ಕನ್ನಡದ ಈ ಬಚ್ಚನ್ ಈಗ ಬಹು ಭಾಷೆಯ ಅಚ್ಚೇ ವಿಲನ್!

ವೃತ್ತಿ ಬದುಕಿಗೆ ತಿರುವು ಕೊಟ್ಟ ಯುವ ಬುಕ್ಕಿ ಪಾತ್ರ
ಸ್ಯಾಂಡಲ್ವುಡ್ ಟು ಬಾಲಿವುಡ್ ಪಯಣ
ಸಖತ್ ಹೈಟು, ಖಡಕ್ ವಾಯ್ಸ್ ಬಚ್ಚನ್ ಜಿಂದಗಿಯ ಕಿಕ್

ಕನ್ನಡ ಚಿತ್ರರಂಗದಲ್ಲಿ ಖಳನಟರ ಸಂಖ್ಯೆಗೇನೂ ಕಮ್ಮಿ ಇಲ್ಲ. ದಿನ ಕಳೆದಂತೆ ಹೊಸ ಖಳನಟರ ಆಗಮನವಾಗುತ್ತಲೇ ಇದೆ. ಆ ಸಾಲಿಗೆ ಈಗ ಅಪ್ಪಟ ಕನ್ನಡದ ಸಿನಿಮಾ ಪ್ರೇಮಿ ಎಂದೆನಿಸಿಕೊಂಡಿರುವ ಖಳನಟರೊಬ್ಬರು ಇದೀಗ ಶೈನ್ ಆಗುತ್ತಿದ್ದಾರೆ. ಹೌದು ಅದು ಬೇರಾರೂ ಅಲ್ಲ ಬಚ್ಚನ್.

ಅರೇ ಹೆಸರೇ ಬಚ್ಚನ್ ಅಂತಾನಾ ಎಂಬ ಪ್ರಶ್ನೆ ಬರಬಹುದು. ಯೆಸ್ ಇವರು ಆ ಅಮಿತಾಬ್ ಬಚ್ಚನ್ ಅಲ್ಲ, ಕನ್ನಡದ ಬಚ್ಚನ್. ಕನ್ನಡದ ಹಲವು ಸಿನಿಮಾಗಳಲ್ಲಿ ಖಳನಟರಾಗಿದ್ದ ಇವರು ದೂರದ ಮುಂಬೈಗೂ ಜಿಗಿದವರು. ಬಾಲಿವುಡ್ ಅಂಗಳಕ್ಕೆ ಕಾಲಿಟ್ಟು ಒಂದಷ್ಟು ಸಿನಿಮಾ ಮಾಡಿದವರು. ಸದ್ಯ ಖಳನಟರಾಗಿಯೇ ಗುರುತಿಸಿಕೊಂಡಿರುವ ಬಚ್ಚನ್ ಈಗ ಸುದ್ದಿಯಲ್ಲಿದ್ದಾರೆ.

ಯಾರು ಈ ಬಚ್ಚನ್ ಎಂಬ ಪ್ರಶ್ನೆಗೆ ‘ಯುವ’ ಸಿನಿಮಾ‌ಉತ್ತರ. ಹೌದು ಆ ಸಿನಿಮಾ‌ ನೋಡಿದವರಿಗೆ ಇವರ ಪರಿಚಯ ಇದ್ದೇ ಇರುತ್ತೆ. ಯುವ ಚಿತ್ರದಲ್ಲಿ ಬುಕ್ಕಿ ಪಾತ್ರದ ಮೂಲಕ ಗಮನ ಸೆಳೆದ ಬಚ್ಚನ್ ಆ ಪಾತ್ರ ಮೂಲಕ ನನ್ನ ವೃತ್ತಿ ಬದುಕಿಗೊಂದು ತಿರುವು ಸಿಕ್ಕಿದೆ ಎಂಬ ಖುಷಿ ಹೊರಹಾಕುತ್ತಾರೆ.

