ನನ್ನ ಸಿನಿ ಜರ್ನಿಯಲ್ಲಿ ಕೆಜಿಎಫ್ 2 ವಿಶೇಷ ಚಿತ್ರ; ಸಂಜಯ್ ದತ್ ಮನದಾಳದ ಮಾತು…

ಪ್ರಶಾಂತ್ ನೀಲ್ ನಿರ್ದೇಶನದ ಯಶ್ ಅಭಿನಯದ ಮತ್ತು ವಿಜಯ್ ಕಿರಗಂದೂರು ನಿರ್ಮಾಣದ ಕೆಜಿಎಪ್ 2 ಚಿತ್ರ ಏಪ್ರಿಲ್ 14ಕ್ಕೆ ರಿಲೀಸ್ ಆಗಲಿದೆ. ಸಿನಿಮಾ ಐದು ಭಾಷೆಯಲ್ಲಿ ತಯಾರಾಗಿದೆ. ಐದು ಭಾಷೆಯಲ್ಲಿ ಟ್ರೇಲರ್ ಕೂಡ ರಿಲೀಸ್ ಆಗಿದ್ದು ಆ ಬಗ್ಗೆ ನಟ ಯಶ್, ಸಂಜಯ್ ದತ್, ರವೀನಾ ತಂಡನ್, ಶ್ರೀನಿಧಿ ಶೆಟ್ಟಿ, ಪ್ರಶಾಂತ್ ನೀಲ್ ಹೇಳಿದ್ದು ಹೀಗೆ

ಅಧೀರನಾಗಿ ಕಾಣಿಸಿಕೊಂಡಿರುವ ಸಂಜಯ್ ದತ್ ಮಾತನಾಡಿ, ಚಾಪ್ಟರ್ 2 ಒಂದೊಳ್ಳೆಯ ಅನುಭವ ಕೊಟ್ಟಿದೆ. ನನ್ನ ಈ 45 ವರ್ಷದ ಜರ್ನಿಯಲ್ಲಿ ಒಳ್ಳೆಯ ಸಿನಿಮಾ ಇದು. ಪ್ರಶಾಂತ್ ಒಳ್ಳೆಯ ಪಾತ್ರ ಕೊಟ್ಟಿದ್ದಾರೆ. ಯಶ್ ಯಂಗ್ ಬ್ರದರ್ ಇದ್ದಂತೆ ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದರು.

ಪ್ರಶಾಂತ್ ನೀಲ್ ಮಾತನಾಡಿ, ಇದು ತುಂಬಾ ಮುಖ್ಯವಾದ ದಿನ. ನನ್ನ ಕನಸು ಕೂಡ ಕೆಜಿಎಫ್ ಏಪ್ರಿಲ್ 14 ರಿಲೀಸ್ ಆಗಲಿದೆ. ನಿಮ್ಮೆಲ್ಲರಿಗೂ ಇಷ್ಟವಾಗಲಿದೆ. ಕೆಜಿಎಫ್ ಇಡೀ ಇಂಡಿಯಾದಲ್ಲೇ ಜಾಗ ಮಾಡಿಕೊಂಡಿದೆ. ಅದಕ್ಕೆ ಮಾಧ್ಯಮ ಕಾರಣವೆಂದ ಅವರು, ಭುವನ್, ರವಿ ಬಸ್ರೂರು ಹಾಗು ಅವರ ತಂಡವನ್ನು ಪರಿಚಯಿಸಿ ಅವರ ಕೆಲಸ ಹೊಗಳಿದರು.
ಹೊಂಬಾಳೆ ಫಿಲಂಸ್ ನ ವಿಜಯ್ ಕಿರಗಂದೂರು ಅವರ ಬಗ್ಗೆ ಗುಣಗಾನ ಮಾಡಿದರು.

ಯಶ್ ಬಗ್ಗೆ ಹೇಳಿದ ಅವರು ಅವರನ್ನು ಯಾಕೆ ರಾಕಿಂಗ್ ಅಂತೀವಿ ಅಂತ ಈ ಚಿತ್ರ ನೋಡಬೇಕು. ಸಾಕಷ್ಟು ಸಂಭಾಷಣೆಯಲ್ಲಿ ಅವರು ತೊಡಗಿದ್ದರು ಅಂದರು.
ಈ ಚಿತ್ರವನ್ನು ಪುನೀತ್ ರಾಜಕುಮಾರ್ ಅವರಿಗೆ ಅರ್ಪಣೆ ಎಂದು ಹೇಳಿದರು.

