ಇದು ಜವಾರಿ ಹುಡುಗನ ಕನಸು: ಜುಲೈ 26ಕ್ಕೆ ರಕ್ತಾಕ್ಷ ರಿಲೀಸ್

ಶಾಲೆಯ ದಿನಗಳಲ್ಲೇ ಸಿನಿಮಾ ಕನಸು ಕಂಡಿದ್ದ ರೋಹಿತ್ ಕೊನೆಗೂ ಕಷ್ಟ ಪಟ್ಟ ತಾನೇ ದುಡಿದು ಹಾಕಿ ನಿರ್ಮಾಣ‌ ಮಾಡಿದ ಸಿನಿಮಾ ರಕ್ತಾಕ್ಷ. ಈಗಾಗಲೇ ಟ್ರೇಲರ್ ಮೂಲಕ ಸದ್ದು ಮಾಡಿರುವ ಸಿನಿಮಾ ಸಾಕಷ್ಟು ಕುತೂಹಲ ಮೂಡಿಸಿದೆ.

ಕನ್ನಡದಲ್ಲಿ ದಿನ ಕಳೆದಂತೆ ಹೊಸಬರ ಅಗಮನವಾಗುತ್ತಲೇ ಇದೆ. ಆ ಸಾಲಿಗೆ ರಕ್ತಾಕ್ಷ ಸಿನಿಮಾದ ಹೀರೋ ರೋಹಿತ್ ಕೂಡ ಒಬ್ಬರು, ಹೌದು ರೋಹಿತ್ ಉತ್ತರ ಕರ್ನಾಟಕ ಮೂಲದ ಜವಾರಿ ಹುಡುಗ.

ರಕ್ತಾಕ್ಷ ಸಿನಿಮಾ ಮೂಲಕ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ, ನಾಯಕರಾಗಿ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿರುವ ರೋಹಿತ್ ಅವರ ಕನಸಿನ ರಕ್ತಾಕ್ಷ ಚಿತ್ರ ಜುಲೈ 26 ಕ್ಕೆ ರಾಜ್ಯಾದ್ಯಂತ ತೆರೆಗೆ ಅಪ್ಪಳಿಸುತ್ತಿದೆ.

ಅಂದಹಾಗೆ, ಇದೊಂದು ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಸಿನಿಮಾ. ವಾಸುದೇವ ಎಸ್.ಎನ್. ಈ ಸಿನಿಮಾದ ನಿರ್ದೇಶಕರು. ಇವರಿಗೂ ಇದು ಚೊಚ್ಚಲ ಚಿತ್ರ.

ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಸಾಕಷ್ಟು ತಿರುವುಗಳಿವೆ. ಹೊಸಬರ ವಿಭಿನ್ನ ಪ್ರಯತ್ನ ಇದಾಗಿದ್ದು, ಚಿತ್ರಕಥೆ ಹಾಗು ನಿರೂಪಣಾ ಶೈಲಿ ಹೊಸತನದಿಂದ ಕೂಡಿದೆ. ಚಿತ್ರದಲ್ಲಿ ಹೀರೋ ರೋಹಿತ್ ಹಾಗೂ ಪ್ರಮೋದ್ ಶೆಟ್ಟಿ ನಡುವಿನ ಆಕ್ಷನ್ ಸನ್ನಿವೇಶ ಚಿತ್ರದ ಹೈಲೆಟ್. ಚಿತ್ರದ ಮತ್ತೊಂದು ವಿಶೇಷ ಅಂದರೆ, ನಟ ವಸಿಷ್ಠ ಸಿಂಹ ಅವರು ಹಾಡಿರುವ ರಕ್ತಾಕ್ಷ ಟೈಟಲ್ ಟ್ರ್ಯಾಕ್ ಗೆ ಈಗಾಗಲೇ ಸಾಕಷ್ಟು ಮೆಚ್ಚುಗೆ ಪಡೆದಿದೆ. ಇತ್ತೀಚೆಗೆ ಬಿಡುಗಡೆಗೊಂಡ ಟ್ರೇಲರ್ ಕೂಡ ಭರ್ಜರಿ ಮೆಚ್ಚುಗೆ ಗಳಿಸಿದೆ.

ಚಿತ್ರದಲ್ಲಿ ರೋಹಿತ್, ಪ್ರಮೋದ್ ಶೆಟ್ಟಿ, ರೂಪ ರಾಯಪ್ಪ, ಅರ್ಚನಾ ಕೊಟ್ಟಿಗೆ,ರಚನಾ ದಶರಥ್, ಗುರುದೇವ್ ನಾಗರಾಜ, ವಿಲಾಸ್ ಕುಲಕರ್ಣಿ, ಶಿವಮೊಗ್ಗ ರಾಮಣ್ಣ ಸೇರಿದಂತೆ ಇತರರು ಇದ್ದಾರೆ.

