ಚಿತ್ರ ವಿಮರ್ಶೆ: ಒಳ್ಳೇ ಹುಡುಗನ ಗುಡ್ ಸ್ಟೋರಿ ಬ್ಯಾಡ್ ಚಿತ್ರ!

ರೇಟಿಂಗ್: 3/5

ಚಿತ್ರ: ಬ್ಯಾಡ್
ನಿರ್ದೇಶನ: ಪಿ.ಸಿ.ಶೇಖರ್
ನಿರ್ಮಾಣ: ಎಸ್ .ಆರ್. ವೆಂಕಟೇಶ್ ಗೌಡ
ತಾರಾಗಣ: ನಕುಲ್ ಗೌಡ, ಮಾನ್ವಿತ ಹರೀಶ್, ಅಪೂರ್ವ ಭಾರಧ್ವಾಜ್, ಕಡ್ಡಿಪುಡಿ ಚಂದ್ರು ಸಾಯಿ ಕೃಷ್ಣ, ಅಶ್ವಿನಿ ,, ಮಂಜುನಾಥ್ ಕೊಕಟೆ ಇತರರು
.

ಅವನು ವೇದ. ಒಮ್ಮೊಮ್ಮೆ ಅವನು ಹೇಳಿದ್ದೇ ವೇದವಾಕ್ಯ. ಕಷ್ಟ ಅನಿಸಿದರೆ ಅವನು ಮಾಡೋಕ್ಕಾಗಲ್ಲ. ಆದರೆ ಅವನಿಗೆ ಯಾವುದೂ ಕಷ್ಟ ಅನಿಸಲ್ಲ. ಅವನು ಒಳ್ಳೆಯವನು. ಆದರೆ ಬ್ಯಾಡ್ ಬಾಯ್. ಇದಿಷ್ಟು ಹೇಳಿದ ಮೇಲೆ ‘ಬ್ಯಾಡ್’ ಸಿನಿಮಾದ ಕಥೆ ಬಗ್ಗೆ ಹೆಚ್ಚೇನು ಹೇಳುವಂತಿಲ್ಲ.

ಕಥೆ ಅದ್ಭುತ ಅಲ್ಲ. ತೀರ ಸಿಂಪಲ್ ಸ್ಟೋರಿ. ನಿರ್ದೇಶಕರು ಇನ್ನಷ್ಟು ಗಂಭೀರವಾಗಿ ಆಲೋಚಿಸಿದ್ದರೆ ಬ್ಯಾಡ್ ಹೆಸರಿನ ಸಿನಿಮಾ ಇನ್ನೂ ಒಳ್ಳೇತನದಿಂದ ಕೂಡಿರುತ್ತಿತ್ತು. ಹಾಗಂತ ಇದೇನು ಬ್ಯಾಡ್ ಸಿನಿಮಾವೇನಲ್ಲ. ಒಂದು ಚಿಕ್ಕ, ಚೊಕ್ಕ ಮಾಸ್ ಸಿನಿಮಾ ಎನ್ನಬಹುದು.

ಇದೊಂದು ಗ್ರಾಮೀಣ ಸೊಗಡಿನ ಚಿತ್ರ. ಅತ್ತ ನಗರ ಚುತ್ರಣವೂ ಇದೆ. ಮೊದಲರ್ಧ ಕಥೆಯಲ್ಲಿ ಗೊಂದಲ ಎನಿಸುತ್ತದೆ. ದ್ವಿತಿಯಾರ್ಧ ಸಿನಿಮಾದ ವೇಗ ಮತ್ತು ಹಿಡಿತ ನೋಡಿಸಿಕೊಂಡು ಹೋಗುತ್ತೆ. ಆದರೂ ಕಥೆಯಲ್ಲಿ ಇನ್ನಷ್ಟು ಬಿಗಿ ಹಿಡಿತ ಬೇಕಿತ್ತು. ಕೆಲವು ಕಡೆ ಅನಗತ್ಯ ದೃಶ್ಯಗಳ ಹಾವಳಿ. ಇರುವ ಕಥೆಯನ್ನೇ ಮತ್ತಷ್ಟು ಅಚ್ಚುಕಟ್ಟಾಗಿ ಕಟ್ಟಿಕೊಡುವ ಪ್ರಯತ್ನ ಮಾಡಬಹುದಿತ್ತು. ಸಿನಿಮಾ ನೋಡುವಾಗ ಅಲ್ಲಲ್ಲಿ ಬರುವ ಫ್ರೇಮ್ ನಲ್ಲ ಕಾಂಪ್ರಮೈಸ್ ಮಾಡಿಕೊಂಡಂತಿದೆ. ಕೊನೆಯ ಇಪ್ಪತ್ತು ನಿಮಿಷ ಮಾತ್ರ ಬ್ಯಾಡ್ ಸಿನಿಮಾ ಗಟ್ಟಿಯಾಗಿ ಕೂರಿಸುತ್ತೆ.

ನಿರ್ದೇಶಕರು ಏನು ಹೇಳಬೇಕು ಅಂತ ಹೊರಟಿದ್ದಾರೋ ಅದು ಕೆಲವೆಡೆ ಗೊಂದಲ ಅನಿಸುತ್ತೆ. ಅದು ಬಿಟ್ಟರೆ ಉಳಿದಂತೆ ಸಿನಿಮಾ ನೋಡಲು ಅಡ್ಡಿಯಿಲ್ಲ.

