ಕಾವೇರಿಗಾಗಿ ಕನ್ನಡ ಕಲಾವಿದರ ಹೋರಾಟ! ರೈತರ ಜೊತೆ ನಾವಿದ್ದೇವೆ ಅಂದ್ರು ಸ್ಟಾರ್ಸ್

ಕಾವೇರಿ ನಮ್ಮವಳು. ಕಾವೇರಿ ನಮ್ಮ ಹಕ್ಕು. ಎಂದಿಗೂ ಕಾವೇರಿಯನ್ನು ಬಿಡೆವು…. ಇದು ಕಾವೇರಿ ಪರ ಕೂಗು. ರೈತರ ಪರ ದನಿ. ಹೌದು ಕಾವೇರಿಗಾಗಿ ಹೋರಾಟ ನಡೆಸುತ್ತಿರುವ ನಾಡಿನ ಜನರ ಜೊತೆ ಕನ್ನಡ ಚಿತ್ರರಂಗದ ಕಲಾವಿದರೂ ಕೂಡ ಭಾಗವಹಿಸಿ, ನಿಮ್ಮೊಂದಿಗೆ ಇದ್ದೇವೆ ಎಂದು ಬೆಂಬಲ ನೀಡಿದ್ದಾರೆ.

ಕರ್ನಾಟಕ ಬಂದ್ ಬೆಂಬಲಿಸಿ ಚಿತ್ರರಂಗ ಹಮ್ಮಿಕೊಂಡಿದ್ದ ಹೋರಾಟಕ್ಕೆ ಮೊದಲು ಬಂದು ಭಾಗವಾಗಿದ್ದು ರೋರಿಂಗ್ ಸ್ಟಾರ್ ಶ್ರೀಮುರಳಿ. ಆ ನಂತರ ಒಬ್ಬೊಬ್ಬರಾಗಿ ತಾರೆಗಳು ಪ್ರತಿಭನಾ ಸ್ಥಳಕ್ಕೆ ಆಗಮಿಸುತ್ತಿದ್ದಂತೆಯೇ ಜನ ಜಾತ್ರೆ ಹೆಜ್ಜೆಯಾಯಿತು.

ಬಿಗಿ ಪೊಲೀಸ್ ಬಂದೋ ಬಸ್ತ್ ನಡುವೆ ಸಿನಿಮಾ ತಾರೆಗಳು ನಮ್ಮ ಹೋರಾಟ ಕಾವೇರಿಗಾಗಿ, ನಮ್ಮ ಕೂಗು ಕಾವೇರಿಗಾಗಿ ಎನ್ನುವ ಮೂಲಕ ಹೋರಾಟಕ್ಕೆ ಉತ್ಸಾಹ ತುಂಬಿದರು. ನಟರಾದ ಶ್ರೀಮುರಳಿ, ಶಿವರಾಜ್ ಕುಮಾರ್ ಅವರು ವೇದಿಕೆ ಮೇಲೆ ಮಾತಿಗೆ ನಿಲ್ಲುತ್ತಿದ್ದಂತೆಯೇ ಕಾವೇರಿ ನೀರು ಕನ್ನಡಿಗರ ಹಕ್ಕು ಎನ್ನುವ ಘೋಷಣೆಗಳು ಸದ್ದು ಮಾಡಿದವು.

ಕಾವೇರಿಗಾಗಿ ಬೀದಿಗಿಳಿದ ಕಲಾವಿದರು!

ಕಾವೇರಿ ನೀರಿಗಾಗಿ ಶುಕ್ರವಾರ ಕನ್ನಡಪರ ಸಂಘಟನೆಗಳು ಕರೆ ಕೊಟ್ಟಿದ್ದ ಕರ್ನಾಟಕ ಬಂದ್ ಗೆ ಕನ್ನಡ ಚಿತ್ರರಂಗ ದೊಡ್ಡ ಮಟ್ಟದಲ್ಲಿ ಸಾಥ್ ನೀಡಿದೆ.

ಸ್ಯಾಂಡಲ್ ವುಡ್ ತಾರೆಗಳು ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡಿದ್ದು, ಕನ್ನಡಿಗರ ಕಾವೇರಿಗಾಗಿ ಕನ್ನಡಿಗರ ಹೋರಾಟ ಮತ್ತಷ್ಟು “ಕಾವೇರಿ”ದೆ. ಕನ್ನಡ ಸಿನಿಮಾ ರಂಗದ ನಟರಾದ ಶಿವರಾಜ್ ಕುಮಾರ್ ಪ್ರತಿಭಟನಾ ನೇತೃತ್ವ ವಹಿಸಿದ್ದರು.

ನಟರಾದ ಶ್ರೀನಾಥ್, ಶ್ರೀಮುರಳಿ, ವಿಜಯ ರಾಘವೇಂದ್ರ, ಉಪೇಂದ್ರ ದರ್ಶನ್, ಧ್ರುವ ಸರ್ಜಾ, ದುನಿಯಾ ವಿಜಯ್, ವಿನೋದ್ ಪ್ರಭಾಕರ್, ವಸಿಷ್ಠ ಸಿಂಹ, ರವಿಶಂಕರ್ , ಉಮಾಶ್ರೀ, ಭಾವನಾ, ರಘು ಮುಖರ್ಜಿ, ಅನು ಪ್ರಭಾಕರ್, ಶೃತಿ, ಶರಣ್, ಹಂಸಲೇಖ, ಗಿರಿಜಾ ಲೋಕೇಶ್, ಪ್ರಮೀಳಾ ಜೋಷಾಯ್, ಸುಂದರ್ ರಾಜ್, ಚೇಂಬರ್ ಅಧ್ಯಕ್ಷ ರಾದ ಎನ್.ಎಂ. ಸುರೇಶ್, ಪದಾಧಿಕಾರಿಗಳಿದ್ದರು.


ಮಾಜಿ ಅಧ್ಯಕ್ಷರಾದ ಚಿನ್ನೇಗೌಡ, ಭಾ.ಮ.ಹರೀಶ್,
ಶಿವಕುಮಾರ್, ಹೀಗೆ ನೂರಾರು ಸಂಖ್ಯೆಯಲ್ಲಿ ಸಿನಿಮಾ ತಾರೆಗಳು ಪಾಲ್ಗೊಳ್ಳುವ ಮೂಲಕ ಕಾವೇರಿ ಹೋರಾಟಕ್ಕೆ ಬೆಂಬಲ ಸೂಚಿಸಿದರು.

Related Posts

error: Content is protected !!