತ್ತು ನಿರ್ದೇಶಕರು ಒಂದೇ ಶಾಲೆಯಲ್ಲಿ ಓದಿದವರು. ಆದರೆ ಒಟ್ಟಿಗೆ ಕೆಲಸ ಮಾಡಿರಲಿಲ್ಲ. ಈ ಸಿನಿಮಾ ಮೂಲಕ ಅದು ಸಾಕಾರವಾಗಿದೆ. ಇದು ಸಂಬಂಧಗಳ ಕುರಿತು ಮಾಡಿದ ಸಿನಿಮಾ. ತಂಡಕ್ಕೆ ಯಶಸ್ಸು ಸಿಗಲಿ ಎಂದು ಹಾರೈಸಿದರು ನಟ ಅಚ್ಯುತ್ ಕುಮಾರ್. ಹಾಗೆಯೇ ಈ ಚಿತ್ರದ ಪ್ರಮೋಷನಲ್ ಸಾಂಗ್‌ ಲಾಂಚ್‌ ಮಾಡಿ ಮಾತನಾಡಿದ ಹಿರಿಯ ಸಂಗೀತ ನಿರ್ದೇಶಕ ವಿ ಮನೋಹರ್, ಸಿನಿಮಾ ಮಾಡುವುದು ಈಗಿನ ಕಾಲದಲ್ಲಿ ಕಷ್ಟದ ಕೆಲಸ. ಅದನ್ನು ಡಿಎನ್ಎ ತಂಡ ಮಾಡಿದೆ. ಇಡೀ ತಂಡಕ್ಕೆ ಶುಭವಾಗಲಿ ಎಂದರು.

ಚೇತನ್ ಕೃಷ್ಣ ಈ ಚಿತ್ರಕ್ಕೆ ಸಂಗೀತ ನೀಡಿದ್ದು, ನಾಲ್ಕು ಹಾಡು, ಎರಡು ಬಿಟ್ ಚಿತ್ರದಲ್ಲಿವೆ. ರಾಜೇಶ್ ಕೃಷ್ಙ, ಅನುರಾಧಾ ಭಟ್, ಪುಟಾಣಿ ಕೃತಿ ಹಾಡಿದ್ದಾರೆ. ಮತ್ತೊಂದು ಹಾಡನ್ನು ಸಂಗೀತ ನಿರ್ದೇಶಕ ಚೇತನ್‌ ಕೃಷ್ಣ ಅವರೇ ಹಾಡಿದ್ದಾರಂತೆ. ನಿರ್ಮಾಪಕ ಎಂ ಮೈಲಾರಿ ಮಾತನಾಡಿ, ಸಂಪೂರ್ಣ ಕುಟುಂಬ ಕುಳಿತು ನೋಡುವ ಸಿನಿಮಾ ಇದು. ಈಗಾಗಲೇ ಸೆನ್ಸಾರ್ ಮಂಡಳಿಯೂ ಚಿತ್ರವನ್ನು ಮೆಚ್ಚಿ “ಯುʼ ಸರ್ಟಿಫಿಕೇಟ್ ನೀಡಿದೆ. ಇದೇ ತಿಂಗಳ 16ಕ್ಕೆ ಅಥವಾ 30ಕ್ಕೆ ಸಿನಿಮಾ ತೆರೆಗೆ ಬರಲು ಸಿದ್ಧತೆ ನಡೆಸಿದ್ದೇವು. ಕೊವೀಡ್‌ ಕಾರಣಕ್ಕೆ ಮುಂದಕ್ಕೆ ಹೋಗಲು ಚಿಂತಿಸಿದ್ದೇವೆ ಅಂದ್ರು. ಚಿತ್ರಕ್ಕೆ ಶಿವರಾಜ್‌ ಮೇಹು ಸಂಕಲನ, ರವಿಕುಮಾರ್ ಛಾಯಾಗ್ರಹಣ, ಯೋಹರಾಜ್ ಭಟ್ ಹಾಗೂ ಜಯಂತ್ ಕಾಯ್ಕಿಣಿ ಸಾಹಿತ್ಯ ಬರೆದಿದ್ದಾರೆ.

Related Posts

error: Content is protected !!