Categories
ಸಿನಿ ಸುದ್ದಿ

ಮೈಲಾರಿಗೆ ದಶಕದ ಸಂಭ್ರಮ !

ಶಿವಣ್ಣ ನಿವಾಸದಲ್ಲಿ‌ ನಡೆಯಿತು ಅಭಿಮಾನಿಗಳ ಸಂಭ್ರಮಾಚರಣೆ

ಸೆಂಚುರಿ ಸ್ಟಾರ್ ಶಿವರಾಜ್ ಅಭಿನಯದ ಮೈಲಾರಿ ಚಿತ್ರ ತೆರೆಕಂಡು ಇಲ್ಲಿಗೆ ಹತ್ತು ವರ್ಷ‌ .ಅಂದ್ರೆ ಬರೋಬ್ಬರಿ ಒಂದು ದಶಕ.‌ಆರ್. ಚಂದ್ರು ನಿರ್ದೇಶನ , ಕೆ.ಪಿ.ಶ್ರೀಕಾಂತ್ ನಿರ್ಮಾಣದಲ್ಲಿ ಬಂದ ಚಿತ್ರ ಇದು. ಕನ್ನಡದ ಬ್ಲಾಕ್ ಬಸ್ಟರ್ ಚಿತ್ರಗಳಲ್ಲಿ ಇದು ಕೂಡ ಒಂದು. ಈ ಚಿತ್ರದ ಮೂಲಕವೇ ನಿರ್ದೇಶಕ ಆರ್. ಚಂದ್ರು , ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ಸೆಂಚುರಿ ಸ್ಟಾರ್ ಅಂತ ಬಿರುದು ಕೊಟ್ಟರು. ಅದು ಅಭಿಮಾನಿಗಳ ಮೂಲಕ.

ಇಂತಹ ದಾಖಲೆಯ ಚಿತ್ರ ತೆರೆ ಕಂಡು ಹತ್ತು ವರ್ಷ ಆದ ಹಿನ್ನೆಲೆಯಲ್ಲಿ ಅದರ ಸುಮಧುರ ನೆನಪಿಗೆ ಅಖಿಲ ಕರ್ನಾಟಕ ಗಂಡುಗಲಿ ಶಿವರಾಜಕುಮಾರ್ ಅಭಿಮಾನಿಗಳ ಸಂಘ ಹಾಗೂ ಶಿವರಾಜ್ ಕುಮಾರ್ ಸೇನಾ‌ಸಮಿತಿ ವತಿಯಿಂದ ಭಾನುವಾರ( ಡಿಸೆಂಬರ್ 20) ಬೆಂಗಳೂರಿನ ನಾಗವಾರ ಮಾನ್ಯತಾ ಟೆಕ್ ಪಾರ್ಕ್ ಬಳಿ ಇರುವ ನಟ ಶಿವರಾಜ್ ಕುಮಾರ್ ನಿವಾಸದಲ್ಲಿ ಮೈಲಾರಿ ಹತ್ತು ವರ್ಷದ ಸಂಭ್ರಮಾಚರಣೆ ಆಯೋಜಿಸಿದ್ದರು.ಅಭಿಮಾನಿಗಳು ಪ್ರೀತಿಯಿಂದ ಆಯೋಜಿಸಿದ್ದ ಈ ಸರಳ ಸುಂದರ ಕಾರ್ಯ ಕ್ರಮದಲ್ಲಿ ನಿರ್ಮಾಪಕ‌ ಶ್ರೀಕಾಂತ್ ಸೇರಿದಂತೆ ಹಲವರು ಹಾಜರಿದ್ದರು.

ಮೈಲಾರಿ‌ ಹತ್ತು ವರ್ಷದ ನೆನಪಿಗೆ ಅಭಿಮಾನಿಗಳು ತಂದಿದ್ದ ಬೃಹತ್ ಗಾತ್ರದ ಕೇಕ್ ಕತ್ತರಿಸಿದ ನಟ ಶಿವಣ್ಣ, ಅವರೊಂದಿಗೆ ಕ್ಯಾಮೆರಾಕ್ಕೆ ಪೋಸು ಕೊಟ್ಟರು. ಅವರ ಪತ್ನಿ ಗೀತಾ ಶಿವರಾಜ್ ಕುಮಾರ್, ಪುತ್ರಿ ನಿವೇದಿತಾ ಶಿವರಾಜ್ ಕುಮಾರ್ ಭಾಗಿಯಾದರು. ಆನಂತರ ಅಭಿಮಾನಿಗಳು ಮೈಲಾರಿ ಹತ್ತು ವರ್ಷದ ವಿಶೇಷ ಕೊಡುಗೆಯನ್ನು ಶಿವರಾಜ್ ಕುಮಾರ್ ದಂಪತಿಗೆ ನೀಡಿ ಗೌರವಿಸಿದರು.

Categories
ಸಿನಿ ಸುದ್ದಿ

ಕಿಚ್ಚ ಬಯೋಗ್ರಫಿಗೆ ನೀವು ಧ್ವನಿ ನೀಡಬಹುದು!

ಆಡಿಯೋ ಬುಕ್ ರೂಪಕ್ಕೆ ಕಿಚ್ಚ ಬಯೋಗ್ರಫಿ, ಸಿನಿಮಾ ಇತಿಹಾಸದಲ್ಲಿ ಆಡಿಯೋ ರೂಪಕ್ಕೆ ಮೊದಲ ಕೃತಿ

ಸಿನಿಮಾ ಪತ್ರಕರ್ತ ಶರಣು ಹುಲ್ಲೂರು ಬರೆದ ‘ ಕಿಚ್ವ’ ಬಯೋಗ್ರಫಿ ಅತೀ ಕಡಿಮೆ ಅವದಿಯಲ್ಲೇ ಹೆಚ್ಚು ಮಾರಾಟಗೊಂಡ ಪುಸ್ತಕ ಎನ್ನುವ ಹೆಗ್ಗಳಿಕೆಯ ನಡುವೆಯೇ ಅದೀಗ ಡಿಜಿಟಲ್ ರೂಪ ಪಡೆದಿದೆ. ಆನ್ ಲೈನ್ ನಲ್ಲಿ ಅದು ಇ ಬುಕ್ ರೂಪದಲ್ಲಿ‌ ಸಿಗಲಿದೆ.

ಮೈಲಾಂಗ್ ಬುಕ್ಸ್ ಸಂಸ್ಥೆ ಕಿಚ್ಚ ಬಯೋಗ್ರಫಿಯನ್ನು ಆಡಿಯೋ ಧ್ವನಿ ಮೂಲಕ ಹೊರತರಲು ಯೋಜಿಸಿದ್ದು, ಅದಕ್ಕಾಗಿ ಜನಸಾಮಾನ್ಯರಿಗೆ ಒಂದೊಳ್ಳೆ ಅವಕಾಶ ನೀಡಿದೆ. ಕಿಚ್ಚ ಬಯೋಗ್ರಫಿಗೆ ನೀವು ಧ್ವನಿಯಾಗುವಂತಹ ಅವಕಾಶ ಕಲ್ಪಿಸಿದೆ. ಇಂತಹೊಂದು ಅವಕಾಶವನ್ನು ಮೈಲಾಂಗ್ ಬುಕ್ಸ್ ನೀಡಿರುವುದು ವಿಶೇಷ.

ಹಾಗೊಂದು ವೇಳೆ, ನಿಮ್ಮ ಧ್ವನಿಯ ಸ್ಯಾಂಪಲ್‌ನ್ನು ಮೈಲಾಂಗ್ ಮೇಲ್‌ ವಿಳಾಸಕ್ಕೆ ಕಳುಹಿಸಿದರೆ, ಆ ಧ್ವನಿ ಸೂಕ್ತ ಎಂದು ಅನಿಸಿದರೆ ಇಡೀ ಪುಸ್ತಕಕ್ಕೆ ನಿಮ್ಮ ಧ್ವನಿಯನ್ನು ಕೊಡಬಹುದು. ಆದರೆ ಪುಸ್ತಕಕ್ಕೆ ಧ್ವನಿಯಾಗಲು ಬಯಸುವವರಿಗೆ ಕೆಲವು ಷರತ್ತು ನೀಡಿದೆ. ಅವು ಇಂತಿವೆ‌.

– 24-45ರ ಒಳಗಿನ ಗಂಡಸಿನ ಧ್ವನಿಯಾಗಿರಬೇಕು
– ಬೆಂಗಳೂರಿನಲ್ಲಿ ರೆಕಾರ್ಡಿಂಗ್‌ನಲ್ಲಿ ಪಾಲ್ಗೊಳ್ಳಲು ಸಿದ್ಧರಿರಬೇಕು
– ಬೇಸ್ ವಾಯ್ಸ್ ಇದ್ದವರಿಗೆ ಆದ್ಯತೆ
– ಆಯ್ಕೆಯ ಅಂತಿಮ ನಿರ್ಧಾರ ಮೈಲಾಂಗ್ ಸಂಸ್ಥೆಯದ್ದು

ಆಸಕ್ತರು ಇದಿಷ್ಟು ಷರತ್ತುಗಳೊಂದಿಗೆ ತಮ್ಮ ಧ್ವನಿಗಳ ರೆಕಾರ್ಡ್ ಅನ್ನು ಕಳುಹಿಸಲು ಜನವರಿ 7 ಕೊನೆಯ ದಿನಾಂಕ ಆಗಿದೆ. ಖ್ಯಾತ ಸಿನಿಮಾ ಪತ್ರಕರ್ತ ಶರಣು ಹುಲ್ಲೂರು ಬರೆದ’ ಕಿಚ್ಚ’ ಬಯೋಗ್ರಫಿ ಸೆಪ್ಟೆಂಬರ್ 2, 2020 ರಂದು ಲೋಕಾರ್ಪಣೆ ಗೊಂಡಿತ್ತು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪುಸ್ತಕ ಬಿಡುಗಡೆ ಮಾಡಿದ್ದರು. ಸಹಜವಾಗಿಯೇ ಸುದೀಪ್ ಅಭಿಮಾನಿಗಳಿಂದ ಪುಸ್ತಕಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು.

