ಇತ್ತೀಚಿಗೆ ನಡೆಯುತ್ತಿರುವ ವಿದ್ಯಮಾನಗಳ ಕುರಿತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ನಿರ್ಮಾಪಕರ ಸಂಘ ಮತ್ತು ಕಲಾವಿದರ ಸಂಘಗಳಿಗೆ ಕಿಚ್ಚ ಸುದೀಪ್ ಅವರು ಗೌರವ ಪೂರ್ವಕವಾಗಿ ತಾವು ನ್ಯಾಯಾಲಯಕ್ಕೆ ಹೋಗುತ್ತಿರುವುದರ ಬಗ್ಗೆ ಒಂದು ಆಪ್ತ ವಿವರಣೆ ಸಲ್ಲಿಸಿದ್ದಾರೆ. ಅದರ ಸಂಕ್ಷಿಪ್ತ ವಿವರ ಇಲ್ಲಿದೆ.
![](https://cinilahari.in/wp-content/uploads/2023/07/IMG_20230710_151349-1-963x1024.jpg)
ಸುದೀಪ್ ಇತ್ತೀಚೆಗೆ ಚಿತ್ರರಂಗದಲ್ಲಿ ನಡೆದ ಘಟನೆಗಳಿಗೆ ಸಂಬಂಧಿಸಿದಂತೆ ಸಾಕಷ್ಟು ಬೇಸರ ವ್ಯಕ್ತಪಡಿಸಿದ್ದರು.
![](https://cinilahari.in/wp-content/uploads/2023/07/IMG_20230710_151419-965x1024.jpg)
ನಿರ್ಮಾಪಕ ಎನ್.ಕುಮಾರ್ ಅವರು ಸುದೀಪ್ ಅವರಿಗೆ ಮುಂಗಡ ಹಣ ಕೊಟ್ಟರೂ ಅವರು ಡೇಟ್ ಕೊಟ್ಟಿಲ್ಲ ಅಂತ ಸಾರ್ವಜನಿಕವಾಗಿ ಆರೋಪಿಸಿದ್ದರು.
![](https://cinilahari.in/wp-content/uploads/2023/07/IMG_20230710_152702-1024x1012.jpg)
ಈ ವಿಷಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ಆದರೆ, ಸುದೀಪ್ ಮಾತ್ರ ಕುಮಾರ್ ಅವರು ಮಾಡಿದ ಆರೋಪಕ್ಕೆ ಉತ್ತರ ನೀಡಿರಲಿಲ್ಲ. ಯಾವುದೇ ಪ್ರತಿಕ್ರಿಯೆ ಕೊಟ್ಟಿರಲಿಲ್ಲ.
![](https://cinilahari.in/wp-content/uploads/2023/07/IMG_20230710_152823-1024x834.jpg)
ಎಲ್ಲೆಡೆಯಿಂದಲೂ ಒಂದಷ್ಟು ಜೋರು ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಸುದೀಪ್ ಅವರ ಆಪ್ತರಾದ ಜಾಕ್ ಮಂಜು ಮತ್ತು ಚಕ್ರವರ್ತಿ ಚಂದ್ರಚೂಡ್ ಅವರು ಪ್ರೆಸ್ ಮೀಟ್ ಮಾಡಿ, ಕುಮಾರ್ ಮಾಡಿದ ಆರೋಪ ಸುಳ್ಳು, ಸುದೀಪ್ ಏನೆಲ್ಲಾ ಒಳಿತು ಮಾಡಿದ್ದಾರೆ ಎಂಬ ಕುರಿತು ಮಾಹಿತಿ ನೀಡಿದ್ದರು.
![](https://cinilahari.in/wp-content/uploads/2023/07/IMG_20230710_152916-1024x643.jpg)
ಇದರ ಬೆನ್ನಲ್ಲೇ ಈಗ ಸುದೀಪ್ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ನಿರ್ಮಾಪಕರ ಸಂಘ, ಕಲಾವಿದರ ಸಂಘಗಳಿಗೆ ಸುಧೀರ್ಘ ಪತ್ರ ಬರೆದು, ನಾನು ಕೋರ್ಟ್ ಮೊರೆ ಹೋಗುತ್ತಿರುವುದಾಗಿ ವಿವರಿಸಿದ್ದಾರೆ.