ಮತ್ತೆ ಒಂದಾಗಲಿದೆ ವಿಕ್ರಾಂತ್‌ ರೋಣ ಜೋಡಿ: ಕಿಚ್ಚನ ಬರ್ತ್ ಡೇಗೆ ಹೊಸ ಚಿತ್ರ ಅನೌನ್ಸ್

ಕಿಚ್ಚ ಸುದೀಪ್‌ ಅವರ ಹುಟ್ಟುಹಬ್ಬ ಆಚರಿಸೋಕೆ ಅವರ ಅಭಿಮಾನಿಗಳು ಸಜ್ಜಾಗಿದ್ದಾರೆ. ಸೆಪ್ಟೆಂಬರ್‌ 2 ರಂದು ಸುದೀಪ್‌ ಬರ್ತ್‌ ಡೇ. ಅವರನ್ನು ಕಣ್ತುಂಬಿಕೊಂಡು ಹುಟ್ಟುಹಬ್ಬದ ಶುಭಾಶಯ ಹೇಳೋಕೆ ಕಾತುರದಿಂದ ಕಾಯುತ್ತಿದ್ದಾರೆ. ಈ ನಡುವೆ ಕಿಚ್ಚ ಸುದೀಪ್‌ ಅವರ ಹುಟ್ಟು ಹಬ್ಬಕ್ಕೆ ಒಂದಷ್ಟು ಸಿನಿಮಾಗಳು ಅನೌನ್ಸ್‌ ಆಗಲಿವೆ.

ಈ ಕುರಿತಂತೆ ಅನೂಪ್‌ ಭಂಡಾರಿ ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಪೋಸ್ಟ್‌ ವೋಂದನ್ನು ಹಾಕಿದ್ದಾರೆ. ಸೆಪ್ಟೆಂಬರ್‌ 2 ರ ಬೆಳಗ್ಗೆ 10 ಗಂಟೆಗೆ ಹೊಸದ್ದೊಂದು ಅನೌನ್ಸ್‌ ಮೆಂಟ್‌ ಆಗಲಿದೆ. ಸುದೀಪ್‌ ಅವರೊಂದಿಗೆ ಮತ್ತೊಂದು ಹೊಸ ಸಿನಿಮಾ ಮಾಡುವ ಕುರಿತು ಅವರು ಸುಳಿವೊಂದು ನೀಡಿದ್ದಾರೆ.

ಹೌದು, ಸುದೀಪ್‌ ಅವರ ಜೊತೆಗೆ ಅನೂಪ್‌ ಭಂಡಾರಿ ಅವರು, ಈ ಹಿಂದೆ ವಿಕ್ರಾಂತ್‌ ರೋಣ ಸಿನಿಮಾ ಮಾಡಿದ್ದರು. ಆ ಸಿನಿಮಾ ನಿರೀಕ್ಷೆ ಮಟ್ಟಕ್ಕೆ ಸಕ್ಸಸ್‌ ಆಗಲಿಲ್ಲ. ಆದರೂ ಆ ಸಿನಿಮಾದ ನಿರೂಪಣೆ ಹಾಗು ಆರ್ಟ್‌ ವಿಭಾಗದ ಕೆಲಸ ಮೆಚ್ಚುಗೆ ಪಡೆದಿತ್ತು.

ಅನೂಪ್‌ ಭಂಡಾರಿ ಅವರು ಸುದೀಪ್‌ ಅವರಿಗೆ ಯಾವ ಸಿನಿಮಾ ನಿರ್ದೇಶನ ಮಾಡುತ್ತಾರೆ ಎಂಬ ಪ್ರಶ್ನೆ ಈ ಹಿಂದೆಯೇ ಎದ್ದಿತ್ತು. ಬಿಲ್ಲ ರಂಗ ಭಾಷ ಹೆಸರಿನ ಚಿತ್ರವೊಂದು ಇಬ್ಬರ ಕಾಂಬಿನೇಷನ್‌ನಲ್ಲಿ ಮೂಡಿಬರಲಿದೆ ಎನ್ನಲಾಗುತ್ತಿತ್ತು. ಈಗ ಅನೂಪ್‌ ಅವರು ಹಾಕಿಕೊಂಡಿರುವ ಟ್ವಿಟ್ಟರ್‌ ವಿಷಯ ಕೂಡ ಅದೇ ಸಿನಿಮಾ ಕುರಿತಂತೆ ಇರಬಹುದಾ? ಎಂಬ ಒಂದಷ್ಟು ಪ್ರಶ್ನೆಗಳು ಕಿಚ್ಚನ ಅಭಿಮಾನಿಗಳ ಮನದಲ್ಲಿ ಬೇರೂರಿವೆ. ಅದೇನೆ ಇದ್ದರೂ, ಸೆಪ್ಟೆಂಬರ್‌ 2 ರಂದು ಕಿಚ್ಚನ ಅಭಿಮಾನಿಗಳೆಲ್ಲರೂ ಕಿಚ್ಚೋತ್ಸವಕ್ಕೆ ಸಜ್ಜಾಗಿದ್ದಾರೆ.