ಕೆಲವೇ ದಿನಗಳಲ್ಲಿ ಮೊದಲ ಪ್ರತಿ ಮಾರಾಟವಾಗಿ, ಎರಡನೇ ಪ್ರತಿ ಸಿದ್ದಗೊಂಡಿತ್ತು. ಅದಕ್ಕೂ ಅದ್ಬುತ ಪ್ರತಿಕ್ರಿಯೆ ಬಂದಿತ್ತು. ‌ಅದೀಗ ಆಡಿಯೋ ಬುಕ್ ಆಗುವ ಯೋಜನೆಯೊಂದಿಗೆ ಇನ್ನೊಂದು ಹಂತಕ್ಕೆ ಹೋಗಿದೆ.ಇದರ ಅಷ್ಟು ಕ್ರೆಡಿಟ್ ಪತ್ರಕರ್ತ ಶರಣು ಹುಲ್ಲೂರು ಅವರಿಗೆ ಸಲ್ಲುತ್ತದೆ.

Categories
ಸಿನಿ ಸುದ್ದಿ

ಈತ ಕೊಲೆ ಕೇಸಿನ ಹಿಂದೆ ಬಿದ್ದ ಜಯರಾಮ್‌ !

‘ರಾಮಾ ರಾಮಾ ರೇ’ ಖ್ಯಾತಿಯ ನಟರಾಜ್‌ ಈಗ ಸಿಸಿಬಿ ಪೊಲೀಸ್‌

‘ರಾಮಾ ರಾಮಾ ರೇ’ ಚಿತ್ರದ ಖ್ಯಾತಿಯ ನಟ ನಟರಾಜ್ ಮತ್ತೆ ಕ್ಯಾಮೆರಾ ಮುಂದೆ ನಿಂತಿದ್ದಾರೆ.’ ಕಳ್ಬೆಟ್ಟದ ದರೋಡೆಕೋರರು’ ಚಿತ್ರದ ನಂತರದ ಸಣ್ಣ ಗ್ಯಾಪ್ ಬಳಿಕ ಸದ್ದಿಲ್ಲದೆ, ಸುದ್ದಿಯೂ ಮಾಡದೆ ಸಿಸಿಬಿ ಪೋಲಿಸ್ ಆಗಿ ತೆರೆ ಮೇಲೆ ಬರಲು ರೆಡಿಯಾಗಿದ್ದಾರೆ. ಸುಧೀರ್ ಶಾನ್ ಬೋಗ್ ನಿರ್ದೇಶನದ ಸಸ್ಪೆನ್ಸ್, ಥ್ರಿಲ್ಲರ್ ಚಿತ್ರದಲ್ಲಿ ನಟರಾಜ್, ಮಫ್ತಿಯಲ್ಲಿರುವ ಸಿಸಿಬಿ ಕ್ರೈಮ್‌ ಬ್ರ್ಯಾಂಚ್ ಪೊಲೀಸ್ ‌ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ಸದ್ಯಕ್ಕೆ ಈ ಚಿತ್ರಕ್ಕಿನ್ನು ಟೈಟಲ್ ಫಿಕ್ಸ್ ಆಗಿಲ್ಲ. ಆದರೆ ಈ ಚಿತ್ರಕ್ಕೆ ಒಂದು ಹಂತದ ಚಿತ್ರೀಕರಣ ಮುಗಿದು ಹೋಗಿದೆ. ಇದಕ್ಕಾಗಿಯೇ ಚಿತ್ರ ತಂಡ ಮಂಗಳೂರು, ಮಲ್ಪೆ, ಮರವಂತೆ ಬೀಚ್ ಸುತ್ತು ಹಾಕಿ ಬಂದಿದೆ. ಒಂದೆರೆಡು‌ ದಿನ ಬೆಂಗಳೂರಿನಲ್ಲೂ ಶೂಟಿಂಗ್ ನಡೆದಿದೆ. ಈ ಹಂತದಲ್ಲಿ ನಟರಾಜ್ ಅವರ ಪಾತ್ರದ ಗೆಟಪ್ ರಿವೀಲ್ ಆಗುವ ಮೂಲಕ ಸುಧೀರ್‌ ಶಾನ್‌ ಬೋಗ್‌ ನಿರ್ದೇಶನದ ಹೊಸ ಸಿನಿಮಾ ವಿಚಾರ ಬಹಿರಂಗಗೊಂಡಿದೆ.

“ಅನಂತು ವರ್ಸಸ್ ನುಸ್ರತ್ʼ ಚಿತ್ರದ ನಂತರ ನಿರ್ದೇಶಕ ಸುಧೀರ್ ಶಾನ್ ಬೋಗ್ ಆ್ಯಕ್ಷನ್ ಕಟ್ ಹೇಳುತ್ತಿರುವ ಚಿತ್ರ ಇದು‌.  ಸೆಕ್ರೆಡ್ ವುಡ್ಸ್ ಪ್ರೊಡಕ್ಷನ್ ಮೂಲಕ ನಿರ್ಮಾಣವಾಗುತ್ತಿದ್ದು, ನಟರಾಜ್ ಹುಳಿಯಾರ್ ಅವರ ಸಣ್ಷಕತೆ ಆಧರಿಸಿ ಗೌತಮ್ ಜೋತ್ಸಾ ಚಿತ್ರಕತೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಗಣೇಶ್ ಹೆಗಡೆ ಛಾಯಾಗ್ರಹಣ ಹಾಗೂ ಸುನಾದ್ ಗೌತಮ್  ಸಂಗೀತ ಸೇರಿದಂತೆ ಅನುಭವಿ ತಂತ್ರಜ್ಞರನ್ನೇ ಚಿತ್ರ ತಂಡ ಆಯ್ಕೆ ಮಾಡಿಕೊಂಡಿದೆ. ಉಳಿದಂತೆ ಚಿತ್ರದ ತಾರಾಗಣದಲ್ಲಿ ನಟರಾಜ್ ಜತೆಗೆ ಚಕ್ರವರ್ತಿ ಚಂದ್ರಚೂಡ್, ಶ್ರೀಕಾಂತ್, ಕೃತಿಕಾ ರವೀಂದ್ರ , ಸಂಪತ್ ಮೈತ್ರಿಯಾ, ಮಠ ಚಿತ್ರದ ಖ್ಯಾತಿಯ ಶಶಿಧರ್ ಭಟ್ ಹಾಗೂ ಮೋಹನ್ ಶೆಣೈ ಸೇರಿದಂತೆ ದೊಡ್ಡ ತಂಡವೆ‌ ಇದೆ. ಒಟ್ಟಿನಲ್ಲಿ ಒಂದೊಳ್ಳೆ ಟೀಮ್‌ ಮೂಲಕ ಅಷ್ಟೇ ಒಳ್ಳೆಯ ಸಿನಿಮಾ ಮಾಡುವ ಕಾತರದಲ್ಲಿದೆ ಚಿತ್ರತಂಡ. ಈ ತಂಡದೊಂದೊಗೆ ನಟರಾಜ್ ಇದೇ ಮೊದಲು ಪೊಲೀಸ್‌ ಆಗಿ ಬೆಳ್ಳಿ ಪರದೆ ಮೇಲೆ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಅಂದ ಹಾಗೆ ಚಿತ್ರದಲ್ಲಿ ಅವರ ಪಾತ್ರದ ಹೆಸರು ಜಯರಾಮ್.‌

