ಕೊರಗಜ್ಜ ದೈವ ಬಳಿ ಶಿವಣ್ಣ ಭೇಟಿ: ಕರಿ ಹೈದ ಕರಿ ಅಜ್ಜ ತಂಡ ಖುಷಿ…

ಕನ್ನಡದಲ್ಲಿ “ಕೊರಗಜ್ಜ” ಸಿನಿಮಾ ಆಗುತ್ತಿರುವ ಹಿನ್ನೆಲೆ ಯಲ್ಲೇ ಹಿರಿಯ ನಟ ಶಿವರಾಜ್ ಕುಮಾರ್ ಅವರು ಮಂಗಳೂರು ಸಮೀಪದ ಕುತ್ತಾರುವಿನ ಕೊರಗಜ್ಜ ದೈವ ಸ್ಥಾನಕ್ಕೆ ಭೇಟಿ ನೀಡಿ ಚಕ್ಕುಲಿ-ವೀಳ್ಯ ಸಮರ್ಪಿಸಿರುವುದು “ಕರಿ ಹೈದ ಕರಿ ಅಜ್ಜ” ಚಿತ್ರ ತಂಡಕ್ಕೆ ಇನ್ನಿಲ್ಲದ ಖುಷಿ ನೀಡಿದೆ. ಅಂತಾರಾಷ್ಟ್ರೀಯ ಖ್ಯಾತಿಯ ನಟ ಕಬೀರ್ ಬೇಡಿ ಜೊತೆ ಕನ್ನಡದ ಖ್ಯಾತ ಕಲಾವಿದರಾದ ಭವ್ಯ ಮತ್ತು ಶ್ರುತಿ ಕೂಡಾ ಅಭಿನಯಿಸುತ್ತಿರುವ ಈ ಚಿತ್ರದಲ್ಲಿ ಭರತ್ ಸೂರ್ಯ ಎನ್ನುವ ಹೊಸ ನಟನ ಪರಿಚಯವಾಗುತ್ತಿದೆ.


ತಮ್ಮ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದು , ಪೋಸ್ಟ್ ಪ್ರೊಡಕ್ಷನ್ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿರುವ ಇದೇ ಸಮಯದಲ್ಲಿ ಶಿವರಾಜ್ ಕುಮಾರ್ ರವರಂತಹ ಹಿರಿಯ ನಟರು ಕೊರಗಜ್ಜನ ದೈವಸ್ಥಾನಕ್ಕೆ ಭೇಟಿ ನೀಡಿರುವುದು ನಮ್ಮ ಚಿತ್ರಕ್ಕೆ ಆಶಿರ್ವಾದ ರೀತಿಯಲ್ಲಿ ಪರಿಣಮಿಸಲಿದೆ ಎಂದು ನಿರ್ದೇಶಕ ಸುಧೀರ್ ಅತ್ತಾವರ್ ತಿಳಿಸಿದ್ದಾರೆ.

ಚಿತ್ರೀಕರಣ ಸಂಪೂರ್ಣ ಮುಗಿದಿರುವ ಈ ಸಮಯದಲ್ಲಿ ಕೊರಗಜ್ಜನ ದೈವಸ್ಥಾನದ ದರ್ಶನ ಪಡೆದಿರುವ ನಮ್ಮ ಹಿರಿಯ ಕಲಾವಿದ ಶಿವರಾಜ್ ಕುಮಾರ್ ರವರ ಪ್ರಾರ್ಥನೆಯಿಂದಾಗಿ ಖಂಡಿತಾ ನಮ್ಮ ಚಿತ್ರ ಯಶಸ್ವಿಗೊಳ್ಳಲ್ಲಿದೆ ಎಂದು ನಿರ್ಮಾಪಕ ತ್ರಿವಿಕ್ರಮ ಸಪಲ್ಯ ತಿಳಿಸಿದ್ದಾರೆ.

Related Posts

error: Content is protected !!