ಕಾಶ್ಮೀರಿ ಹಿಂದೂಗಳಿಗೆ ಕನ್ನಡಿಗರು ಅರ್ಪಿಸಿದ ಹಾಡು: ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ನೋಡಿದ್ರಿ, ಈಗ ದಿ ಕಾಶ್ಮೀರ್ ಸಾಂಗ್ ಕೇಳಿ…

ನಮ್ಮ ದೇಶದ ಮುಕುಟ ಪ್ರಾಯವಾಗಿರುವ ಭೂಲೋಕದ ಸ್ವರ್ಗ ಕಾಶ್ಮೀರದಲ್ಲಿ ನಡೆದಿದ್ದ ಲಕ್ಷಾಂತರ ಕಾಶ್ಮೀರ ಪಂಡಿತರ ಹತ್ಯೆ, ಮಾನವ ಕ್ರೌರ್ಯದ ಪರಮಾವಧಿ, ಭೀಭತ್ಸ ಹಾಗೂ ಅಸಹ್ಯವನ್ನು‌ ಬಿಚ್ಚಿಟ್ಟಿದ ಸಿನಿಮಾ ದಿ ಕಾಶ್ಮೀರ್ ಫೈಲ್ಸ್. ಅಂದಿನ ಘನಘೋರ ಪರಿಸ್ಥಿತಿಯನ್ನು ಮನಮುಟ್ಟುವಂತೆ ಮಾತ್ರವಲ್ಲ, ಮನಸು ಘಾಸಿಗೊಳ್ಳುವಂತೆ ಸಿನಿಮಾದಲ್ಲಿ ಕಟ್ಟಿಕೊಡಲಾಗಿತ್ತು. ಇದೀಗ ಅದೇ ಕಾಶ್ಮೀರದ ಕರಾಳತೆ ಬಿಚ್ಚಿಡುವ ದಿ ಕಾಶ್ಮೀರ ಸಾಂಗ್ ಬಿಡುಗಡೆಗೆ ಸಜ್ಜಾಗಿದೆ. ಇದೇ ಶನಿವಾರ ಹಾಡು ಸಂಗೀತ ಪ್ರಿಯರ ಮಡಿಲು ಸೇರಲಿದೆ

ಕಾಶ್ಮೀರ್ ಫೈಲ್ಸ್ ದೇಶ ಮಾತ್ರವಲ್ಲ, ವಿದೇಶದಲ್ಲೂ ಸುದ್ದಿ ಮಾಡಿದ ಸಿನಿಮಾ. ಇದು ಪರ- ವಿರೋಧಗಳ ಚರ್ಚೆಗೂ ಕಾರಣವಾದ ಚಿತ್ರ. ಬಹುತೇಕ ಮಂದಿ ಸಿನಿಮಾ ಪರ ಮಾತಾಡಿದ್ದೇ ಹೆಚ್ಚು. ಈಗ ಅಂಥದ್ದೇ ಮಾತುಗಳಿಗೆ ಕಾರಣವಾಗಿದೆ ದಿ ಕಾಶ್ಮೀರ್ ಸಾಂಗ್. ಇದರ ವಿಶೇಷತೆ ಅಂದರೆ, ಇದೊಂದು ಹಿಂದಿ ವಿಡಿಯೋ ಆಲ್ಬಂ. ನಿರ್ದೇಶಕ ಕ್ರಿಶ್ ಜೋಶಿ ಅವರ ಪರಿಪೂರ್ಣ ಕಲ್ಪನೆಯಲ್ಲಿ ಮೂಡಿ ಬಂದ ಚಿತ್ರ. ಖ್ಯಾತ ಸಂಗೀತ ನಿರ್ದೇಶಕ ವೀರ್ ಸಮರ್ಥ್ ಅವರ ರಾಗ ಸಂಯೋಜನೆಯಲ್ಲಿ ತಯಾರಾದ ಗೀತೆ. ಈ ಕುರಿತು ದಿ ಕಾಶ್ಮೀರ್ ಸಾಂಗ್ ತಂಡ ಒಂದಷ್ಟು ಮಾಹಿತಿ ಹಂಚಿಕೊಂಡಿದೆ.