ಬಚ್ಚನ್ ಆರಡಿ ಕಟೌಟ್. ಪಗರ್ ದಸ್ತಾದ ಮೈಕಟ್ಟು. ಖಡಕ್ ವಾಯ್ಸ್. ಆರಂಭದಲ್ಲಿ ಬಾಲಿವುಡ್ ಅಂಗಳದಲ್ಲೇ ಕಾಲೂರಿದ್ದ ಬಚ್ಚನ್ ಮತ್ತೆ ಅವಕಾಶ ಹುಡುಕಿ ಬಂದಿದ್ದರಿಂದ ಪುನಃ ಕನ್ನಡಕ್ಕೆ ಬಂದಿದ್ದಾರೆ. ಹಾಗೆ ನೋಡಿದರೆ, ಬಚ್ಚನ್ ಬರೀ ಕನ್ನಡಕ್ಕೆ ಸೀಮಿತವಾಗಿಲ್ಲ. ಅವರು ಪ್ಯಾನ್ ಇಂಡಿಯಾ ಸಿನಿಮಾಗಳ ವಿಲನ್.

ಕನ್ನಡದ ಸಿನಿಮಾಗಳ ಜೊತೆ ಧಾರಾವಾಹಿ, ಹಿಂದಿ ಹಾಗೂ ಮರಾಠಿ ಚಿತ್ರಗಳಲ್ಲಿ ನಟಿಸಿದ್ದಾರೆ.

ಇತ್ತೀಚೆಗೆ ರಿಲೀಸ್ ಯುವರಾಜ್‌ಕುಮಾರ್‌ ನಟನೆಯ ‘ಯುವ’ ಚಿತ್ರದಲ್ಲಿ ಬಚ್ಚನ್ ಅವರ ಪಾತ್ರದ ಮೂಲಕ ಗಮನಸೆಳೆದಿದ್ದಾರೆ.

‘ಯುವ ಚಿತ್ರದಲ್ಲಿ ಅವರು ಬುಕ್ಕಿ ಪಾತ್ರ ಮಾಡಿದ್ದಾರೆ. ಅವರ ಪಾತ್ರದಿಂದಲೇ ಚಿತ್ರದ ನಾಯಕ ಕ್ರೀಡೆಯಿಂದ ದೂರ ಆಗುವ ದೃಶ್ಯವಿದೆ. ಈ ಪಾತ್ರದಲ್ಲಿ ಅವರನ್ನು ನೋಡಿ ತುಂಬಾ ಜನ ನಾನು ಉತ್ತರ ಭಾರತದವನು ಅಂದುಕೊಂಡಿದ್ದು ನಿಜ. ಆದರೆ ಬಚ್ಚನ್ ಅವರು ಪಕ್ಕಾ ಕನ್ನಡಿಗ. ಬಾಲಿವುಡ್ ಗೆ ಹೋಗುವ ಮುನ್ನ ಕನ್ನಡದ ಕಿರುತೆರೆಯಲ್ಲಿ ನಟಿಸುತ್ತಿದ್ದರು. ನಂತರ ಹಿರಿತೆರೆಗೂ ಕಾಲಿಟ್ಟರು. ಈಗ ಯುವ ಚಿತ್ರದಲ್ಲಿ ಅವರು ಮಾಡಿರುವ ಬುಕ್ಕಿ ಪಾತ್ರ ಅವರೇ ಹೇಳುವಂತೆ ಅವರ ವೃತ್ತಿ ಪಯಣಕ್ಕೊಂದು ಹೊಸ ತಿರುವು ಕೊಟ್ಟಿದೆ. ಈ ಸಿನಿಮಾ ನಂತರ ಅವರಿಗೆ ಎರಡ್ಮೂರು ಚಿತ್ರಗಳಲ್ಲಿ ನಟಿಸುವ ಅವಕಾಶ ಬಂದಿದೆ ಎಂಬುದು ಬಚ್ಚನ್‌ ಮಾತು.

ಅಂದಹಾಗೆ ಬಚ್ಚನ್ ಮೈಸೂರಿನ ಎಚ್‌ ಡಿ ಕೋಟೆ ಮೂಲದವರು. ಅವರು ಸಿನಿಮಾಗೆ ಕಾಲಿಟ್ಟಿದ್ದೇ ನಿರ್ಮಾಪಕ ಆಗಬೇಕೆಂದು. ಆದರೆ, ಅವರ ಹೈಟು ಮತ್ತು ದೇಹ ನೋಡಿದ ಕೆಲವರು ಕಿರುತೆರೆಯಲ್ಲಿ ನಟನೆಗೆ ಅಕಾಶಗಳು ಕೊಟ್ಟರು.

