ಆ ನಾಕು ಮಂದಿ ಪತ್ರಕರ್ತರಿಗೆ ಗುಂಡು ಹೊಡೆದಂತೆ ಮಾತಾಡಿದ್ದರು ಆನೇಕಲ್ ಬಾಲರಾಜ್: ಚಕ್ರವರ್ತಿ ಚಂದ್ರಚೂಡ್ ಹೇಳಿದ ಸತ್ಯ…

ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಆನೇಕಲ್ ಬಾಲರಾಜ್ ನಿಧನರಾಗಿದ್ದಾರೆ. ಸಿನಿಮಾ ರಂಗದಲ್ಲಿ ತಮ್ಮದೇ ಆದ ಹೆಸರು ಸಂಪಾದಿಸಿದ್ದ ಅವರು ತಮ್ಮ ಪುತ್ರ ಸಂತೋಷ್ ನನ್ನು ಹೀರೋ ಮಾಡುವ ಸಲುವಾಗಿ ಅನೇಕ ಹೊಸ ನಿರ್ದೇಶಕರಿಗೆ ಅವಕಾಶ ಕಲ್ಪಿಸಿಕೊಟ್ಟಿದ್ದರು. ಅವರಿಲ್ಲ ಎಂಬ ಮಾತು ಕೇಳಿದ ಅದೆಷ್ಟೋ ಕಲಾವಿದರು, ನಿರ್ದೇಶಕರು ನಿರ್ಮಾಪಕರು ಅಷ್ಟೆ ಯಾಕೆ ಪತ್ರಕರ್ತರು ಕೂಡ ಹಳೆಯ ದಿನಗಳನ್ನು ಮೆಲುಕು ಹಾಕಿದ್ದು ನಿಜ. ಅವರು ಈಗ ನಮ್ಮೊಂದಿಗಿಲ್ಲ. ಆದರೆ ಅವರ ನಿರ್ಮಾಣದ ಸಿನಿಮಾಗಳಿವೆ. ಬಿಟ್ಟು ಹೋದ ನೆನಪುಗಳಿವೆ. ಆ ಕುರಿತು ನಟ, ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ಬರಹ ರೂಪದಲ್ಲಿ‌ ನೆನಪಿಸಿಕೊಂಡಿದ್ದಾರೆ…

ಓವರ್ ಟು ಚಕ್ರವರ್ತಿ ಚಂದ್ರಚೂಡ…

ಆನೇಕಲ್ ಬಾಲಣ್ಣ ….
ಅದೊಂದು ನಂಬರ್ ಗೆ ಕರೆ ಮಾಡಿದರೆ ಸಾಕು ಕುತ್ತಿಗೆ ತನಕ ಏನೇ ಬಂದಿದ್ರೂ ಚಕ್ರಿ ಫೋರ್ತ್ ಬ್ಲಾಕ್ ಬಾ ಅನ್ನುವ ಜೀವ.,.
ನಾಲ್ಕು ಮಂದಿ ಪತ್ರಕರ್ತರು ಬಾಲಣ್ಣನಿಗೆ ಯಾವುದೇ ಕಾರಣಕ್ಕೂ ಚಕ್ರವರ್ತಿ ಎಂಬ ಚಂದ್ರಚೂಡ್ ಗೆ ಸಿನಿಮಾ ಕೊಡಬಾರದು ಡೈರೆಕ್ಟರ್ ಆಗಿಬಿಡ್ತಾನಾ ಅಂತ ತಿದಿ ಒತ್ತಿಕೊಂಡು ಕುಳಿತಿದ್ದರೂ – ನಂಗೊತ್ತು ಚಕ್ರಿ ಯಾರತ್ರನೂ ಸಹಾಯಕನ ಕೆಲಸನೂ ಮಾಡಿಲ್ಲ.ಯಾವ ಸಿನಿಮಾದಲ್ಲೂ ಕೆಲಸ ಮಾಡಿಲ್ಲ.ಆದರೆ ಮಾತು ಕೊಟ್ಟಿದೀನಿ ಸಿನಿಮಾ ಕೊಡ್ತೀನಿ ರಾಜಕುಮಾರರು ತೀರ್ಕೊಂಡ ಒಂದೇವಾರಕ್ಕೆ ಎಂತ ಕಥೆ ಹೇಳಿದಾನೆ ಅಂತ ಆ ನಾಕು ಮಂದಿ ಪತ್ರಕರ್ತರಿಗೆ ಗುಂಡುಹೊಡೆದಂತೆ ಮಾತಾಡಿ ಗುಂಡು ಹೊಡೆಸಿ ಹೇಳಿ ಕಳಿಸಿದ್ಥರು.( ಈಗೀ ಪತ್ರಕರ್ತರು ನನಗೆ ಪರಮಾಪ್ತರು)
3ಸಿ ಕ್ಯಾಮರಾ ನೆಗೆಟಿವ್ ಕಾಲವದು ಅದ್ಧೂರಿ ಕಾರ್ಯಕ್ರಮಗಳು ಚೆನ್ಯೈಲಿ ನಡೆವ ಕಥೆ ಅವರ ಮಗ ಸಂತೋಷ್ ಹೀರೋ …


