ಅತ್ಯುತ್ತಮ ನಟಿ ಪ್ರಶಸ್ತಿಗೆ ಹರಿಪ್ರಿಯಾ, ಖುಷಿ, ಮಿಲನಾ, ಯಜ್ಞಾ ಶೆಟ್ಟಿ ಹೆಸರು !

ಸಿನಿಮಾ ಪತ್ರಕರ್ತರೇ ನೀಡುವ ಸ್ಯಾಂಡಲ್‌ವುಡ್‌ನ ಪ್ರತಿಷ್ಟಿತ ʼ ಚಂದನವನ ಫಿಲ್ಮ್‌ ಕ್ರಿಟಿಕ್ಸ್‌ ಆಕಾಡೆಮಿʼಯ ವಾರ್ಷಿಕ ಪ್ರಶಸ್ತಿಗೆ ಚಿತ್ರರಂಗ ಸಜ್ಜಾಗಿದೆ. ಕಳೆದ ಬಾರಿಯಂತೆಯೇ ಈ ಬಾರಿಯೂ ಪ್ರಶಸ್ತಿ ಪ್ರದಾನ ಸಮಾರಂಭ ವರ್ಣರಂಜಿತವಾಗಿಯೇ ಆಯೋಜನೆ ಗೊಂಡಿದೆ. ಫೆ. 21 ಕ್ಕೆ ಅವಾರ್ಡ್‌ ಪ್ರೋಗ್ರಾಮ್‌ ಫಿಕ್ಸ್‌ ಆಗಿದೆ. ಸದ್ಯಕ್ಕೆ ಜಾಗ ನಿಗದಿ ಆಗಿಲ್ಲ. ಆದರೆ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಶನಿವಾರದಿಂದಲೇ ಚಾಲನೆ ಸಿಕ್ಕಿದೆ. ಬೆಂಗಳೂರಿನ ಎಸ್‌ ಆರ್‌ ವಿ ಮಿನಿ ಚಿತ್ರಮಂದಿರದಲ್ಲಿ ಶನಿವಾರ ಬೆಳಗ್ಗೆ ಟ್ರೋಪಿ ಅನಾವರಣ ಕಾರ್ಯಕ್ರಮ ನಡೆಯಿತು.

ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್‌ ಹಾಗೂ ‘ಟಗರುಪುಟ್ಟಿ ‘ ಅಂತಲೇ ಜನಪ್ರತಿಯತೆ ಪಡೆದ ನಟಿ ಮಾನ್ವಿತಾ ಕಾಮತ್‌ ಟ್ರೋಪಿ ಅನಾವರಣಗೊಳಿಸುವ ಮೂಲಕ ಚಂದನವನ ಫಿಲ್ಮ್‌ ಕ್ರಿಟಿಕ್ಸ್‌ ಅವಾರ್ಡ್‌ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದೇ ವೇಳೆ ಈ ಪ್ರಸಕ್ತ ಸಾಲಿನ ಕ್ರಿಟಿಕ್ಸ್‌ ಅವಾರ್ಡ್‌ ಗೆ ವಿವಿಧ ೨೦ವಿಭಾಗಗಳಲ್ಲಿ ನಾಮಿನೇಟೆಡ್‌ ಆದ ಸಿನಿಮಾ, ನಟ-ನಟಿಯರು, ಪೋಷಕ ಕಲಾವಿದರು. ನೃತ್ಯ ನಿರ್ದೇಶಕರು, ಸ್ಟಂಟ್‌ ಮಾಸ್ಟರ್‌, ಗಾಯಕರು ಸೇರಿದಂತೆ ಎಲ್ಲಾ ವಿಭಾಗಗಳ ವಿವರ ಪ್ರಕಟಿಸಲಾಯಿತು.


