ಗೋವಾ ಗಲಾಟೆ: ಹಲ್ಲೆ ಮಾಡಿದ ಆಂತರ್ಯ ಸತೀಶ್ ಅಮಾನತು- ಫಿಲಂ ಚೇಂಬರ್ ನಿರ್ಧಾರ

ಗೋವಾಕ್ಕೆ ಪಾರ್ಟಿಗಾಗಿ ತೆರಳಿದ್ದ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಸದಸ್ಯರ ನಡುವೆ ಗಲಾಟೆಯಲ್ಲಿ ನಿರ್ಮಾಪಕ ಎ. ಗಣೇಶ್‍ ಮೇಲೆ ದೈಹಿಕ ಹಲ್ಲೆ ಮಾಡಿದ್ದ ನಿರ್ಮಾಪಕ ಆಂತರ್ಯ ಸತೀಶ್‍ ಅವರನ್ನು ಅಮಾನತು ಮಾಡುವುದಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರು ಹೇಳಿದ್ದಾರೆ. ಅಧ್ಯಕ್ಷರ ಈ ನಿರ್ಧಾರಕ್ಕೆ ನಿರ್ಮಾಪಕರ ಸಂಘ ಕೂಡ ಬೆಂಬಲಿಸಿದೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸದಸ್ಯರು ಅಧ್ಯಕ್ಷ ಎನ್.ಎಮ್.ಸುರೇಶ್ ನೇತೃತ್ವದಲ್ಲಿ ಗೋವಾಗೆ ತೆರಳಿದ್ದರು. ರಾತ್ರಿ ಊಟದ ಸಮಯದಲ್ಲಿ ನಡೆದ ಗಲಾಟೆಯಲ್ಲಿ ನಿರ್ಮಾಪಕ ‘ರಥಾವರ ಮಂಜುನಾಥ್‍ ಮೇಲೆ ಆಂತರ್ಯ ಸತೀಶ್‍ ಜೋರಾದ ಜಗಳ ನಡೆದು, ಈ ವೇಳೆ ಸತೀಶ್ ಅವರು ಮಂಜುನಾಥ್‍ ಮೇಲೆ ಹಲ್ಲೆ ಮಾಡಿದ್ದಾರೆ. ಈ ಗಲಾಟೆ ಬಿಡಿಸಲು ಹೋದ ಗಣೇಶ್‍ ಅವರ ಮೇಲೂ ಹಲ್ಲೆ ನಡೆಸಿದ್ದಾರೆ. ಊಟ ಮಾಡುವ ಟೇಬಲ್ ಮೇಲಿದ್ದ ಫೋರ್ಕ್‍ನಿಂದ ಗಣೇಶ್ ಅವರಿಗೆ ಚುಚ್ಚಿದ್ದರಿಂದ. ಗಣೇಶ್‍ ತೀವ್ರ ಗಾಯಗೊಂಡಿದ್ದಾರೆ. ಗಲಾಟೆಯಲ್ಲಿ ಗಾಯಗೊಂಡಿರುವ, ಮಂಜುನಾಥ್‍ ಆಸ್ಪತ್ರೆಯಲ್ಲಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ವಾಣಿಜ್ಯ ಮಂಡಳಿ ಸುದ್ದಿಗೋಷ್ಠಿ ನಡೆಸಿತು. ಗಾಯಗೊಂಡ ಎ. ಗಣೇಶ್‍ ಮಾತನಾಡಿ, ಊಟದ ವೇಳೆ ಏಕಾಏಕಿ ‘ಸತೀಶ್‍ ಮತ್ತು ಮಂಜುನಾಥ್‍ ನಡುವೆ ಗಲಾಟೆ ಆಯ್ತು. ಅದು ದೊಡ್ಡ ಹಂತಕ್ಕೆ ಹೋಯ್ತು. ಆಗ ನಾನು ತಕ್ಷಣ ಜಗಳ ಬಿಡಿಸಲು ಹೋದಾಗ ನನ್ನ ಮಲೆ ಹಲ್ಲೆ ನಡೆಸಿದರು. ಗಾಯಗೊಂಡು ರಕ್ತಸ್ರಾವ ಆಯ್ತು. ಕೂಡಲೇ ನಾನು ಸರ್ಕಾರಿ ಆಸ್ಪತ್ರೆಯಲ್ಲಿ ಮೊದಲ ಚಿಕಿತ್ಸೆ ಪಡೆದು, ಬೆಂಗಳೂರಿಗೆ ಬಂದೆ. ಇಲ್ಲಿ ಗೊತ್ತಿರುವ ವೈದ್ಯರ ಸಲಹೆ ಮೇರೆಗೆ ಸೂಕ್ತ ಚಿಕಿತ್ಸೆ ಪಡೆದೆ.

ಗಲಾಟೆ ನಡೆದ ವಿಷಯಕ್ಕೆ ನಾನು ದೂರು‌ ನೀಡಲಿಲ್ಲ. ಈಗ ಮಂಡಳಿಯ ಸದಸ್ಯರ ಚರ್ಚೆ ಬಳಿಕ ದೂರು ನೀಡಲು ನಿರ್ಧರಿಸಿದ್ದೇನೆ ಎಂದರು.

ಈ ವಿಷಯಕ್ಕೆ‌ ಸಂಬಂಧಿಸಿದಂತೆ ಮಂಡಳಿ ಮಾಜಿ ಅಧ್ಯಕ್ಷ ಸಾ.ರಾ. ಗೋವಿಂದು ಅವರ ನೇತೃತ್ವದ ಸಮಿತಿ ರಚನೆಯಾಗಲಿದೆ. ಗದ್ದಲದ ವಿಚಾರಣೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲಿದೆ. ಇನ್ನು ಈ ಕೂಡಲೆ, ಸತೀಶ್‍ ಅವರನ್ನು ಅಮಾನತುಗೊಳಿಸಲಾಗುವುದು ಅಂತ ಅಧ್ಯಕ್ಷ ಎನ್‍.ಎಂ. ಸುರೇಶ್‍ ಸ್ಪಷ್ಟಪಡಿಸಿದ್ದಾರೆ.

Related Posts

error: Content is protected !!