ನಾನಿಲ್ಲಿ ಪೊಲೀಸ್‌ ಇನ್ಸ್‌ ಸ್ಪೆಕ್ಟರ್.‌ ಹೆಸರು ಜಯರಾಮ್‌ ಅಂತ. ಆತ ಸಿಟಿ ಕ್ರೈಮ್‌ ಬ್ರ್ಯಾಂಚ್‌ ನಲ್ಲಿ ಕೆಲಸ ಮಾಡುವ ಅಧಿಕಾರಿ. ಹಾಗಂತ ಆತ ಎಂದಿಗೂ ಪೊಲೀಸ್‌ ಡ್ರೆಸ್‌ ಹಾಕಿಕೊಂಡವನಲ್ಲ. ಆತನದ್ದು ಮಫ್ತಿ ನಲ್ಲಿರುವ ಪೊಲೀಸ್‌. ಒಂಥರ ಅಂಡರ್‌ಕಾಪ್.‌ ಒಂದು ಕೊಲೆ ಕೇಸಿನ ತನಿಖೆಯಲ್ಲಿ ಆತನ ಪಾತ್ರ ಹೇಗಿರುತ್ತೆ, ಆತನ ವರ್ಕ್‌ ಶೈಲಿ ಎಂಥದ್ದು, ಆ ಕೊಲೆ ಕೇಸಿನ ಹಿಂದಿನ ಜಾಡು ಎಂಥದ್ದು ಎನ್ನುವುದೆಲ್ಲ ಚಿತ್ರದ ಕತೆಯೊಳಗಿನ ಸಸ್ಪೆನ್ಸ್‌ ಸಂಗತಿ. ತುಂಬಾ ಇಂಟೆರೆಸ್ಟಿಂಗ್‌ ಆಗಿರುವ ಕತೆ ಇದು. ಮೇಲ್ನೊಟಕ್ಕೆ ಇದಿಷ್ಟೇ ಇರಬಹುದು ಅಂತೆನಿಸಿದರೂ, ಸಸ್ಪೆನ್ಸ್‌ ಹಾಗೂ ಥ್ರಿಲ್ಲಿಂಗ್‌ ಸಬ್ಜೆಕ್ಟ್‌ ನಲ್ಲೂ ತುಂಬಾ ಹೊಸತಾದ ವಿಚಾರಗಳು ಇಲ್ಲಿವೆ. ಅವೆಲ್ಲ ಕನ್ನಡ ಪ್ರೇಕ್ಷಕರಿಗೆ ನಿಜಕ್ಕೂ ಹೊಸತಾದ, ಇಂಟೆರೆಸ್ಟಿಂಗ್‌ ಹುಟ್ಟಿಸುವ ವಿಷಯಗಳೇ . ನಾನು ಕೂಡ ಇಂಪ್ರೆಸ್‌ ಆಗಿದ್ದೇ ಈ ಕಂಟೆಂಟ್‌ ಕಾರಣದಿಂದಲೇ.

  • ನಟರಾಜ್‌, ನಟ

ಕಳ್ಬೆಟ್ಟದ ದರೋಡೆಕೋರರು ಚಿತ್ರದ ನಂತರ ಹೊಸ ಪಾತ್ರಗಳಿಗೆ ತಮ್ಮನ್ನು ತಾವು ರೆಡಿ ಮಾಡಿಕೊಳ್ಳುವಾಗ ನಟರಾಜ್‌, ಜಿಮ್ ನಲ್ಲಿ ವರ್ಕೌಟ್‌ ಶುರು ಮಾಡಿದ್ದರು. ಸಿಕ್ಸ್‌ ಪ್ಯಾಕ್‌ ಕೂಡ ಮಾಡಿಕೊಂಡಿದ್ದರು. ಅವೆಲ್ಲವುದರ ನಡುವೆ ಒಂದೆರೆಡು ಸಿನಿಮಾಗಳು ಮಾತುಕತೆಯಲ್ಲಿವೆ ಅಂತಲೂ ಹೇಳಿದ್ದರು. ಆದರೆ ಅವ್ಯಾವು ಅಂತ ಹೇಳಿರಲಿಲ್ಲ. ಆಗಲೇ ಫಿಕ್ಸ್‌ ಆಗಿದ್ದು ಈ ಚಿತ್ರ. ಹೆಚ್ಚು ಕಡಿಮೆ ಒಂದೂವರೆ ವರ್ಷದ ಸಿದ್ದತೆ ಇದು. ಈ ಪಾತ್ರಕ್ಕೆ ಹೇಗೆ ಸೆಲೆಕ್ಟ್‌ ಆಗಿದ್ದು ಎನ್ನುವುದಕ್ಕೆ ನಟರಾಜ್‌ ಹೇಳಿವುದು ಇದಿಷ್ಟು ;

ʼ ನಾನು ಈ ಪಾತ್ರಕ್ಕೆ ಸೆಲೆಕ್ಟ್‌ ಆಗಿದ್ದಕ್ಕೆ ಕಾರಣ ಭಾಗ್ಯರಾಜ್‌ ಚಿತ್ರದಲ್ಲಿನ ನನ್ನ ಪಾತ್ರ. ಅಲ್ಲೊಂದು ನೆಗೆಟಿವ್‌ ರೂಲ್‌ ಮಾಡಿದ್ದೆ. ನಂಗೆ ತುಂಬಾ ಖುಷಿ ಕೊಟ್ಟ ಪಾತ್ರ ಅದು. ನಿರ್ದೇಶಕ ಸುಧೀರ್‌ ಅವರು ಆ ಪಾತ್ರ ನೋಡಿದ್ದರಂತೆ. ಆ ಪಾತ್ರ ಅವರಿಗೆ ತುಂಬಾ ಹಿಡಿಸಿದ್ದರಿಂದಲೇ ಈ ಸಿನಿಮಾಕ್ಕೆ ಅವರು ನನ್ನನ್ನು ಅಪ್ರೋಚ್‌ ಮಾಡಿದ್ದು. ಆರಂಭದಲ್ಲಿ ಪಾತ್ರದ ಬಗ್ಗೆ ಹೇಳಿದ್ದರು. ಆದರೆ ಗೆಟಪ್‌ ಹೇಗಿರುತ್ತೋ ಏನೋ ಎನ್ನುವ ಅನುಮಾನ ಅವರಲ್ಲಿತ್ತಂತೆ. ಒಂದಿನ ಭೇಟಿ ಮಾಡಿದಾಗ, ಪಾತ್ರಕ್ಕೆ ನಾನೇನು ನಿರೀಕ್ಷೆ ಮಾಡುತ್ತಿದ್ದೇನೋ, ಅದೇ ರೀತಿ ನೀವಿದ್ದೀರಿ. ಸೂಪರ್‌, ಚೆನ್ನಾಗಿದೆ ನಿಮ್ಮ ಗೆಟಪ್‌ ಅಂದ್ರು. ಅಲ್ಲಿಂದ ಶುರುವಾಯ್ತು ಈ ಜರ್ನಿʼ  ಅಂತ ಅಂಡರ್‌ ಕಾಪ್‌ ಪೊಲೀಸ್‌ ಜಯರಾಮ್‌ ಆದ ಬಗೆಯನ್ನು ವಿವರಿಸಿದರು ನಟ ನಟರಾಜ್.‌

ಸದ್ಯಕ್ಕೆ ಈ ಚಿತ್ರದಲ್ಲಿ ಬ್ಯುಸಿಯಾಗಿರುವ ನಟರಾಜ್‌, ಇನ್ನೇರೆಡು ಚಿತ್ರ ಒಪ್ಪಿಕೊಂಡಿದ್ದಾರಂತೆ.

Categories
ಆಡಿಯೋ ಕಾರ್ನರ್

ಸೋಷಲ್ ಮೀಡಿಯಾದಲ್ಲಿ ವೈರಲ್ ಆಗಿದೆ ಚಂದನ್ ಶೆಟ್ಟಿ ಪಾರ್ಟಿ ಫ್ರೀಕ್ ಮ್ಯೂಜಿಕ್ ಆಲ್ಬಂ !

ಯುನೈಟೆಡ್ ಆಡಿಯೋ ಮೂಲಕ ಹೊರ ಬಂದ ಮೊದಲ ಕೊಡುಗೆ

ಬಿಗ್ ಬಾಸ್ ರಿಯಾಲಿಟಿ ಶೋ ಜತೆಗೆ ಪಾರ್ಟಿ ಸಾಂಗ್ ಆಲ್ಬಂ ಮೂಲಕ ಸಿಕ್ಕಾಪಟ್ಟೆ ಪಾಪ್ಯುಲರ್ ಆದ ಹೆಸರು ಚಂದನ್ ಶೆಟ್ಟಿ. ಅವರೀಗ ಮತ್ತೊಂದು ಹೊಚ್ಚ ಹೊಸ ಮ್ಯೂಜಿಕ್ ವಿಡಿಯೋ ಆಲ್ವಂ ಲಾಂಚ್ ಮಾಡಿದ್ದಾರೆ. ‘ ಒಂದೇ ಒಂದು ಪೆಗ್ ಗೆ ತಲೆ ಗಿರ ಗಿರ ಅಂತಿದೆ ‘ ಅಂತ ಈ ಹಿಂದೆ ಸಂಗೀತ ಪ್ರಿಯರ ತಲೆ ಗಿಮ್ಮ್ ಎನಿಸಿದ್ದ ಚಂದನ್ ಶೆಟ್ಟಿ ,ಈಗಲೂ ಅಂತಹದೇ ಒಂದು ಕಿಕ್ ಕೊಡುವ ಸಾಂಗ್ ಅನ್ನೇ ಸಂಗೀತ ಪ್ರಿಯರಿಗೆ ಕೊಟ್ಟಿದ್ದಾರೆ.ಈ ಆಲ್ಬಂ ಹೆಸರು ‘ಪಾರ್ಟಿ ಫ್ರೀಕ್”. ಇದು ಕೂಡ ಒಂದು ಪಾರ್ಟಿ ಸಾಂಗ್ ಅನ್ನೋದು ವಿಶೇಷ. ನ್ಯೂ ಈಯರ್ ಪಾರ್ಟಿಗೆ ಅಂತಲೇ ಸಾಹಿತ್ಯ ಬರೆದು , ಸಂಗೀತ ನೀಡಿ, ಅದರಲ್ಲಿ ತಾವೇ ಕುಣಿದು ಕುಪ್ಪಳಿಸಿ ಸಖತ್ ಕಿಕ್ ನೀಡುವಂತೆ ಮಾಡಿದ್ದಾರೆ ಚಂದನ್ ಶೆಟ್ಟಿ.