‘ಮುಕ್ತ ಮುಕ್ತ’, ‘ರಂಗೋಲಿ’, ‘ರಥಸಪ್ತಮಿ’, ‘ನಮ್ಮ ಲಚ್ಚಿ’, ‘ಜೋಗುಳ’ ಇತರೆ ಧಾರಾವಾಹಿಗಳಲ್ಲಿ ನಟಿಸಿದರು. ಅಲ್ಲೆಲ್ಲ ಬಹುತೇಕ ವಿಲನ್ ಆಗುಯೇ ಅಬ್ಬರಿಸಿದರು.

‘ಜೋಗಯ್ಯ’ ಚಿತ್ರದಲ್ಲಿ ಪೊಲೀಸ್‌ ಪಾತ್ರ ಮಾಡುವ ಮೂಲಕ ಹಿರಿತೆರೆಗೂ ಕಾಲಿಟ್ಟರು. ಮುಂದೆ ‘ಬ್ರಹ್ಮ’, ‘ಪಾಪ್ ಕಾರ್ನ್ ಮಂಕಿ ಟೈಗರ್’, ‘ಕಾಟೇರ’, ‘ಒಂದು ಸರಳ ಪ್ರೇಮ ಕತೆ’ ಮುಂತಾದ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡರು.

ಈಗ ಬಚ್ಚನ್ ಒಂದಷ್ಟು ಸಿಮಾಗಳಲ್ಲಿ ನಟಿಸುತ್ತಿದ್ದಾರೆ. ರವಿಚಂದ್ರನ್‌ ಅವರ ‘ಜಡ್ಜ್‌ಮೆಂಟ್‌’ ಚಿತ್ರದಲ್ಲಿ ಇವರೇ ಮೇನ್ ವಿಲನ್‌. ಹಿಂದಿಯಲ್ಲಿ ವರುಣ್‌ ಧವನ್‌ ಜತೆಗೆ ‘ಭೇಡಿಯಾ 2’, ಮರಾಠಿಯಲ್ಲಿ ‘ಸುದಾಗಡ್‌ 07’ ಚಿತ್ರಗಳಲ್ಲಿ ಖಳನಾಯಕನಾಗಿ ನಟಿಸಿದ ಮೇಲೆ ಈಗಷ್ಟೆ ‘ಬಿಹು ಅಟ್ಯಾಕ್‌’ ಚಿತ್ರಕ್ಕೆ ವಿಲನ್‌ ಆಗಿದ್ದಾರೆ.

ಅದೇನೆ ಇರಲಿ ಬಚ್ಚನ್ ಅವರಿಗೆ ಅವರ ಹೈಟು ಮತ್ತು ವಾಯ್ಸ್ ವರವಾಗಿದೆ. ಅವರು ಮಾತನಾಡುವ ಶೈಲಿ, ಬಾಡಿ ಲಾಗ್ವೇಜ್‌ ಹಾಗೂ ಅವರ ಔಟ್‌ ಲುಕ್‌ ಕನ್ನಡ ಮತ್ತು ಹಿಂದಿ ಎರಡೂ ಭಾಷೆಗಳಲ್ಲಿ ಸಲೀಸಾಗಿ ಅವಕಾಶಗಳು ಸಿಗುತ್ತಿವೆ.
ತೆರೆಮೇಲೆ ವಿಲನ್ ಆಗಿ ನೋಡುಗರಿಗೆ ಕೋಪ ತರಿಸಿದರೂ ತೆರೆ ಹೀಮದೆ ಮೃದು ಸ್ವಭಾವದ ವ್ಯಕ್ತಿತ್ವ ಇರುವ ಬಚ್ಚನ್, ತಾನು ಖಳನಟನಾಗಿ ಗಟ್ಟಿನೆಲೆ ಕಾಣಬೇಕು ಎಂದಷ್ಟೇ ಹೇಳುತ್ತಾರೆ. ಅವರ ಕನಸುಗಳು ಸಾಕಾರವಾಗಲಿ ಅನ್ನೋದು ‘ಸಿನಿಲಹರಿ’ ಆಶಯ.

Related Posts

error: Content is protected !!