ವಿಶೇಷವಾಗಿ ಅತ್ಯುತ್ತಮ ಚಿತ್ರ, ಅತ್ಯುತ್ತಮ ನಟ, ಅತ್ಯುತ್ತಮ ನಟಿ ಪ್ರಶಸ್ತಿಗೆ ಪೈಪೋಟಿಯಲ್ಲಿರುವವರ ವಿವರ ಕೂಡ ರೀವಿಲ್‌ ಆಯಿತು. ಅತ್ಯುತ್ತಮ ಚಿತ್ರ ವಿಭಾಗದಲ್ಲಿ ಆಕ್ಟ್‌ 1978 , ದಿಯಾ, ಜಂಟಲ್‌ ಮನ್‌, ಲವ್‌ ಮಾಕ್ಟೆಲ್‌ ಹಾಗೂ ನಾನು ಮತ್ತು ಗುಂಡ ಚಿತ್ರಗಳಿವೆ. ಹಾಗೆಯೇ ಅತ್ಯುತ್ತಮ ನಟಿ ಪ್ರಶಸ್ತಿಗೆ ಹರಿಪ್ರಿಯಾ, ಖುಷಿ ರವಿ, ಮಿಲನಾ ನಾಗರಾಜ್‌ ಹಾಗೂ ಯಜ್ಫಾ ಶೆಟ್ಟಿ ಇದ್ದಾರೆ. ಅತ್ಯುತ್ತಮ ನಟ ಪ್ರಶಸ್ತಿಗೆ ಡಾಲಿ ಧನಂಜಯ್‌, ಕೃಷ್ಣ, ಪ್ರಜ್ವಲ್‌ ದೇವರಾಜ್‌, ಪೃಥ್ವಿ ಅಂಬರ್‌ ಮತ್ತು ರಮೇಶ್‌ ಅರವಿಂದ್‌ ನಾಮಿನೇಟೆಡ್‌ ಆಗಿದ್ದಾರೆ. ಕಳೆದ ಭಾರಿಗಿಂತ ಈ ಬಾರಿ ಅಂದರೆ 2020 ರಲ್ಲಿ ರಿಲೀಸ್‌ ಆದ ಸಿನಿಮಾಗಳ ಸಂಖ್ಯೆ ಕಮ್ಮಿ. ಅಷ್ಟಾಗಿಯೂ ಒಳ್ಳೆಯ ಚಿತ್ರಗಳೇ ಇದ್ದು, ಪ್ರಶಸ್ತಿ ಆಯ್ಕೆ ಎಲ್ಲಾ ವಿಭಾಗಗಳಲ್ಲು ಕುತೂಹಲಕಾರಿ ಆಗಿದೆ.


ಟ್ರೋಪಿ ಅನಾವರಣ ಗೊಳಿಸಿದ ನಂತರ ನಟಿ ಮಾನ್ವಿತಾ ಕಾಮತ್, ಕ್ರಿಟಿಕ್‌ ಅವಾರ್ಡ್‌ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡರು. ಪತ್ರಕರ್ತರು ಒಂದು ಅವಾರ್ಡ್ ಕೊಡ್ತಾರೆ ಅಂದ್ರೆ ಅಲ್ಲಿ ಪ್ರಾಮಾಣಿಕ ಪ್ರಯತ್ನ ಇರುತ್ತೆ, ಅದ್ಯಾವ ಸಿನಿಮಾವನ್ನು ಆದ್ರೂ , ಪ್ರಾಮಾಣಿಕ ಪ್ರಯತ್ನದಿಂದ ವಿವರ್ಶಿಸುತ್ತಾರೆ ಎಂದರು. ಹಾಗೆಯೇ ನಟ ಸಂಚಾರಿ ವಿಜಯ್‌ ಮಾತನಾಡಿ, ಪ್ರಶಸ್ತಿಗಳು, ಹಣ, ಜನಮನ್ನಣೆ ತಂದುಕೊಡಲ್ಲ. ನಿಜವಾದ ಪ್ರತಿಭೆಗಳನ್ನು ಗುರುತಿಸುವುದರಿಂದ ನಮ್ಮಲ್ಲೂ ಆತ್ಮವಿಶ್ವಾಸ ಮೂಡಿಸುತ್ತದೆ ಎಂದರು. ಈ ಸಂದರ್ಭದಲ್ಲಿ ʼಸಿನಿಲಹರಿʼ ವೆಬ್‌ ಸೈಟ್‌ ಹಾಗೂ ಯುಟ್ಯೂಬ್‌ ಚಾನೆಲ್‌ ಸಿಇಓ ಕೃಷ್ಣ ಪಿ ಮತ್ತು ಮೂವೀ ಬಜಾರ್‌ ಮುಖ್ಯಸ್ಥ ನವರಸನ್‌ ಹಾಜರಿದ್ದರು. ” ಚಂದನವನ ಫಿಲ್ನ್‌ ಕ್ರಿಟಿಕ್ಸ್‌ ಎಲ್ಲಾ ಪ್ರಯತ್ನಕ್ಕೂ ಸಿನಿಲಹರಿ ಬೆಂಬಲ ಇರಲಿದ್ದು, ಇದು ಇನ್ನು ದೊಡ್ಡ ಮಟ್ಟದಲ್ಲಿ ನಡೆಯಲಿ ಎಂದು’ ಸಿನಿ ಲಹರಿ ‘ಸಿಇಓ ಕೃಷ್ಣ ಹೇಳಿದರು. ಚಂದನವನ ಫಿಲ್ಮ್‌ ಕ್ರಿಟಿಕ್ಸ್‌ ಅಕಾಡೆಮಿ ಪರವಾಗಿ ನಿರ್ದೇಶಕರಾದ ಶರಣು ಹುಲ್ಲೂರು ಕಾರ್ಯಕ್ರಮದ ರೂಪುರೇಷೆಗಳ ಜತೆಗೆ ಪ್ರಶಸ್ತಿಗೆ ನಾಮಿನೇಟೆಡ್‌ ಆದವರ ವಿವರ ನೀಡಿದರು.

Related Posts

error: Content is protected !!