ಯೂನೈಟೆಡ್ ಪ್ರೊಡಕ್ಷನ್ಸ್ ಬ್ಯಾನರ್​ನಲ್ಲಿ ಮೂಡಿಬಂದ ‘ ಪಾರ್ಟಿ ಫ್ರೀಕ್ ‘ಹಾಡು ಶನಿವಾರ ಯೂನೈಟೆಡ್​ ಆಡಿಯೋಸ್ ಯೂಟ್ಯೂಬ್ ಚಾನೆಲ್​​ನಲ್ಲಿ ಬಿಡುಗಡೆ ಆಗಿದೆ. ಇದು ಅದ್ದೂರಿ ವೆಚ್ಚದಲ್ಲಿ ಮೂಡಿ ಬಂದ ‌ಮ್ಯೂಜಿಕ್ ಆಲ್ಬಂ. ಒಂದು ಸ್ಟಾರ್ ನಟರ ಸಿನಿಮಾ ದ ಹಾಡಿನ ಹಾಗೆಯೇ ರಿಚ್ ಆಗಿ ಬಂದಿದೆ. ಭಜರಂಗಿ ಮೂಹನ್ ನೃತ್ಯ ನಿರ್ದೇಶನದ ಈ ಹಾಡಿನಲ್ಲಿ ಚಂದನ್ ಶೆಟ್ಟಿ, ಅವರ ಪತ್ನಿ ನಿವೇದಿತಾ ಗೌಡ, ನಟಿ ನಿಶ್ವಿಕಾ ನಾಯ್ಡ, ನಟ ಧರ್ಮ ಸೇರಿದಂತೆ ದೊಡ್ಡ ತಂಡವೇ ಸ್ಕ್ರೀನ್ ಮೇಲೆ ಕಾಣಿಸಿಕೊಂಡಿದೆ.

ಹಾಡಿನ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದಲೇ ಶನಿವಾರ ಸುದ್ದಿಗೋಷ್ಟಿ ಕರೆದಿದ್ದ ತಂಡ, ಹಾಡಿನ ಹುಟ್ಟು ಮತ್ತು ಅದರ ಹಿನ್ನೆಲೆಯನ್ನು ಬಿಚ್ಚಿಟ್ಟಿತು.

ಚೈತನ್ಯ ಲಕಂಸಾನಿ ಈ ಹಾಡಿಗೆ ಬಂಡವಾಳ ಹೂಡಿದ್ದಾರೆ. ಮೂಲತಃ ಆಂಧ್ರದವರಾದ ಚೈತನ್ಯ, ಸಿನಿಮಾ ಕ್ಷೇತ್ರದಲ್ಲಿ ನೆಲೆಯೂರಬೇಕೆಂದು ಯೂನೈಟೆಡ್ ಪ್ರೊಡಕ್ಷನ್ಸ್ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. ಅದರ ಎಂಟ್ರಿಗೆ ಈ ಆಲ್ಬಂ ನಿರ್ಮಾಣ ಮಾಡಿದ್ದಾರಂತೆ. ಕನ್ನಡ ಮತ್ತು ತೆಲುಗಿನಲ್ಲಿ ಹೊಸ ವರ್ಷಾಚರಣೆಗೆ ಉಡುಗೊರೆ ರೂಪದಲ್ಲಿ ಮತ್ತು ಬ್ಯಾನರ್ ಲಾಂಚ್ ಮಾಡುವ ಉದ್ದೇಶಕ್ಕೆ ಪಾರ್ಟಿ ಫ್ರೀಕ್​ ಹೊರ ಬಂದಿದೆ.

ಈ ಹಾಡಿಗೆ ಸಾಹಿತ್ಯ ಬರೆದು, ಸಂಗೀತ ನೀಡಿ ಧ್ವನಿಯನ್ನೂ ನೀಡಿರುವ ಚಂದನ್​ ಶೆಟ್ಟಿ ಮಾತನಾಡಿ, ‘ ಒಂದು ವಾರದ ಹಿಂದಷ್ಟೇ ಈ ಆಡಿಯೋ ಸಂಸ್ಥೆ ಲಾಂಚ್ ಆಗಿದೆ. ಒಂದೇ ವಾರದಲ್ಲಿ ಯೂಟ್ಯೂಬ್‌ನಲ್ಲಿ ಒಳ್ಳೇ ರೀಚ್ ಸಿಕ್ಕಿದೆ. ಹೊಸ‌ಹೊಸ ಪ್ರತಿಭೆಗಳಿಗೋಸ್ಕರ ಈ ಚಾನೆಲ್ ತೆರೆಯಲಾಗಿದೆ. ಇನ್ನು ಹಾಡಿನ ಬಗ್ಗೆ ಹೇಳುವುದಾದರೆ, 3 ದಿನಗಳ ಕಾಲ ಶೆರ್ಟನ್ ಹೊಟೇಲ್​ನಲ್ಲಿ ಶೂಟಿಂಗ್ ಮಾಡಲಾಗಿದೆ. ಕನ್ನಡ ಮತ್ತು ತೆಲುಗಿನಲ್ಲಿ ಹಾಡು ಮೂಡಿಬಂದಿದ್ದು, ಈಗಾಗಲೇ ಮೆಚ್ಚುಗೆ ವ್ಯಕ್ತವಾಗಿದೆ’ ಎಂದರು. ಜನಕ

ಪಾರ್ಟಿ ಫ್ರೀಕ್ ಹಾಡಿನ ಚಿತ್ರೀಕರಣಕ್ಕೆ ಬರೋಬ್ಬರಿ 36 ಲಕ್ಷ ಮೊತ್ತವನ್ನು ಖರ್ಚು ಮಾಡಲಾಗಿದೆ. ಮೂರು ದಿನದಲ್ಲಿ ಚಿತ್ರೀಕರಣ ಮುಗಿಸಿಕೊಂಡ ಈ ಹಾಡಿನಲ್ಲಿ 80ಕ್ಕೂ ಅಧಿಕ ರಷ್ಯನ್​ ಡಾನ್ಸರ್​ಗಳಿದ್ದಾರೆ. 100ಕ್ಕೂ ಅಧಿಕ ಇಲ್ಲಿನ ನೃತ್ಯಗಾರರಿದ್ದಾರೆ. ಟಾಲಿವುಡ್ ನೃತ್ಯ ನಿರ್ದೇಶಕಿ ಅನ್ನಿ ಮಾಸ್ಟರ್ ಜತೆಗೆ ನಿಶ್ವಿಕಾ ನಾಯ್ಡು, ನಿವೇದಿತಾ ಗೌಡ ಸಹ ಈ ಹಾಡಿನಲ್ಲಿದ್ದಾರೆ. ಛಾಯಾಗ್ರಹಣ ಶ್ರೀಶ ಕುದುವಳ್ಳಿ, ಭಜರಂಗಿ ಮೋಹನ್ ನೃತ್ಯ ನಿರ್ದೇಶನ, ರಂಜಿತ್ ಸಂಕಲನ ಮಾಡಿದ್ದಾರೆ.

ಹಾಡಿನ ನಿರ್ಮಾಣದಲ್ಲಿ ತಾವು ಒಬ್ಬರಾದ ನಟ ಧರ್ಮ, ಹಾಡು ಮತ್ತು ಈ ಸಂಸ್ಥೆಯ ಮುಂದಿನ ಯೋಜನೆಗಳ ಬಗ್ಗೆ ಮಾತನಾಡಿದರು. ‘ಸಿನಿಮಾ ಬಗ್ಗೆ ಮಾತನಾಡುತ್ತ ಯೂನೈಟೆಡ್ ಪ್ರೊಡಕ್ಷನ್ಸ್ ಬ್ಯಾನರ್ ರಿಜಿಸ್ಟರ್ ಆಯ್ತು. ಅದನ್ನು ರೀಚ್ ಮಾಡಿಸುವ ಸಲುವಾಗಿ ಚಂದನ್ ಶೆಟ್ಟಿ ಅವರಿಂದ ಆಲ್ಬಂ ಮಾಡುವ ಬಗ್ಗೆ ನಿರ್ಧಾರವಾಯ್ತು. ಆಗ ಯುನೈಟೆಡ್ ಆಡಿಯೋ ಕಂಪನಿ ತೆರೆದೆವು.‌ ಈ ಸಂಸ್ಥೆಯಲ್ಲಿ ನಾನೂ ಸಹ ಪಾಲುದಾರನಾಗಿದ್ದೇನೆ. ಅಂದುಕೊಂಡಿದ್ದಕ್ಕಿಂತ ಚೆಂದವಾಗಿ ಹಾಡು ಮೂಡಿಬಂದಿದೆ. ಮುಂದಿನ ದಿನಗಳಲ್ಲಿ ಇದೇ ಸಂಸ್ಥೆಯಿಂದ ಸಿನಿಮಾ ಸಹ ನಿರ್ಮಾಣವಾಗಲಿದೆ ಎಂದರು.

Categories
ಗ್ಲಾಮರ್‌ ಕಾರ್ನರ್

ಪಾರ್ಟಿ ಸಾಂಗ್ ನಲ್ಲಿ ಸೊಂಟ ಬಳುಕಿಸಿದ ಸ್ಟಾರ್ ನಟಿ !