ಅಂದು ಅನೂಪ್‌ ಭಂಡಾರಿ ಅವರು ಕಿಚ್ಚನ ಜೊತೆ ತಮ್ಮ ಹೊಸ ಸಿನಿಮಾ ಯಾವುದು ಎಂದು ಅನೌನ್ಸ್‌ ಮಾಡಲಿದ್ದಾರೆ. ಅಂದು ಅನೌನ್ಸ್‌ ಆಗಲಿರೋದು ಬಿಲ್ಲ ರಂಗ ಭಾಷ ಸಿನಿಮಾನ ಅಥವಾ ಬೇರೆಯದ್ದಾ? ಈ ಬಗ್ಗೆ ಅನೂಪ್‌ ಅವರ ಟ್ವೀಟ್‌ ಸಾಕಷ್ಟು ಕುತೂಹಲ ಮೂಡಿಸಿದೆ.

ಅದೇನೆ ಇದ್ದರೂ, ಕಿಚ್ಚನ ಹುಟ್ಟುಹಬ್ಬಕ್ಕೆ ಒಂದಷ್ಟು ಸಿನಿಮಾಗಳು ಅನೌನ್ಸ್‌ ಆಗುವ ಸಾಧ್ಯತೆ ಇದೆ. ಸದ್ಯ ಸುದೀಪ್‌ ಅವರು ಮ್ಯಾಕ್ಸ್‌ ಸಿನಿಮಾದ ಜಪದಲ್ಲಿದ್ದಾರೆ. ಸಿನಿಮಾ ಈಗ ಪೋಸ್ಟ್‌ ಪ್ರೊಡಕ್ಷನ್‌ ಕೆಲಸದಲ್ಲಿ ನಿರತವಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಸೆಪ್ಟೆಂಬರ್‌ 2ರ ಕಿಚ್ಚನ ಹುಟುಹಬ್ಬಕ್ಕೆ ಮ್ಯಾಕ್ಸ್‌ ಪ್ರೇಕ್ಷಕರ ಎದುರು ಬರಬೇಕಿತ್ತು. ಇನ್ನಷ್ಟು ಕೆಲಸಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಸಿನಿಮಾ ಬಿಡುಗಡೆ ಮುಂದಕ್ಕೆ ಹೋಗಿದೆ. ಆ ಸಿನಿಮಾವನ್ನು ನೋಡಲು ಇದೀಗ ಸುದೀಪ್‌ ಅಭಿಮಾನಿಗಳು ಕಾದಿರುವುದಂತೂ ಸುಳ್ಳಲ್ಲ.

ಒಂದಂತೂ ನಿಜ ಮತ್ತೆ ಒಂದಾಗಲಿರುವ ವಿಕ್ರಾಂತ್ ರೋಣ ಜೋಡಿ ಹೊಸ ಮೋಡಿ‌ಮಾಡಲಿದೆ ಎಂಬ ಮಾತು ಕೇಳಿಬರುತ್ತಿದೆ.
ಸುದೀಪ್ ಹುಟ್ಟುಹಬ್ಬಕ್ಕೆ ಬಿಗ್ ಅಪ್ಡೇಟ್ ಸಿಗಲಿದೆ. ಹಲವು ದಿನಗಳಿಂದ ಹರಿದಾಡುತ್ತಿರುವ ಸುದ್ದಿಗೆ ಬ್ರೇಕ್ ಹಾಕಿದ ನಿರ್ದೇಶಕ ಅನೂಪ್ ಪೋಸ್ಟ್ ಮೂಲಕ ಕೂತೂಹಲ ಮೂಡಿಸಿದ್ದಾರೆ.

ಕಿಚ್ಚನಿಗೆ ಮತ್ತೆ ಆಕ್ಷನ್ ಕಟ್ ಹೇಳಲಿರುವ ಅನೂಪ್ ಸಾಕಷ್ಟು ಉತ್ಸಾಹದಲ್ಲಿದ್ದಾರೆ.

ಅಂದಹಾಗೆ, ಬಿಲ್ಲ ರಂಗ ಭಾಷಾ ಸೆಪ್ಟೆಂಬರ್ 2 ಗೆ ಅನೌನ್ಸ್ ಮೆಂಟ್ ಆಗಲಿದೆ ಅನ್ನೋದೇ ಫ್ಯಾನ್ಸ್ ಮಾತು. ಸುದೀಪ್ ಬರ್ತಡೇ ದಿನ ಹೊಸ ಸಿನಿಮಾ ಅನೌನ್ಸ್ ಮಾಡಲಾಗುತ್ತೆ ಎಂಬ ನಿರೀಕ್ಷೆ ಜೋರಾಗಿದೆ. ಇದಕ್ಕೆ ಪೂರಕವಾಗಿ ದ ಮೆನ್ ಇನ್ ಬ್ಲಾಕ್ ವಿಲ್ ಬೀ ರೈಟ್ ಬ್ಯಾಕ್ ಎಂದು ಪೋಸ್ಟ್ ಶೇರ್ ಮಾಡಿದ್ದಾರೆ ಅನೂಪ್.
ಸುದೀಪ್ ಸರ್ ಹುಟ್ಟುಹಬ್ಬದಂದು ಮತ್ತೆ ಭೇಟಿ ಆಗೋಣ ಎಂದು ಕ್ಯಾಪ್ಶನ್ ಕೊಟ್ಟ ನಿರ್ದೇಶಕ ಅನೂಪ್ ಭಂಡಾರಿ ಅಂದು ಹೊಸ ಸಿನಿಮಾ ಅನೌನ್ಸ್ ಮಾಡಲಿದ್ದಾರೆ.

Related Posts

error: Content is protected !!