ದಿಗಂತ್ ಆಸ್ಪತ್ರೆಗೆ ದಾಖಲು: ಶಸ್ತ್ರಚಿಕಿತ್ಸೆಗೆ ಮುಂದಾದ ವೈದ್ಯರು

ದೂದ್ ಪೇಡ ದಿಗಂತ್ ಈಗ ಗಂಭೀರ ಪೆಟ್ಟಿನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಹಿಂದೆ ಅವರು ಮುಂಬೈನಲ್ಲಿ ಫೈಟ್ ಮಾಡುವಾಗ ಕಣ್ಣಿಗೆ ಪೆಟ್ಟು ಬಿದ್ದಿತ್ತು. ಅದಾದ ಮೇಲೂ ಅವರು ಸಾಹಸ ಸನ್ನಿವೇಶದಲ್ಲಿ ಕಾಣಿಸಿಕೊಂಡಿದ್ದರು. ಈಗ ಪುನಃ ಕುತ್ತಿಗೆ ಹಾಗೂ ಬೆನ್ನು ಮೂಳೆಗೆ ಪೆಟ್ಟು ಮಾಡಿಕೊಂಡಿದ್ದಾರೆ.

ಗೋವಾ ಪ್ರವಾಸದಲ್ಲಿದ್ದ ಅವರು ಈ ಅವಘಡಕ್ಕೀಡಾಗಿದ್ದಾರೆ.

ದಿಗಂತ್ ಅವರುಗೆ ಬಲವಾದ ಪೆಟ್ಟು ಬಿದ್ದ ಹಿನ್ನೆಲೆಯಲ್ಲಿ ತುರ್ತು ವಿಮಾನದ ಮೂಲಕ ಬೆಂಗಳೂರಿಗೆ ಕರೆ ತರಲಾಗಿದ್ದು, ಮಣಿಪಾಲ್ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೆ ಗುರಿಪಡಿಸಲಾಗಿದೆ.

ದಿಗಂತ್ ಆದಷ್ಟು ಬೇಗ ಗುಣ ಮುಖರಾಗಲಿ ಎಂಬುದೇ ಎಲ್ಲರ ಆಶಯ.

Related Posts

error: Content is protected !!