ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ, ಗೀತ ಸಾಹಿತಿ ಸಿ.ವಿ.ಶಿವಶಂಕರ್ ವಿಧಿವಶ

ಹಿರಿಯ ನಿರ್ದೇಶಕ ಹಾಗು ಗೀತ ಸಾಹಿತಿ ಸಿ.ವಿ. ಶಿವಶಂಮಕರ್ ನಿಧನರಾಗಿದ್ದಾರೆ. ಕನ್ನಡ ಸಿನಿಮಾರಂಗಕ್ಕೆ ತಮ್ಮದೇ ಕೊಡುಗೆ ನೀಡಿದ್ದ ಶಿವಶಂಕರ್ ಅವರು, ಇಂದಿಗೂ ನೆನಪಿಸುವ ಗೀತೆಗಳನ್ನು ರಚಿಸಿದ್ದಾರೆ.

ಬಾಲನಟರಾಗಿ ರಂಗಭೂಮಿ ಪ್ರವೇಶಿಸಿದ ಇವರು, ಸ್ಕೂಲ್ ಮಾಸ್ಟರ್, ರತ್ನಗಿರಿ ರಹಸ್ಯ, ಕೃಷ್ಣ ಗಾರುಡಿ, ಧರ್ಮ ವಿಜಯ, ಭಕ್ತ ವಿಜಯ, ರತ್ನ ಮಂಜರಿ, ವೀರ ಸಂಕಲ್ಪ, ಆಶಾ ಸುಂದರಿ, ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಶಿವಶಂಕರ್ ನಟಿಸುವುದರ ಜೊತೆಗೆ ಸಾಹಿತ್ಯವನ್ನೂ ರಚಿಸಿದ್ದಾರೆ. ‘ಮನೆ ಕಟ್ಟಿ ನೋಡು’ , ಪದವೀಧರ, ನಮ್ಮ ಊರು, , ಮಹಡಿಯ ಮನೆ,ಹೊಯ್ಸಳ, ಮಹಾತಪಸ್ವಿ, ವೀರಮಹಾದೇವ , ಕನ್ನಡ ಕುವರ ಚಿತ್ರ ಗಳನ್ನು ನಿರ್ದೇಶಿಸಿದ್ದಾರೆ ಶಿವಶಂಕರ್.


1991 ರಲ್ಲಿ ಕರ್ನಾಟಕ ರಾಜ್ಯ ಪ್ರಶಸ್ತಿ, 1994 ರಲ್ಲಿ ರಾಜ್ಯೋತ್ಸವ ಪ್ರಶ್ತಿ, ಸಿಂಗನಲ್ಲೂರು ಪುಟ್ಟಸ್ವಾಮಯ್ಯ ರಾಜಕುಮಾರ್ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಇವರಿಗೆ ಸಂದಿವೆ.

ಶಿವಶಂಕರ್ ಅವರು ಬರೆದ ಗೀತೆಗಳಲ್ಲಿ ಅಪಾರ ಮೆಚ್ಚುಗೆ ಪಡೆದ ಗೀತೆಗಳಿವು.

  • ಕನ್ನಡದಾ ರವಿಮೂಡಿ ಬಂದಾ, ಮುನ್ನಡೆಯ ಬೆಳಕನ್ನು ತಂದಾ
  • ನಾಡಚರಿತೆ ನೆನಪಿಸುವ ವೀರ ಗೀತೆಯಾ, ಹಾಡು ನೀನು ಕನ್ನಡಿಗಾ ದೇಶಗೀತೆಯ
  • ಸಿರಿವಂತನಾದರೂ ಕನ್ನಡ ನಾಡಲ್ಲಿ ಮೆರೆವೇ, ಭಿಕ್ಷುಕನಾದರೂ ಕನ್ನಡ ಮನ್ನಲ್ಲೇ ಮಡಿವೇ

Related Posts

error: Content is protected !!