ಸಲಗ ಶಾಸನ ಬರೆದ ದುನಿಯಾ ಅಭಿಮಾನಿ! ರಿಲೀಸ್ ಮೊದಲೇ ಇತಿಹಾಸದ ಬರಹ

ಸಲಗ ತಂಡಕ್ಕೆ‌ಹೆಚ್ಚಿದ ಸಂಭ್ರಮ…

ಅಭಿಮಾನ ಅನ್ನೋದೇ ಹಾಗೆ. ಒಂದೊಂದ್ ಸಲ ತುಂಬಾನೇ ಮೆಚ್ಚಿಸುತ್ತೆ, ಅತಿಯಾಗಿ ಪ್ರೀತಿಸುವಂತೆ ಮಾಡುತ್ತೆ.
ಇಲ್ಲೀಗ ಹೇಳ ಹೊರಟಿರುವ ವಿಷಯ, ‘ದುನಿಯಾ’ ವಿಜಯ್ ಅವರ ಅಪ್ಪಟ ಅಭಿಮಾನಿಯೊಬ್ಬರ ಕುರಿತು. ಈಗಾಗಲೇ ಅನೇಕ ಸ್ಟಾರ್ ನಟರ ಬೆರಳೆಣಿಕೆಯಷ್ಟು ಅಭಿಮಾನಿಗಳು ಒಂದಲ್ಲ ಒಂದು ಸುದ್ದಿಯಲ್ಲಿದ್ದಾರೆ. ಆ ಸಾಲಿಗೆ ಈಗ ‘ದುನಿಯಾ’ ವಿಜಯ್ ಅಭಿಮಾನಿಯೂ ಸೇರಿದ್ದಾರೆ.

ಇಷ್ಟಕ್ಕೂ ಆ ಅಭಿಮಾನಿ ಬೇರಾರೂ ಅಲ್ಲ, ವೀರೇಶ್ ಆಚಾರ್. ಇವರ ಬಗ್ಗೆ ಇಷ್ಟೊಂದು ಪೀಠಿಕೆ ಯಾಕೆಂದರೆ, ಯಾರು ಮಾಡದೇ ಇರುವ ಒಂದು ಕೆಲಸವನ್ನ ಈ ವೀರೇಶ್ ಆಚಾರ್ ಮಾಡಿದ್ದಾರೆ. ಇವರು ‘ದುನಿಯಾ’ ವಿಜಯ್ ಅವರ ಅಪ್ಪಟ ಅಭಿಮಾನಿ. ಅಷ್ಟಕ್ಕೂ ವೀರೇಶ್ ಆಚಾರ್ ಮಾಡಿದ್ದೇನ್ ಗೊತ್ತಾ?

ಎಲ್ಲರಿಗೂ ಗಿತ್ತಿರುವಂತೆ ‘ದುನಿಯಾ’ ವಿಜಯ್ ಇದೇ ಮೊದಲ ಸಲ ನಿರ್ದೇಶನ ಮಾಡಿದ್ದಾರೆ. ಅವರ ಮೊದಲ ಚಿತ್ರ ‘ಸಲಗ’ ರಿಲೀಸ್ ಗೂ ಮೊದಲೇ ಸೆನ್ಸೇಷನ್ ಸೃಷ್ಟಿಸಿದೆ. ಈ ಚಿತ್ರದ ಫಸ್ಟ್ ಲುಕ್, ಮೋಷನ್ ಪೋಸ್ಟರ್, ಸಾಂಗ್ ಗೆ ಈಗಾಗಲೇ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.
ಇದೇ ಮೊದಲ ಬಾರಿಗೆ ಸಿನಿಮಾವೊಂದಕ್ಕೆ ಶಾಸನ ರಚನೆ ಮಾಡಲಾಗಿದೆ ಅನ್ನೋದೇ ಈ ಹೊತ್ತಿನ ವಿಶೇಷ.
ಹೌದು, ಪುರಾತನ ಶಿಲಾ ಶಾಸನದ ಮಾದರಿಯಲ್ಲಿ ‘ಸಲಗ’ ಶಾಸನ ರಚನೆ ಮಾಡುವ ಮೂಲಕ ಅಭಿಮಾನಿ ವೀರೇಶ್ ಆಚಾರ್ ಈಗ ಎಲ್ಲರ ಮನ ಗೆದ್ದಿದ್ದಾನೆ.

‘ಸಲಗ’ ಚಿತ್ರದ ಶಾಸನ ಬರೆದು ಸ್ಥಬ್ಧ ಚಿತ್ರವನ್ನ ವಿನ್ಯಾಸ ಗೊಳಿಸುವ ಮೂಲಕ ಇಡೀ ಚಿತ್ರತಂಡಕ್ಕೆ ಖುಷಿ ತಂದಿದ್ದಾನೆ.
ಸಿನಿಮಾ ರಿಲೀಸ್ ಮುನ್ನವೇ ಮೊದಲೇ ಶತದಿನದ ಸಂಭ್ರಮದ ಶಾಸನ ಬರೆದು ಚಿತ್ರತಂಡಕ್ಕೆ ಸರ್ಪೈಸ್ ಗಿಫ್ಟ್ ಕೊಡುವ ಮೂಲಕ ಅಭಿಮಾನ ತೋರಿದ್ದಾನೆ.
ಅಂದಹಾಗೆ, ಜನವರಿಗೆ ‘ಸಲಗ’ ಪ್ರೆಕ್ಷಕರ ಮುಂದೆ ಬರುವ ತಯಾರಿ ನಡೆಸಿದೆ.

ದುನಿಯಾ ವಿಜಯ್ ನಿರ್ದೇಶಿಸಿ ನಟಿಸಿರೋ ಈ ಚಿತ್ರದಲ್ಲಿ ಡಾಲಿ ಧನಂಜಯ, ಸಂಜನಾ ಆನಂದ್ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಟೀಸರ್ ಮತ್ತು ಹಾಡುಗಳಿಂದ ಗಮನ ಸೆಳೆದಿರೋ ಸಲಗ ಪ್ರೇಕ್ಷಕರಲ್ಲಿ ಸಿಕ್ಕಾಪಟ್ಟೆ ಕುತೂಹಲ ಹುಟ್ಟಿಸಿದೆ. ಕೆ.ಪಿ.ಶ್ರೀಕಾಂತ್ ಚಿತ್ರದ ನಿರ್ಮಾಪಕರು.

Related Posts

error: Content is protected !!