ನಿರ್ಮಾಪಕ ವಿಜಯ್ ಕಿರಗಂದೂರು ಮಾತನಾಡಿ, ಕೆಜಿಎಫ್ ಫ್ಯಾಮಿಲಿಗೆ ಥ್ಯಾಂಕ್ಸ್ ಹೇಳಿದ ಅವರು, ಎಲ್ಲರಿಗೂ ಧನ್ಯವಾದ ಹೇಳಿದರು. ಎಂಟು ವರ್ಷದ ಹಿಂದೆ ಶುರುವಾದ ಜರ್ನಿ ಇದು. ಇಷ್ಟು ವರ್ಷದಲ್ಲಿ ಯಶ್ ಮದುವೆಯಾಗಿ, ಇಬ್ಬರು ಮಕ್ಕಳಾದವು. ಈಗ ಸಿನಿಮಾ ರಿಲೀಸ್ ಆಗೋಕೆ ರೆಡಿಯಾಗಿದೆ ನೋಡಿ ಹರಸಿ ಅಂದರು.

ಯಶ್ ಮಾತನಾಡಿ, ನಾನು ನರ್ವಸ್ ಆಗಲ್ಲ. ಆದರೆ ಗೊತ್ತಿಲ್ಲ. ವೀ ಮಿಸ್ ಯು ಅಪ್ಪು ಸರ್. ನಿನ್ನಿಂದಲೇ ಸಿನಿಮಾ ಮೂಲಕ ಹೊಂಬಾಳೆ ಫಿಲಂಸ್ ಬಂದಿದೆ. ಅಪ್ಪು ಸರ್ ಜೀವಂತ. ಶಿವಣ್ಣ ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಡೀತೀವಿ.
ನನ್ನ ಇಂಡಸ್ಟ್ರಿ ಮೇಲೆ ನನಗೆ ಗೌರವ. ವಿಜಯ್ ಕಿರಗಂದೂರು ಇರದಿದ್ದರೆ ಆಗುತ್ತಿರಲಿಲ್ಲ. ಪ್ರಶಾಂತ್ ನೀಲ್ ಅವರಿಗೆ ಕ್ರೆಡಿಟ್ ಹೋಗಬೇಕು. ಹೊಸಬರಿದ್ದರೂ ಇಲ್ಲಿ ಕೆಲಸ ತಗೊಂಡಿದ್ದಾರೆ. ನಿರ್ದೇಶಕರು ಸಿನಿಮಾ ಪ್ರೀತಿಸುತ್ತಾರೆ. ಹೆಮ್ಮೆಯಿಂದ ಹೇಳ್ತೀನಿ ಇಲ್ಲಿದ್ದ ತಾಂತ್ರಿಕ ವರ್ಗದವರು ಬೇರೆಲ್ಲೂ ಇಲ್ಲ. ಎಲ್ಲ ಕಲಾವಿದರಿಗೂ ಥ್ಯಾಂಕ್ಸ್ ಹೇಳಿದರು.

ಶ್ರೀನಿಧಿ ಶೆಟ್ಟಿ ಮಾತನಾಡಿ, ಶಿವಣ್ಣ ಟ್ರೇಲರ್ ಲಾಂಚ್ ಮಾಡಿದ್ದು ಖುಷಿ ಕೊಟ್ಟಿದೆ 2015 ರಲ್ಲಿ ಈ ಚಿತ್ರಕ್ಕೆಚಸಹಿ ಮಾಡಿದ್ದೆ. ಇಂತಹ ಟೀಮ್ ಇದ್ದರೆ ಸಕ್ಸಸ್ ಗ್ಯಾರಂಟಿ. ದೊಡ್ಡ ಕಲಾವಿದರ ಜೊತೆ ನಾನಿದ್ದೇನೆ ಅನ್ನೋದೇ ಹೆಮ್ಮೆ ಎಂದರು.