ಈ ಅಪರೂಪದ ವಿಡಿಯೋ ಆಲ್ಬಂ ಸಾಂಗ್ ನಲ್ಲಿ ಕಾಣಿಸಿಕೊಂಡಿರೋದು ನಟ ಕೋವಿದ್ ಮಿತ್ತಲ್. ಅವರು ಹೇಳಿದ್ದಿಷ್ಟು. ಪ್ರತಿಯೊಬ್ಬರಿಗೂ ಈ ಹಾಡು ಇಷ್ಟವಾಗುತ್ತದೆ. ಕಾಶ್ಮೀರ ಹಿಂದೂಗಳಿಗೆ ಸಮರ್ಪಣೆ ಸಲ್ಲಿಸುವ ಹಾಡು ಇದಾಗಿದೆ. ಈ ಹಾಡಲ್ಲಿ ಅಲ್ಲಿ ನಡೆದ ಸನ್ನಿವೇಶಗಳನ್ನು ಕಟ್ಟಿಕೊಡುವ ಪ್ರಯತ್ನವಾಗಿದೆ. ನಾನು ಈ ಹಾಡು ನಿರ್ಮಿಸಿ, ನಟಿಸೋಕೆ ಕಾರಣ ವೀರ್ ಸಮರ್ಥ್ ಅವರು ಸಂಯೋಜಿಸಿದ ರಾಗ. ಅದರಲ್ಲೂ ಶೇಖರ್ ಅಸ್ತಿತ್ವ ಅವರ ಸಾಹಿತ್ಯ. ಹಾಡು ಕೇಳಿದ ಮೇಲೆ ವಿಡಿಯೋ ಆಲ್ಬಂ ಮಾಡಬೇಕೆನಿಸಿ ಚಿತ್ರೀಕರಿಸಿದ್ದೇವೆ. ಈ ಹಾಡು ಕಾಶ್ಮೀರದ ಹಿಂದೂಗಳಿಗೆ ಅರ್ಪಣೆ ಎಂದರು.

ನಿರ್ದೇಶಕ ಕ್ರಿಷ್ ಜೋಷಿ, ಅವರಿಗೆ ವೀರ್ ಮಾಡಿದ ಟ್ಯೂನ್ ಇಷ್ಟವಾಗಿ ಇದನ್ನು ಯಾಕೆ ಸಾಂಗ್ ಮಾಡಬಾರದು ಅಂತ ನಿರ್ಧರಿಸಿ, ಹಿಂದಿ ಗೀತೆಗೆ ಯಾರಿಂದ ಸಾಹಿತ್ಯ ಬರೆಸುವುದು ಅಂತ ಯೋಚಿಸುತ್ತಿದ್ದಾಗ, ಬಾಲಿವುಡ್ ನ ಖ್ಯಾತ ಗೀತರಚನೆಕಾರ ಶೇಖರ್ ಅಸ್ತಿತ್ವ ಅವರ ನೆನಪಾಯಿತು. ತಕ್ಷಣ ಸಂಪರ್ಕಿಸಿದೆವು. ಅವರು ಕೇವಲ ಎರಡು ದಿನದಲ್ಲಿ ಅದ್ಭುತ ಸಾಹಿತ್ಯ ಬರೆದುಕೊಟ್ಟರು. ಸಾಂಗ್ ಕೈಗೆ ಸಿಕ್ಕಮೇಲೆ ಜೋಶ್ ಹೆಚ್ಚಾಯ್ತು. ಮನಾಲಿಯಲ್ಲಿ ಶೂಟ್ ಮಾಡಬೇಕು ಎಂಬ ಯೋಚನೆ ಇತ್ತು. ಆದ್ರೆ ಆಗಲಿಲ್ಲ. ಕಂಪ್ಲೀಟ್ ಎಮೋಷನ್ ಕಥೆ ಬಿಲ್ಡ್ ಮಾಡುವುದು ಕಷ್ಟವಾಯ್ತು. ಲೇಟ್ ಆಗಿ ಕಾಸ್ಟ್ಯೂಮ್ ಸಿಕ್ತು. ಫೈನಲಿ ಎಲ್ಲಾ ಕಷ್ಟ ಇಷ್ಟದೊಂದಿಗೆ ಸಾಂಗ್ ಕಂಪ್ಲೀಟ್ ಆಗಿದೆ ಎಂದರು.