ಚಂದನ್ ಶೆಟ್ಟಿ  ಆಲ್ಬಂ ನಲ್ಲಿ‌ ಗ್ಲಾಮರಸ್ ನಟಿ ನಿಶ್ವಿಕಾ ನಾಯ್ಡು

 

ಕನ್ನಡದ ಗ್ಲಾಮರಸ್ ನಟಿ ನಿಶ್ವಿಕಾ ನಾಯ್ಡು ಪಾರ್ಟಿ ಸಾಂಗ್ ನಲ್ಲಿ ಕಾಣಿಸಿಕೊಂಡಿದ್ದಾರೆ. ನ್ಯೂ ಈಯರ್ ಪಾರ್ಟಿಗಳಲ್ಲಿ ಯಂಗ್ ಜನರೇಷನ್ ಗೆ ಫುಲ್ ಕಿಕ್ ನೀಡುವಂತಹ ಹಾಡಿಗೆ ನಿಶ್ವಿಕಾ‌ ನಾಯ್ಡು ಸಖತ್ ಸ್ಟೆಪ್ ಹಾಕಿದ್ದಾರೆ.

ಕನ್ನಡದ ರಾಪ್ ಸಿಂಗರ್ ಚಂದನ್ ಶೆಟ್ಟಿ, ಹೊರ ತಂದಿರುವ ‘ಪಾರ್ಟಿ ಫ್ರೀಕ್’ ಹೆಸರಿನ ಅದ್ದೂರಿ ವೆಚ್ಚದ ಮ್ಯೂಜಿಕ್ ವಿಡಿಯೋ ಆಲ್ಬಂ ನಲ್ಲಿ ನಿಶ್ವಿಕಾ ಸೊಂಟ ಬಳುಕಿಸಿರುವ ಪರಿಯೇ ಮಾದಕವಾಗಿದೆ. ಕಿಕ್ ನೀಡುವ ಹಾಡು, ಝಗಮಗಿಸುವ ಬೆಳಕಲ್ಲಿ ನಿಶ್ವಿಕಾ ಅವರ ಕುಣಿತದ ಕಿಕೇ ಕಿಕ್.

ಅಂದ ಹಾಗೆ, ಇದು ಯುನೈಟೆಡ್ ಆಡಿಯೋ ಸಂಸ್ಥೆ ಮೂಲಕ ಲಾಂಚ್ ಆಗಿರುವ ಹಾಡು.‌ ಗಣಿ ಉದ್ಯಮಿ ಚೈತನ್ಯ ಲಖಂ ಸಾನಿ‌ ಇದರ ನಿರ್ಮಾಪಕ. ಚಂದನ್ ಶೆಟ್ಟಿ ಸಾಹಿತ್ಯ ಬರೆದು ಹಾಡಿದ್ದಾರೆ.ಹಾಗೆಯೇ ಸ್ಕ್ರೀನ್ ಮೇಲೂ ಅವರೇ ಇದ್ದಾರೆ. ಅವರೊಂದಿಗೆ ಚಂದನ್ ಪತ್ನಿ ನಿವೇದಿತಾ ಗೌಡ, ನಟಿ ನಿಶ್ವಿಕಾ ನಾಯ್ಡ, ನಟ ಧರ್ಮ ಸೇರಿದಂತೆ ದೊಡ್ಡ ತಂಡವೇ ಸ್ಕ್ರೀನ್ ಮೇಲೆ ಕಾಣಿಸಿಕೊಂಡಿದೆ. ವಿಶೇಷ ಅಂದ್ರೆ, ಇಲ್ಲಿ ನಿಶ್ವಿಕಾ ನಾಯ್ಡು.

‘ಅಮ್ಮ ಐ ಲವ್ ಯು’ ಚಿತ್ರದ ಮೂಲಕ‌ ಬೆಳ್ಳಿ ತೆರೆಗೆ ಕಾಲಿಟ್ಟ‌ ಚೆಂದದ ಚೆಲುವೆ ನಿಶ್ವಿಕಾ ನಾಯ್ಡ. ನಟಿಯಾಗಿ ಎಂಟ್ರಿಯಾಗಿದ್ದು’ ಅಮ್ಮ ಐ ಲವ್ ಯು’ ಚಿತ್ರವಾದರೂ, ಮೊದಲು ತೆರೆ ಕಂಡಿದ್ದು ವಾಸು ನೀನ್ ಪಕ್ಕಾ ಕಮರ್ಷಿಯಲ್ ಚಿತ್ರ‌ . ಇದು ಅನೀಶ್ ತೇಜೇಶ್ವರ್ ಅಭಿನಯದ ಚಿತ್ರ. ಆನಂತರ ನಿರ್ಮಾಪಕ ಮಂಜು ಪುತ್ರ ಫಸ್ಟ್ ಟೈಮ್ ಹೀರೋ ಆದ ‘ಪಡ್ಡೆ ಹುಲಿ’ ಮೂಲಕ ಗ್ಲಾಮರಸ್ ನಟಿಯಾಗಿ ಮಿಂಚಿದರು.

ಸದ್ಯಕ್ಕೀಗ ಯೋಗರಾಜ್ ಭಟ್ ನಿರ್ದೇಶನದ ‘ ಗಾಳಿಪಟ 2 ‘ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಕನ್ನಡದ ಬೇಡಿಕೆ ಯ ನಟಿ ಎನಿಸಿಕೊಂಡಿರುವುದು ವಿಶೇಷ.ಈ‌ನಡುವೆಯೇ ಈಗ ಚಂದನ್ ಶೆಟ್ಟಿ‌ಅವರ ಪಾರ್ಟಿ ಫ್ರಿಕ್ ಮ್ಯೂಜಿಕ್ ವಿಡಿಯೋ ಆಲ್ಬಂ‌ನಲ್ಲಿ ಬಿಂದಾಸ್ ಆಗಿ ಕಾಣಿಸಿಕೊಂಡಿರುವುದು ಸಿನಿಮಾ ಮಂದಿಯ ಕಣ್ಣು ಕುಕ್ಕುವಂತೆ ಮಾಡಿರುವುದು ಸುಳ್ಳಲ್ಲ.

Categories
ಸಿನಿ ಸುದ್ದಿ

ಚಿತ್ರ ನಿರ್ಮಾಣಕ್ಕೆ ಸಿಂಗರ್‌ ಚಂದನ್‌ ಶೆಟ್ಟಿ, ಹೊಸ ವರ್ಷಕ್ಕೆ ಹೊಸ ಸಿನಿಮಾ

ಯುನೈಟೆಡ್‌ ಎಂಟರ್‌ಟೈನರ್‌ ಮೂಲಕ ಇಷ್ಟರಲ್ಲೇ ಶುರುವಾಗಲಿದೆ ಚಂದನ್‌ ಶೆಟ್ಟಿ ಸಿನಿಮಾ

ಸಿಂಗರ್‌ ಚಂದನ್‌ ಶೆಟ್ಟಿ, ಈಗ ಸಿನಿಮಾ ಪ್ರೊಡಕ್ಷನ್‌ ಕಡೆ ಮುಖ ಮಾಡಿದ್ದಾರೆ. ಅದಕ್ಕಂತಲೇ ಅವರೀಗ ಆಂಧ್ರ ಮೂಲದ ಗಣಿ ಉದ್ಯಮಿ ಚೈತನ್ಯ ಲಖಂ ಸಾನಿ ಎಂಬುವರೊಂದಿಗೆ ಸೇರಿ ʼಯುನೈಟೆಡ್‌ ಎಂಟರ್‌ ಟೈನರ್‌ʼ ಎಂಬ ಹೊಸ ಪ್ರೊಡಕ್ಷನ್‌ ಹೌಸ್‌ ಶುರು ಮಾಡಿದ್ದಾರೆ. ನಟ ಧರ್ಮ ಕೂಡ ಇದಕ್ಕೆ ಸಾಥ್‌ ನೀಡಿದ್ದು, ಎಲ್ಲವೂ ಅಂದುಕೊಂಡಂತಾದರೆ ಹೊಸ ವರ್ಷದ ಆರಂಭದಲ್ಲಿ ಯುನೈಟೆಡ್‌ ಎಂಟರ್‌ ಟೈನರ್‌ ಮೂಲಕ  ಚಂದನ್‌ ಶೆಟ್ಟಿ ಅದ್ದೂರಿ ವೆಚ್ಚದ ನಿರ್ಮಾಣ ಮಾಡುವುದು ಕನ್ಫರ್ಮ್.

ಸದ್ಯಕ್ಕೆ ಆ ಸಿನಿಮಾದ ಪ್ಲಾನ್‌ ಏನು? ಆರ್ಟಿಸ್ಟ್‌ ಯಾರು? ಕಥೆ-ನಿರ್ದೇಶನ ಯಾರದು? ಇತ್ಯಾದಿ ಮಾಹಿತಿಗಳು ಇನ್ನು ನಿಗೂಢ. ಚಂದನ್‌ ಶೆಟ್ಟಿ ಆಂಡ್‌ ಗ್ರೂಪ್‌ ಅದೆಲ್ಲವನ್ನು ಫೈನಲ್‌ ಮಾಡಿಕೊಂಡಿದೆಯೋ ಇಲ್ಲವೋ ಗೊತ್ತಿಲ್ಲ.  ಆ ಬಗ್ಗೆ ಟೀಮ್‌ ಕೂಡ ಯಾವುದೇ ಮಾಹಿತಿ ನೀಡಿಲ್ಲ. ಆದರೆ ಸಿನಿಮಾ ಮಾಡುವ ಮುಂದಿನ ಯೋಚನೆಯನ್ನು ಚಂದನ್‌ ಶೆಟ್ಟಿ ಆಂಡ್‌ ಟೀಮ್‌ ಶನಿವಾರ ಅಧಿಕೃತವಾಗಿಯೇ ರಿವೀಲ್‌ ಮಾಡಿದೆ. ಯುನೈಟೆಡ್‌ ಎಂಟರ್‌ ಟೈನರ್‌ ಬ್ಯಾನರ್‌ ಮೂಲಕ ಮುಂದಿನ ದಿನಗಳಲ್ಲಿ ಸಿನಿಮಾ ಮಾಡುವ ಆಲೋಚನೆ ಇದೆ ಅಂತಲೂ ಹೇಳಿದೆ.