ಇನ್ನು, ಚಿತ್ರಕ್ಕೆ ದಾಸ್ ಮೋಡ್ ಅವರ ಸಂಗೀತವಿದೆ. ಸುಜಿತ್ ಹಾಗು ವೆಂಕಟರಾಮಯ್ಯ ಅವರ ಸಾಹಿತ್ಯ ಚಿತ್ರಕ್ಕಿದೆ. ವಸಿಷ್ಠ ಸಿಂಹ, ಸುಪ್ರಿಯಾ ರಾಮ್ ಹಾಡಿದ್ದಾರೆ. ಆದರ್ಶ್ ಶಿರಾಸ್ ಅವರ ಛಾಯಾಗ್ರಹಣವಿದೆ. ಸತೀಶ್ ಚಂದ್ರಯ್ಯ ಸಂಕಲನ ಮಾಡಿದರೆ, ಸ್ಟಂಟ್ ಶಿವ ಅವರ ಸಾಹಸವಿದೆ.

ರೋಹಿತ್ ಉತ್ತರ ಕರ್ನಾಟಕದ ಹುಡುಗ. ಹಾಗಾಗಿ ಹುಬ್ಬಳ್ಳಿಯಲ್ಲಿ ಪುನೀತ್ ರಾಜಕುಮಾರ್ ಅಭಿಮಾನಿ ಬಳಗದ ಸಹಯೋಗದೊಂದಿಗೆ ಅಪ್ಪು ಹುಟ್ಟುಹಬ್ಬ ಸಂದರ್ಭದಲ್ಲಿ ರಕ್ತಾಕ್ಷ ಚಿತ್ರತಂಡದಿಂದ ‘ಅಪ್ಪು’ ಕುರಿತ ವಿಡಿಯೋವೊಂದನ್ನು ಬಿಡುಗಡೆ ಮಾಡಲಾಗಿತ್ತು. ಸಾವರ್ಜನಿಕ ಕಾರ್ಯಕ್ರಮದಲ್ಲಿ ರಕ್ತಾಕ್ಷ ತಂಡದ ಕೆಲಸಕ್ಕೆ ಮೆಚ್ಚುಗೆ ಸಿಕ್ಕಿದೆ.

ರೋಹಿತ್ ತೆರೆ ಮೇಲೆ ಹೀರೋ ಮಾತ್ರವಲ್ಲ, ತೆರೆ ಹಿಂದೆಯೂ ಮೆಚ್ಚುಗೆ ಕೆಲಸ ಮಾಡುತ್ತಿದ್ದಾರೆ. ಸದ್ದಿಲ್ಲದೆಯೇ ಒಂದಷ್ಟು ಸಾಮಾಜಿಕ‌ಕಾರ್ಯದಲ್ಲಿ ನಿರತರಾದವರು. ಹುಬ್ಬಳ್ಳಿಯ ಅನಾಥಾಶ್ರಮದ ಸುಮಾರು 200 ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳ ವಿತರಣೆ ಮಾಡಿದ್ದಾರೆ. ಅನಾಥಾಶ್ರಮ ಹಾಗು ವೃದ್ಧಾಶ್ರಮಗಳಿಗೆ ಪ್ರತಿ ತಿಂಗಳು ಅಪ್ಪು ಹೆಸರಲ್ಲಿ ಕೈಲಾದಷ್ಟು ಆಹಾರ ಧಾನ್ಯದ ಕಿಟ್ ವಿತರಿಸುತ್ತ ಬಂದಿದ್ದಾರೆ‌ ಎಂಬುದು ವಿಶೇಷ.

ಸದ್ಯ ರಕ್ತಾಕ್ಷ ಸಿನಿಮಾ ಜುಲೈ 26 ಕ್ಕೆ ಬರುತ್ತಿದೆ. ರಿಲೀಸ್ ಮುನ್ನವೇ ಕ್ರೇಜ್ ಹುಟ್ಟಿಸಿದೆ.

ಉತ್ತರ ಕರ್ನಾಟಕ ಭಾಗದಲ್ಲಿ ಕಲಾವಿದರಿದ್ದರೂ ಹೀರೋಗಳ ಸಂಖ್ಯೆ ಇಲ್ಲ. ಆ ಸಾಲಿಗೆ ಈಗ ರೋಹಿತ್ ಮೊದಲ ಸಾಲಲಲ್ಲಿ ಕಾಣುತ್ತಿದ್ದಾರೆ. ಆ ಭಾಗದಲ್ಲಿ ಈಗಾಗಲೇ ಸಿನಿಮಾಗೆ ಒಳ್ಳೆಯ ಮೆಚ್ಚುಗೆ ಸಿಕ್ಕಿದೆ. ಕನಸು ಕಂಗಳ ಹುಡುಗನ ಕನಸಿನ ಸಿನಿಮಾ ಇದು.

Related Posts

error: Content is protected !!