ನನ್ನ ಹಾಗು ಚಂದ್ರು ಬಗ್ಗೆ ಯಾವ ಮೀಡಿಯಾ ಏನೂ ಮಾಡಕ್ಕಾಗಲ್ಲ: ಸೋಶಿಯಲ್ ಮೀಡಿಯಾ ವಿರುದ್ಧ ಶಿವಣ್ಣ ಗರಂ

ಈ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ಶಿವರಾಜಕುಮಾರ್ ಅವರು ನಿರ್ದೇಶಕ ಆರ್. ಚಂದ್ರು ಕುರಿತು ನೆಗೆಟಿವ್ ಆಗಿ ಮಾತಾಡಿದ್ದಾರೆ ಎಂದು ಎಡಿಟ್ ಮಾಡಿದ ವೀಡಿಯೋವೊಂದು ಹರಿದಾಡಿತ್ತು. ಅಷ್ಟೇ ಅಲ್ಲದೆ, ಆ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ಆ ಬಗ್ಗೆ ಈಗ ಸ್ವತಃ ಶಿವರಾಜಕುಮಾರ್ ಅವರೇ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ

ಹೌದು, ಹಾಗೆ ಮಾತಾಡಿದ್ದ ವೀಡಿಯೋವೊಂದರ ಕುರಿತು ಎಲ್ಕೆಡೆ ಮಾತುಗಳು ಕೇಳಿಬಂದಿದ್ದವು. ಆದರೆ ಆರ್.ಚಂದ್ರು ಮತ್ತು ಶಿವರಾಜಕುಮಾರ್ ಅವರ ಸಂಬಂಧ ಹೇಗಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಇತ್ತೀಚೆಗೆ ನಡೆದ ಫಾದರ್ ಚಿತ್ರದ ಮುಹೂರ್ತ ವೇಳೆ ಶಿವರಾಜಕುಮಾರ್ ಸೋಶಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿ ಹಬ್ಬಿಸಿದವರಿಗೆ ಬಿಸಿ ಮುಟ್ಟಿಸಿದ್ದಾರೆ.

‘ಸೋಷಿಯಲ್‍ ಮೀಡಿಯಾ ಎನ್ನುವುದು ಆಟ ಸಾಮಾನಿನಂತಾಗಿದೆ. ಆ ಸಮಯದಲ್ಲಿ ನಾವಿದ್ದ ಕಾಲಘಟ್ಟ ಚೆನ್ನಾಗಿತ್ತು. ನಾವೆಲ್ಲರೂ ಆಗ ಪುಣ್ಯ ಮಾಡಿದ್ದೆವು. ಏನೇ ಇರಲಿ ಒಳ್ಳೆಯದಕ್ಕೆ ಸೋಷಿಯಲ್‍ ಮೀಡಿಯಾ ಬಳಸಿಕೊಳ್ಳವೇಕೆ ಹೊರತು ಕೆಟ್ಟದ್ದಕ್ಕಲ್ಲ.
ಏನಾದರೂ ಮಾತಾಡಿದರೆ ನಿಮಗೇನು ಸಮಸ್ಯೆ? ಸುಮ್ಮನೆ ಸೀನ್‍ ಕ್ರಿಯೇಟ್‍ ಮಾಡಬಾರದು. ಅದು ತಪ್ಪು. ಒಂದು ದಿನ ಖಂಡಿತಾ ಕಾಲ ಬರುತ್ತೆ. ದೇವರು ಬಿಡಲ್ಲ. ಆಗ ನಿಜಕ್ಕೂ ಕಷ್ಟ ಆಗತ್ತೆ. ಏನಾದರೂ ಮಾತಾಡಿದರೆ ಆ ಮಾತನ್ನು ತಿರುಚುವ ವೀಡಿಯೋಗಳು ವೈರಲ್ ಆಗುತ್ತವೆ. ಇದು ಸರಿಯಲ್ಲ ಎಂದು ಶಿವಣ್ಣ ಬೇಸರ ಹೊರಹಾಕಿದ್ದಾರೆ.

‘’ಕಬ್ಜ’ ಚಿತ್ರದ ಬಳಿಕ ಒಂದು ವೀಡಿಯೋ ವೈರಲ್‍ ಆಯ್ತು. ಸೋಷಿಯಲ್‍ ಮೀಡಿಯಾ ಮಂದಿ ಒಳ್ಳೆಯದನ್ನು ಮಾಡಿ. ಯಾವುದನ್ನೂ ಕೆಟ್ಟದ್ದು ಮಾಡಬೇಡಿ. ನೀವೇನೇ ಮಾಡಿದರೂ, ನಮ್ಮ ಸಂಬಂಧ ಹಾಳಾಗಲ್ಲ. ನನ್ನ ಮತ್ತು ಚಂದ್ರು ಅವರ ಬಾಂಧವ್ಯ ಯಾವಾಗಲೂ ಚೆನ್ನಾಗಿರುತ್ತದೆ. ನಾನೇನೇ ಹೇಳಿದರೂ ಚಂದ್ರು ಅವರನ್ನು ಕೇಳುತ್ತೇನೆ. ನಿಮಗ್ಯಾಕೆ ಕೇಳಲಿ? ದಯವಿಟ್ಟು ಆ ತರಹ ಕೆಲಸ ಮಾಡಬೇಡಿ. ಒಳ್ಳೆಯ ಕೆಲಸ ಮಾಡಿ. ಎಥಿಕ್ಸ್ ಇಟ್ಟುಕೊಳ್ಳಿ.

ಇಷ್ಟ ಬಂದ ಹಾಗೆ ಏನು ಬೇಕಾದರೂ ಹಾಕಿಕೊಳ್ಳಬಹುದು ಎನ್ನುವುದು ತಪ್ಪು ಎಂದ ಅವರು, ‘ನಿಮಗೆ ತಮಾಷೆ ಎನಿಸಬಹುದು. ನಿಮ್ಮನೆ ಒಲೆ ಉರಿಯೋಕೆ ಇನ್ನೊಬ್ಬರ ಮನೆಯ ಒಲೆ ಆರಿಸುವ ಕೆಲಸ ಮಾಡಬೇಡಿ. ಮೀಡಿಯಾ ನಮ್ಮನ್ನು ಏನೂ ಮಾಡಕ್ಕಾಗಲ್ಲ ಎಂದರು.

Related Posts

error: Content is protected !!