ಸದ್ಯಕ್ಕೀಗ ಯುನೈಟೆಡ್‌ ಆಡಿಯೋ ಸಂಸ್ಥೆ ಮೂಲಕ ಮೊದಲ ಮ್ಯೂಜಿಕ್‌ ವಿಡಿಯೋ ಆಲ್ಬಂ ಲಾಂಚ್‌ ಆಗಿದೆ.” ಪಾರ್ಟಿ ಫ್ರಿಕ್‌ʼ  ಎನ್ನುವುದು ಅದರ ಹೆಸರು. ನ್ಯೂ ಈಯರ್‌ ಪಾರ್ಟಿಗಳಿಗೆ ಇನ್ನಷ್ಟು ಕಿಕ್‌ ಬರಲಿ ಅಂತನೇ ರ್ಯಾಪರ್‌ ಚಂದನ್‌ ಶೆಟ್ಟಿ ತಾವೇ ಸಾಹಿತ್ಯ ಬರೆದು, ಅದರಲ್ಲಿ ಹಾಡಿ ಕುಣಿದಿದ್ದಾರೆ. ಇದು ಕನ್ನಡ ಮತ್ತು ತೆಲುಗು ಏರಡೂ ಭಾಷೆಗೂ ಅದ್ದೂರಿ ವೆಚ್ಚದಲ್ಲಿ ನಿರ್ಮಾಣವಾಗಿದೆ. ಮೂರು ದಿನಗಳ ಕಾಲ ಬೆಂಗಳೂರಿನ ಶರ್ಟಾನ್‌ ಸ್ಟಾರ್‌ ಹೋಟೆಲ್‌ ನಲ್ಲಿ ಚಿತ್ರೀಕರಣಗೊಂಡಿದ್ದು, ಅದಕ್ಕಾಗಿ ಸರಿ ಸುಮಾರು ೩೦ ಲಕ್ಷ ರೂ. ವೆಚ್ಚ ಮಾಡಿದ್ದಾಗಿ ತಂಡ ಹೇಳಿದೆ. ಅದೀಗ ಯುನೈಟೆಡ್‌ ಆಡಿಯೋ ಸಂಸ್ಥೆಯ ಆಧಿಕೃತ ಯುಟ್ಯೂಬ್‌ ಚಾನೆಲ್‌ ಮೂಲಕ ಬಿಡುಗಡೆ ಅಗಿದೆ.

ಶನಿವಾರ ಅದು ಲಾಂಚ್‌ ಆದ ಸಂದರ್ಭದಲ್ಲಿ ಮಾತನಾಡಿದ ಚಂದನ್‌ ಶೆಟ್ಟಿ, ಯುನೈಟೆಡ್‌ ಸಂಸ್ಥೆಯ ಶುರುವಾದ ಬಗೆ, ಅದರ ಮೂಲ ಉದ್ದೇಶ, ಮುಂದಿನ ಯೋಜನೆಗಳನ್ನು ರಿವೀಲ್‌ ಮಾಡಿದರು.” ಯುನೈಟೆಡ್‌ ಸಂಸ್ಥೆ ಸಾಕಷ್ಟು ಯೋಜನೆಗಳನ್ನು ಹಾಕಿಕೊಂಡಿದೆ. ಆಲ್ಬಂ ಸಾಂಗ್‌ ಮಾಡುವ ಹೊಸ ಪ್ರತಿಭೆಗಳಿಗೆ ವೇದಿಕೆ ಒದಗಿಸುವುದು ಅದರ ಮೊದಲ ಉದ್ದೇಶವಾದರೆ, ಕ್ರಮೇಣ ಸಿನಿಮಾ ನಿರ್ಮಾಣ ಮಾಡುವುದು ಅದರ ಟಾರ್ಗೆಟ್‌ ಎಂಬುದಾಗಿ ಹೇಳಿದರು. ನಟ ಧರ್ಮ ಹಾಗೂ ನಿರ್ಮಾಪಕ ಚೈತನ್ಯ ಲಖಂ ಸಾನಿ ಕೂಡ ಇದನ್ನು ಬಹಿರಂಗ ಪಡಿಸಿದರು. ಒಟ್ಟಿನಲ್ಲಿ  ಸಿನಿಮಾದಲ್ಲಿ ಹಾಡು ಬರೆದು , ಹಾಡುವುದಕ್ಕಾಗಿ ಒಂದು ಟೈಮ್‌ ಪರದಾಡಿದ್ದ ಚಂದನ್‌ ಶೆಟ್ಟಿ ಇವತ್ತುಬಹುಬೇಡಿಕೆಯ ಸಿಂಗರ್‌ ಆಗಿದ್ದು ಒಂದೆಡೆಯಾದರೆ, ಮತ್ತೊಂದಡೆ ಸಿನಿಮಾ ನಿರ್ಮಾಣದತ್ತ ಕೂಡ ಮನಸ್ಸು ಮಾಡಿದ್ದು ವಿಶೇಷ.

Categories
ಸಿನಿ ಸುದ್ದಿ

ನಿರ್ಮಾಪಕ ಕೆ.ಪಿ. ಶ್ರೀಕಾಂತ್‌, ಹಿಂಬಾಲಕರ ಸಂಖ್ಯೆ 5 ಸಾವಿರ !

ಟ್ವಿಟ್ಟರ್‌ ಖಾತೆಯಲ್ಲಿ ಫುಲ್‌ ಆ್ಯಕ್ಟಿವ್ ಆಗಿರುವ “ಸಲಗʼ ನಿರ್ಮಾಪಕ

ಕನ್ನಡ ಚಿತ್ರರಂಗದ ಮಟ್ಟಿಗೆ ಸೋಷಲ್‌ ಮೀಡಿಯಾದಲ್ಲಿ ಹೆಚ್ಚು ಆಕ್ಟಿವ್‌ ಆಗಿದ್ದವರು ಯಾರು ಅಂತ ಬಂದಾಗ ಸ್ಟಾರ್‌ಗಳು, ತಂತ್ರಜ್ನರು, ನಿರ್ದೇಶಕರು, ಇಲ್ಲವೆ ಸಂಗೀತ ನಿರ್ದೇಶಕರು ಮುಂಚೂಣಿಯಲ್ಲಿ ಕಾಣುತ್ತಾರೆ. ಅದರಾಚೆ ನಿರ್ಮಾಪಕರು ಇಲ್ಲವೇ ಅಂತ ನೋಡಿದರೆ ಬೆರಳೆಣಿಕೆಯ ಜನ ಇದ್ದಾರೆ. ಆ ಪೈಕಿ ʼಟಗರುʼ ಖ್ಯಾತಿಯ ನಿರ್ಮಾಪಕ ಕೆ.ಪಿ. ಶ್ರೀಕಾಂತ್‌ ಕೂಡ ಒಬ್ಬರು. ಫೇಸ್‌ ಬುಕ್‌, ಇನ್ಸಾಸ್ಟಾಗ್ರಾಮ್‌ ಹಾಗೂ ಟ್ಬಿಟರ್‌ ಸೇರಿದಂತೆ ಎಲ್ಲಾ ಪ್ಲಾಟ್‌ ಫಾರ್ಮ್‌ ನಲ್ಲೂ ಅವರು ಫುಲ್‌ ಆಕ್ಟಿವ್.‌ ಸದ್ಯಕ್ಕೆ ಅವರ ಟ್ವಿಟರ್‌ ಅಕೌಂಟ್‌ ಫಾಲೋವರ್ಸ್‌ ಸಂಖ್ಯೆ ಈಗ ೫ ಸಾವಿರ ರಿಚ್‌ ಆಗಿದೆ.

ಕನ್ನಡದ ನಿರ್ಮಾಪಕರ ಪೈಕಿ ಟ್ವಿಟರ್‌ ನಲ್ಲಿ ಇಷ್ಟು ಸಕ್ರಿಯವಾಗಿದ್ದು, ೫ ಸಾವಿರ ಫಾಲೋವರ್ಸ್‌ ಹೊಂದಿರುವ ನಿರ್ಮಾಪಕ ಶ್ರೀಕಾಂತ್‌ ಬಹುಶ: ಮೊದಲಿಗರು ಹೌದು. ಟ್ವಿಟರ್‌ ಫಾಲೋವರ್ಸ್‌ ಸಂಖ್ಯೆ ೫ ಸಾವಿರ ತಲುಪಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ನಿರ್ಮಾಪಕ ಶ್ರೀಕಾಂತ್‌, ಸೋಷಲ್‌ ಮೀಡಿಯಾ ಎನ್ನುವುದು ಈ ಕಾಲದ ಅತೀ ವೇಗದ ಸಂಪರ್ಕ ಮಾಧ್ಯಮ. ಸ್ಟಾರ್‌ ಗಳಂತೂ ಅದೇ ಕಾರಣಕ್ಕೆ ಇಲ್ಲಿ ಹೆಚ್ಚು ಸಕ್ರಿಯವಾಗಿರುವುದು ಎಲ್ಲರಿಗೂ ಗೊತ್ತು. ನಮಗೂ ಕೂಡ ಇದು ಅಗತ್ಯವೇ. ನಮ್ಮ ಸಿನಿಮಾ ಸಂಬಂಧಿತ ಎಲ್ಲಾ ಮಾಹಿತಿಗಳನ್ನು, ಮುಂದಿನ ಯೋಜನೆಗಳನ್ನು ಹಂಚಿಕೊಳ್ಳುವುದಕ್ಕೂ ಇದು ಸೂಕ್ತ ವೇದಿಕೆ ಎನಿಸಿದೆ. ಈಗ ನಾನು ೫ ಸಾವಿರ ಫಾಲೋವರ್ಸ್‌ ಹೊಂದಿರುವುದು ಖುಷಿ ಕೊಟ್ಟಿದೆ. ಅವರಿಗೆಲ್ಲ ಧನ್ಯವಾದʼ ಅಂತ ಶ್ರೀಕಾಂತ್‌ ಟ್ವಿಟ್‌ ಮಾಡಿದ್ದಾರೆ. ಸದ್ಯ ಶ್ರೀಕಾಂತ್‌ ಅವರ ನಿರ್ಮಾಣದಲ್ಲಿ ʼಸಲಗʼ ಚಿತ್ರೀಕರಣ, ಪೋಸ್ಟ್‌ ಪ್ರೊಡಕ್ಷನ್‌ ವರ್ಕ್‌ ಮುಗಿಸಿ, ರಿಲೀಸ್‌ ಗೆ ರೆಡಿಯಾಗಿದೆ.

