ಫಸ್ಟ್ ನಿಮ್ ‌ಮನೆ‌ ನೋಡ್ಕೊಳ್ಳಿ, ಆಮೇಲೆ ನಾನು ಸೇರಿದಂತೆ ಇನ್ನೊಬ್ಬರ ಬಗ್ಗೆ ಯೋಚಿಸಿ ! 

ಲಕ್ಷಾಂತರ ಮಂದಿ ಅಭಿಮಾನಿಗಳಿಗೆ ನಟ ದರ್ಶನ್ ಹೀಗೆಂದು ಕೈ ಮುಗಿದು ವಿನಂತಿಸಿಕೊಂಡಿದ್ದು ಯಾಕೆ ಗೊತ್ತಾ? ಅದಕ್ಕೂ ಕಾರಣ ಇದೆ. ಅದೇನು ಅಂತ ನಾವ್ ಹೇಳ್ತೀವಿ ಕೇಳಿ….!
…,………………………………

ಇತಿಹಾಸಕ್ಕೆ ಸೇರಿಕೊಂಡ 2020 ಪ್ರತಿಯೊಬ್ಬರ ಜೀವನದಲ್ಲೂ ಮರೆಯಲಾಗದ ವರ್ಷ. ಅದು ಹೇಗೆ ಅಂತ ವಿವರಿಸಿ ಹೇಳಬೇಕಿಲ್ಲ. ಕೊರೋನಾ ಎನ್ನುವ ಮಹಾಮಾರಿ ಸೃಷ್ಟಿಸಿದ ಅವಾಂತರ ಎಲ್ಲರಿಗೂ ಗೊತ್ತು. ಯಾರಾರನ್ನೋ ಶಾಶ್ವತವಾಗಿ ಕಳೆದುಕೊಂಡು, ಕೆಲಸ ಇಲ್ಲದೆ, ದುಡ್ಡು ಕಾಸು ಕಾಣದೆ ಒಂದೊತ್ತಿನ‌ ಊಟಕ್ಕೂ ಪರದಾಡಿದವರಿಗೆ ಕಮ್ಮಿ ಇಲ್ಲ. ಅದೆಲ್ಲ ಬಹಳಷ್ಟು ಜನರಿಗೆ ಆದ ಸ್ವಂತ ಅನುಭವ. ಹಾಗಾಗಿ, ಅಷ್ಟು ಕೆಟ್ಟ ದಿನಗಳನ್ನು ಅನುಭವಿಸಿ ಈಗ ಅದು, ಇದು ಅಂತ ಕೈಗೊಂದು ಕೆಲಸ, ಒಂದೊತ್ತಿನ ಊಟ, ಒಂದಷ್ಟು ನೆಮ್ಮದಿ ಕಂಡುಕೊಂಡ ಸಂದರ್ಭದಲ್ಲಿ ಅಭಿಮಾನ ಅಂತೇಳಿ, ದೂರದ ಊರುಗಳಿಂದ ಬಸ್ಸು, ಕಾರು,ಬೈಕು ಹತ್ತಿಕೊಂಡು ಬೆಂಗಳೂರಿಗೆ ಬಂದು ನನ್ನ ಹುಟ್ಟು ಹಬ್ಬ ಅಚರಿಸಿ ಸಂಭ್ರಮಿಸುವ ಬದಲಿಗೆ ಇದೊಂದು ವರ್ಷ‌ ನೀವು ಮೊದಲು ನಿಮ್ಮ‌ಮನೆ- ಮಠ ನೋಡ್ಕೊಳ್ಳಿ, ಆಮೇಲೆ ಇನ್ನೊಬ್ಬರ ಬಗ್ಗೆ ಕಾಳಜಿ ವಹಿಸುವುದು ಇದದ್ದೇ…….ಅಂದ್ರು ಚಾಲೆಂಜಿಂಗ್ ಸ್ಟಾರ್ ದರ್ಶನ್.
ಅದಕ್ಕೆ ಕಾರಣ ಅವರ ಹುಟ್ಟು ಹಬ್ಬ‌.

