ಕರುನಾಡ ಕುಳ್ಳ ಕಣ್ಮರೆ: ಹಿರಿಯ ನಟ ನಿರ್ಮಾಪಕ ನಿರ್ದೇಶಕ ದ್ವಾರಕೀಶ್ ಇನ್ನು ನೆನಪು ಮಾತ್ರ…

ಹಿರಿಯ ನಟ, ನಿರ್ಮಾಪಕ ಹಾಗು ನಿರ್ದೇಶಕ ದ್ವಾರಕೀಶ್ (82) ಹೃದಯಾಘಾತದಿಂದ ನಿಧನರಾಗಿದ್ದಾರೆ, ಏಪ್ರಿಲ್ 16ರ ಬೆಳಿಗ್ಗೆ ಎದ್ದು ಕಾಫಿ ಕುಡಿದು, ಸುಸ್ತಾಗುತ್ತೆ ಎಂದು ಹೇಳಿದ ಅವರು ನಿದ್ದೆಗೆ ಜಾರಿದ್ದರು. ಆದರೆ ದ್ವಾರಕೀಶ್ ಅವರು ಮಲಗಿದ್ದಾಗಲೇ, ಹೃದಯಾಘಾತದಿಂದ ನಿಧನರಾಗಿದ್ದಾರೆ.

ಬಂಗಲೆ ಶಾಮರಾವ್ ದ್ವಾರಕನಾಥ್ ಅವರ ಮೂಲ ಹೆಸರು. ಅವರು ಐವರು ಪುತ್ರರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

1942 ಆಗಸ್ಟ್ 19ರಂದು ಬಂಗಲೆ ಶಾಮರಾವ್ ಮತ್ತು ಜಯಮ್ಮ ದಂಪತಿಗೆ ಹುಣಸೂರಿನಲ್ಲಿ ದ್ವಾರಕೀಶ್ ಜನಿಸಿದ್ದರು. ಅವರು ಮೈಸೂರಿನ ಇಟ್ಟಿಗೆಗೂಡಲ್ಲಿ ಬೆಳೆದು, ಕನ್ನಡ ಚಿತ್ರರಂಗದಲ್ಲಿ ನಟರಾಗಿ, ನಿರ್ಮಾಪಕರಾಗಿ ನಿರ್ದೇಶಕರಾಗಿ ಜನಪ್ರಿಯಗೊಂಡವರು. ಕನ್ನಡ ಚಿತ್ರರಂಗದಲ್ಲಿ ಅವರು ಸಾಕಷ್ಟು ಕಷ್ಟಪಟ್ಟು ಬೆಳೆದಿದ್ದರು.

ವಿಷ್ಣು ವರ್ಧನ್‌ಗೆ ಅವರ ಆಪ್ತಮಿತ್ರನಾಗಿದ್ದ ಅವರು ಬಹುತೇಕ ಸಿನಿಮಾಗಳಲ್ಲಿ ಜೋಡಿಯಾಗಿ ನಟಿಸಿದ್ದರು.
ದ್ವಾರಕೀಶ್ ಅವರ ಕಳ್ಳ ಕುಳ್ಳ ಸಿನಿಮಾ ಬೆಸ್ಟ್ ಕಾಂಬಿನೇಷನ್ ಆಗಿತ್ತು. ವಿಷ್ಣು ನಿಧನಕ್ಕೂ ಮುನ್ನ ಆಪ್ತಮಿತ್ರ ಸಿನಿಮಾದಲ್ಲಿ ದ್ವಾರಕೀಶ್ ಜೋಡಿಯಾಗಿ ನಟಿಸಿ, ದಾಖಲೆ ಬರೆದಿದ್ದರು.

ಈ ಮೊದಲು ಹಲವು ಬಾರಿ ದ್ವಾರಕೀಶ್ ಸಾವಿನ ಸುದ್ದಿ ಕೇಳಿ ಬಂದಿತ್ತು. ಆದರೆ ಅದೆಲ್ಲವೂ ಫೇಕ್ ಎಂದು ಸ್ನತಃ ದ್ವಾರಕೀಶ್ ಅವರೇ ವೀಡಿಯೋ ಮೂಲಕ ಸ್ಪಷ್ಟಪಡಿಸಿದ್ದರು. ಆದರೆ , ಏಪ್ರಿಲ್ 16ರ ಬೆಳಗ್ಗೆ ದ್ವಾರಕೀಶ್ ಕುಟುಂಬಸ್ಥರೇ ಈ ಸುದ್ದಿ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ದ್ವಾರಕೀಶ್ ಸಾವು ಕನ್ನಡ ಚಿತ್ರರಂಗಕ್ಕೆ ತುಂಬಲಾಗದ ನಷ್ಟವಾಗಿದ್ದು, ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

Related Posts

error: Content is protected !!