‘ಟಗರುʼ ಸೇರಿದಂತೆ ಈಗಾಗಲೇ ಹಲವು ಯಶಸ್ವಿ ಚಿತ್ರಗಳನ್ನು ಕನ್ನಡಕ್ಕೆ ಕೊಟ್ಟ ಖ್ಯಾತಿ ಶ್ರೀಕಾಂತ್‌ ಅವರಿಗಿದೆ. ಅದೇ ಯಶಸ್ಸಿನ ಖುಷಿ ಮತ್ತು ಜವಾಬ್ದಾರಿ ಮೂಲಕ ಸಲಗ ಚಿತ್ರವನ್ನು ಅದ್ದೂರಿಯಾಗಿ ತೆರೆಗೆ ತರಲು ಹೊರಟಿದ್ದಾರೆ. ನಟ ದುನಿಯಾ ವಿಜಯ್‌ ಇದೇ ಮೊದಲು ಆಕ್ಷನ್‌ ಕಟ್‌ ಹೇಳಿದ ಸಿನಿಮಾ ಇದು. ಅವರೇ ಇದರ ನಾಯಕರು ಹೌದು. ಅದನ್ನೀಗ ಜನರ ಬಳಿಗೆ ತೆಗೆದುಕೊಂಡು ಹೋಗಲು ಸೋಷಲ್‌ ಮೀಡಿಯಾವೂ ಒಂದು ಸಂಪರ್ಕ ಮಾಧ್ಯಮ ಎನ್ನುವ ಅಭಿಪ್ರಾಯ ಶ್ರೀಕಾಂತ್‌ ಅವರದ್ದು.

Categories
ಸಿನಿ ಸುದ್ದಿ

ಫ್ಯಾಮಿಲಿ ಫೋಟೋಶೂಟ್ ನಲ್ಲಿ ಶ್ರೀ‌ಮುರಳಿ – ವಿದ್ಯಾ ದಂಪತಿಯ ಕ್ಯೂಟ್ ಲುಕ್

ನಟ ಶ್ರೀ ಮುರಳಿ ಸದ್ಯಕ್ಕೆ ಕನ್ನಡದ ಬಹುಬೇಡಿಕೆಯ ನಟ. ಹಾಗೆಯೇ ಸಖತ್‌ ಬ್ಯುಸಿ ಸ್ಟಾರ್‌ ಕೂಡ. ಅವರಿಗೀಗ ಸಿಗುತ್ತಿರುವ ಆಫರ್‌ ನೋಡಿದ್ರೆ, ಮುಂದಿನ ದಿನಗಳಲ್ಲಿ ಶ್ರೀ ಮುರಳಿ, ಸೌತ್‌ ಇಂಡಿಯಾದ ಬಹು ಬೇಡಿಕೆಯ ನಟ ಆಗುವುದರಲ್ಲೂ ಅನುಮಾನ ಇಲ್ಲ. ಹೊಸ ವರ್ಷಕ್ಕೆ ʼಮದಗಜʼ ಚಿತ್ರದ ತೆಲುಗು ವರ್ಷನ್‌ ಟೀಸರ್‌ ಕೂಡ ಹೊರಬರಲಿದೆ. ಅಲ್ಲಿಂದ ಶುರುವಾಗಲಿದೆ ಶ್ರೀ ಮುರಳಿ ಅವರ ಸೌತ್‌ ಇಂಡಿಯಾದ ಸೆನ್ಸೆಷೇನಲ್ ಎಂಟ್ರಿ. ಅದಿರಲಿ, ಇದಿಷ್ಟು ಸಿನಿಮಾದ ಬ್ಯುಸಿ ಶೆಡ್ಯೂಲ್‌ ನಡುವೆಯೂ ಶ್ರೀ ಮುರಳಿ ಫ್ಯಾಮಿಲಿ ಜತೆಗೊಂದು ಚೆಂದದ ಫೋಟೋಶೂಟ್‌ ಮಾಡಿಸಿಕೊಂಡಿದ್ದಾರೆ.ಸದ್ಯಕ್ಕೆ ಅದು ಅವರ ಖುಷಿಗಾಗಿ. ಜಸ್ಟ್ ಪ್ರೊಪೈಲ್ ಗೆ. ಆದರೆ ಇಬ್ಬರು ಮಕ್ಕಳ ಜತೆಗೆ ಶ್ರೀಮುರಳಿ ಹಾಗೂ ವಿದ್ಯಾಶ್ರೀ ದಂಪತಿ‌ ಲವ್ ಸ್ಟೋರಿ ಸಿನಿಮಾದ ಲವ್ಲಿ ಸೀನ್ ತರಹ ಕ್ಯಾಮೆರಾಕ್ಕೆ ಪೋಸು ನೀಡಿರುವುದು ವಿಶೇಷವಾಗಿದೆ.


ಮೂರು ದಿನಗಳ ಹಿಂದಷ್ಟೇ ಈ ಪೋಟೋಶೂಟ್ ನಡೆದಿದೆ. ಸದ್ಯಕ್ಕೆ ಅದೇ ಪೋಟೋಶೂಟ್ ನ ಒಂದು ಲುಕ್ ಈಗ ರಿವೀಲ್ ಆಗಿದೆ. ಶುಕ್ರವಾರ ಕ್ರಿಸ್‌ಮಸ್‌ ಹಬ್ಬ ಇತ್ತು. ಈ ಹಬ್ಬಕ್ಕೆ ಶುಭಾಶಯ ಕೋರುವುದಕ್ಕೆ ಶ್ರೀ‌ಮುರಳಿ ಅವರು ತಮ್ಮ ಫ್ಯಾಮಿಲಿ ಜತೆಗೆ ಹೊದ ಫೋಟೋಶೂಟ್ ಒಂದು ಲುಕ್ ಸೋಷಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುವುದರ ಜತೆಗೆ ಅದನ್ನೇ ಕ್ರಿಸ್ಮಸ್‌ ವಿಶ್ ಗೆ ವಿಶೇಷವಾಗಿ ಡಿಸೈನ್ ಮಾಡಿದ್ದಾರೆ. ಅದರ ಕ್ರಿಯೇಟಿವಿಟಿ ಚೆನ್ನಾಗಿದೆ‌.

Categories
ಸಿನಿ ಸುದ್ದಿ

ನಟ ರಮೇಶ್ ಅರವಿಂದ್ ಮನೆಯಲ್ಲಿ ಮದುವೆ ಸಂಭ್ರಮ

ನಿಹಾರಿಕಾ ಮದುವೆ ಅಕ್ಷಯ್‌ ಜತೆಗೆ ಫಿಕ್ಸ್‌ , ಡಿ.28 ಕ್ಕೆ ಮ್ಯಾರೇಜ್

ನಟ ರಮೇಶ್ ಅರವಿಂದ್ ಮನೆಯಲ್ಲಿ ಮದುವೆ ಸಂಭ್ರಮ ಗರಿಗೆದರಿದೆ. ಪುತ್ರಿ ನಿಹಾರಿಕ ಅವರ ಮದುವೆ ಅಕ್ಷಯ್ ಅವರೊಂದಿಗೆ ಡಿಸೆಂಬರ್ 28 ರಂದು ನಡೆಯಲಿದೆ. ‌ನಿಹಾರಿಕ ಹಾಗೂ ಅಕ್ಷಯ್ ಒಂದೇ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಈಗ ನವಜೀವನಕ್ಕೆ ಅಡಿಯಿಡುತ್ತಿದ್ದಾರೆ.ಇವರ ವಿವಾಹ ಮಹೋತ್ಸವ ಎರಡು ಕುಟಂಬಗಳ ಸದಸ್ಯರ ಸಮ್ಮುಖದಲ್ಲಿ ಕೋವಿಡ್ 19 ನಿಯಮಾನುಸಾರ ನಡೆಯಲಿದೆ.