ಫೆಬ್ರವರಿ 16 ಕ್ಕೆ ದರ್ಶನ್ ಹುಟ್ಟು ಹಬ್ಬ‌. ಈ ದಿನ ಬಂದ್ರೆ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ದರ್ಶನ್ ಅವರ ಮನೆ ಮುಂದೆ ಹೇಗೆಲ್ಲ ಅಭಿಮಾನಿಗಳು ಸೇರ್ತಾರೆ, ಅವರ ಹುಟ್ಟು ಹಬ್ಬದ ಆಚರಣೆ ಹೇಗಿರುತ್ತೆ ಅಂತ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಅದೆಲ್ಲ ಗೊತ್ತಿರುವ ವಿಚಾರ. ಕನ್ನಡದ ಮಟ್ಟಿಗೆ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟ ಅವರು. ಆ ದಿನ ಬಂದ್ರೆ ಸಾಕು ಅಪಾರ ಸಂಖ್ಯೆಯ ಅಭಿಮಾನಿಗಳು ರಾಜ್ಯದ‌ ಮೂಲೆ‌ಮೂಲೆಗಳಿಂದ ಬರುವುದು ಕಾಮನ್.‌ಆದ್ರೆ ಈ ವರ್ಷಕ್ಕೆ ಅದಕ್ಕೆಲ್ಲ ಬ್ರೇಕ್ ಹಾಕಲು‌ ನಿರ್ಧರಿಸಿರುವ ನಟ ದರ್ಶನ್, ಅಭಿಮಾನಿಗಳ ಜವಾಬ್ದಾರಿ ಏನು? ಹೇಗೆಲ್ಲ ಅವರು ತಮ್ಮ ಕುಟುಂಬದ ಕಡೆ ಗಮನ ಹರಿಸಬೇಕು ಅನ್ನೋದನ್ನು ಭಾನುವಾರ( ಜ.10) ರಂದು ಫೇಸ್ ಬುಕ್ ಲೈವ್ ಮೂಲಕ ಹೇಳಿಕೊಂಡರು.

 

‘ ಇದೊಂದು ವರ್ಷ ನೀವು ಬೆಂಗಳೂರಿಗೆ ಬಂದು ನನ್ನ ಹುಟ್ಟು ಹಬ್ಬ ಆಚರಿಸುವುದು ಬೇಡ. ಕಳೆದ ವರ್ಷ ಏನೆಲ್ಲ ಆಯಿತು. ಯಾರೆಲ್ಲ ಕೆಲಸ ಕಳೆದುಕೊಂಡು ಊರು ಸೇರಿಕೊಳ್ಳಬೇಕಾಯಿತು, ಒಂದೂತ್ತಿನ ಊಟಕ್ಕೂ ಹಲವರು ಹೇಗೆಲ್ಲ ಪರದಾಡಬೇಕಾಗಿ ಬಂತು ಅನ್ನೋದು ನಂಗೆ ಗೊತ್ತಿದೆ. ದಯಮಾಡಿ ನೀವು ಈಗ ಮೊದಲು‌ ನಿಮ್ಮ‌ನಿಮ್ಮ‌ ಮನೆ-ಮಠ ಅಂತ ನೋಡ್ಕೊಳ್ಳಿ, ಆಮೇಲೆ ಇನ್ನೊಬ್ಬರ ಬಗ್ಗೆ ಯೋಚಿಸಿ ಅಂತ ಮನವಿ ಮಾಡಿಕೊಂಡರು. ಇದೊಂದು ವಿಚಾರದ ಜತೆಗೆ ಇವತ್ತೇ ಅವರು ಫೇಸ್ ಬುಕ್ ಲೈವ್ ಬರೋದಿಕ್ಕೆ ಇನ್ನೊಂದು ಕಾರಣವೂ ಇತ್ತು. ಅದು ಬಹು ನಿರೀಕ್ಷಿತ ‘ರಾಬರ್ಟ್’ ಚಿತ್ರದ ಬಿಡುಗಡೆ ವಿಚಾರ. ಮಾರ್ಚ್ 11ರಂದು ‘ರಾಬರ್ಟ್’ ರಿಲೀಸ್‌ಆಗುತ್ತಿದೆ. ಹಾಗಂತ ನಿರ್ಮಾಪಕ ಉಮಾಪತಿ ಸೇರಿದಂತೆ ಚಿತ್ರ ತಂಡ ಡಿಸೈಡ್ ಮಾಡಿದೆ.ಅದನ್ನು ದರ್ಶನ್ ಫೇಸ್ ಬುಕ್ ಲೈವ್ ನಲ್ಲಿ ಅಧಿಕೃತ ವಾಗಿ ಹೇಳಿದರು.’ ಈ ಬಾರಿ ಯಾವುದೇ ರೀತಿಯ ಜನ್ಮದಿನ ಆಚರಣೆ ಇರುವುದಿಲ್ಲ .ಹಾಗಾಗಿ, ಯಾರೂ ಮನೆ ಬಳಿ ಬರಬೇಡಿ ಅಂತ ಮೊದಲು ಅಭಿಮಾನಿಗಳಿಗೆ ಮನವಿ ಮಾಡಿದರು.

Related Posts

error: Content is protected !!