ಸಂಗೀತ ನಿರ್ದೇಶಕ ವೀರ್ ಸಮರ್ಥ್ ಅವರಿಗೆ ಇಂಥದ್ದೊಂದು ಹಾಡು ಹುಟ್ಟೋಕೆ ಕಾರಣ ಒಂದೊಳ್ಳೆಯ ರಾಗವಂತೆ. ಅದು ಕೊನೆಗೆ ಕಾಶ್ಮೀರ್ ಸಾಂಗ್ ಆಗಿದೆ. ಇನ್ನು ಮೊದಲ ಸಲ ನಾನೂ ಕೂಡ ತೆರೆಯ ಮೇಲೆ ಕಾಣಿಸಿಕೊಂಡಿದ್ದೇನೆ. ಒಂದೊಳ್ಳೆಯ ಹಾಡು ಕಟ್ಟಲು ಒಳ್ಳೆಯ ತಂಡ ಕಾರಣವಾಗಿದೆ. ಹಾಡಿಗೆ ತಕ್ಕಂತೆ ಚಿತ್ರೀಕರಣ ಮಾಡಲಾಗಿದೆ. ನಿಮ್ಮೆಲ್ಲರ ಪ್ರೋತ್ಸಾಹ ಇರಲಿ. ಈ ಹಾಡು ತಲುಪಿಸಲು ಮಾಧ್ಯಮ ಮುಖ್ಯ ಪಾತ್ರವಹಿಸಬೇಕು ಎಂದರು.

ಶೇಖರ್ ಅಸ್ತಿತ್ವ ಸಾಹಿತ್ಯದ ದಿ ಕಾಶ್ಮೀರ್ ಹಾಡಿಗೆ ವೀರ್ ಸಮರ್ಥ್ ಸಂಗೀತ ನೀಡುವುದರ ಜೊತೆಗೆ ಧ್ವನಿಯಾಗಿದ್ದಾರೆ. ಕ್ರಿಶ್ ಜೋಷಿ ಕಥೆ ಬರೆದು ಆಕ್ಷನ್ ಕಟ್ ಹೇಳಿದ್ದು ಇಲ್ಲಿ ವಿಶೇಷ. ಮನು ಛಾಯಾಗ್ರಹಣ ಮಾಡಿದರೆ, ದೀಪಕ್ ಕೆ. ರಾಜು ಸಂಕಲನ ಮಾಡಿದ್ದಾರೆ. ಕೆ.ಎಂ. ಮೀಡಿಯಾ ಮತ್ತು ಪ್ರೊಡಕ್ಷನ್ ನಡಿ ನಿರ್ಮಾಣವಾದ ಹಾಡಿಗೆ ಸಾಗರ್ ಬರರ್ದಾಪುರೆ ನಿರ್ವಹಣೆ ಇದೆ.

ಹಾಡಿನ ಸಾರಾಂಶವಿದು…

ಆದಿತ್ಯ 25 ವರ್ಷದ ನಂತರ ತನ್ನ ತಾಯ್ನಾಡು ಕಾಶ್ಮೀರಕ್ಕೆ ಬಂದಾಗ ಹಳೆ ನೆನೆಪುಗಳನ್ನು ಮೆಲುಕು ಹಾಕುತ್ತಾ ಸಾಗುವ ಕಾಶ್ಮೀರದ ಕರಾಳತೆಯನ್ನು ವಿವರಿಸುವ ಹಾಡಿನಲ್ಲಿ ಕೋವಿದ್ ಮಿತ್ತಲ್ ಹಾಗೂ ವೀರ್ ಸಮರ್ಥ್ ನಟಿಸಿದ್ದು, ಈ ಅಲ್ಬಮ್ ಸಾಂಗ್ Get High on Music” ಎಂಬದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಆಯ್ತು ಬರ್ತಿದೆ ದಿ ಕಾಶ್ಮೀರ್ ಸಾಂಗ್ ಜೂನ್ 18ರಂದು ಬಿಡುಗಡೆಯಾಗುತ್ತಿದೆ.

Related Posts

error: Content is protected !!