ಅವಧಿ ಮೀರಿದ ಪಾರ್ಟಿ! ವಿಚಾರಣೆಗೆ ಪೊಲೀಸ್ ಮೆಟ್ಟಿಲೇರಿದ ಕಾಟೇರ: ಇದು ದರ್ಶನ್ ಮೇಲಿನ ಟಾರ್ಗೆಟ್ ಅಂದ್ರು ರಾಕ್ ಲೈನ್

ಒಂದು ಕಡೆ ಕಾಟೇರ ರಾಜ್ಯ ಮಾತ್ರವಲ್ಲ ವಿದೇಶದಲ್ಲೂ ಭರ್ಜರಿ ಯಶಸ್ಸು ಕಾಣ್ತಾ ಇದ್ದರೆ, ಇನ್ನೊಂದು ಕಡೆ ಆ ಕಾಟೇರನಿಗೆ ಸಂಕಷ್ಟ ಎದುರಾಗಿದೆ. ಇಷ್ಟಕ್ಕೂ ಆಗಿದ್ದೇನು? ಇಲ್ಲಿದೆ ಡೀಟೈಲ್ಸ್.


ಹೌದು, ಕೆಲ ದಿನಗಳ ಹಿಂದೆ ಕಾಟೇರ ಚಿತ್ರ ಭರ್ಜರಿ ಯಶಸ್ಸು ಕಂಡ ಹಿನ್ನಲೆಯಲ್ಲಿ, ಜೆಟ್ ಲ್ಯಾಗ್ ಪಬ್ ನಲ್ಲಿ ಚಿತ್ರ ತಂಡ ಪಾರ್ಟಿ ನಡೆಸಿತ್ತು. ಆದರೆ, ಅಂದು ಲೇಟ್ ನೈಟ್ ಪಾರ್ಟಿ ಮಾಡಿದ ಸಂಬಂಧ ದೂರು ಪ್ರಕರಣವಾಗಿತ್ತು. ಹಾಗಾಗಿ ಚಿತ್ರ ತಂಡಕ್ಕೆ ಠಾಣೆಗೆ ಬರುವಂತೆ ಪೋಲೀಸ್ ನೋಟಿಸ್ ಕೂಡ ನೀಡಿತ್ತು.

ಆದರೆ, ದರ್ಶನ್ ಕಾಟೇರ ಸಕ್ಸಸ್ ಹಿನ್ನೆಲೆಯಲ್ಲಿ ದುಬೈನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮಕ್ಕೆ ಹೋಗಿದ್ದರು. ಹಾಗಾಗಿ ಠಾಣೆಯ ವಿಚಾರಣೆಗೆ ದರ್ಶನ್ ಹಾಜರಾಗಿರಲಿಲ್ಲ.

ದುಬೈ ನಿಂದ ಮರಳಿದ ದರ್ಶನ್ ಇಂದು ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆಗೆ ನಟ ದರ್ಶನ್ ಸೇರಿದಂತೆ ಕಾಟೇರ ಚಿತ್ರತಂಡ ವಿಚಾರಣೆಗೆ ಹಾಜರಾಗಿದೆ.

ನೈಟ್ ಲೇಟ್ ಪಾರ್ಟಿ ನಡೆದಿದ್ದರಿಂದ ಅಲ್ಲಿ ಮಧ್ಯರಾತ್ರಿ ಕೂಡ ಮದ್ಯಪಾನ ಸರಬರಾಜು ಮಾಡಲಾಗಿತ್ತು. ಈ ವೇಳೆ ಕನ್ನಡದ ಹಲವು ಸೆಲೆಬ್ರಿಟಿಗಳು ಭಾಗಿಯಾಗಿದ್ದರು. ಅಲ್ಲಿ ಸೆಲೆಬ್ರಿಟಿಗಳು ಅವಧಿ ಮೀರಿ ಪಾರ್ಟಿ ನಡೆಸಿದ್ದರು. ಹೀಗಾಗಿ ಪೊಲೀಸರುವಿದನ್ನ ಪ್ರಶ್ನಿಸಿ ಪ್ರಕರಣ ದಾಖಲಿಸಿದ್ದರು.

ಸದ್ಯ ಸೆಲಬ್ರಿಟಿಗಳು ನೈಟ್ ಲೇಟ್ ಪಾರ್ಟಿ ಮಾಡಿದ್ದರ ಹಿನ್ನೆಲೆಯಲ್ಲಿ ಪೋಲೀಸರು ವಿಚಾರಣೆಗೆ ಬರುವಂತೆ ನೋಟೀಸ್ ನೀಡಿದ್ದರು.

