ನಿಸರ್ಗದಲ್ಲಿ ಪರಿಸರ ರಕ್ಷಣೆಯ ಸಂದೇಶ

ನಮ್ಮ ಸುತ್ತಮುತ್ತಲಿನಲಿನ ಪರಿಸರವನ್ನು ನಾವು ಯಾವರೀತಿ ಇಟ್ಟುಕೊಳ್ಳಬೇಕು, ಅದನ್ನು ಹೇಗೆ ಶುದ್ದವಾಗಿರುವಂತೆ ನೋಡಿಕೊಳ್ಳಬೇಕು ಎನ್ನುವ ಸಾಮಾಜಿಕ ಸಂದೇಶ ಒಳಗೊಂಡಿರುವ, ಪರಿಸರ ಸಂರಕ್ಷಣೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವಂಥ ಕಥಾಹಂದರ ಹೊಂದಿರುವ ವಿಶೇಷ ಚಿತ್ರ ‘ನಿಸರ್ಗ’ ಇನ್ನೇನು ಬಿಡುಗಡೆಗೆ ಸಿದ್ದವಾಗಿದೆ.

ಈಗಾಗಲೇ ಈ ಚಿತ್ರದ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳೆಲ್ಲ ಮುಗಿದು ಸೆನ್ಸಾರ್ ನಿಂದ ಯು/ಎ ಸರ್ಟಿಫಿಕೇಟ್ ಕೂಡ ಪಡೆದುಕೊಂಡಿದೆ.

ಭೂಮಿಕಾ ಸಿನಿ ಕ್ರೀಯೇಷನ್ಸ್ ಬ್ಯಾನರ್ ನಲ್ಲಿ ಶಿವಕುಮಾರ್.ಬಿ.ಕೆ, ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಜೊತೆಗೆ ಚಿತ್ರಕ್ಕೆ ನಿರ್ದೇಶನ ಸಹ ಮಾಡಿದ್ದಾರೆ. ಎಸ್,ಬಾಲು ಅವರ ಛಾಯಾಗ್ರಹಣ, ವಿಜಯ್‍ ರೈ ಅವರ ಸಂಗೀತ ನಿರ್ದೇಶನ, ರಮೇಶ್ ಜಂಗಮರಹಟ್ಟಿ ಅವರ ಸಂಕಲನ ಈ ಚಿತ್ರಕ್ಕಿದ್ದು, ಕಥೆ-ಸಂಭಾಷಣೆಯನ್ನು ಮೈಸೂರು ರಮಾನಂದ್ ರಚಿಸಿದ್ದಾರೆ. ಹಿನ್ನೆಲೆ ದ್ವನಿಯನ್ನು ಪ್ರಶು ನೀಡಿದ್ದಾರೆ. ಚಿತ್ರವನ್ನು ಸದ್ಯದಲ್ಲೇ ತೆರೆಗೆ ತರುವ ಸಿದ್ದತೆ ನಡೆಯುತ್ತಿದೆ.

ಇನ್ನು ಚಿತ್ರದ ಪ್ರಮುಖ ತಾರಾಗಣದಲ್ಲಿ ಮೈಸೂರು ರಮಾನಂದ್, ಸ್ಮೈಲ್‍ ಶಿವು, ಶಶಿಧರ್‍ ಕೋಟೆ, ರೇಖಾದಾಸ್, ಶಂಕರ್‌ ಭಟ್, ಮೀಸೆ ಆಂಜನಪ್ಪ, ಕವಿತ, ಶಿಲ್ಪ ನಿತ್ಯ ದೀಕ್ಷಿತ್, ಮೀನಾ ಪೋರ್ಚುಗಲ್, ಮಂಜು, ಪರಿಸರ ಮಂಜು, ನಾರಾಯಣ ಗೌಡ, ಗೋವರ್ದನ್‍ ದೇವಿಲಾಲ್ ಮುಂತಾದವರು ಅಭಿನಯಿಸಿದ್ದಾರೆ.

ಇದೇ ಸಂಸ್ಥೆಯ ವತಿಯಿಂದ ‘ಮಹಾಗುರು’ ಎಂಬ ಮಾತಿಲ್ಲದ ಮತೊಂದು ಪ್ರಾಯೋಗಾತ್ಮಕ ಚಿತ್ರವನ್ನು ನಿರ್ಮಾಣ ಮಾಡಲು ತಯಾರಿ ನಡೆಸುತ್ತಿದೆ. ಈ ಚಿತ್ರದಲ್ಲಿ ಸ್ಮೈಲ್‍ ಶಿವು, ಜನಾರ್ಧನ್, ಮೈಸೂರು ರಮಾನಂದ್, ಕವಿತಾ, ಅನು, ಶಶಿಧರ್‍ ಕೋಟೆ, ಸಂದೀಪ್, ವಿಲ್‍ಸನ್‍ ಜೋಸೆಪ್, ಆಪೆನ್.ಜೆ, ಇನ್ನೂ ಮುಂತಾದ ಕಲಾವಿದರು ಅಭಿನಯಿಸುತ್ತಿದ್ದಾರೆ.

ಈ ಚಿತ್ರವನ್ನು ಕಸ್ತೂರಿ ಜಗನ್ನಾಥ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಅಲ್ಲದೆ ಈ ಚಿತ್ರಕ್ಕೆ ಬೆಂಗಳೂರು, ಮಲೇಶಿಯಾ, ಬ್ಯಾಂಕಾಕ್‍ನಲ್ಲಿ ಚಿತ್ರೀಕರಣ ನಡೆಸಲು ತೀರ್ಮಾನಿಸಲಾಗಿದೆ.

ಈ ಚಿತ್ರದ ಸಹಾಯಕ ನಿದೇಶಕರಾಗಿ ಪೀಟರ್ ಜಾನ್, ಕಾರ್ಯಕಾರಿ ನಿರ್ಮಾಪಕರಾಗಿ ಟಿ.ಸಿ.ಶಾಜೀ ಕೆಲಸ ಮಾಡುತ್ತಿದ್ದು, ಆನಂದ್ ಅವರ ಛಾಯಾಗ್ರಹಣವಿದೆ.

ಕಲಾನಿರ್ದೇಶಕ-ಎಸ್. ಸಿಲ್ವಸ್ಟಾರ್, ಸಂಕಲನ-ರಮೇಶ್ ಜಂಗಮರಹಟ್ಟಿ, ಲೆಜನಿಂಗ್ ಆಪೀಸರ್-ಪ್ಲೇಮಿಂಗ್.ಜೆ, ಪ್ರೋಡಕ್ಷನ್ ಕನ್‍ಟ್ರೋಲರ್ ಆಗಿ ಜೆಸ್ಟೀನ್‍ಜೊಸೆಪ್ ಕೆಲಸ ಮಾಡುತ್ತಿದ್ದಾರೆ.

Related Posts

error: Content is protected !!