ವಿಕ್ರಾಂತ್ ರೋಣ ಬಳಿಕ ಕಿಚ್ಚ ಸುದೀಪ್ ಅವರ ಮುಂದಿನ ಸಿನಿಮಾ ಯಾವುದು? ಸದ್ಯಕ್ಕೆ ಎಲ್ಲರಿಗೂ ಕುತೂಹಲ ಇದೆ. ಮತ್ತೆ ಸುದೀಪ್ ಅವರು ಅನೂಪ್ ಭಂಡಾರಿ ಜೊತೆ ಸಿನಿಮಾ ಮಾಡಲಿದ್ದಾರೆ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಹಾಗಂತೆ ಹೀಗಂತೆ ಎಂಬ ಮಾತುಗಳು ಎಷ್ಟರಮಟ್ಟಿಗೆ ಸರಿಯೋ ತಪ್ಪೋ ಗೊತ್ತಿಲ್ಲ. ಸದ್ಯದ ಮಾಹಿತಿ ಪ್ರಕಾರ, ಸುದೀಪ್ ಅವರು ಈಗ ಕನ್ನಡ ಮತ್ತು ತಮಿಳು ಭಾಷೆಯಲ್ಲಿ ತಯಾರಾಗುವ ಸಿನಿಮಾವೊಂದನ್ನು ಮಾಡಲಿದ್ದಾರೆ ಎಂಬ ಸುದ್ದಿ ಬಂದಿದೆ.
ಹೌದು, ಸುದೀಪ್ ತಮಿಳಿನ ಹೊಸ ನಿರ್ದೇಶಕರೊಬ್ಬರ ಕಥೆ ಕೇಳಿದ್ದು, ಆ ಚಿತ್ರ ಮಾಡಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗಿದೆ.
ಅಂದಹಾಗೆ, ಸುದೀಪ್ ಅವರ ಹೊಸ ಸಿನಿಮಾ ನಿರ್ಮಿಸುತ್ತಿರೋದು ತಮಿಳಿನ ಹೆಸರಾಂತ ನಿರ್ಮಾಪಕ, ವಿತರಕ ಕಲೈಪುಲಿ ಎಸ್.ತಾನು. ತಮಿಳು ಚಿತ್ರರಂಗದಲ್ಲಿ ಇವರು ಅನೇಕ ಹಿಟ್ ಸಿನಿಮಾಗಳನ್ನು ವಿತರಣೆ ಕೂಡ ಮಾಡಿದ್ದಾರೆ. ರಜನಿಕಾಂತ್ ಅವರ ಕಬಾಲಿ, ಕಮಲ್ ಹಾಸನ್ ಅವರ ಆಲವಂತಾನ್, ವಿಜಯ್ ಅವರ ತುಪಾಕಿ, ಸೂರ್ಯ ಅವರ ಕಾಕ ಕಾಕ ಹಾಗು ಧನುಷ್ ಅವರ ಅಸುರನ್ ಸಿನಿಮಾಗಳನ್ನು ನಿರ್ಮಿಸಿದ್ದಾರೆ.
ಸದ್ಯದ ಮಾಹಿತಿ ಪ್ರಕಾರ ಸುದೀಪ್ ಅವರಿಗೆ ಇವರೊಂದು ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಅದು ಕನ್ನಡ ಹಾಗು ತಮಿಳು ಭಾಷೆಯಲ್ಲಿ ತಯಾರಾಗಲಿದೆ ಎನ್ನಲಾಗಿದೆ. ಇತ್ತೀಚೆಗಷ್ಟೇ ಅ ಸಿನಿಮಾ ಕುರಿತು ಮಾತುಕತೆ ಮುಗಿದಿದ್ದು, ಹೊಸ ನಿರ್ದೇಶಕರ ಕಥೆಯಲ್ಲಿ ಸುದೀಪ್ ಹೀರೋ ಅವರು ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.
ಅದೇನೆ ಇರಲಿ, ಸುದೀಪ್ ಅಭಿಮಾನಿಗಳಿಗೆ ತಮ್ಮ ಕಿಚ್ಚ ಬಾಸ್ ಮುಂದೆ ಯಾವ ಸಿನಿಮಾ ಮಾಡ್ತಾರೆ ಎಂಬ ಕುತೂಹಲಕ್ಕೆ ಈಗ ಈ ಸುದ್ದಿ ಉತ್ತರ ನೀಡಿದೆ. ಇದು ಯಾವಾಗ ಶುರುವಾಗುತ್ತೆ, ಯಾರೆಲ್ಲ ಇರುತ್ತಾರೆ ಎಂಬುದಕ್ಕೆ ಕಾದು ನೋಡಬೇಕಿದೆ.