ಈ ಹಿನ್ನೆಲೆಯಲ್ಲಿ ನಟ ದರ್ಶನ್ ಜೊತೆ ನಟರಾದ ಡಾಲಿ ಧನಂಜಯ್, ನೀನಾಸಂ ಸತೀಶ್, ಅಭಿಷೇಕ್ ಅಂಬರೀಶ್, ನಿರ್ಮಾಪಕ ರಾಕ್ ಲೈನ್ ವೆಂಟಕಟೇಶ್, ಸಂಗೀತ ನಿರ್ದೇಶಕ ಹರಿಕೃಷ್ಣ, ನಿರ್ದೇಶಕ ತರುಣ್ ಸುಧೀರ್, ನಟ ಚಿಕ್ಕಣ್ಣ ಸೇರಿದಂತೆ ಇತರರು ಠಾಣೆಗೆ ಹಾಜರಾಗಿದ್ದಾರೆ.

ಈ ವೇಳೆ ಸುಬ್ರಹ್ಮಣ್ಯ ನಗರ ಪೋಲೀಸರು ಸೆಲೆಬ್ರಿಟಿಗಳಿಗೆ ಒಂದಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ ಎನ್ನಲಾಗಿದೆ.

ನಿಮ್ಮ ಹೆಸರೇನು ನಿಮ್ಮ ತಂದೆ ಹೆಸರೇನು,

ಜೆಟ್ ಲ್ಯಾಗ್ ಪಬ್ ಗೆ ನಿಮ್ಮನ್ನು ಆಹ್ವಾನಿಸಿದ್ದು ಯಾರು,

ಎಷ್ಟೊತ್ತಿಗೆ ಪಬ್ ಗೆ ಬಂದ್ರಿ.

ಅವಧಿ ಮೀರಿದ್ದರೂ ಅಲ್ಲೇ ಪಾರ್ಟಿ ಮಾಡಲು ಅನುಮತಿ ಕೊಟ್ಟವರು ಯಾರು

ಹೀಗೆ ಸುಮಾರು ಹದಿನೈದು ಪ್ರಶ್ನೆಗಳನ್ನು ಪೊಲೀಸರು ವಿಚಾರಣೆ ವೇಳೆ ಕೇಳಿದ್ದಾರೆ ಎನ್ನಲಾಗಿದೆ.

ಅದೇನೆ ಇರಲಿ ತಡರಾತ್ರಿವರೆಗೂ ಪಾರ್ಟಿ ಮಾಡಿದ್ದರ ಹಿನ್ನೆಲೆಯಲ್ಲಿ ಕಾಟೇರ ಚಿತ್ರತಂಡ ಈಗ ಸಂಕಷ್ಟ ಎದುರಿಸುವಂತಾಗಿದೆ.

ವಿಚಾರಣೆ ಬಳಿಕ ಹೊರಬಂದ ಸೆಲಿಬ್ರಿಟಿಗಳ ಪರವಾಗಿ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಹೇಳಿದ್ದಿಷ್ಟು.

ಕಾಟೇರ ಸಕ್ಸಸ್ ಆಗಿದ್ದರಿಂದ ನಾನೇ ಪಾರ್ಟಿ ಅರೇಂಜ್ ಮಾಡಿದ್ದೆ. ಎಲ್ಲರೂ ಬರೋದು ತಡವಾಗಿತ್ತು. ಹಾಗಾಗಿ ಪಬ್ ಮಾಲೀಕರಿಗೆ ನಾನು ಊಟ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದ್ದೆ . ಹಾಗಾಗಿ ತಡವಾಗಿತ್ತು.

ಇದು ದರ್ಶನ್ ವಿರುದ್ಧ ಮಾಡಿದ ಪಿತೂರಿ. ಇದರ ಹಿಂದೆ ಯಾರಿದ್ದಾರೆ ಎಂಬುದು ನನಗೂ ಗೊತ್ತು ರಾಜ್ಯದ ಜನರಿಗೂ ಗೊತ್ತು ಎಂಬುದು ಅವರ ಮಾತು.

ಒಟ್ಟಾರೆ ಇಂದು ಡಾ.ರಾಜಕುಮಾರ್ ರಸ್ತೆ ಟ್ರಾಫಿಕ್ ಜಾಮ್ ಆಗಿದ್ದಂತೂ ಸುಳ್ಳಲ್ಲ.

Related Posts

error: Content is protected !!