ಸುದೀಪ್ ಪುಣ್ಯಕೋಟಿ ರಾಯಭಾರಿ…

ಕಿಚ್ಚ ಸುದೀಪ್ ಕನ್ಮಡ ಚಿತ್ರರಂಗ ಮಾತ್ರವಲ್ಲ, ಭಾರತೀಯ ಚಿತ್ರರಂಗ ಮೆಚ್ಚುವಂತಹ ನಟ. ಅವರು ಸೆಪ್ಟೆಂಬರ್ 2 ತಮ್ಮ‌ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ಅಭಿಮಾನಿಗಳು ಗುರುವಾರ ರಾತ್ರಿಯೇ ಪ್ರೀತಿಯ ನಾಯಕನ ಮನೆ ಎದುರು ಸಾಲುಗಟ್ಟಿ ನಿಂತು ಶುಭ ಕೋರಿದ್ದಾರೆ.

ಪ್ರತಿ ಹುಟ್ಟುಹಬ್ಬದಲ್ಲೂ ಅಭಿಮಾನಿಗಳು ದೊಡ್ಡ ಹಬ್ಬದಂತೆ ಸಡಗರದಿಂದ ಆಚರಿಸುತ್ತಾರೆ. ಈ ಬಾರಿಯೂ ಅದೇ ರೀತಿ ಹಬ್ಬ ಅಚರಿಸಿದ್ದಾರೆ.
ಈ ನಡುವೆ ಕಿಚ್ಚ ಸುದೀಪ ಅವರು, ಸರ್ಕಾರದ ಪಶುಸಂಗೋಪನೆ ಇಲಾಖೆಯ ರಾಯಭಾರಿಯಾಗಿದ್ದಾರೆ. ಪಶು ಸಂಗೋಪನೆ ಇಲಾಖೆ ಜಾನುವರುಗಳ ರಕ್ಷಣೆಗೆ ಕೈಗೊಂಡಿರುವ ಮಹತ್ವಾಕಾಂಕ್ಷೆ ಯೋಜನೆಯದ ಪುಣ್ಯಕೋಟಿ ದತ್ತು ಯೋಜನೆಯ ರಾಯಭಾರಿ ಆಗಿದ್ದಾರೆ.

ಅವರ ಹುಟ್ಟು ಹಬ್ಬದ ಸವಿನೆನಪಿಗೆ ಪಶು ಸಂಗೋಪನೆ ಇಲಾಖೆ ಸಚಿವರಾದ ಪ್ರಭು ಚವ್ಹಾಣ್ ಅವರು, ಸುದೀಪ್ ರಾಯಭಾರಿ ಆಗುವ ಮೂಲಕ ಗೋ ಸಂಪತ್ತಿನ ರಕ್ಷಣೆಗೆ ಕೈ ಜೋಡಿಸಬೇಕು ಎಂದಿದ್ದಾರೆ.

Related Posts

error: Content is protected !!