ಆರಂಭದಿಂದಲೂ ಸಿನಿಮಾ ಮಂದಗತಿಯಲ್ಲೇ ಸಾಗುತ್ತೆ. ಹಾಡು ಮತ್ತು ಫೈಟು ವೇಗದ ಟ್ರ್ಯಾಕ್ ಗೆ ಕರೆದುಕೊಂಡು ಬರುತ್ತೆ. ಸಿನಿಮಾದಲ್ಲಿ ಪ್ಲಸ್ ಮತ್ತು ಮೈನಸ್ ಎರಡೂ ಇದೆ. ಮೈನಸ್ ಪಕ್ಕಕ್ಕಿಟ್ಟು ನೋಡುವುದಾದರೆ ಬ್ಯಾಡ್ ಇಷ್ಟವಾಗುತ್ತೆ.

ಕಥೆ ಏನು?

ವೇದ ಪಕ್ಕಾ ಮಾಸ್. ಹಣ ಕೊಟ್ಟರೆ ಏನ್ ಬೇಕಾದ್ರೂ ಮಾಡ್ತಾನೆ. ಕೆಟ್ಟವರ ಪಾಲಿಗೆ ಅವನು ಪೊರ್ಕಿ. ಡೀಲ್ ಪಡೆದು ಕೆಲಸ ಮಾಡೋದೇ ಅವನ ಕಾಯಕ. ಒಂದು ಡೀಲ್ ಇಡೀ ಸಿನಿಮಾ ಮುಗಿಯೋ ತನಕ ಆಗುತ್ತೆ. ಅಲ್ಲೊಂದಷ್ಟು ಟ್ವಿಸ್ಟು ಟೆಸ್ಟುಗಳಿವೆ.

ಇಡೀ ಸಿನಿಮಾದ ಅರ್ಧ ಕಥೆ ಒಂದು ಪಾಳು ಬಿದ್ದ ಮನೇಲಿ ನಡೆಯುತ್ತೆ. ಶಾಸಕನೊಬ್ಬನ ಮಗಳು, ಅವಳ ಪ್ರಿಯಕರ, ಮತ್ತಿಬ್ಬರನ್ನು ಕೂಡಿ ಹಾಕಿ ಒಬ್ಬೊಬ್ಬರನ್ನೇ ಸತಾಯಿಸುವ ನಾಯಕ ಅವರನ್ನು ಯಾಕೆ ಕಿಡ್ನಾಪ್ ಮಾಡ್ತಾನೆ? ಆ ಡೀಲ್ ಕೊಟ್ಟವರು ಯಾರು? ಯಾಕೆ ಅನ್ನೋದೇ ಸಸ್ಪೆನ್ಸ್. ಆ ಕುತೂಹಲ ಇದ್ದರೆ ಬ್ಯಾಡ್ ನೋಡಲ್ಲಡ್ಡಿಯಿಲ್ಲ.

ಸಿನಿಮಾದಲ್ಲಿ ಕೆಲವು ಟ್ವಿಸ್ಟ್ ಗಳು ಇಂಟ್ರೆಸ್ಟಿಂಗ್ ಎನಿಸುತ್ತವೆ. ಒಂದು ಕೊಲೆ ನಡೆಯುತ್ತೆ. ಶಾಸಕನ ಮಗಳು ಮಾಡಿದ್ದೇನು? ಮಣಿ ಶರ್ಮ ಯಾರು? ನಾಗ ಅನ್ನುವವನ ವ್ಯಥೆ ಏನು ಎಂಬ ಪ್ರೆಶ್ನೆ ಸಿನಿಮಾದುದ್ದಕ್ಕೂ ಕಾಡುತ್ತೆ. ಉತ್ತರ ಬೇಕಿದ್ದರೆ ಸಿನಿಮಾ ನೋಡಬಹುದು.

ಯಾರು ಹೇಗೆ?

ನಕುಲ್ ಗೌಡ ಅವರ ಆ ಪಾತ್ರಕ್ಕೆ ಇನ್ನಷ್ಟು ತಯಾರಿ ಬೇಕಿತ್ತು ಅಬಿಸುತ್ತೆ. ಡೈಲಾಗ್ ಡಿಲವರಿ ಬಗ್ಗೆಯೂ ಅವರು ಗಮನ ಕೊಡಬೇಕು. ಉಳಿದಂತೆ ಹಾಡು ಫೈಟಲ್ಲಿ ಓಕೆ.

ಮಾನ್ವಿತಾ ಹರೀಶ್ ಇರುವಷ್ಟು ಕಾಲ ಇಷ್ಟ ಆಗ್ತಾರೆ. ಅವರಿಗೆ ಸಿಕ್ಕ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಸಾಯಿ ಕೃಷ್ಣ, ಕಡ್ಡಿಪುಡಿ ಚಂದ್ರು, ಅಶ್ವಿನಿ, ಮಂಜು ಇತರರು ಗಮನ ಸೆಳೆಯುತ್ತಾರೆ.

ಇದು ಅರ್ಜುನ್ ಜನ್ಯ ಸಂಗೀತದ ಚಿತ್ರ. ಮೂರು ಹಾಡಿದ್ದರೂ ಜನ್ಯ ಅವರ ಛಾಯೆ ಎಲ್ಲೂ ಇಲ್ಲ. ಹಿನ್ನೆಲೆ ಸಂಗೀತ ಕೂಡ ಬ್ಯಾಡ್ ಆಗಿದೆ. ಡಿ. ಶಕ್ತಿ ಶೇಖರ್ ಛಾಯಾಗ್ರಹಣ ಅಷ್ಟೇನೂ ಬ್ಯಾಡ್ ಅನಿಸಿಲ್ಲ. ಇನ್ನು ಸಿನಿಮಾದ ಸಂಕಲನ ಕೂಡ ಚಿತ್ರದ ವೇಗ ಮಿತಿಗೆ ಕಾರಣವಾಗಿದೆ.

Related Posts

error: Content is protected !!