ಜನವರಿ ಎರಡನೇ ವಾರದಲ್ಲಿ ಆರತಕ್ಷತೆ ಆಯೋಜಿಸಲಾಗಿದ್ದು, ಅಂದು ಚಿತ್ರರಂಗ‌ ಸೇರಿದಂತೆ ಎಲ್ಲಾ ಕ್ಷೇತ್ರಗಳ ಗಣ್ಯರನ್ನು ಆಹ್ವಾನಿಸಲಾಗುತ್ತಿದೆ. ಅದೇ ರೀತಿ,ಕನ್ನಡದ ತಮ್ಮ ಅಭಿಮಾನಿಗಳು ಹಾಗೂ ರಾಜ್ಯದ ಜನತೆಯ ಹಾರೈಕೆ ಬೇಕು ಅಂತಲೂ ರಮೇಶ್‌ ಅರವಿಂದ್‌ ಮನವಿ ಮಾಡಿದ್ದಾರೆ.

Categories
ಸಿನಿ ಸುದ್ದಿ

ಎಂಆರ್‌ ಸಿನಿಮಾ ವಿವಾದ : ಅನುಮತಿ ಪಡೆಯದಿದ್ದರೆ, ಸಿನಿಮಾ ಮಾಡಲು ಬಿಡುವುದಿಲ್ಲ

ನಿರ್ದೇಶಕ ರವಿ ಶ್ರೀವತ್ಸಗೆ ನಿರ್ಮಾಪಕ ಪದ್ಮನಾಭ್‌ ಎಚ್ಚರಿಕೆ 

ರವಿಶ್ರೀವತ್ಸ ನಿರ್ದೇಶನದ “ಎಂಆರ್‌ʼ ಸಿನಿಮಾಕ್ಕೆ ವಿಘ್ನ ಎದುರಾಗುವುದು ಗ್ಯಾರಂಟಿ ಆಗಿದೆ. ನಿರ್ಮಾಪಕ ಪದ್ಮನಾಭ್‌ ಅವರ ಹೇಳಿಕೆ ನಂತರವೂ ನಿರ್ದೇಶಕ ರವಿ ಶ್ರೀವತ್ಸ, ಸಿನಿಮಾ ಮಾಡಿಯೇ ತೀರುತ್ತೇನೆಂದು ಪ್ರತಿಕ್ರಿಯೆ ನೀಡಿದ್ದರೂ, ಮುಂದೆ ಅವರು ಸಿನಿಮಾ ಮಾಡುವುದು ಅಷ್ಟು ಸುಲಭ ಇಲ್ಲ. ಯಾಕಂದ್ರೆ, ಮುತ್ತಪ್ಪ ರೈ ಸ್ಥಾಪಿಸಿದ ʼಜಯ ಕರ್ನಾಟಕʼ ಸಂಘಟನೆ ಈಗ ರವಿ ಶ್ರೀವತ್ಸ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗಿದೆ. ಮತ್ತೊಂದೆಡೆ ಮುತ್ತಪ್ಪ ರೈ ಪುತ್ರರು ಕೂಡ, ತಮ್ಮ ಅನುಮತಿ ಇಲ್ಲದೆ ಮುತ್ತಪ್ಪ ರೈ ಕುರಿತು ಯಾರು ಸಿನಿಮಾ ಮಾಡುವಂತಿಲ್ಲ ಅಂತಲೂ ಹೇಳಿದ್ದಾರಂತೆ.
ಶುಕ್ರವಾರ ಇವೆರೆಡು ಸಂಗತಿಗಳನ್ನು ಸುದ್ದಿಗೋಷ್ಟಿಯಲ್ಲಿ ಬಹಿರಂಗಪಡಿಸಿದ ಮುತ್ತಪ್ಪ ರೈ ಶಿಷ್ಯ ಹಾಗೂ ನಿರ್ಮಾಪಕ ಪದ್ಮನಾಭ್‌ ಮತ್ತು ವಕೀಲ ನಾರಾಯಣ ಸ್ವಾಮಿ, ಅನುಮತಿ ಇಲ್ಲದೆ ಚಿತ್ರೀಕರಣ ಶುರು ಮಾಡಿರುವ ರವಿ ಶ್ರೀವತ್ಸ ಅವರ ʼಎಂಆರ್‌ʼ ಸಿನಿಮಾ ರಿಲೀಸ್‌ ಆಗುವುದಕ್ಕೆ ತಾವು ಯಾವುದೇ ಕಾರಣಕ್ಕೂ ಅವಕಾಶ ಕೊಡುವುದಿಲ್ಲ. ಮುಂದೆ ಆಗುವ ನಷ್ಟಕ್ಕೂ ತಾವು ಕಾರಣರಲ್ಲ. ಸಿನಿಮಾಕ್ಕೆ ಬಂಡವಾಳ ಹಾಕುತ್ತಿರುವ ನಿರ್ಮಾಪಕ ಶೋಭ ರಾಜಣ್ಣ ಈಗಲೇ ಅರ್ಥ ಮಾಡಿಕೊಂಡು ಸಿನಿಮಾ ನಿಲ್ಲಿಸಿದರೆ ಸೂಕ್ತ ಅಂತಲೂ ಎಚ್ಚರಿಕೆ ನೀಡಿದರು.

ನಿರ್ದೇಶಕ ರವಿ ಶ್ರೀವತ್ಸ ಹೇಳಿದ ಹಾಗೆಯೇ ʼಎಂಆರ್‌ʼ ಎನ್ನುವುದು ಮತ್ತಪ್ಪ ರೈ ಅವರ ಜೀವನ ಚರಿತ್ರೆ ಕುರಿತ ಸಿನಿಮಾ. ಅಲ್ಲಿ ಅವರು ರೈ ಅವರ ಹಳೆಯ ದಿನಗಳ ಕುರಿತು ಸಿನಿಮಾ ಮಾಡಲು ಹೊರಟಿದ್ದಾರೆನ್ನುವ ಮಾಹಿತಿ ಇದೆ. ಅಲ್ಲಿದೆ ಇದು ಮುತ್ತಪ್ಪ ರೈ ಅವರ ಬಯೋಪಿಕ್.‌ ಯಾವುದೇ ಭಾಷೆಯ ಚಿತ್ರೋದ್ಯಮದಲ್ಲಿ ಒಬ್ಬ ನಿರ್ದೇಶಕ ಇನ್ನೊಬ್ಬರ ಜೀವನ ಚರಿತ್ರೆ ಆಧರಿಸಿ ಸಿನಿಮಾ ಮಾಡಲು ಹೊರಟಾಗ ಸಂಬಂಧಪಟ್ಟ ವ್ಯಕ್ತಿ ಅಥವಾ ಅವರಿಗೆ ಸಂಬಂಧಪಟ್ಟವರ ಅನುಮತಿ ಪಡೆಯಲೇಬೇಕು. ಹಾಗೆ ಅನೇಕ ಸಿನಿಮಾಗಳು ಕೂಡ ಬಂದಿವೆ. ಆದರೆ ರವಿ ಶ್ರೀವತ್ಸ ಅದನ್ನು ಮಾಡಿಲ್ಲ. ಇದು ತಪ್ಪು ಅಂತಲೇ ನಾವು ಹೇಳುತ್ತಿದ್ದೇವೆ ಅಂತ ನಿರ್ಮಾಪಕ ಪದ್ಮನಾಭ್‌ ಸ್ಪಷ್ಟಪಡಿಸಿದರು.
ರೈ ಅವರ ಜೀವನ ಬರೀ ಭೂಗತ ಜಗತ್ತು ಮಾತ್ರವಲ್ಲ. ಅವರು ಬೇಕಾದಷ್ಟು ಸಮಾಜ ಸೇವೆ ಮಾಡಿದ್ದಾರೆ. ಜಯ ಕರ್ನಾಟಕ ಸಂಘಟನೆ ಕಟ್ಟಿ ನಾಡಿನ ನೆಲ, ಜಲ ಉಳಿವಿಗೆ ಹೋರಾಡಿದ್ದಾರೆ. ಅದಕ್ಕಿಂತ ಮುಖ್ಯವಾಗಿ ತಮ್ಮ ಜೀವನ ಕುರಿತ ಸಿನಿಮಾವನ್ನು ತಮ್ಮದೇ ಬ್ಯಾನರ್‌ ನಲ್ಲಿಯೇ ಮಾಡುತ್ತೇನೆ, ಬೇರೆಯವರಿಗೆ ಅವಕಾಶ ಕೊಡುವುದಿಲ್ಲ ಅಂತಲೂ ಮಾಧ್ಯಮದವರ ಎದುರೇ ಹೇಳಿಕೆ ನೀಡಿದ್ದಾರೆ. ಇಷ್ಟಾಗಿಯೂ, ರವಿ ಶ್ರೀವತ್ಸ ಇದನ್ನು ಯಾಕೆ ಪರಿಗಣಿಸಿಲ್ಲ? ಇಷ್ಟಕ್ಕೂ ಮುತ್ತಪ್ಪ ರೈ ಕುರಿತು ಸಿನಿಮಾ ಮಾಡಲು ಅವರಿಗೆ ಅವಕಾಶ ಕೊಟಿದ್ದು ಯಾರು? ಇದನ್ನು ನಾವು ಒಪ್ಪುವುದಿಲ್ಲ. ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಕೆಟ್ಟದಾಗಿ ಚಿತ್ರಿಸಲು ಬಿಡುವುದಿಲ್ಲ ಎಂದು ಮುತ್ತಪ್ಪ ರೈ ಕುಟುಂಬದ ಪರ ವಕೀಲ ನಾರಾಯಣ ಸ್ವಾಮಿ ಹೇಳಿದರು.

error: Content is protected !!