ಹೊಂಬಾಳೆ ಫಿಲಂಸ್ ಮಹತ್ವದ ಹೆಜ್ಜೆ: ಜಗತ್ತಿಗೆ ಹೆಮ್ಮೆಯ ಕಥೆ ತಲುಪಿಸೋ ಕಾರ್ಯ…

ರಾಜಕುಮಾರ, ಕೆಜಿಎಫ್ ಚಾಪ್ಟರ್ 1 & 2, ಕಾಂತಾರ, ಕಾಂತಾರ ಚಾಪ್ಟರ್ 1, ಮಹಾವತಾರ ನರಸಿಂಹ ಮತ್ತು ಸಲಾರ್
ಅಂತಹ ದೈತ್ಯ ಸಿನಿಮಾಗಳ ಮೂಲಕ ಭಾರತೀಯ ಚಿತ್ರರಂಗದ ದಿಕ್ಕನ್ನೇ ಬದಲಿಸಿದ ಹೊಂಬಾಳೆ ಫಿಲ್ಮ್ಸ್, ಈಗ ‘ಓವರ್ಸೀಸ್ ಡಿಸ್ಟ್ರಿಬ್ಯೂಷನ್’ ಕ್ಷೇತ್ರಕ್ಕೆ ಭರ್ಜರಿಯಾಗಿ ಪದಾರ್ಪಣೆ ಮಾಡಿದೆ.

ನಮ್ಮ ಹೆಮ್ಮೆಯ ಕಥೆಗಳನ್ನು ಜಗತ್ತಿನ ಪ್ರತಿಯೊಬ್ಬ
ಪ್ರೇಕ್ಷಕನಿಗೂ ತಲುಪಿಸುವ ಈ ಪಯಣದ ಪ್ರಮುಖ ಉದ್ದೇಶಗಳು:
ವಿಶ್ವದ ಯಾವುದೇ ಮೂಲೆಯಲ್ಲಿರಲಿ, ಈಗ ಭಾರತೀಯ ಸಿನಿಮಾ ನಿಮ್ಮ ಮನೆಬಾಗಿಲಿಗೆ!

ಈ ಮಹತ್ವದ ಹೆಜ್ಜೆಯ ವಿಶೇಷತೆ ಎಂದರೆ, ಇದು ಕೇವಲ ಹೊಂಬಾಳೆ ಫಿಲ್ಮ್ಸ್ ನಿರ್ಮಿಸುವ ಚಿತ್ರಗಳಿಗೆ ಮಾತ್ರ ಸೀಮಿತವಲ್ಲ. ಭಾರತೀಯ ಚಿತ್ರರಂಗದ ವೈವಿಧ್ಯಮಯ ಕಥೆಗಳನ್ನು ಹಾಗೂ ಪ್ರತಿಭಾವಂತ ಸಿನಿಮಾಗಳನ್ನು ವಿಶ್ವದಾದ್ಯಂತ ತಲುಪಿಸುವ ಬೃಹತ್ ಜವಾಬ್ದಾರಿಯನ್ನು ಈ ಸಂಸ್ಥೆ ಹೊತ್ತುಕೊಂಡಿದೆ.

ಹೊಂಬಾಳೆ ಫಿಲ್ಮ್ಸ್‌ನ ಈ ಹೊಸ ಅಧ್ಯಾಯವು ಭಾರತೀಯ ಚಿತ್ರರಂಗದ ಜಾಗತಿಕ ಬೆಳವಣಿಗೆಗೆ ಹೊಸ ವೇಗವನ್ನು ನೀಡಲಿದೆ. ಇದು ಕೇವಲ ಒಂದು ಸಂಸ್ಥೆಯ ಬೆಳವಣಿಗೆಯಲ್ಲ, ಇದು ಪ್ರತಿ ಭಾರತೀಯನ ಹೆಮ್ಮೆ!

Related Posts

error: Content is protected !!