ಸಿತಾರಾ ಪೊನ್ನಾಂಬಲಂ ತಲೈವಾಸಲ್ ವಿಜಯ್ ಅನುರಾಧ ಬುಲೆಟ್ ಪ್ರಕಾಶ್ ಶಕೀಲಾ ಮುಂತಾದವರ ತಾರಾಗಣದ ಸಿನಿಮಾ ಅದು ಜನ್ಮ.ಕನ್ನಡ ತಮಿಳು ಎರಡು ಭಾಶೆಗಳಲ್ಲಿ ಚಿತ್ರೀಕರಿಸಿದ್ದೆ.
ಬಾಲಣ್ಣನದೊಂದೇ ಸಮಸ್ಯೆ ಬೇರೆ ನಿರ್ಮಾಪಕರ ಥರ ಬೇಗ ಬೇಗ ಸಿನಿಮಾ ಮುಗಿಸಲ್ಲ .ಒಂದು ಸಿನಿಮಾ ಅಂದರೆ ಗರಿಷ್ಠ ನಾಕು ವರುಶ .ಉದಯ ಟೀವಿಗೆ ಸಿನಿಮಾ ಸೇಲಾಯ್ತು ಬಿಡುಗಡೆಯೂ ಆಗಿ ನಾಕುವಾರ ದ ಕಲೆಕ್ಷನ್ನು….
ಈಗಿನ sunext ಆಗಿನ ಉದಯ ಟೀವಿಯವರು ಜಯಲಲಿತಾ ಹೋಲುವ ಅನುರಾಧ ಪಾತ್ರ ಮತ್ತು ಕರುಣಾನಿಧಿ ಹೋಲುವ ಪೊನ್ನಾಂಬಲಂ ನ ಮೂರು ದೃಶ್ಯಗಳು .ನಾಯಕ ಗಾಜನೂರಿನಿಂದ ರಜನೀಕಾಂತ್ ರ ಚೆನ್ನೈನ ಮನೆಗೆ ಹೋಗುವ ದೃಶ್ಯಗಳ ತೆಗೆಯಿರಿ ಅಂದರು.
ಉದಯದ ಮಾಲೀಕರಿಗೆ ಆಪ್ತರಾಗಿದ್ದ ಬಾಲಣ್ಣ ಚಕ್ರಿ ತೆಗಿತೀಯ ಅಂದರು ಬಾಲಣ್ಣ ಸಿನಿಮಾದ ಆತ್ಮವೇ ಹೋಗುತ್ತೆ ಅಣ್ಣಾವ್ರ ಸಾವಿನ ದಿನ,ನಡೆಯುವ ಘಟನೆಗಳಿಗೆ ಲಿಂಕಿರಲ್ಲ ಅಂದುಬಿಟ್ಟೆ.


ಸೀದಾ ಸೆಲ್ವಂ ರಿಗೆ ಫೋನು ಮಾಡಿ ನಮ್ ಡೈರೆಕ್ಟರ್ ಬೇಡ ಅಂತಿದಾನೆ.ಜನ್ಮದ ವ್ಯವಹಾರ ನಾ ಬೇರೆ ಥರ ಮಾಡ್ತೀನಿ ಬಿಡಿ ಅಂದು ಬಿಟ್ಟರು .ಬಹುತೇಕ ಸಿನಿಮಾಗೆ ಹಾಕಿದ ಹಣನೇ ಕೊಡ್ತೀನಿ ಅಂದರೂ ಬೇಡ ಅನ್ನುವ ನಿರ್ಮಾಪಕ ಅವರು.
ಅದಾದ ಮೇಲೆ ನೀ ಯಾವಾಗ ಡೈರಕ್ಟ್ ಮಾಡ್ತೀಯ ಹೇಳು ಆಗ ಬಾ ಕಥೆನೂ ಹೇಳಬೇಡ ಸಿನಿಮಾ ಶುರುಮಾಡೋಣ ಅನ್ನುತ್ತಿದ್ದರು.


ತುಂಬಿದ ಪತ್ರಿಕಾಗೋಷ್ಠಿಯಲಿ ಸೋತರೆ ನಾನು ಹೊಣೆ ಗೆದ್ದರೆ ಚಕ್ರಿ ಹೊಣೆ ಅಂತ ಘೋಷಿಸಿದ್ದು ಪತ್ರಿಕೆಗಳ ತಲೆ ಬರಹ .ಜನ್ಮ ಟೈಟಲ್ ಟ್ರಾಕ್ ಹಾಡಿನ ಅಷ್ಟೂ ಸಾಹಿತ್ಯ ವಿಜಯಕರ್ನಾಟಕ ಪತ್ರಿಕೆಯಲ್ಲಿ ದೇವಶೆಟ್ಟಿ ಮಹೇಶ್ ಅವರ ಪ್ರೀತಿಗೆ ಅಚ್ಚಾಗಿತ್ತು.
“ನಿನ್ನ ತಲೇನಾ ನಿನಗೋಸ್ಕರ ಬಳಸಿಕೋ ಒಂದು ರೌಂಡ್ ಬರ್ತೀಯ “ಅನ್ನುತ್ತಿದ್ದ ಬಾಲಣ್ಣ ಬೆಳಗಿನ ಜಾವದ ವಾಕಿಂಗ್ ಮುಗಿಸಿ ಬರುವಾಗ ಬೈಕೊಂದು ಗುದ್ದಿದ ಅಪಘಾತದಲಿ ಅಸುನೀಗಿದ್ದಾರೆ.ಅವರಿಲ್ಲದಿರುತ್ತಿದ್ದರೆ ನಾನು ಪತ್ರಕರ್ತನಾಗಿಯೇ ಉಳಿದುಬಿಡುತ್ತಿದ್ದೆ .
ಬಾಲಣ್ಣ ತುಂಬಾ ಜನರಿಗೆ ಮೆಟ್ಟಿಲಾದ ನಿರ್ಮಾಪಕ. ಹೋಗಿಬನ್ನಿ…
ನಮಸ್ಕಾರಗಳು…

Related Posts

error: Content is protected !!