ಶಿವರಾಜಕುಮಾರ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ‘ಘೋಸ್ಟ್’ ಅಕ್ಟೋಬರ್ 19ರಂದು ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ. ರಾಜ್ಯಾದ್ಯಂತ ಈ ಸಿನಿಮಾ ಸುಮಾರು ಕರ್ನಾಟಕದಲ್ಲಿ 400ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ವಿಶೇಷವೆಂದರೆ, ದಿನವೊಂದಕ್ಕೆ 1500ಕ್ಕೂ ಹೆಚ್ಚು ಪ್ರದರ್ಶನಗಳು ಕಾಣಲಿವೆ.
![](https://cinilahari.in/wp-content/uploads/2023/10/Ghost-12-1024x640.jpg)
ಈ ಸಿನಿಮಾ ಮೇಲೆ ಶಿವರಾಜ್ ಕುಮಾರ್ ಸಾಕಷ್ಟು ಪ್ರೀತಿ ಇಟ್ಟುಕೊಂಡಿದ್ದಾರೆ. ಅಷ್ಟೇ ಅಲ್ಲ, ಅವರು ಏಕತಾನತೆ ಮುರಿಯಲು ಈ ಚಿತ್ರ ಮಾಡಿದ್ದಾರಂತೆ. ‘ಈ ಚಿತ್ರವನ್ನು ಅವರು ಒಪ್ಪಲು ಕಾರಣ ಸಿನಿಮಾದ ಹೊಸತನವಂತೆ. ಒಂದೇ ತರಹದ ಪಾತ್ರಗಳನ್ನು ಬಿಟ್ಟು ಬರುವ ಉದ್ದೇಶದಿಂದ ಈ ಚಿತ್ರವನ್ನು ಒಪ್ಪಿಕೊಂಡಿದ್ದಾಗಿ ಶಿವರಾಜಕುಮಾರ್ ಪತ್ರಕರ್ತರ ಮುಂದೆ ಹೇಳಿಕೊಂಡಿದ್ದಾರೆ. ಹಾಗಾಗಿಯೇ ಅವರು, ಈ ಸಿನಿಮಾದ ಕಥೆ ಕೇಳಿದ ಬಳಿಕ ಚಿತ್ರದಲ್ಲಿ ನಟಿಸಲು ಒಪ್ಪಿದ್ದಾರೆ.
![](https://cinilahari.in/wp-content/uploads/2023/10/IMG_20231014_094532-1024x654.jpg)
‘ಘೋಸ್ಟ್’ ಸಿನಿಮಾದ ಪಾತ್ರವೇ ವಿಶೇಷವಾಗಿದೆ. ಇಲ್ಲಿ ಮೂರು ಶೇಡ್ಗಳಲ್ಲಿ ಕಾಣಿಸಿಕೊಂಡಿದ್ದು, ಕೇವಲ 48 ಗಂಟೆಗಳಲ್ಲಿ ನಡೆಯುವ ಕಥೆ ಇದಾಗಿದೆ. ಖಂಡಿತ ಪ್ರೇಕ್ಷಕರಿಗೂ ಚಿತ್ರ ಇಷ್ಟವಾಗಲಿದೆ ಎಂಬುದು ಶಿವರಾಜಕುಮಾರ್ ಮಾತು.
ನಿರ್ದೇಶಕ ಶ್ರೀನಿ ಅವರು ಮೈಸೂರಿನ ಶಕ್ತಿಧಾಮದಲ್ಲಿ ಶಿವಣ್ಣ ಅವರಿಗೆ ಈ ಕಥೆ ಹೇಳಿದ್ದರಂತೆ. ಈ ಕಥೆ ಮಾಡಿಕೊಂಡಾಗ, ಶಿವಣ್ಣ ಅವರೇ ಈ ಸಿನಿಮಾದಲ್ಲಿ ನಟಿಸಿದರೆ ಚೆನ್ನಾಗಿರುತ್ತೆ ಅಂದುಕೊಂಡಿದ್ದೆವು. ಶಿವಣ್ಣ ಕೂಡ ಕಥೆ ಕೇಳಿ ನಟಿಸಲು ಒಪ್ಪಿದರು. ಸಿನಿಮಾದ ವಿಶೇಷ ಅಂದರೆ ಶೇ. 70ರಷ್ಟು ಕಥೆ ಜೈಲಲ್ಲೇ ನಡೆಯುತ್ತದೆ. ನಿರ್ಮಾಪಕರ ಸಹಕಾರದಿಂದ ಸಿನಿಮಾ ಅಂದುಕೊಂಡಿದ್ದಕ್ಕಿಂತಲೂ ಚೆನ್ನಾಗಿ ಮೂಡಿಬಂದಿದೆ ಈ ವಾರ ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ ಅನ್ನೋದು ಮತ್ತೊಂದು ವಿಶೇಷ. ಇದರ ಜೊತೆಯಲ್ಲಿ ಅಮೇರಿಕಾ, ಕೆನಡ ಸೇರಿದಂತೆ ಇತರೆ ದೇಶಗಳಲ್ಲೂ ಏಕಕಾಲಕ್ಕೆ ಬಿಡುಗಡೆ ಕಾಣಲಿದೆ ಎನ್ನುತ್ತಾರೆ ಶ್ರೀನಿ.
![](https://cinilahari.in/wp-content/uploads/2023/10/IMG_20231014_094521.jpg)
ನಿರ್ಮಾಪಕ ಸಂದೇಶ್ ಅವರು ಸಿನಿಮಾ ಮೇಲೆ ತುಸು ಹೆಚ್ಚೇ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ‘ಶಿವಣ್ಣ ಅವರು ಅದಾಗಲೇ ಏಳೆಂಟು ಚಿತ್ರಗಳಿಗೆ ಸಹಿ ಹಾಕಿದ್ದರು. ಆದರೆ, ಕಥೆ ಕೇಳಿ ನಮಗೆ ಮೊದಲ ಆದ್ಯತೆ ಕೊಟ್ಟಿದ್ದಾರೆ. ಈ ಹಿಂದೆ ನಮ್ಮ ಬ್ಯಾನರ್ ನಲ್ಕಿ ಶಿವಣ್ಣ ಎರಡು ಚಿತ್ರಗಳಲ್ಲಿ ನಟಿಸಿದ್ದರು. ಎರಡೂ ಚಿತ್ರಗಳು ಕೂಡ ಗೆಲುವು ಕಂಡಿದ್ದವು. ಈ ಚಿತ್ರದ ಮೂಲಕ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆ ಇದೆ ಎಂದರು.
![](https://cinilahari.in/wp-content/uploads/2023/10/IMG_20231014_100700-1-1024x894.jpg)
ಶಿವರಾಜಕುಮಾರ್ ಜೊತೆಯಲ್ಲಿ ಅನುಪಮ್ ಖೇರ್, ಜಯರಾಂ, ಸತ್ಯಪ್ರಕಾಶ್, ಪ್ರಶಾಂತ್ ನಾರಾಯಣನ್, ದತ್ತಣ್ಣ, ಅಭಿಜಿತ್, ವಿಜಯಲಕ್ಷ್ಮೀ ಸಿಂಗ್ ಸೇರಿದಂತೆ ಹಲವರು ನಟಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತವಿದೆ. ಮಹೇಂದ್ರ ಸಿಂಹ ಕ್ಯಾಮೆರಾ ಹಿಡಿದಿದ್ದಾರೆ.