ಹಿರಿಯ ನಟ, ನಿರ್ಮಾಪಕ ಹಾಗು ನಿರ್ದೇಶಕ ದ್ವಾರಕೀಶ್ (82) ಹೃದಯಾಘಾತದಿಂದ ನಿಧನರಾಗಿದ್ದಾರೆ, ಏಪ್ರಿಲ್ 16ರ ಬೆಳಿಗ್ಗೆ ಎದ್ದು ಕಾಫಿ ಕುಡಿದು, ಸುಸ್ತಾಗುತ್ತೆ ಎಂದು ಹೇಳಿದ ಅವರು ನಿದ್ದೆಗೆ ಜಾರಿದ್ದರು. ಆದರೆ ದ್ವಾರಕೀಶ್ ಅವರು ಮಲಗಿದ್ದಾಗಲೇ, ಹೃದಯಾಘಾತದಿಂದ ನಿಧನರಾಗಿದ್ದಾರೆ.
![](https://cinilahari.in/wp-content/uploads/2024/04/IMG_20240416_215341-940x1024.jpg)
ಬಂಗಲೆ ಶಾಮರಾವ್ ದ್ವಾರಕನಾಥ್ ಅವರ ಮೂಲ ಹೆಸರು. ಅವರು ಐವರು ಪುತ್ರರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
![](https://cinilahari.in/wp-content/uploads/2024/04/IMG_20240416_215354-1024x895.jpg)
1942 ಆಗಸ್ಟ್ 19ರಂದು ಬಂಗಲೆ ಶಾಮರಾವ್ ಮತ್ತು ಜಯಮ್ಮ ದಂಪತಿಗೆ ಹುಣಸೂರಿನಲ್ಲಿ ದ್ವಾರಕೀಶ್ ಜನಿಸಿದ್ದರು. ಅವರು ಮೈಸೂರಿನ ಇಟ್ಟಿಗೆಗೂಡಲ್ಲಿ ಬೆಳೆದು, ಕನ್ನಡ ಚಿತ್ರರಂಗದಲ್ಲಿ ನಟರಾಗಿ, ನಿರ್ಮಾಪಕರಾಗಿ ನಿರ್ದೇಶಕರಾಗಿ ಜನಪ್ರಿಯಗೊಂಡವರು. ಕನ್ನಡ ಚಿತ್ರರಂಗದಲ್ಲಿ ಅವರು ಸಾಕಷ್ಟು ಕಷ್ಟಪಟ್ಟು ಬೆಳೆದಿದ್ದರು.
![](https://cinilahari.in/wp-content/uploads/2024/04/IMG_20240416_215411.jpg)
ವಿಷ್ಣು ವರ್ಧನ್ಗೆ ಅವರ ಆಪ್ತಮಿತ್ರನಾಗಿದ್ದ ಅವರು ಬಹುತೇಕ ಸಿನಿಮಾಗಳಲ್ಲಿ ಜೋಡಿಯಾಗಿ ನಟಿಸಿದ್ದರು.
ದ್ವಾರಕೀಶ್ ಅವರ ಕಳ್ಳ ಕುಳ್ಳ ಸಿನಿಮಾ ಬೆಸ್ಟ್ ಕಾಂಬಿನೇಷನ್ ಆಗಿತ್ತು. ವಿಷ್ಣು ನಿಧನಕ್ಕೂ ಮುನ್ನ ಆಪ್ತಮಿತ್ರ ಸಿನಿಮಾದಲ್ಲಿ ದ್ವಾರಕೀಶ್ ಜೋಡಿಯಾಗಿ ನಟಿಸಿ, ದಾಖಲೆ ಬರೆದಿದ್ದರು.
![](https://cinilahari.in/wp-content/uploads/2024/04/IMG_20240416_215331-752x1024.jpg)
ಈ ಮೊದಲು ಹಲವು ಬಾರಿ ದ್ವಾರಕೀಶ್ ಸಾವಿನ ಸುದ್ದಿ ಕೇಳಿ ಬಂದಿತ್ತು. ಆದರೆ ಅದೆಲ್ಲವೂ ಫೇಕ್ ಎಂದು ಸ್ನತಃ ದ್ವಾರಕೀಶ್ ಅವರೇ ವೀಡಿಯೋ ಮೂಲಕ ಸ್ಪಷ್ಟಪಡಿಸಿದ್ದರು. ಆದರೆ , ಏಪ್ರಿಲ್ 16ರ ಬೆಳಗ್ಗೆ ದ್ವಾರಕೀಶ್ ಕುಟುಂಬಸ್ಥರೇ ಈ ಸುದ್ದಿ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ದ್ವಾರಕೀಶ್ ಸಾವು ಕನ್ನಡ ಚಿತ್ರರಂಗಕ್ಕೆ ತುಂಬಲಾಗದ ನಷ್ಟವಾಗಿದ್ದು, ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.