ರವೀನಾ ಟಂಡನ್ ಸಿನಿಮಾ ಕುರಿತು ಮಾತಾಡಿದರು. ಪ್ರಶಾಂತ್ ಸ್ವೀಟೆಸ್ಟ್ ಟಫೆಸ್ಟ್ ಡೈರೆಕ್ಟರ್. ಯಶ್ ರಾಕಿಂಗ್ ಸುಪರ್ ಸೆಟ್ಸ್ ನಲ್ಲಿ ಕಂಫರ್ಟ್ ಆಗಿತ್ತು. ವಿಜಯ್ ಕಿರಗಂದೂರು ಒಳ್ಳೆಯ ಅವಕಾಶ ಕೊಟ್ಟಿದ್ದಾರೆ . ನಾನು ಸಿನಿಮಾ ನೋಡೋಕೆ ಕಾದಿದ್ದೇನೆ ಎಂದರು.

ಶಿವಣ್ಣ ಯಶ್ ಬ್ಯೂಟಿಫುಲ್ ಅಂದ್ರು. ಸಂಜಯ್ ದತ್ ಅವರ ಲುಕ್ ಬಗ್ಗೆಯೂ ಹೇಳಿದರು. ಯಶ್ ನನ್ನ ಜೊತೆ ತಮಸ್ಸು ಮಾಡಿದ್ದರು. ಈ ಚಿತ್ರವನ್ನು ನಾನು ಏಪ್ರಿಲ್ 14ರಂದು ನೋಡಲು ಕಾತುರನಾಗಿದ್ದೇನೆ. ಇಡೀ ಚಿತ್ರತಂಡಕ್ಕೆ ಶುಭವಾಗಲಿ ಅಂದರು.

ಸಚಿವ ಅಶ್ವತ್ಥ್ ನಾರಾಯಣ್ ಕೂಡ ಮಾತನಾಡಿ, ಕೆಜಿಎಫ್ 2 ಟ್ರೇಲರ್ ನೋಡಿದವರಿಗೆ ಸಿನಿಮಾ ನೋಡುವ ಆತುರ ಹೆಚ್ಚಿಸುತ್ತೆ. ಹಾಲಿವುಡ್ ರೇಂಜ್ ಗೆ ಸಿನಿಮಾ ಇದೆ ಅನ್ನೋದು ಈ ಟ್ರೇಲರ್ ನೋಡಿದವರಿಗೆ ಗೊತ್ತಾಗುತ್ತೆ. ಎಲ್ಲರಿಗೂ ಒಳ್ಳೆಯದಾಗಲಿ. ನಾನು ಸಚಿವನಾಗಿ ಇಲ್ಲಿ ಬಂದಿಲ್ಲ. ಒಬ್ಬ ಅಭಿಮಾನಿಯಾಗಿ ಬಂದಿದ್ದೇನೆ ಎಂದರು.

ಪೃಥ್ವಿ ರಾಜ್ ಸುಕುಮಾರ್ ಕೇರಳ ಭಾಷೆಯ ವಿತರಣೆ ಜವಾಬ್ದಾರಿ ಹೊತ್ತಿದ್ದಾರೆ. ಈ ಬಗ್ಗೆ ಅವರು ಹೇಳಿದ್ದು, ಕೆಜಿಎಫ್ ಮತ್ತು ಬಾಹುಬಲಿ ಸಿನಿಮಾ ಇಂಡಸ್ಟ್ರಿಯಲ್ಲಿ ಭರವಸೆ ಮೂಡಿಸಿದ್ದಷ್ಟೇ ಅಲ್ಲ. ರಾಜಮೌಳಿ ಮತ್ತು ಪ್ರಶಾಂತ್ ನೀಲ್ ಗುಡ್ ಮೇಕರ್. ಯಶ್ ಒಳ್ಳೇ ನಟ. ಎಕ್ಸೈಟ್ವಾಗಿದ್ದೇನೆ.
ಪೃಥ್ವಿರಾಜ್ ಪ್ರೊಡಕ್ಷನ್ ಈ ಸಿನಿಮಾಗೆ ಕೈ ಜೋಡಿಸಿದೆ. ಎಲ್ಲರಿಗೂ ಒಳ್ಳೆಯದಾಗಲಿ ಎಂದರು.

ತೆಲುಗಿನಲ್ಲಿ ಈ ಚಿತ್ರವನ್ನು ಸಾಯಿ ಪ್ರೆಸೆಂಟ್ ಮಾಡಿದರೆ, ಹಿಂದಿಯಲ್ಲಿ ಫರಾನ್ ಅಖ್ತರ್ ಪ್ರೆಸೆಂಟ್ ಮಾಡುತ್ತಿದ್ದಾರೆ.

Related Posts

error: Content is protected !!