ಕೆಮಿಸ್ಟ್ರಿ ಆಫ್‌ ಕರಿಯಪ್ಪ ನಂತರ ನಟ ತಬಲ ನಾಣಿ ಸಿಕ್ಕಾಪಟ್ಟೆ ಬ್ಯುಸಿಯಂತೆ, ಅದು ಹೆಂಗೆ ? ಅವರೇ ಹೇಳ್ತಾರೆ ಕೇಳಿ….

ನಟ ತಬಲನಾಣಿ ಅಂದ್ರೆ ಕನ್ನಡದ ಸಿನಿ ಪ್ರೇಕ್ಷಕರಿಗೆ ಪರಿಚಯವಾಗಿದ್ದೇ ಹಾಸ್ಯ ನಟರಾಗಿ. ಒಂದು ಸಿನಿಮಾದಲ್ಲಿ ಅವರಿದ್ದಾರೆಂದ್ರೆ ಅಲ್ಲಿ ಭರಪೂರ ಮನರಂಜನೆ ನೂರರಷ್ಟು ಖಚಿತ. ಅದಕ್ಕೆ ಸಾಕ್ಷಿ ಈಗಾಗಲೇ ಬಂದು ಹೋದ ಹಲವು ಸಿನಿಮಾ. ಅದರಲ್ಲೂ ಅವರು ಇತ್ತೀಚೆಗೆ ಕಾಣಿಸಿಕೊಂಡಿದ್ದ ” ಕೆಮಿಸ್ಟ್ರಿ ಆಫ್‌ ಕರಿಯಪ್ಪ ʼ ಚಿತ್ರ. ಅದು ಅವರನ್ನು ಮತ್ತಷ್ಟು ಜನಪ್ರಿಯತೆ ಗೊಳಿಸಿದೆಯಂತೆ. ಈ ಚಿತ್ರ ಬಂದು ಹೋದ ನಂತರ ಬಹಳಷ್ಟು ಜನರು ಅವರನ್ನುಕೆಮಿಸ್ಟ್ರಿ ಕರಿಯಪ್ಪ ಅಂತಲೇ ಕರಿಯುತ್ತಾರಂತೆ. ಅದು ಅವರಿಗೂ ಒಂಥರ ಖುಷಿ ನೀಡಿದೆಯಂತೆ. ಅಷ್ಟೊಂದು ಜನಪ್ರಿಯತೆ ಅವರಿಗೆ ಕೆಮಿಸ್ಟ್ರಿ ಆಫ್‌ ಕರಿಯಪ್ಪ ಚಿತ್ರದ ಮೂಲಕ ಸಿಕ್ಕಿದೆಯಂತೆ. ಅದರಾಚೆ ಅಲ್ಲಿಂದ ಅವರ ಸಿನಿ ಜರ್ನಿಯ ಕಥೆ ಏನಾಯ್ತು ಅನ್ನೋದೆ ಒಂದು ಇಂಟರೆಸ್ಟಿಂಗ್‌ ಕಥೆ ಇದೆಯಂತೆ. ಅದನ್ನ ಅವ್ರೇ ಹೇಳ್ತಾರೆ ಕೇಳಿ.

