ಗುರುರಾಯರ ಸನ್ನಿಧಿಯಲ್ಲಿ ಚಿನ್ನದ‌ ಮಲ್ಲಿಗೆ ಹೂವು!

ಇತ್ತೀಚಿಗೆ ಟೈಟಲ್ ಮೂಲಕವೇ ಬಾರಿ ಸುದ್ದಿ ಮಾಡಿದ ಚಿತ್ರ ಚಿನ್ನದ ಮಲ್ಲಿಗೆ ಹೂವೇ ಈ ಸಿನಿಮಾ ತಂಡ ಮಂತ್ರಾಲಯದ ಗುರು ರಾಘವೇಂದ್ರ ಸ್ವಾಮಿಗಳ ಮೂಲ ಬೃಂದಾವನದ ಬಳಿಯಲ್ಲಿ ಸ್ಕ್ರಿಪ್ಟ್ ಪೂಜೆ ಸಲ್ಲಿಸಿ ರಾಯರ ಅನುಗ್ರಹಕ್ಕೆ ಪಾತ್ರರಾದರು.

ಈ ಪೂಜೆಯಲ್ಲಿ ರಾಜ್ ಕುಮಾರ್ ಅವರ ಪುತ್ರಿ ಲಕ್ಷ್ಮೀ ಗೋವಿಂದ ರಾಜು, ಹಾಗೂ ಎಸ್. ಎ.ಗೋವಿಂದ ರಾಜು ಸಿನಿಮಾದ ನಾಯಕ ನಟರಾದ ಷಣ್ಮುಖ ಗೋವಿಂದ, ನಿರ್ಮಾಪಕರಾದ ಶ್ವೇತಾ ಶೆಟ್ಟಿ, ನಿರ್ದೇಶಕರಾದ ನವಿಲುಗರಿ ನವೀನ್ ಪಿ ಬಿ ಕಲಾವಿದರಾದ ಅನಿಲ್, ಲಲಿತ್ ಇನ್ನೂ ಅನೇಕರು ಪೂಜೆಯಲ್ಲಿ ಭಾಗವಾಹಿಸಿ ಗುರುಗಳಿಂದ ಆಶೀರ್ವಾದ ಪಡೆದರು.

ಈ ಚಿತ್ರವನ್ನು ತೀರ್ಥಹಳ್ಳಿ, ಆಗುಂಬೆ, ಮಲೆನಾಡು, ಶಿವಮೊಗ್ಗ, ಬೆಂಗಳೂರು ಪ್ರದೇಶಗಳಲ್ಲಿ ಶೂಟಿಂಗ್ ಮಾಡಲು ಸಿದ್ದತೆ ಮಾಡಿಕೊಂಡಿದ್ದಾರೆ. ಛಾಯಾಗ್ರಹಣವನ್ನು ವಿ ಆರ್ ಚಂದ್ರು ಮತ್ತು ಪ್ರಮೋದ್ ಆರ್ ಇಬ್ಬರು ಮಾಡುತ್ತಿದ್ದಾರೆ.

ಸಂಕಲನವನ್ನು ಮಧು ತುಂಬಕೆರೆ ಮಾಡಿದರೆ ಸಂಗೀತವನ್ನು ಪ್ರಣವ್ ಸತೀಶ್ ನೀಡುತ್ತಿದ್ದರೆ ಸೆಪ್ಟಂಬರ್ ನಿಂದ ಶೂಟಿಂಗ್ ಶುರುವಾಗಲಿದೆ ಎಂದು ಚಿತ್ರ ತಂಡ ತಿಳಿಸಿದರು

Related Posts

error: Content is protected !!