ಸರೋಜಮ್ಮನ ಮೊಮ್ಮಗಳು ಜಯಶ್ರೀಗೆ ಒಲಿದ ಅದೃಷ್ಟ!

ಹಾಟ್ ಫೋಟೋಶೂಟ್  ಮೂಲಕವೇ ಉದಯೋನ್ಮುಖ ನಟಿಗೆ ಸಿಕ್ಕಿತಾ ಅಂತಹದೊಂದು ಅವಕಾಶ ? 

ಮಾರಿ‌ಮುತ್ತು ಪಾತ್ರದ ಖ್ಯಾತಿಯ ಹಿರಿಯ ನಟಿ‌ ಸರೋಜಮ್ಮ ಅವರ ಮೊಮ್ಮಗಳು‌ ಹಾಗೂ‌ ಕನ್ನಡದ‌ ಉದಯೋನ್ಮುಖ ನಟಿ ಜಯಶ್ರೀ ಆರಾಧ್ಯ ಗೆ ಅದೃಷ್ಟ ಖುಲಾಯಿಸಿದೆ. ಕೊರೋನಾ ಸಂಕಷ್ಟದ ನಡುವೆಯೂ ಅವರಿಗೆ ‌ಸಿನಿಮಾ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಇತ್ತೀಚೆಗೆ ಹಾಟ್ ಫೋಟೋ ಶೂಟ್ ನಲ್ಲಿ ಪಡ್ಡೆ ಹುಡುಗರ ಎದೆಯೊಳಗೆ ಕಿಚ್ಚು ಹೊತ್ತುವ ಹಾಗೆ ಮಿರ ಮಿರ ಮಿಂಚಿದ ಕಾರಣವೋ, ಪ್ರತಿಭೆಗೆ ಒಲಿದು ಪ್ರತಿಫಲವೋ ಗೊತ್ತಿಲ್ಲ, ಬಹುಬೇಗ ಜಯಶ್ರೀ ಆರಾಧ್ಯ ಕನ್ನಡದಾಚೆ ಈಗ ಕಾಲಿವುಡ್ ಗೂ ಕಾಲಿಡುತ್ತಿರುವುದು ವಿಶೇಷ.

‘ಪುಟ್ಟರಾಜು ಲವರ್ ಆಫ್ ಶಶಿಕಲಾ’ ಹಾಗೂ ಅಧಿಕ ಪ್ರಸಂಗಿ ಚಿತ್ರಗಳ‌ ನಂತರವೀಗ ಜಯಶ್ರೀ, ಮೂರನೇ ಚಿತ್ರವೊಂದಕ್ಕೆ ನಾಯಕಿ ಆಗಿದ್ದಾರೆ.‌’ ಎ ವಿಲನ್ ಇನ್ ವಿಲ್ಲಾ ‘ ಎನ್ನುವುದು ಆ ಚಿತ್ರದ ಹೆಸರು.‌ಶುಕ್ರವಾರವಷ್ಟೆ ಆ ಚಿತ್ರದ ಮೊದಲ ಪೋಸ್ಟರ್ ರಿವೀಲ್ ಆಗಿದೆ. ನವ ಪ್ರತಿಭೆ ಅಭಿನವ್ ವಿಖ್ಯಾತ್ ಇದರ‌ ನಾಯಕ‌‌ ನಟ. ಕನ್ನಡದ ಜತೆಗೆ ಈ ಚಿತ್ರ ತಮಿಳಿನಲ್ಲೂ ನಿರ್ಮಾಣವಾಗುತ್ತಿದೆ. ವೃಂದ ಮಾಸ್ಟರ್ ನಿರ್ದೇಶನದ ಈ ಚಿತ್ರಕ್ಕೆ ದೀಪಾ ಪ್ರಶಾಂತ್ ಬಂಡವಾಳ ಹಾಕುತ್ತಿದ್ದಾರೆ. ‌ಉಳಿದಂತೆ‌ ನಟಿ ಜಯಶ್ರೀ ಪಾಲಿಗೆ ಇದು ಅದೃಷ್ಟದ ಅವಕಾಶ.

.  ಕಳೆದ ‌ವರ್ಷವಷ್ಟೇ ಪುಟ್ಟರಾಜು ಲವರ್ ಆಫ್ ಶಶಿಕಲಾ‌’ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟಿದ್ದರು.ಅ‌ ಚಿತ್ರ ತೆರೆ ಕಾಣುವ ಹೊತ್ತಿಗೆ ‘ ಅಧಿಕ ಪ್ರಸಂಗಿ’. ಹೆಸರಿನ ಹೊಸಬರ ಚಿತ್ರಕ್ಕೆನಾಯಕಿ‌ಆಗಿದ್ದರು.‌ ಕೊರೋನಾ ಕಾರಣ ಅದಿನ್ನೂ ಬಿಡುಗಡೆ ಆಗುವುದಕ್ಕೆ‌ ಸಿದ್ದತೆ ನಡೆಸಿರುವಾಗಲೇ, ದ್ವಿಭಾಷಾ ಚಿತ್ರವೊಂದಕ್ಕೆ ನಾಯಕಿ‌ಆಗಿದ್ದಾರೆ. ಅವರೇ ಹೇಳುವ ಹಾಗೆ ಇದೊಂದು‌ಅದೃಷ್ಟದ ಅವಕಾಶ‌.

‘ ನಿಜವಾಗಿಯೂ‌ ನನಗಿದು ‌ಅದೃಷ್ಟದ ಅವಕಾಶ. ಯಾಕಂದ್ರೆ ನಾನು ಇಷ್ಟು ಬೇಗ ಕಾಲಿವುಡ್ ಗೂ ಪರಿಚಯವಾಗಬಹುದು ಅಂತ ಯೋಚಿಸಿರಲಿಲ್ಲ.‌ಆದರೆ‌ ನಿರ್ದೇಶಕ ವೃಂದಾ ಮಾಸ್ಟರ್‌ ಕಡೆಯಿಂದಲೇ ಈ ಅವಕಾಶ ಬಂತು.‌ ಸಿನಿಮಾದ ಬಗ್ಗೆ ಹೇಳಿದರು.‌ ನಿರ್ಮಾಪಕರ‌ ಜತೆಗೂ ಮಾತುಕತೆ ನಡೆಯಿತು.‌ ಕತೆ‌ ಜತೆಗೆ ಪಾತ್ರದ ಬಗ್ಗೆ ಚರ್ಚೆ ಆಯಿತು. ಕತೆ‌ಜತೆಗೆ ಪಾತ್ರವೂ ಇಷ್ಟವಾಯಿತು. ಹಾಗಾಗಿ‌ಒಪ್ಪಿಕೊಂಡೆ’ ಎನ್ನುವ ‌ಜಯಶ್ರೀ ಅವರಿಗೆ ಪಾತ್ರ ಅಥವಾ ಕತೆ ಚೆನ್ನಾಗಿದೆ ಎನ್ನುವುದಕ್ಕಿಂದ  ಎರಡು ಭಾಷೆಯಲ್ಲಿ ನಿರ್ಮಾಣವಾಗುತ್ತಿರುವ ಚಿತ್ರ ಎನ್ನುವುದೇ ಫುಲ್ ಎಕ್ಸೈಟ್ ಮೆಂಟ್ ತಂದಿದೆ.

Related Posts

error: Content is protected !!