” ಒಂದು ಸಿನಿಮಾ ಗೆದ್ದರೆ, ಅದರಲ್ಲಿ ದುಡಿದವರೆಲ್ಲ ಬ್ಯುಸಿ ಆಗ್ತಾರೆ ಅಂತ ನಾನು ಚಿತ್ರೋದ್ಯಮಕ್ಕೆ ಬಂದಾಗಿನಿಂದ ಕೇಳುತ್ತಿದ್ದೆ. ಅದ್ಯಾಕೋ ನಂಗೆ ಅವತ್ತನಿಂದ ಅದು ನಿಜ ಅಂತ ಎನಿಸಿರಲಿಲ್ಲ. ಆದ್ರೆ ಅದು ನನ್‌ ಲೈಫ್‌ ನಲ್ಲೇ ನಿಜವಾಗಿದ್ದು “ಕೆಮಿಸ್ಟ್ರಿ ಆಫ್‌ ಕರಿಯಪ್ಪ ʼ ಚಿತ್ರ ಬಂದು ಹೋದ ನಂತರ. ಈ ಚಿತ್ರಕ್ಕೆ ಕನ್ನಡದ ಸಿನಿಮಾ ಪ್ರೇಕ್ಷಕರು ದೊಡ್ಡ ಸಕ್ಸಸ್‌ ಕೊಟ್ಟರು. ಹಾಗೆಯೇ ನಮಗೂ ಕೂಡ ಒಂದಷ್ಟು ಜನಪ್ರಿಯತೆ ಸಿಕ್ಕಿತು. ನಿಜ ಹೇಳ್ಬೇಕು ಅಂದ್ರೆ ಅದು ನನ್ನ ಟೈಟಲ್‌ ಕಾರ್ಡ್‌ ಬದಲಿಸಿತು. ಆ ಸಿನಿಮಾ ಬಂದು ಹೋದ ನಂತರ ಅಂತಹದೇ ಜಾನರ್‌ ನ ಸಿನಿಮಾಗಳು ಒಂದರ ಹಿಂದೆ ಒಂದು ಸರಣಿಯಲ್ಲಿ ನನ್ನನ್ನೇ ಹುಡುಕಿಕೊಂಡು ಬಂದವು. ಆದರೆ ಒಳ್ಳೆಯ ಕಥೆಗಳು ನನ್ನ ಆದ್ಯತೆ ಗಿತ್ತು. ಅದನ್ನೇ ಇಟ್ಕೊಂಡ್‌ ಇಂದುವರೆಗೂ ಎಂಟು ಸಿನಿಮಾಗಳಿಗೆ ನಾನು ಕಾಲ್‌ಸೀಟ್‌ ಕೊಟ್ಟಿದ್ದೇನೆ. ಇದು ಅಲ್ವೇ ಒಂದು ಸಕ್ಸಸ್‌ ನ ಫಲ ಅಂದ್ರೆ. ನಿಜಕ್ಕೂ ಖುಷಿ ಆಗ್ತಿದೆ ʼ ಅಂತ ನಟ ತಬಲ ನಾಣಿ ʼಕ್ರಿಟಿಕಲ್ ಕೀರ್ತನೆಗಳು ʼ ಚಿತ್ರದ ಟ್ರೇಲರ್‌ ನ ಸಕ್ಸಸ್‌ ಮೀಟ್‌ ಸುದ್ದಿಗೋಷ್ಟಿಯಲ್ಲಿ ಹಂಚಿಕೊಂಡರು.

ಅಂದ ಹಾಗೆ, ಕೆಮಿಸ್ಟ್ರಿ ಆಫ್‌ ಕರಿಯಪ್ಪ ಚಿತ್ರ ತಂಡದ ಮತ್ತೊಂದು ಚಿತ್ರವೇ ʼಕ್ರಿಟಿಕಲ್‌ ಕೀರ್ತನೆಗಳುʼ. ಕುಮಾರ್‌ ಈ ಸಿನಿಮಾದ ನಿರ್ದೇಶಕ. ಕೆಮಿಸ್ಟ್ರಿ ಸಿಕ್ಕ ದೊಡ್ಡ ಸಕ್ಸಸ್‌ ನಂತರ ತಾವೇ ಈ ಚಿತ್ರಕ್ಕೆ ಬಂಡವಾಳ ಹಾಕಿ, ಸಿನಿಮಾ ನಿರ್ದೇಶನ ಮಾಡಿದ್ದಾರೆ. ಹಾಗೆಯೇ ಕೆಮಿಸ್ಟ್ರಿ ಆಫ್‌ ಕರಿಯಪ್ಪ ಚಿತ್ರದಲ್ಲಿದ್ದ ಬಹುತೇಕ ತಂಡವನ್ನೇ ಇಲ್ಲೂ ಮುಂದುವರೆಯುತ್ತೆ ಮಾಡಿದ್ದಾರೆ. ಅವರ ಪಯತ್ನದ ಬಗ್ಗೆ ಮಾತನಾಡಿದ ತಬಲ ನಾಣಿ, ಒಂದೊಳ್ಳೆಯ ತಂಡ ಇದ್ದಾಗ ಅದನ್ನು ಜೋಪಾನ ಮಾಡಿಕೊಂಡರೆ ಮತ್ತೊಂದು ಗೆಲವು ಕಾಣಬಹುದು. ಅದಕ್ಕೆ ಹಲವು ಸಿನಿಮಾ ಸಾಕ್ಷಿ ಆಗಿವೆ. ಕುಮಾರ್‌ ಅವರಲ್ಲಿ ಆ ಜಾಣತನ ಇದೆ. ಅದೇ ಕಾರಣಕ್ಕೆ ಈಗ ಕ್ರಿಟಿಕಲ್‌ ಕೀರ್ತನೆಗಳು ಚಿತ್ರದ ಟ್ರೇಲರ್‌ ದೊಡ್ಡ ಮಟ್ಟಕ್ಕೆ ಸದ್ದು ಮಾಡಿದೆ. ಇದನ್ನು ಇತರರು ಪಾಲಿಸಲಿ ಅಂತ ಚಿತ್ರೋದ್ಯಮಕ್ಕೆ ಕಿವಿ ಮಾತು ಹೇಳಿದರು..

Related Posts

error: Content is protected !!